ತಂತ್ರಜ್ಞಾನ

ಹೃದಯಾಘಾತ ಆಗಲಿದೆ ಎಂದು 6 ಗಂಟೆ ಮೊದಲೇ ತಿಳಿದುಕೊಳ್ಳಬಹುದು..!ತಿಳಿಯಲು ಈ ಲೇಖನ ಓದಿ..

415

ಇದಕ್ಕೂ ಮೊದಲು ಹೃದಯಾಘಾತ ಕೇವಲ ವಯಸ್ಸಾದವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ 25 ವರ್ಷ ವಯಸ್ಸಿರುವ ಯುವಕರಿಗೂ ಬಹಳಷ್ಟು ಮಂದಿಗೆ ಹೃದಯಾಘಾತ ಬರುತ್ತಿದೆ. ಬದಲಾದ ಜೀವನ ಶೈಲಿ ಕಾರಣ ಯುಕ್ತ ವಯಸ್ಸಿನಲ್ಲೇ ಬಹಳಷ್ಟು ಮಂದಿ ಹೃದಯಾಘಾತದಿಂದ ಮರಣಿಸುತ್ತಿದ್ದಾರೆ.

ಹೃದಯಾಘಾತ ಬಂದವರಿಗೆ ಎಷ್ಟು ಬೇಗ ಚಿಕಿತ್ಸೆ ನೀಡಿದರೆ ಅಷ್ಟು ಬೇಗ ಬದುಕುವ ಸಾಧ್ಯತೆಗಳು ಇರುತ್ತವೆ.. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿದರೂ ಆ ಮನುಷ್ಯನ ಪ್ರಾಣಕ್ಕೆ ಅಪಾಯ. ಆದರೆ ಆ ಹೃದಯಾಘಾತ ಯಾವ ಸಮಯದಲ್ಲಿ.. ಎಂತಹ ಪರಿಸ್ಥಿತಿಯಲ್ಲಿ ಬರುತ್ತದೋ ಯಾರೂ ಊಹಿಸಲು ಸಾಧ್ಯವಿಲ್ಲ.. ಆದರೆ ಈ ಮಹಾಮಾರಿಯನ್ನು ತಾನು ಕಂಡುಹಿಡಿದ ಸಲಕರಣೆ ಮೂಲಕ ಆರು ಗಂಟೆ ಮೊದಲೇ ಗ್ರಹಿಸಬಹದು ಎನ್ನುತ್ತಿದ್ದಾರೆ 16 ವರ್ಷದ ಬಾಲಕ ಆಕಾಶ್ ಮನೋಜ್.

ತಮಿಳುನಾಡಿನ ಆಕಾಶ್ ಹತ್ತನೇ ತರಗತಿ ಓದುತ್ತಿದ್ದಾನೆ. ಹೃದಯಾಘಾತ ಬರುವ ಸೂಚನೆಯನ್ನು ತಾನು ಕಂಡುಹಿಡಿದ ಹೊಸ ಟೆಕ್ನಿಕ್ ಮೂಲಕ ತಿಳಿದುಕೊಳ್ಳಬಹುದು ಎನ್ನುತ್ತಿದ್ದಾನೆ. ಈ ಸಲಕರಣೆಯನ್ನು ಕಂಡುಹಿಡಿದ ಆಕಾಶ್ ’ಇನ್ನೋವೇಷನ್ ಸ್ಕಾಲರ್ಸ್ ಇನ್ ರೆಸಿಡೆನ್ಸ್ ಪ್ರೋಗ್ರಾಂ’ ನಡಿ ರಾಷ್ಟ್ರಪತಿ ಕೈಲಿ ಚಿನ್ನದ ಪದಕವನ್ನು ಪಡೆದಿದ್ದಾನೆ.

