ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ 12 ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ‘ಮಣ್ಣಿನ ಮಗ’ ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.

ಜೆಡಿಎಸ್ ಅಧ್ಯಕ್ಷ ಮಣ್ಣಿನ ಮಗ ಹೆಚ್.ಡಿ.ದೇವೇಗೌಡರು 11-12-1994ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಮುಖ್ಯಮಂತ್ರಿಯಾಗಿ ಇಂದಿಗೆ 23 ವರ್ಷಗಳಾಗಿವೆ. ರಾಜಕೀಯದಲ್ಲಿ ದೇವೇಗೌಡರ ಬಗ್ಗೆ ತಿಳಿಯಬೇಕಾದ್ದು ತುಂಬಾ ಇದೆ.

“ಮಣ್ಣಿನ ಮಗ ಹೆಚ್.ಡಿ.ದೇವೇಗೌಡರ” ಬಗ್ಗೆ ಮೊಗೆದಷ್ಟು ಮುಗಿಯದ ಇತಿಹಾಸದ ಪುಟ..!
1.ಎಂದಿಗೂ ಸಹ ದುಷ್ಚಟಗಳ ದಾಸರಾಗಲಿಲ್ಲ………ವೈಯಕ್ತಿಕವಾಗಿಯೂ ಜೀವನದಲ್ಲಿ ಎಲ್ಲೂ ಸಹ ಒಂದೇ ಒಂದು ಕಪ್ಪುಚುಕ್ಕೆ ಮೂಡಿಸಿಕೊಂಡವರಲ್ಲ………ವೈಯಕ್ತಿಕ ಜೀವನ ಎಂದು ಒಂದು ಕ್ಷಣವೂ ಬಿಡುವು ಮಾಡಿಕೊಂಡು ಜೀವನದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತವರಲ್ಲ “ಅಪ್ಪಟ ರೈತರ ಮಗ ದೇವೇಗೌಡರು”…………
2. 24/7 ರಾಜಕಾರಣಿ ಯಾರಾದರೂ ಈ ಭೂಮಿ ಮೇಲಿದ್ದರೆ ನಾಯಕರ ತಯಾರು ಮಾಡುವ ಕಾರ್ಖಾನೆಯಾಗಿ ಎಲ್ಲ ಜನಾಂಗದವರನ್ನು ಮೇಲೆ ತಂದು ಅಧಿಕಾರ ನೀಡಿ ಆದರ್ಶ ಮೆರೆದ ಮಾಜಿ ಪ್ರಧಾನಿಯೊಬ್ಬರು ಸಕ್ರಿಯವಾಗಿ ಕಾರ್ಯಚಟುವಟಿಕೆಯಲ್ಲಿ ನಿರತರಾಗಿದ್ದರೆ ಅದು “ಮಣ್ಣಿನ ಮಗ ದೇವೇಗೌಡರು”……………..
3.ಶುದ್ದಹಸ್ತರಾಗಿ ಭ್ರಷ್ಟಾಚಾರದ ಲವಲೇಶವನ್ನೂ ತಮಗೆ ತಾಗಿಸಿಕೊಳ್ಳದೆ ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲೂ ಸ್ವಚ್ಛವಾಗಿ ಜನಸೇವೆ ಮಾಡಿ ಜಾತಿ ಧರ್ಮ ಸೀಮೆ ಕುಲ ಭಾಷೆ ಪ್ರಾಂತ್ಯ ಎಂದು ಭೇಧ ಭಾವ ಮಾಡದೆ ಪ್ರಪಂಚಕ್ಕೆ ಮಾದರಿಯಾದ “ಶ್ರಮಜೀವಿ ದೇವೇಗೌಡರು”………….
