ಸಿನಿಮಾ

ಆಟೋ ಚಾಲಕನಿಂದ ಉಪ್ಪಿಗೆ ಬಂದ,ಈ ಪತ್ರದಲ್ಲಿ, ಇದ್ದ ಅಸಲಿ ವಿಷಯ ಏನು ಗೊತ್ತಾ..?ತಿಳಿಯಲು ಈ ಲೇಖನಿ ಓದಿ…

3250

ಕನ್ನಡ ಚಿತ್ರ ನಟ ಸೂಪರ್ಸ್ಟಾರ್ ಉಪೇಂದ್ರರವರು ಇತ್ತೀಚೆಗಷ್ಟೇ ಪ್ರಜಾಕೀಯ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಹಾಗಾಗಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹಾಗೂ ಸ್ವತಃ ಉಪೇಂದ್ರರವರ ಅಭಿಮಾನಿಯಾಗಿರುವರೊಬ್ಬರು, ಉಪೇಂದ್ರರವರ ರಾಜಕೀಯ ಮತ್ತು ಅವರ ಹೊಸ ಪಕ್ಷದ ಕುರಿತು ಪತ್ರವೊಂದನ್ನು ಬರೆದಿದ್ದಾರೆ.

ಆ ಪತ್ರದಲ್ಲಿ ಏನಿತ್ತು ಗೊತ್ತಾ? ಮುಂದೆ ಓದಿ…

ಗೌರವಾನ್ವಿತ ಉಪೇಂದ್ರರವರಿಗೆ,
ನಾನೊಬ್ಬ ಆಟೋ ಚಾಲಕ. ಬಸವನಗುಡಿಯಲ್ಲಿಯೇ ನಾನು ಆಟೋ ಚಾಲಕನಾಗಿರುವವನು. ನಿಮ್ಮ ಮನೆ ನನ್ನ ಆಟೋ ನಿಲ್ದಾಣಕ್ಕೆ ತೀರಾ ದೂರವಿಲ್ಲ. ನಾನೊಬ್ಬ ಕನ್ನಡದ ಅಭಿಮಾನಿ! ಶಂಕರ್ ನಾಗ್ ಹಾಗೂ ನಿಮ್ಮ ಚಿತ್ರವನ್ನು ಆಟೋದ ಹಿಂದೆ ಮುಂದೆ ಹಾಕಿಕೊಂಡಿದ್ದೇನೆ! ಕಾರಣ ನಿಮ್ಮ ಮೇಲಿನ ಅಭಿಮಾನದಿಂದಷ್ಟೇ.

ಒಟ್ಟಾರೆಯಾಗಿ ಹೇಳಬೇಕೆಂದರೆ ನಾನೊಬ್ಬ ನಿಮ್ಮ ಅಪ್ಪಟ ಅಭಿಮಾನಿ! ನಿಮ್ಮ ಸಿನಿಮಾಗಳನ್ನು ಅದೆಷ್ಟೋ ಸಲ ನೋಡಿದ್ದೇನೆ, ಒಂದೇ ಸಲಕ್ಕೆ ಅರ್ಥವಾಗದಿದ್ದರೂ ಎರಡು ಮೂರನೇ ಸಲ ನೋಡಿ ಅರ್ಥ ಮಾಡಿಕೊಂಡಿದ್ದೇನೆ! ಪೂರ್ತಿಯಾಗಿ ಅರ್ಥಾಗದೇ ಹೋದರೂ ಅದೇನೋ ಖುಷಿಯೊಂದು ನನ್ನಲ್ಲಿರುತ್ತದೆ.

ನೀವು ರಾಜಕೀಯವನ್ನು ‘ಪ್ರಜಾಕೀಯ’ ಮಾಡಲು ಹೊರಟಿದ್ದು ಬಹಳ ಸಂತೋಷವಾಗಿತ್ತು! ಒಬ್ಬ ನಾಯಕ ನಟನಾದ ನೀವು ಹೆಮ್ಮೆಯ ಪ್ರಧಾನಿ ಮೋದಿಯನ್ನು ಬೆಂಬಲಿಸಿದ್ದು ನೋಡಿ ನಮ್ಮ ಕರ್ನಾಟಕಕ್ಕೂ ಒಂದೊಳ್ಳೆಯ ನಾಯಕ ಸಿಗಬಹುದೆಂದು ಅಂದುಕೊಂಡಿದ್ದೆ! ನಿಮ್ಮ ಸುದ್ದಿಗೋಷ್ಠಿ ನೋಡಿದ ಮೇಲೆ ಕೇಳಲೇಬೇಕು ಎಂದೆನಿಸಿದ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ.

