ಆರೋಗ್ಯ

“ಅನ್ನ” ತಿನ್ನುವುದಕ್ಕೆ ಮುಂಚೆ ಸ್ವಲ್ಪ ಇದನ್ನು ಓದಿ! ಬೇರೆಯವರೆಗೂ ತಿಳಿಸಿ…..

447

ಅಕ್ಕಿ ಯನ್ನು ಉಪಯೋಗಿಸದವರು ಯಾರಿದ್ದಾರೆ ಹೇಳಿ ನೋಡೋಣ, ಆದರೆ ಇತ್ತೀಚಿನ ದಿನಗಳಲ್ಲಿ ನಕಲಿ ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬಂದಿರುವುದನ್ನು ಕೇಳಿರುತ್ತೀರಿ. “ಅನ್ನಂ ಪರಬ್ರಂಹ ಸ್ವರೂಪಮ್” ಎಂದು ದೊಡ್ಡವರು ಹೇಳಿದ್ದಾರೆ. ಆದರೆ ಧನದಾಸೆಯ ದುರುಳರು ನಮ್ಮ ಅನ್ನದ ರೂಪದಲ್ಲಿ ಈ ವಿಷವನ್ನುಣಿಸಲು ಪ್ರಯತ್ನಿಸುತ್ತಿರುವುದು ನಿಜವಾಗಿಯೂ ಆತಂಕಕಾರಿ.

ಈ ಅಕ್ಕಿ ನಿಜವಾದ ಅಕ್ಕಿಯನ್ನು ಎಷ್ಟು ಮಟ್ಟಿಗೆ ಚೆನ್ನಾಗಿ ಹೋಲುತ್ತದೆ ಎಂದರೆ, ಅಕ್ಕಿ ವ್ಯಾಪಾರಿಗಲಿಂದಲೂ ಕೂಡ ಕಂಡುಹಿಡಿಯಲು ಕಷ್ಟವಾಗಿದೆ. ಅಷ್ಟೇ ಅಲ್ಲ, ಇದು ಮಾಮೂಲಿ ಅನ್ನದಂತೆಯೇ ಬೆಂದು ಅರಳುತ್ತದೆ ಸಹಾ.

ಅಷ್ಟೇ ಅಲ್ಲದೇ ಇದರ ಸೇವನೆಯಿಂದ ಹಿರಿಯರ ಸಹಿತ ಮಕ್ಕಳ ಆರೋಗ್ಯಕ್ಕೂ ಮಾರಕವಾಗಬಹುದಾಗಿದ್ದು ಇದನ್ನು ಸೇವಿಸುವ ಮುನ್ನ ಇದು ನಿಜವಾದದ್ದೇ ಅಲ್ಲವೇ ಎಂದು ಪ್ರಮಾಣಿಸಿಕೊಳ್ಳುವುದೇ ಜಾಣತನದ ಕ್ರಮ. ನಿಜವಾದ ಅಕ್ಕಿಯಲ್ಲಿ ಪ್ರಮುಖವಾಗಿ ಪಿಷ್ಟವಿದ್ದರೆ ಪ್ಲಾಸ್ಕಿಕ್ ಅಕ್ಕಿಯಲ್ಲಿ ಥಾಲೇಟ್ (phthalate) ಎಂಬ ಅಂಶವಿರುತ್ತದೆ. ಇವು ಪಿಷ್ಟಕ್ಕೆ ಹೆಚ್ಚು ಕಡಿಮೆ ಸರಿಸಮನಾಗಿದ್ದು ಅಕ್ಕಿಯಂತೆಯೇ ಬೆಂದು ಅರಳುತ್ತದೆ.

ಆದರೆ ಹೊಟ್ಟೆಗೆ ಹೋದ ಬಳಿಕ ಇವು ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುವುದು ಮಾತ್ರವಲ್ಲ, ಹಾರ್ಮೋನುಗಳನ್ನು ಏರುಪೇರುಗೊಳಿಸುವ ಮೂಲಕ ಸಂತಾನಶಕ್ತಿಯನ್ನೂ ಹೀರಿಬಿಡುತ್ತದೆ.

