ರಾಜಕೀಯ

ಬುದ್ದಿವಂತ ಉಪ್ಪಿಯ 24 ಅಂಶಗಳ ಈ ಸೂಪರ್ ಪ್ರಣಾಳಿಕೆಯಲ್ಲಿ ಏನೇನಿವೆ ಗೊತ್ತಾ..?ನಾನುಗೆ ನೀವೂ ಕೂಡ ಸಲಹೆ ನೀಡಲು ಇಲ್ಲಿದೆ ಮೊಬೈಲ್ ನಂಬರ್ ವಿಳಾಸ…

1895

ಚುನಾವಣೆ ಹತ್ತಿರವಾದಂತೆ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ಬಿರುಸುಗೊಂಡಿವೆ. ನಟ ಹಾಗೂ ನಿರ್ದೇಶಕ  ರಿಯಲ್​ ಸ್ಟಾರ್​ ಉಪೇಂದ್ರ ಸಾರಥ್ಯದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವು ಮೊದಲ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸಂಪೂರ್ಣ ಪಾರರ್ದಶಕ ಹಾಗೂ ಸರಳ ಆಡಳಿತ ನಡೆಸುವ ಭರವಸೆಯನ್ನು ನೀಡಿದ್ದಾರೆ.

 

24 ಅಂಶಗಳಿರುವ ಈ ಪ್ರಣಾಳಿಕೆಯಲ್ಲಿ ಸಂಪೂರ್ಣ ಪಾರದರ್ಶಕ ಆಡಳಿತ ನೀಡುವ ಬಗ್ಗೆ ಆಶ್ವಾಸನೆ ನೀಡಲಾಗಿದೆ. ಈ ಪ್ರಣಾಳಿಕೆಯನ್ನು ಸಂಪೂರ್ಣವಾಗಿ ಓದಿದ್ರೆ, ನಿಮಗೆ ಅನ್ನಿಸಬಹುದು ಇದು ಯಾವುದೋ ಫಿಲ್ಮಗೆ ಬರೆದ ಸ್ಕ್ರಿಪ್ಟ್ ನಂತೆ ಇದೆಯಲ್ಲಾ ಎಂದು. ಯಾಕೆಂದ್ರೆ ಈ ರೀತಿ ಅಂಶಗಳನ್ನು ನಾವು ಚಲನಚಿತ್ರಗಳಲ್ಲಿ ಮಾತ್ರ ನೋಡಲಿಕ್ಕೆ ಸಾದ್ಯ.ಉಪೇಂದ್ರರವರು ಗೆದ್ದು ಈ ಪ್ರನಾಳಿಕೆಯಲ್ಲಿರುವಂತೆ ಆಡಳಿತ ಮಾಡಿದ್ದೇ ಆದಲ್ಲಿ ನಮ್ಮ ರಾಜ್ಯ 2020ಗೆ “ಸೂಪರ್ ರಾಜ್ಯ” ಆಗೋದ್ರಲ್ಲಿ ಡವ್’ಟೆ ಬೇಡ…

 

