ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮರಣಾ ನಂತರದ ದೇಹದ ವಿಸರ್ಜನ ಕ್ರಿಯೆಗೆ ಅಂತ್ಯೇಷ್ಟಿ ಅಥವಾ ಅಂತಿಮ ಸಂಸ್ಕಾರ ಎಂದು ಕರೆಯಲಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಅಂತ್ಯಸಂಸ್ಕಾರವು ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತದೆ.
ಆದರೆ ನಮ್ಮ ಪಕ್ಕದ ದೇಶವಾದ ಟಿಬೇಟಿನಲ್ಲಿ ವಿಚಿತ್ರ ರೀತಿಯ ಶವ ಸಂಸ್ಕಾರ ಮಾಡುತ್ತಾರೆ. ಸಾಮಾನ್ಯರು ಸತ್ತಾಗ ಹಳೆಯ ಟೈರು ಮತ್ತಿತರ ಉರಿಯುವ ವಸ್ತುಗಳನ್ನು ಉಪಯೋಗಿಸಿ ಶವದಹನ ಮಾಡುವ ಪದ್ಧತಿ ಇದು. ಎರಡನೆಯದು ಹೊಂಡ ತೆಗೆದು ಹೂಳುತ್ತಾರೆ.ಮೂರನೆಯದು ಸತ್ತ ಮೂರೂ ದಿನಗಳ ನಂತರ ಹೆಣವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಹಾಕುತ್ತಾರೆ.
ನಾಲ್ಕನೆಯ ಶವ ಸಂಸ್ಕಾರ ಮಾಡುವ ರೀತಿ ಕೇಳಿದ್ರೆ ನಿಮ್ಮ ಮೈ ಮನ ಜುಮ್ ಎನ್ನಿಸದೇ ಇರಲ್ಲ. ಈ ಭಯಂಕರ ಪದ್ಧತಿ ಏನು ಗೊತ್ತಾ?
ಈ ಪದ್ದತಿಯ ಪ್ರಕಾರ ಸತ್ತ ಹೆಣದ ದೇಹವನ್ನು ರಣಹದ್ದುಗಳಿಗೆ ಆಹಾರವಾಗಿ ಹಾಕುತ್ತಾರೆ. ಮನುಷ್ಯನಿಗೆ ದೇವರು ನೀಡಿದ ದೇಹ ಸತ್ತ ಮೇಲೂ ಪ್ರಾಣಿ ಪಕ್ಷಿಗಳ ಆಹಾರವಾದರೆ ಜನ್ಮ ಸಾರ್ಥಕವಾಗುತ್ತದೆಂದು ಇವರ ನಂಬಿಕೆ.
ಹೀಗೇಕೆ ಮಾಡುತ್ತಾರೆ ಗೊತ್ತಾ..? ಶಾಕ್ಯನೆಂಬ ಬೌದ್ಧ ಮುನಿ ಈ ವಿಧಾನವನ್ನು ಆರಂಭಿಸಿದನಂತೆ. ಆತ ತನ್ನ ದೇಹದ ಮಾಂಸವನ್ನು ಪಾರಿವಾಳಗಳಿಗೆ ಆಹಾರವಾಗಿ ನೀಡಿದನೆಂಬ ಕಥೆಯೇ ಇದಕ್ಕೆ ಪ್ರೇರಣೆಯಾಗಿದೆ.
ಈ ಶವ ಸಂಸ್ಕಾರದಲ್ಲೂ ಇದೆ ಹಲವು ನಿಯಮಗಳು!
ಇಂತಹ ಸಂಸ್ಕಾರವನ್ನು ಗರ್ಭಿಣಿಯರು, ಹದಿನೆಂಟಕ್ಕಿಂತ ಕಡಿಮೆ ವಯಸ್ಸಿನವರು, ವ್ಯಾಧಿ ಮತ್ತು ಅಪಘಾತದಿಂದ ಸತ್ತವರ ದೇಹಗಳಿಗೆ ಮಾಡುವುದಿಲ್ಲ. ಇಂತಹ ಶವ ಸಂಸ್ಕಾರಕ್ಕೆ ಯಾವುದೇ ಬಲವಂತವಿರುವುದಿಲ್ಲ. ಸಾಯುವುದಕ್ಕೂ ಮೊದಲು ಆ ವ್ಯಕ್ತಿ ಯಾವ ರೀತಿ ಶವ ಸಂಸ್ಕಾರ ಬೇಕು ಎಂದು ಹೇಳಿರುತ್ತಾನೋ ಅದೇ ರೀತಿ ಶವ ಸಂಸ್ಕಾರ ಮಾಡಲಾಗುತ್ತದೆ.