ಆದ್ದರಿಂದ ಈ ಅಕ್ಕಿಯನ್ನು ಗುರುತಿಸಿ ತಿನ್ನದೇ ಇರುವುದು ಹಾಗೂ ಸಂಬಂಧಪಟ್ಟವರಿಗೆ ಹಾಗೂ ಸುತ್ತಮುತ್ತಲಿನವರಿಗೆ ಸೂಚನೆ ನೀಡುವ ಮೂಲಕ ಎದುರಾಗಬಹುದಾದ ಅಪಾಯದಿಂದ ತಪ್ಪಿಸಬಹುದು.

ಹಾಗಾದರೆ ಇದನ್ನು ಕಂಡುಹಿಡಿಯುವುದಾದರು ಹೇಗೆ? ಇಲ್ಲಿವೆ ಕೆಲುವು ಸೂಚನೆಗಳು…. 

  • ಒಂದು ವೇಳೆ ಅನುಮಾನ ಬಂದರೆ  ಒಂದು ದೊಡ್ಡ ಚಮಚದಷ್ಟು ಅನುಮಾನವಿರುವ ಅಕ್ಕಿಯನ್ನು ತೆಗೆದುಕೊಂಡು ಬೆಂಕಿಕಡ್ಡಿ ಗೀರಿ ಬೆಂಕಿಯನ್ನು ನೇರವಾಗಿ ಅಕ್ಕಿಗೆ  ತಾಕುವಂತೆ ಮಾಡಿ.

  • ಒಂದು ವೇಳೆ ಪ್ಲಾಸ್ಟಿಕ್ ಸುಟ್ಟ ವಾಸನೆ ಬಂದರೆ ಇದರಲ್ಲಿ ಪ್ಲಾಸ್ಟಿಕ್ ಇದೆ ಎಂದು ಅರ್ಥ. ನಿಜವಾದ ಅಕ್ಕಿಯಾದರೆ ಜ್ವಾಲೆ ತಾಕಿದ ಭಾಗ ಸುಟ್ಟು ಬೇರೆಯೇ ವಾಸನೆ ಬರುತ್ತದೆ.

  • ಒಂದು ದೊಡ್ಡಚಮಚದಷ್ಟು ಅಕ್ಕಿಯನ್ನು ಒಂದು ಕಾವಲಿಯ ಮೇಲೆ ಇರಿಸಿ ಒಣಗಿರುವಂತೆಯೇ ಹುರಿಯಿರಿ. ನಿಜವಾದ ಅಕ್ಕಿಯಾದರೆ ಬಾಣಲಿ ತಾಕಿದ ಭಾಗ ಕಂದು ಬಣ್ಣ ತಳೆಯುತ್ತದೆ.

 

  •  ಪ್ಲಾಸ್ಟಿಕ್ ಅಕ್ಕಿಯಾದರೆ ಅಕ್ಕಿ ಕಾವಲಿಗೆ ಅಂಟಿದ ಭಾಗ ಕರಗಿ ಚಿಕ್ಕ ವೃತ್ತಾಕಾರದ ಪದರ ರೂಪುಗೊಳ್ಳುತ್ತದೆ. ಈ ಅಕ್ಕಿಯನ್ನು ಸರ್ವಥಾ ಸೇವಿಸಕೂಡದು.

  • ಒಂದು ದೊಡ್ಡಚಮಚದಷ್ಟು ಅಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕಲಕಿ. ನಿಜವಾದ ಅಕ್ಕಿ ನೀರಿನಲ್ಲಿ ಮುಳುಗುತ್ತದೆ ಹಾಗೂ ಅಡ್ಡಲಾಗಿರುತ್ತದೆ. ಪ್ಲಾಸ್ಟಿಕ್ ಅಕ್ಕಿಯಾದರೆ ನೀರಿನಲ್ಲಿ ತೇಲುತ್ತದೆ.

