ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ 12 ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ‘ಮಣ್ಣಿನ ಮಗ’ ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.

ಜೆಡಿಎಸ್ ಅಧ್ಯಕ್ಷ ಮಣ್ಣಿನ ಮಗ ಹೆಚ್.ಡಿ.ದೇವೇಗೌಡರು 11-12-1994ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಮುಖ್ಯಮಂತ್ರಿಯಾಗಿ ಇಂದಿಗೆ 23 ವರ್ಷಗಳಾಗಿವೆ. ರಾಜಕೀಯದಲ್ಲಿ ದೇವೇಗೌಡರ ಬಗ್ಗೆ ತಿಳಿಯಬೇಕಾದ್ದು ತುಂಬಾ ಇದೆ.

“ಮಣ್ಣಿನ ಮಗ ಹೆಚ್.ಡಿ.ದೇವೇಗೌಡರ” ಬಗ್ಗೆ ಮೊಗೆದಷ್ಟು ಮುಗಿಯದ ಇತಿಹಾಸದ ಪುಟ..!
1.ಎಂದಿಗೂ ಸಹ ದುಷ್ಚಟಗಳ ದಾಸರಾಗಲಿಲ್ಲ………ವೈಯಕ್ತಿಕವಾಗಿಯೂ ಜೀವನದಲ್ಲಿ ಎಲ್ಲೂ ಸಹ ಒಂದೇ ಒಂದು ಕಪ್ಪುಚುಕ್ಕೆ ಮೂಡಿಸಿಕೊಂಡವರಲ್ಲ………ವೈಯಕ್ತಿಕ ಜೀವನ ಎಂದು ಒಂದು ಕ್ಷಣವೂ ಬಿಡುವು ಮಾಡಿಕೊಂಡು ಜೀವನದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತವರಲ್ಲ “ಅಪ್ಪಟ ರೈತರ ಮಗ ದೇವೇಗೌಡರು”…………
2. 24/7 ರಾಜಕಾರಣಿ ಯಾರಾದರೂ ಈ ಭೂಮಿ ಮೇಲಿದ್ದರೆ ನಾಯಕರ ತಯಾರು ಮಾಡುವ ಕಾರ್ಖಾನೆಯಾಗಿ ಎಲ್ಲ ಜನಾಂಗದವರನ್ನು ಮೇಲೆ ತಂದು ಅಧಿಕಾರ ನೀಡಿ ಆದರ್ಶ ಮೆರೆದ ಮಾಜಿ ಪ್ರಧಾನಿಯೊಬ್ಬರು ಸಕ್ರಿಯವಾಗಿ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದರೆ ಅದು “ಮಣ್ಣಿನ ಮಗ ದೇವೇಗೌಡರು”……………..
3.ಶುದ್ದಹಸ್ತರಾಗಿ ಭ್ರಷ್ಟಾಚಾರದ ಲವಲೇಶವನ್ನೂ ತಮಗೆ ತಾಗಿಸಿಕೊಳ್ಳದೆ ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲೂ ಸ್ವಚ್ಛವಾಗಿ ಜನಸೇವೆ ಮಾಡಿ ಜಾತಿ ಧರ್ಮ ಸೀಮೆ ಕುಲ ಭಾಷೆ ಪ್ರಾಂತ್ಯ ಎಂದು ಭೇಧ ಭಾವ ಮಾಡದೆ ಪ್ರಪಂಚಕ್ಕೆ ಮಾದರಿಯಾದ “ಶ್ರಮಜೀವಿ ದೇವೇಗೌಡರು”………….
