ಸುದ್ದಿ

ನಮ್ಮ ಮನೆಗಳು ಬಾಂಬ್ ದಾಳಿಯಿಂದ ಚಿಂದಿಯಾಗಿವೆ, ಆಟವಿಲ್ಲ, ಊಟವಿಲ್ಲ, ಪಾಠವಿಲ್ಲ. ಕೊನೆಗೂ ನಿದ್ರೆಯೂ ಇಲ್ಲ, ಎಲ್ಲವನ್ನೂ ಕಂಡು ಕಾಣದಂತಿರುವ ದೇಶಗಳೇ ಎಚ್ಚೆತ್ತುಕೊಳ್ಳಿ..ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

608

ಸಿರಿಯಾ’ ಇದು ನೈರುತ್ಯ ಏಷ್ಯಾದಲ್ಲಿರುವ ಒಂದು ಅರಬ್‌ ದೇಶ.ಪಶ್ಚಿಮ ಏಷ್ಯಾದ ಸಿರಿಯಾ ಕಳೆದ ಏಳು ವರ್ಷಗಳಿಂದ ಆಂತರಿಕ ಕ್ಷೋಭೆಯಿಂದ ತತ್ತರಿಸುತ್ತಿದೆ. ಕಳೆದ 22 ತಿಂಗಳಿನಿಂದ ನಿರಂತರವಾಗಿ ಸಿರಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಿಂದಾಗಿ 60 ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಬಲಿಯಾಗಿದ್ದಾರೆ.

 

ಏಕೆ ಈ ಯುದ್ದ..?

ಕಳೆದ 18 ವರ್ಷಗಳಿಂದ ಬಷರ್ ಅಲ್ ಅಸ್ಸಾದ್ ಅವರು ಸಿರಿಯಾ ಅಧ್ಯಕ್ಷರಾಗಿದ್ದಾರೆ. ಇವರು ಅಲ್ಪ ಸಂಖ್ಯಾತರಾಗಿರುವ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ಶಿಯಾ ಪ್ರತಿನಿಧಿಯೊಬ್ಬರು ತಮ್ಮ ದೇಶ ಆಳುವುದನ್ನು ಸಹಿಸದ ಬಹುಸಂಖ್ಯಾತ ಸುನ್ನಿ ಸಮುದಾಯಗಳು, ಸರ್ಕಾರದ ವಿರುದ್ಧವೇ ಸಮರ ಸಾರಿವೆ..

ಮಕ್ಕಳು ಮತ್ತು ಅಮಾಯಕ ಪ್ರಜೆಗಳ ಸಾವಿನ ಸಂಖ್ಯೆ…

ನೆರೆ ದೇಶಗಳ ಬೆಂಬಲದಿಂದಾಗಿ ಎರಡೂ ಬಣಗಳ ನಡುವೆ ರಕ್ತದ ಒಕಳಿಯೇ ಹರಿಯುತ್ತದೆ.ಅಕ್ಷರಶಃ ಸಿರಿಯಾ ರಕ್ತಪಾತ ದೇಶವಾಗಿದೆ. 22 ತಿಂಗಳಲ್ಲಿ ಸರಕಾರಿ ಪಡೆಗಳು ಮತ್ತು ಬಂಡುಕೋರರ ಸೆಣಸಾಟಕ್ಕೆ ಅಮಾಯಕ ಪ್ರಜೆಗಳು ಮತ್ತು ಮಕ್ಕಳ ಸಾವಿನ ಸಂಖ್ಯೆ 60 ಸಾವಿರ  ದಾಟಿದ್ದು ಸುಮಾರು 4 ಲಕ್ಷಕ್ಕಿಂತ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ.

ಪ್ರಾಣದ ಭಯದಿಂದಾಗಿ ಸಾವಿರಾರು ಮಂದಿ ದೇಶ ಬಿಟ್ಟು ಗಡಿ ಭಾಗದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.ಸುಮಾರು ಎರಡುವರೆ ಲಕ್ಷಕ್ಕಿಂತ ಹೆಚ್ಚು ಜನ ದೇಶ ಬಿಟ್ಟು ಈಗಾಗಲೇ ಪಕ್ಕದ ದೇಶಗಳಾದ ಟರ್ಕಿ, ಲೆಬೆನಾನ್, ಜೋರ್ಡಾನ್, ಇರಾನ್‌ದೇಶಗಳಿಗೆ ನುಗ್ಗಿದ್ದಾರೆ.

ಸಾತ್ ಕೊಡ್ತಿರೋ ದೇಶಗಳು..

