inspirational

ಮಂಗಳ ಗ್ರಹ

79
ಮಂಗಳ

ಮಂಗಳ ಮಂಗಳ ಗ್ರಹವು ಸೊರ್ಯನಿಂದ ನಾಲ್ಕನೇ ಗ್ರಹವಾಗಿದ್ದು , ನಮ್ಮ ಸೌರಮಂಡಲದ ಎರಡನೆಯ ಅತಿ ಚಿಕ್ಕ ಗ್ರಹವಾಗಿದೆ ಮರಕ್ಯೊರಿಯ ನಂತರ. ಇಂಗ್ಲೀಷ್ ನಲ್ಲಿ ಇದನ್ನು ಮಾರ್ಸ್ ಎಂದು ಕರೆಯಲಾಗುತ್ತದೆ. ಮಾರ್ಸ ಇದು ರೋಮನ್ನರ್ ದೇವರ ಯುಧದ್ದ ದೇವತೆ ಮಾಡಿದೆ.ಇದನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ.[ಭೂಮಿ]]ಗಿಂತ ದೂರದಲ್ಲಿದ್ದು, ಗುರು ಗ್ರಹಕ್ಕಿಂತ ಹತ್ತಿರದಲ್ಲಿದೆ.ಆಂಗ್ಲ ಭಾಷೆಯಲ್ಲಿ ‘ಮಾರ್ಸ್'(Mars) ಎಂದು ಕರೆಯುತ್ತಾರೆ. ಸುಮಾರು ಭೂಮಿಯ ಅರ್ಧದಷ್ಟು ವ್ಯಾಸವುಳ್ಳ ಈ ಗ್ರಹ ತನ್ನ ಅಕ್ಷವನ್ನು ಸುಮಾರು ೨೪ ಘಂಟೆಗಳಲ್ಲಿ ಸುತ್ತುತ್ತದೆ. ಆದರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ೨ ವರ್ಷ(೬೮೬.೯೮ ದಿನ)ಗಳೇ ಬೇಕಾಗುತ್ತದೆ. ಮಂಗಳ ಗ್ರಹದಲ್ಲಿ ನೀರು ಇರುವ ಬಗ್ಗೆ ನಾಸಾ ಅಧಿಕೃತವಾಗಿ ಸೆಪ್ಟಂಬರ್ 28,2015 ರಂದು ಘೋಷಣೆ ಮಾಡಿದೆ.

ಸೌರಮಂಡಲ

ಈ ಗ್ರಹದ ವ್ಯಾಸ ೬,೭೯೦ ಕಿ.ಮೀ.(೪,೨೨೦ ಮೈಲಿ). ಗಳು. ಸೂರ್ಯನಿಂದ ಸುಮಾರು ೨೨೮,೦೦೦,೦೦೦ ಕಿ.ಮೀ.(೧೪೨,೦೦೦,೦೦೦ ಮೈಲಿ)ದೂರದಲ್ಲಿರುವ ಮಂಗಳದ ವಾತಾವರಣದಲ್ಲಿ ಇಂಗಾಲಾಮ್ಲದೊಂದಿಗೆ ಸ್ವಲ್ಪ ನೀರು ಕೂಡಾ ಇದೆ. ಮಂಗಳ ಗ್ರಹ ಕೆಂಪು ಬಣ್ಣದ್ದಾಗಿರುವುದರಿಂದ,ಇದನ್ನು ‘ಕೆಂಪು ಗ್ರಹ’ ಅಥವಾ ‘ಅಂಗಾರಕ’ (Red Planet) ಎಂದೂ ಕರೆಯುತ್ತಾರೆ. ಮಂಗಳ ಗ್ರಹಕ್ಕೆ ಫೋಬೋಸ್ (Phobos) ಮತ್ತು ಡೀಮೋಸ್ (Deimos) ಎಂಬ ೨ ನೈಸರ್ಗಿಕ ಉಪಗ್ರಹಗಳಿವೆ. ಚಿಕ್ಕದಾಗಿ ವಿಲಕ್ಷಣ ರೂಪದಲ್ಲಿರುವ ಈ ಉಪಗ್ರಹಗಳು ಮಂಗಳದ ಗುರುತ್ವದಿಂದ ಸೆರೆಹಿಡಿಯಲ್ಪಡುವ ಮುನ್ನ ಆಸ್ಟೆರೊಯ್ಡ್ಗಳಾಗಿದ್ದಿರಬಹುದು (asteroid). ಭೂಮಿಯಿಂದ ಮಂಗಳವನ್ನು ಬರಿಗಣ್ಣಿನಿಂದ ನೋಡಬಹುದು. ಮಂಗಳದ ಗೋಚರ ಪ್ರಮಾಣವು (apparent magnitude) −೨.೯ರವರೆಗೂ ಇರುತ್ತದೆ. ಭೂಮಿಯಿಂದ ನೋಡಿದಾಗ ಕೇವಲ ಶುಕ್ರಚಂದ್ರ ಮತ್ತು ಸೂರ್ಯಗಳು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತವೆ. ಆದರೆ, ವರ್ಷದ ಹಲವು ದಿನಗಳಲ್ಲಿ ಗುರು (ಗ್ರಹ)ವು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ.

