ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದಲ್ಲಿ ಅತಿ ಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 1೦ ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿ ಯಾಗ ಬಹುದು. ಅಮೂಲ್ಯವೆನಿಸುವ ಯಾವುದೇ ವಸ್ತು ಸುಲಭವಾಗಿ ದಕ್ಕುವುದಿಲ್ಲ. ಹಣವೂ ಅಷ್ಟೇ ! ಯಾರೇ ಆಗಲಿ, ಎಷ್ಟೇ ಹಣವಂತರಿರಲಿ, ಬಾಯಲ್ಲಿ ಬೆಳ್ಳಿ ಚಮಚವನ್ನಿರಿಸಿಕೊಂಡು ಹುಟ್ಟಿರುವುದಿಲ್ಲ. ಆದರೆ ಈ ಭೂಮಿಯಲ್ಲಿ ಹುಟ್ಟಿರುವ ಯಾವುದೇ ವ್ಯಕ್ತಿಗೆ ಹಣವಂತನಾಗುವ ಸಮಾನ ಅವಕಾಶವಿದೆ. ಇದಕ್ಕೆ ಸತತ ಪರಿಶ್ರಮ ಹಾಗೂ ಹಣಗಳಿಕೆಯ ಹಂತವನ್ನು ಮೆಟ್ಟಿಲು ಮೆಟ್ಟಿ ಲಾಗಿ ಏರಲು ಉತ್ತಮ ಉದ್ಯೋಗದ ನೆರವು ಬೇಕು. ಇದು ಸ್ವ ಉದ್ಯೊಗವೂ ಆಗಬಹುದು ಅಥವಾ ಅತಿಹೆಚ್ಚು ಗಳಿಕೆ ನೀಡುವ ಇತರ ಉದ್ಯೋಗವೂ ಆಗಬಹುದು.

ಅಂದ ಮಾತ್ರಕ್ಕೆ ಉದ್ಯೋಗ ಮಾಡುವ ಎಲ್ಲರೂ ಭಾರೀ ಹಣ ಮಾಡುತ್ತಾರೆ ಎಂದು ಹೇಳುವಂತಿಲ್ಲ. ಈ ಉದ್ಯೋಗವನ್ನು ಮಾಡುವವರಿಗೆ ಅತಿಹೆಚ್ಚು ವೇತನ ನೀಡಬೇಕಾದರೆ ಬೇರಯವ ರಲ್ಲಿ ಇರದ ಬಹಳಷ್ಟು ಗುಣಗಳು, ಕೌಶಲ್ಯ ಹಾಗೂ ಅಪಾರವಾದ ಮಾಹಿತಿ ಇವರಲ್ಲಿರಬೇಕಾಗುತ್ತದೆ. ಅಷ್ಟೇ ಅಲ್ಲ, ಇದನ್ನು ಪಡೆದಿರುವುದು ಉತ್ತಮ ವಿಶ್ವವಿದ್ಯಾಲಯದಲ್ಲಿ ಎಂದು ಪ್ರಮಾಣಿ ಸಲೂಬೇಕಾಗುತ್ತದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಸಂಬಳ ಪಾವತಿಸುವ ಕಂಪನಿಗಳು ಭಾರತದಲ್ಲಿ ಅತಿ ಹೆಚ್ಚು ಸಂಬಳ ಗಳಿಸಬಹುದಾದ ಪ್ರಮುಖ 1೦ ಉದ್ಯೋಗಗಳ ಪಟ್ಟಿ ಇಲ್ಲಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಧೀಶರಾಗ ಬಯಸುವವರಿಗೆ ಇದು ಮಾರ್ಗದರ್ಶಿಯಾಗ ಬಹುದು. (ವೇತನವನ್ನು ವಾರ್ಷಿಕ ರೂ. ಗಳಲ್ಲಿ ನೀಡಲಾಗಿದೆ

ವೃತ್ತಿಪರ ಕಾರ್ಯನಿರ್ವಾಹಕರು :- ವೃತ್ತಿಪರ ಕಾರ್ಯನಿರ್ವಾಹಕರನ್ನು ಸಂಸ್ಥೆ/ ಕಂಪನಿಗಳ ಆತ್ಮ ಎಂದು ಕರೆಯಬಹುದು. ಸಂಸ್ಥೆ ನಿರ್ವಹಿಸಬೇಕಾದ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವಂತೆ ನೋಡಿಕೊಳ್ಳುವುದು ಇವರ ಕಾಯಕ. ಇದಕ್ಕೆ ಪ್ರಾರಂಭಿಕ ಹಂತದಿಂದಲೇ ಕಠಿಣ ಪರಿಶ್ರಮ ಅಗತ್ಯ. ಒಂದು ಬಾರಿ ಪ್ರಾರಂಭಿಕ ಹಂತ ದಾಟಿದ ಬಳಿಕ ಮತ್ತೆ ಹಿಂದಿರುಗಿ ನೋಡುವ ಅವಶ್ಯಕತೆಯೇ ಇಲ್ಲ. ಈ ವೃತ್ತಿಯಲ್ಲಿ ಹೆಚ್ಚು ಹೆಚ್ಚು ಪರಿಣಿತಿ ಪಡೆದಂತೆ ಹೆಚ್ಚು ಹೆಚ್ಚು ವೇತನವನ್ನು ನಿರೀಕ್ಷಿಸಬಹುದು. ಪ್ರಾರಂಭಿಕ ಹಂತ – ರೂ. 3,೦೦,೦೦೦, ಮಧ್ಯಮ ಹಂತ – ರೂ. 25,೦೦,೦೦೦, ಅನುಭವಿ ಹಂತ- ರೂ. 8೦,೦೦,೦೦೦

ಬ್ಯಾಂಕ್ ಹೂಡಿಕೆದಾರ:
ಈ ವೃತ್ತಿಯಲ್ಲಿರುವವರು ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಗೆ ಹಣ ಪಡೆಯುವಿಕೆ ಹಾಗೂ ಹೂಡಿಕೆಯ ಬಗ್ಗೆ ಸಲಹೆ ನೀಡುತ್ತಾರೆ. ಇವರು ಸತತವಾಗಿ ಮಾರುಕಟ್ಟೆಯ ಏರಿಳಿತ ಗಳನ್ನು ಅಭ್ಯಸಿಸುತ್ತಾ ಗ್ರಾಹಕರ ಮನೋಭಾವವನ್ನೂ ಪರಿಗಣಿಸಿ ಸಂಸ್ಥೆಗೆ ಲಾಭ ತರುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಇದೇ ಕಾರಣಕ್ಕೆ ಇವರಿಗೆ “Money Man” ಎಂಬ ಅನ್ವರ್ಥ ನಾಮವನ್ನೂ ನೀಡಲಾಗಿದೆ. ಪ್ರಾರಂಭಿಕ ಹಂತ- ರೂ. 12,೦೦,೦೦೦, ಮಧ್ಯಮ ಹಂತ – ರೂ. 3೦,೦೦,೦೦೦, ಅನುಭವಿ ಹಂತ- ರೂ.5೦,೦೦,೦೦೦+

ಚಾರ್ಟರ್ಡ್ ಅಕೌಂಟೆಂಟ್:
ಇವರು ಒಂದುಸಂಸ್ಥೆಯ ಲೆಕ್ಕಪತ್ರ ಹಾಗೂ ವ್ಯಾಪಾರದ ಮೇಲೆ ಹಿಡಿತವನ್ನಿರಿಸಿ ಕೊಂಡಿರುತ್ತಾರೆ. ಇವರು ತಮ್ಮ ಕೆಲಸದ ಬಗ್ಗೆ ಜಾಗರೂಕರಾಗಿದ್ದು, ಸಂಸ್ಥೆಯ ಹಣದ ವಿಲೇವಾರಿ ಹಾಗೂ ಆದಾಯದ ಬಗ್ಗೆ ವಿವರಗಳನ್ನು ನೀಡುವಂತಿರಬೇಕು ಹಾಗೂ ಸದಾ ಉತ್ತಮವಾಗಿ ಕಾಣಿಸಿಕೊಳ್ಳುವಂತಿರಬೇಕು. ಈ ವೃತ್ತಿ ಭಾರತದಲ್ಲಿ ಅತಿ ಗೌರವಾತ ಹಾಗೂ ಹೆಚ್ಚಿನ ಆದಾಯ ತರುವಂತದ್ದಾಗಿದೆ. ಪ್ರಾರಂಭಿಕ ಹಂತ – ರೂ. 5,5೦,೦೦೦, ಮಧ್ಯಮ ಹಂತ – ರೂ. 12,8೦,೦೦೦, ಅನುಭವಿ ಹಂತ – ರೂ. 25,7೦,೦೦೦