ಅಧ್ಯಕ್ಷ ಬಷರ್ ಅಲ್

  • ರಷ್ಯಾ
  • ಇರಾನ್
  • ಲೆಬನಾನ್

ಸಿರಿಯಾ ಬಂಡುಕೋರರು

  • ಸೌದಿ ಅರೇಬಿಯಾ
  • ಅಮೇರಿಕಾ
  • ಇಸ್ರೇಲ್

ಸಿರಿಯಾದ ಅಧ್ಯಕ್ಷ ‘ಬಷರ್ ಅಲ್ ಅಸ್ಸಾದ್’ ಹಾಗೂ ಇವರ ಆಡಳಿತವನ್ನು ವಿರೋಧಿಸುವ ಕ್ರಾಂತಿಕಾರಿ ಸಂಘಟನೆಗಳ ನಡುವೆ ಭೀಕರ ಕದನ ನಡೆಯುತ್ತಿದೆ. ಇವರಿಬ್ಬರ ಹೊಡೆದಾಟಕ್ಕೆ ಅಮಾಯಕ ಪ್ರಜೆಗಳು ಬಲಿಯಾಗುತ್ತಿದ್ದಾರೆ. ಹೀಗೆ ಪ್ರಾಬಲ್ಯ ದೇಶಗಳ ಬೆಂಬಲದಿಂದಾಗಿ ಸಿರಿಯಾ ದೇಶವು ರಕ್ತಸಿಕ್ತಗೊಂಡಿದ್ದು ಬಾಂಬ್, ರಾಕೆಟ್ ದಾಳಿಯಿಂದ ದೊಡ್ಡ ದೊಡ್ಡ ನಗರಗಳು ಭೂಕಂಪ ಪೀಡಿತ ಪ್ರದೇಶಗಳಂತೆ ಕಾಣುತ್ತಿವೆ.

ಇದೆರೆಲ್ಲದರ ಪರಿಣಾಮ ಮಕ್ಕಳು ಸೇರಿದಂತೆ ನೂರಾರು ಮಂದಿ ಪ್ರಾಣ ತೆತ್ತಿದ್ದಾರೆ.ಸಿರಿಯಾದಲ್ಲಿನ ಮಕ್ಕಳ ಕಣ್ಣೀರು ಆಕ್ರಂದನ ಕೆಳುವವರಿಲ್ಲವಂತಾಗಿದೆ. ದಾಳಿಯಲ್ಲಿ ಗಾಯಗೊಂಡ ಪುಟ್ಟ ಪುಟ್ಟ ಕಂದಮ್ಮಗಳ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಸುದ್ದಿ ಮಾಡಿದೆ.

ವಿಶ್ವ ಸಂಸ್ಥೆ ಮಾತಿಗೆ ಜಗ್ಗದ ಸಿರಿಯಾ ಸರ್ಕಾರ ಮತ್ತು ಬಂಡುಕೋರರು

ಕದನ ವಿರಾಮ ಘೋಷಿಸಿ, ಅಧಿಕಾರವನ್ನು ಬಿಟ್ಟುಕೊಟ್ಟು, ದೇಶದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಎಂಬ ವಿಶ್ವ ಸಂಸ್ಥೆಯ ಕೋರಿಕೆಗೆ ಅಧ್ಯಕ್ಷ ‘ಬಷರ್ ಅಲ್ ಅಸ್ಸಾದ್’ ಒಪ್ಪಿಗೆ ಸೂಚಿಸಿಲ್ಲ.ತಮ್ಮ ಅಧಿಕಾರಕ್ಕಾಗಿ ಸಾವಿರಾರು ಜನರ ಮಾರಣ ಹೋಮ ನಡೆಯುತ್ತಿದ್ದರೂ ಈ ಅಧ್ಯಕ್ಷ ತಮ್ಮ ಅಧಿಕಾರದಿಂದ ಕೆಳಗಿಳಿಯಲು ಒಪ್ಪುತ್ತಿಲ್ಲ.