4.ವಿಧಾನಸೌಧದ ದಾಖಲೆಗಳು ಹೇಳುವಂತೆ ಜನರಿಂದ ನೇರವಾಗಿ ಆರಿಸಿ ಬಂದು ಮುಖ್ಯಮಂತ್ರಿಯಾಗಿ ಪ್ರಮಾಣಿಕವಾಗಿ ಪಾರದರ್ಶಕ ಆಡಳಿತ ನೀಡಿ ಎಲ್ಲ ಜನಾಂಗಗಳನ್ನು ಸಮನಾಗಿ ಕಂಡು ಸಮಾಜ ಕಲ್ಯಾಣಕ್ಕಾಗಿ ಅತ್ಯವಶ್ಯಕವಾದ ಮೀಸಲಾತಿಗಳ ತಂದು ಜನಸೇವೆ ಮಾಡಿದ ಏಕೈಕ “ಮುಖ್ಯಮಂತ್ರಿ ದೇವೇಗೌಡರು”……………
5.ಸೋತಾಗಲೆಲ್ಲ ಧೃತಿಗೆಡದೆ ಮತ್ತೆ ಮತ್ತೆ ಕಳೆದುಕೊಂಡಲ್ಲೆ ಹುಡುಕಬೇಕು ಎನ್ನುವ ಹಾಗೆ ಮತ್ತೆ ಮತ್ತೆ ಮೇಲೆದ್ದು ಬಂದು ಪಾರುಪತ್ಯ ಸಾಧಿಸಿದ ಸಾಮಾನ್ಯರಲ್ಲಿ ಅಸಾಮಾನ್ಯ ಜನನಾಯಕರಿದ್ದರೆ ಪ್ರಧಾನಿಯಾಗಿ ಕನ್ನಡಮ್ಮನ ಬಾವುಟ ಕೆಂಪುಕೋಟೆಯ ಮೇಲೆ ಹಾರಿಸಿದ ಏಕೈಕ “ಕನ್ನಡಿಗ ದೇವೇಗೌಡರು”………………….

6.ತಮ್ಮ ಇಳಿವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಎಚ್ಚರವಹಿಸಿ ತಪಸ್ಸಿನಂತೆ ಯೋಗಾಭ್ಯಾಸ ಕಲಿತು ಪ್ರವೀಣ ಪರಿಣಿತರಾಗಿದ್ದರೆ ಯುವಕರು ನಾಚುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಜನಸಾಮಾನ್ಯರ ವಿಚಾರದಲ್ಲಿ ರೈತರ ವಿಷಯದಲ್ಲಿ ಅನ್ಯಾಯವಾದಾಗ ಮನೆಯಲ್ಲಿ ಕೂರದೆ ಬೀದಿಗಿಳಿದು ಹೋರಾಟ ಮಾಡಿ ನ್ಯಾಯ ಕೊಡಿಸುವ “ದಣಿವರೆಯದ ಧಣಿ ದೇವೇಗೌಡರು”……………..
7.ಕರ್ನಾಟಕದ ಪ್ರತಿ ಹಳ್ಳಿಹಳ್ಳಿಯ ಹೋಬಳಿಗಳ ತಾಲ್ಲೂಕು ಜಿಲ್ಲೆ ಪ್ರಾಂತ್ಯ ಸಹಿತ ರಾಜಕೀಯ ಅಂಕಿಅಂಶಗಳ ಜನಸಂಖ್ಯೆ ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ರಾಜಕೀಯ ಚಿಂತನೆಗಳನ್ನು ಮಾಡುವ ಕಾರ್ಯಕ್ರಮ ರೂಪಿಸಿ ಏಳಿಗೆಗೆ ಕಾರಣವಾಗುವ ಮಾನವ “ಗಣಕಯಂತ್ರ ದೇವೇಗೌಡರು”………………..
8.ಸುದೀರ್ಘ 55 ವರ್ಷಗಳು ನಿರಂತರವಾಗಿ ಜನರೊಂದಿಗೆ ಒಡನಾಟ ಇಟ್ಟುಕೊಂಡು ಅಧಿಕಾರ ಇರಲಿ ಇಲ್ಲದಿರಲಿ ಸುಮ್ಮನಿರದೆ ಕಷ್ಟಗಳ ಕೇಳಿಸಿಕೊಳ್ಳುವ ಪ್ರಯತ್ನ ಪಟ್ಟು ಬಿಡದೆ ಕೈಲಾಗುವಷ್ಟು ಕಷ್ಟ ಪರಿಹರಿಸಿ ಪರಿಹಾರ ಕೊಡಿಸಿ ಕಣ್ಣೀರು ಒರೆಸಿಯೆ ತೀರುವ “ಜನಸಾಮಾನ್ಯರ ಒಡನಾಡಿ ದೇವೇಗೌಡರು”…………..

