ಸುದ್ದಿ

ಆದಿವಾಸಿಗಳ ಪಾಲಿಗೆ ಮರಣ ಶಾಸನವಾದ ನೂತನ ಅರಣ್ಯ ಕಾಯ್ದೆ,.ಇದನ್ನೊಮ್ಮೆ ಓದಿ …!

205

ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಬದುಕು ಮತ್ತೊಮ್ಮೆ ಬೀದಿಗೆ ಬೀಳುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಕಳೆದ ಫೆಬ್ರವರಿ 13ರಂದು ಅರಣ್ಯದಿಂದ ಎಲ್ಲರನ್ನು ಒಕ್ಕಲೆಬ್ಬಿಸಬೇಕು ಎಂಬ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನಿಂದಾಗಿ ತೂಗುಕತ್ತಿಯ ಕೆಳೆಗೆ ಬದುಕುತ್ತಿರುವ ಈ ನತದೃಷ್ಟರಿಗೆ ನೆಮ್ಮದಿ ಎಂಬುದು ಜೀವಮಾನದ ಕನಸು ಎಂಬಂತಾಗಿದೆ. ನ್ಯಾಯಾಲಯದ ತೀರ್ಪಿನ ವಿರುದ್ಧ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೇಲ್ಮನವಿ ಸಲ್ಲಿಸುವುದರ ಮೂಲಕ ತಡೆಯಾಜ್ಞೆ ತಂದಿರುವುದರಿಂದ ತಾತ್ಕಾಲಿಕವಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ತಡೆಯಾಜ್ಞೆಯ ಜೊತೆಗೆ ರಾಷ್ಟ್ರದ ಹದಿನಾಲ್ಕು ರಾಜ್ಯಗಳ ಅರಣ್ಯಗಳಲ್ಲಿ ಬದುಕುತ್ತಿರುವ ಆದಿವಾಸಿಗಳ ಅರಣ್ಯದ ಮೇಲಿನ ಹಕ್ಕುಗಳ ಅರ್ಜಿಗಳ ಪರಿಶೀಲನಾ ಕಾರ್ಯಕೂಡ ಬಿರುಸಿನಿಂದ ನಡೆಯುತ್ತಿದೆ. 2006ರಲ್ಲಿ ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಆದಿವಾಸಿಗಳಿಗೆ ದಯಪಾಲಿಸಿದ್ದ ಇದೇ ಸರ್ವೋಚ್ಛನ್ಯಾಯಾಲಯವು ಇದೀಗ ಎಲ್ಲರನ್ನು ಸಾಮೂಹಿಕವಾಗಿ ಅರಣ್ಯಗಳಿಂದ ತೆರವುಗೊಳಿಸಬೇಕು ಎಂಬ ತೀರ್ಪು ನೀಡುವುದರ ಮೂಲಕ ತನ್ನ ಧ್ವಂದ್ವ ನೀತಿಯನ್ನು ಅನಾವರಣಗೊಳಿಸಿದೆ.

ಮೂರು ಕೋಟಿಗೂ ಅಧಿಕ ಮಂದಿ ಬುಡಕಟ್ಟು ಸಮುದಾಯದ ಜನತೆ ಭಾರತದ ಅರಣ್ಯಗಳಲ್ಲಿ ಅನೇಕ ಶತಮಾನಗಳದಿಂದಲೂ ಬದುಕು ಕಟ್ಟಿಕೊಂಡಿದ್ದಾರೆ. ಅವರ ಜೊತೆಗೆ ಅರಣ್ಯದಂಚಿನಲ್ಲಿ ಬದುಕುತ್ತಿರುವ ಹಿಂದುಳಿದ ಹಲವಾರು ಸಮುದಾಯಗಳು, ಬೇಸಾಯ ಮತ್ತು ಅರಣ್ಯದ ಕಿರುಉತ್ಪನ್ನಗಳನ್ನು ನಂಬಿ ಬದುಕುತ್ತಿವೆ. ಈ ತೀರ್ಪಿನ ವಿರುದ್ಧ ಈಗಾಗಲೇ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಮೇಲ್ಮನವಿ ಸಲ್ಲಿಸಿವೆ. ಜೊತೆಗೆ ದೇಶ್ಯಾದ್ಯಂತ ನಾಗರೀಕರಿಂದ ಪ್ರತಿಭಟನೆ ಮತ್ತು ಟೀಕೆಗಳು ವ್ಯಕ್ತವಾಗಿದ್ದವು. ಇದನ್ನು ಮನಗಂಡ ನ್ಯಾಯಾಲಯ ತಾತ್ಕಾಲಿಕವಾಗಿ ತನ್ನ ತೀರ್ಪನ್ನು ತಡೆ ಹೊಡಿದಿದೆ. ಈ ನಡುವೆ ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯವು ಅತ್ಯಂತ ಗುಪ್ತವಾಗಿ ನೂತನ ಅರಣ್ಯಕಾಯ್ದೆಯೊಂದನ್ನು ರಚಿಸಿದ್ದು, ಅದನ್ನು ಜಾರಿಗೆ ತರಲು ಹುನ್ನಾರ ನಡೆಸಿದೆ. ಅಕಸ್ಮಾತ್ ಈ ಕಾಯ್ದೆಯು ಜಾರಿಗೆ ಬಂದಿದ್ದೇ ಆದರೆ, ಇದನ್ನು ನಾವು ಭಾರತದ ಆದಿವಾಸಿಗಳ ಪಾಲಿಗೆ ಮರಣ ಶಾಸನ ಎಂದು ಬಣ್ಣಿಸಬಹುದು.

ಆದಿವಾಸಿಗಳೆಂದರೆ, ಆರಣ್ಯ ನಾಶಕರು ಎಂದು ನಂಬಿರುವ ಇಂದಿನ ಆಡಳಿತ ವ್ಯವಸ್ಥೆಯ ತಲೆಯೊಳಗೆ ಮಲ ತುಂಬಿಕೊಂಡಿದೆ ಎಂದರೆ, ತಪ್ಪಾಗಲಾರದು. ಈ ದೇಶದಲ್ಲಿ ಇನ್ನೂ ಅರಣ್ಯ ಮತ್ತು ಅಲ್ಲಿನ ಜೀವಸಂಕುಲ ಜೀವಂತವಾಗಿದ್ದರೆ ಅಥವಾ ಸುರಕ್ಷಿತವಾಗಿದ್ದರೆ ಅದು ಅರಣ್ಯವಾಸಿಗಳಾದ ಆದಿವಾಸಿಗಳಿಂದ ಮತ್ತು ಅವರು ನಂಬಿಕೊಂಡು ಬಂದಿರುವ ನಮ್ಮ ನೆಲಮೂಲ ಸಂಸ್ಕೃತಿ ಮತ್ತು ಪರಂಪರೆಯಿಂದ ಎಂಬುದನ್ನು ನಾವ್ಯಾರೂ ಮರೆಯುವಂತಿಲ್ಲ. ಇದರ ಜೊತೆಗೆ ನಮ್ಮ ಜನಪದರು ಗ್ರಾಮೀಣ ಭಾಗದಲ್ಲಿ ನಾಗಬಮ. ದೇವರ ಕಾಡು ಹೆಸರಿನಲ್ಲಿ ಅರಣ್ಯವನ್ನು ಪೋಷಿಸಿಕೊಂಡು ಬಂದಿದ್ದಾರೆ. ಅರಣ್ಯಾಧಿಕಾರಿಗಳು ಎಂಬ ಈ ಬಿಳಿಯಾನೆಗಳಿಂದ ಭಾರತದಲ್ಲಿ ಅರಣ್ಯಗಳು ಮತ್ತು ಅಲ್ಲಿನ ಪ್ರಾಣಿ ಮತ್ತು ಪಕ್ಷಿ ಸಂಕುಲ ಅಭಿವೃದ್ಧಿಯಾಗಿದ್ದರೆ ಅದು ಅವರ ಕಡತಗಳಲ್ಲಿ ಮಾತ್ರ.

