ಉಪಯುಕ್ತ ಮಾಹಿತಿ

ಲೈಫಲ್ಲಿ ಗೆಲ್ಲಲೇಬೇಕು ಅನ್ನೋರು, ಇದನ್ನ ಮಿಸ್ ಮಾಡದೇ ಓದಿ..!

2164

ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ, ಇನ್ನಾಗಲ್ಲ ನಾನು ಸೋತು ಸುಣ್ಣ ಆಗ್ಬಿಟ್ಟಿದೀನಿ.. ಏನ್ ಮಾಡುದ್ರೂ ಕೈ ಹತ್ತುತಿಲ್ಲ.. ಏನ್ ಮಾಡ್ಬೇಕೋ ಗೊತ್ತಾಗ್ತಿಲ್ಲ ಅಂತ ಹೇಳ್ತಾರೆ.! ಅದೇ ಗೆದ್ದವರನ್ನು ಮಾತಾಡ್ಸಿ ನೋಡಿ. ಸೋತವನಿಗಿಂತ ಜಾಸ್ತಿ ಸಲ ಅವರೂ ಸೋತಿರ್ತಾರೆ..!

ಅಂತಹ ಸೋತು ಗೆದ್ದವರಲ್ಲಿ ಕೆಲವರ ಬಗ್ಗೆ ತಿಳಿಯೋಣ:-

ನಮ್ಮ ಡಾ. ಅಬ್ದುಲ್ ಕಲಾಂರವರು ಪೈಲಟ್ ಸಂದರ್ಶನದಲ್ಲಿ ತಿರಸ್ಕರಿಸಲಪಟ್ಟವರು, ಮುಂದೆ ಆದದ್ದೆಲ್ಲಾ ಇಂದು ಇತಿಹಾಸ.

ನರೇಂದ್ರ ಮೋದಿಯವರು ಚಿಕ್ಕವರಿದ್ದಾಗ ಚಹಾ ಮಾರುತ್ತಿದ್ದರು, ಅವರ ಸತತ ಪ್ರಯತದ ಫಲವಾಗಿ  ಇಂದು ಅವರು ಭಾರತದ ಪ್ರಧಾನ ಮಂತ್ರಿಯಾಗಿದ್ದಾರೆ.

ಅಮಿತಾಬ್ ಬಚ್ಚನ್’ರಿಗೆ ಆಲ್ ಇಂಡಿಯಾ ರೇಡಿಯೋ ನಿನ್ನ ಧ್ವನಿ ಕರ್ಕಶವಾಗಿದೆ ಎಂದು ಕೆಲಸ ನಿರಾಕರಿಸುತ್ತು.

ಧೀರುಬಾಯಿ ಅಂಬಾನಿಯವರು ಒಂದು ಕಾಲದಲ್ಲಿ ಪೆಟ್ರೋಲ್ ಬಂಕ್’ನಲ್ಲಿ ಕೆಲಸ ಮಾಡುತ್ತಿದ್ದವರು. ಮುಂದೆ ಭಾರತದ ನಂಬರ್ ಒನ್ ಶ್ರೀಮಂತರಾದರು.

ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡುಹಿಡಿಯಲು 10000 ಬಾರಿ ಪ್ರಯತ್ನ ಪಟ್ಟು ಸೋತಿದ್ದರು, ಆದರೆ ಪ್ರಯತ್ನ ಬಿಡಲಿಲ್ಲ..

ಆಲ್ಬರ್ಟ್ ಐನಸ್ಟೀನ್’ರ ಶಾಲಾ ಶಿಕ್ಷಕಿ ಇವನೊಬ್ಬ ಹುಚ್ಚ ಮತ್ತು ಬುದ್ದಿಹೀನ ಮಗು ಎಂದಿದ್ದರು, ಮತ್ತು ಐನಸ್ಟೀನ್’ರಿಗೆ 4 ವರ್ಷದವರಿಗೂ ಮಾತನಾಡಲು 7 ವರ್ಷದವರೆಗೂ ಓದಲು ಬರುತ್ತಿರಲಿಲ್ಲ.