೧೯೬೫ ರಲ್ಲಿ ಮ್ಯಾರಿನರ್ ೪ರ ಮೊಟ್ಟಮೊದಲ ಮಂಗಳಯಾನಕ್ಕೆ ಮುನ್ನ ವೈಜ್ಞಾನಿಕ ಸಮುದಾಯದಲ್ಲಿ (ಬಹುಶಃ ಇತರ ಸಮುದಾಯಗಳಲ್ಲೂ), ಮಂಗಳದ ಮೇಲೆ ಸಾಕಷ್ಟು ನೀರು ದ್ರವರೂಪದಲ್ಲಿರಬಹುದೆಂಬ ಆಶಾವಾದವಿತ್ತು. ಮಂಗಳದ ಧ್ರುವಗಳ ಬಳಿ ಕಂಡುಬಂದ ತಿಳಿ ಮತ್ತು ಗಾಢವಾದ ಕಲೆಗಳು ಪುನಃ ಪುನಃ ಆಕಾರದಲ್ಲಿ ಬದಲಾಗುತ್ತಿದ್ದವು. ಇದಲ್ಲದೆ, ನೀರಿನ ಕಾಲುವೆಗಳಂತಿರುವ ಉದ್ದವಾದ ಗಾಢ ಪಟ್ಟಿಗಳೂ ಕಂಡುಬಂದವು. ಮಂಗಳದ ಮೇಲೆ ನೀರಿನ ಬಗ್ಗೆ ಉಂಟಾಗಿದ್ದ ಆಶಾದಾಯಕ ನಿರೀಕ್ಷೆಗೆ ಈ ವೀಕ್ಷಣೆಗಳೇ ಕಾರಣವಾಗಿದ್ದಿರಬಹುದು.

ಈ ಪಟ್ಟಿಗಳು ಅಸ್ತಿತ್ವದಲ್ಲೇ ಇಲ್ಲವೆಂದೂ, ಇವು ಕೇವಲ ದೃಷ್ಟಿ ಭ್ರಾಂತಿಯೆಂದೂ ನಂತರದ ವಿಶ್ಲೇಷಣೆಗಳಿಂದ ತಿಳಿದುಬಂದಿತು. ಹೀಗಿದ್ದರೂ, ಭೂಮಿಯನ್ನುಳಿದು ಬೇರಾವುದೇ ಗ್ರಹಕ್ಕಿಂತಲೂ ಮಂಗಳದ ಮೇಲೆ ನೀರಿನ (ಮತ್ತು ಜೀವದ) ಅಸ್ತಿತ್ವವು ಅತಿ ಹೆಚ್ಚು ಸಂಭವನೀಯವಾಗಿದೆ. ಆದ್ದರಿಂದ ಈಗಲೂ ಅನ್ವೇಷಕಗಳು ಮಂಗಳದ ಮೇಲೆ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಮಂಗಳದ ದೈನಂದಿಕ ಚಲನೆ (roational period) ಮತ್ತು ಋತುಮಾನಗಳು ಭೂಮಿಯ ಚಲನೆ ಮತ್ತು ಋತುಮಾನಗಳನ್ನು ಹೋಲುತ್ತವೆ. ಸೌರಮಂಡಲದಲ್ಲೇ ಅತಿ ಎತ್ತರ ಪರ್ವತವಾದ ಒಲಂಪಸ್ ಮಾನ್ಸ್, ಅತಿ ದೊಡ್ಡ ಕಂದರವಾದ ಮ್ಯಾರಿನೆರಿಸ್ ಕಣಿವೆ, ಮತ್ತು ಧ್ರುವದಲ್ಲಿ ಹಿಮವಲಯಗಳು ಮಂಗಳ ಗ್ರಹದ ಮೇಲೆ ಕಂಡುಬರುತ್ತವೆ. ಇತ್ತೀಚೆಗಿನ ಕೆಲವು ಆಧಾರಗಳ ಪ್ರಕಾರ, ಕೆಲವೇ ವರ್ಷಗಳ ಹಿಂದೆಯೂ ಮಂಗಳದ ಮೇಲೆ ನೀರು ದ್ರವರೂಪದಲ್ಲಿ ಪ್ರವಹಿಸಿರಬಹುದು.

