ಉಪಯುಕ್ತ ಮಾಹಿತಿ

ಭಾರತೀಯರಿಗೋಸ್ಕರವೇ ಮಾಡಿರುವ ಈ ಡಿಜಿಟಲ್ ಪಂಚಾಂಗದಲ್ಲಿ ಏನೆಲ್ಲಾ ಮಾಹಿತಿ ಇದೆ ಗೊತ್ತಾ..!

441

ಡಿಜಿಟಲ್ ಭಾಷಾತಂತ್ರಜ್ಞಾನ ಪರಿಹಾರಗಳ ಮುಂಚೂಣಿಯ ರೆವೆರೀ ಲಾಂಗ್ವೇಜ್‌ ಟೆಕ್ನಾಲಜೀಸ್‌ ಇಂಡಿಕ್‌ ಕ್ಯಾಲೆಂಡರ್ ಎಂಬ ಸುಲಭ ಬಳಕೆಯ ಕ್ಯಾಲೆಂಡರ್‌ಆಪ್ ಬಿಡುಗಡೆ ಮಾಡಿದೆ. ರೆವೆರೀಯ ಇಂಡಿಕ್‌ ಕ್ಯಾಲೆಂಡರ್‌ಆಪ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು ಅವರ ಭಾಷೆ, ಸಂಸ್ಕೃತಿ, ಧಾರ್ಮಿಕತೆಗಳನ್ನು ಮೀರಿ  ಭಾರತೀಯರಿಗೆಂದೇ ರೂಪಿಸಲಾಗಿದೆ.

ಇಂಡಿಕ್‌ಕ್ಯಾಲೆಂಡರ್‌ನ ಮಾಹಿತಿ ೧೧ ಭಾರತೀಯ ಭಾಷೆಗಳು-ಹಿಂದಿ, ಬಂಗಾಳಿ, ತೆಲುಗು, ಅಸ್ಸಾಮಿ, ಮರಾಠಿ, ತಮಿಳು, ಗುಜರಾತಿ, ಕನ್ನಡ, ಮಲೆಯಾಳಂ, ಒಡಿಯಾ ಮತ್ತು ಪಂಜಾಬಿಗಳಲ್ಲಿ ಲಭ್ಯವಿದೆ. ರೆವೆರೀಯ ಆರ್ಕಷಕ ಇಂಡಿಕ್ ಕ್ಯಾಲೆಂಡರ್‌ ಆಪ್‌ ಚಾಂದ್ರಮಾನ ಕ್ಯಾಲೆಂಡರ್ ಆಧರಿಸಿದೆ. ಈ ಕ್ಯಾಲೆಂಡರ್ 29 ರಾಜ್ಯಗಳ ಹಿಂದೂ ಹಬ್ಬಗಳ ಮಾಹಿತಿ ಹೊಂದಿದೆ. ಈ ಕ್ಯಾಲೆಂಡರ್‌ತಿಥಿ, ನಕ್ಷತ್ರ ಮತ್ತು ರಾಶಿಯ ವಿವರಗಳನ್ನು ಪಂಚಾಂಗ ಆಧರಿಸಿ ನೀಡುತ್ತದೆ. ಇದುಆಯ್ಕೆಯಾದ ದಿನದ ಸೂರ್ಯೋದಯ/ಸೂರ್ಯಾಸ್ತದ ಸಮಯವನ್ನೂ ಪ್ರದರ್ಶಿಸುತ್ತದೆ.

ಸಾಂಸ್ಕೃತಿಕವಾಗಿ ಭಾರತೀಯರು ಜೀವನದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಪವಿತ್ರ ತಿಥಿಗಳು ಮತ್ತು ನಕ್ಷತ್ರಗಳಿಗೆ ಪಂಚಾಂಗವನ್ನು ಅನುಸರಿಸುತ್ತಾರೆ. ಪ್ರಯಾಣ, ಹೊಸ ಉದ್ಯಮ ಅಥವಾಯೋಜನೆಗೆ ಚಾಲನೆ, ಪರೀಕ್ಷೆ, ಸಂದರ್ಶನಗಳಿಗೆ ಹಾಜರಾಗುವುದು ಇತರೆ ಜೀವನದ ಘಟನೆಗಳಿಗೆ ಪಂಚಾಂಗ ನೋಡುತ್ತಾರೆ.

