ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆರ್ಯಭಟ್ಟ ಕ್ರಿಶ 499 ರಲ್ಲಿ “ಸೊನ್ನೆ” (0)ಕಂಡುಹಿಡಿದ ? ನಂತರ ಬಂದ ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ? ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?
ಕ್ರಿಪೂ ಮೂರನೇ ಶತಮಾನದಲ್ಲಿ ಅಂದರೆ 800 ವರ್ಷ ಮೊದಲೇ ಪುಣೆ ಮತ್ತು ಉತ್ತರ ಪ್ರದೇಶದ ಗುಹೆಗಳಲ್ಲಿ ಸೊನ್ನೆ(ಝೀರೋ) ಕಂಡು ಬಂದಿದೆ.
ಇದಕ್ಕೂ ತುಂಬಾ ಮೊದಲು ಅಂದರೆ ಕ್ರಿಪೂ 2000 ರಲ್ಲಿ ಸುಮೇರಿಯನ್ನರು ಮತ್ತು ಬ್ಯಾಬಿಲೋನ್ ನವರೂ ಝೀರೊ ತರ ಉಪಯೋಗಿಸಿದ್ದಾರೆ.
ಆದರೆ ಅದೊಂದು ಅಂಕಿ ಅಂತ ಆಗಿರಲಿಲ್ಲ. ಖಾಲಿ ಜಾಗ ಬಿಡುತ್ತಿದ್ದರು. ಇದರಿಂದ ಗೊಂದಲ ಉಂಟಾಗುತ್ತಿತ್ತು. ಇವರಿಗೆ ಎಡದ ಅಂಕಿ ದೊಡ್ಡದು ಬಲದ ಅಂಕಿ ಚಿಕ್ಕದು ಅಂತ ಪೊಸೀಶನ್ ಸಿಸ್ಟಮ್ ಕೂಡ ಗೊತ್ತಿತ್ತು.
ಆರ್ಯಭಟ ದೊಡ್ಡ ನಂಬರ ಗಳ ಶಾರ್ಟ್ ಫಾರ್ಮ ಕಂಡು ಹಿಡಿದಿದ್ದ. ಉದಾಹರಣೆ ಗೆ – ಕ್ಯೂಘ್ರ ಅಂದರೆ 4,320,000 ಇದು ಜನಪ್ರಿಯ ಆಗಲಿಲ್ಲ.
ಬ್ರಹ್ಮ ಗುಪ್ತ ನ ನಂತರ ಅರಬ್ ಜನ ನಮ್ಮ ಪುಸ್ತಕ ಗಳನ್ನು ಭಾಷಾಂತರ ಮಾಡಿದರು. ನಮ್ಮ ನಂಬರಗಳನ್ನು ಮತ್ತು ಝೀರೋ ಕಾಪಿ ಮಾಡಿದರು. ನಮಗೆ ಗೌರವ ಕೊಡುವುದಕ್ಕಾಗಿ ಅಲ್ಲಿನ ಪಂಡಿತರು ಇದಕ್ಕೆ – ರಕಮ್ ಅಲ್ ಹಿಂದ್ ಅಂತ ಹೆಸರಿಟ್ಟರು. ಇದನ್ನು ಓದಿದಾಗ ನನಗೆ ಅನ್ನಿಸಿದ್ದು ಹಿಂದ್ ಶಬ್ದ ಆಗಿನಿಂದಲೇ ಇದೆ ಅಂತ.
ಮುಂದೆ ಅರಬ್ ರಿಂದ ಈ ಪದ್ಧತಿ ಎಲ್ಲಾ ಕಡೆಗಳಲ್ಲಿ ಹೋಗಿ ಈಗಿನ ನಂಬರ ಪದ್ದತಿ ಗೆ ಹಿಂದೂ ಅರಬ್ ಪದ್ಧತಿ ಅಂತಲೇ ಕರೆಯುತ್ತಾರೆ.
ನಂಬರ ಲೆಕ್ಕ ಮಾಡುವುದು ಅಂದರೆ ಒಂದು ಎರಡು ಮೂರು ಮಾನವ ಗುಹಾ ವಾಸಿ ಆಗಿದ್ದಾಗಲೇ ಇರುವುದರಿಂದ ಇವನ್ನು ಭಾರತೀಯರೇ ಕಂಡು ಹಿಡಿದರು ಅಂತ ಹೇಳಲಾಗುತ್ತಿಲ್ಲ. ಆದರೂ ಈಗಿನ ನಂಬರ ಪದ್ಧತಿ ಕಂಡು ಹಿಡಿದದ್ದು ಭಾರತವೇ. ಕೇವಲ ಝೀರೋ ಮಾತ್ರ ಅಲ್ಲ. ಒಂದರಿಂದ ಒಂಬತ್ತು ಹೀಗಿತ್ತು ಭಾರತ ಇಲ್ಲವಾದರೆ ಜಗತ್ತಿನ ಆಟವು ಮುಗಿದಿತ್ತು .
ಅನ್ನಲೂ ಬಹುದು. ಇದರ ಮೊದಲು 1000 ಅಂತ ಬರೆಯಲು ಓದಲು ಸುಮಾರು 1000 ಗೆರೆ ಹಾಕುತ್ತಾ ಕೂರುವ ಸ್ಥಿತಿ ಜಗತ್ತಿನ ಕೆಲವು ಕಡೆ ಇತ್ತು. ಹಾಗಂತ ಮಾಯನ್ನರೂ ಕೂಡ ತಮ್ಮದೇ ಆದ ಝೀರೋ ತರದ್ದೇ ಸ್ವಂತವಾಗಿ ಕಂಡುಹಿಡಿದಿದ್ದಾರೆ. ಆದರೆ ಎಡದ ಅಂಕಿ ದೊಡ್ಡದು, ಬಲದ ಅಂಕಿ ಚಿಕ್ಕದು ಅಂತ ಪೊಸಿಶನ್ ಸಿಸ್ಟಮ್ ಗೆ ಹೆಚ್ಚಾಗಿ ಭಾರತವೇ ಮೂಲ. ಅವರೆಲ್ಲರೂ ಕಲ್ಲಿನಲ್ಲಿ ಕೊರೆದು, ನಾವು ತಾಳೆ ಗ್ರಂಥಗಳು ಉಪಯೋಗಿಸಿದ್ದರಿಂದ ಅಧಿಕೃತ ದಾಖಲೆಗಳು ಸಿಗುತ್ತಿಲ್ಲ.
ಎಲ್ಲರಿಗೂ ಮೊದಲು ವೇದ ಕಾಲದಲ್ಲಿ ಒಂದು ಕಲ್ಪ ಅಂದರೆ 4,320,000,000 ವರ್ಷ ಗಳು .
ಸೌರವ್ಯೂಹ ದ ಉದ್ದ 1,871,206,920,000,000 ಯೋಜನಗಳು ಅಂತ ಹೇಳಿದ್ದಾರೆ. ಝೀರೋ ಬಂದಿದ್ದು ಒಂದೂವರೆ ಸಾವಿರ ವರ್ಷದ ಹಿಂದೆ ಅಂದರೆ ವೇದ ಕಾಲದಲ್ಲಿ ಈ ನಂಬರ ಕಲ್ಪಿಸಲು ಸಾಧ್ಯ ಇತ್ತೇ ?
ವೇದ ಕಾಲದಲ್ಲಿ” ದಶ, ಶತ, ಸಹಸ್ರ, ಆಯತ, ನಿಯತ, ಪ್ರಯತ, ಅರ್ಬುದ, ನಿರ್ಬುದ, ಸಮುದ್ರ, ಮಧ್ಯ, ಅಂತ, ಪರಾರ್ಥ ” ಹೀಗೆ ಲೆಕ್ಕ ಮಾಡುತ್ತಿದ್ದರಂತೆ. 2 ಆಯತ 6 ಸಹಸ್ರ 4 ಶತ 3 ದಶ 2 = 26432 ಈ ತರ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸತತ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ತರುವಂತೆ ಮಾಡಿದೆ. ಅಕ್ಟೋಬರ್ ಆರಂಭದಿಂದಲೇ ನಿರಂತರವಾಗಿ ಚಿನ್ನದ ದರ ಇಳಿಕೆಯಾಗುತ್ತಿರುವ ಬಗ್ಗೆ ಎಲ್ಲರಿಗು ಗೊತ್ತು ಆದರೆ ಇಂದು ಮತ್ತಷ್ಟು ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಒಟ್ಟು ಶೇ.0.23ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ 10ಗ್ರಾಂ ಚಿನ್ನಕ್ಕೆ38,072 ರೂ. ಆಗಿದೆ. ಅದರಂತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಖರೀದಿಯ ಭರಾಟೆ ಜೋರಾಗಿದೆ. ಬೆಳ್ಳಿ ದರದಲ್ಲಿ ಒಟ್ಟು ಶೇ.0.34ರಷ್ಟು…
ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎಂದು ಕರೆಯಲ್ಪಡುವ ಆಶಾಢ ಮಾಸದ ಹುಣ್ಣಿಮೆಯೊಂದಿಗೆ ದಕ್ಷಿಣಾಯಣ ಪ್ರಾರಂಭವಾಗುತ್ತದೆ. ಆಶಾಢ ತಿಂಗಳ ಶುಕ್ಲ ಹುಣ್ಣಿಮೆಯನ್ನು ಗುರುಗಳಿಗೆ ಗೌರವ ರೂಪದಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಗುರು ಪೂರ್ಣಿಮಾ ಜುಲೈ 16 ರಂದು ಅಂದರೆ ಮಂಗಳವಾರ ಬಂದಿದೆ. ಗುರುವನ್ನು ಯಾವಾಗಲೂ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂದು ಪರಿಗಣಿಸಲಾಗುತ್ತದೆ. ಈ ಹಬ್ಬವನ್ನು ವೇದ ಮಹರ್ಷಿಗೆ ಅರ್ಪಿಸಲಾಗುತ್ತದೆ. ವೇದ, ಉಪನಿಷತ್ತು ಮತ್ತು ಪುರಾಣಗಳನ್ನು ಪಠಿಸುವ ವೇದ ವ್ಯಾಸ್ ಜಿ ಅವರನ್ನು ಮಾನವಕುಲದ ಮೂಲ ಗುರು…
ರೈತರ ಸಾಲಮನ್ನಾ ಮಾಡುವ ಬದಲು ಅವರು ಬೆಳೆದ ಬೆಲೆಗೆ ಸೂಕ್ತ ಬೆಲೆ ನೀಡಲಿ ಸಾಕು, ಸಾಲವನ್ನು ರೈತರೇ ತೀರಿಸುತ್ತಾರೆ’ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇಂದು ನಗರದ ಬಿಐಟಿ ಕಾಲೇಜಿನಲ್ಲಿ ನಡೆದ ಜೈ ಜವಾನ್ ಜೈ ಕಿಸಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದರ್ಶನ್, ಸರ್ಕಾರ ರೈತರ ಸಾಲ ಮನ್ನಾ ಮಾಡುವುದು ಬೇಡ. ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಕೊಟ್ರೆ ಸಾಕು. ರೈತರೇ ಸಾಲ…
ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಕಾರಣ ಋತುಸ್ರಾವದ ನೋವಿಗೆ ಇದು ಉಪಶಮನ. ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್ಗಳು ದೇಹಕ್ಕೆ ಆರಾಮ ಕೊಡುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ಪೋಲೆಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮ. ಬೆಲ್ಲದಲ್ಲಿ ಮೆಗ್ನೀ ಷಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16…
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2018ನೇ ಸಾಲಿನ ಬಜೆಟ್’ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.ಅಬಕಾರಿ ಸುಂಕದ ಏರಿಕೆಯ ಕಾರಂ ಈ ಬಜೆಟ್’ನಲ್ಲಿ ಆಮದುಗೊಂಡಿರುವ ಉತ್ಪನ್ನಗಳ ಮೇಲೆ ಬೆಲೆ ಏರಿಕೆಯಾಗಲಿದ್ದು, ಮತ್ತಷ್ಟು ಹಲವು ಉತ್ಪನ್ನಗಳ ಮೇಲಿನ ಬೆಲೆ ಇಳಿಕೆಯಾಗಲಿದೆ.
ಪ್ರತಿಯೊಬ್ಬ ಮಹಿಳೆಯು ತಾನು ಸುಂದರವಾಗಿ ಕಾಣಲು ಬಯಸುವುದು ಸಹಜ. ತತ್ವಚೆಗೆ ಹೆಚ್ಚಿನ ಅರಿಕೆಯನ್ನ ಮಾಡುತ್ತಾರೆ. ಆದರೆ ಮುಖದ ಅಂದವನ್ನ ಮುಖದ ಮೇಲಿನ ಬೇಡವಾದ ಕೂದಲುಗಳು ಹಾಳುಮಾಡುತ್ತವೆ. ಇಂತಹ ಬೇಡವಾದ ಕೂದಲುಗಳನ್ನ ತೆಗೆಯಲು ಹಲವು ಬಗೆಯ ಪ್ರಯತ್ನಗಳನ್ನ ಮಾಡುತ್ತಾರೆ. ಆದರೆ ಇದಕ್ಕೆ ಮನೆಯಲ್ಲೇ ಪರಿಹಾರವಿದೆ ಎಂಬುದನ್ನ ಮರೆತಿರುತ್ತಾರೆ. ನಿಮ್ಮ ಮುಖದಲ್ಲಿನ ಬೇಡವಾದ ಕೂದಲನ್ನ ನಿವಾರಿಸಲು ಇಲ್ಲಿದೆ ನೋಡಿ ಸುಲಭ ಉಪಾಯ… * ಎರಡು ಚಮಚ ಸಕ್ಕರೆ ಮತ್ತು ಒಂದು ಚಮಚ ಲಿಂಬೆರಸ. ಸಕ್ಕರೆಯನ್ನು ಸಂಪೂರ್ಣವಾಗಿ ಲೀನವಾಗದಂತೆ ಕದಡಿ. ದೊರಗಾದ…