ಇಲ್ಲಿವೆ ನೋಡಿ ಈ ಪ್ರಣಾಳಿಕೆಯಲ್ಲಿರುವ 24 ಅಂಶಗಳು:-

  • ಪ್ರಜೆಗಳನ್ನು ಸೇರಿಸಿಕೊಂಡು ಸಂಪೂರ್ಣ ಪಾರದರ್ಶಕ ಆಡಳಿತ ಸರಳ, ಹೊಣೆಗಾರಿಕೆಯುಳ್ಳ, ಮಿತವ್ಯಯೀ ಹಾಗೂ ಪ್ರಜೆಗಳನ್ನೊಳಗೊಂಡ ಆಡಳಿತ.
  • ಪ್ರಜೆಗಳ ನೇರ ಸಂಪರ್ಕಕ್ಕಾಗಿ ಟಿವಿ, ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವಿಟರ್, ವೆಬ್‍ಸೈಟ್, ಯುಟ್ಯೂಬ್ ಚಾನಲ್)ಮತ್ತು ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಲಾಗುವುದು.
  • ಪ್ರಜೆಗಳು ಮೊಬೈಲ್ ಅಪ್ಲಿಕೇಶನ್‍ ಮೂಲಕ ತಮ್ಮ ಕ್ಷೇತ್ರ, ಗ್ರಾಮ, ನಗರಗಳ ಸಮಸ್ಯಗಳ ಕುರಿತು ಚಿತ್ರಗಳು, ವಿಡಿಯೋ, ಲಿಖಿತ ಪತ್ರ, ಮತ್ತು ಆಡಿಯೋ ಮಾಡಿ ಆ ಕ್ಷೇತ್ರಗಳಿಗೆ ಸಂಭಂದಪಟ್ಟ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ದೂರುಗಳನ್ನು ಸಲ್ಲಿಸಬಹುದು, ಇದಕ್ಕೆ ನಿರ್ಧಿಷ್ಟ ಕಾಲಾವಧಿಯೊಳಗೆ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ಈ ದೂರು ಮೇಲ್ಮಟ್ಟದ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿಯವರೆಗೂ ವರ್ಗಾವಣೆಯಾಗುತ್ತದೆ.
  • ಸರಿಯಾದ ಸಮಯಕ್ಕೆ ಜನಗಳಿಗೆ ಸ್ಪಂದಿಸಿ ಅವರ ಸಮಸ್ಯಗಳನ್ನು ಪರಿಹರಿಸಿದಂತ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಅಂಕಗಳನ್ನು ನೀಡಲಾಗುವುದು. ಈ ಅಂಕಗಳೇ ಅವರ ಮುಂದಿನ ಚುನಾವಣೆಗೆ ಮತ್ತು ಅಧಿಕಾರಿಗಳ ಬಡ್ತಿಗೆ ಮಾನದಂಡವಾಗಲಿದೆ.
  • ಕಡಿಮೆ ಅಂಕಗಳಿಸಿದವರಿಗೆ ಶಿಸ್ತುಕ್ರಮ ಮತ್ತು ವೇತನ ಕಡಿತ ಮಾಡಲಾಗುವುದು.
  • ಪ್ರತಿ ಇಲಾಖೆಯ ನೌಕರರನ್ನು ಗುರುತಿಗೆ, ಆಯಾ ಇಲಾಖೆಗಳಿಗೆ ಸಂಬಂದಿಸಿದಂತೆ  ಸಮವಸ್ತ್ರ ಮತ್ತು ಇಲಾಖೆಯ ಬ್ಯಾಡ್ಜ್’ಗಳನ್ನು ಧರಿಸಬೇಕಾಗುತ್ತದೆ. ಪ್ರಜೆಗಳು ಇಲಾಖೆಗಳ ನೌಕರರನ್ನು ಗುರುತಿಸಲು ಇದು ಸಹಾಯವಾಗುತ್ತದೆ.
  • ಎಲ್ಲಾ ಸರ್ಕಾರಿ ಕಛೇರಿಗಳು ಹಾಗೂ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ (ರಿಜಿಸ್ಟರ್), ವೈಫೈ, ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಆಳವಡಿಸಲಾಗುತ್ತದೆ.