ತೈಲ ಮತ್ತು ನೈಸರ್ಗಿಕ ಅನಿಲ ವಿಭಾಗದ ವೃತ್ತಿಪರರು:
ಈ ವಿಭಾಗ ಇದುವರೆಗೆ ಎಂದೂ ಬತ್ತದ ಲಾಭದ ವೃತ್ತಿ ಎಂದು ಪರಿಗಣಿಸಲ್ಪಟ್ಟಿದೆ. ಈ ವಿಭಾಗದಲ್ಲಿರುವ ಕೆಲವು ವೃತ್ತಿಗಳು ಹೆಚ್ಚಿನ ವೇತನ ನೀಡುತ್ತವೆ. ಉದಾಹರಣೆಗೆ ಭೂ ಗರ್ಭ ಶಾಸ್ತ್ರಜ್ಞ, ಸಾಗರ ಅಭಿಯಂತರ ಇತ್ಯಾದಿ. ಅನುಭವಿ ಹಂತ – ರೂ. 15-2೦ ಲಕ್ಷ ನಿವ್ವಳ ಹಾಗೂ ಸಂಸ್ಥೆಯಿಂದ ಸಿಗುವ ಎಲ್ಲಾ ಸವಲತ್ತುಗಳು

ವಾಣಿಜ್ಯ ವಿಶ್ಲೇಷಕರು (ಬಿಸಿನೆಸ್ ಅನಾಲಿಸ್ಟ್):
ಇಂದು ಭಾರತದಲ್ಲಿಯೂ ವಾಣಿಜ್ಯ ವಹಿವಾಟು ಅತ್ಯಂತ ಪೈಪೋಟಿ ಹೊಂದಿದ್ದು, ಈ ವೃತ್ತಿಯಲ್ಲಿರು ವವರಿಗೆ ಪೈಪೋಟಿಯನ್ನು ಎದುರಿಸುವುದು ಹೇಗೆ ಎಂಬ ಸವಾಲನ್ನು ಎದುರಿಸಬೇಕಾಗುತ್ತದೆ. ಈ ವೃತ್ತಿಗೆಅತಿ ಹೆಚ್ಚು ಬುದ್ದಿ ಚಾಣಾಕ್ಷರು ಹಾಗೂ ತಾರ್ಕಿಕವಾಗಿ ಯೋಚಿಸುವ ವ್ಯಕ್ತಿಗಳ ಅಗತ್ಯವಿದೆ. ಈ ವೃತ್ತಿಯಲ್ಲಿರುವವರು ವಾಣಿಜ್ಯದ ಅಂಕಿ ಅಂಶಗಳನ್ನು ಗಣಿತದ ಸೂತ್ರಗಳ ಮೂಲಕ ವಿವರಿಸಬಲ್ಲವರಾಗಿರಬೇಕು ಹಾಗೂ ನಿತ್ಯವೂ ಬದಲಾಗುವ ತಂತ್ರಜ್ಞಾನವನ್ನು ತಮ್ಮ ವಾಣಿಜ್ಯ ವಹಿವಾಟಿನ ಏಳಿಗೆಗೆ ಹೇಗೆ ಬಳಸಿಕೊಳ್ಳ ಬಹುದು ಎಂಬುದನ್ನು ಎಲ್ಲರಿ ಗಿಂತ ಮೊದಲು ಅರಿತು ಅಳವಡಿಸಿ ಕೊಳ್ಳುವುದು ಇವರ ವೃತ್ತಿಯ ಪ್ರಮುಖಸವಾಲಾಗಿದೆ. ಅಂದಾಜು ವೇತನ: ಪ್ರಾರಂಭಿಕ ಹಂತ: ರೂ. 6,೦೦,೦೦೦

ವೈದ್ಯಕೀಯ ವೃತ್ತಿಪರರು:
