ಸುದ್ದಿ

ಈ ದ್ವೀಪದ ಪ್ರತಿ ಹೆಜ್ಜೆಯಲ್ಲೂ ಸಾವೇ ಹಿಂಬಾಲಿಸುತ್ತದೆ! ಚರ್ಮ ಮತ್ತು ಮಾಂಸವನ್ನು ಕರಗಿಸಿಬಿಡುವಷ್ಟು ಶಕ್ತಿ ಈ ದ್ವೀಪದಲ್ಲಿದೆ…ಏನೆಂದು ತಿಳಿಯಿರಿ?

45

ಬಹುಶಃ ಮಾನವನಿಗೆ ಕಾಲಿಡೋಕೆ ಸಾಧ್ಯವಾಗದೇ ಇರುವ ಕೆಲವು ವಿಸ್ಮಯ ಪ್ರದೇಶಗಳು ನಮ್ಮ ಪ್ರಪಂಚದಲ್ಲಿದ್ದು, ನಾನಾ ನಿಗೂಢತೆಗಳನ್ನು ತನ್ನ ಮಡಿಲಿನಲ್ಲಿ ಬಚ್ಚಿಟ್ಟುಕೊಂಡಿದೆ!! ಹೀಗಿರಬೇಕಾದರೆ ಮುಖ್ಯ ಭೂಭಾಗದೊಂದಿಗೆ ಸಂಪರ್ಕವನ್ನು ಕಡಿದುಕೊಂಡು, ಪ್ರತ್ಯೇಕ ದ್ವೀಪವಾಗಿದ್ದರೂ ಕೂಡ ಅದು ಮಾನವನಿಂದ ಇನ್ನೂ ಮುಟ್ಟಲು ಅಸಾದ್ಯ!! ದ್ವೀಪದೊಳಗೆ ಒಂದು ಬಾರಿ ಕಾಲಿಟ್ಟರೆ ಹಿಂತಿರುಗುವ ಯಾವ ಗ್ಯಾರೆಂಟಿಯೂ ಇಲ್ಲ. ಯಾಕೆಂದರೆ ಪ್ರತಿ ಹೆಜ್ಜೆಯಲ್ಲೂ ಕೂಡ ಸಾವೇ ಹಿಂಬಾಲಿಸುತ್ತದೆ!!

ಜಗತ್ತಿನಲ್ಲಿ ತಿಳಿಯದಿರದ ಅದೆಷ್ಟೋ ವಿಷಯಗಳು ಇರುತ್ತವೆ. ಅದರಲ್ಲೂ ವಿಚಿತ್ರವೆನಿಸುವ ಸಂಗತಿಗಳು ಸಾಕಷ್ಟಿದ್ದು, ಕುತೂಹಲಕ್ಕೂ ಕಾರಣವಾಗುತ್ತಲೇ ಇದೆ!! ಈ ರೀತಿಯ ಕೌತುಕ ಮೂಡಿಸುವ ದ್ವೀಪವೇ ಸರ್ಪ ದ್ವೀಪ!! ಬ್ರೆಜಿಲ್‍ನ ಸಾವೋ ಪೌಲೋದಿಂದ ಕೇವಲ 21 ಕಿಲೋಮೀಟರ್ ದೂರದಲ್ಲಿರುವ ಈ ಸರ್ಪ ದ್ವೀಪದ ಹೆಸರೇ ಇಲ್ಹಾ ಡ ಕ್ವಿಮಾಡ ಗ್ರಾಂಡೇ!! ಜನಸಂಪರ್ಕದಿಂದ ದೂರ ಉಳಿದಿರುವ ಈ ದ್ವೀಪ ಬರೀ ವಿಷಪೂರಿತ ಹಾವುಗಳಿಂದ ತುಂಬಿ ತುಳುಕಾಡುತ್ತಿದೆ.