ಇಲ್ಲಿನ ಪದ್ಧತಿ ಪ್ರಕಾರ ಯಾವುದೇ ವ್ಯಕ್ತಿ ಸತ್ತಾಗ ಮೃತ ದೇಹವನ್ನು ಮೂರೂ ದಿನಗಳವರೆಗೆ ಹಾಗೆಯೇ ಇಡುತ್ತಾರೆ. ಕಾರಣ ಆತ್ಮವು ಮತ್ತೆ ಅವನ ದೇಹ ಪ್ರವೇಶಿಸಿ ಅವನು ಬದುಕಬಹುದೆಂಬ ನಂಬಿಕೆ ಅವರಲ್ಲಿದೆ. ನಂತರ ನಾಲ್ಕನೆಯ ದಿನ ಶವ ಸಂಸ್ಕಾರದ ವಿಧಿ ವಿಧಾನಗಳು ನೆರವೇರಿದ ಬಳಿಕ, ಶವದ ಮಂಡಿಗಳನ್ನು ಮತ್ತು ಕೈಗಳನ್ನು ಹಿಂಭಾಗಕ್ಕೆ ಜೋಡಿಸಿ ಕಟ್ಟಿ ಬಿಳಿ ಬಣ್ಣದ ಬಟ್ಟೆಯಲ್ಲಿ ಬಿಗಿದು ಹೆಗಲಿನಲ್ಲಿ ಹೊತ್ತು, ಮೃತನ ಮಕ್ಕಳು ಅಥವಾ ಬಂಧುಗಳು ಬೆಟ್ಟದಲ್ಲಿರುವ ಕಲ್ಲುಬಂಡೆಯ ಮೇಲೆ ಅದನ್ನು ಕೆಳಗಿಳಿಸಿದ ಬಳಿಕ ಹಿಂತಿರುಗಿ ನೋಡದೆ ಮರಳುತ್ತಾರೆ.
ನಂತರ ಲಾಮಾ ಗುರುಗಳು ಪ್ರಾರ್ಥನಾ ಚಕ್ರವನ್ನು ತಿರುಗಿಸುತ್ತ ಕೈಯಲ್ಲಿರುವ ಕಂಚಿನ ಗಂಟೆಯನ್ನು ಬಡಿಯಲಾರಂಭಿಸುತ್ತಾರೆ. ರಣಹದ್ದುಎಷ್ಟೇ ದೂರದಲ್ಲಿದ್ದರೂ ಈ ಗಂಟೆಯ ನಾದ ಕೇಳಿದ ಕೂಡಲೇ ಅಲ್ಲಿಗೆ ಧಾವಿಸಿ, ಶವದ ಸುತ್ತಲೂ ಹಾರಾಡಿ ಮೃತ ದೇಹವನ್ನು ತಿನ್ನುತ್ತವೆ.ಇವರ ಪ್ರಕಾರ ರಣ ಹದ್ದುಗಳು ತಿಂದ ವ್ಯಕ್ತಿಯ ಆತ್ಮ ನೇರವಾಗಿ ಸ್ವರ್ಗಕ್ಕೆ ಹೋಗುತ್ತದಂತೆ.ಅವರಿಗೆ ಮರು ಜನ್ಮವಿರುದಿಲ್ಲವಂತೆ.
ಕೆಲವೇ ನಿಮಿಷಗಳಲ್ಲಿ ಸಣ್ಣ ಸಣ್ಣ ಮೂಳೆಯ ಚೂರುಗಳು, ಕೂದಲು, ಚರ್ಮದ ಚಿಕ್ಕತುಂಡುಗಳ ಹೊರತು ಉಳಿದುದೆಲ್ಲವನ್ನೂ ಹದ್ದುಗಳು ತಿಂದು ಮುಗಿಸುತ್ತವೆ. ಬಳಿಕ ಅಸ್ಥಿಪಂಜರವನ್ನು ಸುತ್ತಿಗೆಯಿಂದ ಗುದ್ದಿ ಹುಡಿ ಮಾಡಿ ಹುರಿದ ಬಾರ್ಲಿಯ ಹಿಟ್ಟು, ಯಾಕ್ ಬೆಣ್ಣೆ, ಹಾಲು ಈ ಯಾವುದಾದರೊಂದನ್ನು ಬೆರೆಸಿ ಹದ್ದುಗಳಿಗೆಸೆದಾಗ ಅದನ್ನೂ ಖಾಲಿ ಮಾಡುತ್ತವೆ.