4.ವಿಧಾನಸೌಧದ ದಾಖಲೆಗಳು ಹೇಳುವಂತೆ ಜನರಿಂದ ನೇರವಾಗಿ ಆರಿಸಿ ಬಂದು ಮುಖ್ಯಮಂತ್ರಿಯಾಗಿ ಪ್ರಮಾಣಿಕವಾಗಿ ಪಾರದರ್ಶಕ ಆಡಳಿತ ನೀಡಿ ಎಲ್ಲ ಜನಾಂಗಗಳನ್ನು ಸಮನಾಗಿ ಕಂಡು ಸಮಾಜ ಕಲ್ಯಾಣಕ್ಕಾಗಿ ಅತ್ಯವಶ್ಯಕವಾದ ಮೀಸಲಾತಿಗಳ ತಂದು ಜನಸೇವೆ ಮಾಡಿದ ಏಕೈಕ “ಮುಖ್ಯಮಂತ್ರಿ ದೇವೇಗೌಡರು”……………
5.ಸೋತಾಗಲೆಲ್ಲ ಧೃತಿಗೆಡದೆ ಮತ್ತೆ ಮತ್ತೆ ಕಳೆದುಕೊಂಡಲ್ಲೆ ಹುಡುಕಬೇಕು ಎನ್ನುವ ಹಾಗೆ ಮತ್ತೆ ಮತ್ತೆ ಮೇಲೆದ್ದು ಬಂದು ಪಾರುಪತ್ಯ ಸಾಧಿಸಿದ ಸಾಮಾನ್ಯರಲ್ಲಿ ಅಸಾಮಾನ್ಯ ಜನನಾಯಕರಿದ್ದರೆ ಪ್ರಧಾನಿಯಾಗಿ ಕನ್ನಡಮ್ಮನ ಬಾವುಟ ಕೆಂಪುಕೋಟೆಯ ಮೇಲೆ ಹಾರಿಸಿದ ಏಕೈಕ “ಕನ್ನಡಿಗ ದೇವೇಗೌಡರು”………………….

6.ತಮ್ಮ ಇಳಿವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಎಚ್ಚರವಹಿಸಿ ತಪಸ್ಸಿನಂತೆ ಯೋಗಾಭ್ಯಾಸ ಕಲಿತು ಪ್ರವೀಣ ಪರಿಣಿತರಾಗಿದ್ದರೆ ಯುವಕರು ನಾಚುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಜನಸಾಮಾನ್ಯರ ವಿಚಾರದಲ್ಲಿ ರೈತರ ವಿಷಯದಲ್ಲಿ ಅನ್ಯಾಯವಾದಾಗ ಮನೆಯಲ್ಲಿ ಕೂರದೆ ಬೀದಿಗಿಳಿದು ಹೋರಾಟ ಮಾಡಿ ನ್ಯಾಯ ಕೊಡಿಸುವ “ದಣಿವರೆಯದ ಧಣಿ ದೇವೇಗೌಡರು”……………..
7.ಕರ್ನಾಟಕದ ಪ್ರತಿ ಹಳ್ಳಿಹಳ್ಳಿಯ ಹೋಬಳಿಗಳ ತಾಲ್ಲೂಕು ಜಿಲ್ಲೆ ಪ್ರಾಂತ್ಯ ಸಹಿತ ರಾಜಕೀಯ ಅಂಕಿಅಂಶಗಳ ಜನಸಂಖ್ಯೆ ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ರಾಜಕೀಯ ಚಿಂತನೆಗಳನ್ನು ಮಾಡುವ ಕಾರ್ಯಕ್ರಮ ರೂಪಿಸಿ ಏಳಿಗೆಗೆ ಕಾರಣವಾಗುವ ಮಾನವ “ಗಣಕಯಂತ್ರ ದೇವೇಗೌಡರು”………………..
8.ಸುದೀರ್ಘ 55 ವರ್ಷಗಳು ನಿರಂತರವಾಗಿ ಜನರೊಂದಿಗೆ ಒಡನಾಟ ಇಟ್ಟುಕೊಂಡು ಅಧಿಕಾರ ಇರಲಿ ಇಲ್ಲದಿರಲಿ ಸುಮ್ಮನಿರದೆ ಕಷ್ಟಗಳ ಕೇಳಿಸಿಕೊಳ್ಳುವ ಪ್ರಯತ್ನ ಪಟ್ಟು ಬಿಡದೆ ಕೈಲಾಗುವಷ್ಟು ಕಷ್ಟ ಪರಿಹರಿಸಿ ಪರಿಹಾರ ಕೊಡಿಸಿ ಕಣ್ಣೀರು ಒರೆಸಿಯೆ ತೀರುವ “ಜನಸಾಮಾನ್ಯರ ಒಡನಾಡಿ ದೇವೇಗೌಡರು”…………..

9.ಈ ಕ್ಷಣಕ್ಕೂ ಸಹ ಯಾರೇ ಭೇಟಿ ಮಾಡಲು ಬಂದರೂ ತುಂಬಾ ಸುಲಭವಾಗಿ ಲಭ್ಯರಾಗಿ ಬರಮಾಡಿಕೊಂಡು ತದೇಕಚಿತ್ತದಿಂದ ಗಮನಿಸಿ ಸೌಜನ್ಯದಿಂದ ಮಾತನಾಡಿಸಿ ತಾಳ್ಮೆಯಿಂದ ಎಲ್ಲವನ್ನೂ ಆಲಿಸುವ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಜನರಿಗಾಗಿ ಮಾತ್ರ ಮೀಸಲಿಡುವ “ಮುತ್ಸದಿ ದೇವೇಗೌಡರು”…………….
10.ಎದುರಾಳಿಗಳು ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ಕೊಡದೆ ಕೆಸರೆರಚಾಟಕ್ಕಿಳಿಯದೆ ಛಲದಿಂದ ಹಠ ಬಿಡದೆ ಹಿಡಿದ ಕೆಲಸ ಸಾಧಿಸಿ ತೋರಿಸಿ ತಮ್ಮ ಶ್ರಮದಿಂದ ಕೆಲಸ ಯಶಸ್ವಿಗೊಳಿಸಿ ಟೀಕಾಕಾರರ ಬಾಯಿ ಮುಚ್ಚಿಸುವ “ಅಭಿವೃದ್ಧಿ ಹರಿಕಾರ ದೇವೇಗೌಡರು”………………

ಇಷ್ಟೆಲ್ಲಾ ಸಾಧನೆಗಳು ಕೇವಲ ತೃಣಮಾತ್ರವಷ್ಟೆ……. “ದೇವೇಗೌಡರು ಒಂದು ಅಪೂರ್ವ ಗ್ರಂಥ”………..”ಮೊಗೆಯುತ್ತ ಹೋದಷ್ಟು ಮತ್ತೆ ಮತ್ತೆ ಉಕ್ಕುವ ಕುತೂಹಲಕ್ಕೆ ಕಾರಣವಾಗುವ ಮುಗಿಯದ ನೀರಿನ ಸೆಲೆಯಂತೆ”………….
“ಇಂದಿಗೆ ಸರಿಯಾಗಿ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ 23 ವರ್ಷಗಳು 11/12/1994″…………….ಈ ಶುಭ ಸಂದರ್ಭದಲ್ಲಿ “ಹಳ್ಳಿ ಹುಡುಗರು”ಕಡೆಯಿಂದ ಕಿರುಪರಿಚಯ ನೀಡುವ ಒಂದು ಸಣ್ಣ ಪ್ರಯತ್ನ…

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಯಗ್ರೀವ ಹೆಚ್ಚಾಗಿ ಕರ್ನಾಟಕದ ಉಡುಪಿ ಪ್ರದೇಶದಲ್ಲಿ ಮಾಡುವ ಸಿಹಿತಿಂಡಿ. ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ರುಚಿಯಾದ ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಹಬ್ಬ ಹರಿದಿನಗಳಲ್ಲಿ ಈ ಸಿಹಿಯನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ. ಇದನ್ನು ಹೆಚ್ಚಾಗಿ ದೇವರ ನೈವೇದ್ಯಕ್ಕೆ ಇಡಲು ಮಾಡುತ್ತಾರೆ. ಹಯಗ್ರೀವ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು : ಕಡ್ಲೆ ಬೇಳೆ – 2 ಕಪ್, ತೆಂಗಿನ ತುರಿ – 1ಕಪ್, ಬೆಲ್ಲ – 1 ಕಪ್, ತುಪ್ಪ – 1 ಕಪ್ಏಲಕ್ಕಿ ಪುಡಿ –…
ಇದೊಂದು ಭಯಾನಕ ಸುದ್ದಿ. ಎಲ್ಲರೂ ಭಹಯಬೀಳುವಂತಹ ಸುದ್ದಿಯೇ. ಹೆಬ್ಬಾವೊಂದು ಮನೆಯೊಳಗಿನ ಶೌಚಾಲಯದಲ್ಲಿ ಇಲಿ ಬೇಟೆಯಾಡಿದಂತಹ ದಿಗಿಲುಗೊಳ್ಳುವಂತಹ ಸಂಗತಿ. ಇದು ನಡೆದಿರುವುದು ಆಸ್ಟ್ರೇಲಿಯಾದ ಕೈನ್ಸ್ನಲ್ಲಿ. ಇಲ್ಲಿನ ಜನ್ನಾ ಎಂಗ್ಲರ್ ಬೆಳಗ್ಗೆ ಸುಮಾರು 4 ಗಂಟೆಗೆ ಎದ್ದು ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಇವರಿಗೆ ಶೌಚಾಲಯದೊಳಗೆ ಏನೋ ಶಬ್ದ ಆದಂತೆ ಕಂಡಿತು. ತಕ್ಷಣ ಏನದು ಎಂದು ನೋಡಿದಾಗ ಅಲ್ಲಿನ ದೃಶ್ಯವನ್ನು ಕಂಡು ಇವರು ಒಂದು ಕ್ಷಣ ಭಯಬೀತರಾಗಿದ್ದರು. ಯಾಕೆಂದರೆ, ಶೌಚಾಲಯದೊಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಇಲಿ ಬೇಟೆಯಲ್ಲಿ ತೊಡಗಿತ್ತು….