ಪ್ರಸ್ತುತದಲ್ಲಿ ಮಂಗಳದ ಸುತ್ತ ೪ ಗಗನನೌಕೆಗಳು (spacecraft) ಪರಿಭ್ರಮಿಸುತ್ತಿವೆ: ಮಂಗಳ ಗ್ಲೋಬಲ್ ಸಮೀಕ್ಷಕಮಂಗಳ ಒಡಿಸ್ಸಿಮಂಗಳ ಎಕ್ಸ್‌ಪ್ರೆಸ್, ಮತ್ತು ಮಂಗಳ ಬೇಹುಗಾರಿಕಾ ಪರಿಭ್ರಮಕ. ಭೂಮಿಯನ್ನು ಬಿಟ್ಟರೆ ಇನ್ನಾವ ಗ್ರಹದ ಮೇಲೂ ಇಷ್ಟೊಂದು ಪರಿಭ್ರಮಕಗಳು ಸುತ್ತುತ್ತಿಲ್ಲ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ ಸ್ಪಿರಿಟ್ ಮತ್ತು ಆಪರ್ಚುನಿಟಿ ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಈ ಗ್ರಹದಲ್ಲಿ ಸಹ ಭೊಮಿಯ ಹಾಗೆ ಋತುಗಳು ಬದಲಾಗುತ್ತಿರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಭೊಮಿಗೆ ಸರಿಸಮನಾಗಿ ರುವಾರಿ ಈ ಗ್ರಹದಲ್ಲಿ ಮನುಷ್ಯರಾರು ಆಕ್ಸಿಜನ್ ಮಾಸ್ಕ್ ಇಲ್ಲದೆ ಬದುಕಿರಲಾರರು.ಇಲ್ಲಿ ಆಕ್ಸಿಜನ್ ಇಲ್ಲವೆಂದಲ್ಲ ಮಂಗಳ ಗ್ರಹದಲ್ಲಿ ಆಕ್ಸಿಜನ್ ಪ್ರಮಾಣ ಕೇವಲ 2% ಗಿಂತ ಕಡಿಮೆ ಇದೆ. ಆಕ್ಸಿಜನ್ ಗಿಂತ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿರುವ ಮಂಗಳ ಗ್ರಹದಲ್ಲಿ ಆಕ್ಸಿಜನ್ ಅತ್ಯಲ್ಪ ವಾಗಿದೆ.ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಿ ದಿಲ್ಲಿ ಮಂಗಳನಲ್ಲಿ ಮನುಷ್ಯ ವಾಸಿಸಲು ಸಾಧ್ಯವಿದೆ. ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಲು ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ನಡೆಸಿದ್ದಾರೆ ಆದರೆ ಅದು ಅಸಾಧ್ಯವಾಗಿದೆ.ಮುಂದಿನ ದಿನಗಳಲ್ಲಿ ಇದರಲ್ಲಿ ಯಶಸ್ಸು ಸಾಧಿಸಿದ್ದರೆ ಮಂಗಳ ಮನುಷ್ಯನ ಎರಡನೆ ಮೋಲಸ್ಥಾನ ವಾದ್ದತಾಗುತ್ತದೆ.