  • ವಿಧಾನಸೌಧದ ಕಾರ್ಯ ಚಟುವಟಿಕೆ ಪರದೆ ಮೇಲೆ ಪ್ರಸಾರ ವಿಧಾನಸೌಧದಲ್ಲಿ ನಡೆಯುವಂತಹ ಪ್ರತಿಯೊಂದು ಕಾರ್ಯ ಚಟುವಟಿಕೆ, ಯೋಜನೆಗಳು, ಕಾಮಗಾರಿಗಳು, ಚರ್ಚೆಗಳು ದೃಶ್ಯ ಮಾಧ್ಯಮಗಳ ಸಾಕ್ಷಿ & ದಾಖಲೆಗಳೊಂದಿಗೆ ದೊಡ್ಡ ಪರದೆಯ ಮೇಲೆ ಬಿತ್ತರಿಸಿ ಅದರ ಆಧಾರದ ಮೇಲೆಯೇ ಚರ್ಚೆ ನಡೆಸಬೇಕು.
  • ಮಾಧ್ಯಮಗಳಲ್ಲಿ ಎಲ್ಲ ಜನಪ್ರತಿನಿಧಿಗಳು ಹಾಗೂ ಎಲ್ಲಾ ಸರ್ಕಾರಿ ಅಧಿಕಾರಿಗಳು ಯೋಜನೆಗಳ ಅಧಿಕೃತ ದಾಖಲೆ-ಪುರಾವೆಗಳೊಂದಿಗೆ ದೃಶ್ಯ ಮಾಧ್ಯಮಗಳ ಮುಖಾಂತರ ನೇರಪ್ರಸಾರದೊಂದಿಗೆ ಅಧಿವೇಶನದಲ್ಲಿ ಭಾಗವಹಿಸಬೇಕು. ಈ ಪ್ರಕ್ರಿಯೆಗಳನ್ನು ಪ್ರಜೆಗಳು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸುವಂತೆ ಮಾಡಲಾಗುವುದು ಇದೆ ಸಮಯದಲ್ಲಿ ಪ್ರಜೆಗಳು ಸಹ ನೇರ ಚರ್ಚೆಯೊಂದಿಗೆ ಭಾಗವಹಿಸಿ ತಮ್ಮ ಸಮಸ್ಯಗಳನ್ನು ಬಗೆಹರಿಸಕೊಲ್ಲಬಹುದು.
  • ಪ್ರತಿಯೊಂದು ಸರ್ಕಾರಿ ಯೋಜನೆಗಳು ಮತ್ತು ಅದರ ಪ್ರತಿಯೊಂದು ಟೆಂಡರ್ ಪ್ರಕ್ರಿಯೆಗಳ ಭಾಗವಹಿಸುವಿಕೆಯು ಸಂಪೂರ್ಣವಾಗಿ ಆನ್ ಲೈನ್ ಮೂಲಕ ಮತ್ತು ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ಪಾರದರ್ಶಕವಾಗಿ ಪ್ರಸಾರ ಮಾಡಲಾಗುವುದು.
  • ಗುತ್ತಿಗೆದಾರರಿಗೆ ಕೊಡಲಾಗುವ ಯೋಜನೆಗಳ ಖರ್ಚು- ವೆಚ್ಚಗಳನ್ನು ಅಧಿಕೃತ ದೃಶ್ಯ ದಾಖಲೆಗಳ(ಬಿಲ್) ಮತ್ತು ಹಾಜರಾತಿ ವಿವರಣೆಗಳ ಆಧಾರದ ಮೇಲೆಯೇ ಕೊಡಲಾಗುವುದು. ಕಾರ್ಮಿಕರ ಹಾಜರಾತಿ ದಾಖಲೆಗಳನ್ನು ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಬಹಿರಂಗಪಡಿಸತಕ್ಕದ್ದು.
  • ಪ್ರತಿ ಕಾಮಗಾರಿಯ ಪ್ರತಿ ಹಂತವೂ ಬೆಳವಣಿಗೆಗಳ ದಾಖಲೆಗಳೊಂದಿಗೆ ಪ್ರತಿ ಹಂತಗಳ ನೇರ ಪ್ರಸಾರವನ್ನು ಪಾರದರ್ಶಕವಾಗಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ನೋಡಲು ಅವಕಾಶವಿರುತ್ತದೆ.
  • ಜನಪ್ರತಿನಿಧಿ, ನೌಕರರ ಕಾರ್ಯ ಟಿವಿಯಲ್ಲಿ ಮೊದಲೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು.
  • ತಿಂಗಳಿಗೊಮ್ಮೆ ಪ್ರಜೆಗಳು, ಜನಪ್ರತಿನಿಧಿ, ನೌಕರರ ಸಂವಾದಗಳು ಅವರವರ ಕ್ಷೇತ್ರಗಳಲ್ಲಿ ಟಿವಿ ಚಾನಲ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ದೃಶ್ಯ ದಾಖಲೆಗಳೊಂದಿಗೆ ಪ್ರಸಾರಗೊಳ್ಳುತ್ತವೆ.
  • ಸಿಎಂ, ಸಚಿವರಿಂದ ಆಗಾಗ ಪರಿಶೀಲನೆ ಮತ್ತು ಪ್ರಜೆಗಳಿಗೆ ನೇರ ಪ್ರಸಾರದ ವ್ಯವಸ್ಥೆ ಇರುತ್ತದೆ.
  • ಆಡಳಿತ ಸರ್ಕಾರವು ಯಾವುದೇ ಸರ್ಕಾರೀ ವರ್ಗಾವಣೆಗಳನ್ನು ಮಾಡುವಾಗ ಸರಿಯಾದ ಕಾರಣ, ದಾಖಲೆಗಳು ಮತ್ತು ಸಾಕ್ಷಿಗಳನ್ನು ಕೊಟ್ಟು ನೇರ ಪ್ರಸಾರದೊಂದಿಗೆ ವರ್ಗಾವಣೆಗಳನ್ನು ಮಾಡಬೇಕು.
  • ಎಲ್ಲಾ ಸರ್ಕಾರೀ ಇಲಾಖೆಗಳ ಸಂದರ್ಶನಗಳು ಹಾಗೂ ಆಯ್ಕೆಗಳ ಪ್ರಕ್ರಿಯೆಗಳು ದೃಶ್ಯ ಮಾಧ್ಯಮದಲ್ಲಿ ನೇರ ಪ್ರಸಾರ ಮಾಡಲಾಗುವುದು.
  • ತಿಂಗಳಿಗೊಮ್ಮೆ ತೆರಿಗೆ ಸಂಗ್ರಹ, ಆದಾಯ ದಾಖಲೆ ಮಾಹಿತಿಗಳನ್ನು ಸಾರ್ವಜನಿಕರಿಗೆ ತೆರೆದಿಡಲಾಗುವುದು.
  • ಮಾಹಿತಿ ಕೊಟ್ಟರೆ ಮಾತ್ರ ಚುನಾಯಿತ ಜನಪ್ರತಿನಿಧಿಗೆ ವೇತನಗಳು, ಸೌಲಭ್ಯಗಳು ದೊರೆಯುತ್ತದೆ.
  • ಪ್ರಜೆಗಳು ಗ್ಯಾಸ್ ಸಬ್ಸಿಡಿ ಬಿಟ್ಟು ಕೊಡುವಂತೆ, ಮಾಜಿ ಜನಪ್ರತಿನಿಧಿ, ನೌಕರರು ಪಿಂಚಣಿಗಳನ್ನು ಬಿಡಬಹುದು.
  • ಸ್ವಯಂಪ್ರೇರಿತರಾಗಿ ಬಿಟ್ಟುಕೊಟ್ಟ ಪಿಂಚಣಿ ಹಣದಿಂದ, ವೃದ್ಧಾಶ್ರಮ, ವಸತಿರಹಿತರ ಅಭಿವೃಧ್ಧಿ ಮಾಡಲಾಗುವುದು.
  • ಎಲ್ಲಾ ಸರ್ಕಾರಿ ಯೋಜನೆಗಳು ಸಂಪೂರ್ಣಗೊಂಡು ಸಂಬಂಧಪಟ್ಟ ಅಧಿಕಾರಿಗಳ ಪರೀಕ್ಷೆ-ಅನುಮತಿ ನಂತರ ಸಾರ್ವಜನಿಕರ ಬಳಕೆಗೆ ನೇರವಾಗಿ ತೆರೆದಿಡಲಾಗುವುದು. ಯಾವುದೇ ರೀತಿಯ ಲೋಕಾರ್ಪಣಾ ಸಮಾರಂಭ, ಸಂಭ್ರಮ, ಉದ್ಗಾಟನೆಗಳನ್ನು ನಡೆಸುವುದು ಹಾಗೂ ಜನಪ್ರತಿನಿಧಿಗಳು/ ಅಧಿಕಾರಿಗಳು ಭಾಗವಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗುತ್ತದೆ.
  • ಶಾಸಕಾಂಗ ವೇತನ, ಪಿಂಚಣಿ & ಭತ್ಯೆ ಕಾಯ್ದೆ 1952ರ ಕಾನೂನು ತಿದ್ದುಪಡಿ ಮಾಡಲಾಗುವುದು.
  • ಮೇಲ್ಕಂಡ ಪ್ರಣಾಳಿಕೆ ಅಂಶಗಳನ್ನು ಜಾರಿಗೆ ತರಲು ಅಗತ್ಯ ಕಾನೂನು ಜಾರಿ ಮಾಡಲಾಗುವುದು.

ಇಲ್ಲಿ ಓದಿ:-ಆಟೋ ಚಾಲಕನಿಂದ ಬುದ್ದಿವಂತನಿಗೆ ಬಂದ ಆ ಪತ್ರದಲ್ಲಿ, ಇದ್ದ ಅಸಲಿ ವಿಷಯ ಏನು ಗೊತ್ತಾ..?ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

ನೀವೂ ಸಲಹೆ ನೀಡಬಹುದು:-

ಇದು ಮೊದಲನೆ ಭಾಗವಾಗಿದ್ದು, ಪಕ್ಷದ ಪ್ರಣಾಳಿಕೆ ಕುರಿತು ಸಾರ್ವಜನಿಕರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಪರಿಗಣಿಸಿ ಅಂತಿಮ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಉಪೇಂದ್ರರವರು ಹೇಳಿದ್ದಾರೆ.

ಪ್ರಣಾಳಿಕೆಗೆ ಸಲಹೆ ಮತ್ತು ಅಭಿಪ್ರಾಯ ನೀಡಲು ಮೊಬೈಲ್‌- 9845396204, 9845396804 ಮತ್ತು ideaskpjpuppi@ gmail.com

 

 

 

 

 

 

 

 

 

 

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ: ತಿಂಗಳಿಗೆ 55 ಹೂಡಿಕೆ ಮಾಡಿ ಮಾಸಿಕ ಪಿಂಚಣಿ 3000 ಪಡೆಯುವುದು ಹೇಗೆ…?

    ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಬಿಜೆಪಿ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ ನಲ್ಲಿ ಪಿಯೂಷ್ ಗೋಯಲ್ ಪ್ರಧಾನ ಮಂತ್ರಿ ಶ್ರಮ ಮಾನ್ ಧನ್ ಯೋಜನೆ ಘೋಷಿಸಿದ್ದಾರೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದ್ದು, ನಿರ್ದಿಷ್ಟ ವಯಸ್ಸು ತಲುಪಿದ ನಂತರ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರಕಾರ ಪಿಂಚಣಿ ನೀಡುತ್ತದೆ. ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ ಧನ್ ಯೋಜನೆಯನ್ನು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್ಐಸಿ) ಮೂಲಕ ಜಾರಿಗೆ ತರಲಾಗುತ್ತಿದೆ. ಐಆರ್ಡಿಎಐ…

  • ಆರೋಗ್ಯ, ಉಪಯುಕ್ತ ಮಾಹಿತಿ

    ನಿಂಬೆ ರಸಕ್ಕೆಅರಿಶಿನ ಬೆರೆಸಿ ಕುಡಿಯುವುದರಿಂದ ಆಗುವ 9 ಅದ್ಬುತ ಲಾಭಗಳು..!