ಮಾಂಸ ಭಕ್ಷಣೆಯಿಂದ ಪವಿತ್ರ ಹದ್ದುಗಳಿಗೆ ಯಾವ ವ್ಯಾಧಿಯೂ ಬರದಿರಲಿ ಎಂದು ಇಂಥ ಮಿಶ್ರಣ ಮಾಡುವರಂತೆ. ಹದ್ದುಗಳು ಶವ ಭಕ್ಷಿಸದಿದ್ದರೆ ಅಪಶಕುನವೆಂದು ನಂಬುತ್ತಾರೆ. ಈ ಹದ್ದುಗಳು ಮಾನವ ಶವದ ಹೊರತು ಬೇರೆ ಯಾವ ಆಹಾರವನ್ನೂ ತಿನ್ನುವುದಿಲ್ಲವಂತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರದಕ್ಷಿಣೆ ಯಾಕೆ ಹಾಕುತ್ತೇವೆ ? ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ, ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆ ಅರ್ಥ. ದೇವಸ್ಥಾನದಲ್ಲಿ ಪ್ರದಕ್ಷಿಣೆಯನ್ನು ಎಷ್ಟು ಪ್ರದಕ್ಷಿಣೆ ಹಾಕಬೇಕು? ಯಾವ್ಯಾವ ದೇವರಿಗೆ ಎಷ್ಟು ಬಾರಿ ಪ್ರದಕ್ಷಿಣೆ ಮಾಡಿದರೆ ಏನು ಫಲ ಎಂಬುದನ್ನು ತಿಳಿಯೋಣ. ಹಿಂದೂ ಪುರಾಣಗಳ ಪ್ರಕಾರ ದೇವರಿಗೆ ಹಾಕುವ ಪ್ರದಕ್ಷಿಣೆ ಬಗ್ಗೆ ಹಲವಾರು ಕಥೆಗಳಿವೆ. ಇವುಗಳಲ್ಲಿ ಶಿವ, ಗಣಪತಿ ಮತ್ತು ಕಾರ್ತೀಕೇಯನ ಕಥೆಯು ನಮ್ಮೆಲ್ಲರಿಗೆ ತಿಳಿದಿರುವಂತಾಗಿದೆ. ಶಿವ…
ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಆದಾಗ್ಯೂ, ಪ್ರಪಂಚದ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಮುಂಬರುವ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ, ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು, ಜಿಲ್ಲೆಯ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ, ಪೂರ್ವಭಾವಿಯಾಗಿ ಸಾರ್ವಜನಿಕರು ಈ ಕ್ರಮಗಳನ್ನು ಪಾಲಿಸುವುದು ಅವಶ್ಯವಾಗಿದೆ. ಮುಚ್ಚಿದ ಸಂರಕ್ಷಣೆಗಳಾದ (closed spaces) ಪಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಹಾಲ್ಗಳು, ಶಾಪಿಂಗ್ ಮಾಲ್, ಕಛೇರಿಗಳು…
ನವೆಂಬರ್ 1ರವರೆಗೆ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ರಾಜಧಾನಿ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ದೀಪಾವಳಿ ಆಚರಣೆ ವೇಳೆ ಸಿಡಿಮದ್ದು ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿರುವುದನ್ನು ಯೋಗಗುರು ಬಾಬಾ ರಾಮ್ ದೇವ್ ಮತ್ತು ಶಿವಸೇನೆ ತೀವ್ರವಾಗಿ ಖಂಡಿಸಿದ್ದಾರೆ.
ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ನಾಯಕತ್ವವನ್ನೇ ನಿರ್ನಾಮ ಮಾಡಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಜೊತೆಗೆ ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ. ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಕಣಿವೆ ರಾಜ್ಯದಲ್ಲಿ ಯಾರೇ ಆದಾರೂ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು…
ನಾವು ಮನೆ ಮುಂದೆ ಕೆಲವೊಂದು ಗಿಡ ಗಳನ್ನು ನೆಡುವುದು ಸಾಮಾನ್ಯ. ಆದರೆ ಕೆಲವೊಂದು ಗಿಡಗಳನ್ನು ನೆಟ್ಟರೆ ಶ್ರೀಮಂತಿಕೆ ಬರುತ್ತೆ ಎನ್ನುವ ನಂಬಿಕೆ ಇದೆ. ಅದರಲ್ಲಿ ಒಂದು ಗಿಡದ ಹೆಸರು
ನೆಗಡಿ ಮತ್ತು ಕೆಮ್ಮು ಕಫ ಇದ್ದರೆ ಮನೆಯಲ್ಲಿ ಮನೆಮದ್ದನ್ನು ನೀವೇ ತಯಾರು ಮಾಡಿಕೊಳ್ಳಿ. ಬೇಕಾಗಿರುವ ಸಾಮಾಗ್ರಿಗಳು ಬೆಲ್ಲ ತುಳಸಿ ಮತ್ತು ಶುಂಠಿ ಅರಿಶಿನ ಪುಡಿ ಹಾಗೂ ಓಂಕಾಳು ಇಷ್ಟು ಸಾಮಗ್ರಿಗಳು ಬೇಕು ಇರಲಿ ತುಂಬಾ ಪ್ರೋಟೀನ್ಗಳು ಮತ್ತು ವಿಟಮಿನ್ ಗಳು ಇರುತ್ತದೆ ಮಾಡುವ ವಿಧಾನ ಮೊದಲು ಬೆಲ್ಲವನ್ನು ಪಾಕ ಮಾಡಿಕೊಳ್ಳಬೇಕು ನಂತರ ತುಳಸಿ ಮತ್ತು ಓಂ ಕಾಳು ತೆಗೆದುಕೊಂಡು ಜಜ್ಜಿ ಬೇಕು ನಂತರ ಶುಂಠಿಯನ್ನು ತೆಗೆದುಕೊಂಡು ತುರಿದು ರಸ ಮಾಡಿಕೊಳ್ಳಬೇಕು ಆಮೇಲೆ ಒಲೆಯ ಮೇಲೆ ಒಂದು ಪಾತ್ರೆಯನ್ನು…