inspirational

ಮಂಗಳ ಗ್ರಹ

93
ಮಂಗಳ

ಮಂಗಳ ಮಂಗಳ ಗ್ರಹವು ಸೊರ್ಯನಿಂದ ನಾಲ್ಕನೇ ಗ್ರಹವಾಗಿದ್ದು , ನಮ್ಮ ಸೌರಮಂಡಲದ ಎರಡನೆಯ ಅತಿ ಚಿಕ್ಕ ಗ್ರಹವಾಗಿದೆ ಮರಕ್ಯೊರಿಯ ನಂತರ. ಇಂಗ್ಲೀಷ್ ನಲ್ಲಿ ಇದನ್ನು ಮಾರ್ಸ್ ಎಂದು ಕರೆಯಲಾಗುತ್ತದೆ. ಮಾರ್ಸ ಇದು ರೋಮನ್ನರ್ ದೇವರ ಯುಧದ್ದ ದೇವತೆ ಮಾಡಿದೆ.ಇದನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ.[ಭೂಮಿ]]ಗಿಂತ ದೂರದಲ್ಲಿದ್ದು, ಗುರು ಗ್ರಹಕ್ಕಿಂತ ಹತ್ತಿರದಲ್ಲಿದೆ.ಆಂಗ್ಲ ಭಾಷೆಯಲ್ಲಿ ‘ಮಾರ್ಸ್'(Mars) ಎಂದು ಕರೆಯುತ್ತಾರೆ. ಸುಮಾರು ಭೂಮಿಯ ಅರ್ಧದಷ್ಟು ವ್ಯಾಸವುಳ್ಳ ಈ ಗ್ರಹ ತನ್ನ ಅಕ್ಷವನ್ನು ಸುಮಾರು ೨೪ ಘಂಟೆಗಳಲ್ಲಿ ಸುತ್ತುತ್ತದೆ. ಆದರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ೨ ವರ್ಷ(೬೮೬.೯೮ ದಿನ)ಗಳೇ ಬೇಕಾಗುತ್ತದೆ. ಮಂಗಳ ಗ್ರಹದಲ್ಲಿ ನೀರು ಇರುವ ಬಗ್ಗೆ ನಾಸಾ ಅಧಿಕೃತವಾಗಿ ಸೆಪ್ಟಂಬರ್ 28,2015 ರಂದು ಘೋಷಣೆ ಮಾಡಿದೆ.

ಸೌರಮಂಡಲ

ಈ ಗ್ರಹದ ವ್ಯಾಸ ೬,೭೯೦ ಕಿ.ಮೀ.(೪,೨೨೦ ಮೈಲಿ). ಗಳು. ಸೂರ್ಯನಿಂದ ಸುಮಾರು ೨೨೮,೦೦೦,೦೦೦ ಕಿ.ಮೀ.(೧೪೨,೦೦೦,೦೦೦ ಮೈಲಿ)ದೂರದಲ್ಲಿರುವ ಮಂಗಳದ ವಾತಾವರಣದಲ್ಲಿ ಇಂಗಾಲಾಮ್ಲದೊಂದಿಗೆ ಸ್ವಲ್ಪ ನೀರು ಕೂಡಾ ಇದೆ. ಮಂಗಳ ಗ್ರಹ ಕೆಂಪು ಬಣ್ಣದ್ದಾಗಿರುವುದರಿಂದ,ಇದನ್ನು ‘ಕೆಂಪು ಗ್ರಹ’ ಅಥವಾ ‘ಅಂಗಾರಕ’ (Red Planet) ಎಂದೂ ಕರೆಯುತ್ತಾರೆ. ಮಂಗಳ ಗ್ರಹಕ್ಕೆ ಫೋಬೋಸ್ (Phobos) ಮತ್ತು ಡೀಮೋಸ್ (Deimos) ಎಂಬ ೨ ನೈಸರ್ಗಿಕ ಉಪಗ್ರಹಗಳಿವೆ. ಚಿಕ್ಕದಾಗಿ ವಿಲಕ್ಷಣ ರೂಪದಲ್ಲಿರುವ ಈ ಉಪಗ್ರಹಗಳು ಮಂಗಳದ ಗುರುತ್ವದಿಂದ ಸೆರೆಹಿಡಿಯಲ್ಪಡುವ ಮುನ್ನ ಆಸ್ಟೆರೊಯ್ಡ್ಗಳಾಗಿದ್ದಿರಬಹುದು (asteroid). ಭೂಮಿಯಿಂದ ಮಂಗಳವನ್ನು ಬರಿಗಣ್ಣಿನಿಂದ ನೋಡಬಹುದು. ಮಂಗಳದ ಗೋಚರ ಪ್ರಮಾಣವು (apparent magnitude) −೨.೯ರವರೆಗೂ ಇರುತ್ತದೆ. ಭೂಮಿಯಿಂದ ನೋಡಿದಾಗ ಕೇವಲ ಶುಕ್ರಚಂದ್ರ ಮತ್ತು ಸೂರ್ಯಗಳು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತವೆ. ಆದರೆ, ವರ್ಷದ ಹಲವು ದಿನಗಳಲ್ಲಿ ಗುರು (ಗ್ರಹ)ವು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ.

