ಆರೋಗ್ಯ, ಉಪಯುಕ್ತ ಮಾಹಿತಿ

ಕ್ಯಾನ್ಸರ್ ಚಿಕಿತ್ಸೆಯಿಂದ ನಿಮ್ಮ ಕೂದಲು ಉದುರುತ್ತಿದಿಯೇ -ಏನು ಮಾಡಬೇಕು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

523

ಕಿಮೊಥೆರಪಿ ಹಾಗು ರೇಡಿಯೇಶನ್ ಥೆರಪಿ ಮಾಡಿಸಿಕೊಂಡಲ್ಲಿ ಕೂದಲು ಉದುರುವಿಕೆ ಅಥವಾ ಅಲೋಪಿಶಿಯಾವು ಒಂದು ಪ್ರಧಾನ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕೂದಲು ಉದುರುವಿಕೆಯು ಭಾಗಶಃ ಕಾಣಿಸಿಕೊಳ್ಳಬಹುದು ಅಥವಾ ಮುಖ, ಕೈ, ತಲೆ, ಕಾಲು, ಕಂಕುಳು ಹಾಗು ಜನನಾಂಗದ ಭಾಗದ ಮೇಲಿರುವ ಕೂದಲುಗಳೆಲ್ಲಾ ಸಹ ಉದುರಲು ಆರಂಭಿಸಬಹುದು.

ಹಾಗೆಂದು ಕೂದಲು ಶಾಶ್ವತವಾಗಿ ಉದುರಿ ಹೋಗುತ್ತದೆ ಎಂದು ಭಾವಿಸಬೇಡಿ. ಇದು ಈ ಚಿಕಿತ್ಸೆಯನ್ನು ಪಡೆಯುವವರೆಗೆ ಮಾತ್ರ, ಚಿಕಿತ್ಸೆ ನಿಲ್ಲಿಸಿದ ಕೂಡಲೆ ಕೂದಲು ಬೆಳೆಯುವಿಕೆಯು ಮೊದಲಿನಂತಾಗುತ್ತದೆ. ಆದರೆ ಕೂದಲು ತೆಳ್ಳಗೆ ಇರುತ್ತದೆ ಅಷ್ಟೇ.

  1. ಕೂದಲು ಉದುರುವಿಕೆಯ ಕಾರಣಗಳು ಯಾವುವು

ಕೂದಲು ಉದುರುವಿಕೆಯು ಈ ಕೆಳಕಂಡ ಕಾರಣಗಳ ಸಲುವಾಗಿ ಕಾಣಿಸಿಕೊಳ್ಳಬಹುದು:

  • ಕಿಮೊಥೆರಪಿ: ಈ ಚಿಕಿತ್ಸೆಯಲ್ಲಿ ಔಶಧಿಗಳು ಬಹುತೇಕ ಬಾರಿ ಆರೋಗ್ಯಕರ ಹಾಗು ಕ್ಯಾನ್ಸರ್‌ಕಾರಕ ಕೋಶಗಳೆರಡರ ಮೇಲೆ ದಾಳಿ ಮಾಡುತ್ತವೆ. ಆ ಪ್ರಕ್ರಿಯೆಯಲ್ಲಿ ಇವು ಕೂದಲಿನ ಕೋಶಗಳ ಮೇಲೂ ಸಹ ದಾಳಿ ಮಾಡುತ್ತವೆ. ಹೀಗಾಗಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೂದಲು ಉದುರುತ್ತದೆ.

  • ರೇಡಿಯೇಶನ್ ಥೆರಪಿ: ರೇಡಿಯೇಶನ್ ಚಿಕಿತ್ಸೆಯನ್ನು ಯಾವ ಭಾಗದ ಮೇಲೆ ಕೊಡಲಾಗುತ್ತದೆಯೋ, ಅದರ ಆಧಾರದ ಮೇಲೆ ಕೂದಲು ಉದುರುವಿಕೆಯು ಕಾಣಿಸಿಕೊಳ್ಳುತ್ತದೆ. ಉದಾ> ಒಂದು ವೇಳೆ ರೇಡಿಯೇಶನ್ ಅನ್ನು ಮೆದುಳಿನಲ್ಲಿರುವ ಮೆಟಾಸ್ಟಾಸಿಸ್‌ಗೆ ನೀಡಿದಲ್ಲಿ, ತಲೆಯ ಭಾಗದಲ್ಲಿ ಸಂಪೂರ್ಣ ಕೂದಲು ಉದುರಬಹುದು.

  • ಹಾರ್ಮೋನ್ ಥೆರಪಿ: ಇದು ಕೂದಲನ್ನು ತೆಳ್ಳಗೆ ಮಾಡುತ್ತದೆ ಆದರೆ ಸಂಪೂರ್ಣ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ.
  1. ಯಾವಾಗ ಕೂದಲು ಬೆಳೆಯುತ್ತದೆ?

ಈ ಮೊದಲೇ ಹೇಳಿದಂತೆ, ಕೂದಲು ಉದುರುವಿಕೆಯು ಕ್ಯಾನ್ಸರ್‌ ಚಿಕಿತ್ಸೆಯ ಒಂದು ತಾತ್ಕಾಲಿಕ ಭಾಗವಾಗಿರುತ್ತದೆ.

  • ಒಂದು ವೇಳೆ ನೀವು ಕಿಮೊಥೆರಪಿಗೆ ಒಳಗಾದಲ್ಲಿ, ನಿಮ್ಮ ಕೂದಲು ಒಂದು ಇಂಚು ಬೆಳೆಯಲು 3-6 ತಿಂಗಳ ಕಾಲ ತೆಗೆದುಕೊಳ್ಳುತ್ತದೆ.

  • ಒಂದು ವೇಳೆ ನೀವು ರೇಡಿಯೇಶನ್ ಥೆರಪಿಯಿಂದ ಕೂದಲನ್ನು ಕಳೆದುಕೊಂಡಲ್ಲಿ, 4-6 ತಿಂಗಳ ನಂತರ ನಿಮ್ಮ ಕೂದಲು ಒಂದು ಇಂಚು ಬೆಳೆಯುತ್ತದೆ.
  1. ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೇಗೆ ತಡೆದುಕೊಳ್ಳುವುದು?

ಕೂದಲು ಉದುರುವಿಕೆಗೆ ಮೊದಲೇ ಅದನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಚಿಕಿತ್ಸೆ ನಡೆಯುವಾಗ ಮತ್ತು ನಡೆದ ಮೇಲೆ ಈ ಸಲಹೆಗಳನ್ನು ಅನುಸರಿಸಿ:-

a.ಚಿಕಿತ್ಸೆಗೆ ಮೊದಲು :-

ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ: ಚಿಕಿತ್ಸೆ ಪಡೆಯುವ ಮೊದಲೇ ಕೂದಲನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಆಗ ಕೂದಲು ಉದುರುವುದು ಮತ್ತು ಬೆಳೆಯುವುದು ನಿಮ್ಮ ಅರಿವಿಗೆ ಬರುವುದು ಕಡಿಮೆಯಾಗುತ್ತದೆ. ಪುರುಷರು ತಮ್ಮ ತಲೆಯನ್ನು ಬೋಳಿಸಿಕೊಂಡು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಮಹಿಳೆಯರಿಗೆ ಇದು ಇಷ್ಟವಾಗದ ಸಲಹೆಯಾಗಿರುತ್ತದೆ.

ಕೋಲ್ಡ್ ಕ್ಯಾಪ್ ಥೆರಪಿ: ನಿಮಗೆ ಚಿಕಿತ್ಸೆ ನೀಡುವಾಗ ಕ್ಯಾಪ್ ಅಥವಾ ಕೋಲ್ಡ್ ಪ್ಯಾಕ್‌ಗಳನ್ನು ಧರಿಸಲು ಸಲಹೆ ಮಾಡಬಹುದು. ಕೂದಲು ಉದುರುವುದನ್ನು ತಪ್ಪಿಸಲು ಈ ತಂತ್ರವನ್ನು ಬಳಸಲಾಗುತ್ತದೆ. ಕೋಲ್ಡ್ ಪ್ಯಾಕ್ ತಲೆಯಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ಕಿಮೊಥೆರಪಿಯ ಔಷಧಿಗಳು ಕೂದಲಿನ ಬುಡಕ್ಕೆ ತಲುಪುವುದನ್ನು ತಡೆಯುತ್ತದೆ.

b.ಚಿಕಿತ್ಸೆ ಅವಧಿಯಲ್ಲಿ:-

  • ನಿಮ್ಮ ಕೂದಲನ್ನು ಪ್ರತಿದಿನ ತೊಳೆಯಲು ಹೋಗಬೇಡಿ.
  • ಯಾವಾಗಲೂ ಬೇಬಿ ಶಾಂಪೂವಿನಂತಹ ಮೃದುವಾದ ಶಾಂಪೂವನ್ನು ಬಳಸಿ ಕೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.