    ನಿಂಬೆ ಹಣ್ಣಿನ ರಸಕ್ಕೆ ಬಿಸಿ ನೀರು ಸೇರಿಸಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುವುದಿಲ್ಲ. ಇದು ನಮ್ಮ ದೇಹದಲ್ಲಿರುವ ವಿಷಯುಕ್ತ ಪದಾರ್ಥವನ್ನು ಹೊರಹಾಕುತ್ತದೆ. ಈ ನಿಂಬೆ ನೀರಿಗೆ ಒಂದು ಚಿಟಕಿ ಅರಿಶಿನ ಬೆರೆಸಿ ಕುಡಿಯುವುದರಿಂದ ದುಪ್ಪಟ್ಟು ಲಾಭವಾಗುತ್ತದೆ. ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದ್ದರೆ ಅರಿಶಿನದಲ್ಲಿ ಕರ್ಕ್ಯುಮಿನ್ ಅಂಶವಿರುತ್ತದೆ. ಇವೆರಡೂ ನಮ್ಮ ದೇಹ ಸೇರುವುದರಿಂದ ಸಾಕಷ್ಟು ಲಾಭವಾಗುತ್ತದೆ. 1.ನಿಂಬೆ ರಸಕ್ಕೆ ಅರಿಶಿನ ಬೆರೆಸಿ ಕುಡಿಯುವುದರಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಕಡಿಮೆಯಾಗುತ್ತದೆ. 2.ಹೃದಯ ಸಂಬಂಧಿ ಖಾಯಿಲೆಗೆ ಇದು ಹೇಳಿ ಮಾಡಿಸಿದ…

  • ಚುನಾವಣೆ

    ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣ ಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು…

  • ರೆಸಿಪಿ

    ಒಮ್ಮೆ ಈ ರೀತಿ ಮಾಡಿ ನೋಡಿ ರುಚಿಯಾದ ಮೆಂತೆ ಸೊಪ್ಪಿನ ದೋಸೆ.

    ಮೆಂತ್ಯ ಸೊಪ್ಪಿನ ದೋಸೆ.ಈ ದೋಸೆ ಮಾಡಲು ಮೊದಲು ಮಾಮೂಲಿ ದೋಸೆ ಹಿಟ್ಟು ತಯಾರಿಸ ಬೇಕು.ನಂತರ ಈ ಹಿಟ್ಟಿಗೆ ಮೆಂತೆ ಸೊಪ್ಪಿನ ರುಬ್ಬಿದ ಮಸಾಲೆ ಮಿಶ್ರಣ ವನ್ನು ಎಷ್ಟು ಬೇಕೋ ಅಷ್ಟು ಸೇರಿಸಿ ದೋಸೆ ಮಾಡಬೇಕು. ದೋಸೆ ಹಿಟ್ಟು ಮಾಡಲು ಬೇಕಗುವ ಪದಾರ್ಥಗಳು. ದೋಸೆ ಅಕ್ಕಿ ಒಂದು ಬಟ್ಟಲು, ಉದ್ದಿನ ಬೇಳೆ ಕಾಲು ಬಟ್ಟಲು, ಮೆಂತ್ಯ ಕಾಳು ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ದೋಸೆ ಕಾಯಿಸಲು ಬೇಕಾಗುವಷ್ಟು.ಮಾಡುವ ವಿಧಾನ. ದೋಸೆ ಅಕ್ಕಿ . ಉದ್ದಿನ…

  • ಉಪಯುಕ್ತ ಮಾಹಿತಿ

    ಮಲಗುವ ರೀತಿ ನೋಡಿ ನಿಮ್ಮ ಗುಣಗಳನ್ನು ತಿಳಿಯಬಹುದು..!ಹೇಗೆ ಗೊತ್ತಾ..?