ಈ ಗ್ರಹದ ವ್ಯಾಸ ೬,೭೯೦ ಕಿ.ಮೀ.(೪,೨೨೦ ಮೈಲಿ). ಗಳು. ಸೂರ್ಯನಿಂದ ಸುಮಾರು ೨೨೮,೦೦೦,೦೦೦ ಕಿ.ಮೀ.(೧೪೨,೦೦೦,೦೦೦ ಮೈಲಿ)ದೂರದಲ್ಲಿರುವ ಮಂಗಳದ ವಾತಾವರಣದಲ್ಲಿ ಇಂಗಾಲಾಮ್ಲದೊಂದಿಗೆ ಸ್ವಲ್ಪ ನೀರು ಕೂಡಾ ಇದೆ. ಮಂಗಳ ಗ್ರಹ ಕೆಂಪು ಬಣ್ಣದ್ದಾಗಿರುವುದರಿಂದ,ಇದನ್ನು ‘ಕೆಂಪು ಗ್ರಹ’ ಅಥವಾ ‘ಅಂಗಾರಕ’ (Red Planet) ಎಂದೂ ಕರೆಯುತ್ತಾರೆ. ಮಂಗಳ ಗ್ರಹಕ್ಕೆ ಫೋಬೋಸ್ (Phobos) ಮತ್ತು ಡೀಮೋಸ್ (Deimos) ಎಂಬ ೨ ನೈಸರ್ಗಿಕ ಉಪಗ್ರಹಗಳಿವೆ. ಚಿಕ್ಕದಾಗಿ ವಿಲಕ್ಷಣ ರೂಪದಲ್ಲಿರುವ ಈ ಉಪಗ್ರಹಗಳು ಮಂಗಳದ ಗುರುತ್ವದಿಂದ ಸೆರೆಹಿಡಿಯಲ್ಪಡುವ ಮುನ್ನ ಆಸ್ಟೆರೊಯ್ಡ್ಗಳಾಗಿದ್ದಿರಬಹುದು (asteroid). ಭೂಮಿಯಿಂದ ಮಂಗಳವನ್ನು ಬರಿಗಣ್ಣಿನಿಂದ ನೋಡಬಹುದು. ಮಂಗಳದ ಗೋಚರ ಪ್ರಮಾಣವು (apparent magnitude) −೨.೯ರವರೆಗೂ ಇರುತ್ತದೆ. ಭೂಮಿಯಿಂದ ನೋಡಿದಾಗ ಕೇವಲ ಶುಕ್ರಚಂದ್ರ ಮತ್ತು ಸೂರ್ಯಗಳು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತವೆ. ಆದರೆ, ವರ್ಷದ ಹಲವು ದಿನಗಳಲ್ಲಿ ಗುರು (ಗ್ರಹ)ವು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ.

೧೯೬೫ ರಲ್ಲಿ ಮ್ಯಾರಿನರ್ ೪ರ ಮೊಟ್ಟಮೊದಲ ಮಂಗಳಯಾನಕ್ಕೆ ಮುನ್ನ ವೈಜ್ಞಾನಿಕ ಸಮುದಾಯದಲ್ಲಿ (ಬಹುಶಃ ಇತರ ಸಮುದಾಯಗಳಲ್ಲೂ), ಮಂಗಳದ ಮೇಲೆ ಸಾಕಷ್ಟು ನೀರು ದ್ರವರೂಪದಲ್ಲಿರಬಹುದೆಂಬ ಆಶಾವಾದವಿತ್ತು. ಮಂಗಳದ ಧ್ರುವಗಳ ಬಳಿ ಕಂಡುಬಂದ ತಿಳಿ ಮತ್ತು ಗಾಢವಾದ ಕಲೆಗಳು ಪುನಃ ಪುನಃ ಆಕಾರದಲ್ಲಿ ಬದಲಾಗುತ್ತಿದ್ದವು. ಇದಲ್ಲದೆ, ನೀರಿನ ಕಾಲುವೆಗಳಂತಿರುವ ಉದ್ದವಾದ ಗಾಢ ಪಟ್ಟಿಗಳೂ ಕಂಡುಬಂದವು. ಮಂಗಳದ ಮೇಲೆ ನೀರಿನ ಬಗ್ಗೆ ಉಂಟಾಗಿದ್ದ ಆಶಾದಾಯಕ ನಿರೀಕ್ಷೆಗೆ ಈ ವೀಕ್ಷಣೆಗಳೇ ಕಾರಣವಾಗಿದ್ದಿರಬಹುದು.

