ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಗೃಹ ಉಪಯೋಗಿ ವಸ್ತುಗಳಲ್ಲಿ ತುಂಬಾನೇ ಹಾನಿ ಉಂಟುಮಾಡೋ, ನಮ್ಮ ಆರೋಗ್ಯದಮೇಲೆ ಕೆಟ್ಟ ಪರಿಣಾಮ ಬೀರೋ ಪದಾರ್ಥಗಳು ಇರುತ್ತೆ. ಈ ವಸ್ತುಗಳನ್ನ ಪದೇ ಪದೇ ಬಳಸೋದ್ರಿಂದ ಒಂದಲ್ಲ ಒಂದು ರೀತಿಯ ಕ್ಯಾನ್ಸರ್ ಉಂಟುಮಾಡೋ ಈ ಪದಾರ್ಥಗಳು ನಮ್ಮ ದೇಹ ಸೇರಿಕೊಳುತ್ತೆ. ಅಂತಹ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ.
1.ಏರ್ ಫ್ರೆಶ್ನೆರ್:-
ಈ ಏರ್ ಫ್ರೆಶ್ನೆರ್ ಸ್ಪ್ರೇ, ಜೆಲ್ ಹೀಗೆ ಬೇರೆ ಬೇರೆ ರೂಪದಲ್ಲಿ ಸಿಗುತ್ತೆ. ಮನೆ ಒಳಗೆ, ಕಾರ್ ಒಳಗೆ ಘಮ ಘಮ ಅನ್ಲಿ ಅಂತ ಸಾಮಾನ್ಯವಾಗಿ ಇದನ್ನ ಬಳಸ್ತಾರೆ. ಇದ್ರಲ್ಲಿ ನಮ್ಮ ದೇಹಕ್ಕೆ ಹಾನಿ ಮಾಡೋ ವಿಷಾದ ಅಂಶ ಇರುತ್ತೆ.
ಅದ್ರಲ್ಲಿರೋ ಪಾಥಲಾಟ್ಸ್ ಅನ್ನೋ ಪದಾರ್ಥದಿಂದ ನಮ್ಮ ಸಂತಾನೋತ್ಪತ್ತಿ ಶಕ್ತಿಯನ್ನ ಹಾಳುಮಾಡೊದಲ್ದೆ ಅಸ್ತಮಾದಂತಹ ಕಾಯಿಲೆ ಗಂಭೀರ ರೂಪ ಪಡೆಯೋಹಾಗೆ ಮಾಡುತ್ತೆ.
2.ಸುವಾಸನೆಭರಿತ ಮೇಣದ ಬತ್ತಿ:-
ಈ ಸುವಾಸನೆಭರಿತ ಮೇಣದ ಬತ್ತಿ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ, ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ, ಹಬ್ಬದಲ್ಲಿ ಹೀಗೆ ಹಲವಾರು ಸಲ ಇದನ್ನ ಉಪಯೋಗಿಸ್ತೀವಿ. ಕೆಲವೊಬ್ರು ಬೇರೆ ಫ್ರೆಶ್ನೆರ್ಗೆ ನೋಡಿದ್ರೆ ಇದು ಸ್ವಲ್ಪ ಕಡಿಮೆ ಬೆಲೆಗೆ ಸಿಗೋದ್ರಿಂದ ಇದನ್ನ ಬಚ್ಚಲಮನೇಲೇ ಇತ್ತು ಅಲ್ಲಿನ ವಾಸನೆ ಹೋಗಿಸೋದಕ್ಕೆ ಉಪಯೋಗಿಸ್ತಾರೆ.
ಇದ್ರಲ್ಲೂ ಕೂಡ ವಿಷಪದಾರ್ಥ ಇರಬಹುದು, ಯಾಕೆ ಅಂದ್ರೆ ಬಹಳಷ್ಟು ಜನ ಇದರ ಬತ್ತಿಯನ್ನ ಸೀಸದಿಂದ ಮಾಡಿರ್ತಾರೆ., ಒಂದುಸಲ ನೋಡ್ಕೊಳೋದು ಒಳ್ಳೇದು. ಹೇಗೆ ಪರೀಕ್ಷೆ ಮಾಡೋದು ಅಂದ್ರ ? ಒಂದು ಬಿಳಿ ಪೇಪರ್ ತೊಗೊಂಡು ಆ ಕ್ಯಾಂಡೆಲ್ನ ಬತ್ತಿ ತುದಿಯಿಂದ ಒಂದು ಲೈನ್ ಬರೆದಹಾಗೆ ಮಾಡಿ, ನಿಮಗೆ ಯಾವುದೇ ಲೈನ್ ಕಾಣಿಸಲಿಲ್ಲ ಅಂದ್ರೆ ಸೀಸ ಇಲ್ಲ ಅಂತ. ಅಕಸ್ಮಾತ್ ಲೈನ್ ಕಾಣಿಸಿದ್ರೇ ಇದ್ರಲ್ಲಿ ವಿಷಪದಾರ್ಥಗಳು ಇರೋದು ಗ್ಯಾರಂಟಿ.