ಈ ವೃತ್ತಿಯಲ್ಲಿ ಹಿಂಜರಿತ ಎಂಬುದೇ ಎಲ್ಲ. ಎಲ್ಲಿಯವರೆಗೆ ಮನುಷ್ಯರು ಇರುತ್ತಾರೋ ಅಲ್ಲಿಯವರೆಗೆ ಈ ವೃತ್ತಿಯಲ್ಲಿ ಗಳಿಕೆ ಇದ್ದೇ ಇರುತ್ತದೆ. ವಿಶ್ವದ ಅತ್ಯಂತ ಗೌರವಾನ್ವಿತ ಹಾಗೂ ಆದ್ಯತೆಯ ವೃತ್ತಿಯಾದ ವೈದ್ಯ ವೃತ್ತಿಯಲ್ಲಿ ಜನರು ವೈದ್ಯೋ ನಾರಾಯಣಃ ಹರಿ ಎಂದೇ ಪರಿಗಣಿಸುತ್ತಾರೆ. ಈ ವೃತ್ತಿಯಲ್ಲಿ ಪ್ರಾರಂಭಿಕ ಹಂತದಲ್ಲಿ ವೇತನ ಕಡಿಮೆ ಇದ್ದರೂ ದಿನಗಳೆದಂತೆ ವೇತನವೂ ಏರುತ್ತಾ ಹೋಗುತ್ತದೆ. ಸಾಮಾನ್ಯ ನೈಪುಣ್ಯತೆ – ರೂ. 4,8೦,೦೦೦, ಸಾಮಾನ್ಯ ಶಸ್ತ್ರ ಚಿಕಿತ್ಸಕ- ರೂ. 8,1೦,೦೦೦, ವೃತ್ತಿಪರ ವೈದ್ಯ- ರೂ.17,೦೦,೦೦೦

ವೈಮಾನಿಕ ವೃತ್ತಿ :
ಈ ವೃತ್ತಿಯಲ್ಲಿರುವವರಿಗೆ ಆದಾಯದ ಮಿತಿ ಆಗಸವೇ ಸರಿ. ಈ ವೃತ್ತಿಯಲ್ಲಿ ನೈಪುಣ್ಯತೆ ಪಡೆದವರು ವಾರ್ಷಿಕ ಇಪ್ಪತ್ತು ಲಕ್ಷದಷ್ಟು ವೇತನ ಪಡೆಯುತ್ತಾರೆ. ಸರಾಸರಿ ವೇತನ: ಕಮರ್ಷಿಯಲ್ ಪೈಲಟ್: ರೂ. 2೦,೦೦,೦೦೦, ಹೆಲಿಕಾಪ್ಟರ್ ಪೈಲಟ್- ರೂ. 18,೦೦,೦೦೦, ವಿಮಾನ ದುರಸ್ತಿ ಸಿಬ್ಬಂದಿ- ರೂ. 9,8೦,೦೦೦
ಕಾನೂನು ವೃತ್ತಿಪರರು :
ಖ್ಯಾತ ವಕೀಲರಿಗೆ ಉಚ್ಛಮಟ್ಟದ ನ್ಯಾಯಾಧೀಶರಾಗುವ ಅವಕಾಶ ತಾನೇ ತಾನಾಗಿ ಒದಗಿ ಬಂದಾಗ ಇದನ್ನು ಹಲವರು ನಿರಾಕರಿಸಿದ್ದಾರೆ. ಏಕೆಂದರೆ ವೃತ್ತಿಪರ ವಕೀಲರಾಗಿ ಗಳಿಸುದಷ್ಟು ವೇತನ ಉಚ್ಛನ್ಯಾಯಾಧೀಶರಿಗೆ ದೊರಕುವುದಿಲ್ಲ. ಇದು ವಾಸ್ತವ. ವೃತ್ತಿಪರ ವಕೀಲರಾಗಬೇಕಾದರೆ ಉನ್ನತ ಶಿಕ್ಷಣ, ಅಪಾರ ತಾಳ್ಮೆ, ಹಾಗೂ ಅದ್ಭುತ ವಾಕ್ಚತುರತೆಯ ಅಗತ್ಯವಿದೆ. ಈ ವೃತ್ತಿಯಲ್ಲಿ ಪಳಗುತ್ತಾ ಹೋದಂತೆ ಪ್ರತಿವಾದಕ್ಕೂ ಹೆಚ್ಚು ಹೆಚ್ಚಿನ ವೇತನವನ್ನು ನಿರೀಕ್ಷಿಸಬಹುದು. ಸರಾಸರಿ ವೇತನ: ಕಾರ್ಪೋರೇಟ್ (ಸಂಸ್ಥೆಗೆ ಮೀಸಲಾದ) ವಕೀಲರು- 6,1೦,೦೦೦, ಹಿರಿಯ ಅಟಾರ್ನಿ – 9,5೦,೦೦೦,

ಮಾರ್ಕೆಟಿಂಗ್ (ಮಾರುಕಟ್ಟೆ ಪ್ರವೀಣ):