ಈ ಪಟ್ಟಿಗಳು ಅಸ್ತಿತ್ವದಲ್ಲೇ ಇಲ್ಲವೆಂದೂ, ಇವು ಕೇವಲ ದೃಷ್ಟಿ ಭ್ರಾಂತಿಯೆಂದೂ ನಂತರದ ವಿಶ್ಲೇಷಣೆಗಳಿಂದ ತಿಳಿದುಬಂದಿತು. ಹೀಗಿದ್ದರೂ, ಭೂಮಿಯನ್ನುಳಿದು ಬೇರಾವುದೇ ಗ್ರಹಕ್ಕಿಂತಲೂ ಮಂಗಳದ ಮೇಲೆ ನೀರಿನ (ಮತ್ತು ಜೀವದ) ಅಸ್ತಿತ್ವವು ಅತಿ ಹೆಚ್ಚು ಸಂಭವನೀಯವಾಗಿದೆ. ಆದ್ದರಿಂದ ಈಗಲೂ ಅನ್ವೇಷಕಗಳು ಮಂಗಳದ ಮೇಲೆ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಮಂಗಳದ ದೈನಂದಿಕ ಚಲನೆ (roational period) ಮತ್ತು ಋತುಮಾನಗಳು ಭೂಮಿಯ ಚಲನೆ ಮತ್ತು ಋತುಮಾನಗಳನ್ನು ಹೋಲುತ್ತವೆ. ಸೌರಮಂಡಲದಲ್ಲೇ ಅತಿ ಎತ್ತರ ಪರ್ವತವಾದ ಒಲಂಪಸ್ ಮಾನ್ಸ್, ಅತಿ ದೊಡ್ಡ ಕಂದರವಾದ ಮ್ಯಾರಿನೆರಿಸ್ ಕಣಿವೆ, ಮತ್ತು ಧ್ರುವದಲ್ಲಿ ಹಿಮವಲಯಗಳು ಮಂಗಳ ಗ್ರಹದ ಮೇಲೆ ಕಂಡುಬರುತ್ತವೆ. ಇತ್ತೀಚೆಗಿನ ಕೆಲವು ಆಧಾರಗಳ ಪ್ರಕಾರ, ಕೆಲವೇ ವರ್ಷಗಳ ಹಿಂದೆಯೂ ಮಂಗಳದ ಮೇಲೆ ನೀರು ದ್ರವರೂಪದಲ್ಲಿ ಪ್ರವಹಿಸಿರಬಹುದು.

ಪ್ರಸ್ತುತದಲ್ಲಿ ಮಂಗಳದ ಸುತ್ತ ೪ ಗಗನನೌಕೆಗಳು (spacecraft) ಪರಿಭ್ರಮಿಸುತ್ತಿವೆ: ಮಂಗಳ ಗ್ಲೋಬಲ್ ಸಮೀಕ್ಷಕಮಂಗಳ ಒಡಿಸ್ಸಿಮಂಗಳ ಎಕ್ಸ್‌ಪ್ರೆಸ್, ಮತ್ತು ಮಂಗಳ ಬೇಹುಗಾರಿಕಾ ಪರಿಭ್ರಮಕ. ಭೂಮಿಯನ್ನು ಬಿಟ್ಟರೆ ಇನ್ನಾವ ಗ್ರಹದ ಮೇಲೂ ಇಷ್ಟೊಂದು ಪರಿಭ್ರಮಕಗಳು ಸುತ್ತುತ್ತಿಲ್ಲ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ ಸ್ಪಿರಿಟ್ ಮತ್ತು ಆಪರ್ಚುನಿಟಿ ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಈ ಗ್ರಹದಲ್ಲಿ ಸಹ ಭೊಮಿಯ ಹಾಗೆ ಋತುಗಳು ಬದಲಾಗುತ್ತಿರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಭೊಮಿಗೆ ಸರಿಸಮನಾಗಿ ರುವಾರಿ ಈ ಗ್ರಹದಲ್ಲಿ ಮನುಷ್ಯರಾರು ಆಕ್ಸಿಜನ್ ಮಾಸ್ಕ್ ಇಲ್ಲದೆ ಬದುಕಿರಲಾರರು.ಇಲ್ಲಿ ಆಕ್ಸಿಜನ್ ಇಲ್ಲವೆಂದಲ್ಲ ಮಂಗಳ ಗ್ರಹದಲ್ಲಿ ಆಕ್ಸಿಜನ್ ಪ್ರಮಾಣ ಕೇವಲ 2% ಗಿಂತ ಕಡಿಮೆ ಇದೆ. ಆಕ್ಸಿಜನ್ ಗಿಂತ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿರುವ ಮಂಗಳ ಗ್ರಹದಲ್ಲಿ ಆಕ್ಸಿಜನ್ ಅತ್ಯಲ್ಪ ವಾಗಿದೆ.ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಿ ದಿಲ್ಲಿ ಮಂಗಳನಲ್ಲಿ ಮನುಷ್ಯ ವಾಸಿಸಲು ಸಾಧ್ಯವಿದೆ. ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಲು ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ನಡೆಸಿದ್ದಾರೆ ಆದರೆ ಅದು ಅಸಾಧ್ಯವಾಗಿದೆ.ಮುಂದಿನ ದಿನಗಳಲ್ಲಿ ಇದರಲ್ಲಿ ಯಶಸ್ಸು ಸಾಧಿಸಿದ್ದರೆ ಮಂಗಳ ಮನುಷ್ಯನ ಎರಡನೆ ಮೋಲಸ್ಥಾನ ವಾದ್ದತಾಗುತ್ತದೆ.

About the author / 

DRM

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಗುಲ ದರ್ಶನ

    ತಲಕಾವೇರಿ ತೀರ್ಥೋದ್ಭವ ಸಂಭ್ರಮ: ಬ್ರಹ್ಮ ಕುಂಡಲದಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ಕೊಡವರ ಕುಲದೇವತೆ..!

    ಕಾವೇರಿ ಕೊಡವರ ಕುಲದೇವಿ,ಕಾವೇರಿ ಜನ್ಮಸ್ಥಳ ತಲಕಾವೇರಿಯಲ್ಲಿ  ಅರ್ಚಕರ ಮಂತ್ರಘೋಷ ,ಮಂಗಳವಾದ್ಯ  ನಡುವೆ ತಡರಾತ್ರಿ ಸರಿಯಾಗಿ 12 ಗಂಟೆ 57 ನಿಮಿಷಕ್ಕೆ ಕರ್ಕಾಟಕಲಗ್ನ, ರೋಹಿಣಿ ನಕ್ಷತ್ರದಲ್ಲಿ ಘಟಿಸಿದ ಪವಿತ್ರ ತೀರ್ಥೋದ್ಭವವನ್ನು ರಾಜ್ಯ ಮತ್ತು ಹೊರರಾಜ್ಯದಿಂದಬಂದ ನೂರಾರು ಭಕ್ತರು ಕಣ್ತುಂಬಿಕೊಂಡರು. 12:59ಕ್ಕೆ ತೀರ್ಥೋದ್ಭವ ಘಟಿಸಲಿದೆ ಎಂದು ಹೇಳಲಾಗಿತ್ತಾದರೂ 2 ನಿಮಿಷ ಮುನ್ನವೇ ತೀರ್ಥೋದ್ಭವಾಯಿತು. 30 ಕ್ಕೂ ಹೆಚ್ಚು ಅರ್ಚಕರ ಮಂತ್ರಘೋಷ, ಮಂಗಳವಾದ್ಯದ ನಡುವೆ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಈ ವಿಸ್ಮಯಕ್ಕೆ ಅಪಾರ ಭಕ್ತ…

  • ಸುದ್ದಿ

    ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬಿತ್ತು ಬರೋಬ್ಬರಿ 47,500 ರೂ. ದಂಡ

    ಭುವನೇಶ್ವರ, ಸಂಚಾರಿ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಕಕ್ಕಾಬಿಕ್ಕಿಯಾಗಿದ್ದು, ಕುಡಿದು ಆಟೋ ಚಾಲನೆ ಮಾಡಿರುವುದು ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟೋ ಚಾಲಕನಿಗೆ ಬರೋಬ್ಬರಿ 47,500 ರೂ. ದಂಡ ವಿಧಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಕುಡಿದು ವಾಹನ ಚಾಲನೆ ಮಾಡಿರುವುದು, ಪರ್ಮಿಟ್, ಚಾಲನಾ ಪರವಾನಗಿ, ನೋಂದಣಿ ಸೇರಿದಂತೆ ತಿದ್ದುಪಡಿ ಕಾಯ್ದೆಯ ವಿವಿಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 47,500 ರೂ. ದಂಡ ವಿಧಿಸಲಾಗಿದೆ. ಭಾನುವಾರದಿಂದ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಭುವನೇಶ್ವರದ ಪೊಲೀಸ್ ಅಧಿಕಾರಿಗಳು…

  • ದೇಶ-ವಿದೇಶ

    ಇದು ಭಾರತದ ಮಿನಿ ಇಸ್ರೇಲ್! ಆದ್ರೆ ಇಲ್ಲಿ ನಮ್ಮ ಭಾರತೀಯರಿಗೆ ಪ್ರವೇಶವಿಲ್ಲ !!!

    ನಮ್ಮ ಭಾರತದಲ್ಲಿರುವ ವಿವಿಧ ರೀತಿಯ ಸಂಪ್ರಧಾಯಗಳು, ನಮ್ಮ ಆಹಾರ ಪದ್ಧತಿ, ನಮ್ಮ ವೇಷ ಭೂಷಣ ಹಾಗೂ ಇಲ್ಲಿರುವ ಪಾಕೃತಿಕ ಸೌಂದರ್ಯವನ್ನು ವೀಕ್ಷಿಸಲು ಹಾಗೂ ಅಧ್ಯನ ಮಾಡಲು ಅನೇಕ ಬೇರೆ ಬೇರೆ ದೇಶದ ವಿದೇಶಿಗರು ಬರುತ್ತಿರುತ್ತಾರೆ.ಅವರಲ್ಲಿ ಇಸ್ರೇಲಿಗರು ಕೂಡ ಸೇರಿದ್ದಾರೆ. ನಮ್ಮ ಪ್ರಧಾನಿಗಳು ಕೂಡ ಇಸ್ರೇಲ್ ಪ್ರವಾಸ ಮುಗಿಸಿ ಬಂದಿದ್ದಾರೆ. ಆದರೆ ಭಾರತದಲ್ಲಿಯೇ ಒಂದು ಇಸ್ರೇಲ್ ಇದೆ.

  • ರಾಜಕೀಯ

    ಮೋದಿ ಅಭಿಮಾನಿಗಳಿಗೆ ಸವಾಲು ಹಾಕಿದ, ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು!ಏನದು ಸವಾಲು ಗೊತ್ತಾ?

    ಸೋಲಿಲ್ಲದ ಸರದಾರ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಪ್ರಧಾನಿ ಮೋದಿ ಅವರ ಅಭಿಮಾನಿಗಳಿಗೆ ಸವಾಲು ಹಾಕಿದ್ದಾರೆ. ‘ಬಿಜೆಪಿಯ ನಕಲಿ, ಮೋದಿಯ ಫೇಕ್ ಅಕೌಂಟ್ ಭಕ್ತರೇ’ ಬೆಂಗಳೂರು ದಕ್ಷಿಣದಲ್ಲಿ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ಸಿನಿಂದ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಲೇವಡಿ ಮಾಡಿದ್ರಿ ಈಗ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿದೆ. ಈ ಬಗ್ಗೆ ಯಾರೊಬ್ಬರು ಚಕಾರವೆತ್ತುತ್ತಿಲ್ಲ. ಈಗ ಸ್ವಾಭಿಮಾನಿ ಮೋದಿ…

  • ಸುದ್ದಿ

    ತಾಮ್ರ ಬಳಸುವುದರಿಂದ ಆಗುವ ಉಪಯೋಗಗಳೇನು ಗೊತ್ತಾ? ತಾಮ್ರದಲ್ಲಿದೆ ರೋಗಮುಕ್ತ ಗುಣಗಳು..!

    ಇದು ಪ್ಲಾಸ್ಟಿಕ್ ಯುಗ ಮನುಷ್ಯ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದಾರೆ. ತಾನು ಬಳಸುವ ದಿನನಿತ್ಯದ ಹಲವು ವಸ್ತುಗಳು ಅಷ್ಟಲ್ಲದೆ ತಿನ್ನಲು, ಕುಡಿಯಲು ಬಳಸುವ ವಸ್ತು ಸಹ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. ಆದರೆ ಈ ಪ್ಲಾಸ್ಟಿಕ್ ಮನುಷ್ಯನ ಜೀವಕ್ಕೆ ಮುಂದೊಂದು ದಿನ ಕುತ್ತು ತರುತ್ತದೆ ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬೇಕಾದ ಸಣ್ಣದೊಂದು ಈ ಸಲಹೆಯನ್ನು ಅನುಸರಿಸಿ. ಏನಾದು ಅಂತೀರಾ? ಹೌದು ನಾವು ದಿನನಿತ್ಯ ಬಳಸುವ ಕೆಲವು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ,…

  • ಸುದ್ದಿ

    ರಾತ್ರಿ ವೇಳೆ ತಾಜ್ ಮಹಲ್ ನಲ್ಲಿ ಲೈಟ್ ಯಾಕೆ ಹಾಕುವುದಿಲ್ಲ ಗೊತ್ತಾ..!

    ವೀಕ್ಷಕರೇ ನಮ್ಮ ಭಾರತ ದೇಶವು ಸಾಂಸ್ಕೃತಿಕವಾಗಿ ತುಂಬಾ ಮುಂದುವರಿದ ದೇಶವಾಗಿದೆ ಈ ನಮ್ಮ ದೇಶದಲ್ಲಿ ಅನೇಕ ರೀತಿಯ ಅರಮನೆಗಳು ದೇವಸ್ಥಾನಗಳು ಪೂರಕವಾಗಿರುವಂತಹ ಶಿಲ್ಪಕಲೆಗಳನ್ನು ಹೊಂದಿರುವುದನ್ನು ನಾವು ಕಾಣಬಹುದಾಗಿದೆ. ಈ ರೀತಿ ಅರಮನೆಗಳು ಮತ್ತೆ ದೇವಾಲಯಗಳನ್ನು ನೋಡಲು ಸಾವಿರಾರು ಲಕ್ಷಾಂತರ ಪ್ರವಾಸಿಗರು ಬರುವುದನ್ನು ನಾವು ಕಾಣಬಹುದು. ಎಷ್ಟೊಂದು ಪ್ರವಾಸಿಗರು ರಾತ್ರಿ ವೇಳೆಯಲ್ಲಿ ಈ ರೀತಿ ಸ್ಥಳಗಳನ್ನು ನೋಡಲು ಬರುತ್ತಾರೆ ರಾತ್ರಿ ವೇಳೆಯಲ್ಲಿಯೇ ಬರುತ್ತಾರೆ ಏಕೆಂದರೆ ಈ ಸ್ಥಳಗಳಲ್ಲಿರುವ ಅತ್ಯುನ್ನತವಾದ ಅರಮನೆಗಳು ದೇವಾಲಯಗಳಿಗೆ ದೀಪಗಳಿಂದ ಅಲಂಕಾರವನ್ನು ಮಾಡಿರುತ್ತಾರೆ.  ಬೆಳಗ್ಗಿನ ಸಮಯದಲ್ಲಿ…