ಲಿಯೋನಲ್ ಮೆಸ್ಸಿ ತಮ್ಮ ಪುಟ್’ಬಾಲ್ ಟ್ರೈನಿಂಗ್ ಹಣಕ್ಕಾಗಿ ಚಹಾ ಅಂಗಡಿಯಲ್ಲಿ ಸೇವನಕನಾಗಿ ಕೆಲಸ ಮಾಡುತ್ತಿದ್ದರು.

ಬಿಲ್ ಗೇಟ್ಸ್ ಕಾಲೇಜಿನಲ್ಲಿ ಫೇಲ್ ಆಗಿ ಕಾಲೇಜಿನಿಂದ ಹೊರಬಿದ್ದವರು. ಇವತ್ತಿನ ಜಗತ್ತಿನ ನಂಬರ್ ಒನ್ ಕುಬೇರರು.

KFC ಸಂಸ್ಥಾಪಕ ಕೊಲೊನೆಲ್ ಸ್ಯಾಂಡಸ್ ತನ್ನ 61ರ ವಯಸ್ಸಿನಲ್ಲಿ 1009 ಬಾರಿ ತನ್ನ ಕೈ ರುಚಿಯ ಚಿಕನ್ ಮಾಡಿ ಮಾರಲು ಹೋಗಿ ಸೋತಿದ್ದರು, ಆದರೆ ಪ್ರಯತ್ನ ನಿಲ್ಲಿಸಲಿಲ್ಲ.

ಸ್ಟೀವ್ ಜಾಬ್ಸ್ ಒಂದು ಕಾಲದಲ್ಲಿ ಗೆಳೆಯರ ಮನೆಯ ಮೇಲೆ ಮಲಗಿ ಎದ್ದು, ಊಟಕ್ಕಾಗಿ ದೇವಸ್ಥಾನದ ಉಚಿತ ಪ್ರಸಾದ ತಿನ್ನುತ್ತಿದ್ದರು. ಗೆಳೆಯರ ಮನೆಯಲ್ಲಿ ಆಪಲ್ ಕಂಪನಿ ಸ್ಥಾಪಿಸಿದರು. ನಂತರ ನಿಮಗೆ ಗೊತ್ತಿರುವ ಹಾಗೆ ಅವರು ಹಿಂತಿರುಗಿ ನೋಡಲೇ ಇಲ್ಲ.

ಜೆ.ಕೆ. ರೌಲಿಂಗರ ಹ್ಯಾರಿ ಪಾಟರ್ ಕೃತಿಯು 12ಬಾರಿ ಪಬ್ಲಿಷರ್’ಗಳಿಂದ ತಿರಸ್ಕ್ರುತವಾಗಿತ್ತು.ಆದ್ರೆ ಅವರು ಪ್ರಯತ್ನ ಬಿಡಲಿಲ್ಲ.

ಮೈಕಲ್ ಜೋರ್ಡಾನ್ ಹೈ ಸ್ಕೂಲ್ ಬಾಸ್ಕೆಟ್ ಬಾಲ್ ತಂಡದಿಂದ ಹೊರದಬ್ಬಲ್ಪಟ್ಟವರು.ಇಂದು ಜಗತ್ತಿನ ನಂಬರ್ ಒನ್ ಬಾಸ್ಕೆಟ್ ಬಾಲ್ ಆಟಗಾರ.

 

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವ್ಯಕ್ತಿ ವಿಶೇಷಣ

    ಚಾರ್ಲಿ ಚಾಪ್ಲಿನ್’ಹಾಸ್ಯ ಲೋಕದ ಈ ಸಾಮ್ರಾಟ ಆರಂಭಿಕ ಸಿನಿಮಾ ಸಂಬಳ ಎಷ್ಟು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಚಾರ್ಲಿ ಚಾಪ್ಲಿನ್ ಹೆಸರು ಕೇಳದವರಿಲ್ಲ. ಹಾಸ್ಯ ಲೋಕದ ಈ ಸಾಮ್ರಾಟ 1913ರಂದು ಡಿಸೆಂಬರ್ 16ರಂದು ವಾರಕ್ಕೆ 150 ಡಾಲರ್‍ಗಳಿಗೆ ಸಿನಿಮಾ ವೃತ್ತಿ ಆರಂಭಿಸಿದರು. ಈ ಜಗದ್ವಿಖ್ಯಾತ ಕಾಮಿಡಿ ಸೂಪರ್‍ಸ್ಟಾರ್ ಬಗ್ಗೆ ಚುಟುಕು ಸುದ್ದಿ. ಇಂಗ್ಲಿಷ್ ಹಾಸ್ಯ ನಟ, ಸಿನಿಮಾ ನಿರ್ಮಾಪಕ ಮತ್ತು ಸಂಯೋಜಕ ಸರ್ ಚಾರ್ಲೆಸ್ ಸ್ಪೆನ್ಸರ್ ಚಾರ್ಲಿ ಚ್ಲಾಪಿನ್ ಜನಿಸಿದ್ದು 16ನೇ ಏಪ್ರಿಲ್ 1889ರಲ್ಲಿ.

