ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಮ್ಮೆ ಜಪಾನಿನ ಫುಕವೋಕಾ ಎನ್ನುವ ಊರಿನಲ್ಲಿ ನಾಲ್ಕು ರಸ್ತೆ ಕೂಡುವ ಸರ್ಕಲ್ ಕೂಡು ರಸ್ತೆ ಕುಸಿದು ಬಿದ್ದಿತ್ತು ! 98 ಅಡಿ ಉದ್ದ, 88 ಅಡಿ ಅಗಲ ಇದ್ದ ರಸ್ತೆ ಇದ್ದಕ್ಕಿದ್ದ ಹಾಗೆ ಕುಸಿದು ಹೋಗಿತ್ತು ,ಕುಸಿದದ್ದು ಎಂದರೆ ನಮ್ಮಲ್ಲಿನಂತೆ ಸಣ್ಣದಾಗಿ ಎರಡಡಿ ಕೆಳಕ್ಕಿಳಿದಿರಲಿಲ್ಲ ಬರೊಬ್ಬರಿ 50 ಅಡಿಯಷ್ಟು ಕೆಳಗೆ ಕುಸಿದು ಹೋಗಿತ್ತು !

ಈ ಭೂಕುಸಿತವು ಅವರಿಗೇನೂ ಹೊಸದಲ್ಲ ಏಕೆಂದರೆ ಎಂತೆತಹಾ ಭೂಕಂಪಗಳನ್ನು ಎದುರಿಸಿದವರಿಗೆ ಇದಾವ ಲೆಕ್ಕ , ಆದರೆ ಈ ಭೂ ಕುಸಿತ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿತು ಏಕೆಂದರೆ ಇದಕ್ಕೂ ಮೊದಲು ಇಂತಹುದೇ ಪರಿಸ್ಥಿತಿ ವಾಸಿಂಗ್ಟನ್ನಿನಲ್ಲಿಯೂ ಎದುರಾಗಿತ್ತು !
ಆದರೆ ಜಪಾನಿನವರು ಈ ಪರಿಸ್ಥಿತಿ ಎದುರಿಸಲು ಸಿದ್ಧವಾಗಿಯೇ ಇದ್ದರೇನೋ ಎಂಬಂತೆ ಕೆಲಸ ಶುರು ಮಾಡಿಬಿಟ್ಟರು ,ಅವರು ಬೇರೆ ದೇಶಗಳಂತೆ ಕುಸಿದ ಗುಂಡಿಯ ಮುಂದೆ ಕೂತು ಸಂತಾಪ ಸೂಚಿಸುವುದೋ ಅಥವಾ ಪರಿಸ್ಥಿತಿಯ ಅವಲೋಕನ ಹಾಗೂ ನೇರ ಮಾಹಿತಿ ಸಂಗ್ರಹಣೆಗೆ ಅಧಿಕಾರಿಗಳನ್ನು ಕಳುಹಿಸಿದ್ದೇವೆ ಎಂದು ಹೇಳಲೇ ಇಲ್ಲ .

ರಸ್ತೆ ಕುಸಿದ 17 ನಿಮಿಷದ ಒಳಗೆಯೇ ಹೈವೇ ಅಥೋರಿಟಿ ಮುಖ್ಯಾಧಿಕಾರಿ ಸ್ಥಳಕ್ಕೆ ಹಾಜರಾದ ಹಾಗೂ ಆತ ಅಲ್ಲಿಗೆ ಬರುವಷ್ಟರಲ್ಲಿಯೇ ಕುಸಿತವಾದಲ್ಲಿಗೆ ಗ್ಯಾಸ್ ಪೈಪ್ ಕೆಲಸಗಾರರು.ಆಪ್ಟಿಕಲ್ ಫೈಬರ್ ಕೆಲಸಗಾರರು ,ಒಳಚರಂಡಿ ಸರಿಪಡಿಸಲು ಕೆಲಸಗಾರರು.ವಿದ್ಯುತ್ ಕೆಲಸಗಾರರು ಎಲ್ಲರೂ ಹಾಜರಿದ್ದರು .
ಮುಂದಿನ ಕೆಲವೇ ಗಂಟೆಗಳಲ್ಲಿ ವಿದ್ಯುತ್.ಗ್ಯಾಸ್.ಡ್ರೈನೇಜ್.ಓ.ಎಫ್.ಸಿ. ಎಲ್ಲವನ್ನೂ ಅಸಾಮಾನ್ಯ ವೇಗದಲ್ಲಿ ಸರಿಪಡಿಸಿಬಿಟ್ಟರು . ಅದೇ ಸಮಯದಲ್ಲಿಯೇ ಸ್ಟೇಡಿಯಮ್ಮಿನಲ್ಲಿ ಹಾಕುವ ಫ್ಲಡ್ ಲೈಟ್ ಜೊಡಿಸುವಷ್ಟರಲ್ಲಿಯೇ ಜಪಾನಿನಲ್ಲಿಯೇ ತಯಾರಾದ ಆಧುನಿಕ ಜೆ.ಸಿ.ಬಿ ಹಾಗೂ ಟಿಲ್ಲರ್.ಟಿಪ್ಪರ್ .ಕ್ರೇನ್ ಗಳು ಹಾಜರಾದವು .

ಪ್ರತಿ ಮೂರು ಗಂಟೆಗೆ ಒಂದು ಟೀಮಿನ ಸಿಫ್ಟ್ ಬದಲಾವಣೆ ಮಾಡಲಾಗುತ್ತಿತ್ತು ! ಒಂದೇ ಒಂದು ಕ್ಷಣವನ್ನೂ ಅವರು ಟೀ ಕುಡಿಯುತ್ತಾ ಕಳೆಯಲೇ ಇಲ್ಲ .ಕೆಲಸ ಮುಗಿಸಿಯೇ ಬಿಟ್ಟರು ! ಅದೂ ಕೇವಲ 48 ಗಂಟೆಗಳ ಒಳಗೆಯೇ ರೋಡಿಗೆ ಟಾರು ಬಳಿದು.ಅಲ್ಲಲ್ಲಿ ಬಿಳಿ ನಾಮಗಳನ್ನೆಲ್ಲಾ ಹಚ್ಚಿ ಇಲ್ಲಿ ಈ ಮೊದಲು ಏನೂ ಆಗಿಯೇ ಇರಲಿಲ್ಲವೇನೋ ಎಂಬಂತೆ ಮನೆ ಕಡೆ ಹೊರಟರು.

ಸೈನಿಕರ ಕಾರ್ಯಾಚರಣೆಯಂತೆ ಹಗಲೂರಾತ್ರಿ ನೆಡೆದ ಆ ಕಾಮಗಾರಿ ಪ್ರಪಂಚದ ಹಲವು ಎಂಜನೀಯರುಗಳು ಆಶ್ಚರ್ಯಚಕಿತರಾಗುವಂತೆ ಮಾಡಿತು.ಈಗಲೂ ಸಹ ಹಲವು ವೆಬಸೈಟುಗಳು ಈ ಕೆಲಸಕ್ಕೆ 7 ದಿನ ತೆಗೆದುಕೊಂಡರು ಅಂತ ಬಡಕೊಳ್ಳುತ್ತಿದ್ದಾರೆ ಆದರೆ ಜಪಾನ್ ದೇಶದ ವೇಬಸೈಟುಗಳಲ್ಲಿ ಮಾತ್ರ ಅಧಿಕೃತ ಮಾಹಿತಿ ದೊರಕುತ್ತದೆ !
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ನವಂಬರ್ 1 ರಂದು ತೆರೆಕಾಣಲಿದೆ ಎನ್ನಲಾಗಿದೆ. ಹಿರಿಯ ನಟ ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿ 50 ವರ್ಷಗಳಾಗಿವೆ. ಡಾ. ರಾಜ್ ಕುಮಾರ್ ಅಭಿನಯದ ‘ಮೇಯರ್ ಮುತ್ತಣ್ಣ’ ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಣ ಸಂಸ್ಥೆ ಆರಂಭಿಸಿದ ದ್ವಾರಕೀಶ್ ಈಗ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ ನಿರ್ಮಾಣ ಮಾಡಿದ್ದಾರೆ. ನಾಯಕಿಯರಾಗಿ ರಚಿತರಾಮ್, ನಿಧಿ ಸುಬ್ಬಯ್ಯ ಮೊದಲಾದವರು ಅಭಿನಯಿಸಿರುವ ‘ಆಯುಷ್ಮಾನ್ ಭವ’ ಚಿತ್ರವನ್ನು ಪಿ. ವಾಸು ನಿರ್ದೇಶಿಸಿದ್ದಾರೆ….
ಬಿ. ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರ 100 ದಿನಗಳನ್ನು ಪೂರೈಸಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ನೂರು ಪುಟಗಳ ಪುಸ್ತಕವನ್ನು ನವೆಂಬರ್ 5ರಂದು ಬಿಡುಗಡೆ ಮಾಡಲಾಗುತ್ತದೆ. ಮಂಗಳವಾರ ಯಡಿಯೂರಪ್ಪ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ನೂರು ದಿನಗಳ ಸಾಧನೆ ಕುರಿತ ‘100 ದಿನ 100 ಸಾಧನೆ’ ಎಂಬ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಬಳಿಕ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ನವೆಂಬರ್ 2ರಂದು ಯಡಿಯೂರಪ್ಪ ಸರ್ಕಾರ ನೂರು ದಿನಗಳನ್ನು ಪೂರೈಸಿದೆ. ನವೆಂಬರ್ 11ರಂದು 15ಕ್ಷೇತ್ರಗಳ ಉಪ ಚುನಾವಣೆ ನೀತಿ…
ಮಕ್ಕಳು ಸತತವಾಗಿ ಸ್ಮಾರ್ಟ್ ಫೋನ್ ಮತ್ತು ಟಿವಿ ವೀಕ್ಷಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವಿದೆಯೇ…
ಮನುಧ್ಯನಿಗೆ ಆರೋಗ್ಯವೇ ಮಹಾ ಭಾಗ್ಯ ಎಂದು ಹೇಳಲಾಗುತ್ತೆ. ಆದ್ರೆ ಅಂತಹ ಆರೋಗ್ಯದ ಬಗ್ಗೆ ನಾವು ನಿರ್ಲಕ್ಷ್ಯ ಮಾಡಲೇಬಾರದು.ಅದರಲ್ಲೂ ಕೆಲವೊಂದು ಕಾಯಿಲೆಗಳ ಬಗ್ಗೆ ಎಚ್ಚರಿಕೆ ಇರಲೇಬೇಕು.ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರಕೆ ಇಂದ ಇರಲೇ ಬೇಕು. ಆದರೆ ಅನೇಕರಿಗೆ ಯಾವುದೇ ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಆದ ಕೂಡಲೇ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಗಾಬರಿಯಿಂದ ಮಾಡಲು ಹೋಗುವುದಿಲ್ಲ.ಆದರೆ ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. *ಹಾರ್ಟ್…
ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಆಗುತ್ತೋ ಗೊತ್ತಿಲ್ಲ.ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟ ಎಂದು ಹೇಳುವ ಮಾತನ್ನ ಕೇಳಿರುತ್ತೇವೆ. ಹಾರ್ಟ್ ಅಟ್ಯಾಕ್ ಆಗುವುದೇ ಹಾಗೆ.
ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ 1ರಂದು ಜಿಯೋ ತನ್ನ ಫೀಚರ್ ಫೋನ್ ಡಿಲೆವರಿ ಶುರು ಮಾಡಲಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು.