ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ 12 ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ‘ಮಣ್ಣಿನ ಮಗ’ ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.

ಜೆಡಿಎಸ್ ಅಧ್ಯಕ್ಷ ಮಣ್ಣಿನ ಮಗ ಹೆಚ್.ಡಿ.ದೇವೇಗೌಡರು 11-12-1994ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಮುಖ್ಯಮಂತ್ರಿಯಾಗಿ ಇಂದಿಗೆ 23 ವರ್ಷಗಳಾಗಿವೆ. ರಾಜಕೀಯದಲ್ಲಿ ದೇವೇಗೌಡರ ಬಗ್ಗೆ ತಿಳಿಯಬೇಕಾದ್ದು ತುಂಬಾ ಇದೆ.

“ಮಣ್ಣಿನ ಮಗ ಹೆಚ್.ಡಿ.ದೇವೇಗೌಡರ” ಬಗ್ಗೆ ಮೊಗೆದಷ್ಟು ಮುಗಿಯದ ಇತಿಹಾಸದ ಪುಟ..!
1.ಎಂದಿಗೂ ಸಹ ದುಷ್ಚಟಗಳ ದಾಸರಾಗಲಿಲ್ಲ………ವೈಯಕ್ತಿಕವಾಗಿಯೂ ಜೀವನದಲ್ಲಿ ಎಲ್ಲೂ ಸಹ ಒಂದೇ ಒಂದು ಕಪ್ಪುಚುಕ್ಕೆ ಮೂಡಿಸಿಕೊಂಡವರಲ್ಲ………ವೈಯಕ್ತಿಕ ಜೀವನ ಎಂದು ಒಂದು ಕ್ಷಣವೂ ಬಿಡುವು ಮಾಡಿಕೊಂಡು ಜೀವನದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತವರಲ್ಲ “ಅಪ್ಪಟ ರೈತರ ಮಗ ದೇವೇಗೌಡರು”…………
2. 24/7 ರಾಜಕಾರಣಿ ಯಾರಾದರೂ ಈ ಭೂಮಿ ಮೇಲಿದ್ದರೆ ನಾಯಕರ ತಯಾರು ಮಾಡುವ ಕಾರ್ಖಾನೆಯಾಗಿ ಎಲ್ಲ ಜನಾಂಗದವರನ್ನು ಮೇಲೆ ತಂದು ಅಧಿಕಾರ ನೀಡಿ ಆದರ್ಶ ಮೆರೆದ ಮಾಜಿ ಪ್ರಧಾನಿಯೊಬ್ಬರು ಸಕ್ರಿಯವಾಗಿ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದರೆ ಅದು “ಮಣ್ಣಿನ ಮಗ ದೇವೇಗೌಡರು”……………..
3.ಶುದ್ದಹಸ್ತರಾಗಿ ಭ್ರಷ್ಟಾಚಾರದ ಲವಲೇಶವನ್ನೂ ತಮಗೆ ತಾಗಿಸಿಕೊಳ್ಳದೆ ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲೂ ಸ್ವಚ್ಛವಾಗಿ ಜನಸೇವೆ ಮಾಡಿ ಜಾತಿ ಧರ್ಮ ಸೀಮೆ ಕುಲ ಭಾಷೆ ಪ್ರಾಂತ್ಯ ಎಂದು ಭೇಧ ಭಾವ ಮಾಡದೆ ಪ್ರಪಂಚಕ್ಕೆ ಮಾದರಿಯಾದ “ಶ್ರಮಜೀವಿ ದೇವೇಗೌಡರು”………….
4.ವಿಧಾನಸೌಧದ ದಾಖಲೆಗಳು ಹೇಳುವಂತೆ ಜನರಿಂದ ನೇರವಾಗಿ ಆರಿಸಿ ಬಂದು ಮುಖ್ಯಮಂತ್ರಿಯಾಗಿ ಪ್ರಮಾಣಿಕವಾಗಿ ಪಾರದರ್ಶಕ ಆಡಳಿತ ನೀಡಿ ಎಲ್ಲ ಜನಾಂಗಗಳನ್ನು ಸಮನಾಗಿ ಕಂಡು ಸಮಾಜ ಕಲ್ಯಾಣಕ್ಕಾಗಿ ಅತ್ಯವಶ್ಯಕವಾದ ಮೀಸಲಾತಿಗಳ ತಂದು ಜನಸೇವೆ ಮಾಡಿದ ಏಕೈಕ “ಮುಖ್ಯಮಂತ್ರಿ ದೇವೇಗೌಡರು”……………
5.ಸೋತಾಗಲೆಲ್ಲ ಧೃತಿಗೆಡದೆ ಮತ್ತೆ ಮತ್ತೆ ಕಳೆದುಕೊಂಡಲ್ಲೆ ಹುಡುಕಬೇಕು ಎನ್ನುವ ಹಾಗೆ ಮತ್ತೆ ಮತ್ತೆ ಮೇಲೆದ್ದು ಬಂದು ಪಾರುಪತ್ಯ ಸಾಧಿಸಿದ ಸಾಮಾನ್ಯರಲ್ಲಿ ಅಸಾಮಾನ್ಯ ಜನನಾಯಕರಿದ್ದರೆ ಪ್ರಧಾನಿಯಾಗಿ ಕನ್ನಡಮ್ಮನ ಬಾವುಟ ಕೆಂಪುಕೋಟೆಯ ಮೇಲೆ ಹಾರಿಸಿದ ಏಕೈಕ “ಕನ್ನಡಿಗ ದೇವೇಗೌಡರು”………………….

6.ತಮ್ಮ ಇಳಿವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಎಚ್ಚರವಹಿಸಿ ತಪಸ್ಸಿನಂತೆ ಯೋಗಾಭ್ಯಾಸ ಕಲಿತು ಪ್ರವೀಣ ಪರಿಣಿತರಾಗಿದ್ದರೆ ಯುವಕರು ನಾಚುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಜನಸಾಮಾನ್ಯರ ವಿಚಾರದಲ್ಲಿ ರೈತರ ವಿಷಯದಲ್ಲಿ ಅನ್ಯಾಯವಾದಾಗ ಮನೆಯಲ್ಲಿ ಕೂರದೆ ಬೀದಿಗಿಳಿದು ಹೋರಾಟ ಮಾಡಿ ನ್ಯಾಯ ಕೊಡಿಸುವ “ದಣಿವರೆಯದ ಧಣಿ ದೇವೇಗೌಡರು”……………..
7.ಕರ್ನಾಟಕದ ಪ್ರತಿ ಹಳ್ಳಿಹಳ್ಳಿಯ ಹೋಬಳಿಗಳ ತಾಲ್ಲೂಕು ಜಿಲ್ಲೆ ಪ್ರಾಂತ್ಯ ಸಹಿತ ರಾಜಕೀಯ ಅಂಕಿಅಂಶಗಳ ಜನಸಂಖ್ಯೆ ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ರಾಜಕೀಯ ಚಿಂತನೆಗಳನ್ನು ಮಾಡುವ ಕಾರ್ಯಕ್ರಮ ರೂಪಿಸಿ ಏಳಿಗೆಗೆ ಕಾರಣವಾಗುವ ಮಾನವ “ಗಣಕಯಂತ್ರ ದೇವೇಗೌಡರು”………………..
8.ಸುದೀರ್ಘ 55 ವರ್ಷಗಳು ನಿರಂತರವಾಗಿ ಜನರೊಂದಿಗೆ ಒಡನಾಟ ಇಟ್ಟುಕೊಂಡು ಅಧಿಕಾರ ಇರಲಿ ಇಲ್ಲದಿರಲಿ ಸುಮ್ಮನಿರದೆ ಕಷ್ಟಗಳ ಕೇಳಿಸಿಕೊಳ್ಳುವ ಪ್ರಯತ್ನ ಪಟ್ಟು ಬಿಡದೆ ಕೈಲಾಗುವಷ್ಟು ಕಷ್ಟ ಪರಿಹರಿಸಿ ಪರಿಹಾರ ಕೊಡಿಸಿ ಕಣ್ಣೀರು ಒರೆಸಿಯೆ ತೀರುವ “ಜನಸಾಮಾನ್ಯರ ಒಡನಾಡಿ ದೇವೇಗೌಡರು”…………..

9.ಈ ಕ್ಷಣಕ್ಕೂ ಸಹ ಯಾರೇ ಭೇಟಿ ಮಾಡಲು ಬಂದರೂ ತುಂಬಾ ಸುಲಭವಾಗಿ ಲಭ್ಯರಾಗಿ ಬರಮಾಡಿಕೊಂಡು ತದೇಕಚಿತ್ತದಿಂದ ಗಮನಿಸಿ ಸೌಜನ್ಯದಿಂದ ಮಾತನಾಡಿಸಿ ತಾಳ್ಮೆಯಿಂದ ಎಲ್ಲವನ್ನೂ ಆಲಿಸುವ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಜನರಿಗಾಗಿ ಮಾತ್ರ ಮೀಸಲಿಡುವ “ಮುತ್ಸದಿ ದೇವೇಗೌಡರು”…………….
10.ಎದುರಾಳಿಗಳು ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ಕೊಡದೆ ಕೆಸರೆರಚಾಟಕ್ಕಿಳಿಯದೆ ಛಲದಿಂದ ಹಠ ಬಿಡದೆ ಹಿಡಿದ ಕೆಲಸ ಸಾಧಿಸಿ ತೋರಿಸಿ ತಮ್ಮ ಶ್ರಮದಿಂದ ಕೆಲಸ ಯಶಸ್ವಿಗೊಳಿಸಿ ಟೀಕಾಕಾರರ ಬಾಯಿ ಮುಚ್ಚಿಸುವ “ಅಭಿವೃದ್ಧಿ ಹರಿಕಾರ ದೇವೇಗೌಡರು”………………

ಇಷ್ಟೆಲ್ಲಾ ಸಾಧನೆಗಳು ಕೇವಲ ತೃಣಮಾತ್ರವಷ್ಟೆ……. “ದೇವೇಗೌಡರು ಒಂದು ಅಪೂರ್ವ ಗ್ರಂಥ”………..”ಮೊಗೆಯುತ್ತ ಹೋದಷ್ಟು ಮತ್ತೆ ಮತ್ತೆ ಉಕ್ಕುವ ಕುತೂಹಲಕ್ಕೆ ಕಾರಣವಾಗುವ ಮುಗಿಯದ ನೀರಿನ ಸೆಲೆಯಂತೆ”………….