ಅತ್ತ ಕಡೆ ಸಿರಿಯಾ ಬಂಡುಕೋರರು ‘ಬಷರ್ ಅಲ್ ಅಸ್ಸಾದ್ ಅಧಿಕಾರದಿಂದ ಕೆಳಗಿಳಿಯುವವರೆಗೂ ಯುದ್ದ ನಿಲ್ಲಿಸುವ ಮಾತೇ ಇಲ್ಲ ಎಂದು ವಿಶ್ವಸಂಸ್ತೆಯ ಕೋರಿಕೆಯನ್ನು ತಿರಸ್ಕರಿಸಿದ್ದಾರೆ.ಇದೆರೆಲ್ಲದರ ನಡುವೆ ಅಲ್ಲಿನ ರಕ್ತಪಾತದಿಂದಾಗಿ ನರುಳುತ್ತಿರುವವರು ಸಿರಿಯಾದ ಜನ ಮತ್ತು ಸಿರಿಯಾ ದೇಶದ ಮುಂದಿನ ಪ್ರಜೆಗಲಾಗಬೇಕಾಗಿರುವ ಮುಗ್ದ ಕಂದಮ್ಮಗಳು ಮಾತ್ರ.

ಜಗತ್ತಿಗೆ ಕಾಣುತ್ತಿಲ್ಲವೇ  ಮುಗ್ದ ಕಂದಮ್ಮಗಳ ಮಾರಣಹೋಮ…

ನಮ್ಮ ಮನೆಗಳು ಬಾಂಬ್ ದಾಳಿಯಿಂದ ಚಿಂದಿಯಾಗಿವೆ, ಆಟವಿಲ್ಲ, ಊಟವಿಲ್ಲ, ಪಾಠವಿಲ್ಲ. ಕೊನೆಗೂ ನಿದ್ರೆಯೂ ಇಲ್ಲ, ಎಲ್ಲವನ್ನೂ ಕಂಡು ಕಾಣದಂತಿರುವ ದೇಶಗಳೇ ಎಚ್ಚೆತ್ತುಕೊಳ್ಳಿ ಇದು ಸಿರಿಯಾದ ಹುಡುಗನೊಬ್ಬ  ಫೇಸ್‌ಬುಕ್‌ನಲ್ಲಿ ಇಡೀ ಪ್ರಪಂಚಕ್ಕೆ ಕೂಗಿ ಹೇಳಿರುವ ನುಡಿ.

ಮುಗ್ದ ಕಂದಮ್ಮಗಳ ಮಾರಣ ಹೋಮವನ್ನು ಜಗತ್ತಿನ ದೇಶಗಳು ನೋಡಿಯೂ ನೋಡದಂತೆ ಇವೆ.ಅಲ್ಲಿನ ಮುಗ್ದ ರಕ್ತಸಿಕ್ತ ಮಕ್ಕಳ ಚಿತ್ರಗಳನ್ನು ನೋಡಿದ್ರೆ ಕಲ್ಲು ಹೃದಯ ಇದ್ರೂ ಸಹ ಕಣ್ಣೀರು ಬರಿಸುವಂತಿದೆ.ಅಮೇರಿಕಾ ರಷ್ಯಾ ಸೇರಿದಂತೆ ಕೆಲವು ದೇಶಗಳು, ಏಕೆ ಹೀಗೆ ಮಕ್ಕಳ ಮತ್ತು ಅಲ್ಲಿನ ಜನರ ಜೀವನದಲ್ಲಿ ಆಟವಾಡುತ್ತಿವೆ ಗೊತ್ತಿಲ್ಲ.ಒಂದಂತೂ ಸತ್ಯ ಅಧಿಕಾರದ ಮೋಹದಿಂದ ಜಗತ್ತಿನ ಜನ ಏನೆಲ್ಲಾ ಮಾಡ್ತಾರೆ ಎನ್ನುವುದಕ್ಕೆ ಇದೊಂದು ಕಣ್ಣಿಗೆ ಕಾಣುವ ನಿದರ್ಶನ.

ಸಿರಿಯಾದ ಮತ್ತಷ್ಟು ಭಯಾನಕ ಚಿತ್ರಗಳು…

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಚುನಾವಣೆ

    ಕರ್ನಾಟಕ ಮೇ.೧೦ ಚುನಾವಣೆ

    ಕರ್ನಾಟಕ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮೇ.೧೦ ಬುಧವಾರ ಚುನಾವಣೆ ನಡೆಯಲಿದ್ದು, ಮೇ.೧೩ ಶನಿವಾರ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗವು ಬುಧವಾರ ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ಇಂದಿನಿಂದಲೇ ತಕ್ಷಣ ಜಾರಿಗೆ ಬರುವಂತೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತಿದೆ. ಚುನಾವಣಾ ವೇಳಾಪಟ್ಟಿಯು ಏಪ್ರಿಲ್ ೧೩ ರಂದು ಚುನಾವಣಾ ಅಧಿಸೂಚನೆ ಅಧಿಕೃತವಾಗಿ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಕಾರ್ಯವು ಅಂದಿನಿಂದಲೂ ಆರಂಭವಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೨೦ ಕೊನೆಯ ದಿನವಾಗಿದ್ದು,…

  • ಸುದ್ದಿ

    ಇನ್ಮುಂದೆ ಪ್ಲಾಸ್ಟಿಕ್‌ ಬಳಕೆ ಮಾಡುವವರು ಈ ದಂಡದಿಂದ ಪಾರಾಗಲು ಸಾಧ್ಯವಿಲ್ಲ,.!!