ಈ ದ್ವೀಪದಲ್ಲಿ ಅತ್ಯಂತ ಭಯಂಕರ ಮತ್ತು ವಿಷಕಾರಕ ಸರ್ಪಗಳು ಇರುವುದರಿಂದ ಈ ದ್ವೀಪಕ್ಕೆ ಮನುಷ್ಯರ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ!! ಹೌದು… ಈ ದ್ವೀಪದಲ್ಲಿರುವ ಹಾವುಗಳು ಕಚ್ಚಿದ ತಕ್ಷಣ ಸಾವು ನಿಶ್ಚಿತ. ಅದಕ್ಕಾಗಿಯೇ ಈ ದ್ವೀಪಕ್ಕೆ ಭೇಟಿ ಕೊಟ್ಟವರು ಮರಳಿ ಬರುತ್ತಾರೆಂಬ ನಂಬಿಕೆ ಇಲ್ಲ. ಹಾಗಾಗಿ ಬ್ರೆಜಿಲ್ ಸರಕಾರವು ಈ ದ್ವೀಪಕ್ಕೆ ಭೇಟಿ ನೀಡುವುದನ್ನು ನಿರ್ಬಂಧಿಸಿದೆ. ಆದರೆ ಇಲ್ಹಾ ಡ ಕ್ವಿಮಾಡ ಗ್ರಾಂಡೇ ದ್ವೀಪವು ಮೊದಲು ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಹೊಂದಿತ್ತು. ನಂತರ ಸಮುದ್ರ ಮಟ್ಟ ಏರುಮುಖವಾದ ಹಿನ್ನೆಲೆಯಲ್ಲಿ ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಕಡಿದುಕೊಂಡು, ಪ್ರತ್ಯೇಕ ದ್ವೀಪವಾದ ಮೇಲೆ ಹೊಸಹೊಸ ಜಾತಿಯ ಸರ್ಪಗಳ ವಿಕಸನಕ್ಕೆ ಈ ದ್ವೀಪ ನಾಂದಿಯಾಯಿತು ಎನ್ನಲಾಗುತ್ತದೆ.