  • ಆರೋಗ್ಯ

    ಈ ಅದ್ಭುತವಾದ ಗಿಡದಲ್ಲಿರುವ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ. ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ. ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ. ಚಮಚದಾಕಾರದ ಎಲೆಗಳು ಕುಬ್ಜವಾದ ಕಾಂಡದ ಮೇಲಿದ್ದು, ನೆಲಕ್ಕೆ ಅಂಟಿಕೊಂಡಂತೆ ಹರಡಿರುತ್ತವೆ.

  • ಸುದ್ದಿ

    ಕಣ್ಣಿಗೆ ನೀಲಿ ಟ್ಯಾಟೂ ಹಾಕಿಸಿಕೊಂಡ ಮಾಡೆಲ್ ನಂತರ ಏನಾಯ್ತು ಗೊತ್ತಾ,?ಇದನ್ನೊಮ್ಮೆ ಓದಿ,.!

    ಟ್ಯಾಟೂ ಎಂದರೆ  ಯಾರಿಗೆ  ತಾನೇ ಇಷ್ಟ ಇರಲ್ಲ  ಹೇಳಿ, ಈಗಿನ  ಕಾಲದಲ್ಲಿ ಎಲ್ಲರಿಗೂ  ಟ್ಯಾಟೂ ಹುಚ್ಚು ಹಾಗೆಯೇ ಇಲ್ಲೊಬ್ಬ  ಮಾಡೆಲ್. ದೇಹವನ್ನು ಬಗೆಬಗೆಯಾಗಿ ಮಾರ್ಪಾಡು ಮಾಡಿ ಮಿಂಚುವುದೆಂದರೆ ಈಕೆಗೆ ಬಲು ಇಷ್ಟವಂತೆ. ಇದಕ್ಕಾಗಿಯೇ ಸಾಕಷ್ಟು ಹಣವನ್ನು  ಖರ್ಚು ಮಾಡುತ್ತಿದ್ದಳು . ಆದರೆ, ಇದೀಗ ಇದೇ ಹುಚ್ಚು ಇವಳನ್ನು ಮೂರು ವಾರಗಳ ಕಾಲ ದೃಷ್ಟಿಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ನ್ಯೂ ಸೌತ್ ವೇಲ್ಸ್‌ನ ಬಾಡಿ ಮಾಡಿಫಯರ್ ಅಂಬೇರ್ ಲೂಕ್ 24 ಎಂಬಾಕೆ ಈ ಸಂಕಷ್ಟ ಅನುಭವಿಸಿದ್ದವಳು. ಈಕೆ ತನ್ನ ದೇಹವನ್ನು…

  • ಉಪಯುಕ್ತ ಮಾಹಿತಿ

    ಪದೇ ಪದೇ ಸೆಲ್ಫಿ ಫೋಟೋ ತೆಗೆದುಕೊಳ್ಳುವವರಿಗೆ ಶಾಕಿಂಗ್ ಸುದ್ದಿ!