    ರಾಷ್ಟ್ರಪಿತ ಮಹಾತ್ಮಗಾಂಧಿಯವರ ಕನಸಿನಂತೆ  ಅವರ 150ನೇ ಜಯಂತಿ ಅಂಗವಾಗಿ ಅವರ ತತ್ವ ಸಿದ್ದಾಂತಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು  ಅವರ ಕನಸಿನಂತೆ ನೈರ್ಮಲ್ಯ, ಹಸಿರು, ಆರೋಗ್ಯ, ಕಸಮುಕ್ತ ಭಾರತ ಸೃಷ್ಠಿಸುವ ಉದ್ದೇಶದಿಂದ ಜನ ಜಾಗೃತಿಮೂಡಿಸುವ ಅಂಗೀಕಾರ ಆಂದೋಲನಕ್ಕೆ ಮಾಜಿ ಸಚಿವ, ಶಾಸಕ ವೆಂಕಟರಾವ ನಾಡಗೌಡ ಪ್ರಮಾಣ ವಚನ ಬೋಧಿಸುವ ಮೂಲಕ ಚಾಲನೆ ನೀಡಿದರು. ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ನಿಷೇದಿಸಲಾಗಿದೆ ಯಾವುದೇ ಅಂಗಡಿ, ಬಾರ್‌ ರೆಸ್ಟೋರೆಂಟ್‌, ಯಾವುದೇ ವಾಣಿಜ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ಮಾರಾಟ ಮಾಡುವಂತಿಲ್ಲ  ಮಾರಾಟ…

  • ಸಿನಿಮಾ

    ಹೋಟೆಲ್ ನಿಂದ ಎಸ್ಕೇಪ್ ಹಾಗಿದ್ದೇಕೆ ನಟಿ ಪೂಜಾ ಗಾಂಧಿ!

    ಸ್ಯಾಂಡಲ್ ವುಡ್ ಸ್ಟಾರ್ ನಟಿಯ ವಿರುದ್ಧ ದೂರು ದಾಖಲಾಗಿದೆ. ಕನ್ನಡ ಸಿನಿರಸಿಕರನ್ನ ಮಳೆಯಲ್ಲಿ ಮಿಂದೇಳಿಸಿದ ನಟಿ ಹೋಟೆಲ್ ಬಿಲ್ ಕಟ್ಟದೆ ಕದ್ದು ಓಡಿ ಹೋಗಿರುವುದರಿಂದ ದೂರು ನೀಡಲಾಗಿದೆ. ಅಶೋಕ ಹೋಟೆಲ್ ಕಡೆಯಿಂದ ಪೂಜಾಗಾಂಧಿ ವಿರುದ್ಧ ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.  ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿ ಎಸ್ಕೇಪ್ ಆಗಿದ್ದರು. ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ….

  • ಸುದ್ದಿ

    ಶಿಕ್ಷಣ ಸಚಿವರಿಂದ ರ್ಸರ್ಕಾರಿ ಶಾಲಾ ಶಿಕ್ಷಕರಿಗೊಂದು ಸಂತಸದ ಸುದ್ದಿ….!