  1. ನಿಮ್ಮ ದೃಷ್ಟಿಯಲ್ಲಿ ಈಗಿರುವ ಪ್ರಜಾಕಾರಣಿ ಯಾರು? ಮತ್ತು ಯಾಕೆ?

2. ನೀವೇ ಹೇಳಿದಂತೆ, ಒಬ್ಬ ಪ್ರಜಾಕಾರಣಿ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಾರ್ಮಿಕನ ಹಾಗೆ ಕೆಲಸ ಮಾಡಬೇಕು ಎಂದಿರಿ. ಹಾಗಿದ್ದರೆ, ನರೇಂದ್ರ ಮೋದಿಯವರು ಬೆಳಗ್ಗಿನ ಜಾವ 4ರಿಂದ ರಾತ್ರಿ 12ರವರೆಗೂ ಬರೋಬ್ಬರಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನಿಮ್ಮ ದೃಷ್ಟಿಯಲ್ಲಿ ಅವರು ಈ ಯಾವ ‘ಪ್ರಜಾಕಾರಣ’ದ ವರ್ಗಕ್ಕೆ ಸೇರುತ್ತಾರೆ?

3. ನೀವೇ ಹೇಳಿದಂತೆ, ಚುನಾವಣೆಯ ಪ್ರಚಾರಕ್ಕೆ ಫ್ಲೆಕ್ಸು, ಬ್ಯಾನರ್‌ಗಳನ್ನು ಹಾಕಿದರೆ ಸ್ವಚ್ಛ ಭಾರತದ ಕನಸು ಕನಸಾಗುಳಿದುಬಿಡುತ್ತೆ ಎಂದಿರಿ. ಆದರೆ ನಿಮ್ಮ ಯಾವುದೇ ಸಿನಿಮಾಗಳ ಬಿಡುಗಡೆ ನೋಡಿದರೂ ಪಟಾಕಿ, ಬ್ಯಾನರ್, ಪ್ಲೆಕ್ಸುಗಳಿಲ್ಲದೇ ನಡೆಯುವುದೇ ಇಲ್ಲ! ಆಗೆಲ್ಲಿತ್ತು, ಈ ಸ್ವಚ್ಛ ಭಾರತದ ಪರಿಕಲ್ಪನೆ?

ಹೂವಿನ ಹಾರ ಹಾಕುವುದು ತಪ್ಪು ಎನ್ನುವುದು ನಿಮ್ಮ ಸಿದ್ಧಾಂತವಾದರೆ, ನಿಮ್ಮ ಸಿನಿಮಾ ಬಿಡುಗಡೆಗಳಲ್ಲೇ ನಿಮ್ಮ ಅದೆಷ್ಟೋ ಉದ್ದದ ಪ್ರತಿಕೃತಿಗೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದ್ದನ್ನು ಸ್ವತಃ ನೋಡಿದ್ದೇನೆ. ಸ್ವತಃ ನಿಮಗೂ ಅಭಿಮಾನಿಗಳು ಹಾರ ಹಾಕಿದ್ದಾರೆ! ಆಗ್ಯಾಕೆ, ನೀವು ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಲಿಲ್ಲ? ಅದೇ ದುಡ್ಡನ್ನು ಇನ್ನೊಬ್ಬರಿಗೆ ದಾನ ಮಾಡಿ ಎಂದು ಘೋಷಿಸಲಿಲ್ಲ?