ಪಕ್ಷಭೇದವಿಲ್ಲದೆ ಎಲ್ಲಾ ಕೇಂದ್ರ ಸರ್ಕಾರಗಳು ಆದಿವಾಸಿಗಳ ಬದುಕಿನ ಜೊತೆ ನಿರಂತರವಾಗಿ ಚೆಲ್ಲಾಟವಾಡುತ್ತಲೇ ಬಂದಿವೆ. ಅವರಿಗೊಂದು ಶಾಶ್ವತ ನೆಲೆ ಕಲ್ಪಿಸಿಕೊಡಲು ವಿಫಲವಾಗಿವೆ. ಈಗವರೆಗಿನ ಕಾನೂನುಗಳು, ತಿದ್ದುಪಡಿಗಳು ಮತ್ತು ಶಿಫಾರಸ್ಸುಗಳು ಅವರನ್ನೂ ಸದಾ ಅತಂತ್ರದ ಸ್ಥಿತಿಯಲ್ಲಿ ನಿಲ್ಲಿಸಿವೆ. 1976 ರಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ಆದಿವಾಸಿಗಳನ್ನು ಅರಣ್ಯದಿಂದ ಹೊರದಬ್ಬಬೇಕೆಂದು ಶಿಫಾರಸ್ಸು ಮಾಡಿತ್ತು. ಇದರ ಅನ್ವಯ 1980ರಲ್ಲಿ ಭಾರತದ ಅರಣ್ಯ ರಕ್ಷಣಾ ಕಾಯ್ದೆಯು ಜಾರಿಗೆ ಬಂದಿತು. ಆದರೆ, 1988 ರಲ್ಲಿ ಜಾರಿಯಾದ ಮತ್ತೊಂದು ಭಾರದ ಅರಣ್ಯ ನಿಯಮವೊಂದು ಜಾರಿಗೆ ಬಂದು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸದೆ ಕರುಣೆ ತೋರಿತು. ಜೊತೆಗೆ 1996 ರಲ್ಲಿ ಅಸ್ತಿತ್ವಕ್ಕೆ ತರಲಾದ ಬುಡಕಟ್ಟು ಜನಾಂಗಗಳ ರಕ್ಷಾಣಾ ಕಾಯ್ದೆಯು ಆದಿವಾಸಿಗಳ ಪಾಲಿಗೆ ರಕ್ಷಣಾ ಗೋಡೆಯಾಗಿ ಪರಿಣಮಿಸಿತು. ಇವೆಲ್ಲಾ ಗೊಂದಲಗಳ ನಡುವೆಯೂ ಅರಣ್ಯವಾಸಿಗಳ ಬಲುದಿನಗಳ ಬೇಡಿಕೆಯಾದ ‘ಜಲ್, ಜಂಗಲ್, ಜಮೀನ್’ ( ಜಲ, ಅರಣ್ಯ ಮತ್ತು ಜಮೀನು) ಪೂರ್ಣವಾಗಿ ಯಶಸ್ವಿಯಾಗಲಿಲ್ಲ. ನಕ್ಸಲ್ ಹಿಂಸಾಚಾರವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮತ್ತು ಆದಿವಾಸಿಗಳು ಮಾವೋವಾದಿ ನಕ್ಸಲರ ಹಿಡಿತಕ್ಕೆ ಸಿಲುಕದಿರಲಿ ಎಂಬ ಆಲೋಚನೆಯಿಂದ 2006ರಲ್ಲಿ ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ದಯಪಾಲಿಸಿದ ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪಿನಿಂದಾಗ ಅವರುಗಳು ಒಂದಿಷ್ಟು ಕಾಲ ನೆಮ್ಮದಿಯಿಂದ ಇದ್ದರು. ಜೊತೆಗೆ ತಮ್ಮ ಹಕ್ಕು ಸ್ಥಾಪಿಸಲು ಹೋರಾಡುತ್ತಿದ್ದಾರೆ. ಇಂದಿಗೂ ಕೂಡ ದೇಶಾದ್ಯಂತ ರಾಜ್ಯಗಳ ಅರಣ್ಯ ಇಲಾಖೆಗಳಲ್ಲಿ ಅರಣ್ಯವಾಸಿಗಳು ಅಧಿಕೃತ ವಾಸ ಕುರಿತಂತೆ ಮತ್ತು ಅವರು ಹೊಂದಿರುವ ಭೂಮಿ ಕುರಿತಂತೆ ನಾಲ್ಕು ಲಕ್ಷದ 21 ಸಾವಿರ ಅರ್ಜಿಗಳು ವಿಲೇವಾರಿಯಾಗದೆ ಕೊಳೆಯುತ್ತಿವೆ. ಈವರೆಗೆ 79 ಸಾವಿರ ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ಕರ್ನಾಟಕದಲ್ಲಿ 53 ಸಾವಿರದ 785 ಅರ್ಜಿಗಳು ಬಾಕಿ ಉಳಿದಿವೆ. ಛತ್ತೀಸ್ ಗಡ ರಾಜ್ಯದ ಒಟ್ಟು ವಿಸ್ತಿರ್ಣದ ಶೇಕಡ 44ರಷ್ಟು ಅರಣ್ಯ ಭೂಮಿಯಿದ್ದು ಅರಣ್ಯವಾಸಿಗಳಿಗೆ ಅದು ಶಾಶ್ವತ ನೆಲೆಯಾಗಿದೆ. ಜೊತೆಗೆ ಮಧ್ಯಪ್ರದೇಶ ಮತ್ತು ಒಡಿಸ್ಸಾ ರಾಜ್ಯದಲ್ಲಿಯೂ ಕೂಡ ಅತ್ಯಧಿಕ ಮಂದಿ ಅರಣ್ಯವಾಸಿಗಳಿದ್ದಾರೆ. ಸರ್ವೋಚ್ಛ ನ್ಯಾಯಾಲಯವು ವಿಚಾರಣೆಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮವಾದ ವಿಷಯಗಳನ್ನು ಎಲ್ಲಾ ಆಯಾಮಗಳಿಂದಲೂ ಹಾಗೂ ಆದಿವಾಸಿಗಳ ಇತಿಹಾಸವನ್ನು, ಅವರ ವರ್ತಮಾನದ ಬದುಕನ್ನು ಮತ್ತು ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ತನ್ನ ತೀರ್ಪನ್ನು ನೀಡಬೇಕಿದೆ.