೧೯೬೫ ರಲ್ಲಿ ಮ್ಯಾರಿನರ್ ೪ರ ಮೊಟ್ಟಮೊದಲ ಮಂಗಳಯಾನಕ್ಕೆ ಮುನ್ನ ವೈಜ್ಞಾನಿಕ ಸಮುದಾಯದಲ್ಲಿ (ಬಹುಶಃ ಇತರ ಸಮುದಾಯಗಳಲ್ಲೂ), ಮಂಗಳದ ಮೇಲೆ ಸಾಕಷ್ಟು ನೀರು ದ್ರವರೂಪದಲ್ಲಿರಬಹುದೆಂಬ ಆಶಾವಾದವಿತ್ತು. ಮಂಗಳದ ಧ್ರುವಗಳ ಬಳಿ ಕಂಡುಬಂದ ತಿಳಿ ಮತ್ತು ಗಾಢವಾದ ಕಲೆಗಳು ಪುನಃ ಪುನಃ ಆಕಾರದಲ್ಲಿ ಬದಲಾಗುತ್ತಿದ್ದವು. ಇದಲ್ಲದೆ, ನೀರಿನ ಕಾಲುವೆಗಳಂತಿರುವ ಉದ್ದವಾದ ಗಾಢ ಪಟ್ಟಿಗಳೂ ಕಂಡುಬಂದವು. ಮಂಗಳದ ಮೇಲೆ ನೀರಿನ ಬಗ್ಗೆ ಉಂಟಾಗಿದ್ದ ಆಶಾದಾಯಕ ನಿರೀಕ್ಷೆಗೆ ಈ ವೀಕ್ಷಣೆಗಳೇ ಕಾರಣವಾಗಿದ್ದಿರಬಹುದು.

ಈ ಪಟ್ಟಿಗಳು ಅಸ್ತಿತ್ವದಲ್ಲೇ ಇಲ್ಲವೆಂದೂ, ಇವು ಕೇವಲ ದೃಷ್ಟಿ ಭ್ರಾಂತಿಯೆಂದೂ ನಂತರದ ವಿಶ್ಲೇಷಣೆಗಳಿಂದ ತಿಳಿದುಬಂದಿತು. ಹೀಗಿದ್ದರೂ, ಭೂಮಿಯನ್ನುಳಿದು ಬೇರಾವುದೇ ಗ್ರಹಕ್ಕಿಂತಲೂ ಮಂಗಳದ ಮೇಲೆ ನೀರಿನ (ಮತ್ತು ಜೀವದ) ಅಸ್ತಿತ್ವವು ಅತಿ ಹೆಚ್ಚು ಸಂಭವನೀಯವಾಗಿದೆ. ಆದ್ದರಿಂದ ಈಗಲೂ ಅನ್ವೇಷಕಗಳು ಮಂಗಳದ ಮೇಲೆ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಮಂಗಳದ ದೈನಂದಿಕ ಚಲನೆ (roational period) ಮತ್ತು ಋತುಮಾನಗಳು ಭೂಮಿಯ ಚಲನೆ ಮತ್ತು ಋತುಮಾನಗಳನ್ನು ಹೋಲುತ್ತವೆ. ಸೌರಮಂಡಲದಲ್ಲೇ ಅತಿ ಎತ್ತರ ಪರ್ವತವಾದ ಒಲಂಪಸ್ ಮಾನ್ಸ್, ಅತಿ ದೊಡ್ಡ ಕಂದರವಾದ ಮ್ಯಾರಿನೆರಿಸ್ ಕಣಿವೆ, ಮತ್ತು ಧ್ರುವದಲ್ಲಿ ಹಿಮವಲಯಗಳು ಮಂಗಳ ಗ್ರಹದ ಮೇಲೆ ಕಂಡುಬರುತ್ತವೆ. ಇತ್ತೀಚೆಗಿನ ಕೆಲವು ಆಧಾರಗಳ ಪ್ರಕಾರ, ಕೆಲವೇ ವರ್ಷಗಳ ಹಿಂದೆಯೂ ಮಂಗಳದ ಮೇಲೆ ನೀರು ದ್ರವರೂಪದಲ್ಲಿ ಪ್ರವಹಿಸಿರಬಹುದು.

