ದೇವರು-ಧರ್ಮ

ಶಿವರಾತ್ರಿಯಂದು ಶಿವ ಲಿಂಗವನ್ನು ಹೇಗೆ ಪೂಜಿಸಬೇಕು..?ಹೇಗೆ ಪೂಜಿಸಬಾರದು..?ತಿಳಿಯಲು ಈ ಲೇಖನ ಓದಿ…

1736

ನೀವು ಯಾವುದೇ ದೇವರ ಪೂಜೆಯನ್ನುಮಾಡಿ, ಆದ್ರೆ ಪೂಜೆಯನ್ನುಮಾಡಿ ಮಾಡುವಾಗ ಪ್ರಮುಖವಾಗಿ ನೆನಪಿಟ್ಟುಕೊಳ್ಳಲೇಬೇಕಾದ ಅಂಶಗಳು ನಂಬಿಕೆ ಹಾಗೂ ಶ್ರದ್ಧೆ.ಇವೆರಡು ಅಂಶಗಳು ಮನಸ್ಸಿನಲ್ಲಿಲ್ಲದಿದ್ದರೆ ಮಾಡುವ ಪೂಜಾವಿಧಾನಗಳು ವ್ಯರ್ಥವೆನಿಸುತ್ತವೆ…

ಭಾಗವಾನ್ ಶಿವ ಲಿಂಗವನ್ನು ಪೂಜಿಸಲು ಹಲವು ಕ್ರಮಗಳಿವೆ…ಹೇಗೆಂದರೆ ಹಾಗೆ ಪೂಜಿಸುವಂತಿಲ್ಲ…ಹಾಗಾದ್ರೆ ಹೇಗೆ ಪೂಜಿಸಬೇಕು,ಹೇಗೆ ಪೂಜಿಸಬಾರದು ಮುಂದೆ ನೋಡಿ ತಿಳಿಯಿರಿ…

*ಲಿಂಗವನ್ನು ಬಿಲ್ವಪತ್ರೆಯಿಂದ ಪೂಜಿಸಿ..ತುಳಸಿಯಿಂದಲ್ಲ.

*ಶಿವಲಿಂಗಕ್ಕೆ ಹಾಲಿನ ಅಭಿಷೇಕವನ್ನು ಹಾಲಿನ ಪ್ಯಾಕೇಟ್ ನಿಂದಲೇ ಮಾಡಬೇಡಿ..ಹಾಲನ್ನು ಪಾತ್ರೆಯಲ್ಲಿ ಹಾಕಿಕೊಂಡು, ಅಭಿಷೇಕ ಮಾಡಿ.

*ತೆಂಗಿನಕಾಯಿಯನ್ನು ನೈವೇದ್ಯಕ್ಕೆ ಬಳಸಬಹುದು..ಆದರೆ ತೆಂಗಿನಕಾಯಿಯ ನೀರನ್ನು ಶಿವಲಿಂಗಕ್ಕೆ ಅಭಿಷೇಕ ಮಾಡಬೇಡಿ.

*ಈಶ್ವರನಿಗೆ ಎಲ್ಲಾ ಹಣ್ಣುಗಳನ್ನು ಅರ್ಪಿಸಬಹುದು..ಆದರೂ ಶಿವನಿಗೆ ಇಷ್ಟವಾದದ್ದು ಮರಸೇಬು ಹಣ್ಣು.

*ಮೊದಲು ಶಿವಲಿಂಗಕ್ಕೆ ಪಂಚಾಮೃತದ ಅಭಿಷೇಕ ಮಾಡಬೇಕು.

*ಶಿವನಿಗೆ ಇಷ್ಟವಾದ ಹೂಗಳು – ಬಿಳಿಬಣ್ಣದ ಹೂವುಗಳು.

*ಶಿವನಿಗೆ ಕೇದಾರ ಮತ್ತು ಚಂಪಾ ಪುಷ್ಪಗಳನ್ನು ಅರ್ಪಿಸಬೇಡಿ.

