ಆಧ್ಯಾತ್ಮ

ಹಿಂದೂ ಧರ್ಮದಲ್ಲಿ ಯಾರಾದ್ರು ಸತ್ತಾಗ ಕೇಶ ಮುಂಡನ ಮಾಡುತ್ತಾರೆ, ಏಕೆ ಗೊತ್ತಾ?

3991

ನಮ್ಮ ಹಿಂದೂ ಧರ್ಮದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆ ಯಾವುದೇ ಧರ್ಮದಲ್ಲಿ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಹುಟ್ಟಿನಿಂದ ಸಾವಿನ ತನಕ ಹಿಂದೂಗಳು ಹಲವಾರು ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಹುಟ್ಟಿದ ಮಗುವಿಗೆ ನಾಮಕರಣದಿಂದ ಹಿಡಿದು ಸತ್ತ ವ್ಯಕ್ತಿಗೆ ಪಿಂಡ ಬಿಡುವ ತನಕ ಪ್ರತಿಯೊಂದು ಸಂಪ್ರದಾಯಗಳು ಹಿಂದೂಗಳಲ್ಲಿ ಇದೆ.

ಅದರಲ್ಲೂ ಮನೆಯಲ್ಲಿ ಯಾರಾದರೂ ಹಿರಿಯರು ಸಾವನ್ನಪ್ಪಿದರೆ ಕಿರಿಯರು ತಲೆಬೋಳಿಸಿಕೊಳ್ಳುವ ಸಂಪ್ರದಾಯವು ಇದೆ. ಹಿಂದಿನ ಕಾಲದಲ್ಲಿ ಪತಿ ಸಾವನ್ನಪ್ಪಿದರೆ ಪತ್ನಿಯ ತಲೆ ಬೋಳಿಸಲಾಗುತ್ತಿತ್ತು. ಆದರೆ ಆ ಕೆಟ್ಟ ಪದ್ಧತಿಯನ್ನು ಇಂದಿನ ದಿನಗಳಲ್ಲಿ ಅನುಸರಿಸಲಾಗುತ್ತಿಲ್ಲ. ತಂದೆ ಅಥವಾ ತಾಯಿ ಸಾವನ್ನಪ್ಪಿದರೆ, ಸಹೋದರ ಅಥವಾ ಸಹೋದರಿ ಸಾವನ್ನಪ್ಪಿದರೆ ಮಗ ಅಥವಾ ಅವರಿಗೆ ಸಂಬಂಧಪಟ್ಟವರು ತಲೆ ಬೋಳಿಸುವ ಪದ್ಧತಿ ಈಗಲೂ ಇದೆ. ಇದು ಯಾಕೆಂದು ತಿಳಿಯಲು ಈ ಲೇಖನವನ್ನು ಮುಂದಕ್ಕೆ ಓದುತ್ತಾ ಸಾಗಿ…

ಸಾವಿನ ಬಳಿಕ ಮುಂಡನ ಮಾಡುವುದು ಯಾಕೆ?

ಪತಿ ಸಾವಿನಿಂದ ವಿಧವೆಯಾಗುವ ಮಹಿಳೆಯ ತಲೆಯನ್ನು ಬೋಳಿಸಿ ಮುಂಡನ ನಡೆಸಲಾಗುತ್ತದೆ. ಈ ಮುಂಡನವು ಜೀವಮಾನಪೂರ್ತಿ ಉಳಿದಿರುತ್ತದೆ ಮತ್ತು ವಿಧವೆಯರು ಕೂದಲು ಬೆಳೆಸುವುದಿಲ್ಲ. ಮೇಲ್ಜಾತಿಯಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಾ ಇತ್ತು. ಆದರೆ ಇಂದಿನ ದಿನಗಳಲ್ಲಿ ಇದನ್ನು ಪಾಲಿಸುವವರ ಸಂಖ್ಯೆ ತೀರ ಕಡಿಮೆಯಾಗಿದೆ. ಮನೆಯಲ್ಲಿ ಹಿರಿಯರು ಸಾವನ್ನಪ್ಪಿದಾಗ ಪುರುಷರು ತಲೆ ಬೋಳಿಸಿಕೊಳ್ಳುತ್ತಾರೆ. ಇದು ತಾತ್ಕಾಲಿಕವಾಗಿರುತ್ತದೆ ಮತ್ತು ಕೆಲವೇ ಸಮಯದಲ್ಲಿ ಕೂದಲು ಬೆಳೆಯುತ್ತದೆ.