ಯಾವುದೇ ವಹಿವಾಟಿನಲ್ಲಿ ಉತ್ಪನ್ನ ಅಥವಾ ಸೇವೆ ಮಾರಾಟ ವಾಗಿ ಹೋದಾಗ ಮಾತ್ರವೇ ಲಾಭ ಪಡೆಯಲು ಸಾಧ್ಯ. ಈ ವೃತ್ತಿಯಲ್ಲಿರುವವರು ಗ್ರಾಹಕರ ಅಂತಃಕರಣವನ್ನು ಅರಿತು ಪ್ರಲೋಭನೆಗಳನ್ನು ಒಡ್ಡಿ ಮಾರಾಟವನ್ನು ಹೆಚ್ಚಿಸಬೇಕಾಗುತ್ತದೆ. ಈ ತಂತ್ರಗಳು ಫಲ ಡಿದರೆ ಹೆಚ್ಚಿನ ವೇತನ ಮಾತ್ರವಲ್ಲ, ಸಂಸ್ಥೆಯ ಉನ್ನತ ಹುದ್ದೆಗಳನ್ನೂ ಪಡೆಯಲು ಸಾಧ್ಯ. ಇದಕ್ಕಾಗಿ ಮಾರುಕಟ್ಟೆಯ ಅಂತರಾಳವನ್ನು ಅರಿತು ಗ್ರಾಹಕರು ಈ ಉತ್ಪನ್ನಗಳಿಗೆ ಒಲವು ನೀಡುವಂತೆ ಉತ್ಪನ್ನ ಅಥವಾ ಸೇವೆಗಳನ್ನು ಬದಲಾವಣೆಗೊಳಪಡಿಸುವುದು ಸಹಾ ಇವರಿಗೆ ಕಾರ್ಯಗತ ವಾಗಿರಬೇಕಾಗುತ್ತದೆ. ಸರಾಸರಿ ವೇತನ: ಪ್ರಾರಂಭಿಕ ಹಂತ- ರೂ. 1,5೦,೦೦೦, ಮಧ್ಯಮ ಹಂತ- ರೂ. 5,೦೦,೦೦೦, ಅನುಭವಿ ಹಂತರೂ. 1೦,೦೦,೦೦೦+

ಮಾಹಿತಿ ತಂತ್ರಜ್ಞಾನ ಹಾಗೂ ಸಾಫ್ಟ್ವೇರ್ ಅಭಿಯಂತರರು:
ಇದೊಂದು ನಿತ್ಯಹರಿದ್ವರ್ಣದ ಉದ್ಯೋಗವಾಗಿದ್ದು ಹೆಚ್ಚಿನ ಆದಾಯವನ್ನು ಗಳಿಸಬಹುದು. ಇದಕ್ಕಾಗಿ ಕಂಪ್ಯೂಟರುಗಳ ಬಗ್ಗೆ ಆಳವಾದ ಅಧ್ಯಯನ ಹಾಗೂ ಕಂಪ್ಯೂಟರ್ ಭಾಷೇ ಅರ್ಥಮಾಡಿಕೊಳ್ಳುವ ಹಾಗೂ ಅಗತ್ಯಕ್ಕೆ ತಕ್ಕಂತೆ ಬರೆಯುವ ನೈಪುಣ್ಯತೆಯನ್ನು ಪಡೆಯಬೇಕಾಗುತ್ತದೆ. ಈ ವೃತ್ತಿಯಲ್ಲಿರುವವರು ಹೊಸ ಪ್ರೋಗ್ರಾಂಗಳನ್ನು ವಿನ್ಯಾಸಗೊಳಿಸುವ, ಹೊಸ ವ್ಯವಸ್ಥೆಯನ್ನು ಪ್ರತಿಷ್ಠಾಪಿಸುವ ಹಾಗೂ ನಿರ್ವಹಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಸರಾಸರಿ ವೇತನ: ಪ್ರಾರಂಭಿಕ ಹಂತ- ರೂ. 3,5೦,೦೦೦, ಮಧ್ಯಮ ಹಂತ- ರೂ. 8,3೦,೦೦೦, ಅನುಭವಿ ಹಂತ ರೂ. 15,5೦,೦೦೦
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಅಂತೆಯೇ ನೀವೂ ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿ ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಐವತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿಯೊಬ್ಬ ಈಗ ಜೀವಂತವಾಗಿ ದೀಪಾವಳಿ ಹಬ್ಬಕ್ಕೆ ಏಕಾಏಕಿ ಪ್ರತ್ಯಕ್ಷನಾಗಿದ್ದಾನೆ. ಆದರೆ ಸತ್ತಿದ್ದು, ಸಮಾಧಿ ಮಾಡಿದ್ದು, ಅಲ್ಲಿಂದ ಎದ್ದು ಹೋದದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಇನ್ನು ಖಚಿತ ಉತ್ತರ ಸಿಗಲಿಲ್ಲ ಎನ್ನಲಾಗಿದೆ. ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯ ಕಾಡುಗೊಲ್ಲ ಸಮುದಾಯದ 76 ವರ್ಷದ ಈರಜ್ಜ ಮರಳಿ ಬಂದಿರುವ ವ್ಯಕ್ತಿ. ಈದುವರೆಗೆ ಆಂಧ್ರದಲ್ಲಿದ್ದ ಈತ ಮಂಗಳವಾರ ದೀಪಾವಳಿಗೆ ಮರಳಿ ಹುಟ್ಟೂರಿಗೆ ಬಂದಿದ್ದಾನೆ. ಈರಜ್ಜನ ಸಾವಿನ ಘಟನೆ ಕುರಿತು ಈತನ ಸಹೋದರ ಬೇವಿನಪ್ಪ ವಿಕ ಜತೆ ಹೇಳಿಕೊಂಡದ್ದು ಹೀಗೆ. ‘‘ಈರಣ್ಣಗೆ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಅನುಭವಿಗಳ ಸಲಹೆಪಡೆದು ಷೇರು ಬಜಾರಿನಲ್ಲಿ ಹಣ ಹೂಡುವುದು ಒಳಿತು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವಿಸಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವರು. .ನಿಮ್ಮ ಸಮಸ್ಯೆ.ಏನೇ .ಇರಲಿ…
ಭಾರತ ಮೂಲದ 12 ವರ್ಷ ವಯಸ್ಸಿನ ಬಾಲಕ ಬ್ರಿಟಿಷ್ ಟಿವಿ ಷೋ ಒಂದರಲ್ಲಿ ಎಲ್ಲ ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಮನೆಮಾತಾಗಿದ್ದಾನೆ.
ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು. ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ….
ಸರ್ಕಾರವು ಈಗಾಗಲೇ ಆರೋಗ್ಯ ಭಾಗ್ಯ,ಶಾದಿ ಭಾಗ್ಯ,ಜ್ಯೋತಿ ಭಾಗ್ಯ ಅನ್ನ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ಕೊಟ್ಟಿದೆ.ಈಗ ಇದಕ್ಕೆ ಮತ್ತೊಂದು ಭಾಗ್ಯ ಸೇರ್ಪಡೆಯಾಗಿದೆ.