ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅದೊಂದು ಊರು ಇದೆ ಅಲ್ಲಿ ಹೆಂಗಸರದ್ದೇ ಕಾರುಬಾರು ! ಅಲ್ಲಿನ ಮನೆಯ ಪ್ರತಿಯೊಂದು ನಿರ್ಣಯಗಳೂ ಕೂಡ ಮಹಿಳಾ ನಿರ್ಧರಿತವಾಗಿರುತ್ತವೆ. ಅದೂ ಸಾಲದೆಂಬಂತೆ ನಮ್ಮ ಕಡೆ ಹುಟ್ಟಿದ ಮಕ್ಕಳ ಹೆಸರಿನ ಜೊತೆಗೆ ತಂದೆಯ ಹೆಸರು ಸೇರಿಸುವುದು ಸಂಪ್ರದಾಯಿಕವಾಗಿದೆ. ಆದರೆ ಆ ಊರಿನಲ್ಲಿ ಮಕ್ಕಳ ಹೆಸರಿನ ಜೊತೆ ತಾಯಿಯ ಹೆಸರನ್ನು ಸೇರಿಸುತ್ತಾರೆ ಎಂಬುದು ಆಶ್ಚರ್ಯಕರ ವಿಚಾರ .
ಅದಲ್ಲದೆ ಈ ಊರಿನ ವಿಚಾರವು ಬಿ.ಬಿ.ಸಿ ಯಂತಹಾ ಅಂತರಾಷ್ಟ್ರೀಯ ಚಾನಲ್ ಗಳಲ್ಲೂ ಕೂಡ ಬಹಳ ಸಲ ಹೊಗಳಲ್ಪಟ್ಟಿದೆ !ಅಂದರೆ “ಈ ಊರಿನಾಗೆ ಹೆಂಗಸ್ರುದೇ ಕಾರುಬಾರು ನೋಡ್ಕಳಿ “ಅಂತೇನೂ ಆ ಚಾನಲ್ಲಿನವರು ಹೊಗಳಿಲ್ಲ ! ಅವರು ಹೊಗಳಿರುವುದು “ಈ ಊರು ಇಡೀ ಏಷ್ಯಾದಲ್ಲಿಯೇ ಅತ್ಯಂತ ಸ್ವಚ್ಚವಾದ ಊರು ಹಾಗೂ ಅತ್ಯಂತ ಸುಶಿಕ್ಷಿತ ಜನರು “ಎಂದು ಹೊಗಳಿದ್ದಾರೆ .
ಅದಲ್ಲದೆ ಇವರೆಲ್ಲರೂ ಹೊಗಳುವ ಮುಂಚೆಯೇ ಆ ಊರಿಗೆ “ದೇವರ ಸ್ವಂತದ ಉದ್ಯಾನವನ”ಎಂಬ ಹೆಸರು ಅಂಟಿಕೊಂಡಿತ್ತು ! ಸರಿಸುಮಾರು ‘ದೇವರ ಸ್ವಂತ ನಾಡು’ಎಂದು ಹೆಸರು ಪಡೆದಿರುವ ಕೇರಳಕ್ಕೆ ಸಡ್ಡು ಹೊಡೆಯುವಂತಹಾ ನಿಸರ್ಗ ಈ ಊರಿನ ಹೆಮ್ಮೆ !
ಈ ಊರು ಇರುವುದು ಭಾರತದ ಮೇಘಾಲಯದಲ್ಲಿ .ಊರಿನ ಹೆಸರು ಮೌಲಿನ್ನಾಂಗ್ ಎಂದಿದೆ.ಇಂತಹದಕ್ಕಿಂತಲೂ ಸಾವಿರಪಟ್ಟು ಹೆಚ್ಚು ಮಹಿಳಾ ಸ್ವಾತಂತ್ರ್ಯ ಇರುವ ಮತ್ತೊಂದು ಸಮುದಾಯವಿದೆ ಅದು ಇರುವುದು ಸಹಾರಾ ಮರುಭೂಮಿಯ ಅಕ್ಕ ಪಕ್ಕ .ಅದರ ಹೆಸರು “ಟೌರೆಗ್” .ಅದೊಂದು ವಿಚಿತ್ರ ಮುಸ್ಲಿಂ ಸಮುದಾಯ.