ಪ್ರಸ್ತುತದಲ್ಲಿ ಮಂಗಳದ ಸುತ್ತ ೪ ಗಗನನೌಕೆಗಳು (spacecraft) ಪರಿಭ್ರಮಿಸುತ್ತಿವೆ: ಮಂಗಳ ಗ್ಲೋಬಲ್ ಸಮೀಕ್ಷಕಮಂಗಳ ಒಡಿಸ್ಸಿಮಂಗಳ ಎಕ್ಸ್‌ಪ್ರೆಸ್, ಮತ್ತು ಮಂಗಳ ಬೇಹುಗಾರಿಕಾ ಪರಿಭ್ರಮಕ. ಭೂಮಿಯನ್ನು ಬಿಟ್ಟರೆ ಇನ್ನಾವ ಗ್ರಹದ ಮೇಲೂ ಇಷ್ಟೊಂದು ಪರಿಭ್ರಮಕಗಳು ಸುತ್ತುತ್ತಿಲ್ಲ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ ಸ್ಪಿರಿಟ್ ಮತ್ತು ಆಪರ್ಚುನಿಟಿ ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಈ ಗ್ರಹದಲ್ಲಿ ಸಹ ಭೊಮಿಯ ಹಾಗೆ ಋತುಗಳು ಬದಲಾಗುತ್ತಿರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಭೊಮಿಗೆ ಸರಿಸಮನಾಗಿ ರುವಾರಿ ಈ ಗ್ರಹದಲ್ಲಿ ಮನುಷ್ಯರಾರು ಆಕ್ಸಿಜನ್ ಮಾಸ್ಕ್ ಇಲ್ಲದೆ ಬದುಕಿರಲಾರರು.ಇಲ್ಲಿ ಆಕ್ಸಿಜನ್ ಇಲ್ಲವೆಂದಲ್ಲ ಮಂಗಳ ಗ್ರಹದಲ್ಲಿ ಆಕ್ಸಿಜನ್ ಪ್ರಮಾಣ ಕೇವಲ 2% ಗಿಂತ ಕಡಿಮೆ ಇದೆ. ಆಕ್ಸಿಜನ್ ಗಿಂತ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿರುವ ಮಂಗಳ ಗ್ರಹದಲ್ಲಿ ಆಕ್ಸಿಜನ್ ಅತ್ಯಲ್ಪ ವಾಗಿದೆ.ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಿ ದಿಲ್ಲಿ ಮಂಗಳನಲ್ಲಿ ಮನುಷ್ಯ ವಾಸಿಸಲು ಸಾಧ್ಯವಿದೆ. ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಲು ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ನಡೆಸಿದ್ದಾರೆ ಆದರೆ ಅದು ಅಸಾಧ್ಯವಾಗಿದೆ.ಮುಂದಿನ ದಿನಗಳಲ್ಲಿ ಇದರಲ್ಲಿ ಯಶಸ್ಸು ಸಾಧಿಸಿದ್ದರೆ ಮಂಗಳ ಮನುಷ್ಯನ ಎರಡನೆ ಮೋಲಸ್ಥಾನ ವಾದ್ದತಾಗುತ್ತದೆ.