    ಇದು ಸೆಲ್ಫಿ ಯುಗ. ಒಂದು ಸ್ಮಾರ್ಟ್ ಫೋನ್ ಕೈ ನಲ್ಲಿದ್ದರೆ ಸಾಕು ಎಲ್ಲೆಂದ ರಲ್ಲೇ ಸೆಲ್ಫಿ ತೆಗೆದುಕೊಳ್ಳುವವರೇ ಜಾಸ್ತಿ. ಒಂದು ರೀತಿ ಸೆಲ್ಫಿ ಹುಚ್ಚರ ಸಂತೆಯಾಗಿಬಿಟ್ಟಿದೆ ಈ ದುನಿಯಾ. ಸಿಕ್ಕಿದ ಕಡೆಯೆಲ್ಲಾ ಸೆಲ್ಫಿ ಫೋಟೋ ತೆಗೆದುಕೊಳ್ಳುವುದು ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಾ ತಾ ಮುಂದು ಫೋಟೋಗಳನ್ನು ಪೋಸ್ಟ್ ಮಾಡುವ ಗೀಳು ಯುವಕ ಯುವತಿಯರು ಸೇರಿದಂತೆ ವಯಸ್ಸಿನ ಅಂತರವಿಲ್ಲದಂತೆ ಎಲ್ಲಾರಲ್ಲೂ ಈ ಗೀಳು ಹೆಚ್ಚಾಗಿಬಿಟ್ಟಿದೆ. ಆದರೆ ಸೆಲ್ಫಿ ಗೀಳು ಅಂಟಿಸಿಕೊಂದವರಿಗೆ ಇಲ್ಲೊಂದು ಕಹಿ ಸುದ್ದಿ ಇದೆ… ಹೌದು,…

  • ಸುದ್ದಿ

    ಬಜೆಟ್ ನಲ್ಲಿ ರೈತರಿಗೆ ಬಂಪರ್ ಆಫರ್ ಘೋಷಿಸಿದ ಕುಮಾರಣ್ಣ..ಪ್ರತಿ ಹೆಕ್ಟೇರಿಗೆ ಸಿಗಲಿದೆ 10000ರೂ ಹಣ..

    ಬಿಜೆಪಿಯ ಕಮಲದ ಆಪರೇಶನ್ ಭೀತಿಯ ನಡುವೆಯೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡಿದ್ದಾರೆ. ಈತ್ತಿಚೆಗಷ್ಟೇ ತಮ್ಮ ಕೊನೆಯ ಬಜೆಟ್ ಮಂಡಿಸಿದ್ದ ಕೇಂದ್ರಸರ್ಕಾರ ಸಣ್ಣ ರೈತರಿಗೆ ಮೂರೂ ಕಂತಿನಂತೆ ವರ್ಷಕ್ಕೆ ಆರು ಸಾವಿರ ಕೊಡುವುದಾಗಿ ಬಜೆಟ್ ನಲ್ಲಿ ಹೇಳಿತ್ತು. ಈಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ಮಂಡಿಸಿರುವ ಬಜೆಟ್ ನಲ್ಲಿ ಸಿರಿ ಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಲು ‘ಸಿರಿ ಯೋಜನೆ’ಯನ್ನು ಘೋಷಿಸಿದ್ದಾರೆ. ಈ ಯೋಜನೆಯನ್ವಯ ಸಿರಿಧಾನ್ಯ ಬೆಳೆಯುವ ರೈತರಿಗೆ, ಪ್ರತಿ ಹೆಕ್ಟೇರಿಗೆ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ…

  • ಸುದ್ದಿ

    ಜಾರಿಯಾಯ್ತು ಕೇಂದ್ರ ಸರ್ಕಾರದ ಹೊಸ ರೂಲ್ಸ್ ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ, ಇಲ್ಲಿದೆ ನೋಡಿ ಮಾಹಿತಿ,.!

    ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಟ್ರಾಫಿಕ್ ನಿಯಮ ಹಾಗೂ ದಂಡ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಜಾರಿಯಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿಯಮ ಉಲ್ಲಂಘನೆ, ದಂಡ ಹಾಗೂ ನೂತನ ನಿಯಮದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಬೆಂಗಳೂರು, ನೂತನ ಟ್ರಾಫಿಕ್ ನಿಯಮ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಜಾರಿಯಾಗಿದೆ. ಸರ್ಕಾರದಿಂದ ಯಾವುದೇ ನೊಟಿಫಿಕೇಶನ್ ಬಾರದ ಹಿನ್ನಲೆಯಲ್ಲಿ ಆರಂಭಿಕ 4 ದಿನ ಹಳೆ ನಿಯಮ ಮುಂದುವರಿದಿತ್ತು. ಇದೀಗ…