4. ಒಬ್ಬ ‘ಖಾಕಿ’ ಹಾಕಿಬಿಟ್ಟರೆ ಆತ ಕಾರ್ಮಿಕ ಹೇಗಾಗುತ್ತಾನೆ ಸ್ವಾಮಿ? ನೀವು ಖಾಕಿಗೆ ಬೆಲೆ ಕೊಡುವವರಾಗಿದ್ದಾರೆ ನಿಮ್ಮ ರೆಸಾರ್ಟಿನಲ್ಲಿ ನೀವು ಪ್ರೆಸ್ ಮೀಟ್ ಮಾಡುತ್ತಿರಲಿಲ್ಲ ಅಲ್ಲವೇ? ಕಾರ್ಮಿಕರಿರುವ ಸಾರ್ವಜನಿಕ ಸ್ಥಳಗಳಲ್ಲಿಯೇ ನಡೆಸುತ್ತಿದ್ದೀರಿ ಅಲ್ಲವೇ?

5. ನೀವೇ ಕೆಲವು ವರ್ಷಗಳ ಹಿಂದೆ ಹೇಳಿದಂತೆ, ನೀವು ರಾಜಕೀಯಕ್ಕೆ ಇಳಿಯುವ ಮುನ್ನ ಮೊದಲು ಕುಟುಂಬವನ್ನು ಆರ್ಥಿಕವಾಗಿ ರಕ್ಷಿಸಿರಬೇಕು, ನ್ಯಾಯ ಒದಗಿಸಿರಬೇಕು ಎಂದಿದ್ದಿರಿ. ಹಲವು ವರ್ಷಗಳ ಹಿಂದೆಯೇ ನೀವು ಮೂರು ಕೋಟಿಯ ಮನೆ ಕಟ್ಟಿಸಿ, ಬೇಕಾದಷ್ಟು ಆಸ್ತಿ ಮಾಡಿ ನಿಮ್ಮ ಕುಟುಂಬವನ್ನು ತುಂಬಾ ಚೆನ್ನಾಗಿಯೇ ನೋಡಿಕೊಂಡಿರಿ ಮತ್ತು ನ್ಯಾಯ ಒದಗಿಸಿದಿರಿ. ಹಾಗಾದರೆ, ಬರುವ ಪ್ರತಿಯೊಬ್ಬ ಕಾರ್ಯಕರ್ತನೂ (ಅಥವಾ ಪ್ರಜಾಕೀಯದ ಪ್ರಾಯಕರ್ತನೋ?) ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿ ಪ್ರಾಯ ಮುಗಿದ ನಂತರವೇ ನಿಮ್ಮ ಪಕ್ಷ ಸೇರಿದ್ದಲ್ಲಿ ನಿಮಗೆ ಅಭ್ಯಂತರವಿದೆಯೇ?

6. ಇಷ್ಟು ದಿನವೂ ಸುಮ್ಮನಿದ್ದ ನೀವು ಅಮಿತ್ ಷಾ ಬರುವ ದಿನವೇ ನಿಮ್ಮ ಪ್ರಜಾಕೀಯದ ಪಾದಾರ್ಪಣೆಯನ್ನು ಘೋಷಿಸಿದಿರಿ. ಪರಿಣಾಮ ಅತ್ಯಂತ ಅಗತ್ಯವಾಗಿದ್ದ ಅವರ ಪ್ರವಾಸ ಕಾರ್ಯಕ್ರಮವೊಂದು ಅಂದುಕೊಂಡಷ್ಟು ಯಶಸ್ವಿಯಾಗಲೇ ಇಲ್ಲ. ಈ ಲಾಜಿಕ್ಕುಗಳ ಹಿಂದೆ ನೀವೇ ಇದ್ದದ್ದೋ ಅಥವಾ ಕಾಣದ ಕೈಗಳ ‘ಕೈ’ ಅಡಗಿದೆಯೋ?

7. ಅಚ್ಚರಿಯೆನ್ನಿಸಿದ್ದು ನಿಮ್ಮ ಹಣವಿಲ್ಲದ ಪ್ರಜಾಕೀಯ! ಒಂದು ರುಪಾಯಿ ಹಾಕೊಲ್ಲ, ತೆಗೆಯೊಲ್ಲ ಅಂದಿರಿ. ಆದರೆ, ಚುನಾವಣೆಗೆ ಅದರದೇ ಆದ ಖರ್ಚುಗಳಿದ್ದೇ ಇರುತ್ತದೆ. ಪ್ರಚಾರಕ್ಕೆ, ಪತ್ರಕ್ಕೆ ಇತ್ಯಾದಿ. ಪ್ರಚಾರಕ್ಕೆ ಹಣವೇ ನಾ ನೀಡೋದಿಲ್ಲ ಎಂದಿರಿ. ಮುಂದೆ ಇದಕ್ಕೆ ನೀಡುವ ಹಣ ನಿಮ್ಮ ಕುಟುಂಬದ ಸದೃಢತೆಯದೋ ಅಥವಾ ಯಾರಾದರಿಂದಲೂ ತೆಗೆದುಕೊಳ್ಳುವಿರೋ?

8. ಈ ಹಿಂದೆಯೂ ಕೂಡ ತೆಲುಗಿನ ನಟ ಚಿರಂಜೀವಿ ‘ಪ್ರಜಾರಾಜ್ಯಂ’ ಎಂಬ ಪಕ್ಷ ಸ್ಥಾಪಿಸಿ ನಿಮ್ಮಂತೆಯೇ ತತ್ತ್ವ ಸಿದ್ಧಾಂತಗಳನ್ನು ಮಂಡಿಸಿ, ಎಷ್ಟೋ ಜನರ ತಲೆಕೆಡಿಸಿ, ನಂತರ ತನಗೆ ಸ್ಥಾನ ಸಿಕ್ಕ ನಂತರ ಪರ ಪಕ್ಷಕ್ಕೆ ಹಾರಿ, ಕಾರ್ಯಕರ್ತರನ್ನೆಲ್ಲ ನಡು ನೀರಿನಲ್ಲಿ ಕೈ ಬಿಟ್ಟರು. ನೀವು ಚಿರಂಜೀವಿ, ಕೇಜ್ರಿವಾಲ್ ತರಹ ಮುಂದೆ ಹೀಗೆ ವರ್ತಿಸುವುದಿಲ್ಲವೆಂಬ ಯಾವ ಗ್ಯಾರಂಟಿ?

9. ಪ್ರಜಾಕೀಯ ಕೇವಲ ಪದಗಳ ಆಟವಲ್ಲವಷ್ಟೇ? ರಾಜಕೀಯವನ್ನು ಪ್ರಜಾಕೀಯ ಅಂದ ತಕ್ಷಣ ಚುನಾವಣಾ ವ್ಯವಸ್ಥೆ ಬದಲಾಗದು. ಲೋಕಸಭಾ ಚುನಾವಣೆಯಿಂದ ಗ್ರಾಮಪಂಚಾಯತ್ ವರೆಗೆ ವ್ಯವಸ್ಥೆ ಹಾಗೆಯೇ ಮುಂದುವರಿಯುತ್ತದೆ. ಇದನ್ನು ನೀವು ಹೇಗೆ ಬದಲಾಯಿಸುವಿರಿ?

ನಾನೊಬ್ಬ ಸಾಮಾನ್ಯ ಕಾರ್ಮಿಕ! ನನಗೆ ಈ ಪ್ರಜಾಕೀಯವೆನ್ನುವುದೆಲ್ಲ ತೀರಾ ತಿಳಿಯದ ವಿಷಯಗಳಾದರೂ ಒಂದಷ್ಟು ಸಾಮಾನ್ಯ ಜ್ಞಾನವಂತೂ ಇರುವುದರಿಂದ ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಇದಕ್ಕೆ ನಿಮ್ಮಿಂದ ಉತ್ತರವನ್ನೂ ನಿರೀಕ್ಷಿಸುತ್ತಿದ್ದೇನೆ.

ನಿಮ್ಮ ಉತ್ತರಗಳು ಸಮರ್ಪಕವಾಗಿದ್ದರೆ ನಾನು ನನ್ನೆಲ್ಲ ಕೆಲಸ ಕಾರ್ಯಗಳನ್ನೂ ಬಿಟ್ಟು ನಿಮ್ಮ ‘ಸ್ವಚ್ಛ’ ಪ್ರಜಾಕೀಯದ ಪ್ರಚಾರಕ್ಕೆ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತೇನೆ. ನಿಮ್ಮ ಉತ್ತರಗಳು ನಿಮ್ಮ ಸಿನಿಮಾ ನೋಡಿ ಸಿಕ್ಕಿದ ಖುಷಿಯ ಅರ್ಧವಾದರೂ ಇರಲಿ ಎಂಬ ನಂಬಿಕೆ ಅಷ್ಟೇ. ನಿಮಗೆ ಮೇಲ್ ಕೂಡ ಮಾಡಿದ್ದೇನೆ. ಉತ್ತರ ಮೇಲ್‌ನಲ್ಲಿ ಕೊಟ್ಟರೂ ಸರಿಯೇ.
ಕೃಪೆ: ಶಂಕರ ಕಾಳೇಗೌಡ

ಮೂಲ

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ, ದೇವರು-ಧರ್ಮ

    ಶನಿವಾರ ನಾವೇಕೆ ಆಂಜನೇಯನನ್ನು ಆರಾಧಿಸಬೇಕು.?ಹನುಮನಿಗೆ ಶನಿ ದೇವ ಕೊಟ್ಟ ಆ ವರಗಳೇನು.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸುಮಾರು ಜನ ಶನಿವಾರ ಬಂದರೆ, ಎಲ್ಲರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಮಾಡಿಬರುತ್ತಾರೆ. ಈಗ ಎಲ್ಲಾ ಕಡೆ ಈ ರಾಮಭಂಟನ ದೇವಾಲಯಗಳು ಇವೆ. ಹಿಂದೆಯೂ ಸಹ ಊರ ಹೊರಗೆ ಒಂದು ಆಂಜನೇಯನ ದೇವಸ್ಥಾನವನ್ನು ನಮ್ಮ ಹಿರಿಯರು ನಿರ್ಮಿಸಿಟ್ಟಿರುತ್ತಿದ್ದರು. ಶನಿವಾರ ನಾವೇಕೆ ಆಂಜನೇಯನ ದೇವಸ್ಥಾನಕ್ಕೆ ಹೋಗುತ್ತೇವೆ ಗೊತ್ತಾ..? ಶನಿ ಒಂದೆರಡು ಅಪರೂಪವಾದ ವರವನ್ನು ಆಂಜನೇಯನಿಗೆ ಪ್ರಸಾದಿಸಿದ್ದ. ಆ ಕುತೂಹಲಕಾರಿ ಘಟನೆಗಳನ್ನು ಇಂದು ನಾವು ತಿಳಿದುಕೊಳ್ಳೊಣ… ತ್ರೇತಾಯುಗದಲ್ಲಿ ರಾವಣನು ಬ್ರಹ್ಮ…

  • ಉಪಯುಕ್ತ ಮಾಹಿತಿ

    ವರ ವಧುವಿನ ಕೊರಳಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಮಾತ್ರ ಹಾಕುತ್ತಾನೆ ಏಕೆ ಗೊತ್ತಾ.? ತಿಳಿಯಲು ಇದನ್ನು ಓದಿ..?

    ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ.

  • ಸುದ್ದಿ

    ಚಂಧನ್ ಶೆಟ್ಟಿ ಮತ್ತು ನಿವೇದಿತಾಗೆ ಕುಟುಂಬದವರಿಂದ ಭರ್ಜರಿ ಉಡುಗೊರೆ. ಕಾರಿನ ಬೆಲೆ ಎಷ್ಟು ಗೊತ್ತಾ.

    ನಿನ್ನೆ ತಾನೇ ಚಂದನ್ ಶೆಟ್ಟಿ ಅವರು ತನ್ನ ಬಹುದಿನಗಳ ಪ್ರೇಯಸಿ ನಿವೇಧಿತಾ ಗೌಡ ಅವರನ್ನ ಗುರು ಹಿರಿಯರ ಸಮ್ಮುಖದಲ್ಲಿ ಮೈಸೂರಿನಲ್ಲಿ ಮದುವೆಯಾಗಿದ್ದು ನಿಮಗೆಲ್ಲ ಗೊತ್ತೇ. ಬಿಗ್ ಬಾಸ್ ನಲ್ಲಿ ಆರಂಭ ಆದ ಇವರಿಬ್ಬರ ಪ್ರೀತಿಗೆ ನಿನ್ನೆ ಒಂದು ಅರ್ಥ ಬಂತು ಹೇಳಿದರೆ ತಪ್ಪಾಗಲ್ಲ, ಹೌದು ಯುವದಸರ ವೇದಿಕೆಯ ಮೇಲೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಚಂದನ್ ಶೆಟ್ಟಿ ಅವರು ನಿವೇಧಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿ ಕೈಗೆ ರಿಂಗ್ ತೊಡಿಸಿದ್ದರು. ಇನ್ನು ಯುವದಸರ ವೇಧಿಕೆಯ ಮೇಲೆ ಕೊಟ್ಟ ಮಾತಿನಂತೆ…

  • ಸುದ್ದಿ

    ಮದ್ವೆ ಆಗಲು ಏಳು ಸಮುದ್ರ ದಾಟಿ ಬಂದಳು!ಯಾವ ಲವ್ ಸ್ಟೋರಿಗೂ ಕಡಿಮೆಯಿಲ್ಲ ಇವರ ಪ್ರೀತಿ…

    ಪ್ರೀತಿ ಕುರುಡು. ಅದಕ್ಕೆ ವಯಸ್ಸು, ಜಾತಿ, ಊರಿನ ನಿರ್ಬಂಧವಿಲ್ಲ. ಏಳು ಸಮುದ್ರಗಳನ್ನು ದಾಟಿ ಬರುವ ತಾಕತ್ತು ಪ್ರೀತಿಗಿದೆ ಎನ್ನಲಾಗುತ್ತದೆ. ಈ ಮಾತು ಮಧ್ಯಪ್ರದೇಶದ ಹೋಷಂಗಾಬಾದ್ ಯುವಕನ ಪ್ರೀತಿ ವಿಚಾರದಲ್ಲಿ ನಿಜವಾಗಿದೆ. ದೀಪಕ್ ರಜಪೂತ್ ಎಂಬಾತನನ್ನು ಅಮೆರಿಕಾ ಪ್ರೇಯಸಿ ಮದುವೆಯಾಗಿದ್ದಾಳೆ. 36 ವರ್ಷದ ದೀಪಕ್ ಹಾಗೂ ಅಮೆರಿಕಾದ 40 ವರ್ಷದ ಜೂಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂಲಿ, ಯುಎಸ್ಎಯ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಫೇಸ್ಬುಕ್ ನಲ್ಲಿ ಶುರುವಾದ ಸ್ನೇಹ, ವಾಟ್ಸಾಪ್, ಕರೆ ಮೂಲಕ ಪ್ರೀತಿಗೆ ತಿರುಗಿತ್ತು….

  • ರಾಜಕೀಯ

    ರಾಜ್ಯದಲ್ಲಿ ಲೋಕಸಭಾ ಫಲಿತಾಂಶ 4 ಗಂಟೆ ವಿಳಂಬ!

    ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ 40 ವಿವಿ ಪ್ಯಾಟ್ ಮತ ಯಂತ್ರಗಳ ಎಣಿಕೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ 4 ಗಂಟೆ ತಡವಾಗಿ ಪ್ರಕಟವಾಗಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 23(ನಾಳೆ)ರಂದು ಬೆಳಗ್ಗೆ 8 ಗಂಟೆಗೆ ಮೊದಲು ರಿಟರ್ನಿಂಗ್ ಅಧಿಕಾರಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ಬಳಿಕ ಇವಿಎಂಗಳಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ ಎಂದು ತಿಳಿಸಿದರು. ಹಿಂದೆ…

  • ವಿಚಿತ್ರ ಆದರೂ ಸತ್ಯ

    ಬಬ್ಲುಗೆ 8 ವರ್ಷದ ನಂತರ ಸಿಕ್ಕ ಆ ಯುವತಿ ಏನಾಗಿದ್ದಳು ಗೊತ್ತಾ??? ಶಾಕ್ ಆಗ್ತೀರಾ! ಈ ಲೇಖನಿ ಓದಿ…

    ಈತ ಒಬ್ಬ ರಿಕ್ಷಾ ಓಡಿಸೋ ಸಾಮಾನ್ಯ ಚಾಲಕ. ಈತನ ಹೆಸರು ಬಬ್ಲು. ಇವರ ವೃತ್ತಿಯಲ್ಲಿ 8 ವರ್ಷದ ಹಿಂದೆ ನಡೆದಿದ್ದ ಕತೆ ಈಗ ಹೊರಜಗತ್ತಿಗೆ ಗೊತ್ತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹೀರೊ ಹಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿ ಆ ಒಳ್ಳೆಯ ಕೆಲಸವೇನು ಗೊತ್ತಾ?