    ನಿದ್ರಾಭಂಗಿಗಳೂ ನಮ್ಮ ಗುಣಗಳನ್ನು ಹೇಳಬಲ್ಲವು. ಇಂಗ್ಲೆಂಡಿನ ಸ್ಲೀಪ್ ಅಡ್ವೈಸರಿ ಸರ್ವಿಸ್, ಸರ್ವೆ ಮೂಲಕ ಒಟ್ಟಾರೆ 6 ಸಾಮಾನ್ಯ ನಿದ್ರಾಭಂಗಿಗಳನ್ನು ಗುರುತಿಸಿದೆ. ಅದರಂತೆ ಅವರವರ ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡುತ್ತಾ ಹೋಗಿದೆ. ಒಬ್ಬ ವ್ಯಕ್ತಿ 55 ನಿಮಿಷಕ್ಕೂ ಅಧಿಕ ಕಾಲ ಒಂದೇ ಭಂಗಿಯಲ್ಲಿ ಮಲಗಿದರೆ, ಅದು ಅವರ ನಿದ್ರಾಭಂಗಿ ಎನಿಸಿಕೊಳ್ಳುತ್ತದೆ. 1.ಮಗುಚಿ ಮಲಗುವುದು:- ದೇಹವನ್ನು ಕೆಳಮುಖವಾಗಿಸಿ ಮಲಗುವವರು ಶುದ್ಧ ಸೋಮಾರಿಗಳು, ರಸಿಕತನವುಳ್ಳವರು, ಮತ್ತೊಬ್ಬರಿಗೆ ಮೋಸ ಮಾಡುವವರೂ ಆಗಿರುತ್ತಾರೆ. ಇವರನ್ನು ಜಾಸ್ತಿ ನಂಬಬಾರದಂತೆ. ತೀರಾ ಸಿಟ್ಟು, ಅತಿಯಾದ ನಾಚಿಕೆ ಇವರ ಸ್ವಭಾವ….

  • ಸುದ್ದಿ

    ಇಂದು ಮಧ್ಯಾಹ್ನ ಗುಜರಾತಿಗೆ ಅಪ್ಪಳಿಸಲಿದೆ ವಾಯು – 3 ಲಕ್ಷ ಜನ ಶಿಫ್ಟ್, 500 ಗ್ರಾಮಗಳ ತೆರವು

    ಗಾಂಧಿನಗರ: ಅರಬ್ಬಿ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಚಂಡಮಾರುತ ವಾಯು ಇದೀಗ ಗುಜರಾತ್‍ನತ್ತ ಪಯಣಿಸಿದೆ. ಹವಾಮಾನ ಇಲಾಖೆ ಪ್ರಕಾರ ಇಂದು ಮಧ್ಯಾಹ್ನದ ಹೊತ್ತಿಗೆ ದಕ್ಷಿಣ ಗುಜರಾತ್‍ನ ಕರಾವಳಿಗೆ ಅಪ್ಪಳಿಸಲಿದೆ. ಹವಾಮಾನ ಇಲಾಖೆ ಪ್ರಕಾರ, ವಾಯು ಚಂಡಮಾರುತ ವೆರಾವಲ್‍ನಿಂದ 180 ಕಿ.ಮೀ ಹಾಗೂ ಪೋರ್ ಬಂದರ್ ನಿಂದ 260 ಕಿ.ಮೀ ದೂರದಲ್ಲಿದೆ. ಪ್ರಸ್ತುತ ವಾಯು ಸೈಕ್ಲೋನ್ ತೀವ್ರ ಸ್ವರೂಪ ಪಡೆದಿದ್ದು, ಗಂಟೆಗೆ 170 ರಿಂದ 185 ಕಿ.ಮೀ. ವೇಗದಲ್ಲಿ ಪೋರ್ ಬಂದರ್ ನತ್ತ ಪಯಣಿಸುತ್ತಿದೆ. ಮುಂಬೈನಿಂದ ಮುಂದೆ ಸಾಗಿದ…