ಈ ಸಮುದಾಯದಲ್ಲಿ ನಾವೀಗ ನೋಡುತ್ತಿರುವಂತೆ ಹೆಂಗಸರೆಲ್ಲಾ ಮುಖ ಮುಚ್ಚುವ ಬುರ್ಕಾ ಹಾಕಿಕೊಂಡು ಜೀವನ ಸಾಗಿಸುವುದಿಲ್ಲ. ಈ ಸಮುದಾಯವು ಪ್ರಪಂಚದ ಎಲ್ಲ ಮುಸ್ಲಿಂ ಸಮುದಾಯಕ್ಕಿಂತಲೂ ವಿಭಿನ್ನ !ಇವರ ಸಮುದಾಯದಲ್ಲಿ ಗಂಡಸರೇ ಮುಖಕ್ಕೆ ಬುರ್ಖಾ ಧರಿಸಿ ಓಡಾಡಬೇಕಿದೆ ,ಹೆಂಗಸರು ತಮಗಿಷ್ಟ ಬಂದಂತಹಾ ಬಟ್ಟೆ ಧರಿಸಿ ಓಡಾಡುತ್ತಾರೆ .
ಇದು ಸಂಪ್ರದಾಯ ಎನ್ನುವುದಕ್ಕಿಂತ ಅಲ್ಲಿನ ಗಂಡಸರಿಗೆ ಇರುವ ಭಯ ಅಂತಲೇ ಹೇಳುವುದು ಸೂಕ್ತ. ಯಾಕಂದರೆ ಈ ಗಂಡಸರು ಮುಖ ಮುಚ್ಚಿಕೊಳ್ಳುವುದು ಎಲ್ಲಿ ಟೌರೆಗ್ ಮುಸ್ಲಿಂ ಮಹಿಳೆಯರು ಎತ್ಹಾಕಿಕೊಂಡು ಹೋಗಿ ಏನಾದ್ರೂ ಮಾಡಿ ಬಿಡುತ್ತಾರೋ ಎಂಬ ಭಯಕ್ಕೆ ಹಾಗೆ ಮುಸುಗು ಧರಿಸುವುದು !
ಕಿಡ್ನಾಪ್ ಮಾಡಿದ ಈ ಟೌರೆಗ್ ಹೆಂಗಸರು ಕೇವಲ ಒಬ್ಬರೇ ಕಿಡ್ನಾಪ್ ಮಾಡದೇ ಹತ್ತು ಹದಿನೈದು ಹುಡುಗಿಯರು ಒಟ್ಟಾಗಿ ಸೇರಿ ಕಿಡ್ನಾಪ್ ಮಾಡುತ್ತಾರೆ ಎಂಬ ವಿಚಾರವಿದೆ.
ಈ ಮುಸ್ಲಿ ಸಮುದಾಯವು ಈಜಿಪ್ಟಿನಿಂದ ಬಂದದ್ದು ಲಿಬಿಯಾದಿಂದ ಬಂದದ್ದು ವರ್ಜೀನಿಯಾದಿಂದ ಬಂದದ್ದು ಎಂದು ಇತಿಹಾಸಕಾರರು ಮನಬಂದಂತೆ ಹೇಳುತ್ತಿದ್ದಾರಾದರೂ ದಾಖಲೆಗಳೊಂದೂ ಲಭ್ಯವಿಲ್ಲ ಆದರೂ ಈ ಮಹಿಳೆಯರು ಮಾತ್ರ ಬುರ್ಖಾ ಧರಿಸದ ಯಾವನಾದರೂ ಚೆನ್ನಾಗಿ ಕಂಡರೆ ಮಾತ್ರ ಕಿಡ್ನಾಪ್ ಮಾಡುವುದು ಮಾತ್ರ ದಾಖಲೆ ಸಹಿತ ಇತಿಹಾಸದಲ್ಲಿ ದಾಖಲೆಯಾಗಿದೆ .