ಶೋಕದ ಸಂಕೇತ

ಕುಟುಂಬದಲ್ಲಿ ದುಃಖದ ಘಟನೆ ನಡೆದಿದೆ ಮತ್ತು ನಾವು ಶೋಕದಲ್ಲಿ ಇದ್ದೇವೆ ಎನ್ನುವುದನ್ನು ಸೂಚಿಸಲು ಮುಂಡನ ಮಾಡಲಾಗುತ್ತದೆ. ಪರಿಚಯಸ್ಥರು ಶೋಕದಲ್ಲಿರುವ ವ್ಯಕ್ತಿಯೊಂದಿಗೆ ತುಂಬಾ ಎಚ್ಚರಿಕೆಯಿಂದ ವರ್ತಿಸಬೇಕು ಎನ್ನುವುದು ಮುಂಡನದ ಉದ್ದೇಶವಾಗಿದೆ.

ಪ್ರತೀಕಾರದ ಸಿದ್ಧಾಂತ ಬಿಡುವುದು

ಕೂದಲು ಪ್ರತೀಕಾರದ ಸಿದ್ಧಾಂತವನ್ನು ತ್ಯಜಿಸುವುದರ ಸಂಕೇತವಾಗಿದೆ. ತಾತ್ಸಾರ ಭಾವನೆಯನ್ನು ಬಿಟ್ಟು ಸತ್ತವರು ಬಿಟ್ಟು ಹೋಗಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದೇ ಮುಂಡನದ ಉದ್ದೇಶವಾಗಿದೆ.

ಧನಾತ್ಮಕ ಶಕ್ತಿ

ದುಃಖದಿಂದ ಯಾವಾಗಲೂ ನಕಾರಾತ್ಮಕತೆ ಆವರಿಸುತ್ತದೆ. ಕೂದಲು ಬೋಳಿಸಿಕೊಂಡು ಹೊಸ ಜೀವನಕ್ಕೆ ತಯಾರಾಗುವುದು, ಅಂತಿಮ ಕ್ರಿಯೆಗಳಿಗೆ ಧನಾತ್ಮಕವಾಗಿ ತಯಾರಾಗುವುದು ಮತ್ತು ಬದ್ಧತೆ ಹಾಗೂ ಏಕಾಗ್ರತೆಯಿಂದ ಇದನ್ನು ಪೂರೈಸುವುದು ಮುಂಡನದ ಉದ್ದೇಶವಾಗಿದೆ.

ಬೇರ್ಪಡುವಿಕೆ ಮತ್ತು ವೈರಾಗ್ಯ ಹೆಚ್ಚಿಸುವುದು

ತುಂಬಾ ಪ್ರೀತಿಪಾತ್ರರು ಮತ್ತು ಮನಸ್ಸಿಗೆ ಹತ್ತಿರವಾಗಿರುವವರು ಸಾವನ್ನಪ್ಪಿದರೆ ಆಗ ಭಾವನಾತ್ಮಕವಾಗಿ ಪರಿಣಾಮ ಉಂಟಾಗುತ್ತದೆ. ಇದುವರೆಗೆ ಹಿರಿಯರಿಂದ ಸಿಗುತ್ತಿದ್ದ ಮಾರ್ಗದರ್ಶನ ಮತ್ತು ಸಲಹೆಗಳು ಇನ್ನು ಸಿಗುವುದಿಲ್ಲವೆನ್ನುವ ನೋವು ಇರುತ್ತದೆ. ವೈರಾಗ್ಯವನ್ನು ಬಿಟ್ಟು ಜೀವನಕ್ಕೆ ತಯಾರಾಗಬೇಕು ಎನ್ನುವುದು ಮುಂಡನದ ಉದ್ದೇಶವಾಗಿದೆ.