ಈ ಹೊಸ ಕಾಯ್ದೆಯನ್ನು ರೂಪಿಸುವಾಗಪ್ರಜ್ಞಾಪೂರ್ವಕವಾಗಿ ಕೇಂದ್ರ ಬುಡಕಟ್ಟು ಸಚಿವಾಲಯದ ಅಧಿಕಾರಿಗಳನ್ನು ಮತ್ತು ಪರಿಸರವಾದಿಗಳು ಮತ್ತು ಮಾನವ ಹಕ್ಕು ಆಯೋಗದ ಸದಸ್ಯರನ್ನು ದೂರ ಇಟ್ಟು ಕೇವಲ ಅರಣ್ಯಾಧಿಕಾರಿಗಳು  ಮಾತ್ರ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಆಡಳಿತ ಶಾಹಿಯ ಹುನ್ನಾರದಂತೆ ಕಾಣುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕುಮಾರಣ್ಣ ಬಜೆಟ್ ನಲ್ಲಿ ರೈತರಿಗಾಗಿ ಮತ್ತೊಂದು ಭರ್ಜರಿ ಆಫರ್…

    ಸಾಲಮನ್ನಾ ಸೇರಿದಂತೆ ರೈತರಿಗೆ ಹಲವು ಅನುಕೂಲ ಕಲ್ಪಿಸಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ಕೊಡುಗೆ ನೀಡಿದ್ದಾರೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವುದಾಗಿ ಬಜೆಟ್ ನಲ್ಲಿ ಭರವಸೆ ನೀಡಲಾಗಿದೆ. ರಾಜ್ಯದಲ್ಲಿ ಸೌರಶಕ್ತಿ ಉತ್ಪಾದನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಮತ್ತು ರೈತರು ಎದುರಿಸುತ್ತಿರುವ ತೊಂದರೆಯನ್ನು ನಿವಾರಿಸುವ ಉದ್ದೇಶದಿಂದ ನೀರಾವರಿ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ತಿಳಿಸಲಾಗಿದೆ. ಉಚಿತವಾಗಿ ನೀಡಲಾಗುತ್ತಿರುವ ನೀರಾವರಿ ಪಂಪ್ ಸೆಟ್, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಗ್ರಾಹಕರಿಗೆ 9,250 ಕೋಟಿ…

  • ಸುದ್ದಿ

    ನೀವೆಂದಾದರೂ ಸಮುದ್ರದ ತೀರದಲ್ಲಿ ಈ ತರಹದ ಮೊಟ್ಟೆಗಳನ್ನು ಕಂಡಿದ್ದೀರಾ..? ಏನಿದು ಗೊತ್ತೇ..?

    ಮಿನುಗುವ ಮುತ್ತುಗಳು ಸಮುದ್ರ ತೀರದಲ್ಲಿ ಬಿದ್ದಿದ್ದಾವೋ ಏನೋ ಎಂಬಂತೆ ಕಾಣುವ ದೃಶ್ಯ.ಪ್ರಕೃತಿ ದೇವಿಯೇ ಮುತ್ತನ್ನು ಪೋಣಿಸಿ ಹಾಸಿಗೆ ಮಾಡಿದ್ದಾಳೋ ಏನೋ ಎಂಬಂತಹ ನೋಟ…ಎಂತಹವರನ್ನೂ ಅರೆಕ್ಷಣದಲ್ಲಿ ಸೆಳೆದು ಬಿಡುವಂತಹ ಸೊಬಗು.ಈ ಸೌಂದರ್ಯ `ರಾಶಿ’ಗೆ ಸಾಕ್ಷಿಯಾಗಿದ್ದು ಫಿನ್‌ಲ್ಯಾಂಡಿನ ಮರ್ಜಾನಿಯೆಮಿ ಕಡಲತೀರ. ಇಷ್ಟು ದಿನ ಮರಳಿಂದ ಆವೃತ್ತವಾಗಿದ್ದ ಈ ಬೀಚ್ ಮೊನ್ನೆ ಸಾವಿರಾರು `ಹಿಮದ ಮೊಟ್ಟೆ’ಗಳ ಹಾಸಿನಿಂದ ಅಚ್ಚರಿಗೆ ಕಾರಣವಾಗಿತ್ತು. ಸುಮಾರು 30 ಮೀಟರ್ ಅಂದರೆ 10 ಅಡಿಯಷ್ಟು ಪ್ರದೇಶದಲ್ಲಿ ಈ ಮೊಟ್ಟೆಗಳ ರಾಶಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು. ಇದನ್ನು ಕಂಡು…

  • ಜೀವನಶೈಲಿ

    ದಯವಿಟ್ಟು ಹೀಗೆ ಹಲ್ಲುಜ್ಜುವುದು ಬೇಡವೇ ಬೇಡ ??? ಏಕೇ ಗೊತ್ತಾ? ಮುಂದೆ ಓದಿ…..

    ಬಾಯಿ ನಮ್ಮ ದೇಹಾರೋಗ್ಯದ ಕನ್ನಡಿ ಎನ್ನುತ್ತಾರೆ,ಆದರೆ ಕೆಲವರು ಹಲ್ಲುಜ್ಜುವಾಗ ಸ್ನೇಹಿತರ ಜೊತೆ ಮಾತನಾಡಿಕೊಂಡೋ, ಟಿವಿ ನೋಡಿಕೊಂಡೋ, ಮತ್ತೆನ್ನಿನೋ ಮಾಡಿಕೊಂಡೋ ಗಂಟೆಗಟ್ಟಲೆ ಹಲ್ಲು ಉಜ್ಜುತ್ತಾರೆ….

  • ಆಧ್ಯಾತ್ಮ

    ದರ್ಭೆಯ ಬಗ್ಗೆ ಮಾಹಿತಿ.!

    ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772 ದರ್ಭೆಯನ್ನು ಅನಾದಿ ಕಾಲದಿಂದಲೂ ಪೂಜಾಕೈಂಕಾರ್ಯಗಳಲ್ಲಿ ಯಾಕೆ ಉಪಯೋಗಿಸಲಾಗುತ್ತದೆ ? ಬನ್ನಿ ತಿಳಿಯೋಣ. ಗರುಡ ರಾಜನು ತನ್ನ ಪರಿವಾರವನ್ನು…

  • ಆರೋಗ್ಯ

    ಕೂದಲು ಉದುರುತ್ತಿದ್ದರೆ. ಅದನ್ನು ತಡೆಗಟ್ಟಲು ಸುಲಭ ಉಪಾಯ ಇಲ್ಲಿದೆ ನೋಡಿ.!

    ಇಂದಿನ ದಿನದಲ್ಲಿ ಸಾಮಾನ್ಯವಾದ ವಿಚಾರವಾಗಿಬಿಟ್ಟಿದೆ. ಮಾಲಿನ್ಯ, ನೀರಿನಲ್ಲಿ ಬೆರೆಸುವ ರಾಸಾಯನಿಕ ಸೇರಿ, ನಗರಗಳಲ್ಲಿಪುರುಷರು ಹಾಗೂ ಮಹಿಳೆಯರಿಬ್ಬರಲ್ಲೂ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುತ್ತಿದೆ. ಕೂದಲು ಉದುರುವಿಕೆ ತಡೆಗಟ್ಟಲು ಮನೆಯಲ್ಲೇ ಏನು ಮಾಡಬಹುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ ಕೂದಲನ್ನು ಉದ್ದ ಬಿಡದಿರಿ ಪ್ರತಿ 8 ಅಥವಾ 10 ವಾರಗಳಿಗೊಮ್ಮೆ ಕೂದಲನ್ನು ಸಣ್ಣದಾಗಿ ಕಟ್ಟಿಂಗ್‌ ಮಾಡಿಸಿರುವುದರಿಂದ ಕೂದಲು ಉದುರುವಿಕೆ ತಡೆಯಲು ಸಾಧ್ಯ. ಇದರಿಂದ ಕೂದಲಿನ ಬೆಳವಣಿಗೆ ಕೊಂಚ ವೇಗ ಪಡೆದುಕೊಳ್ಳುತ್ತದೆ. ಉದ್ದ ಕೂದಲಿಗೆ ಬೇಗನೆ ನಾಶವಾಗುತ್ತದೆ, ತುಂಡಾಗುತ್ತದೆ. ಇದಕ್ಕಾಗಿ…

  • ವಿಚಿತ್ರ ಆದರೂ ಸತ್ಯ

    ಮಹಿಳೆಯೊಬ್ಬಳು 300 ವರ್ಷ ವಯಸ್ಸಿನ ದೆವ್ವದ ಜೊತೆ ಮದುವೆಯಾಗಿದ್ದಾಳೆ..!ತಿಳಿಯಲು ಈ ಲೇಖನ ಓದಿ…

    ಮಹಿಳೆಯೊಬ್ಬಳು ಐರ್ಲೆಂಡ್ ನಲ್ಲಿ ದೆವ್ವವನ್ನೇ ಮದುವೆಯಾಗಿದ್ದಾಳೆ. ಅಮಂಡಾ ಟೀಗ್ ಎಂಬ ಮಹಿಳೆ ಸರ್ವಾಲಂಕೃತಳಾಗಿ ಚರ್ಚ್ ಗೆ ಬಂದಿದ್ಲು. ಅಲ್ಲಿ ಅತಿಥಿಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ 300 ವರ್ಷ ವಯಸ್ಸಿನ ಜಾಕ್ ಎಂಬ ದೆವ್ವವನ್ನು ಮದುವೆಯಾಗಿದ್ದಾಳೆ.