ಅದರಲ್ಲಿಯೂ ಇಲ್ಲಿನ ಗಂಡಸರು ನೀಲಿ ಬಣ್ಣದ ಬುರ್ಖಾ ಧರಿಸಿರಬೇಕೆಂಬ ಕಾನೂನು ಇದೆ ಹಾಗಾಗಿ ಇವರಿಗೆ ‘ದ ಬ್ಲೂ ಮನ್ ಆಫ್ ಸಹಾರಾ’ ಎಂಬ ಹೆಸರಿದೆ ಇದರ ಜೊತೆಗೆ ಗಂಡಸರು ಸಂಜೆಯಾಗುತ್ತಿದ್ದಂತೆಯೇ ಹೊರಹೋದರೆ ಅದಾವ ಹುಡುಗಿ ನಮ್ಮನ್ನು ಅಟ್ಟಾಸಿಕೊಂಡು ಬಟ್ಟೆ ಹರಿದು ಅತ್ಯಾಚಾರ ಮಾಡಿಬಿಡುತ್ತಾಳೋ ಎಂಬ ಭಯವೂ ಇದೆ !
ಮತ್ತೊಂದು ಆಶ್ಚರ್ಯದ ವಿಚಾರ ಏನೆಂದರೆ ಈ ಹುಡುಗಿಯರು ಊರಿನಲ್ಲಿ ಯಾರ ಜೊತೆಗೆ ಬೇಕಿದ್ದರೂ ಸಂಭಂದ ಇಟ್ಟುಕೊಳ್ಳಬಹುದು. ಈ ವಿಚಾರವನ್ನು ಮನೆಯವರಾಗಲೀ ತನ್ನ ಗಂಡನಾಗಲೀ ಪ್ರಶ್ನಿಸುವಂತಿಲ್ಲ ಹಾಗೇನಾದರೂ ಪ್ರಶ್ನಿಸಿದರೆ ಅಕ್ಕಪಕ್ಕದ ಹೆಂಗಸರೆಲ್ಲಾ ಸೇರಿಕೊಂದು ಮಕ್ ಮಕ್ಕೆ ಕುಟ್ಟಿಬಿಡುತ್ತಾರೆ ಎಂಬುದೂ ಕೂಡ ಇತಿಹಾಸ ಕಂಡ ಸತ್ಯ.
ಹೀಗೆ ಗಂಡನಾದವನು ತನ್ನ ಈ ಅಪರೂಪದ ಅನೈತಿಕ ಸಂಭಂದದ ವಿರುದ್ಧ ಎಗರಾಡಿದ್ದೇ ಆದರೆ ಆ ಹೆಂಡತಿಯು ತನ್ನ ಗ್ರಾಮದ ಹಿರಿಯ ಹೆಂಗಸಿಗೆ ತಿಳಿಸಿ ತನ್ನ ಅಪರೂಪದ ಸಂಭಂದ ಹದಗೆಡಿಸುತ್ತಿರೋ ಈ ಗಂಡ ನನಗೆ ಬೇಡ ಎಂದು ಬೈಯ್ದು ಡೈವೋರ್ಸ್ ಕೊಡುತ್ತಾಳೆ.
ಈ ಡೈವೋರ್ಸ್ ಪ್ರೋಗ್ರಾಮನ್ನು ಅಕ್ಕಪಕ್ಕದ ಎರಡೂ ಊರುಗಳಲ್ಲಿ ಹಬ್ಬ ಎಂದು ಆಚರಿಸುತ್ತಾರೆ, ಏಕೆಂದರೆ ಈ ಅಮಾಯಕ ಹೆಂಡತಿಯು ಕೆಟ್ಟ ಗಂಡನಿಂದ ದೂರವಾಗಿದ್ದಾಳೆ ಹಾಗಾಗಿ ಈ ಯುವತಿಯನ್ನು ಯಾರು ಬೇಕಿದ್ದರೂ ‘ಕೂಡಾಣಿಕೆ’ ಮಾಡಿಕೊಳ್ಳಬಹುದು ಎಂದು ಈ ಹಬ್ಬ ಅಷ್ಟೇ !
ಈ ಡೈವೋರ್ಸ್ ಕೇಸಿನಲ್ಲಿ ಬಹಳ ಚೆಂದ ಇರುವ ವಿಚಾರ ಏನೆಂದರೆ ಗಂಡನೇ ತನಗೆ ಈ ಹೆಂಡತಿ ಬೇಡವೆಂದು ಗ್ರಾಮಸ್ಥರ ಮೊರೆ ಹೊಕ್ಕರೆ ನಂತರ ಗಂಡನಾದವನೇ ತನ್ನ ಹೆಂಡತಿ ಬದುಕಲಿಕ್ಕಾಗಿ ತನ್ನ ಅರ್ಧ ಆಸ್ತಿ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ಬಿಟ್ಟು ಹೆಂಡತಿ ಏನಾದರೂ ತನಗೆ ಈ ಕೆಟ್ಟ ಗಂಡ ಬೇಡವೆಂದರೆ ಸಾಕು ಆತನ ಇಡೀ ಆಸ್ತಿ ಹೆಂಡತಿಯ ಪಾಲಾಗುತ್ತದೆ !
ಇದೆಲ್ಲದರ ಹೆನ್ನೆಲೆ ಹುಡುಕಿದರೆ “ಟಿನ್ ಹಿನಾನ್”ಎಂಬ ಹೆಸರಿನ ನಾಲ್ಕನೇ ಶತಮಾನದಲ್ಲಿ ಬದುಕಿದ್ದ ರಾಣಿ ಈ ಕಾನೂನು ಮಾಡಿದ್ದು ಎಂದು ಇತಿಹಾಸ ಹೇಳುತ್ತದೆ !ಆ ರಾಣಿಯ ಚಿತ್ರ ಲಭ್ಯವಿಲ್ಲ ಆದರೂ ನಾವೆಲ್ಲ ಆ ರಾಣಿಯ ಮುಖವನ್ನೊಮ್ಮೆ ನೋಡಿಕೊಂಡು ಧನ್ಯರಾಗಬೇಕಿತ್ತು !
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗುತ್ತಿದೆ. ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ. ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದುಕುಳಿತಿದ್ದಾನೆ. ಮಗನ…
ಮನುಷ್ಯನಿಗೆ ಯಾವುದೇ ಕಷ್ಟ ಬಂದರು , ರೋಗ ಬಂದರೂ ಮೊದಲು ಪ್ರಾರ್ಥಿಸೋದು ದೇವರನ್ನ. ಎಷ್ಟೇ ದೊಡ್ಡ ವೈದ್ಯರಾದರೂ ತಮ್ಮ ಕೈಯಲ್ಲಿ ಸಾಧ್ಯವಾಗೋದಿಲ್ಲ ಎಂದಾಗ ಇನ್ನು ದೇವರೇ ಕಾಪಾಡ ಬೇಕಷ್ಟೇ ಎಂದು ಕೈ ಚೆಲ್ಲಿಬಿಡುತ್ತಾರೆ. ಮನುಷ್ಯರೂ ಅಷ್ಟೇ ಕೊನೆಯ ಕ್ಷಣದಲ್ಲಿ ಏನಾದರೂ ಚಮತ್ಕಾರ ಆಗುತ್ತದೋ ಎಂದು ದೇವರ ಮೊರೆ ಹೋಗುತ್ತಾರೆ. ದೇವರ ಕೃಪೆಯಿಂದ ಸಾಕಷ್ಟು ಚಮತ್ಕಾರಗಳಾಗಿರುವುದರ ಬಗ್ಗೆ ನೀವು ಕೇಳಿರಬಹುದು. ಅಂತಹದ್ದೇ ಒಂದು ಚಮತ್ಕಾರವನ್ನು ಉಂಟು ಮಾಡುವ ದೇವಸ್ಥಾನ ತುಮಕೂರಿನಲ್ಲಿದೆ. ಜನರು ತಮ್ಮ ಯಾವುದೇ ದೊಡ್ಡ ದೊಡ್ಡ ಕಾಯಿಲೆಗಳಿಗೆ…
ಮೂವರು ಅಪರಿಚಿತ ವ್ಯಕ್ತಿಗಳು ಸ್ಥಳೀಯ ಕ್ರಿಕೆಟಿಗನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನ ಭಂಡುಪ್ ಪ್ರದೇಶದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಸುಮಾರು 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಕ್ರಿಕೆಟಿಗನನ್ನು ರಾಕೇಶ್ ಪನ್ವಾರ್ ಎಂದು ಗುರುತಿಸಲಾಗಿದೆ. ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ರಾಕೇಶ್ಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ರಾಕೇಶ್ನನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ…