ಈ ಸಂದರ್ಭದಲ್ಲಿ ಆಕಾಶ್ ಮಾತನಾಡುತ್ತಾ.. “ನಿಶ್ವಬ್ದವಾಗಿ ಬರುವ ಹೃದಯಾಘಾತ ಈ ನಡುವೆ ಹೆಚ್ಚಾಗುತ್ತಿದೆ. ಬಹಳಷ್ಟು ಮಂದಿ ಮೇಲ್ಮೋಟಕ್ಕೆ ಆರೋಗ್ಯವಾಗಿ ಕಾಣಿಸುತ್ತಾರೆ. ಹೃದಯಾಘಾತಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಲಕ್ಷಣಗಳೂ ಅವರಲ್ಲಿ ಕಾಣಿಸಲ್ಲ. ನಮ್ಮ ತಾತ ಆರೋಗ್ಯವಾಗಿ ಕಾಣಿಸುತ್ತಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದರು. ತಾತನ ಸಾವು ನನ್ನಲ್ಲಿ ತುಂಬಾ ನೋವುಂಟು ಮಾಡಿತು. ಹೃದಯಾಘಾತವನ್ನು ಮೊದಲೇ ಕಂಡುಹಿಡಿಯುವ ಸಲಕರಣೆ ಯಾವುದಾದರೂ ತಯಾರಿಸಬೇಕು ಎಂದುಕೊಂಡೆ. ಹಾಗಾಗಿ ಈ ಸಲಕರಣೆ ಕಂಡುಹಿಡಿದೆ. ಆದರೆ ಇದನ್ನು ಇನ್ನೂ ಅಭಿವೃದ್ಧಿ ಪಡಿಸಬೇಕಾಗಿದೆ. ದೇಹದ ಮೇಲೆ ಯಾವುದೇ ಗಾಯ ಮಾಡದಂತೆ ಇದನ್ನು ಉಪಯೋಗಿಸಬಹುದು” ಎಂದು ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ಸಂದರ್ಭದಲ್ಲಿ ತಿಳಿಸಿದ್ದಾರೆ.

ಆಗಲಿದೆ ಎಂದು

’ರಕ್ತದಲ್ಲಿರುವ ಎಫ್‍ಎಬಿಪಿ3 ಎಂಬ ಸಣ್ಣ ಪ್ರೋಟೀನ್ ಬಳಸಿಕೊಂಡು ಹೃದಯಾಘಾತದ ಅಪಾಯವನ್ನು ತಿಳಿದುಕೊಳ್ಳಬಹುದು’ ಎಂದು ಆಕಾಶ್ ತಿಳಿಸಿದ್ದಾನೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇರುವವರಿಗೆ ಈ ಸಲಕರಣೆ ಅದೆಷ್ಟೋ ಉಪಯುಕ್ತವಾಗಿರುತ್ತದೆ. ಹೃದಯಾಘಾತದ ಅಪಾಯವನ್ನು ಮೊದಲೇ ಗ್ರಹಿಸಿ ವೈದ್ಯರನ್ನು ಸಂಪರ್ಕಿಸುವ ಮೂಲಕ ಸೂಕ್ತ ಚಿಕಿತ್ಸೆ ಪಡೆಯಬಹುದೆಂದು ತಿಳಿಸಿದ್ದಾನೆ ಆ ಬಾಲಕ. ಈ ಸಲಕರಣೆಯನ್ನು ತಜ್ಞರ ಸಹಾಯದಿಂದ ಅಭಿವೃದ್ಧಿ ಪಡಿಸಿ ಜನರಿಗೆ ಸಿಗುವಂತೆ ಮಾಡಿದರೆ ಅದೆಷ್ಟೋ ಜೀವಗಳನ್ನು ಉಳಿಸಬಹುದು..!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೆಂಗಳೂರಲ್ಲಿ ಬಿದ್ದ ಮಳೆಗೆ, ಬಿದ್ದಿದ್ದು ಬರೋಬ್ಬರಿ 83 ಮರಗಳು…!

    ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಅರ್ಧಗಂಟೆ ಮಳೆಗೆ ವಿವಿಧೆಡೆ ಒಟ್ಟು 83 ಮರಗಳು ಧರೆಗುರುಳಿವೆ. ರಾಜರಾಜೇಶ್ವರಿನಗರ ಹಾಗೂ ಬಸವನಗುಡಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದೆ ಅತಿ ಹೆಚ್ಚು ಹಾನಿಯೂ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್‌ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ. ಬಸವನಗಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ಗಿರಿನಗರ ಪ್ರದೇಶದಲ್ಲಿ ಅತಿ ಹೆಚ್ಚು…

  • ಆರೋಗ್ಯ

    ಈ ತರಕಾರಿಗಳನ್ನು ಸೇವಿಸಿದ್ರೆ ಮಹಿಳೆಯರಿಗೆ ಕಿಡ್ನಿ ಸಮಸ್ಯೆ ಯಾವತ್ತು ಬರುವುದಿಲ್ಲ…!ತಿಳಿಯಲು ಈ ಲೇಖನ ಓದಿ..

