ಆಟೋಮೊಬೈಲ್ಸ್

ಬೈಕ್‌ಗಳ ಮಹಾರಾಜ ರಾಯಲ್ ಎನ್‌ಫೀಲ್ಡ್’ಗೆ ಗೇಲಿ ಮಾಡಿ ಟಾಂಗ್ ಕೊಟ್ಟ, ಬಜಾಜ್ ಡೊಮಿನರ್!

1297

ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್‌, ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ಇದರ ಹೆಸರು ಕೇಳಿದ್ರೆ ಸಾಕು, ಮೈ ಜುಮ್ಮೆನ್ನುತ್ತಿತ್ತು. ಯಾಕೆಂದ್ರೆ ಈ ಬೈಕ್’ನ್ನು ಒಮ್ಮೆ ಆದ್ರೂ ಓಡಿಸಬೇಕು ಅಂತ ಮನಸ್ಸಿಗೂ ಬಂದ್ರೂ, ಸಾಮಾನ್ಯ ಜನರ ಕೈಗೆ ಇದು ಎಟುಕುತ್ತಿರಲಿಲ್ಲ.

ಆದ್ರೆ ಈಗ ಆಗಿಲ್ಲ. ಎಲ್ಲಿ ನೋಡಿದ್ರು ನಮಗೆ ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್‌ ನಮ್ಗೆ ಕಣ್ಣಿಗೆ ಕಾಣಲು ಸಿಗುತ್ತದೆ.
ಭಾರತೀಯ ದ್ವಿಚಕ್ರ ವಾಹನ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆಯ ಬ್ರಾಂಡ್‌ಗಳಲ್ಲಿ ರಾಯಲ್ ಎನ್‌ಫೀಲ್ಡ್ ಒಂದಾಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್’ನ್ನು ಗೇಲಿ ಮಾಡಿದ ಬಜಾಜ್ ಆಟೋ:-

ಆದ್ರೆ ಅಂತಹ ಬೈಕ್‌ಗಳ ರಾಜ, ರಾಯಲ್ ಎನ್‌ಫೀಲ್ಡ್ ಬೈಕ್’ನ್ನು ಗೇಲಿ ಮಾಡಿ ಭಾರತದ ಮತ್ತೊಂದು ಮುಂಚೂಣಿಯ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆ ಬಜಾಜ್ ಆಟೋ ಅತಿ ನೂತನ ಡೊಮಿನರ್ ಜಾಹೀರಾತನ್ನು ಹೊರಗೆಡವಿದೆ.

ನೂತನ ಬಜಾಜ್ ಡೊಮಿನರ್ 400 ಸಿಸಿ ಬೈಕ್ ಹೊರಬಂದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳು, ವಾದ ವಿವಾದಗಳು ಎದುರಾಗುತ್ತಿದೆ. ಐಕಾನಿಕ್ ಎನ್‌ಫೀಲ್ಡ್ ಬೈಕ್‌ಗಳಿಗೆ ಸೆಡ್ಡು ನೀಡುವಷ್ಟು ಬಜಾಜ್ ಬೆಳೆದಿದೆಯೇ ಎಂಬುದು ಕಟ್ಟಾ ಎನ್‌ಫೀಲ್ಡ್ ಬೈಕ್ ಪ್ರೇಮಿಗಳ ಅಭಿಪ್ರಾಯವಾಗಿದೆ.

‘ಹೈಪರ್ ರೈಡಿಂಗ್’ ಎಂಬ ಥೀಮ್ ಇಟ್ಟುಕೊಂಡು ಘಾಟಿ ಪ್ರದೇಶದ ರಸ್ತೆಯಲ್ಲಿ ಇಕ್ಕಟ್ಟಾದ ತಿರುವುಗಳಲ್ಲೂ ಡೊಮಿನರ್ ಸ್ಥಿರತೆಯನ್ನು ಪ್ರಮುಖವಾಗಿಯೂ ಉಲ್ಲೇಖಿಸಲಾಗಿದೆ.

