News

ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಬಸವ ಜಯಂತಿ ಆಚರಣೆ ಎಲ್ಲಿ?
ಬೆಂಗಳೂರು IPL ಟಿಕೆಟ್ ಸ್ಕ್ಯಾಮ್: 11 ಮಂದಿ ಬಂಧನ
Strait of Hormuz ಪ್ರದೇಶದಲ್ಲಿ ಎರಡು ಭಾರತೀಯ ಹಡಗುಗಳ ಮೇಲೆ ದಾಳಿ
ಕೆ. ಎಲ್. ರಾಹುಲ್ – (ಕಣ್ಣೂರು ಲೋಕೇಶ್ ರಾಹುಲ್) – ಕನ್ನಡದ ಹುಡುಗ ರಾಹುಲ್
ವಿಶ್ವದ ಅತಿ ಎತ್ತರದ ರಾಷ್ಟ್ರೀಯ ಉದ್ಯಾನವನಗಳಿವು.!
ಬೇಸಿಗೆ ರಜೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರಿಗೆ ಮಹತ್ವದ ಸೂಚನೆ
ಜನಗಣತಿ ಹೆಸರಿನಲ್ಲಿ ಮನೆಗಳಿಗೆ ಬರುವವರ ಬಗ್ಗೆ ಎಚ್ಚರಿಕೆ! – ಜನಗಣತಿ ಹೆಸರಿನಲ್ಲಿ ವಂಚನೆ
ಮುಂದಿನ 5 ದಿನಗಳಲ್ಲಿ ಕರ್ನಾಟಕದಲ್ಲಿ ಭಾರೀ ಬಿಸಿಲು
ಅಂಬೇಡ್ಕರ್ 135ನೇ ಜಯಂತಿ 2026 – ಅಂಗವಾಗಿ ನಿವೃತ್ತ ಸೈನಿಕ: ಹರೀಶ್ ಕುಮಾರ್ ಎಚ್.ಎಸ್. ಹುಂಗೇನಹಳ್ಳಿ ಗ್ರಾಮ ಅವರಿಗೆ ಭವ್ಯ ಸನ್ಮಾನ
MIಗೆ ವಾಂಖೆಡೆಯಲ್ಲಿ ಸೋಲಿನ ರುಚಿ ತೋರಿಸಿದ RCB
ಸುದ್ದಿ

ಬಾವನನ್ನು ಸ್ವಂತ ಮಾಡಿಕೊಳ್ಳಲು 7 ತಿಂಗಳ ಗರ್ಭಿಣಿ ಸೋದರಿಯನ್ನೇ ಕೊಂದ ತಂಗಿ …!

428

19 ವರ್ಷದ ಸಹೋದರಿಯೊಬ್ಬಳು ತನ್ನ ಬಾವನನ್ನು ಮದುವೆಯಾಗಲು ಸ್ವಂತ ಅಕ್ಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಅಭಿಲಾಷಾ ಕೊಲೆಯಾದ ಸಹೋದರಿ. ಈ ಘಟನೆ ಜಬಲ್ಪುರದ ಕೈಥಾಲಾದಲ್ಲಿ ನಡೆದಿದೆ. ಆರೋಪಿ ಸಾಕ್ಷಿ ಅಕ್ಕನ ಪತಿಯನ್ನು ವಿವಾಹವಾಗಲು 7 ತಿಂಗಳ ಗರ್ಭಿಣಿಯಾಗಿದ್ದ ತನ್ನ ಸೋದರಿಯನ್ನು ಅನೇಕ ಬಾರಿ ಚಾಕುವಿನಿಂದ ಇರಿದು ಅಮಾನವೀಯವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲಿಸರು ತಿಳಿಸಿದ್ದಾರೆ.


ಬಾತ್‍ರೂಮಿನಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದ್ದು, ಕತ್ತು, ಹೊಟ್ಟೆ ಭಾಗದಲ್ಲಿ ಇರಿದ ಗಾಯಗಳು ಕಂಡುಬಂದಿದೆ. ಅದೇ ಜಾಗದಲ್ಲಿ ಕೃತ್ಯಕ್ಕೆ ಬಳಸಲಾಗಿದ್ದ ಚಾಕು ಕೂಡ ಪತ್ತೆಯಾಗಿದೆ ಎಂದು ಶಾಪುರಾ ಪೊಲೀಸರು ತಿಳಿಸಿದ್ದರು. ಈ ಕುರಿತು ತನಿಖೆ ನಡೆಸಿದಾಗ ಮುಖದ ಸುತ್ತ ಬಟ್ಟೆಯೊಂದನ್ನು ಸುತ್ತಿಕೊಂಡು ಯುವತಿಯೊಬ್ಬಳು ಬಾತ್‍ರೂಮ್‍ನಿಂದ ಹೊರಗೆ ನಡೆದುಕೊಂಡು ಹೋಗುವುದನ್ನು ನೋಡಿದ್ದೇವೆ ಎಂದು ನೆರೆಹೊರೆಯವರು ತಿಳಿಸಿದ್ದರು. ನಂತರ ಅನುಮಾನದ ಮೇರೆಗೆ ಶಹಪುರ-ನರಸಿಂಗ್‍ಪುರ ರಸ್ತೆ ಬಳಿ ಆರೋಪಿ ಸಾಕ್ಷಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಅಭಿಲಾಷಾ ಅನಾರೋಗ್ಯಕ್ಕೆ ಒಳಗಾದ ನಂತರ ನಾನು ಸಹೋದರಿಯ ಮನೆಗೆ ಹೋಗಿದ್ದೆ. ಈ ಹಿಂದೆಯೂ ನಾನು ಸಹೋದರಿಯನ್ನು ಕೊಲೆ ಮಾಡಲು ಯತ್ನಿಸಿದ್ದೆ. ಆದರೆ ನನ್ನ ಪ್ರಯತ್ನಗಳು ವಿಫಲವಾಗಿತ್ತು ಎಂದು ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.

ಆರೋಪಿ ಸಾಕ್ಷಿ ತನ್ನ ಬಾವ ಅನ್ಮೋಲ್ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಈ ವಿಚಾರ ಮೃತ ಅಕ್ಕನಿಗೆ ತಿಳಿದಿತ್ತು. ಆಗ ಅಭಿಲಾಷಾ ನೀನು ಇಲ್ಲಿ ಇರುವುದು ಬೇಡ ಮನೆಗೆ ಹೋಗು ಎಂದು ಹೇಳಿದ್ದಳು. ಅಷ್ಟೇ ಅಲ್ಲದೇ ಆಕೆಯ ಸಹೋದರ ಕೂಡ ಸಾಕ್ಷಿಯನ್ನು ಮನೆಗೆ ಕಳುಹಿಸುವಂತೆ ತಿಳಿಸಿದ್ದನು. ಇದರಿಂದ ಕೋಪಗೊಂಡ ಆರೋಪಿ ಸಾಕ್ಷಿ ಸಹೋದರಿಯನ್ನು ಕೊಲೆ ಮಾಡಿದ್ದಾಳೆ ಎಂದು ಜಿಲ್ಲಾ ಎಸ್‍ಪಿ ಆರ್.ಕೆ.ನಾರ್ವಾರಿಯಾ ಹೇಳಿದ್ದಾರೆ.ಸದ್ಯಕ್ಕೆ ಆರೋಪಿ ಸಾಕ್ಷಿ ಹೇಳಿಕೆಯ ನಂತರ ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಅವಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