  • ಮೃದುವಾದ ಹೇರ್‌ಬ್ರಷ್ ಅನ್ನು ಬಳಸಿ ಹಾಗೂ ಬಿಗಿಯಾದ ಕ್ಲಿಪ್‌ಗಳನ್ನು ಬಳಸಿ ನಿಮ್ಮ ಕೂದಲಿನ ಸ್ಟೈಲ್ ಅನ್ನು ಮಾಡಬೇಡಿ.
  • ಬಿಸಿಲಿನಲ್ಲಿ ಹೋಗವಾಗ ನಿಮ್ಮ ತ್ವಚೆಗೆ ಸನ್‌ಸ್ಕ್ರೀನ್ ಲೋಶಹ್ ಮತ್ತು ತಲೆಗೆ ಸ್ಕಾರ್ಫ್ ಸುತ್ತಿಕೊಂಡು ಹೋಗುವುದನ್ನು ಮರೆಯಬೇಡಿ.
  • ಒಂದು ವೇಳೆ ನಿಮ್ಮ ಕೂದಲಿನಲ್ಲಿ ಹಕ್ಕಳೆಗಳು ಅಥವಾ ತುರಿಕೆಗಳು ಇದ್ದಲ್ಲಿ, ಅದು ಒಣ ತ್ವಚೆಯನ್ನು ಪ್ರತಿನಿಧಿಸುತ್ತದೆ. ಇದಕ್ಕೆ ಎಣ್ಣೆ ಅಥವಾ ಮೊಯಿಶ್ಚರೈಸರ್ ಅನ್ನು ಬಳಸಿ. ಆ್ಯಂಟಿ ಡೆಂಡ್ರಫ್ ಶಾಂಪೂವನ್ನು ಬಳಸಬೇಡಿ.

  • ಕರ್ಲಿಂಗ್, ಸ್ಟ್ರೈಟೆನಿಂಗ್ ಅಥವಾ ಕಲರಿಂಗ್ ಅನ್ನು ಮಾಡಿಸಬೇಡಿ.

c.ಚಿಕಿತ್ಸೆಯ ನಂತರ :-

ನಿಮ್ಮ ಸ್ವಾಭಾವಿಕ ಕೂದಲನ್ನು ಮೃದುವಾಗಿ ತೊಳೆಯಿರಿ, ಬಾಚಿರಿ ಅಥವಾ ಕಲರ್ ಮಾಡಿ. ಏಕೆಂದರೆ ಈ ಕೂದಲುಗಳು ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತವೆ:

  • ನಿಮ್ಮ ಕೂದಲನ್ನು ವಾರಕ್ಕೆ ಎರಡು ದಿನ ಮಾತ್ರ ತೊಳೆಯಿರಿ.
  • ತ್ವಚೆಯಲ್ಲಿ ಹಕ್ಕಳೆಗಳು ಹಾಗೂ ಒಣ ತ್ವಚೆಯನ್ನು ನಿವಾರಿಸಿಕೊಳ್ಳಲು ನೀವು ಕೂದಲಿನ ಮಸಾಜ್ ಅನ್ನು ಮಾಡಿಸಿಕೊಳ್ಳಬಹುದು.

ಆತುರಪಡಬೇಡಿ, ನೀವು ಕೂದಲು ಬೆಳೆಯುವುದನ್ನು ನೋಡಲು ಕಾತರದಿಂದ ಇರಬಹುದು. ಆದರೆ ಅದಕ್ಕೂ ಸ್ವಲ್ಪ ಸಮಯ ಬೇಕಾಗುತ್ತದೆ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ವೀಳ್ಯದೆಲೆಯಾ ಬಗ್ಗೆ ನಿಮ್ಗೆ ಗೊತ್ತಿಲ್ಲದಿರೋ ಮಾಹಿತಿ…ತಿಳಿಯಲು ಈ ಲೇಖನ ಓದಿ ಮತ್ತು ಮರೆಯದೇ ಶೇರ್ ಮಾಡಿ..