ಬಜಾಜ್ ಆಟೋದಿಂದ ರಾಯಲ್ ಎನ್‌ಫೀಲ್ಡ್ ಬೈಕ್’ನ ವ್ಯಂಗ್ಯ :-

ಬಹು ದೀರ್ಘ ಕಾಲದ ಇತಿಹಾಸವನ್ನು ಹೊಂದಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಶಬ್ದವನ್ನು ಇಲ್ಲಿ ವ್ಯಂಗ್ಯ ಮಾಡಲಾಗಿದೆ. ಇಲ್ಲಿ ಎನ್‌ಫೀಲ್ಡ್ ಬೈಕ್‌ಗಳನ್ನು ನಿಧಾನವಾಗಿ ಚಲಿಸುವ ಆನೆಗಳ ಹಿಂಡಿನ ಜೊತೆ ಹೋಲಿಸಲಾಗಿದೆ.

ಹಾಗೆಯೇ ಸಿಂಹವನ್ನು ಹೋಲುವ ಡೊಮಿನರ್‌ಗಳ ಮುಂದೆ ಇವೆಲ್ಲವೂ ಲೆಕ್ಕಕ್ಕಿಲ್ಲ ಎಂಬುದನ್ನು ಬಿಂಬಿಸಲಾಗಿದೆ.

ಡೊಮಿನರ್‌ನಿಂದ ಅಪಹಾಸ್ಯ :-

ರಾಯಲ್ ಎನ್‌ಫೀಲ್ಡ್ ಬೈಕ್ ಓಡಿಸುವ ಸವಾರರು ಗಡ್ಡ ಬಿಟ್ಟುಕೊಂಡು ವಿಶೇಷ ರೈಡಿಂಗ್ ಗೇರ್‌ನೊಂದಿಗೆ ಮಿಂಚುತ್ತಾರೆ. ಇವೆಲ್ಲವೂ ಡೊಮಿನರ್‌ನಿಂದ ಅಪಹಾಸ್ಯಕ್ಕೊಳಕ್ಕಾಗಿದೆ.

ಅಷ್ಟಕ್ಕೂ ಆಧುನಿಕ ದೀರ್ಘ ದೂರದ ಪ್ರಯಾಣವನ್ನು ಪರಿಷ್ಕರಿಸಲು ಡೊಮಿನರ್‌ನಿಂದ ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ. ಸದ್ಯಕ್ಕೆ ಡೊಮಿನರ್ ಬೈಕ್‌ನಲ್ಲಿ ಅಂತದ್ದೇನಿದೆ ಎಂಬುದನ್ನು ತಿಳಿದುಕೊಳ್ಳೋಣವೇ…

ಎನ್‌ಫೀಲ್ಡ್ ಬೈಕ್’ನ್ನು  ಇಷ್ಟೆಲ್ಲಾ ಅಪಹಾಸ್ಯ ಮಾಡುತ್ತಿರುವ ಡೊಮಿನರ್ ಬೈಕ್‌ನಲ್ಲಿ ಅಂತದ್ದೇನಿದೆ ಗೊತ್ತಾ?  (ಫೀಚರ್)

ಡೊಮಿನೇಟಿಂಗ್ ಸಾನಿಧ್ಯ (ಪ್ರಾಬಲ್ಯ):
ಸಿಂಹ ಸಾನಿಧ್ಯವೇ ಪ್ರೇರಣೆ,
43ಎಂಎಂ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್,

ಹ್ಯಾಂಡ್ಲಿಂಗ್ ಮತ್ತು ಕಂಟ್ರೋಲ್:
ವೈಡ್ ಮತ್ತು ತಳಮಟ್ಟದ ರೇಡಿಯಲ್ ಚಕ್ರಗಳು,
ಗರಿಷ್ಠ ವೇಗದಲ್ಲೂ ಸೂಪರ್ ಗ್ರಿಪ್,
ಸ್ಟ್ಯಾಂಪ್ಡ್ ಮೆಟಲ್ ಸ್ವಿಂಗ್ ಆರ್ಮ್,
ಬೀಮ್ ವಿಧದ ಪೆರಿಮೀಟರ್ ಫ್ರೇಮ್,

ಎಂಜಿನ್: 373 ಸಿಸಿ ಫ್ಲ್ಯೂಯಲ್ ಇಂಜೆಕ್ಟಡ್ ಟ್ರಿಪಲ್ ಸ್ಪಾರ್ಕ್ 4 ವಾಲ್ವ್ ಡಿಟಿಎಸ್-ಐ ಎಂಜಿನ್,
ಪವರ್: 35PS, 35Nm torque,
ವೇಗತೆ: 8.23 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗ
ಗೇರ್ ಬಾಕ್ಸ್: 6 ಸ್ಪೀಡ್, ಸ್ಲಿಪರ್ ಕ್ಲಚ್
ಇಂಧನ ಟ್ಯಾಂಕ್: 13 ಲೀಟರ್,
ಭಾರ: 182 ಕೆ.ಜಿ
ಚಂಕ್ರಾಂತರ: 1453 ಎಂಎಂ
ಗ್ರೌಂಡ್ ಕ್ಲಿಯರನ್ಸ್: 157 ಎಂಎಂ