ಈ ಗ್ರಹದ ವ್ಯಾಸ ೬,೭೯೦ ಕಿ.ಮೀ.(೪,೨೨೦ ಮೈಲಿ). ಗಳು. ಸೂರ್ಯನಿಂದ ಸುಮಾರು ೨೨೮,೦೦೦,೦೦೦ ಕಿ.ಮೀ.(೧೪೨,೦೦೦,೦೦೦ ಮೈಲಿ)ದೂರದಲ್ಲಿರುವ ಮಂಗಳದ ವಾತಾವರಣದಲ್ಲಿ ಇಂಗಾಲಾಮ್ಲದೊಂದಿಗೆ ಸ್ವಲ್ಪ ನೀರು ಕೂಡಾ ಇದೆ. ಮಂಗಳ ಗ್ರಹ ಕೆಂಪು ಬಣ್ಣದ್ದಾಗಿರುವುದರಿಂದ,ಇದನ್ನು ‘ಕೆಂಪು ಗ್ರಹ’ ಅಥವಾ ‘ಅಂಗಾರಕ’ (Red Planet) ಎಂದೂ ಕರೆಯುತ್ತಾರೆ. ಮಂಗಳ ಗ್ರಹಕ್ಕೆ ಫೋಬೋಸ್ (Phobos) ಮತ್ತು ಡೀಮೋಸ್ (Deimos) ಎಂಬ ೨ ನೈಸರ್ಗಿಕ ಉಪಗ್ರಹಗಳಿವೆ. ಚಿಕ್ಕದಾಗಿ ವಿಲಕ್ಷಣ ರೂಪದಲ್ಲಿರುವ ಈ ಉಪಗ್ರಹಗಳು ಮಂಗಳದ ಗುರುತ್ವದಿಂದ ಸೆರೆಹಿಡಿಯಲ್ಪಡುವ ಮುನ್ನ ಆಸ್ಟೆರೊಯ್ಡ್ಗಳಾಗಿದ್ದಿರಬಹುದು (asteroid). ಭೂಮಿಯಿಂದ ಮಂಗಳವನ್ನು ಬರಿಗಣ್ಣಿನಿಂದ ನೋಡಬಹುದು. ಮಂಗಳದ ಗೋಚರ ಪ್ರಮಾಣವು (apparent magnitude) −೨.೯ರವರೆಗೂ ಇರುತ್ತದೆ. ಭೂಮಿಯಿಂದ ನೋಡಿದಾಗ ಕೇವಲ ಶುಕ್ರಚಂದ್ರ ಮತ್ತು ಸೂರ್ಯಗಳು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತವೆ. ಆದರೆ, ವರ್ಷದ ಹಲವು ದಿನಗಳಲ್ಲಿ ಗುರು (ಗ್ರಹ)ವು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ.

೧೯೬೫ ರಲ್ಲಿ ಮ್ಯಾರಿನರ್ ೪ರ ಮೊಟ್ಟಮೊದಲ ಮಂಗಳಯಾನಕ್ಕೆ ಮುನ್ನ ವೈಜ್ಞಾನಿಕ ಸಮುದಾಯದಲ್ಲಿ (ಬಹುಶಃ ಇತರ ಸಮುದಾಯಗಳಲ್ಲೂ), ಮಂಗಳದ ಮೇಲೆ ಸಾಕಷ್ಟು ನೀರು ದ್ರವರೂಪದಲ್ಲಿರಬಹುದೆಂಬ ಆಶಾವಾದವಿತ್ತು. ಮಂಗಳದ ಧ್ರುವಗಳ ಬಳಿ ಕಂಡುಬಂದ ತಿಳಿ ಮತ್ತು ಗಾಢವಾದ ಕಲೆಗಳು ಪುನಃ ಪುನಃ ಆಕಾರದಲ್ಲಿ ಬದಲಾಗುತ್ತಿದ್ದವು. ಇದಲ್ಲದೆ, ನೀರಿನ ಕಾಲುವೆಗಳಂತಿರುವ ಉದ್ದವಾದ ಗಾಢ ಪಟ್ಟಿಗಳೂ ಕಂಡುಬಂದವು. ಮಂಗಳದ ಮೇಲೆ ನೀರಿನ ಬಗ್ಗೆ ಉಂಟಾಗಿದ್ದ ಆಶಾದಾಯಕ ನಿರೀಕ್ಷೆಗೆ ಈ ವೀಕ್ಷಣೆಗಳೇ ಕಾರಣವಾಗಿದ್ದಿರಬಹುದು.

ಈ ಪಟ್ಟಿಗಳು ಅಸ್ತಿತ್ವದಲ್ಲೇ ಇಲ್ಲವೆಂದೂ, ಇವು ಕೇವಲ ದೃಷ್ಟಿ ಭ್ರಾಂತಿಯೆಂದೂ ನಂತರದ ವಿಶ್ಲೇಷಣೆಗಳಿಂದ ತಿಳಿದುಬಂದಿತು. ಹೀಗಿದ್ದರೂ, ಭೂಮಿಯನ್ನುಳಿದು ಬೇರಾವುದೇ ಗ್ರಹಕ್ಕಿಂತಲೂ ಮಂಗಳದ ಮೇಲೆ ನೀರಿನ (ಮತ್ತು ಜೀವದ) ಅಸ್ತಿತ್ವವು ಅತಿ ಹೆಚ್ಚು ಸಂಭವನೀಯವಾಗಿದೆ. ಆದ್ದರಿಂದ ಈಗಲೂ ಅನ್ವೇಷಕಗಳು ಮಂಗಳದ ಮೇಲೆ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಮಂಗಳದ ದೈನಂದಿಕ ಚಲನೆ (roational period) ಮತ್ತು ಋತುಮಾನಗಳು ಭೂಮಿಯ ಚಲನೆ ಮತ್ತು ಋತುಮಾನಗಳನ್ನು ಹೋಲುತ್ತವೆ. ಸೌರಮಂಡಲದಲ್ಲೇ ಅತಿ ಎತ್ತರ ಪರ್ವತವಾದ ಒಲಂಪಸ್ ಮಾನ್ಸ್, ಅತಿ ದೊಡ್ಡ ಕಂದರವಾದ ಮ್ಯಾರಿನೆರಿಸ್ ಕಣಿವೆ, ಮತ್ತು ಧ್ರುವದಲ್ಲಿ ಹಿಮವಲಯಗಳು ಮಂಗಳ ಗ್ರಹದ ಮೇಲೆ ಕಂಡುಬರುತ್ತವೆ. ಇತ್ತೀಚೆಗಿನ ಕೆಲವು ಆಧಾರಗಳ ಪ್ರಕಾರ, ಕೆಲವೇ ವರ್ಷಗಳ ಹಿಂದೆಯೂ ಮಂಗಳದ ಮೇಲೆ ನೀರು ದ್ರವರೂಪದಲ್ಲಿ ಪ್ರವಹಿಸಿರಬಹುದು.

ಪ್ರಸ್ತುತದಲ್ಲಿ ಮಂಗಳದ ಸುತ್ತ ೪ ಗಗನನೌಕೆಗಳು (spacecraft) ಪರಿಭ್ರಮಿಸುತ್ತಿವೆ: ಮಂಗಳ ಗ್ಲೋಬಲ್ ಸಮೀಕ್ಷಕಮಂಗಳ ಒಡಿಸ್ಸಿಮಂಗಳ ಎಕ್ಸ್‌ಪ್ರೆಸ್, ಮತ್ತು ಮಂಗಳ ಬೇಹುಗಾರಿಕಾ ಪರಿಭ್ರಮಕ. ಭೂಮಿಯನ್ನು ಬಿಟ್ಟರೆ ಇನ್ನಾವ ಗ್ರಹದ ಮೇಲೂ ಇಷ್ಟೊಂದು ಪರಿಭ್ರಮಕಗಳು ಸುತ್ತುತ್ತಿಲ್ಲ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ ಸ್ಪಿರಿಟ್ ಮತ್ತು ಆಪರ್ಚುನಿಟಿ ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಈ ಗ್ರಹದಲ್ಲಿ ಸಹ ಭೊಮಿಯ ಹಾಗೆ ಋತುಗಳು ಬದಲಾಗುತ್ತಿರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಭೊಮಿಗೆ ಸರಿಸಮನಾಗಿ ರುವಾರಿ ಈ ಗ್ರಹದಲ್ಲಿ ಮನುಷ್ಯರಾರು ಆಕ್ಸಿಜನ್ ಮಾಸ್ಕ್ ಇಲ್ಲದೆ ಬದುಕಿರಲಾರರು.ಇಲ್ಲಿ ಆಕ್ಸಿಜನ್ ಇಲ್ಲವೆಂದಲ್ಲ ಮಂಗಳ ಗ್ರಹದಲ್ಲಿ ಆಕ್ಸಿಜನ್ ಪ್ರಮಾಣ ಕೇವಲ 2% ಗಿಂತ ಕಡಿಮೆ ಇದೆ. ಆಕ್ಸಿಜನ್ ಗಿಂತ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿರುವ ಮಂಗಳ ಗ್ರಹದಲ್ಲಿ ಆಕ್ಸಿಜನ್ ಅತ್ಯಲ್ಪ ವಾಗಿದೆ.ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಿ ದಿಲ್ಲಿ ಮಂಗಳನಲ್ಲಿ ಮನುಷ್ಯ ವಾಸಿಸಲು ಸಾಧ್ಯವಿದೆ. ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಲು ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ನಡೆಸಿದ್ದಾರೆ ಆದರೆ ಅದು ಅಸಾಧ್ಯವಾಗಿದೆ.ಮುಂದಿನ ದಿನಗಳಲ್ಲಿ ಇದರಲ್ಲಿ ಯಶಸ್ಸು ಸಾಧಿಸಿದ್ದರೆ ಮಂಗಳ ಮನುಷ್ಯನ ಎರಡನೆ ಮೋಲಸ್ಥಾನ ವಾದ್ದತಾಗುತ್ತದೆ.

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ವಿಟಮಿನ್ ನಮ್ಮ ದೇಹಕ್ಕೆ ಎಷ್ಟೋಂದು ಅವಶ್ಯಕವೆಂಬುದು ನಿಮಗೆ ಗೊತ್ತಾ?ತಿಳಿಯಲು ಈ ಲೇಖನ ಓದಿ..

    ಜೀವಸತ್ವಗಳು ಅರ್ಥಾತ್ ವಿಟಮಿನ್ ನಮ್ಮ ದೇಹದ ವಿವಿಧ ಕಾರ್ಯಗಳಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶಗಳು. ನಾವು ಸೇವಿಸುವ ಆಹಾರದಲ್ಲಿನ ಜೀವಸತ್ವಗಳು ಪಚನವಾಗಿ ರಕ್ತದಲ್ಲಿ ಹೀರುವಂತಾಗಲು ಜಿಡ್ಡಿನಂಶದ ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಜಿಡ್ಡಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳೆಂದು ವಿಂಗಡಿಸಲಾಗಿದೆ. ವಿಟಮಿನ್ ಎ, ಡಿ, ಇ, ಕೆಗಳನ್ನು ಜಿಡ್ಡಿನಲ್ಲಿ ಕರಗುವ ಜೀವಸತ್ವಗಳೆಂದೂ, ಬಿ ಕಾಂಪ್ಲೆಕ್ಸ್ ಅನ್ನೊಳಗೊಂಡ ಒಂಬತ್ತು ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಗುಂಪನ್ನಾಗಿಯೂ ಹೆಸರಿಸಲಾಗಿದೆ.

  • ಸಿನಿಮಾ

    ಐಟಿ ದಾಳಿ ವೇಳೆ ಪುನೀತ್ ರಾಜಕುಮಾರ್ ಮನೆ ಮುಂದೆ ಸಚಿವ ಡಿಕೆ.ಶಿವಕುಮಾರ್ ಬಂದಿದ್ದೇಕೆ ಗೊತ್ತಾ..?

    ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಐಟಿ ದಾಳಿಗೆ ಸ್ಯಾಂಡಲ್ವುಡ್ ಗುರಿಯಾಗಿದೆ. ಹೌದು ಕನ್ನಡದ ಸ್ಟಾರ್ ನಟರು, ಹಾಗೂ ನಿರ್ಮಾಪಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 24 ಗಂಟೆಗಳಿಂದ ಅಧಿಕಾರಿಗಳು ಆಸ್ತಿ ಪಾಸ್ತಿ ಕುರಿತಂತೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಿನ್ನೆ ಬೆಳಗ್ಗೆ ಬೆಂಗಳೂರಿನ ಸುಮಾರು 25 ಕಡೆ ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಂಗದೂರು, ದಿ ವಿಲನ್ ನಿರ್ಮಾಪಕ ಸಿ.ಆರ್ ಮನೋಹರ್ ಹಾಗೂ ರಾಕ್ ಲೈನ್ ವೆಂಕಟೇಶ್, ಮತ್ತು…

  • Cinema

    ರೂಮಿಗೆ ಬಾ ಎಂದ ನಿರ್ದೇಶಕ : ನಟಿ ಮಾಡಿದ್ದೇನು ಗೊತ್ತ..?

    ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2005ರಲ್ಲಿ ವಿದ್ಯಾ ಬಾಲಾನ್ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್‍ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು. ಸಂದರ್ಶನದಲ್ಲಿ ವಿದ್ಯಾ ತಾವು ನಟಿಯಾಗಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬ ವಿಷಯವನ್ನು ಈಗ ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಸಮಯದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 12 ಚಿತ್ರಗಳನ್ನು ಕಳೆದುಕೊಂಡಿದ್ದರ…

  • ದೇವರು-ಧರ್ಮ

    ಸಹಸ್ರ ದೇವತೆಗಳ ಅನುಗ್ರಹಕ್ಕಾಗಿ ಕಾರ್ತಿಕ ಹುಣ್ಣಿಮೆಯಂದು ಹೀಗೆ ಮಾಡಿ…!

    ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು. ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ…

  • ಸುದ್ದಿ

    ಹಿರಿಯ ಸಾಹಿತಿ ,ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಗಿರೀಶ್ ಕಾರ್ನಡ್ ಇನ್ನಿಲ್ಲ….

    ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ [81]ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಗಿರೀಶ್ ಕಾರ್ನಾಡ್ 1938 ಮೇ 19 ರಂದು ಮಹಾರಾಷ್ಟ್ರದ ಮಥೇರಾನ್ ನಲ್ಲಿ ಜನಿಸಿದ್ದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿ ಪರ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು…

  • ಸುದ್ದಿ

    ‘ಲೈಫ್ ಬಿಗಿನ್ಸ್ ಅಟ್90’ ಎಂಬ ಮಾತನ್ನು ಸ್ಕೂಬಾ ಡೈವಿಂಗ್ಸ್ ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಅಜ್ಜ..!

    ಸಾಧನೆ ಮತ್ತು ಸಾಹಸಕ್ಕೆ ವಯೋಮಾನ ಎಂದಿಗೂ ಅಡ್ಡಿಯಲ್ಲ ಎಂಬುದು ಈ ಜಗತ್ತಿನಲ್ಲಿ ಅನೇಕ ಬಾರಿ ಸಾಬೀತಾಗಿದೆ. ವಯೋವೃದ್ದರೊಬ್ಬರು ಈ ಹಿಂದೆ ತಾವೇ ಸೃಷ್ಟಿಸಿದ ವಿಶ್ವ ದಾಖಲೆಯನ್ನು ತಾವೇಮುರಿದು ಗಮನಸೆಳೆದಿದ್ದಾರೆ. ಬನ್ನಿ ಈ ಕಿಲಾಡಿತಾತನನ್ನು ನಾವೀಗ ಭೇಟಿ ಮಾಡೋಣ.. ಎರಡನೇ ವಿಶ್ವ ಯುದ್ಧದ ಮಾಜಿಯೋಧ ಹಾಗೂ 96 ವರ್ಷದ ಸಾಹಸಿವೂಲೇ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು ಸ್ಕೂಬಾ ಡೈವಿಂಗ್ ಮಾಡಿತಮ್ಮ ವಿಶ್ವ ದಾಖಲೆಯನ್ನು ಈ ವಯೋವೃದ್ದರು ಮುರಿದಿದ್ಧಾರೆ. ವಿಶ್ವದ ಅತ್ಯಂತ ಹಿರಿಯ ಸ್ಕೂಬಾ ಡೈವರ್ ಎಂದೇ ಖ್ಯಾತಿಪಡೆದಿರುವ ಇವರು…