9.ಈ ಕ್ಷಣಕ್ಕೂ ಸಹ ಯಾರೇ ಭೇಟಿ ಮಾಡಲು ಬಂದರೂ ತುಂಬಾ ಸುಲಭವಾಗಿ ಲಭ್ಯರಾಗಿ ಬರಮಾಡಿಕೊಂಡು ತದೇಕಚಿತ್ತದಿಂದ ಗಮನಿಸಿ ಸೌಜನ್ಯದಿಂದ ಮಾತನಾಡಿಸಿ ತಾಳ್ಮೆಯಿಂದ ಎಲ್ಲವನ್ನೂ ಆಲಿಸುವ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಜನರಿಗಾಗಿ ಮಾತ್ರ ಮೀಸಲಿಡುವ “ಮುತ್ಸದಿ ದೇವೇಗೌಡರು”…………….
10.ಎದುರಾಳಿಗಳು ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ಕೊಡದೆ ಕೆಸರೆರಚಾಟಕ್ಕಿಳಿಯದೆ ಛಲದಿಂದ ಹಠ ಬಿಡದೆ ಹಿಡಿದ ಕೆಲಸ ಸಾಧಿಸಿ ತೋರಿಸಿ ತಮ್ಮ ಶ್ರಮದಿಂದ ಕೆಲಸ ಯಶಸ್ವಿಗೊಳಿಸಿ ಟೀಕಾಕಾರರ ಬಾಯಿ ಮುಚ್ಚಿಸುವ “ಅಭಿವೃದ್ಧಿ ಹರಿಕಾರ ದೇವೇಗೌಡರು”………………

ಇಷ್ಟೆಲ್ಲಾ ಸಾಧನೆಗಳು ಕೇವಲ ತೃಣಮಾತ್ರವಷ್ಟೆ……. “ದೇವೇಗೌಡರು ಒಂದು ಅಪೂರ್ವ ಗ್ರಂಥ”………..”ಮೊಗೆಯುತ್ತ ಹೋದಷ್ಟು ಮತ್ತೆ ಮತ್ತೆ ಉಕ್ಕುವ ಕುತೂಹಲಕ್ಕೆ ಕಾರಣವಾಗುವ ಮುಗಿಯದ ನೀರಿನ ಸೆಲೆಯಂತೆ”………….
“ಇಂದಿಗೆ ಸರಿಯಾಗಿ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾಗಿ 23 ವರ್ಷಗಳು 11/12/1994″…………….ಈ ಶುಭ ಸಂದರ್ಭದಲ್ಲಿ “ಹಳ್ಳಿ ಹುಡುಗರು”ಕಡೆಯಿಂದ ಕಿರುಪರಿಚಯ ನೀಡುವ ಒಂದು ಸಣ್ಣ ಪ್ರಯತ್ನ…

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಡವರ ಸೇಬು ಎಂದೇ ಖ್ಯಾತಿ ಪಡೆದಿರುವ ಸೀಬೆ ಅಥವಾ ಪೇರಳ ಹಣ್ಣು ಎಲ್ಲಾ ಖಾಯಿಲೆಗೂ ರಾಮಬಾಣ. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಸ್ಲಿಮ್ ಆಗಬೇಕೆನ್ನುವವರು ಡಯಟಿಂಗ್ ಲಿಸ್ಟ್ನಲ್ಲಿ ಸೀಬೆಹಣ್ಣನ್ನು ಸೇರಿಸಿಕೊಳ್ಳಬಹುದು. ಕಡಿಮೆ ಕ್ಯಾಲೋರಿಯ ಈ ಹಣ್ಣು , ದೇಹಕ್ಕೆ ವಿಟಮಿನ್ಗಳ ಮಹಾಪೂರವನ್ನೇ ಪೂರೈಸುವುದರೊಂದಿಗೆ ಕೊಬ್ಬಿನಾಂಶದ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ ಎನ್ನುತ್ತಾರೆ ಎಕ್ಸ್ಪರ್ಟ್ಸ್. ಇದು…
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.
ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ನಾಗಮಂಗಲ ತಾಲ್ಲೂಕಿನ ಚೀಣ್ಯ ಗ್ರಾಮದ ರಮೇಶ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ರಮೇಶ್, ಜೆಡಿಎಸ್ ಪರ ಪ್ರಚಾರಕ್ಕೆ ಜನರನ್ನು ಕರೆ ತರುವುದಾಗಿ ಹೇಳಿದ್ದಾರೆ. ಈ ಆಡಿಯೋ ನೋಡಿ… ಬೆಂಗಳೂರಿನಿಂದ ಪ್ರಚಾರಕ್ಕೆ ಜನರನ್ನು…
ಮನೆಗೆ ಪುಟ್ಟ ಕಂದ ಬರುತ್ತಿದೆ ಎಂದರೆ ಅದಕ್ಕಿಂತ ಸಂತೋಷದ ಕ್ಷಣ ಬೇರೆ ಯಾವುದಿದೆ ಹೇಳಿ..? ಮಗು ಹುಟ್ಟಿದಾಗಿನಿಂದ ಅದರ ಆಟ, ಪಾಠ, ನಗು, ಅಳು, ಚೇಷ್ಟೆ ಎಲ್ಲವನ್ನೂ ಕಣ್ತುಂಬಿಕೊಳ್ಳುವುದೇ ಚೆಂದ. ಅದರಲ್ಲೂ ಆಗ ತಾನೆ ಹುಟ್ಟಿದ ಮಗುವೊಂದು ತನ್ನ ಅಪ್ಪನನ್ನು ನೋಡಿ ಸ್ಮೈಲ್ ಮಾಡಿದರೆ….ಆ ಅನುಭವ ಹೇಗಿರುತ್ತದೆ ನೀವೇ ಊಹಿಸಿಕೊಳ್ಳಿ. ಅಂದಹಾಗೆ ಈ ಫೋಟೋ ಬ್ರೆಜಿಲ್ನ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿರುವ ಫ್ಲಾವಿಯೋ ಎಂಬ ಸೈನಿಕನ ಪುಟ್ಟ ಕುಟುಂಬದ್ದು. ಫ್ಲಾವಿಯೋ ಪತ್ನಿ ತಾರ್ಸಿಲಾ ಕಳೆದ ಆಗಸ್ಟ್ನಲ್ಲಿ ಹೆಣ್ಣು ಮಗುವಿಗೆ ಜನ್ಮ…
ಉತ್ತರ ಕನ್ನಡ ಜೆಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಡ್ಡೆ ಸರಕಾರಿ ಶಾಲೆಯ ಈ ಹುಡ್ಗಾ ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕಾರ ಮಾಡಿದ್ದು, ಈ ಚಿಕ್ಕ ವಯಸ್ಸಿನಲ್ಲಿಯೇ ಈತನ ಪ್ರತಿಭೆ ಮೆಚ್ಚವಂತದ್ದು.
ಲಕ್ಷದಲ್ಲಿ ಯಾರೋ ಒಬ್ಬರಿಗೆ ಮಾತ್ರ ಈ ಕನಸು ಬೀಳುತ್ತದೆ ಆದರೆ ಈ ಕನಸು ಬಿದ್ದರೆ ಮಾತ್ರ ನೀವು ಕೊಟ್ಯಧಿಪತಿ ಆಗೋದು ಅಂತೂ ಸತ್ಯ ಬಿಡಿ. ಹಾಗಾದ್ರೆ ಆ ಕನಸು ಯಾವುದು ಮತ್ತು ಈ ಕನಸು ಏಕೆ ಬೀಳುತ್ತೆ ಮತ್ತು ಯಾವ ಪುಣ್ಯ ಫಲ ಇದ್ದರೆ ಮಾತ್ರ ಈ ಕನಸು ಬೀಳುತ್ತದೆ ಎಂಬುದನ್ನು ತಿಳಿಯಲು ಈ ಲೇಖನ ಮರೆಯದೇ ಸಂಪೂರ್ಣ ಓದಿರಿ. ಮನುಷ್ಯ ಅಂದಮೇಲೆ ಪ್ರತಿ ಒಬ್ಬರಿಗೆ ಸಹ ರಾತ್ರಿ ಮಲಗಿದ ಮೇಲೆ ಕನಸು ಬೀಳುತ್ತದೆ, ಕೆಲವು ಜನಕ್ಕೆ…