ಶುದ್ಧೀಕರಣ ವೃತ

ಹಿರಿಯರು ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ಮತ್ತು ಇತರ ವಿಧಿವಿಧಾನಗಳನ್ನು ಮಾಡುವವರು ತಲೆ ಬೋಳಿಸಿಕೊಳ್ಳುತ್ತಾರೆ. ಇದು ಶುದ್ಧೀಕರಣ ವ್ರತವಾಗಿದೆ. ಇದು ದೈಹಿಕ ಹಾಗೂ ಮಾನಸಿಕವಾಗಿ ಸತ್ತವರಿಗೆ ಮಾಡುವ ಅಂತಿಮ ವೃತವಾಗಿದೆ.

ಅಹಂ ತ್ಯಜಿಸುವುದು

ಮನೆಯಲ್ಲಿನ ಪುರುಷರು ತಲೆಬೋಳಿಸಿಕೊಳ್ಳುವುದು ಅವರು ತಮ್ಮ ಅಹಂ ಬಿಟ್ಟ ಸಂಕೇತವಾಗಿದೆ. ಮನೆಯಲ್ಲಿ ಹಿರಿಯರು ಸಾವನ್ನಪ್ಪಿದಾಗ ಅವರಿಂದ ಬಿಡುವಾದ ಜಾಗವನ್ನು ತುಂಬುವಾಗ ವ್ಯಕ್ತಿಯಲ್ಲಿ ಅಹಂ ಬರಬಹುದು ಮತ್ತು ಇದನ್ನು ಬಿಟ್ಟು ಮನೆಯವರೊಂದಿಗೆ ಒಳ್ಳೆಯ ರೀತಿಯಿಂದ ನಡೆದುಕೊಳ್ಳಬೇಕೆನ್ನುವ ಸಂಕೇತವೇ ಈ ಮುಂಡನ

ಗೌರವದ ಸಂಕೇತ

ಸತ್ತವರಿಗೆ ಗೌರವ ಸೂಚಕವಾಗಿಯೂ ಮುಂಡನ ಮಾಡಲಾಗುತ್ತದೆ. ಹಲವಾರು ವರ್ಷಗಳಿಂದ ಕುಟುಂಬದಲ್ಲಿ ಪ್ರೀತಿಯಿಂದ ಇದ್ದು, ಕಿರಿಯರಿಗೆ ಮಾರ್ಗದರ್ಶನ ನೀಡಿ ಮುಂದಿನ ಜೀವನಕ್ಕೆ ಬೇಕಾಗುವ ದಾರಿಯನ್ನು ಮಾಡಿರುವ ಹಿರಿಯರು ಸಾವನ್ನಪ್ಪಿದಾಗ ಅವರಿಗೆ ಗೌರವ ಸೂಚಕವಾಗಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವ ಉದ್ದೇಶದಿಂದ ಮುಂಡನ ಮಾಡಲಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Sports

    2ನೇ ಟೆಸ್ಟ್ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

    2ನೇ ಟೆಸ್ಟ್ ಪಂದ್ಯ  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಕೆಎಲ್ ರಾಹುಲ್ ಈ ಪಂದ್ಯಕ್ಕೆ ನಾಯಕ.  ಬೆನ್ನುನೋವಿನ ಸೆಳೆತದಿಂದ ವಿರಾಟ್ ಕೊಹ್ಲಿ ಅಲಭ್ಯ,ಹನುಮ ವಿಹಾರಿ ಕಣಕ್ಕೆ ಅಂತಿಮ 11ರ ಬಳಗ  ಭಾರತ ಮಾಯಾಂಕ್ ಅಗರ್ವಾಲ್ ಕೆ ಎಲ್ ರಾಹುಲ್(ನಾಯಕ) ಚೇತೇಶ್ವರ ಪೂಜಾರಾ ಅಜಿಂಕ್ಯ ರಹಾನೆ ಹನುಮ ವಿಹಾರಿ ರಿಷಭ್ ಪಂತ್ (ವಿ.ಕೀ) ರವಿಚಂದ್ರನ್ ಅಶ್ವಿನ್ ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ಡೀನ್ ಎಲ್ಗರ್(ನಾಯಕ) ಐಡೆನ್…

    Loading

  • ಸುದ್ದಿ

    ಎಂದಿನಂತೆ ಮರಳಿ ಬಂದ ಫೇಸ್ಬುಕ್ ಮತ್ತು ವಾಟ್ಸಪ್….! ತೊಂದರೆಯಾಗಿದ್ದಕ್ಕೆ ಕ್ಷಮೆ ಯಾಚನೆ…

    ವಿಶ್ವದೆಲ್ಲೆಡೆ ಡೌನ್ ಆಗಿದ್ದ ಫೇಸ್‍ಬುಕ್, ವಾಟ್ಸಪ್, ಇನ್‍ಸ್ಟಾಗ್ರಾಮ್ ಮತ್ತೆ ಎಂದಿನಂತೆ ಕೆಲಸ ಮಾಡುತ್ತಿವೆ. ಈ ಬಗ್ಗೆ ಫೇಸ್‍ಬುಕ್ ಇಂದು ಬೆಳಗ್ಗೆ ಸ್ಪಷ್ಟನೆ ನೀಡಿ, ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗಿತ್ತು. ಈಗ ಈ ಸಮಸ್ಯೆ ಬಗೆಹರಿದಿದ್ದು ನಾವು ಮರಳಿ ಬಂದಿದ್ದೇವೆ. ಈ ತೊಂದರೆ ಆಗಿದ್ದಕ್ಕೆ ಕ್ಷಮೆ ಕೇಳುತ್ತೇವೆ ಎಂದು ಟ್ವೀಟ್ ಮಾಡಿದೆ. ನಮ್ಮ ಕೆಲ ಬಳಕೆದಾರರಿಗೆ ಫೋಟೋ, ವಿಡಿಯೋ ಅಪ್ಲೋಡ್ ಮತ್ತು ಕಳುಹಿಸಲು ಕಷ್ಟವಾಗುತ್ತಿದೆ ಎನ್ನುವ ವಿಚಾರ ನಮ್ಮ ಗಮನಕ್ಕೆ ಬಂದಿದೆ….

  • ಸುದ್ದಿ

    ಶಾಕಿಂಗ್ ನ್ಯೂಸ್ ಪೀಣ್ಯದ 10 ಸಾವಿರ ಕೈಗಾರಿಕೆಗಳು ಕ್ಲೋಸ್, 15 ಲಕ್ಷ ಕಾರ್ಮಿಕರು ಬೀದಿಗೆ,..ಇದಕ್ಕೆ ಕಾರಣವಾದರು ಏನು..?

    ಬೆಂಗಳೂರು: ಸಿಲಿಕಾನ್ ಸಿಟಿ ಉದ್ಯೋಗಿಗಳಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಏಷ್ಯಾದಲ್ಲೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಎಂದು ಪ್ರಸಿದ್ಧಿ ಪಡೆದಿದ್ದ ಪೀಣ್ಯ ಕೈಗಾರಿಕಾ ಪ್ರದೇಶದ 10 ಸಾವಿರ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, 15 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುವ ಸಾಧ್ಯತೆಯಿದೆ. ಮಾಹಿತಿ ತಂತ್ರಜ್ಞಾನ ಆಗಮಿಸದ 80,90ರ ದಶಕದಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲದೆ, ದೇಶದ ವಿವಿಧ ಭಾಗಗಳಿಂದ ಉದ್ಯೋಗ ಆರಿಸಿ ಬೆಂಗಳೂರಿಗೆ ಬರುತ್ತಿದ್ದರು. ಅವರೆಲ್ಲರಿಗೂ ಪೀಣ್ಯ ಕೈಗಾರಿಕಾ ಪ್ರದೇಶ ಆಸರೆಯಾಗಿತ್ತು. ಆರ್ಥಿಕ ಹಿಂಜರಿತದ ಎಫೆಕ್ಟ್​…

  • ಆರೋಗ್ಯ, ಉಪಯುಕ್ತ ಮಾಹಿತಿ

    ಕರಿದ ಎಣ್ಣೆಯನ್ನ ಪದೇ ಪದೇ ಉಪಯೋಗಿಸಿದ್ದಲ್ಲಿ ಈ ಭಯಂಕರ ಖಾಯಿಲೆ ಗ್ಯಾರಂಟಿ..!

