inspirational

ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು

440

ಒಂದು ಕಾಲದಲ್ಲಿ ಮಾಧ್ಯಮ ಎಂದರೆ ಜ್ಞಾನದ ಕಣಜ ಎಂದೇ ಕರೆಯಲಾಗುತ್ತಿತ್ತು. ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು.

ಯಾವುದನ್ನೂ ವಿಜೃಂಭಿಸದೆ, ವಾಸ್ತವ ಎಷ್ಟೇ ಕಠೋರವಾಗಿದ್ದರೂ, ಜನರ ನಂಬಿಕೆಗೆ ವಿರುದ್ಧವಾಗಿದ್ದರೂ, ಆಡಳಿತ ಮಾಡುವವರ ಮರ್ಜಿಗೆ ಒಳಗಾಗದೆ ಸತ್ಯದ ಪರ ನಿಷ್ಠೆಯನ್ನು ಹೊಂದಿದ್ದರು. ಆಗಲೂ ಅಪರೂಪಕ್ಕೆ ಕೆಲವು ಭಟ್ಟಂಗಿಗಳು ಇದ್ದರೂ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರುತ್ತಿರಲಿಲ್ಲ.

ಅಕ್ಷರಗಳ ಮುಖಾಂತರ ಕ್ರಾಂತಿಯನ್ನೇ ಮಾಡಲಾಯಿತು. ಆಗಲೇ “ಖಡ್ಗಕ್ಕಿಂತ ಲೇಖನಿ ಹರಿತ ” ಎಂಬ ನಾಣ್ಣುಡಿ ನಿಜವಾಗಿ ಆಚರಣೆಯಲ್ಲಿತ್ತು.

ಕೈ ಬರಹದ ಪತ್ರಿಕೋದ್ಯಮ ಓದುಗರ ನರನಾಡಿಗಳಲ್ಲಿ ರೋಮಾಂಚನ ಉಂಟುಮಾಡುತ್ತಿತ್ತು. ಮನಸ್ಸಿಗೆ ನಾಟುತ್ತಿತ್ತು. ತದನಂತರ ಆಧುನಿಕ ಬೆಳವಣಿಗೆಯೊಂದಿಗೆ ಮುದ್ರಣವೂ, ಆಮೇಲೆ ಆಕಾಶವಾಣಿ ಸುದ್ದಿ ಮಾಧ್ಯಮಗಳು, ಟಿವಿ ಮಾಧ್ಯಮಗಳು, ಅಂತರ್ಜಾಲ ವೆಬ್ ಪೋರ್ಟಲ್ ಗಳು ಅಭಿವೃದ್ಧಿ ಹೊಂದಿದವು ಮತ್ತು ಅತ್ಯಂತ ವೇಗವಾಗಿ ಜನಸಮೂಹವನ್ನು ಆಕ್ರಮಿಸಿಕೊಂಡವು.

ಪತ್ರಕರ್ತರೆಂದರೆ ವಿಶೇಷ ಬುದ್ಧಿಶಕ್ತಿಯ ಆಡಳಿತದ ಕಾವಲುಗಾರರು, ಸಮಾಜದ ಮಾರ್ಗದರ್ಶಕರು, ಜನಾಭಿಪ್ರಾಯ ರೂಪಿಸುವ ಚಿಂತಕರು ಎಂದೇ ಭಾವಿಸಲಾಗಿತ್ತು ಮತ್ತು ಅಪಾರ ಗೌರವವನ್ನು ನೀಡಲಾಗುತ್ತಿತ್ತು.

ಆದರೆ, ಅದೇ ಮಾತುಗಳನ್ನು ಈಗಿನ ಟಿವಿ ಮಾಧ್ಯಮಗಳ ಬಗ್ಗೆ ಹೇಳಲು ಸಾಧ್ಯವೇ ?

ಸುದ್ದಿಗಳೊಂದಿಗೆ ಪೆಟ್ರೋಲ್ ಮತ್ತು ಬೆಂಕಿ ಕಡ್ಡಿಯನ್ನು ಜೊತೆಯಲ್ಲಿಯೇ ತಂದಿರುತ್ತಾರೆ.

ಈ ಕ್ಷಣದಲ್ಲಿ ಪಾಕಿಸ್ತಾನದ ಮಾಧ್ಯಮಗಳು ಭಾರತ ಮತ್ತು ಅದರ ಪ್ರಧಾನಿಯನ್ನು ಟೀಕಿಸಲು ಬಳಸದ ಕೆಟ್ಟ ಪದವೇ ಇಲ್ಲ. ಸುಳ್ಳು ಸಹ ಇವರ ಕಾಟಕ್ಕೆ ಅವಮಾನದಿಂದ ನೇಣು ಹಾಕಿಕೊಂಡಿತು.

ಹಾಗೆಯೇ ಭಾರತ ಪತ್ರಕರ್ತರು ಸಹ ಅವರಂತೆಯೇ ವರ್ತಿಸುತ್ತಿದ್ದಾರೆ. ಸತ್ಯ ಮತ್ತು ವಾಸ್ತವದ ವಿಮರ್ಶಾತ್ಮಕ ಸುದ್ದಿಗಳನ್ನು ಮರೆತು ಜನರ ಭಾವನೆಗಳು ಮತ್ತು ಜನಪ್ರಿಯತೆಯ ಬಾಲ ಹಿಡಿದು ಸತ್ಯವನ್ನು ಸಮಾಧಿ ಮಾಡುತ್ತಿವೆ.

ಪ್ರಾಣವನ್ನು ಧೈರ್ಯವಾಗಿ ದೇಶಕ್ಕಾಗಿ ಸಮರ್ಪಿಸುತ್ತಿರುವ ಸೈನಿಕರ ತ್ಯಾಗ ಬಲಿದಾನಗಳ ಈ ಸಂಧರ್ಭದಲ್ಲಿ ಅದಕ್ಕೊಂದು ಅರ್ಥ ನೀಡಿ ಅತ್ಯಂತ ವಿವೇಚನೆಯಿಂದ ವಿಷಯಗಳನ್ನು ವಿಮರ್ಶಿಸಿ ಶಾಂತಿಯ ಸಂದೇಶಗಳನ್ನು ಎರಡೂ ಕಡೆ ಹಬ್ಬಿಸುತ್ತಾ, ಜನಾಭಿಪ್ರಾಯ ರೂಪಿಸಿ,ಆಡಳಿತಗಾರರ ಕಣ್ಣು ತೆರೆಸಿ, ಯುದ್ಧ ಮತ್ತು ಹಿಂಸೆಯ ಭೀಕರ ಪರಿಣಾಮ ಮತ್ತು ಅದರ ನಿರರ್ಥಕತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸಂಪೂರ್ಣ ಅದಕ್ಕೆ ವಿರುದ್ಧವಾಗಿ ಮಾಡುತ್ತಿವೆ.

ರಾಜಕಾರಣಿಗಳನ್ನು ಟೀಕಿಸುತ್ತಾ, ಶಾಂತಿ ಸೌಹಾರ್ದತೆಯ ಪ್ರತಿಪಾದಕರನ್ನು ಹೇಡಿಗಳಾಗಿ ಚಿತ್ರಿಸುತ್ತಾ, ಸಂಯಮಿಗಳನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಾ ಇಡೀ ಜನಾಭಿಪ್ರಾಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳತೊಡಗಿದ್ದಾರೆ.

ಇದೇ ನೋಡಿ ವಿಪರ್ಯಾಸ. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಚೆಯಾಗುವ ಅಪಾಯ ಎಲ್ಲರೂ ಊಹಿಸಿದ್ದರು. ಆದರೆ ಅದು ಸರ್ವಾಧಿಕಾರಿಯಾಗಿ ಇಡೀ ವ್ಯವಸ್ಥೆಯನ್ನೇ ಆಕ್ರಮಿಸಿ ಆಹುತಿ ತೆಗೆದುಕೊಳ್ಳುತ್ತದೆ ಎಂದು ಯಾರಿಗೂ ಅನಿಸಿರಲಿಲ್ಲ.

ಸತ್ಯದ ಕತ್ತು ಹಿಸುಕಿ ಅದರ ಸಮಾಧಿಯ ಮೇಲೆ ಸುಳ್ಳಿನ ಅಡಿಪಾಯ ಹಾಕಿ ಭ್ತಮಾಲೋಕದ ಅರಮನೆ ಕಟ್ಟಿ, ಅಮಾನವೀಯ ಬಣ್ಣ ಬಳಿದು ಇಡೀ ಸಮಾಜವನ್ನು ನಿಧಾನವಾಗಿ ವಿಷಪೂರಿತ ಮಾಡುತ್ತಿದೆ.

ನಿರೂಪಕರೆಂಬ ಮತಿಹೀನರು ವಿಷಯಗಳ ಆಳ ಅಗಲಗಳ ಬಗ್ಗೆ ಯಾವುದೇ ಜ್ಞಾನ ಇಲ್ಲದವರು ಬಾಯಿಗೆ ಬಂದಂತೆ ಮಾತನಾಡುತ್ತಾ, ಮಾತಿನಲ್ಲೇ ಬೀದಿ ಬದಿಯ ಕುಡುಕರಿಗಿಂತ ಕೆಟ್ಟದ್ದಾಗಿ ವರ್ತಿಸುತ್ತಾ ಸಮೂಹ ಸನ್ನಿಗೆ ಒಳಗಾಗಿದ್ದಾರೆ. ರೌಡಿಗಳು, ಕ್ರಿಮಿನಲ್ ಗಳು ಸಹ ಅಪರಾಧ ಎಸಗುವ ಮುನ್ನ ಹಲವಾರು ಬಾರಿ ಯೋಚಿಸುತ್ತಾರೆ. ಆದರೆ ಈ ಟಿವಿ ಮಾಧ್ಯಮದವರು ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.

ಪುರಾಣ, ಇತಿಹಾಸ, ರಾಜಕೀಯ, ಆರ್ಥಿಕ, ಸಾಮಾಜಿಕ ಮುಂತಾದ ಯಾವ ವಿಷಯಗಳನ್ನು ತಿಳಿಯದೆ ಈ ಕ್ಷಣದ ಮಾಹಿತಿಯನ್ನೇ ಸತ್ಯ ಎಂದು ಬಿಂಬಿಸುತ್ತಿದ್ದಾರೆ.

ಈಗಾಗಲೇ ಅವರ ಬಣ್ಣ ಬಯಲಾಗಿದೆ. ಅದರೂ ಅವರು ಶಿಥಿಲವಾಗುವ ಮುನ್ನ ಮಾಡಬಹುದಾದ ಅಪಾಯಕಾರಿ ಕೆಲಸಗಳ ಪರಿಣಾಮ ಬಹಳ ಕಾಲ ಉಳಿಯುತ್ತದೆ.

ಆದ್ದರಿಂದ ಜನ ಸಾಮಾನ್ಯರಾದ ನಾವುಗಳು ವಿವೇಚನೆಯಿಂದ ತಾಳ್ಮೆಯಿಂದ ಸುದ್ದಿ ಮತ್ತು ಅದರ ಹಿನ್ನೆಲೆಯನ್ನು ಗ್ರಹಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳೋಣ. ಅದರ ಆಧಾರದ ಮೇಲೆ ಚರ್ಚೆ ಮಾಡೋಣವೇ ಹೊರತು ಈ ಟಿವಿ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ಜಗಳವೇ ಚರ್ಚೆ ಎಂಬ ತಪ್ಪು ಕಲ್ಪನೆ ತಿರಸ್ಕರಿಸೋಣ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ ಹೆಚ್. ಕೆ.

About the author / 

Chethan Ram

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ‘ನಿಯಮ ಉಲ್ಲಂಗಿಸಲಿಲ್ಲ’ ‘ಯಾವುದೆ ವಿದೇಶೀಯ ಫಂಡ್ಸ್ ಪಡೆದಿಲ್ಲ’ ; ಇನ್ಫೋಸಿಸ್

    ಬೆಂಗಳೂರು, ಮೇ 14: ಎಫ್ಸಿ ಆರ್ ಎ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನವು ಪ್ರತಿಕ್ರಿಯೆ ನೀಡಿದೆ. ವಿದೇಶದಿಂದ ಯಾವುದೇ ‘ಫಂಡಿಂಗ್’ ಪಡೆದಿಲ್ಲ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೂಲದ ಎನ್ ಜಿಒ ಇನ್ಫೋಸಿಸ್ ಫೌಂಡೇಷನ್, ವಿದೇಶದಿಂದ ಪಡೆದ ದೇಣಿಗೆ ಮೊತ್ತಕ್ಕೆ ಸೂಕ್ತ ದಾಖಲೆ ಒದಗಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿತ್ತು. ಈ…

  • ಉಪಯುಕ್ತ ಮಾಹಿತಿ

    ನಿಮ್ಮ ಮಕ್ಕಳಿಗೆ ಯಾವ ಯಾವ ತಿಂಗಳಲ್ಲಿ, ಎಷ್ಟು ವರ್ಷದವರೆಗೆ ಲಸಿಕೆ ಹಾಕಿಸಬೇಕು.?ಇಲ್ಲಿದೆ ಸಂಪೂರ್ಣ ಮಾಹಿತಿ..ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಕಾಲವೊಂದಿತ್ತು, ಆಗ ಯಾವುದೇ ಉತ್ತಮ ಆಸ್ಪತ್ರೆಗಳು ಇರಲಿಲ್ಲ.ಹುಟ್ಟುವ ಮಕ್ಕಳಿಗೆ ಆಗ ಯಾವುದೇ ಲಸಿಕೆಗಳನ್ನು ಹಾಕುತ್ತಿರಲಿಲ್ಲ.ಯಾಕಂದ್ರೆ ಆಗಿನ ಆಹಾರ ಪದ್ಧತಿ ಆಗಿತ್ತು.ಯಾವುದೇ ಲಸಿಕೆಗಳು ಆಗ ಅಗತ್ಯವಿರಲಿಲ್ಲ. ಆದ್ರೆ ಈಗ ಆಗಿಲ್ಲ, ಹುಟ್ಟುತ್ತಲೇ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಅಗತ್ಯವಾದ ಲಸಿಕೆಗಳನ್ನು ಹಾಕಿಸಬೇಕಾಗುತ್ತೆ.ಇಲ್ಲವಾದ್ರೆ ನಾನಾ ಖಾಯಿಲೆಗಳು ಬರುವುದು ಗ್ಯಾರಂಟಿ. ಹಾಗಾಗಿ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಲಸಿಕೆ ಹಾಕಿಸುವುದು ಬಹು ಮುಖ್ಯ. ಹಾಗಾದ್ರೆ ಯಾವ ಯಾವ ಲಸಿಕೆಗಳನ್ನು ಯಾವ ಸಮಯಕ್ಕೆ ಹಾಕಿಸಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. ಮಗು ಹುಟ್ಟಿದ ತಕ್ಷಣ ಯಾವ…

  • Uncategorized

    ಖಾಲಿ ಹೊಟ್ಟೆಯಲ್ಲಿ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ!

    ಈ ಹಣ್ಣಿನಲ್ಲಿರುವ ಅಮಿನೋ ಆ್ಯಸಿಡ್ ಎಂಬ ರಾಸಾಯನಿಕ ಅಂಶದಿಂದಾಗಿ ಮಕ್ಕಳಲ್ಲಿ ಸಿಡುಬು ಮತ್ತು ದಡಾರಾ ಕಾಯಿಲೆಯ ಲಕ್ಷಣಗಳು ಗೋಚರಿಸುವಂತೆ ಮಾಡುತ್ತಿವೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಅಂಶ ಗಣನೀಯವಾಗಿ ಇಳಿಯುವಂತೆ ಮಾಡಿ ಮಕ್ಕಳಲ್ಲಿ ಹೈಪೊಗ್ಲಿಸಿಮಿಯಾ ಎಂಬ ಸಮಸ್ಯೆಯನ್ನು ತಂದೊಡ್ಡುತ್ತದೆ

  • ಮನರಂಜನೆ

    ಚಂದನ್‌ ಶೆಟ್ಟಿ ಬಿಗ್‌ಬಾಸ್‌ ಫೈನಲ್ ಕನ್ಫೆಶನ್ ರೂಮ್‌ನಲ್ಲಿ ಬಿಕ್ಕಿ ಬಿಕ್ಕಿ ಆಳುತ್ತಿದ್ದು ಯಾಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಸದ್ಯ ಮನೆಯಲ್ಲಿ ಕೇವಲ ಐದು ಜನ ಸ್ಪರ್ಧಿಗಳು ಉಳಿದುಕೊಂಡಿದ್ದು, ಎಲ್ಲರೂ ಕೂಡ ಗೆಲುವಿನ ಸಮೀಪದಲ್ಲಿದ್ದಾರೆ. ಚಂದನ್ ಶೆಟ್ಟಿ ಮನೆಯಲ್ಲಿರೋ ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳ ಪೈಕಿ ಒಬ್ಬರಾಗಿದ್ದಾರೆ.. ಮನೆಯಿಂದ ಹೊರ ಬಂದ ಎಲ್ಲ ಸ್ಪರ್ಧಿಗಳೂ ಸಹ ಚಂದನ್ ಫೈನಲ್‌ನಲ್ಲಿ ಉಳಿದುಕೊಳ್ಳುವ ಸ್ಪರ್ಧಿ ಅಂತ ಹೇಳಿದ್ದರು.

  • ರಾಜಕೀಯ

    ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಸಂಸದ ಹಾಗೂ ಶಾಸಕ!ಈ ಸುದ್ದಿ ನೋಡಿ

    ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಎಷ್ಟರ ಮಟ್ಟಿಗೆ ಹಾಳೆದ್ದು ಹೋಗಿದೆ ಎಂದರೆ ಜನಪ್ರತಿನಿಧಿಗಳು ತಮ್ಮ ಘನತೆ ಗಾಂಭೀರ್ಯ , ಗೌರವ ಜವಾಬ್ದಾರಿಗಳನ್ನು ಮರೆತು ಸಾರ್ವಜನಿಕವಾಗಿ ಕೀಳು ವರ್ತನೆ ತೋರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕರ್ನಾಟಕದ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಂಡು ಸುದ್ದಿಯಾಗಿದ್ದರು. ಈಗ ಬಿಜೆಪಿಯಲ್ಲಿ ಅಂತಹದೇ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿ ತಲೆ ತಗ್ಗಿಸುವಂತಹ ಕೆಲಸವನ್ನು ಬಿಜೆಪಿ ಸಂಸದ ಹಾಗೂ ಶಾಸಕ ಮಾಡಿದ್ದಾರೆ. ಇವರಿಬ್ಬರೂ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡು ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುವ…

  • ಸುದ್ದಿ

    ಎರಡನೇ ಪತ್ನಿಯಿಂದ ಸಿಎಂ ಕುಮಾರಸ್ವಾಮಿಗೆ ಸಂಕಷ್ಟ..!ಈ ಸುದ್ದಿ ನೋಡಿ…

    ಮೈತ್ರಿ ಸರ್ಕಾರದ ಪರವಾಗಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಯಾಯ್ವರು ಸಾಕಷ್ಟು ಏಳು ಬೀಳುಗಳ ನಡುವೆಯೂ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿರುವ ಮುಖ್ಯಮಂತ್ರಿಗಳಿಗೆ ಈಗೊಂದು ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಈ ದೂರು ಪುರಸ್ಕರಿಸಿರುವ ನ್ಯಾಯಾಲಯ, ದೂರಿನ ವಿಚಾರಣೆಯನ್ನು ಬರುವ ಮೇ 2ಕ್ಕೆ ಮುಂದೂಡುವಂತೆ ಮಂಗಳವಾರ ಆದೇಶಿಸಿದೆ.ಕಳೆದ 2018ರಲ್ಲಿ ನಡೆದ ವಿಧಾನಸಭಾ…