ಇದುವರೆಗೂ ಜನಕ್ಕೆ ಅರ್ಥ ಆಗದಿರೋದು ಎರಡೇ ಎರಡು ವಾಕ್ಯ.. *ಮೀಸಲಾತಿ ಇರುವುದು ಆರ್ಥಿಕ ವಾಗಿ ಜನರನ್ನ ಮೇಲೆ ತರುವುದಕ್ಕಲ್ಲ ಬದಲಿಗೆ ಅದು ಸಾಮಾಜಿಕ ನ್ಯಾಯಕ್ಕಾಗಿ… *ಮೀಸಲಾತಿ ಅಂದ್ರೆ ಬರೀ 18% ಮೀಸಲಾತಿ ಪಡೆಯುತ್ತಿರೊ ಜನ ಅಂದ್ರೆ ಎಸ್ಸಿ ಎಸ್ಟಿ ಸಮುದಾಯದವರೆಗೆ ಮಾತ್ರ ಇರುವುದೆಂದು ತಿಳಿದಿರುವುದು… ಮೀಸಲಾತಿ ಯಾರ್ಯಾರಿಗೆ ಇದೆ..? ಎಷ್ಟಿದೆ..? ಎಷ್ಟು ಜಾತಿ ಸಮುದಾಯಗಳು ಮೀಸಲಾತಿ ಅಡಿಯಲ್ಲಿ ಬರುತ್ತೆ..? ಬಹು ಮುಖ್ಯವಾಗಿ ಮೀಸಲಾತಿ ಎಂಬುದು ಯಾವ ಯಾವ ಕ್ಷೇತ್ರದಲ್ಲಿದೆ..? ಈ ಮೀಸಲಾತಿ ಏತಕ್ಕಾಗಿ ಬೇಕು…? ಮೀಸಲಾತಿ ನಿಂತರೆ…
ಬೆಳಗಾವಿ, ಚಿಕ್ಕೋಡಿ, ರಾಯಚೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಕೃಷ್ಣಾ ನದಿ ವ್ಯಾಪ್ತಿಯಲ್ಲಿರುವ ಬರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್ಗಳು ಆಟಿಕೆಯಂತಾಗಿವೆ, ಆದರೂ ಕೂಡ ವಾಹನ ಸವಾರರು ಮಾತ್ರ ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ. ಬೆಳಗಾವಿಯ ದೆಸೂರು-ಖಾನಾಪೂರ ಮಧ್ಯೆ ಇರುವ ಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರು ತುಂಬಿ ಹರಿಯುತ್ತಿದ್ದರೂ ಕೂಡ ವಾಹನ ಸವಾರರು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ವೇಗದಿಂದ ಹರಿಯುತ್ತಿರುವ ನೀರನ್ನೇ ಲೆಕ್ಕಿಸದೇ ವಾಹನ ಸವಾರರು ಕೊಳ್ಳ ದಾಟುತ್ತಿದ್ದಾರೆ. ಸ್ಥಳದಲ್ಲಿ…
ನಾವು ಸಾಮಾನ್ಯವಾಗಿ ಬಾಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಕುತ್ತೆವೆ.ಆದರೆ ಬಾಳೆಹಣ್ಣಿನ ಸಿಪ್ಪೆಯಿಂದ ಆಗೋ ಉಪಯೋಗ ತಿಳಿದುಕೊಂಡರೆ ನೀವು ಸಿಪ್ಪೆಯನ್ನು ಎಸೆಯುವುದಿರಲಿ ಅದನ್ನೇ ಕಾಪಾಡಿಕೊಳ್ಳುತ್ತಿರ..ಹೇಗೆ ಉಪಯೋಗ ಅನ್ನೋ ಕುತೂಹಲವೇ ಇದನ್ನು ಓದಿ