    ಈಗಂತೂ ಮನೆಯಲ್ಲಿ ಮಾಡಿದ ಅಡುಗೆಗಿಂತ ಹೊರಗಡೆ ಸಿಗುವ ಫಾಸ್ಟ್ ಫುಡ್, ಸ್ನಾಕ್ಸ್ ಗಳನ್ನು ತಿನ್ನುವುದೇ ಹೆಚ್ಚು.ಅದರಲ್ಲೂ ಹೊರಗಡೆ ಸಿಗುವ ಕಬಾಬ್​​, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ ಆಯ್ಕೆ ಮಾಡಿಕೊಳ್ತೇವೆ. ಹೊಟೇಲ್ ಇರಲಿ, ಮನೆಯಿರಲಿ, ಒಮ್ಮೆ ಕರಿದ ಎಣ್ಣೆಯನ್ನು ಎತ್ತಿಟ್ಟು ಮತ್ತೊಮ್ಮೆ ಅಡುಗೆಗೆ ಬಳಸ್ತೇವೆ. ಮನೆಯಲ್ಲಿ ನಾಲ್ಕೈದು ಬಾರಿ ಬಳಸಿದ್ರೆ ಹೊಟೇಲ್ ನಲ್ಲಿ ಅದೆಷ್ಟು ಬಾರಿ ಒಂದೇ…

  • ಉದ್ಯೋಗ

    ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ನೀಡುತ್ತಿರುವ ಹೊಸ ಜಾಬ್ ಆಫರ್ ಏನು ಗೊತ್ತಾ? ಓದಿದರೆ ಶಾಕ್ ಗ್ಯಾರಂಟಿ!!!

    ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ನೀಡುತ್ತಿರುವ ಹೊಸ ಆಫರ್ ಏನು ಗೊತ್ತಾ ! ನೀವು ಕೆಲಸ ತೊರೆಯಿರಿ ಅಥವಾ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರನ್ನು ಮನೆಗೆ ಕಳುಹಿಸಬೇಕೋ ಅವರ ಹೆಸರನ್ನು ರೆಫರ್ ಮಾಡಿ.

  • ಸುದ್ದಿ

    ಸೋಲಿನಿಂದ ಬೇಸರಗೊಂಡಿರುವ ಮೊಮ್ಮಗನಿಗೆ ರಾಜಕೀಯ ಪಾಠ ಹೇಳಿಕೊಟ್ಟ ತಾತ:ದೇವೇಗೌಡರು…..!

    ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ನಿಖಿಲ್ ಗೆ ರಾಜನೀತಿಯ ಪಾಠ ಮಾಡಿದ್ದಾರೆ. ಸೋಲನ್ನ ಹೇಗೆ ಎದುರಿಸಬೇಕು, ಸೋಲಿನಿಂದ ಗೆಲುವಿನ ಕಡೆಗೆ ನಡೆದು ಹೋಗುವುದು ಹೇಗೆ ಎಂಬುದರ ಕುರಿತು ಪಾಠ ಮಾಡಿದ್ದಾರೆ.ಸೋಲಿನಿಂದ ಬೇಸರವಾಗಿದ್ದ ನಿಖಿಲ್ ಅವರನ್ನ ಪದ್ಮನಾಭ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ದೇವೇಗೌಡರು ರಾಜನೀತಿ ಬೋಧಿಸಿದ್ದಾರೆ. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ. ಎರಡನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬೇಕು ಎಂದು ತಮ್ಮ ಮೊಮ್ಮಗನಿಗೆ ರಾಜಪಾಠ ಬೋಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚುನಾವಣೆ ಅಂದಮೇಲೆ ಸೋಲು-ಗೆಲುವು ಎಲ್ಲವೂ ಸಹಜ. ಅದನ್ನ…