  • ಒಂದು ವೇಳೆ ತೇಲದೇ ಇದ್ದರೂ ಅಕ್ಕಿಯಂತೆ ತಕ್ಷಣವೇ ಮುಳುಗದೇ ತಿರುಗುತ್ತಿರುವ ನೀರಿನಲ್ಲಿ ಕೊಂಚ ಹೊತ್ತು ತಿರುಗುತ್ತಲೇ ಇರುತ್ತದೆ ಹಾಗೂ ಇನ್ನೂ ಒಂದು ವೇಳೆ ಆಳಕ್ಕಿಳಿದರೂ ಅಕ್ಕಿಯಂತೆ ಅಡ್ಡಲಾಗಿರದೇ ನೇರವಾಗಿ ನಿಲ್ಲುತ್ತದೆ.
  • ಒಂದು ಮುಷ್ಟಿಯಷ್ಟು ಅಕ್ಕಿಯನ್ನು ಕುದಿನೀರಿನಲ್ಲಿ ಹಾಕಿ ಅನ್ನ ಮಾಡಿ. ಕೊಂಚ ಹೊತ್ತಿನ ಬಳಿಕ ಪಾತ್ರೆಯಲ್ಲಿರುವ ನೀರಿನ ಮೇಲ್ಪದರವನ್ನು ಗಮನಿಸಿ.
  • ಇಲ್ಲಿ ದಪ್ಪನೆಯ ಬಿಳಿಯಾದ ಪದರವೊಂದು ರೂಪುಗೊಳ್ಳುತ್ತಿರುತ್ತದೆ. ಇದು ಪ್ಲಾಸ್ಟಿಕ್ ಕರಗಿ ಗಾಳಿಗೆ ಗಟ್ಟಿಯಾದ ಪದರವಾಗಿದೆ.
  •  ಕೆಲವು ಪ್ಲಾಸ್ಟಿಕ್ ಅಕ್ಕಿ ಮೇಲಿನ ಯಾವುದೇ ವಿಧಾನಕ್ಕೆ ತನ್ನ ಗುಟ್ಟು ಬಿಟ್ಟುಕೊಡುವುದಿಲ್ಲ. ಇದನ್ನು ಕಂಡುಕೊಳ್ಳಲು ಕೊಂಚ ಹೆಚ್ಚಿನ ಕಾಲಾವಕಾಶ ಬೇಕು. ಅನ್ನವನ್ನು ಬೇಯಿಸಿ ಎರಡು ದಿನಗಳ ಕಾಲ ಗಾಳಿಗೆ ತೆರೆದಿಡಿ.
  •  ನಿಜವಾದ ಅಕ್ಕಿಯಾದರೆ ಒಂದೇ ದಿನಕ್ಕೆ ಬೂಸು ಬರುತ್ತದೆ. ಎರಡನೆಯ ದಿನಕ್ಕೆ ಬೂಸು, ಶಿಲೀಂಧ್ರ ಎಲ್ಲವೂ ಬರಲೇಬೇಕು. ಆದರೆ ಪ್ಲಾಸ್ಟಿಕ್ ಅಕ್ಕಿಗೆ ಯಾವುದೇ ವಾಸನೆ ಬರುವುದಿಲ್ಲ.
  •  ಕೆಲವರು ನೀಡಿರುವ ಸಲಹೆಯ ಪ್ರಕಾರ ಒಂದು ಮುಷ್ಟಿಯಷ್ಟು ಬಿಸಿ ಅನ್ನವನ್ನು ಕೈಬೆರಳುಗಳಿಂದಲೇ ಉಂಡೆಕಟ್ಟಿ ಸತತವಾಗಿ ಒಂದು ಅಥವಾ ಎರಡು ನಿಮಿಷಗಳ ಕಾಲ ಚೆಂಡಿನ ಆಕೃತಿ ಬರಿಸಿ. ತಣ್ಣಗಾದ ಬಳಿಕ ಈ ಚೆಂಡನ್ನು ಮೇಜಿನ ಮೇಲೆ ಬಡಿಯಿರಿ.

  •  ಒಂದು ವೇಳೆ ಇದು ಪ್ಲಾಸ್ಟಿಕ್ ಅಕ್ಕಿಯಾಗಿದ್ದರೆ ಚೆಂಡಿನಂತೆಯೇ ಪುಟಿಯುತ್ತದೆ, ಒಡೆಯುವುದಿಲ್ಲ. ನಿಜವಾದ ಅಕ್ಕಿಯನ್ನು ಎಷ್ಟೇ ಉಂಡೆಗಟ್ಟಿದರೂ ಕೆಳಗೆ ಬಿದ್ದ ತಕ್ಷಣ ಒಡೆದು ಚೂರುಚೂರಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಂಬಂಧ

    ಒಂದು ಫೋಟೋಗಾಗಿ ಮದುವೆಮನೆಯಲ್ಲೇ ಕಿತ್ತಾಡಿಕೊಂಡ ವಧು ವರರು!ಆಮೇಲೆ ಏನಾಯ್ತು ಗೊತ್ತಾ???

    ಕೆಲವಾರು ಮದುವೆ ಸಮಾರಂಭಗಳಲ್ಲಿ ತಲೆದೋರುವ ನಾನಾರೀತಿಯ ಸಮಸ್ಯೆಗಳಿಂದ ವಿವಾದಗಳುಂಟಾಗಿ ಮದುವೆ ಮಂಟಪಗಳಲ್ಲಿಯೇ ವಧು, ವರರು ಮತ್ತು ಅವರ ಕಡೆಯವರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುವುದೂ ಇದೆ. ಇಂತಹುದೇ ಘಟನೆ ಇದೀಗ ರಾಜಸ್ಥಾನದಲ್ಲೂ ನಡೆದಿದೆ. ಸಪ್ತಪದಿಯ ಸಂದರ್ಭದಲ್ಲಿ ಗಂಡು ತಾನು ಮದುವೆಯಾಗವ ಮದುಮಗಳೆದುರು ಇಟ್ಟ ಬೇಡಿಕೆಯಿಂದಾಗಿ ಜಗಳವೇರ್ಪಟ್ಟಿದ್ದಲ್ಲದೇ ಮದುವೆಯೇ ಮುರಿದು ಬಿದ್ದಿದೆ.

  • ಸುದ್ದಿ

    ಕೇವಲ 48 ಸೆಕೆಂಡ್ ಗಳಲ್ಲಿ ‌ʼಗಿನ್ನಿಸ್ʼ ದಾಖಲೆ ಪಡೆದ ಮುಂಬೈಕರ್

    ಈಜುಕೊಳಗಳ ರೂಬಿಕ್ ಕ್ಯೂಬ್ ಗಳಲ್ಲಿ ಕಂಡು ಬರುವ ಸಮಸ್ಯೆಯನ್ನು ಬರೀ 48 ಸೆಕೆಂಡ್ ಗಳಲ್ಲಿ ಪರಿಹಾರ ಹುಡುಕಿದ ಮುಂಬೈಕರ್ ಒಬ್ಬರು ಗಿನ್ನಿಸ್ ದಾಖಲೆ ಬರೆದಿದ್ದಾನೆ. ಮುಂಬೈನ 19 ವರ್ಷದ ಚಿನ್ಮಯಿ ಪ್ರಭು, ಈಜುಕೊಳದ ನೀರಿನ ಒಳಗಡೆ ಕೂತು 9 ರೂಬಿಕ್ ಕ್ಯೂಬ್ ಸಮಸ್ಯೆ ಗಳನ್ನು ಬರೀ 48 ಸೆಕೆಂಡ್ ಗಳಲ್ಲಿ ಬಗೆಹರಿಸಿರೋದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಪಿರಮಿಡ್ ಮಾದರಿಯಲ್ಲಿರುವ ರೂಬಿಕ್ ಕ್ಯೂಬ್ ಗಳಲ್ಲಿ ಸಮಸ್ಯೆಗಳು ಕಾಣಿಸಿಕೊಂಡ್ರೆ ಒಂದೆರಡು ದಿನ ಸಮಯ ಬೇಕಾಗುತ್ತದೆ. ಈ ಹಿಂದೆ ಜಾರ್ಜಿಯಾದಲ್ಲಿ 18…

  • ಸಿನಿಮಾ

    (Video)ಕೇವಲ ಒಂದೇ ಗಂಟೆಯಲ್ಲಿ ಯೂಟ್ಯೂಬ್ ನಲ್ಲಿ ಚಿಂದಿಯಾಗಿದೆ ನಟ ಸಾರ್ವಭೌಮ ಚಿತ್ರದ ಟ್ರೈಲರ್!

    ನಟ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ನಟ ಸಾರ್ವಭೌಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರ ಅಪ್ಪು ಅಭಿಮಾನಿಗಳ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ. ಚಿತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ನಟಿ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಹಿರಿಯ ನಟಿ ಬಿ ಸರೋಜಾದೇವಿ, ಅಚ್ಯುತ್, ರವಿಶಂಕರ್ ಅವರು ಪೋಷಕ ಪಾತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಹಾಸ್ಯ ನಟ ಚಿಕ್ಕಣ್ಣ ಅವರ ಪಾತ್ರವೂ ವಿಶೇಷವಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಚಿತ್ರದ ಟ್ರೈಲರ್…

  • ಸಂಬಂಧ

    ಲಿವ್ ಇನ್ ರಿಲೇಶನ್ಶಿಪ್’ನಲ್ಲಿದ್ದ ತಂದೆ ತಾಯಿಗೆ ಮದುವೆ ಮಾಡಿಸಿದ ಮಕ್ಕಳು ಮತ್ತು ಮೊಮ್ಮಕ್ಕಳು!ಶಾಕ್ ಆಗ್ತೀರಾ, ಈ ಲೇಖನಿ ಓದಿ…..

    ನಮ್ಮ ಭಾರತದಲ್ಲಿ ಲಿವ್ ಇನ್ ರಿಲೇಷನ್ಶಿಪ್ ಈ ಮಾತು ಕೇಳಿದರೆ ಜನರು ಪ್ರತಿಕ್ರಿಯಿಸುವ ರೀತಿ ಬೇರೆಯೇ ಇರುತ್ತದೆ. ಯಾಕೆಂದರೆ ಇದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ. ಈ ಸಂಸ್ಕೃತಿ ಭಾರತದಲ್ಲಿ ತೀರಾ ಹೊಸತು.

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಈ ರಾಶಿಗಳಿಗಿದೆ ವಿಪೀತ ಧನಲಾಭ..!ಇದ್ರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(24 ನವೆಂಬರ್, 2018) ನಿಮ್ಮ ಸ್ನೇಹಿತರ ಸಹಾಯದಿಂದಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ನಿಮ್ಮ…

  • ಸಿನಿಮಾ

    ಬಿಗ್ ಬಾಸ್ ಸಂಚಿಕೆ-5ರಲ್ಲಿ ನೀವೂ ಸಹ ಸ್ಪರ್ಧಿಸಬಹುದು!ಹೇಗಂತೀರಾ?ಈ ಲೇಖನಿ ಓದಿ….

    ಕನ್ನಡದ ಖಾಸಗಿ ಚಾನಲ್ ನಡೆಸುವ, ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಈಗಾಗಲೇ ತುಂಬಾ ಜನಪ್ರಿಯವಾಗಿದೆ. ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಲ್ಲಿಯವರಿಗೂ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡ ಸೆಲೆಬ್ರೆಟಿಗಳಿಗೆ ಮಾತ್ರ ಭಾಗವಹಿಸುವುದಕ್ಕೆ ಅವಕಾಶವಿತ್ತು.