ಈ ದ್ವೀಪದಲ್ಲಿರುವ ಹಾವುಗಳಲ್ಲಿ ಹೆಚ್ಚಿನವು ವಿಷಪೂರಿತ. ಇಲ್ಲಿಯವರೆಗೆ 2000- 4000 ಜಾತಿಯ ಹಾವುಗಳನ್ನು ಈ ದ್ವೀಪದಲ್ಲಿ ಗುರುತಿಸಲಾಗಿದೆ. 110 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ದ್ವೀಪದಲ್ಲಿ ಸುಮಾರು 4,30,000ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಇವೆಯೆಂದು ಗುರುತಿಸಲಾಗಿದೆ. ಈ ದ್ವೀಪದ ಗಾತ್ರಕ್ಕೆ ಹೋಲಿಸಿದರೆ ಹಾವುಗಳ ಸಂಖ್ಯೆಯೇ ಅಧಿಕ. ಪ್ರತಿ ಚದರ ಮೀಟರ್‍ಗೆ ಕನಿಷ್ಠ ಒಂದರಂತೆ ಹಾವುಗಳನ್ನು ಇಲ್ಲಿ ಕಾಣಬಹುದು. ಹಾಗಾಗಿ ಈ ದ್ವೀಪ ಹೊಕ್ಕವರು ಹಿಂದಿರುಗುವುದು ಕನಸಿನ ಮಾತೇ ಸರಿ.
ಆದರೆ ಇಲ್ಲಿರುವ “ಗೋಲ್ಡನ್ ಲ್ಯಾನ್ಸ್ ಹೆಡ್” ಎಂದು ಸಾಮಾನ್ಯವಾಗಿ ಗುರುತಿಸಲ್ಪಡುವ “ಬತ್ರೋಸ್ಸ್ ಇಸ್ನಸುಲಾರಿಸ್” ಎಂಬ ಜಾತಿಯ ಹಾವಿನ ವಿಷ ಅತಿ ಘೋರ. ಈ ಹಾವಿನ ವಿಷವು ಮಾರಣಾಂತಿಕವಾಗಿದ್ದು, ದೇಹವನ್ನು ಹೊಕ್ಕಿಬಿಟ್ಟರೆ ಚರ್ಮ ಮತ್ತು ಮಾಂಸವನ್ನು ಕರಗಿಸಿಬಿಡುವಷ್ಟು ಶಕ್ತಿ ಹೊಂದಿದೆ. ಗರಿಷ್ಠ ನಾಲ್ಕು ಅಡಿ ಉದ್ದ ಇರುವ ಈ ಜಾತಿಯ ಹಾವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಇವನ್ನು ವಿನಾಶದ ಅಂಚಿನಲ್ಲಿರುವ ಹಾವಿನ ಜಾತಿಯೆಂದು ಪರಿಗಣಿಸಿ ಕಾಪಾಡಲಾಗುತ್ತಿದೆ. ಈ ದ್ವೀಪಕ್ಕೆ ಸಾಮಾನ್ಯರ ಪ್ರವೇಶವನ್ನು ನಿಷೇಧಿಸಲಾಗಿದ್ದರೂ, ಈ ದ್ವೀಪದಲ್ಲಿರುವ ಸ್ವಯಂಚಾಲಿತ ಲೈಟ್ ಹೌಸ್ ಅನ್ನು ನೌಕಾಪಡೆಯು ನೋಡಿಕೊಳ್ಳುತ್ತದೆ. ಹಾಗಾಗಿ ನಿರ್ವಹಣಾ ಸಿಬ್ಬಂದಿಗೆ ಹಾಗೂ ಪರಿಸರದ ಅಧ್ಯಯನ ಮಾಡುವ ಸಂಶೋಧಕರಿಗೆ ಸರಕಾರ ವಿಶೇಷ ಪರವಾನಗಿ ನೀಡಿದ್ದು, ಅವರಿಗೆ ಮಾತ್ರ ಈ ದ್ವೀಪದೊಳಗೆ ಹೋಗಲು ಅನುಮತಿ ಇದೆ.
ಮನುಷ್ಯರನ್ನೇ ಬೆಚ್ಚಿಬೀಳಿಸಿರುವ ವಿಶ್ವದ ಏಕೈಕ ದ್ವೀಪದಲ್ಲಿ ಪ್ರತಿವರ್ಷ ವಿಜ್ಞಾನಿಗಳಿಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಇದೇ ದ್ವೀಪದಲ್ಲಿ ಒಂದು ಲೈಟ್ ಹೌಸ್ ನಿರ್ಮಿಸಲಾಗಿದ್ದು ಇದರ ಉಸ್ತುವರಿಗಾಗಿ ಅಧಿಕಾರಿಯನ್ನು ಬ್ರೆಜಿಲ್ ಸರಕಾರ ನಿಯೋಜಿಸಿತ್ತು!! ಆದರೆ ಒಂದು ದಿನ ಆಕಸ್ಮಿಕವಾಗಿ ಅಧಿಕಾರಿ ವಾಸವಿದ್ದ ಮನೆಯ ಕಿಟಕಿ ಒಡೆದು ಸಾವಿರಾರು ಹಾವುಗಳು ಮನೆಗೆ ನುಗ್ಗಿ ಇಡೀ ಕುಟುಂಬವನ್ನೇ ನಿರ್ನಾಮ ಮಾಡಿತ್ತು!! ಈ ಭೀಕರ ಘಟನೆಯಿಂದಾಗಿ ಲೈಟ್ ಹೌಸ್ ಅನ್ನು ಶಾಶ್ವತವಾಗಿ ಮುಚ್ಚಲಾಯಿತು. ಅಂದಿನಿಂದ ಈ ಪ್ರದೇಶಗಳಲ್ಲಿ ಹಾವುಗಳದ್ದೇ ರಾಜ್ಯ ಭಾರ ಶುರುವಾಯಿತು ಎನ್ನಲಾಗಿದೆ!!
ಒಟ್ಟಿನಲ್ಲಿ 110 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ದ್ವೀಪದಲ್ಲಿ 4,30,000 ಕ್ಕೂ ಹೆಚ್ಚಿನ ವಿಷಪೂರಿತ ಹಾವುಗಳ ಮನೆಯಾಗಿ ಹೋಗಿದೆ. ಯಾರಾದರೂ ಈ ದ್ವೀಪದ ಒಳ ಹೊಕ್ಕರೇ ಸಾಕು…. ಅವರ ಪ್ರತಿ ಹೆಜ್ಜೆಯೂ ಸಾವಿಗೆ ಸಮೀಪವಾಗಿರುವುದಂತೂ ಅಕ್ಷರಶಃ ನಿಜ!!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಬುಧವಾರ,ನಿಮ್ಮ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(5 ಡಿಸೆಂಬರ್, 2018) ನಿಮ್ಮ ಮನದನ್ನೆಯ ವಿಚಿತ್ರ ನಡವಳಿಕೆ ಇಂದು ನಿಮ್ಮ ಪ್ರೇಮವನ್ನು ಘಾಸಿಗೊಳಿಸುತ್ತದೆ. ಹೊಸ ಪ್ರಸ್ತಾಪಗಳ ಅಕರ್ಷಕವಾಗಿದ್ದರೂ ಯಾವುದೇ ಆತುರದ…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ.

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(29 ಡಿಸೆಂಬರ್, 2018) ಜನರು ನಿಮಗೆ ಹೊಸ ಭರವಸೆ ಹಾಗೂ ಕನಸುಗಳನ್ನು ನೀಡುತ್ತಾರೆ -ಇದು ನಿಮ್ಮ ಸ್ವಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಪ್ರೇಮ…

  • ಸುದ್ದಿ

    ಮೆದುಳು ಜ್ವರಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 108ಕ್ಕೆ ಏರಿಕೆ- 290 ಮಕ್ಕಳು ಆಸ್ಪತ್ರೆಗೆ ದಾಖಲು…..!

    ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್(ಎಇಎಸ್)ಗೆ ಬಿಹಾರದ ಮುಜಾಫರ್​​​ನಗರ ತತ್ತರಿಸಿ ಹೋಗಿದ್ದು, ಈವರೆಗೆ ಮೆದುಳು ಜ್ವರಕ್ಕೆ ಬರೋಬ್ಬರಿ 108 ಮಕ್ಕಳು ಬಲಿಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್, ಶ್ರೀಕೃಷ್ಣ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಜಿಲ್ಲಾಧಿಕಾರಿಗಳ ಪ್ರಕಾರ, ಮಿದುಳು ಜ್ವರದಿಂದ ಬಳಲುತ್ತಿದ್ದ 89 ಮಕ್ಕಳು ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರೆ, 19 ಮಕ್ಕಳು ಕೇಜ್ರಿವಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇನ್ನೂ 290 ಮಕ್ಕಳು…

  • ಸುದ್ದಿ

    ಕಣ್ಣಲ್ಲಿ ನೀರು ತುಂಬುತ್ತೆ ಆ ಪುಟ್ಟ ಬಾಲಕನ ಮನಕಲಕುವ ಕಥೆ…..!

    ಅನಾಥಶ್ರಮಗಳಲ್ಲಿ ಆಗುತ್ತಿರುವ ಅನಾಚಾರವನ್ನು ಬಯಲಿಗೆಳೆದ ಹಾಗೂ ಭಾರಿ ಹೋರಾಟದ ಬಳಿಕ ಡೌನ್ ಸಿಂಡ್ರೋಮ್ ಇರುವ ಬಾಲಕನನ್ನು ದತ್ತು ಪಡೆದ ಯುವಕನ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು, ಹ್ಯೂಮನ್ಸ್ ಆಫ್ ಮುಂಬೈ 26 ವರ್ಷದ ಆದಿತ್ಯ ತಿವಾರಿ‌ ಅವರ ಬಗ್ಗೆ ಪೋಸ್ಟ್ ಮಾಡಿದೆ. 2016ರಲ್ಲಿ ತಿವಾರಿ‌ 26ನೇ ವಯಸ್ಸಿಗೆ ಮಗುವನ್ನು ದತ್ತು ಪಡೆಯುವ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದಲ್ಲಿ ದತ್ತು ಪಡೆದ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿದರು. ಅಷ್ಟಕ್ಕೂ ಆದಿತ್ಯ ದತ್ತು ಪಡೆದ ಬಾಲಕ…

  • ಜೀವನಶೈಲಿ

    ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ! ಏನ್ ಗೊತ್ತಾ?ಮುಂದೆ ಓದಿ…

    ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ

  • ಸುದ್ದಿ

    ಹೇರ್ ಫಾಲ್ ಟೆನ್ಶನ್ ಇಲ್ಲಿಗೆ ಬಿಡಿ, ಇನ್ಮುಂದೆ ನ್ಯಾಚುರಲ್ ಪರಿಹಾರ ಟ್ರೈ ಮಾಡಿ,..!

    ತುಂಬಾ ಕೂದಲು ಉದುರುತ್ತಿದೆ ಅಂತ ಚಿಂತೆ ಶುರುವಾಗಿದ್ಯಾ? ಕೂದಲು ಯಾಕೆ ಉದುರುತ್ತೆ? ಈ ಸಮಸ್ಯೆಗೆ ನೈಸರ್ಗಿಕ ಮದ್ದು ಏನು? ಯಾವೆಲ್ಲಾ ಆಹಾರವನ್ನೂ ಸೇವಿಸಬೇಕು? ಹೇಗೆ ಕೂದಲಿನ ರಕ್ಷಣೆ ಮಾಡಬೇಕು ಎನ್ನುವ ಚಿಂತೆಯಲ್ಲಿದ್ದೀರಾ? ಏನಪ್ಪಾ ಮಾಡೋದು ಈ ಸಮಸ್ಯೆಗೆ ಅಂತ ಯೋಚನೆ ಮಾಡೋದನ್ನ ಬಿಡಿ. ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಅಂದ್ರೆ ಅದು ಹೇರ್ ಫಾಲ್. ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ ಈ ಹೇರ್ ಫಾಲ್ ಸಮಸ್ಯೆ ಬರುತ್ತದೆ. ಅಲ್ಲದೆ ಅತಿಯಾದ ಯೋಚನೆ, ನಿದ್ರಾಹೀನತೆ ಹಾಗೂ ಟೆನ್ಶನ್‍ನಿಂದ…