3.ಬಚ್ಚಲುಮನೆಯ ಕರ್ಟನ್:-
ಇತ್ತೀಚಿನ ದಿನಗಳಲ್ಲಿ ಬಚ್ಚುಲು ಮನೇಲಿ ಶವರ್ ಇದ್ದೆ ಇರುತ್ತೆ. ತುಂಬಾ ಮನೆಗಳಲ್ಲಿ ಈ ಶವರ್ನಲ್ಲಿ ಸ್ನಾನ ಮಾಡೋವಾಗ ನೀರು ಹಾರದೆ ಇರೋ ಹಾಗೆ ಕರ್ಟನ್ ಹಾಕ್ತಾರೆ. ಈ ಕರ್ಟನ್ ನಲ್ಲಿ ಪ್ಲಾಸ್ಟಿಕ್ ಹಾಗೂ PVC ಇರುತ್ತೆ. ಈ ಕಾರ್ಸಿನೋಜೆನಿಕ್ ಅನ್ನೋ ವಿಷಕಾರಿ ಪದಾರ್ಥನ ಹೊರ ಹಾಕುತ್ತೆ.
ಇದು ಪರಿಸರಕ್ಕೂ ತುಂಬಾ ಹಾನಿಮಾಡುತ್ತೆ. ಬಿಸಿ ನೀರಿನ ಶಾಖಕ್ಕೆ ಈ ವಿಷಾದ ಪದಾರ್ಥ ಹೊರಬರುತ್ತಲ್ಲ ಅದು ನಮ್ಮ ಉಸಿರಾಟ ಹಾಗೆ ಸಂತಾನೋತ್ಪತ್ತಿ ಕ್ರಿಯೆಗೆ ಹಾನಿ ಮಾಡುತ್ತೆ. ಇದರ ಬದಲು ಕಾಟನ್ ಕರ್ಟನ್ ಬಳಸೋದು ಒಳ್ಳೇದು.
4.ಕಾರ್ಪೆಟ್ ಕ್ಲೀನರ್:-
ಕಾರ್ಪೆಟ್ ಗೆ ಅಂಟಿಕೊಂಡಿರು ಕಲೆ ಹೋಗ್ಬೇಕು ಅಂತ ಈ ವಸ್ತು ತಾಯಾರಿಸೋದಕ್ಕೆ ಅತ್ಯಂತ ಹೆಚ್ಚು ಹಾನಿಕಾರಿಕ ಕೆಮಿಕಲ್ ಉಪಯೋಗಿಸಿರ್ತಾರೆ. ಪರ್ಕ್ಲೋರೆಥೈಲಿನ್ ಮತ್ತು ನಾಫ್ಥಲೀನ್ ಅನ್ನೋ ಕೆಮಿಕಲ್ ಇದ್ರಲ್ಲಿ ಇರೋದ್ರಿಂದ ಇದನ್ನ ಉಸಿರಾಡಿದಾಗ ಶ್ವಾಸಕೋಶದ ಕ್ಯಾನ್ಸರ್ ಬಾರೋ ಸಾಧ್ಯತೆ ಹೆಚ್ಚು. ಈ ನುಸಿ ಗುಳಿಗೇಲೂ ಈ ಪದಾರ್ಥ ಇರುತ್ತೆ.
ಈ ಕಾರ್ಪೆಟ್ ಕ್ಲೀನ್ ಮಾಡಕ್ಕೆ ಅಡುಗೆ ಸೋಡಾ ಹಾಗೂ ವಿನೆಗರ್ ಮಿಶ್ರಣ ಉಪಯೋಗಿಸಿ ನೋಡಿ. ಇದ್ರಿಂದ ಯಾವುದೇ ತೊಂದರೆ ಇರಲ್ಲ.
5.ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳು:-
ಡ್ರೈ ಕ್ಲೀನ್ ಮಾಡಕ್ಕೆ ಉಪಯೋಗಿಸೋ ವಸ್ತುಗಳಲ್ಲಿ ಎಟ್ರಾಕ್ಲೋರೆಥೈಲಿನ್ ಅಥವಾ ಪರ್ಚ್ಲೋರೆಥೈಲಿನ್ ಅನ್ನೋ ಕೆಮಿಕಲ್ ಇರುತ್ತೆ. ಇದನ್ನ ಬಳಸಿ ಕ್ಲೀನ್ ಮಾಡಿರೋ ಬಟ್ಟೆ ಹಾಕ್ಕೊಂಡ್ರೆ ಹಾನಿಕಾರಕ ಕಾರ್ಸಿನೋಜೆನ್ಸ್ ನಮ್ಮ ದೇಹಕ್ಕೆ ಸುಲಭವಾಗಿ ಹೋಗುತ್ತೆ.
ಇದ್ರಿಂದ ಹಲವಾರು ರೀತಿಯ ಕ್ಯಾನ್ಸರ್ ಆಗೋ ಸಾಧ್ಯತೆ ಇರೋದ್ರಿಂದ ಡ್ರೈ ಕ್ಲೀನ್ ಮಾಡಕ್ಕೆ ಕೊಡೋದಕ್ಕೆ ಮುಂಚೆ ಈ ವಿಷಕಾರಿ ಅಂಶ ಇರೋ ವಸ್ತು ಬಳಸಬೇಡಿ ಅಂತ ಹೇಳೋದು ಒಳ್ಳೇದು.
6.ಕೀಟನಾಶಕಗಳು.
ಎಲ್ಲರೂ ಒಂದಲ್ಲ ಒಂದುಸಲ ರೈತರು ಕ್ರಿಮಿ, ಕೀಟನಾಶಕ ಸಿಂಪಡಿಸೋವಾಗ ತೊಂದರೆ ಆಗಿ ಸತ್ರು, ಯಾವುದೊ ಸಮಸ್ಯೆಗೆ ಸಿಲುಕಿ ಇದನ್ನ ಕುಡಿದು ಆತ್ಮ ಹತ್ಯೆ ಮಾಡ್ಕೊಂಡ್ರು ಅಂತ ಓದಿರ್ತೀವಿ, ಕೇಳಿರ್ತೀವಿ. ಇದು ಬರಿ ಕ್ರಿಮಿ, ಕೀಟಗಳಿಗೆ ಅಷ್ಟೆ ಅಲ್ಲ ನಮಗೂ ಹಾಗೆ ನಮ್ಮ ಮುದ್ದಿನ ಸಾಕು ಪ್ರಾಣಿಗಳಿಗೂ ಹಾನಿ ಮಾಡುತ್ವೆ.
ಇದ್ರಲ್ಲಿ ಆರ್ಗನೋಫಾಸ್ಫೇಟ್ ಕೀಟನಾಶಕಗಳು, ಪೆರೆಥೆರಿನ್ ಮತ್ತು ಕಾರ್ಬಮೆಟ್ಗಳು ಇರುತ್ತೆ , ಇವುಗಳು ತುಂಬಾನೇ ಅಪಾಯಕಾರಿ ಮತ್ತು ಮನುಷ್ಯರಿಗೆ ಕ್ಯಾನ್ಸರ್ ತರೋ ಸಾಧ್ಯತೆ ಹೆಚ್ಚು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ದೇಹದ ಆಕಾರವನ್ನು ನೋಡಿ ಒಬ್ಬರ ವ್ಯಕ್ತಿತ್ವವನ್ನು ಅಳೆಯಬಹುದು. ಯಾರೇ ಆಗಲಿ ನಮ್ಮನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಎಂತಹ ವ್ಯಕ್ತಿ ಎಂಬುದನ್ನು ಹಾಗೆಯೇ ತಿಳಿಯಬಹುದು.
ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ.
ಯಾವ ವೈದ್ಯಕೀಯ ಪದ್ಧತಿ ಇಲ್ಲದಿದ್ದರೂ. ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ 24 ಗಂಟೆ, 365ದಿನವೂ ಔಷಧಿ ದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ. ಅಡುಗೆ ಮನೆಯಲ್ಲೇ ಇದೆ ಆರೋಗ್ಯ. ದೊರೆಯುವ ಔಷಧಿಗಳು ಇಲ್ಲಿವೆ ಓದಿ.
ಬೆಂಗಳೂರು, ಮೇ 14: ಎಫ್ಸಿ ಆರ್ ಎ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನವು ಪ್ರತಿಕ್ರಿಯೆ ನೀಡಿದೆ. ವಿದೇಶದಿಂದ ಯಾವುದೇ ‘ಫಂಡಿಂಗ್’ ಪಡೆದಿಲ್ಲ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೂಲದ ಎನ್ ಜಿಒ ಇನ್ಫೋಸಿಸ್ ಫೌಂಡೇಷನ್, ವಿದೇಶದಿಂದ ಪಡೆದ ದೇಣಿಗೆ ಮೊತ್ತಕ್ಕೆ ಸೂಕ್ತ ದಾಖಲೆ ಒದಗಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿತ್ತು. ಈ…
ಈ ಸ್ಮಾರ್ಟ್ ಯುಗದಲ್ಲಿ ಪ್ರತಿನಿತ್ಯ ಹೊಸ ಹೊಸ ಆವಿಷ್ಕಾರವಾಗುವುದನ್ನು ನಾವು ನೋಡಿರುತ್ತೇವೆ ಅದನ್ನು ನಾವು ಅನುಭವಿಸುತ್ತಲೂ ಇರಬಹುದು, ಕೇವಲ 10 ವರ್ಷಗಳ ಹಿಂದೆ ಇದ್ದ ತಂತ್ರಜ್ಞಾನಕ್ಕೂ ಈಗಿನ ತಂತ್ರಜ್ಞಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ, ಹಾಗೆಯೇ ಈಗಿರುವ ತಂತ್ರಜ್ಞಾನಕ್ಕೂ ಮುಂದಿನ 20 ಅಥವಾ 30 ವರ್ಷಗಳ ತಂತ್ರಜ್ಞಾನಕ್ಕೂ ಬಹಳಷ್ಟು ವ್ಯತ್ಯಾಸವಿರುತ್ತದೆ! ಈ ಕೆಳಗಿನ ವಿಡಿಯೋ ನಮ್ಮ ಮುಂದಿನ ಪೀಳಿಗೆ ಉಪಯೋಗಿಸಬಹುದಾದ ತಂತ್ರಜ್ಞಾನಗಳ ಬಗ್ಗೆ ನಿಮಗೆಲ್ಲ ಕಿರುನೋಟವನ್ನು ತೋರಿಸುತ್ತದೆ! ಕುತೂಹಲಭರಿತವಾದ ಈ ವಿಡಿಯೋವನ್ನು ತಪ್ಪದೇ ವೀಕ್ಷಿಸಿ..!
ಊಟಕ್ಕೆ ಬೆಳ್ಳಿ ತಟ್ಟೆ ಹಾಗೂ ನೀರು ಕುಡಿಯಲು ಬೆಳ್ಳಿ ಲೋಟ ಬಳಸಿದರೆ ಅದು ಶ್ರೀಮಂತರ ಶೋಕಿ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಹಳೆ ಕಾಲದವರು ಬೆಳ್ಳಿ ಪೂಜಾ ಸಾಮಗ್ರಿಗಳು, ಮಕ್ಕಳಿಗೆ ಊಟ ಹಾಕಲು ಬೆಳ್ಳಿ ಬಟ್ಟಲು, ಮನೆಗೆ ಬಂದವರಿಗೆ ನೀರು ಕುಡಿಯಲು ಬೆಳ್ಳಿ ಲೋಟ…. ಹೀಗೆ ಸಾಧ್ಯವಾದಷ್ಟು ಬೆಳ್ಳಿ ಪಾತ್ರೆಗಳನ್ನೇ ಬಳಸುತ್ತಿದ್ದರು. ಅದನ್ನು ಎಲ್ಲರೂ ಬಳಸಲಿ ಎಂದೇ ಬೆಳ್ಳಿಗೆ ಪವಿತ್ರ ಲೋಹ ಎಂಬ ಹಣೆಪಟ್ಟಿ ಕಟ್ಟಿದರು. ಇದಕ್ಕೆ ಕಾರಣ ಬೆಳ್ಳಿ ದುಬಾರಿ ಎಂಬುದಲ್ಲ. ಬದಲಿಗೆ, ಬೆಳ್ಳಿಯಲ್ಲಿರುವ ಆರೋಗ್ಯವರ್ಧಕ…