    ಇತ್ತೀಚಿನ ದಿನಗಳಲ್ಲಿ ಎಲ್ಲರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಕಿಡ್ನಿ ಸಮಸ್ಯೆ, ಅದರಲ್ಲೂ ಮಹಿಳೆಯರನ್ನು ಹೆಚ್ಚು ಕಾಡಿಸುವ ಕಾಯಿಲೆಗಳಲ್ಲಿ ಕಿಡ್ನಿ ಸಮಸ್ಯೆಯೂ ಒಂದು. ಮೂತ್ರಕೋಶದಲ್ಲಿ ಸೋಂಕು ಮತ್ತು ಕಲ್ಲುಗಳು ಇತ್ಯಾದಿ ಸಮಸ್ಯೆಗಳು ಇವರಲ್ಲಿ ಸಾಮಾನ್ಯ

  • ವಿಸ್ಮಯ ಜಗತ್ತು

    ನೀವೂ ನಂಬಲೇಬೇಕು..ಇಲ್ಲಿ ಜನ ಪ್ರತೀದಿನ ಸ್ನಾನ ಮಾಡೋದು ಗೋವಿನ ಮೂತ್ರದಲ್ಲಿ!

    ನಮ್ಮ ದೇಶದಲ್ಲಿ ಆಕಳ ಸಗಣಿ ಹಾಗೂ ಗೋಮೂತ್ರವನ್ನು ಹಬ್ಬಗಳಲ್ಲಿ ಬಳಕೆ ಮಾಡ್ತೇವೆ. ಮನೆಯನ್ನು ಗೋಮೂತ್ರ ಹಾಗೂ ಸಗಣಿಯಿಂದ ಶುದ್ಧಮಾಡುವ ಪದ್ಧತಿ ಇದೆ. ಆದ್ರೆ ಆ ಬುಡಕಟ್ಟು ಜನಾಂಗದವರು  ಗೋಮೂತ್ರದಿಂದ ಸ್ನಾನ ಮಾಡ್ತಾರೆ. ಅಷ್ಟೇ ಅಲ್ಲ ರೋಗದಿಂದ ರಕ್ಷಣೆ ಪಡೆಯಲು ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ತಾರೆ. ನಾವು ಈಗ ಹೇಳ್ತಾ ಇರೋದು ಆಫ್ರಿಕಾದ ದಕ್ಷಿಣ ಸುಡಾನ್ ನ ಮುಂದರಿ ಬಡುಕಟ್ಟು ಜನಾಂಗದ ಸಂಸ್ಕೃತಿಯ ಬಗ್ಗೆ. ಈ ಜನರು ಬೆಳಿಗ್ಗೆ ಎದ್ದ ತಕ್ಷಣ ಗೋಮೂತ್ರದಲ್ಲಿ ಸ್ನಾನ ಮಾಡ್ತಾರೆ. ಇವರ ಜೀವನ ಶೈಲಿ…

  • ಸುದ್ದಿ

    ಪನ್ನೀರ್ ಪರೋಟಾದಲ್ಲಿ ಸಿಕ್ಕ ವಸ್ತು ನೋಡಿ ಮೂರ್ಚೆ ಬಿದ್ದ ವ್ಯಕ್ತಿ…!

    ಲಕ್ನೋಪರೋಟಾ ಆರ್ಡರ್ ಮಾಡಿದ್ದಾನೆ. ಪನ್ನೀರ್ ಪರೋಟಾ ತೆರೆಯುತ್ತಿದ್ದಂತೆ ಅದ್ರಲ್ಲಿ ಜಿರಳೆ ಕಂಡಿದೆ. ಜಿರಳೆ ನೋಡ್ತಿದ್ದಂತೆ ಗ್ರಾಹಕರ ಆರೋಗ್ಯದಲ್ಲಿ ಏರುಪೇರಾಗಿದೆ. ಆತ ಮೂರ್ಚೆ ಹೋಗಿದ್ದಾನೆ. ಪರೋಟಾದಲ್ಲಿ ಜಿರಳೆ ಕಂಡ್ರೂ ಮಾಲೀಕ ಮಾತ್ರ ಮಾತು ಬದಲಿಸಿದ್ದಾನೆ. ಹೊರಗಿನಿಂದ ಬಂದಿದೆ ಎಂದಿದ್ದಾನೆ. ಗ್ರಾಹಕ ತಕ್ಷಣ ಎಫ್ ಎಸ್ ಡಿ ಎ ಕಚೇರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಪನ್ನೀರ್ ಪರೋಟಾವನ್ನು ಲ್ಯಾಬ್ ಗೆ ಕಳುಹಿಸಲಾಗಿದೆ. ಎಫ್ ಎಸ್ ಡಿ ಎ ಅಧಿಕಾರಿಗಳು ಡಾಬಾದ ಅಡುಗೆ ಮನೆ ಪರಿಶೀಲಿಸಿದ್ದಾರೆ. ಅಡುಗೆ ಮನೆಯಲ್ಲಿ ಸ್ವಚ್ಛತೆ…

  • ದೇಶ-ವಿದೇಶ

    ಮೋದಿ ಸರ್ಕಾರದ ಈ ಯೋಜನೆ ಜಾರಿಗೆ ಬಂದ್ರೆ ನಿಲ್ಲಲಿದೆ ಕರೆಂಟ್ ಕಳ್ಳತನ!ಬರಲಿದೆ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್‍…

    ಕೇಂದ್ರದಲ್ಲಿ ಮೋದಿ ಸರ್ಕಾರ ಬಂದಾಗಿನಿಂದ, ದೇಶದಲ್ಲಿ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಿವೆ. ಎಲ್‍ಇಡಿ ಬಲ್ಬ್ಗಳ ಬೆಲೆಯನ್ನು 300 ರೂ.ನಿಂದ 40 ರೂ. ಗೆ ಇಳಿಸುವಲ್ಲಿ ಸಫಲವಾಗಿದ್ದ ಸರ್ಕಾರ, ಈಗ ವಿದ್ಯುತ್ ಮೀಟರ್’ಗಳಲ್ಲಿ ಬದಲಾವಣೆ ತರಲು ಮುಂದಾಗಿದೆ.

  • ಸುದ್ದಿ

    ಪುಲ್ವಾಮಾ ದಾಳಿ ಬಗ್ಗೆ ನನಗೆ ಗೊತ್ತಿಲ್ಲ!ಯಾರೋ ಕೆಲವು ಜನ ಬಂದು ಇಲ್ಲಿ ದಾಳಿ ಮಾಡಿದಾಗ ಇಡೀ ಪಾಕಿಸ್ತಾನವನ್ನು ದೂಷಿಸುವುದು ತಪ್ಪು ಎಂದ ಸ್ಯಾಮ್ ಪಿತ್ರೋಡಾ..!

    ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತ, ಪಾಕಿಸ್ತಾನದ ಬಾಲಕೋಟ್​​ನಲ್ಲಿ ನಡೆಸಿದ ಏರ್​ಸ್ಟ್ರೈಕ್ ಬಗ್ಗೆ ಓವರ್​ಸೀಸ್​ ಇಂಡಿಯನ್ ನ್ಯಾಷನಲ್​​​ ಕಾಂಗ್ರೆಸ್​​ ಅಧ್ಯಕ್ಷ ಸ್ಯಾಮ್ ಪಿತ್ರೋಡ ಪ್ರಶ್ನೆ ಎತ್ತಿದ್ದಾರೆ. 300 ಜನರನ್ನ ಕೊಂದಿದ್ದರೆ ಸರಿ. ಆದ್ರೆ ಅದಕ್ಕೆ ಸಾಕ್ಷಿ ಕೊಡ್ತೀರಾ? ಅದನ್ನು ಪ್ರೂವ್​ ಮಾಡ್ತೀರಾ? ಎಂದು ಕೇಳಿದ್ದಾರೆ. ರಾಹುಲ್ ಗಾಂಧಿ ಆಪ್ತ, ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. ಮಾಧ್ಯಮ ಸಂಸ್ಥೆಯ ಜೊತೆ ಮಾತನಾಡಿದ ಅವರು, ಮುಂಬೈ ದಾಳಿ ವಿಚಾರವನ್ನು ಪ್ರಸ್ತಾಪಿಸಿ ಅಲ್ಲಿಂದ ಬಂದ 8 ಮಂದಿ ಇಲ್ಲಿ ಕೃತ್ಯ…