ಡೌನ್‌ಲೋಡ್‌ಆದ ನಂತರಇಂಡಿಕ್‌ಕ್ಯಾಲೆಂಡರ್ ಬಳಸುವುದು ಸುಲಭವಾಗಿದ್ದು ಪವಿತ್ರ ದಿನಗಳು ಮತ್ತು ಅವುಗಳ ರಾಜ್ಯಗಳು ಅಥವಾ ಹಬ್ಬಗಳ ಆಯ್ಕೆ ಮಾಡಿಕೊಳ್ಳಬಹುದು. ಬಳಕೆದಾರರು ಏಕಕಾಲಕ್ಕೆ ಹಿಂದಿನ, ಪ್ರಸ್ತುತದ ಮತ್ತು ಮುಂದಿನ ವರ್ಷದ ದಿನಾಂಕಗಳ ಹುಡುಕಾಟ ನಡೆಸಬಹುದು. ಗೂಗಲ್ ಸ್ಟೋರ್‌ನಲ್ಲಿಕ್ವಿಕ್ ರೆಫರೆನ್ಸ್‌ಗೈಡ್ ಆಪ್‌ಉಚಿತವಾಗಿ ಲಭ್ಯವಿದೆ. ರೆವೆರೀಯ ಇಂಡಿಕ್‌ ಕ್ಯಾಲೆಂಡರ್‌ ಮೊಬೈಲ್‌ಡಿವೈಸ್‌ನಲ್ಲಿ 1.34ಎಂಬಿ ಮಾತ್ರ ಸ್ಥಳಾವಕಾಶ ಪಡೆಯುತ್ತದೆ.

ರೆವೆರೀ ಲಾಂಗ್ವೇಜ್‌ಟೆಕ್ನಾಲಜೀಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಅರವಿಂದ್ ಪಾನಿ, ರೆವೆರೀಯ ಇಂಡಿಕ್‌ ಕ್ಯಾಲೆಂಡರ್‌  ಆಪ್‌ನಿಂದಎಲ್ಲಿಯೇ ಆಗಲಿ ಯಾವುದೇ ಸಮಯದಲ್ಲೆ ಆಗಲಿ ಮನೆಯಲ್ಲಿನ ಕ್ಯಾಲೆಂಡರ್‌ಅಗತ್ಯವಿಲ್ಲದೆಅನುಸರಿಸಬಹುದ. ಇಂಡಿಕ್‌ಕ್ಯಾಲೆಂಡರ್ ಪುರಿಜಗನ್ನಾಥ ರಥಯಾತ್ರೆ ಅಥವಾ ಓಣಂ, ಅಕ್ಷಯ ತೃತೀಯ, ದೀಪಾವಳಿ, ಬಿಹು ಮತ್ತಿತರೆ ಪವಿತ್ರ ದಿನಗಳನ್ನು ಕಂಡುಕೊಳ್ಳಬಹುದು’ಎಂದರು.

ರೆವೆರೀ ಪ್ರಧಾನಮಂತ್ರಿ  ಮತ್ತು ನೀತಿ ಆಯೋಗದ ಉಪಕ್ರಮದಲ್ಲಿ ಚಾಂಪಿಯನ್ಸ್ ಆಫ್‌ಚೇಂಜ್’ ಎಂಬ ಪುರಸ್ಕಾರಕ್ಕೆ ಭಾಷಾತಂತ್ರ ಭಾಜನವಾದ ಏಕೈಕ ಜ್ಞಾನಕಂಪನಿಯಾಗಿದೆ. ರೆವೆರೀ ಭಾಷಾ ಸಮಾನತೆಯನ್ನು ಇಂಟರ್‌ನೆಟ್‌ನಲ್ಲಿ ಉತ್ತೇಜಿಸುವಉದ್ದೇಶ ಹೊಂದಿದೆ. 2009 ರಲ್ಲಿ ಅರವಿಂದ್ ಪಾನಿ, ವಿವೇಕ್ ಪಾನಿ ಮತ್ತು ಎಸ್.ಕೆ.ಮೊಹಂತಿಅವರಿಂದ ಪ್ರಾರಂಭವಾದ ಈ ಕಂಪನಿ ಸದೃಢ ಆರ್‌ಅಂಡ್‌ಡಿ ತಂಡವನ್ನು ಹೊಂದಿದ್ದು ಡಿಜಿಟಲ್‌ಜಗತ್ತಿನಲ್ಲಿ ಭಾ?ತಾರತಮ್ಯ ನಿವಾರಿಸುವಗುರಿ ಹೊಂದಿದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಹುಡುಗಿಯರು ತಮಗಿಂತ ಚಿಕ್ಕವರ ಜೊತೆ ಡೇಟಿಂಗ್ ಮಾಡಿದ್ರೆ ಏನಾಗುತ್ತೆ..?ಅವರಿಗಿಂತ ಚಿಕ್ಕವರನ್ನು ಮದುವೆ ಆಗಬಹುದೇ..?ತಿಳಿಯಲು ಈ ಲೇಖನ ಓದಿ…

    ಎಲ್ಲರಿಗು ಗೊತ್ತಿರುವಂತೆ ನಮ್ಮ ಸಂಸ್ಕೃತಿಯ ಪ್ರಕಾರ ಮದುವೆ ಆಗುವ ಹುಡುಗಿ ಹುಡುಗನಿಗಿಂತ ಚಿಕ್ಕವಳಿರಬೇಕು. ಆದರೆ ಇತ್ತೀಚಿಗೆ ನಡೆದ ರಿಸೆರ್ಚ್ ನ ಪ್ರಕಾರ ಹುಡುಗಿಯರು ತಮಗಿಂತ ಚಿಕ್ಕವರ ಜೊತೆ ಡೇಟಿಂಗ್ ಮಾಡಲು ಇಷ್ಟ ಪಡ್ತಾರಂತೆ.

  • ಸುದ್ದಿ

    ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ 9 ನಕಲಿ ವಿದ್ಯಾರ್ಥಿಗಳು ಅರೆಸ್ಟ್……!

    ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಾಗಿ ಪರೀಕ್ಷೆ ಬರೆಯುತ್ತಿದ್ದ 9 ನಕಲಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಶಿವರಾಜ ಜಾಳಿಹಾಳ, ಮಂಜುನಾಥ ಕಡೆಮನಿ, ನಿಂಗಪ್ಪ ಕಂಬಳಿ, ಮೈಲಾರಪ್ಪ, ಫಕೀರಪ್ಪ ಸೇರಿದಂತೆ 9 ಮಂದಿ ನಕಲಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಅವರು ಬೇರೆಯವರ ಹೆಸರಲ್ಲಿ ಪರೀಕ್ಷೆ ಬರೆದ ಹಿನ್ನೆಲೆಯಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷಾ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಕೊಠಡಿ ಮೇಲ್ವಿಚಾರಕರು ಸೇರಿ ನಾಲ್ವರು ಅಧಿಕಾರಿಗಳನ್ನು ಪರೀಕ್ಷೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಕ್ರಮಕ್ಕೆ ಆದೇಶಿಸಲಾಗಿದೆ ಎಂದು…

  • ಸಿನಿಮಾ

    ವಿಶ್ವದ ಎಲ್ಲಾ ಕನ್ನಡಿಗರಿಗೆ ಮನರಂಜನೆ ನೀಡುತ್ತಿದ್ದ “ಮಜಾ ಟಾಕೀಸ್”ಬಂದ್ ಆಗಲಿದೆಯಾ?ಇದು ನಿಜನಾ?ತಿಳಿಯಲು ಈ ಲೇಖನ ಓದಿ…

    ಮಜಾ ವಿತ್ ಸುಜಾ ಯಶಸ್ಸಿನ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೊಕೇಶ್ ಪ್ರೊಡಕ್ಷನ್ಸ್ ಮೂಲಕ ಮಜಾ ಟಾಕೀಸ್ ಪಯಣ ಶುರುಮಾಡಿದ್ದ ಸೃಜನ್ ಲೋಕೇಶ್ ಇದೀಗ, ನಗುವಿನ ತೆರೆ ಎಳೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  • ಸಿನಿಮಾ, ಸ್ಪೂರ್ತಿ

    ಲ್ಯಾಟಿನ್ ಅಮೆರಿಕದಲ್ಲಿ ಬಿಹಾರದ ಈ ಹುಡುಗ ಹಾಲಿವುಡ್ ಸೂಪರ್ ಸ್ಟಾರ್‌‌‌..!ತಿಳಿಯಲು ಈ ಲೇಖನ ಓದಿ..

    ಸಿನಿಮಾದಲ್ಲಿ ಸೂಪರ್ ಸ್ಟಾರ್‌ ಎನಿಸಿಕೊಳ್ಳುವುದು ನಿಜವಾಲೂ ಕಷ್ಟದ ವಿಚಾರ. ಪರಿಶ್ರಮ, ಟ್ಯಾಲೆಂಟ್‌‌‌, ಲುಕ್ ಎಲ್ಲದರ ಜೊತೆ ಲಕ್ ಕೂಡಾ ಅಷ್ಟೇ ಮುಖ್ಯ.ಬಿಹಾರ ರಾಜಧಾನಿ ಪಾಟ್ನಾದಲ್ಲಿ ಹುಟ್ಟಿ ಬೆಳೆದ ಪ್ರಭಾಕರ್ ಶರಣ್‌‌ಗೆ ಬಾಲಿವುಡ್‌‌ನಲ್ಲಿ ವಿಲನ್ ಪಾತ್ರದಲ್ಲಿ ಹೆಸರು ಮಾಡಬೇಕೆಂದು ಮೊದಲಿನಿಂದಲೂ ಆಸೆ ಇತ್ತು.

  • corona

    ಕೋವಿಡ್-19 ಮಾರ್ಗಸೂಚಿ ಪಾಲನೆಗೆ ಸೂಚನೆ

    ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಆದಾಗ್ಯೂ, ಪ್ರಪಂಚದ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಮುಂಬರುವ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ, ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು, ಜಿಲ್ಲೆಯ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ, ಪೂರ್ವಭಾವಿಯಾಗಿ ಸಾರ್ವಜನಿಕರು ಈ ಕ್ರಮಗಳನ್ನು ಪಾಲಿಸುವುದು ಅವಶ್ಯವಾಗಿದೆ. ಮುಚ್ಚಿದ ಸಂರಕ್ಷಣೆಗಳಾದ  (closed spaces) ಪಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಛೇರಿಗಳು…

  • ಸುದ್ದಿ

    ಆರ್ಥಿಕವಾಗಿ ಕುಸಿಯುತ್ತಿರುವ ಪಾಕ್ ಗೆ ಎಫ್‍ಎಟಿಎಫ್‍ನಿಂದ ಕೊನೆಯ ಎಚ್ಚರಿಕೆ

    ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಎಟಿಎಫ್) ಎಚ್ಚರಿಕೆ ನೀಡಿದೆ.ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್‍ಎಟಿಎಫ್) ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಪ್ರಸ್ತುತವಾಗಿ ಎಫ್‍ಎಟಿಎಫ್ ಅಲ್ಲಿ…