“ಇಂದಿಗೆ ಸರಿಯಾಗಿ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ 23 ವರ್ಷಗಳು 11/12/1994″…………….ಈ ಶುಭ ಸಂದರ್ಭದಲ್ಲಿ “ಹಳ್ಳಿ ಹುಡುಗರು”ಕಡೆಯಿಂದ ಕಿರುಪರಿಚಯ ನೀಡುವ ಒಂದು ಸಣ್ಣ ಪ್ರಯತ್ನ…

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಲ್ಲರ ಅಡುಗೆ ಮನೆಯಲ್ಲಿ ಲವಂಗದ ಎಲೆ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಲವಂಗದ ಎಲೆಯನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಲವಂಗದ ಎಲೆಯನ್ನು ಆಯುರ್ವೇದ ಔಷಧಿಗೂ ಬಳಸಲಾಗುತ್ತದೆ. ಲವಂಗದ ಎಲೆಗಳು ಆಹಾರದ ಪರಿಮಳವನ್ನು ಹೆಚ್ಚಿಸುತ್ತದೆ. ಲವಂಗದ ಎಲೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರಾಚೀನ ಕಾಲದಿಂದಲೂ ಅದ್ರ ಬಳಕೆ ಮಾಡಲಾಗ್ತಿದೆ. ಕರುಳು ಹಾಗೂ ಮೂತ್ರಪಿಂಡದ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತಿತ್ತು. ಜೇನುಹುಳ ಕಚ್ಚಿದ್ರೆ ಅದ್ರ ಚಿಕಿತ್ಸೆಗೂ ಲವಂಗದ ಎಲೆಯನ್ನು ಬಳಸಲಾಗ್ತಾಯಿತ್ತು. ಲವಂಗದ ಎಲೆಯಿಂದ ಇನ್ನಷ್ಟು ಪ್ರಯೋಜನಗಳಿವೆ. ಲವಂಗದ ಎಲೆ ಒತ್ತಡ ಕಡಿಮೆ ಮಾಡಲು…
ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್ ಇನ್ ಇಂಡಿಯಾ’ ಮಂತ್ರ ಜಪಿಸುತ್ತಿರುವಾಗಲೇ ಬಂಗಾಳಿ ವಿಜ್ಞಾನಿಯೊಬ್ಬರು ಕಡಿಮೆ ಬೆಲೆಯ, ಅತ್ಯಂತ ಕಡಿಮೆ ತೂಕದ
ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು. ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ…
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಸಾರ್ವಭೌಮ ಚಿತ್ರದ ಟಿ ಶರ್ಟ್
ನಮಗೆ ಬೇಕಾಗಿರೋದು ಕನ್ನಡ, ಎಲ್ಲವನ್ನೂ ಕನ್ನಡದಲ್ಲೇ ಪಡೆಯುವುದು, ಆದರೆ ಕೆಲವರ ಪ್ರಕಾರ ಕನ್ನಡಕ್ಕೆ ಅನ್ಯ ಭಾಷೆಯಿಂದ ಬರುವುದು ತಪ್ಪಂತೆ, ಡಬ್ಬಿಂಗ್ ಭೂತವಂತೆ.
ಇಂದು ಶನಿವಾರ, 03/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಕೆಲಸದ ಒತ್ತಡದಿಂದ ಸರಿಯಾಗಿ ಆಹಾರ ಸೇವಿಸದೆ ದೇಹಾಲಸ್ಯ. ಹಣದ ಆಧಾಯ ಹೆಚ್ಚಾಗುತ್ತದೆ. ಉದ್ದೇಶಿಸಿದ ಕೆಲಸಕಾರ್ಯಗಳು ನಡೆಯಲಿವೆ. ನೀವು ನಂಬುವರರಿಂದ ನಿಜ ತಿಳಿಯುತ್ತದೆ.ಆರ್ಥಿಕ ವಿಚಾರದಲ್ಲಿ ಜಾಗ್ರತೆ. ವೃಷಭ:- ಅಪವಾದಗಳೂ ಬೆನ್ನತ್ತಿ ಬರಬಹುದು. ನಿರೀಕ್ಷಿತ ಮೂಲದಿಂದ ಧನಾದಾಯ. ಬಾಕಿಯಿರುವ ಕುಟುಂಬದ ಎಲ್ಲಾ ಸಾಲಗಳನ್ನು ತೀರಿಸಲು ಸಾಧ್ಯ. ತಂದೆಯಿಂದ ನಿಮಗೆ ನಿರೀಕ್ಷಿತ ಧನ ಸಹಾಯ ದೊರೆಯಲಿದೆ. ಪಿತ್ರಾಜಿತ ಆಸ್ತಿಗಳು ಒದಗಿಬರುತ್ತವೆ. ಆರ್ಥಿಕವಾಗಿ ಅಭಿವೃದ್ಧಿ. ಅತಿ ವೇಗದ ಚಾಲನೆ…