*ಭಕ್ತರು ಶಿವಲಿಂಗಕ್ಕೆ ಗಂಧವನ್ನು ಹಚ್ಚಬಹುದು , ಕುಂಕುಮವನ್ನಲ್ಲ.

*ಶಿವಲಿಂಗಕ್ಕೆ ಅರ್ಪಿಸಿದ ಅಥವಾ ಹಾಕಿದ ನೈವೇದ್ಯಗಳನ್ನು ತಿನ್ನಬೇಡಿ..ಇವು ಆರೋಗ್ಯಕ್ಕೆ ಮಾರಕ.

*ಅಭಿಷೇಕವನ್ನು ಚಿನ್ನ , ಬೆಳ್ಳಿ ಅಥವಾ ಕಂಚಿನಿಂದ ತಯಾರಿಸಿದ ನಾಗಯೋನಿಯೆಂಬ ಪಾತ್ರದಿಂದಲೇ ಮಾಡಿ..

*ಯಾವಾಗಲೂ ಪೂಜೆಗಳಿಗೆ ಸ್ಟೀಲ್ ಪಾತ್ರೆಗಳನ್ನು ಉಪಯೋಗಿಸಬೇಡಿ.

*ಶಿವಲಿಂಗವನ್ನು ನಿಮ್ಮ ಮನೆಯಲ್ಲಿಟ್ಟಿದ್ದರೆ , ಪೂಜೆ ಮಾಡುವಾಗ ಅಭಿಷೇಕಕ್ಕೆಂದು ಜಲಧಾರೆ ಎಂಬ ಪಾತ್ರೆಯನ್ನು ಉಪಯೋಗಿಸಿ..ಜಲಧಾರೆಯ ಸಹಾಯವಿಲ್ಲದೇ ಪೂಜೆ ಮಾಡಿದರೆ , ಶಿವಲಿಂಗದಿಂದ ನಕಾರಾತ್ಮಕ ಶಕ್ತಿಯ ಸಂಚಾರವಾಗುತ್ತದೆ.

ಇಲ್ಲಿ ಓದಿ :-ಶಿವನ ಈ 5 ವಸ್ತುಗಳು ಕನಸಿನಲ್ಲಿ ಬಂದ್ರೆ ಏನಾಗುತ್ತೆ ಗೊತ್ತಾ..???

ಇನ್ನೂ ಹಲವಾರು ವಿಧಿ-ವಿಧಾನಗಳನ್ನು ಶಿವಪೂಜೆಯಲ್ಲಿ ನಿರ್ದೇಶಿಸಲಾಗಿದೆ.. ಅವುಗಳಲ್ಲಿ ಇವು ಮುಖ್ಯ ಅಂಶಗಳಷ್ಟೇ..!!

ಶಿವಲಿಂಗಕ್ಕೆ ಅರ್ಪಿಸಿದ ಅಥವಾ ಹಾಕಿದ ನೈವೇದ್ಯಗಳನ್ನು ತಿನ್ನಬೇಡಿ..ಇವು ಆರೋಗ್ಯಕ್ಕೆ ಮಾರಕವೆಂದು ಮೇಲೆ ತಿಳಿಸಲಾಗಿದೆ. ಈ ಅಂಶದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಯೆನಾದರೂ ಮೂಡಿದ್ದರೆ ಆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ…

ಶಿವನು ವೈರಾಗ್ಯದ ದೇವತೆಯಾಗಿದ್ದಾನೆ. ಸಾಮಾನ್ಯ ವ್ಯಕ್ತಿಯು ಶಿವನಿಗೆ ಅರ್ಪಿಸಿದ ವಸ್ತುಗಳನ್ನು ಸ್ವೀಕರಿಸಿದರೆ ಅವನಿಗೆ ವೈರಾಗ್ಯ ಬರುವ ಸಾಧ್ಯತೆಯಿರುತ್ತದೆ. ಸಾಮಾನ್ಯ ವ್ಯಕ್ತಿಗೆ ವೈರಾಗ್ಯ ಬೇಕಾಗಿರುವುದಿಲ್ಲ. ಆದುದರಿಂದ ಶಿವಲಿಂಗಕ್ಕೆ ಅರ್ಪಿಸಿದ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಲಾಗಿದೆ.ಶೇ. 50 ಕ್ಕಿಂತ ಹೆಚ್ಚು ಮಟ್ಟವಿರುವ ವ್ಯಕ್ತಿಗೆ ಇದು ಅನ್ವಯಿಸುವುದಿಲ್ಲ, ಏಕೆಂದರೆ ಮಟ್ಟವು ಹೆಚ್ಚಿರುವುದರಿಂದ ವೈರಾಗ್ಯ ಲಹರಿಗಳ ಪರಿಣಾಮವು ಅವನ ಮೇಲಾಗುವುದಿಲ್ಲ.

ಅವನಲ್ಲಿ ಮಾಯೆಯಿಂದ ದೂರ ಹೋಗುವ ವಿಚಾರಗಳು ಆಗಲೇ ಪ್ರಾರಂಭವಾಗಿರುತ್ತವೆ. ಅದರಂತೆ ಶೇ. 50ಕ್ಕಿಂತ ಹೆಚ್ಚು ಮಟ್ಟವಿರುವ ವ್ಯಕ್ತಿಯು ಸ್ಥೂಲ ಕರ್ಮಕಾಂಡದ ಆಚೆಗೆ ಹೋಗಿರುವುದರಿಂದ ಅವನಲ್ಲಿ ಮಾನಸ- ಉಪಾಸನೆಯು ಪ್ರಾರಂಭವಾಗಿರುತ್ತದೆ. ಇಂತಹ ವ್ಯಕ್ತಿಯ ಮನಸ್ಸಿನಲ್ಲಿ ‘ಶಿವನಿಗೆ ಅರ್ಪಿಸಿದ ವಸ್ತುಗಳನ್ನು ತೆಗೆದುಕೊಳ್ಳಬೇಕು’ ಎಂಬ ಕರ್ಮಕಾಂಡದ ವಿಚಾರಗಳು ಬರುವ ಸಾಧ್ಯತೆಗಳೇ ಕಡಿಮೆಯಿರುತ್ತವೆ.

ಕೃಪೆ : ಶ್ರೀ ಶಂಕರ ಲಿಂಗೇಶ್ವರ ದೇವಸ್ಥಾನ

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಫೋರ್ಜರಿ ಮಾಡಿ ಆಸ್ತಿ ಕಬಳಿಸಿ. ತಂದೆ ತಾಯಿಗೆ ಗೇಟ್ ಪಾಸ್ ಕೊಟ್ಟ ಮಕ್ಕಳು.

    ತಂದೆ-ತಾಯಿ ಮಕ್ಕಳಿಗೋಸ್ಕರ ತಮ್ಮ ಇಡೀ ಬದುಕನ್ನೇ ಮುಡಿಪಾಗಿ ಇಡುತ್ತಾರೆ. ಕಷ್ಟಪಟ್ಟು ಮಕ್ಕಳನ್ನು ಸಾಕಿದರೂ ಕೊನೆಗೆ ತಂದೆ ತಾಯಿಗೆ ದ್ರೋಹ ಬಗೆಯುವ ಮಟ್ಟಕ್ಕೆ ಕೆಲವರು ಹೋಗುತ್ತಾರೆ. ಆದರೆ ಇಲ್ಲಿ ನೋಡಿ ಹೆಣ್ಣುಮಕ್ಕಳು ಕುಟುಂಭದ ಕಣ್ಣು ಎನ್ನುವಂತೆ ಸಾಕಿ ಸಲಹಿದರು ಅದೇ ಮಕ್ಕಳು ಆಸ್ತಿಯ ಆಸೆಗೆ ಹೆತ್ತವರಿಗೆ ದ್ರೋಹ ಬಗೆದಿದ್ದಾರೆ. ಮಕ್ಕಳಿಗೋಸ್ಕರ, ಅವರ ಸುಖ ಸಂತೋಷಕ್ಕೋಸ್ಕರ ತಂದೆ ತಾಯಿ ತಮ್ಮ ಜೀವನವನ್ನೆ ಮುಡಿಪಾಗಿಡುತ್ತಾರೆ.  ಆದರೆ ಇಲ್ಲಿ ವೆಲ್ಲಿಯನ್, ಕಮಲಮ್ಮ ಎಂಬ ದಂಪತಿಗೆ ತಮ್ಮ ಮಕ್ಕಳೇ ಮೋಸ ಮಾಡಿರುವ ಘಟನೆ ಬೆಳಕಿಗೆ…

  • ಆರೋಗ್ಯ

    ಊಟವಾದ ತಕ್ಷಣ ನೀರನ್ನು ಕುಡಿಯಬಾರದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ನಾವು ಪ್ರತಿದಿನ ಕನಿಷ್ಠ ಎಂಟು ಗ್ಲಾಸ್ ನೀರನ್ನು ಕುಡಿಯಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನೀರು ಕುಡಿಯಲು ಸರಿಯಾದ ಸಮಯ ಯಾವುದು? ಶರೀರದಲ್ಲಿ ನೀರಿನ ಪರಿಣಾಮವನ್ನು ಗರಿಷ್ಠವಾಗಿಸಲು ಅದನ್ನು ಸೇವಿಸಲು ಅತ್ಯುತ್ತಮ ಸಮಯ ಯಾವುದು ಮತ್ತು ಹಾನಿಕಾರಕ ಪರಿಣಾಮವನ್ನು ತಪ್ಪಿಸಲು ನೀರನ್ನು ಯಾವ ಸಮಯ ದಲ್ಲಿ ಸೇವಿಸಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

  • ಸುದ್ದಿ

    ಭಾರತೀಯ ಸೇನೆಗಾಗಿ ವಿಶೇಷವಾಗಿ ತಯಾರಾದ ಈ ಬೈಕ್ ವಿಶೇಷತೆ ಏನು ಗೊತ್ತಾ?

    ಭಾರತೀಯ ಸೇನಗಾಗಿ ಟಾಟಾ ಮೋಟಾರ್ಸ್ ತಮ್ಮ ಸಫಾರಿ ಸ್ಟೋರ್ಮ್ ಕಾರನ್ನು ತಯಾರಿಸಿ ನೀಡುತ್ತಿರುವ ಬಗ್ಗೆ ನಾವು ಈಗಾಗಲೇ ತಿಳಿದಿದ್ದೇವೆ. ಆದ್ರೆ ಸೇನೆಯಲ್ಲಿ ಬಳಸಲಾಗುತ್ತಿರವ ದ್ವಿಚಕ್ರ ವಾಹನಗಳು ಕಡಿಮೆ ಶಕ್ತಿಶಾಲಿಯಾದ ಕಾರಣ ಚತ್ತೀಸ್‍ಗಢ್‍ನ ಯುವಕನೊಬ್ಬ 800ಸಿಸಿ ಸಾಮರ್ಥ್ಯವಿರುವ ವಿಶೇಷ ಬೈಕ್ ಒಂದನ್ನ ತಯಾರು ಮಾಡಿದ್ದಾನೆ.ಪ್ರಸ್ತುತ ಭಾರತೀಯ ಸೇನೆಯಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ 350ಸಿಸಿ ಮತ್ತು 500ಸಿಸಿ ಬೈಕ್‍ಗಳನ್ನು ಬಳಸಲಾಗುತ್ತಿದ್ದು, ಅಮೆರಿಕನ್ ಸೇನೆಯು ಹೆಚ್ಚು ಸಾಮರ್ಥ್ಯವಿರುವ ಯುನೈಟೆಡ್ ಮೋಟಾರ್ಸ್‍ನ ಮತ್ತು ಹಾರ್ಲೇ ಡೇವಿಡ್ಸನ್ ಸಂಸ್ಥೆಯ ಅಧಿಕ ಸಾಮರ್ಥ್ಯವಿರುವ ಬೈಕ್‍ಗಳನ್ನು ಬಳಸುತ್ತಿದ್ದಾರೆ….

  • ಮನರಂಜನೆ

    ಲಕ್ಶ್ಮಿ ಹುಟ್ಟುಹಬ್ಬಕ್ಕೆ ಅನುಶ್ರಿ ಕೊಟ್ಟ ಕಾಣಿಕೆ ಏನು ಗೊತ್ತಾ..?ಹುಟ್ಟುಹಬ್ಬ ಆಚರಿಸಿಕೊಂಡ ಹಳ್ಳಿ ಹುಡುಗಿ ಲಕ್ಷ್ಮಿ ಹೇಳಿದ್ದೇನು.?ತಿಳಿಯಲು ಈ ಲೇಖನ ಓದಿ…

    ಜೀ-ಕನ್ನಡದಲ್ಲಿ ಆರಂಭವಾಗಿರುವ ‘ಸರಿಗಮಪ’ 14ನೇ ಆವೃತ್ತಿ ಈಗಾಗಲೇ ಕರುನಾಡ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ನೀಡುವ ಮೂಲಕ ಜೀ-ವಾಹಿನಿ ಮತ್ತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಮಕ್ಕಳ ಸಿಂಗಿಂಗ್ ಶೋ ಎಷ್ಟೋ ಜನರಿಗೆ ವೀಕೆಂಡ್ ನಲ್ಲಿ ಮನರಂಜನೆಯ ಜೊತೆಗೆ ಮನಸ್ಸಿಗೆ ನೆಮ್ಮದಿಯನ್ನು ತರುತ್ತದೆ.. ಅದರಲ್ಲೂ ಕೆಲವು ಸ್ಪರ್ಧಿಗಳು ನಮ್ಮ ಮನೆಯ ಸದಸ್ಯರಂತಾಗುತ್ತಾರೆ.ಜೀ ಕನ್ನಡ ಟಿವಿ ರಿಯಾಲಿಟಿ ಸಿಂಗಿಂಗ್ ಸರಿಗಮಪ ಶೋ ನ ಲಕ್ಷ್ಮೀ ಕೂಡ ಇದಕ್ಕೆ ಹೊರತಾಗಿಲ್ಲ.. ಹಳ್ಳಿಯಿಂದ ಬಂದ ಪ್ರತಿಭಾನ್ವಿತ ಕಲಾವಿದೆ ಈ ಲಕ್ಷ್ಮಿರಾಮಪ್ಪ.ಇವರ…

  • ಸುದ್ದಿ

    ಕೃಷ್ಣಾ ನದಿ ಪಾತ್ರಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ತುಂಬಿದ ನಾರಾಯಣಪುರ ಡ್ಯಾಂ…!

    ರಾಯಚೂರು/ವಿಜಯಪುರ/ಬೆಳಗಾವಿ: ಜುಲೈಮುಗಿಯುತ್ತಿದ್ದರೂ ರಾಜ್ಯದ ಯಾವ ಪ್ರಮುಖ ಡ್ಯಾಂಗಳು ಭರ್ತಿಯಾಗಿಲ್ಲವೆಂಬುವುದು ದುಃಖದಸಂಗತಿ. ಅದರೊಟ್ಟಿಗೆ ಅಲ್ಲಲ್ಲಿ ಮಳೆಯಾಗಿರುವ ಸುದ್ದಿ ಕೇಳಿದರೂ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಮಳೆಯಾಗುತ್ತಿದ್ದು, ನಾರಾಯಣಪುರಜಲಾಶಯದ ತುಂಬಿದೆ. ಕೃಷ್ಣಾ ನದಿ ನೀರಿನ ಹರಿವು ಹೆಚ್ಚಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ. ಕೃಷ್ಣಾ ನದಿ ಪಾತ್ರಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ.  ನಾರಾಯಣಪುರ ಜಲಾಶಯದಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು 18 ಗೇಟ್ ಮೂಲಕ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ತಾಲೂಕು…