    ಸರ್ಕಾರಿ ಪ್ರಾಥಮಿಕ ಮತ್ತುಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಶಿಕ್ಷಕರಕಡ್ಡಾಯ ವರ್ಗಾವಣೆಯನ್ನು ತಡೆ ಹಿಡಿದಿರುವುದಾಗಿ ಸುರೇಶ್ ಕುಮಾರ್ ಹೇಳಿದ್ದು, ಇದರ ಬಗ್ಗೆ ಅಂತಿಮತೀರ್ಮಾನವನ್ನು ನಾಳೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದಾಗಿ ಒಂದು ಸ್ಥಳದಲ್ಲಿ ಮತ್ತೊಂದು ಸ್ಥಳಕ್ಕೆಇಷ್ಟವಿಲ್ಲದಿದ್ದರೂ ಹೋಗಬೇಕಾಗಿತ್ತು. ಸದ್ಯಕ್ಕೆ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದ್ದು, ಪ್ರಸ್ತುತಶಿಕ್ಷಕರು ನಿರಾಳರಾಗಿದ್ದಾರೆ. ಶಿಕ್ಷಕರು ಪರಸ್ಪರ ವರ್ಗಾವಣೆ ಸಹ ಮಾಡಿಕೊಳ್ಳಬಹುದಾಗಿತ್ತು, ಆದರೆ ಇದಕ್ಕೂಸದ್ಯ ತಡೆ ಬಿದ್ದಿದೆಯೋ ಅಥವಾ ಪರಸ್ಪರ ವರ್ಗಾವಣೆ ಚಾಲ್ತಿಯಲ್ಲಿದೆಯೋ ಮಾಹಿತಿಯನ್ನು…

  • ಉಪಯುಕ್ತ ಮಾಹಿತಿ

    ಯಾವುದೇ ಹೊಸ ಗಡಿಯಾರಗಳನ್ನ ನೋಡಿದಾಗ ಅದರಲ್ಲಿ 10:10 ಟೈಮ್ ಗೆ ನಿಂತಿರುತ್ತದೆ ಯಾಕೆ ಗೊತ್ತಾ?

    ಹೌದು ನೀವು ಗಮನಿಸಿರಬಹುದು ನೀವು ಯಾವುದೇ ಗಡಿಯಾರಗಳನ್ನು ತರಲು ಅಂಗಡಿಗಳಿಗೆ ಹೋದಾಗ ಆ ಎಲ್ಲ ಗಡಿಯಾರಗಳು 10:10 ಸಮಯವನ್ನು ತೋರಿಸುತ್ತದೆ ಅಂದರೆ ಗಡಿಯಾರ ರೆಡಿಯಾಗಿ ಬಂದಿರುವಾಗ ಎಲ್ಲವು ಕೂಡ 10 :10 ಸಮಯದಲ್ಲಿ ನಿಂತಿರುತ್ತದೆ, ಅದು ಯಾಕೆ ಅನ್ನೋದು ನಿಮಗೆ ತಿಳಿಯದೆ ಇರಬಹುದು ಆದ್ರೆ ಇದರ ಹಿಂದಿದೆ ಕೆಲವು ಇಂಟ್ರೆಸ್ಟಿಂಗ್ ವಿಚಾರ ಅದು ಏನು ಅನ್ನೋದನ್ನ ಮುಂದೆ ನೋಡಿ. ನೀವು ಇದನ್ನು ಗಮನಿಸಿರಬಹುದು ಒಂದು ವೇಳೆ ಗಮನಿಸದೆ ಇದ್ರೆ ನೀವು ಒಮ್ಮೆ ಯಾವಾಗಲು ಗಡಿಯಾರದ ಅಂಗಡಿಗೆ ಹೋದಾಗ…

  • ಉಪಯುಕ್ತ ಮಾಹಿತಿ

    ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ ಮತ್ತು ಚಿನ್ನ ಕೊಳ್ಳಲು ಸಾಲಾಗಿ ನಿಂತ ಜನರು, ವರ್ಷದಲ್ಲಿ ಇದೆ ಮೊದಲು.

    ಕಳೆದ ಮೂರೂ ನಾಲ್ಕು ತಿಂಗಳುಗಳಿಂದ ದೇಶದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ಸುದ್ದಿ ಅಂದರೆ ಅದೂ ಚಿನ್ನದ ಬೆಲೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಚಿನ್ನದ ಬೆಲೆಯಲ್ಲಿ ಎಂದೂ ಕಾಣದ ಏರಿಕೆ ಕಂಡಿದ್ದು ಮೂರೂ ನಾಲ್ಕು ತಿಂಗಳುಗಳಿಂದ ಭಾರಿ ಸುದ್ದಿ ಮಾಡುತ್ತಿದೆ. ಇನ್ನು ಚಿನ್ನದ ಬೆಲೆಯ ಏರಿಕೆಯ ಕಾರಣ ಅದೆಷ್ಟೋ ಬಡವರು ತಮ್ಮ ಮನೆಯ ಮದುವೆ ಸಮಾರಂಭಗಳನ್ನ ಮುಂದೂಡಿದ್ದಾರೆ, ಇನ್ನು ಈ ತಿಂಗಳ ಆರಂಭದಿಂದ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದ್ದೂ ಬಡದವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ….