ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಕಸಿ ಮಾಡುವುದರಿಂದ ಕೊಂಬೆಗೊಂದೊಂದು ಬಣ್ಣದ ಹೂಗಳನ್ನೂ ಸಹ ಪಡೆಯಬಹುದು.ಕಸಿ ಎಂದರೆ ನಿಮಗೆ ತಿಳಿಯದ್ದೇನಲ್ಲ ಆದರೆ ಈ ಮೊದಲಿನ ಸಾಂಪ್ರದಾಯಿಕ ಕಸಿ ಪದ್ಧತಿಯಂತೆ ಗಿಡದ ಕೊಂಬೆಯನ್ನೇ ಕತ್ತರಿಸಿ ಮತ್ತೊಂದು ಗಿಡಕ್ಕೆ ಜೋಡಿಸಿದ ನಂತರ ಅದೇನಾದರೂ ನೆಟ್ಟದೆ ಬೆಳೆಯದೆ ಹಳ್ಳ ಹಿಡಿದು ಮಕಾಡೆ ಮಲಗಿತೆಂದರೆ ಸಾಕು .ನಿಮ್ಮ ಹೆಂಡತಿಯಿಂದ “ಅದೇನು ಸೀಮೇಗಿಲ್ಲದ ಗಂಡೂಂತ ಇವನಿಗೆ ಕೊಟ್ಟು ಮದುವೆ ಮಾಡಿದ್ರಪ್ಪಾ ನನ್ನ ಥತ್ “ ಅಂತ ಬೈಯ್ಯಿಸಿಕೊಳ್ಳಬಾರದೆಂದರೆ ನಾ ಹೇಳಿದಂತೆ ಮಾಡಿ.

ಮೊದಲಿಗೆ ನಿಮ್ಮ ಮನೆಯಲ್ಲಿರುವ ಎರಡು ಬೇರೆ ಬೇರೆ ಬಣ್ಣದ ಗುಲಾಬಿ ಹೂ ಬಿಡುವ ಗಿಡಗಳನ್ನು ಆರಿಸಿಕೊಳ್ಳಿ.ಆ ಗಿಡದ ಮೇಲ್ಭಾಗದಲ್ಲಿ ಚಿಗುರುತ್ತಿರುವ ಕಡೆಯಿಂದ ಕೆಳಗೆ ನೋಡುತ್ತಾ ಬಂದರೆ ಅದೇ ಕೊಂಬೆಯಲ್ಲಿ ಮತ್ತೊಂದು ಕಡೆ ಇನ್ನೂ ಚಿಗುರಲು ತಯಾರಾಗುತ್ತಿರುವ ಕೆಂಪು ಬಣ್ಣದ ಗೆಣ್ಣು ಕಾಣುತ್ತದೆಯಲ್ಲಾ ಅದನ್ನು ಗಮನಿಸಿ.

ಈಗ ಮತ್ತೊಂದು ಗಿಡದ ಬಳಿ ಹೋಗಿ ಹಿಂದೆ ನೋಡಿದ ಅದೇ ಬೆಳ್ಳುಳ್ಳಿ ಗಾತ್ರದ ಕೊಂಬೆಗೆ ಒಂದು ಸ್ವಚ್ಚವಾದ ಬ್ಲೇಡ್ ತೆಗೆದುಕೊಂಡು ಕೊಂಬೆ ಉದ್ದವಾಗಿರುವ ಮಾದರಿಯಲ್ಲಿಯೇ ಒಂದು ಸೆಂಟಿಮೀಟರಿನಷ್ಟು ಉದ್ದದ ಗೆರೆ ಎಳೆಯಿರಿ ಅಂದರೆ ನಿಮ್ಮ ಬ್ಲೇಡಿನಿಂದ ಕುಯ್ಯುವುದು ಕೊಂಬೆಯ ಕಾಂಡದ ಒಳಗೆ ಹೋಗುವುದು ಬೇಡ ಮೇಲಿನ ಕಾಂಡದ ಸಿಪ್ಪೆಯನ್ನು ಮೀರುವುದು ಬೇಡ.

ಹೀಗೆ ಉದ್ದಕ್ಕೆ ಕುಯ್ದ ನಂತರ ಆ ಗೆರೆಯ ಮೇಲ್ಭಾಗಕ್ಕೆ ಅಡ್ಡ ಸ್ವಲ್ಪ ಕುಯ್ದುಬಿಡಿ ಅಂದರೆ ಈಗ ನಿಮಗೆ ಅದು ಇಂಗ್ಲೀಷಿನ T ಆಕಾರದಲ್ಲಿ ಕಾಣುತ್ತಿದೆಯಲ್ಲವೇ ? ಅದನ್ನು ನಿಧಾನವಾಗಿ ಸಿಪ್ಪೆ ಬಿಡಿಸಿ .ಈಗ ಅದನ್ನು ಹಾಗೆಯೇ ಬಿಟ್ಟು ಮೊದಲಿನ ಗಿಡದ ಹೊಸದಾದ ಚಿಗುರು ಗಿಣ್ಣಿನ್ನು ನಿಧಾನವಾಗಿ ಮೇಲಿನಿಂದ ಸಿಪ್ಪೆಯ ಅಳತೆಗೆ ಮಾತ್ರ ನಿಧಾನವಾಗಿ ಸೌತೆಕಾಯಿ ಹೆರೆಯುವ ಮಾದರಿಯಲ್ಲಿ ಚಿಗುರು ಗಿಣ್ಣನ್ನು ಮಾತ್ರ ಹೊರ ತೆಗೆಯಿರಿ.
ಹೊರತೆಗೆದ ಚಿಗುರು ಗಿಣ್ಣನ್ನು ತಂದು T ಡಿಸೈನಲ್ಲಿ ಕಟ್ ಮಾಡಿಟ್ಟ ಕಾಂಡದ ಸಿಪ್ಪೆಯೊಳಗೆ ನಿಧಾನವಾಗಿ ಮೇಲಿನಿಂದ ತೂರಿಸಿ ನಂತರ ಆ ಗಿಣ್ಣಿನ ಮೇಲೆ ಕೆಳಗೆ ಗಮ್ ಟೇಪ್ ಸುತ್ತಿ ಬಿಡಿ .ಇದಾದ ನಂತರ ಗಿಡದಲ್ಲಿ ಶೇ 80ರಷ್ಟು ಎಲೆಗಳನ್ನು ಅದೇ ಬ್ಲೇಡಿನಿಂದ ಕತ್ತರಿಸಿ ಹಾಕಿ ಹಾಗೂ ಗಿಡದ ಮೇಲಭಾಗದಲ್ಲಿರುವ ಚಿಗುರನ್ನೂ ಕೂಡ ಕತ್ತರಿಸಿ ಬಿಡಿ.ಇದನ್ನು ಟಿ ಬಡ್ಡಿಂಗ್ ಎಂದು ಕರೆಯುತ್ತಾರೆ.

ನಂತರ ನೀವು ಮೂರ್ನಾಲ್ಕು ದಿನಗಳಲ್ಲಿ ಈ ಹೊಸ ಗಿಣ್ಣು ನಿಧಾನವಾಗಿ ಚಿಗುರಿ ಹೊಸ ಬಣ್ಣದ ಹೂ ಬಿಡಲು ಶುರುವಾಗುತ್ತದೆ.ಈ ವಿಧಾನ ಮೊದಲು ಬಂದದ್ದು ನಿಂಬೆ ಗಿಡದಲ್ಲಿ ಬೇಗನೆ ಕಾಯಿ ಬಿಡಿಸುವುದಕ್ಕೆ ಆ ನಂತರ ಬಹಳಷ್ಟು ಗಿಡಗಳಿಗೆ ಇದೇ ವಿಧಾನವನ್ನು ಇಸ್ರೇಲಿನಲ್ಲಿ ಬಳಸುತ್ತಿದ್ದಾರೆ.
ಈ ತರಹದ ಕಸಿ ಮಾಡುವಾಗ ಒಂದೇ ಕೊಂಬೆಯ ಗಿಡಕ್ಕೆ ಕಸಿ ಮಾಡಿದರೆ ಗರಿಷ್ಠ ಫಲಿತಾಂಶ ಎರಡೂ ಗಿಡದಿಂದ ಪಡೆಯಬಹುದು ಹಾಗೂ ಒಂಟಿ ಕೊಂಬೆಯ ಗಿಡಕ್ಕೆ ಈ ತರಹ ಕಸಿ ಮಾಡಿದ ನಂತರ ಕಸಿ ಮಾಡಿದ ಜಾಗದಿಂದ ಮೂರು ಇಂಚಿನಷ್ಟು ಮೇಲಿನ ಕೊಂಬೆಯನ್ನು ಅರ್ಧಕ್ಕೆ ಕತ್ತರಿಸಿ ಮಡಿಚಿಬಿಡಬೇಕು ಏಕೆಂದರೆ ಮೇಲಿನ ಕೊಂಬೆ ಹಾಗೆಯೇ ಇದ್ದರೆ ಗಿಡ ಪೋಷಕಾಂಶಗಳೆಲ್ಲವೂ ಮೇಲಕ್ಕೆ ಹೋಗಲು ಶುರುವಾಗುವುದರಿಂದ ಕಸಿ ಮಾಡಿದ ಹೊಸ ಚಿಗುರು ಬೇಗ ಬೆಳೆಯುವುದಿಲ್ಲ.

ಹಾಗೂ ಅದನ್ನು ಏಕೆ ಅರ್ಧ ಕತ್ತರಿಸಿ ಹಾಗೆಯೇ ಬಿಡಬೇಕೆಂದರೆ ಈ ಮೊದಲಿನ ಕೊಂಬೆಯು ನೆಲದಿಂದ ಪೋಷಕಾಂಶಗಳನ್ನು ಅತ್ಯುತ್ತಮವಾಗಿ ಮೇಲಕ್ಕೆ ಎಳೆಯುತ್ತಿರುತ್ತದೆ ಹಾಗಾಗಿ ಅದನ್ನು ಪೂರಾ ಕತ್ತರಿಸಿಬಿಟ್ಟರೆ ಪೂಷಕಾಂಶ ಮೇಲೆಕ್ಕೆಳೆಯುವ ಪ್ರಮುಖ ಪಂಪನ್ನೇ ಆಫ್ ಮಾಡಿದಂತಾಗುತ್ತದೆ ಹಾಗಾಗಿ ಅದನ್ನು ಅರ್ಧ ಕತ್ತರಿಸಿ ಮಡಚಿ ಬಿಟ್ಟರೆ ಅದು ಮುಂದೆ ಬಳೆಯುವುದಿಲ್ಲ ಆದರೆ ಪೋಷಕಾಂಶ ಸೆಳೆದು ಹೊಸ ಚಿಗುರಿಗೆ ಕೊಡುತ್ತದೆ ಎಂದಷ್ಟೇ.
ಈ ವಿಧಾನದಲ್ಲಿ ನಿಮ್ಮ ಎರಡೂ ಗಿಡಗಳೂ ಕೂಡ ಹಾಳಾಗುವುದಿಲ್ಲ ಹಾಗೂ ಏಕಕಾಲದಲ್ಲಿ ಎರಡೂ ಗಿಡಗಳಿಗೆ ಕಸಿ ಮಾಡಬಹುದು.ಹಾಗೂ ನಿಮ್ಮ ಹೆಂಡತಿಯು ಗುಲಾಬಿ ಗಿಡಕ್ಕೆ ಕಸಿ ಮಾಡಲು ಒಪ್ಪಿಗೆ ಕೊಡದಿದ್ದರೆ ಪಕ್ಕದ ಮನೆಯ ಆಂಟಿಯ ಗುಲಾಬಿ ಗಿಡಕ್ಕೆ ಆದರೂ ಕಸಿ ಮಾಡಿಬಿಡಿ !
ನಾಳೆದಿನ ಬಿಡುವ ಚಿತ್ರಾವಿಚಿತ್ರ ಬಣ್ಣದ ಗುಲಾಬಿ ಹೂ ನೋಡಿ ಹೊಟ್ಟೆ ಉರಿದುಕೊಳ್ಳಲಿ !
ಕೃಪೆ:ಉಮೇಶ್ ಆಚಾರ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅತಿ ಶೀಘ್ರದಲ್ಲೇ ಮತ್ತೊಮ್ಮೆ ಮಂಜಿನ ಯುಗ ನಮ್ಮನ್ನು ಆವರಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಯಾಕೆಂದರೆ ಮುಂದಿನ 30 ವರ್ಷಗಳಲ್ಲಿ ಭೂಮಿ ಮೇಲೆ ಮಂಜು ಯುಗ ಎಂಬುದು ಬರಲಿದೆ. ಮಂಜಿನ ಯುಗ ಇದು ಇತಿಹಾಸ
ಹಿಂದುಗಳಿಗೆ ಅಮಾವಾಸ್ಯೆ ಹುಣ್ಣಿಮೆಯಿಂದ ಹಿಡಿದು ಪ್ರತಿದಿನವೂ ಒಂದು ರೀತಿಯ ಹಬ್ಬವೇ ಸರಿ. ವರ್ಷದಲ್ಲಿ ಹೆಚ್ಚಿನ ಹಬ್ಬಗಳನ್ನ ಆಚರಿಸುವವರು ಕೂಡ ಇವರೇ, ಪ್ರತಿ ಹಬ್ಬಗಳು ಸಹ ಒಂದೊಂದು ವಿಶೇಷತೆಯನ್ನ ಹೊಂದಿವೆ ಎಂದರೆ ಖಂಡಿತ ತಪ್ಪಾಗಲಾರದು.ಹಿಂದೂಗಳು ಹೆಚ್ಚಾಗಿ ಸಂಪ್ರದಾಯಗಳನ್ನ ಇನ್ನು ಸಹ ಆಚರಣೆಯಲ್ಲಿಟ್ಟಿದ್ದರೆ, ಒಂದೊಂದು ಆಚರಣೆಗಳಿಗೂ ಸಹ ಒಂದೊಂದು ಮಹತ್ವವಿದೆ.
ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಯಾಟಿಲೈಟ್ ಫೋನ್ ಸೇವೆಯನ್ನು ಆರಂಭಿಸಲಿದೆ. ಬುಧವಾರ ಮೇ.25 ರಿಂದ ಈ ಸೇವೆಗೆ ಚಾಲನೆ ದೊರೆಯಲಿದ್ದು, ನೇರವಾಗಿ ಉಪಗ್ರಹಗಳ ಸಹಾಯದಿಂದ ಈ ಸೇವೆಯನ್ನು ಬಿಎಸ್ಎನ್ಎಲ್ ಓದಗಿಸಲಿದೆ ಎನ್ನಲಾಗಿದೆ.
ದೀಪಾವಳಿಯ ಹಿನ್ನೆಲೆಯಲ್ಲಿ ಕಂಪನಿಗಳ ಮಾರಾಟವು ಮತ್ತೆ ಚೇತರಿಸಿಕೊಂಡಿದೆ. ದೀಪಾವಳಿಗೆ ಜನರು ಹೊಸ ವಾಹನಗಳನ್ನು ಕೊಳ್ಳುವುದು ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯವಾಗಿರುವ ಕಾರಣಕ್ಕೆ ವಾಹನಗಳ ಮಾರಾಟವು ಹೆಚ್ಚಾಗಿದೆ.ಇದೇ ರೀತಿ ಮಧ್ಯ ಪ್ರದೇಶದಲ್ಲಿರುವ ಸಾತ್ನಾ ಜಿಲ್ಲೆಯ ರಾಕೇಶ್ ಕುಮಾರ್ ಗುಪ್ತಾರವರು ಸಹ ಹೊಸ ಸ್ಕೂಟರ್ ಖರೀದಿಸಲು ಬಯಸಿದ್ದಾರೆ. ಅದರಂತೆ ಇತ್ತೀಚಿನ ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ಖರೀದಿಸಲು ಡೀಲರ್ ಬಳಿ ಹೋಗಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ವಿಶೇಷ ಇರೋದು ಇದರಲ್ಲೆ. ಎಲ್ಲರಂತೆ ರಾಕೇಶ್ ಕುಮಾರ್ರವರು ಚೆಕ್ನಲ್ಲೋ, ಡಿಡಿಯಲ್ಲೋ, ಇಎಂಐನಲ್ಲೊ…
10 ರೂಪಾಯಿ ನಾಣ್ಯವನ್ನು ರದ್ದು ಮಾಡಿರದಿದ್ದರೂ, ಅನೇಕ ಕಡೆಗಳಲ್ಲಿ ವರ್ತಕರು, ಜನ ಸಾಮಾನ್ಯರು ಇವುಗಳನ್ನು ಸ್ವೀಕರಿಸಲು ಹಿಂದೇಟು ಹಾಕ್ತಾರೆ.ಇವೇ ಮೊದಲಾದ ಕಾರಣಗಳಿಂದಾಗಿ ಬ್ಯಾಂಕ್ ಗಳಲ್ಲಿ ನಾಣ್ಯ ಮೇಳ ನಡೆಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ವಾಣಿಜ್ಯ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ರೈತರ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ವಿಸ್ತರಿಸಲಾಗಿದೆ. ಇದರಿಂದ 14.5 ಕೋಟಿ ರೈತರಿಗೆ ಅನುಕೂಲವಾಗಲಿದೆ. ಇದೇ ವೇಳೆ ಪ್ರಧಾನಮಂತ್ರಿ ಕಿಸಾನ್ ಪಿಂಚಣಿ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಮಾಸಿಕ 3000 ರೂ. ಪಿಂಚಣಿ ನೀಡುವ ಮಹತ್ವದ ಯೋಜನೆ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ 3000 ರೂ.ಗಳನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು. ಪ್ರಧಾನ ಮಂತ್ರಿ…