    ವೀಳ್ಯದೆಲೆ ಎಂದರೆ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚು ಬಳಸುವ ಎಲೆ.ತಾಂಬೂಲದಲ್ಲಿ ಪ್ರಮುಖ ಸ್ಥಾನ ಹೊಂದಿರುವ ವೀಳ್ಯದೆಲೆಗೆ ಸದಾ ಬೇಡಿಕೆ ಇದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.ಆದರೆ ಸಾಂಪ್ರದಾಯಕವಾಗಷ್ಟೆ ಅಲ್ಲ, ಇದರ ಔಷಧೀಯ ಗುಣಗಳು ಕೂಡ ಹಲವು. ಆದರೆ ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಹಾಗೂ ತಿವಿದ ಗಾಯವಾಗಿದ್ದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ…

  • ಉಪಯುಕ್ತ ಮಾಹಿತಿ

    ಅಪ್ಪಳಿಸಲಿದೆ ಗಜ ಚಂದ ಮಾರುತ..!ಎಲ್ಲೆಲ್ಲಿ ಮಳೆಯಾಗುತ್ತೆ ಗೊತ್ತಾ..?

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಗಜ ಚಂಡಮಾರುತದ ಪರಿಣಾಮ ನಗರದಲ್ಲಿ ಗುರುವಾರ ಮತ್ತು ಶುಕ್ರವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದಿಂದ ಚಂಡಮಾರುತ ಎದ್ದಿದ್ದು ಮುಂದಿನ 24 ಗಂಟೆಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.ಸ್ತುತ ತಮಿಳುನಾಡು ಕರಾವಳಿಯತ್ತ ಧಾವಿಸುತ್ತಿರುವ ಗಜ ಚಂಡಮಾರುತ ದಕ್ಷಿಣ ಆಂಧ್ರ ಪ್ರದೇಶ ಕರಾವಳಿಯಲ್ಲೂ ಭಾರಿ ಮಳೆ ಆತಂಕ ಸೃಷ್ಟಿ ಮಾಡಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ…

  • ಸುದ್ದಿ

    ಕಾಶಿಯಲ್ಲಿ ಭೂಮಿಯನ್ನ ಅಗೆಯುವಾಗ ಸಿಕ್ಕಿದ್ದೇನು ಗೊತ್ತಾ, ನೋಡಿ ಶಿವನ ಮಹಿಮೆ.

    ನಮ್ಮ ದೇಶವನ್ನ ದೇವಾಲಯಗಳ ಗೂಡು ಏಂದು ಕರೆಯುತ್ತೇವೆ ಮತ್ತು ಅತೀ ಹೆಚ್ಚು ದೇವಾಲಯಗಳನ್ನ ಹೊಂದಿರುವ ದೇಶಗಳಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಮ್ಮ ದೇಶದ ಜನರು ದೇವರನ್ನು ಹೆಚ್ಚಾಗಿ ನಂಬುತ್ತಾರೆ ಮತ್ತು ದೇಶದಲ್ಲಿ ದೇವರ ಆರಾಧನೆ ಹೆಚ್ಚಾಗಿ ನಡೆಯುತ್ತಾರೆ, ಯಾವುದೇ ಶುಭಕಾರ್ಯ ನಡೆಯಬೇಕು ಅಂದರೆ ಮೊದಲು ದೇವರ ಒಪ್ಪಿಗೆಯನ್ನ ಪಡೆದು ನಂತರ ಮುಂದಿನ ಕೆಲಸಕ್ಕೆ ಕೈ ಹಾಕಲಾಗುತ್ತದೆ. ಹಿಂದಿನ ಕಾಲದಿಂದಲೂ ನಮ್ಮ ಜನರು ದೇವರ ವಿಚಾರವಾಗಿ ಅನೇಕ ಆಚಾರ ವಿಚಾರಗಳನ್ನ…

  • ಉಪಯುಕ್ತ ಮಾಹಿತಿ

    ಭಾರತೀಯರು ಉಪಾಹಾರಕ್ಕೆ ಬದಲಾಗಿ ಇವನ್ನು ಶೇ. 67 ರಷ್ಟು ಸೇವಿಸುತ್ತಾರೆ ತಿಳಿಯಲು ಈ ಲೇಖನ ಓದಿ….

    ನೀಲ್ಸನ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಅನ್ವಯ 3೦,೦೦೦ ನಗರದ ಗ್ರಾಹಕರು ಅಂದರೆ ಶೇ.67 ರಷ್ಟು ಭಾರತೀಯರು ಉಪಾಹಾರಕ್ಕೆ ಬದಲಾಗಿ ಈ ತಿಂಡಿಗಳನ್ನು ಸೇವಿಸುತ್ತಿದ್ದರು. ಶೇ.56ರಷ್ಟು ಮಂದಿ ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಬದಲು ಈ ತಿಂಡಿಗಳನ್ನು ಸೇವಿಸುತ್ತಿದ್ದಾರೆ ಇದಕ್ಕೆ ತಜ್ಞರು ಏನು ಹೇಳುತ್ತಾರೆ ನೋಡಿ.

  • ಸಿನಿಮಾ

    ರೆಬೆಲ್ ಸ್ಟಾರ್ ಅಂಬರೀಶ್ ರವರಿಗೆ ಮೊದಲೇ ಸಾವಿನ ಮುನ್ಸೂಚನೆ ಸಿಕ್ಕಿತ್ತಾ?ಇದಕ್ಕಿದೆ ಈ ಎರಡು ಕಾರಣ!

    ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶರಾಗಿ ಇಂದಿಗೆ ಐದು ದಿನಗಳಾಗಿವೆ. ಸೋಮವಾರದಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯಸಂಸ್ಕಾರ ನೆರವೇರಿದ್ದು, ಇಂದು ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ ಬಳಿಕ ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣಕ್ಕೆ ತೆರಳಿದ್ದಾರೆ. ಈ ನಡುವೆ ಅಂಬರೀಶ್ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ತಮ್ಮ ಪುತ್ರ ಅಭಿಷೇಕ್ ಅಭಿನಯದ ಚಿತ್ರ ಇನ್ನೂ ಪೂರ್ಣವಾಗದಿದ್ದರೂ ಹಠ ಹಿಡಿದು ಮೊದಲರ್ಧವನ್ನು ವೀಕ್ಷಿಸಿದ್ದರಂತೆ. ಅಷ್ಟೇ ಅಲ್ಲ ಕಳೆದ…

  • Histrocial, inspirational, karnataka

    ನೆಲ್ಲಿತೀರ್ಥ ಗುಹಾಲಯ ಮಂದಿರಾ – ಮಂಡೀ ಉರೀ ಶಿವನ ದರ್ಶನ

    ನೆಲ್ಲಿತೀರ್ಥ ಗುಹಾಲಯ ಮಂದಿರಾ ಇರುವುದು  ಮಂಗಳೂರು  ಕಟೀಲ್  ದುರ್ಗಾ  ಪರಮೇಶವರೀ  ದೇವಸ್ಥಾನ  ಮೂಡಬಿದ್ರಿ. ಸುಮಾರು  ೫ ಕೆ.ಮ್ ಅಷ್ಟು  ದೂರದಲೇ  ಇರುವುಧು ಈ  ಮಂದಿರ. ಇತೀಹಾಸ : ಸುಮಾರು  ೧೪೮೭ ಇತೀಹಾಸವೀರುವ  ಗುಹಾಲಯದಲೇ ಶಿವನ  ಲಿಂಗ  ಇರುವುಧು.  ೬೬೦ ಅಡೀ  ಉದ್ದಾ  ಹಾಗೂ  ೨ ಅಡೀ ಯಥರ  ಇರುವ  ಗುಹೆಯ್ಯ್ಯ ಲೀ  ಭಕತದೀಗಳು ಮಂಡೀ ಉರೀ ದರ್ಶನವನ್ನು ಪಡಯ  ಬೇಕು . ಗುಹೆಯ್ಯ್ಯ ಲೀ  ನೀರುಹರಿಯುತದೆ.ಇಲೆಯೇ ನೆಲ್ಲಿಯಾ ಗಾತ್ರಧಲೀ ಹನೀ ಹನೀಯಾಗೀ ನೀರು ಬೀಳುತದೆ. ಹಾಗಾಗೀ  ಈ …