ಉಬೆರ್ ರೆಸ್ಪಾನ್ಸಿವ್ ಬ್ರೇಕಿಂಗ್:
ಟ್ವಿನ್ ಚಾನೆಲ್ ಎಬಿಎಸ್,
ದೊಡ್ಡದಾದ 320ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್,

ಸಂಪೂರ್ಣ ಎಲ್‌ಇಡಿ ಹೆಡ್‌ಲ್ಯಾಂಪ್,
ಆಟೋ ಹೆಡ್‌ಲ್ಯಾಂಪ್ ಆನ್,
ವಿಭಜಿತ ರಿವೆರ್ಸ್ ಎಲ್‌ಸಿಡಿ ಡಿಸ್‌ಪ್ಲೇ,

ಬಣ್ಣಗಳು: ಮಿಡ್ ನೈಟ್ ಬ್ಲೂ, ಟ್ವಿಲೈಟ್ ಪ್ಲಮ್, ಮೂನ್ ವೈಟ್.

ಮೂಲ:ಮಾಹಿತಿ ಸಂಗ್ರಹ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ಗೂಗಲ್ ಪೇ’ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ!..ನೀವು ಬಳಸುತ್ತಿದ್ದಿರಾ ಅಗಾದರೆ ಇದನ್ನು ಓದಿ…

    ಭಾರತದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಡಿಜಿಟಲ್ ವಾಲೆಟ್ ಮತ್ತು ಜನಪ್ರಿಯ ಆನ್‌ಲೈನ್ ಪಾವತಿ ವ್ಯವಸ್ಥೆ ‘ಗೂಗಲ್ ಪೇ’ ಅಪ್ಲಿಕೇಶನ್‌ಗೆ ಇದೀಗ ಬಯೋಮೆಟ್ರಿಕ್ ಭದ್ರತೆಯನ್ನು ಪರಿಚಯಿಸಲಾಗಿದೆ. ಆಂಡ್ರಾಯ್ಡ್ 10 ನೊಂದಿಗೆ ಗೂಗಲ್ ಪರಿಚಯಿಸಿದ ಬಯೋಮೆಟ್ರಿಕ್ ಭದ್ರತೆ ವೈಶಿಷ್ಟ್ಯವನ್ನು ಗೂಗಲ್ ಪೇ ಅಪ್ಲಿಕೇಶನ್‌ನ ಇತ್ತೀಚಿನ 2.100 ಆವೃತ್ತಿಯಲ್ಲಿ ತರಲಾಗಿದ್ದು, ಇದು ಫಿಂಗರ್‌ಪ್ರಿಂಟ್ ಮತ್ತು ಮುಖ ಗುರುತಿಸುವಿಕೆ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಆನ್‌ಲೈನ್ ವಹಿವಾಟುಗಳನ್ನು ರಕ್ಷಿಸಲು ಅನುವು ಮಾಡಿಕೊಡಲಿದೆ. ಗೂಗಲ್ ಪೇ ಅಪ್ಲಿಕೇಶನ್‌ ಬಳಕೆದಾರರು ಈ ಹಿಂದೆ ತಮ್ಮ ವಹಿವಾಟುಗಳನ್ನು ಭದ್ರಪಡಿಸಿಕೊಳ್ಳಲು…

  • ಸುದ್ದಿ

    ಅಧಿಕಾರಿಗಳಿಗೆ ತಲೆನೋವು ತಂದ ಯಡಿಯೂರಪ್ಪನ ಆದೇಶ, ಇಷ್ಟಕ್ಕೂ ಆ ಆದೇಶವಾದರೂ ಏನು? ತಿಳಿಯಿರಿ,.!

    ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಐಟಿ ಕಾರಿಡಾರ್‌ನಲ್ಲಿ ಮೊದಲು ಮೆಟ್ರೋ ಮುಗಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಸಿಎಂ ಮುಂದೆ ತಲೆಯಾಡಿಸಿ ಬಂದಿರೋ ಅಧಿಕಾರಿಗಳು, ಈಗ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರೋ ಸಿಎಂ ಯಡಿಯೂರಪ್ಪ, ನಗರಕ್ಕೆ ಸಂಬಂಧಿಸಿದ ಒಂದೊಂದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸ್ತಿದ್ದಾರೆ. ಇದೇ ರೀತಿ BMRCL ಸಭೆ ನಡೆಸಿದಾಗ ಮೆಟ್ರೋ ಎರಡನೇ ಹಂತದ ಪ್ರಗತಿಗೆ ಸಿಎಂ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ….

  • ರಾಜಕೀಯ

    5 ಬಾರಿ ಶಾಸಕರಾಗಿ ಗೆದ್ದ ಇವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಈ ವ್ಯಕ್ತಿಯಿಂದ ರಾಜಕೀಯ ನಾಯಕರು ಕಲಿಯಬೇಕು

    ಗುಮ್ಮಡಿ ನರಸಯ್ಯ ಎಂಬ ವ್ಯಕ್ತಿ ನಮ್ಮ ಭಾರತ ದೇಶದಲ್ಲಿ ಒಬ್ಬರು ಒಮ್ಮೆ ರಾಜಕೀಯಕ್ಕೆ ಬಂದರೆ ಒಮ್ಮೆ ಗೆದ್ದ ನಂತರ ಮತ್ತೆ ಗೆಲ್ಲುತ್ತಾರೆ ಎಂಬ ನಂಬಿಕೆ ಇರುವುದಿಲ್ಲ. ಆದರೆ ರಾಜಕೀಯದಲ್ಲಿ ಕೆಲವರ ಅದೃಷ್ಟ ಚೆನ್ನಾಗಿದೆ. ಹೌದು.. ರಾಜಕೀಯ ಕ್ಷೇತ್ರದಲ್ಲಿ ಶಾಸಕರಾದರೆ ಮತ್ತೆ ಮತ್ತೆ ಎಂಎಲ್ ಎ ಆಗುತ್ತಾರೆ.

  • ಸಂಬಂಧ

    ಈ ಲೇಖನವನ್ನು ವಿಶೇಷವಾಗಿ ಗಂಡು ಮಕ್ಕಳು ಓದಲೇಬೇಕು..!ನಿಮಗೆ ಈ ಲೇಖನ ಇಷ್ಟ ಆದ್ರೆ ಮರೆಯದೇ ಶೇರ್ ಮಾಡಿ..

    ಒಂದು ದಿನ ರಾತ್ರಿ ಗಂಡ ಮತ್ತು ಹೆಂಡತಿಯರಲ್ಲಿ ಒಂದು ಪಂದ್ಯವನ್ನ ಹಾಕಿಕೊಂಡರು. ಅದು ಏನೆಂದರೆ ಇವತ್ತು ಯಾರೇ ಬಾಗಿಲು ತಟ್ಟಿದರೂ ಬಾಗಿಲು ತೆಗೆಯ ಬಾರದು ಎಂದು. ಮೂಲ ಪಂದ್ಯಕ್ಕೆ ಹೆಂಡತಿ ಒಪ್ಪಿಕೊಂಡಳು. ಅದರಂತೆಯೆ ಕೋಣೆಯ ಬಾಗಿಲು ಮುಚ್ಚಿಟ್ಟು ಇಬ್ಬರು ನಿಶ್ಯಬ್ದವಾಗಿ ಕುಳಿತಿದ್ದರು. ಮೂಲ ಮೊದಲು ಗಂಡನ ಅಪ್ಪ ಮತ್ತು ಅಮ್ಮ ಬಂದು ಬಾಗಿಲನ್ನು ತಟ್ಟಿದರು.ಗಂಡ ಬಾಗಿಲನ್ನ ತೆಗೆಯಲು ಎದ್ದನು, ಅಷ್ಟರಲ್ಲಿ ಪಂದ್ಯ ನೆನಪಿಗೆ ಬಂದು ಕುಳಿತು ಬಿಟ್ಟ.ಅವರು ಸ್ವಲ್ಪ ಸಮಯ ಬಾಗಿಲನ್ನ ತಟ್ಟಿ ಶಬ್ದ ಕೇಳಿಸದೆ ಹೋದಾಗ…

  • ಆಧ್ಯಾತ್ಮ, ಜ್ಯೋತಿಷ್ಯ

    ಶ್ರೀ ಚಕ್ರ ಆರಾಧಿಸಿದರೆ ಸಿಗುವ ಫಲ!!

    ಶ್ರೀ ಚಕ್ರದೇವತೆಯು ಸತ್ಯ ಸ್ವರೂಪಳೂ, ಸಕಲಾಧಾರರೂಪಳೂ, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು, ಮಹಾಲಕ್ಷೀ, ಮಹಾಕಾಳಿ, ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯೂ ಆಗಿರುತ್ತಾಳೆ. ಭವಬಂಧನದಿಂದ ಮುಕ್ತಿಪಥವ ತೋರುವುದು ಈಕೆಯೇ. ಶ್ರೀ ಚಕ್ರವು ದುಷ್ಟಶಕ್ತಿಗಳನ್ನು ತಡೆಗಟ್ಟುವವಳು, ಇದು ಚಕ್ರರಾಜ ಎನಿಸಿಕೊಂಡು ಮಹಾಪುರುಷರಿಂದ ಸೇವಿಸಲ್ಪಟ್ಟು ಐಶ್ವರ್ಯ, ಸುಖ, ಶಾಂತಿ, ಸಂಪತ್ತುಗಳನ್ನು ನೀಡಿದೆ. ”ಶ್ರೀ” ಎಂದರೆ ಶ್ರೀಹರಿಯ ಸ್ವರೂಪ. ಇನ್ನು “ಚಕ್ರ” ಎಂದರೆ ಲೋಕವನ್ನು ದುಷ್ಟರಿಂದ ರಕ್ಷಿಸಿ, ಶಿಷ್ಟರ ಪರಿಪಾಲನೆ ಮಾಡುತಾ ನಮ್ಮನ್ನು ಪ್ರಕೃತಿಯ ನಿಯಮದಂತೆ ನಡೆಸುತಾ ನಮ್ಮಲ್ಲಿರುವ ಸತ್ವಗುಣಗಳನ್ನು ಪರಮಾತ್ಮನಿಗೆ ಸೇವೆ ಮಾಡುವಂತಹುದ್ದೇ…

  • ಆರೋಗ್ಯ, ಉಪಯುಕ್ತ ಮಾಹಿತಿ, ಜೀವನಶೈಲಿ

    ನಿಂತ್ಕೊಂಡು ನೀರು ಕುಡಿದ್ರೆ, ಏನಾಗುತ್ತೆ ಗೊತ್ತಾ??? ಮುಂದೆ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ನಿಂತ್ಕೊಂಡು ನೀರು ಕುಡಿತೀರಾ, ಹಾಗಾದರೆ ಇಲ್ನೋಡಿ ವಿಜ್ಞಾನಿಗಳು ಹೇಳಿರೋ ಪ್ರಕಾರ , ಈ ಕಾರಣಗಳ್ನ ಓದಿದ್ರೆ ಶಾಕ್ ಆಗೋದು ಖಂಡಿತ. ಓದಿ ನೋಡಿ. ಎಷ್ಟು ನೀರು ಕುಡಿದ್ರೂ ಇನ್ನೂ ಕುಡೀತಾನೇ ಇರ್ಬೇಕು ಅನ್ಸುತ್ತೆ :- ನಿಂತು ನೀರು ಕುಡಿದ್ರೆ ಬಾಯಾರಿಕೆ ಹೋಗೋದಿಲ್ಲ. ಆಗಾಗ ನೀರು ಕುಡೀತಾನೇ ಇರ್ಬೇಕು ಅನ್ಸುತ್ತೆ. ಎಷ್ಟು ಕುಡಿದ್ರೂ ಉಪಯೋಗ ಇಲ್ಲ. ಅಜೀರ್ಣ ಆಗುತ್ತೆ :- ಕೂತು ನೀರು ಕುಡೀವಾಗ ನಿಮ್ ದೇಹ ರಿಲ್ಯಾಕ್ಸ್ ಆಗಿರುತ್ತೆ, ಆಗ ತಿಂದಿದ್ದು, ಕುಡ್ದಿದ್ದು ಸುಲಭವಾಗಿ ಜೀರ್ಣ ಆಗುತ್ತೆ….