ಬೆಳಿಗ್ಗೆದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿದೆಯೇ? ಅದೂ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ?ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಭಾರತದ ಹಲವು ಕಡೆಗಳಲ್ಲಿ ಒಂದು ಸಂಪ್ರದಾಯವೇ ಆಗಿದೆ. ಹಿಂದೆ ಬ್ರಿಟಿಷರು ಭಾರತದಲ್ಲಿದ್ದಾಗ ಬೆಡ್ ಟೀ ಎಂದು ಟೀ ಹೀರುತ್ತಿದ್ದರು. ಟೀ ಸೇವನೆಯೂ ಒಂದು ವ್ಯಸನವಾಗಿದ್ದು ಹೀಗೇ ಮುಂಜಾನೆಯ ಪ್ರಥಮ ಆಹಾರವಾಗಿ ಟೀ ಸೇವಿಸುವ ಅಭ್ಯಾಸವಿರುವವರಿಗೆ ಇದು ವ್ಯಸನವೇ ಆಗಿ ಹೋಗಿರುತ್ತದೆ. ಟೀ ಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಟ್ಯಾನಿನ್ ಎಂಬ ಪೋಷಕಾಂಶಗಳು ಅಥವಾ ಕ್ಯಾಟೆಚಿನ್ ಎಂಬ ಕಣಗಳು ಜೀವರಾಸಾಯನಿಕ ಕ್ರಿಯೆಯನ್ನು…
ಭೋಪಾಲ್, ರಕ್ಷಾ ಬಂಧನ ಹಬ್ಬದಲ್ಲಿ ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಉಡುಗೊರೆ ಕೊಡುವುದು ಪದ್ಧತಿ. ಅದೇ ರೀತಿ ಮಧ್ಯಪ್ರದೇಶದಲ್ಲಿ ತಮಗೆ ರಾಖಿ ಕಟ್ಟಿದ ಹುತಾತ್ಮ ಯೋಧನ ಪತ್ನಿಗೆ ಊರಿನವರು ಸೇರಿ ಸರ್ಪ್ರೈಸ್ ಗಿಫ್ಟ್ ಕೊಟ್ಟು ಹಬ್ಬ ಆಚರಿಸಿದ್ದಾರೆ.ಹೌದು. ಮಧ್ಯಪ್ರದೇಶದ ದೆಪಲ್ಪುರ ಜಿಲ್ಲೆಯ ಪಿರ್ ಪಿಪ್ಲಿಯ ಗ್ರಾಮದ ಹುತಾತ್ಮ ಯೋಧ ಹವಾಲ್ದಾರ್ ಮೋಹನ್ ಸಿಂಗ್ ಕುಟುಂಬಕ್ಕೆ ಗ್ರಾಮಸ್ಥರು ಮನೆ ಕಟ್ಟಿಸಿಕೊಟ್ಟಿದ್ದಾರೆ. ಈ ಮನೆಯನ್ನು ಯೋಧನ ಪತ್ನಿ ರಾಜು ಬಾಯಿ ಅವರಿಗೆ ಗ್ರಾಮಸ್ಥರು ರಕ್ಷಾಬಂಧನ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೆ ಗ್ರಾಮಸ್ಥರು…
ಚಂದನವನದ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ, ಬುಲ್ಡೋಜರ್ಸ್ ತಂಡದ ಖ್ಯಾತ ಆಟಗಾರ ಧ್ರುವ ಶರ್ಮಾ ನಿಧನರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲರಿಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊನೆಯ ಅವಕಾಶವನ್ನು ನೀಡಿದರು. ಮುಂಬೈನಿಂದ ಬಂದು ರಾಜೀನಾಮೆ ವಾಪಸ್ ಪಡೆಯಿರಿ ಇಲ್ಲವೆ ಅನರ್ಹತೆಗೆ ದೂರು ನೀಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು. ವಿಧಾನಸೌಧದಲ್ಲಿ ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕಾಂಗ ಪಕ್ಷದ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು…