ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಟಾಣಿ ತಿಂದ್ರೆ ವಾಯು ಬರತ್ತೆ ಅನ್ನೋರೆಲ್ಲಾ ಇಲ್ಕೇಳಿ. ಬಟಾಣಿ ಗಿಡ ನಮ್ ದೇಶದಲ್ಲಿ ಹುಟ್ಟಿದಲ್ಲ. ಇದು ವಿಚಿತ್ರವಾಗಿರೋ ಗಿಡಗಳ ಸಾಲ್ನಲ್ಲಿ ಸೇರತ್ತೆ. ಆದ್ರೂ ಕೂಡಾ ಇದ್ರ ಉಪಯೋಗ ಇದ್ಯಲ್ಲಾ ಅದು ಒಂದೆರಡಲ್ಲ. ಇದ್ರಲ್ಲಿರೋ ಪಿಷ್ಟ ಇದ್ನ ಸಿಹಿಯಾಗಿರೋವಾಗೆ ಮಾಡ್ಸತ್ತೆ. ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರನ್ನ ಗುಣಪಡ್ಸತ್ತೆ.
ಅಷ್ಟಲ್ಲದೇ ಉರಿಯೂತಕ್ಕೆ ಸಂಬಂಧಿಸಿದ ಯಾವ್ದೇ ತರದ ತೊಂದ್ರೆ ಇದ್ರೆ ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಕಮ್ಮಿ ಮಾಡ್ಸತ್ತೆ. ಪ್ರೋಟೀನ್ ಮತ್ತೆ ನಾರಿನ ಅಂಶ ಸಕ್ಕತ್ತಾಗಿ ಇರೋದ್ರಿಂದ ಮಧುಮೇಹ ಕಾಯಿಲೆಯನ್ನ ಕಮ್ಮಿ ಮಾಡ್ಸತ್ತೆ.
ಇದೇ ತರ ಇನ್ನೂ 09 ಉಪಯೋಗಗಳಿದೆ
1. ಇದ್ರಲ್ಲಿರೋ ಪೌಷ್ಟಿಕಾಂಶಗಳು ಮಂಡಿ ನೋವು ಕಮ್ಮಿಮಾಡತ್ತೆ:-
ಬಟಾಣಿಗಳಲ್ಲಿ ಬೇರೆ ಬೇರೆ ತರದ ಬಟಾಣಿಗಳಿವೆ. ಫ್ಲಾವನೊಯ್ಡ್ ಗುಂಪಿನ ಬಟಾಣಿಗಳಲ್ಲಿ ಕ್ಯಟಾಚಿನ್ ಮತ್ತೆ ಎಪಿಕ್ಯಟಾಚಿನ್ ಅನ್ನೋ ಆಂಟಿ ಆಕ್ಸಿಡೆಂಟ್ ಇದೆಯಂತೆ.
ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಮಿನ್ರಲ್, ಜಿಂಕ್, ಒಮೆಗಾ 3 ಫ್ಯಾಟಿ ಆಸಿಡ್, ಇದೆಲ್ಲದ್ರ ಭಂಡಾರಾನೇ ಬಟಾಣಿಗಳಲ್ಲಿ ಅಡ್ಗಿದೆಯಂತೆ. ಇದೆಲ್ಲದ್ರ ಸಹಾಯದಿಂದ ಮಧುಮೇಹ , ಹೃದಯದ ತೊಂದ್ರೆ , ಮಂಡಿ ನೋವ್ಗಳನ್ನ ಕಮ್ಮಿ ಮಾಡ್ತದಂತೆ.
2. ರಕ್ತದಲ್ಲಿರೋ ಸಕ್ಕರೆ ಪ್ರಮಾಣ ಕಮ್ಮಿ ಮಾಡತ್ತೆ:-
ರಕ್ತದಲ್ಲಿರೋ ಸಕ್ಕರೆ ಪ್ರಮಾಣವನ್ನ ಕಮ್ಮಿ ಮಾಡ್ಸಕ್ಕೆ ಬಟಾಣಿ ಒಂದೊಳ್ಳೆ ಆಹಾರ ಅಂತ ಕೆಲ್ವು ಆಹಾರ ತಜ್ಞರು ಹೇಳಿದ್ದನ್ನ ಕೇಳಿದ್ ನೆನಪಿದೆ. ಆದ್ರೆ ಹೇಗ್ ಕಮ್ಮಿ ಮಾಡ್ಸತ್ತೆ ಅಂತ ಗೊತ್ತಿರ್ಲಿಲ್ಲ.
ಇವಾಗ ಗೊತ್ತಾಗಿದ್ ಹೊಸ್ ವಿಷ್ಯ ಎನಂದ್ರೆ ಇದ್ರಲ್ಲಿರೋ ಪ್ರೋಟೀನ್ ಮತ್ತೆ ನಾರಿನ ಅಂಶ ಪಿಷ್ಟವನ್ನ ತುಂಡ್ಮಾಡಿ ಕಾರ್ಬೋಹೈಡ್ರೇಟ್ಸಗಳನ್ನ ಜೀರ್ಣಾಂಗವ್ಯೂಹದ ಕಡೆಗೆ ತಳ್ಳತ್ತೆ. ಈ ಕಾರ್ಬೋಹೈಡ್ರೇಟ್ಸಗಳು ರಕ್ತದಲ್ಲಿರೋ ಸಕ್ಕರೆಯ ಪ್ರಮಾಣಾನ ಕಡ್ಮೆ ಮಾಡ್ಸತ್ತೆ.
3. ಇದ್ರಲ್ಲಿರೋ ವಿಟಮಿನ್ ಬಿ ಅಂಶ ಹೃದಯ ಚನ್ನಾಗಿ ಕೆಲಸ ಮಾಡೋ ಹಾಗೆ ನೋಡ್ಕೊಳತ್ತೆ:-
ಹಾಳು ಮೂಳನ್ನೆಲ್ಲಾ ತಿಂದು ಹೊಟ್ಟೆ ಬರ್ಸಕೊಂಡು ಆಮೇಲೆ ನಿಧಾನವಾಗಿ ಬೇಡ್ದೇ ಇರೋ ಕೊಬ್ಬನ್ನ ಹೆಚ್ಸಿಕೊಂಡ್ರೆ ಹೃದಯದ ಕಾಯ್ಲೆ ಸಾಮಾನ್ಯ. ಬಟಾಣಿಯಲ್ಲಿರೋ ನಿಯಾಸಿನ್ ಅನ್ನೋ ಅಂಶ ಈ ಕೆಟ್ಟ್ ಕೊಬ್ಬನ್ನ ಕರ್ಗಸತ್ತೆ. ಇದ್ರ ಜೊತೆಗೆ ನಾನು ಸಾಥ್ ಕೊಡ್ತೀನಿ ಅಂತ ಒಮೆಗಾ 3 ಫ್ಯಾಟಿ ಆಸಿಡ್ ಬೇರೆ ಇದೆ. ಕೆಟ್ಟ್ ಕೊಬ್ಬಿನ ಜೊತೆ ಹೋಮೋ ಸಿಸ್ಟಿನ್ ಅನ್ನೋದ್ಬೇರೆ ಕೂಡ್ಕಂಡು ತುಂಬಾನೇ ತೊಂದ್ರೆ ಕೊಡತ್ತೆ.
4. ಆಂಟಿ ಆಕ್ಸಿಡೆಂಟ್ಸ್ ಸಹಾಯದಿಂದ ಹೊಟ್ಟೆ ಕ್ಯಾನ್ಸರ್ ಬರೋದನ್ನ ತಡೆಗಟ್ಟತ್ತೆ:-
ಒತ್ತಡ ಮತ್ತು ತಲೆಬಿಸಿ ಜಾಸ್ತಿ ಮಾಡ್ಕೊಳೋದ್ರಿಂದ ಕ್ಯಾನ್ಸರ್ ಬೆಳೀಬೋದು. ನಿಮ್ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಕಮ್ಮಿ ಇದ್ರೆ ಈ ಸಮಸ್ಯೆನಾ ಪರಿಹರ್ಸಕ್ಕೆ ಆಗಲ್ಲ.
ಆಗ್ಲೇ ಹೇಳ್ದಾಗೆ ಬಟಾಣಿ ಆಂಟಿ ಆಕ್ಸಿಡೆಂಟ್ಗಳ ಭಂಡಾರಾವೇ ಆಗಿರೋದ್ರಿಂದ ಹೊಟ್ಟೆ ಕ್ಯಾನ್ಸರ್ ಇಂದ ನಮ್ಮನ್ನ ಕಾಪಾಡತ್ತೆ.
5. ಬಟಾಣೀಲಿ ಕ್ಯಾಲೋರಿ ಕಮ್ಮಿ ಇರೋದ್ರಿಂದ ತೂಕ ಇಳಿಸ್ಕೊಳಕ್ಕೆ ಸಹಾಯ ಮಾಡತ್ತೆ:-
ಒಳ್ಳೆ ಪೋಷಕಾಂಶ ಮತ್ತೆ ಕಮ್ಮಿ ಕ್ಯಾಲೋರಿಯನ್ನ ಹೊಂದಿರೋ ಬಟಾಣಿ ನಿಮ್ ತೂಕ ಇಳ್ಸೋದ್ರಲ್ಲಿ ಅನುಮಾನಾನೇ ಇಲ್ಲ. ಒಂದು ಕಪ್ ಬಟಾಣಿಯಲ್ಲಿ ಸುಮಾರು 118 ಕ್ಯಾಲೋರಿಗಳು ಮಾತ್ರ ಇರತ್ತೆ. ಹಾಗೇ ನೀವ್ ಬಟಾಣಿ ತಿಂದಾದ್ಮೇಲೆ ಇನ್ನೇನ್ ತಿನ್ನೋಕೂ ಮನ್ಸ್ ಬರಲ್ಲ. ಯಾಕಂದ್ರೆ ನಿಮ್ ಹೊಟ್ಟೆ ಅದಾಗ್ಲೇ ತುಂಬಿರತ್ತೆ. ಬಟಾಣಿಗೆ ಸ್ವಲ್ಪ ಮಟ್ಟಿಗೆ ಉಪ್ಪನ್ನ ಹಾಕ್ಬಿಟ್ಟು ತಿಂದ್ರೆ ಸಕ್ಕತ್ತಾಗ್ ಶಕ್ತಿನೂ ಸಿಗತ್ತೆ.
6. ಇದ್ರಲ್ಲಿರೋ ನಾರಿನಂಶ ಹೊಟ್ಟೆ ಕಟ್ಕೊಳ್ದೆ ಇರೋ ಹಾಗೆ ನೋಡ್ಕೊಳತ್ತೆ:-
ಮಲಬದ್ದತೆ ಇದ್ಯಲ್ಲಾ… ಅದು ಎಲ್ಲಾ ಕಾಯ್ಲೆಗೂ ಇಲ್ ಜಾಗ ಇದೆ ಬಾರಪ್ಪಾ ಅನ್ನತ್ತೆ. ಬಟಾಣಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರೋದ್ರಿಂದ ಎಷ್ಟೋ ದಿನ್ಗಳಿಂದ ಕೂಡ್ಕಂಡಿರೋ ತ್ಯಾಜ್ಯಗಳನ್ನ ಹೊರ್ಗಹಾಕ್ಲಿಕ್ಕೆ ಸಹಾಯ ಮಾಡತ್ತೆ. ಹಾಗೇ ಬಟಾಣಿ ಜೀರ್ಣಾಂಗ ವ್ಯವಸ್ಥೆಗೆ ತುಂಬಾನೇ ಸಾಥ್ ಕೊಡೋದೂ ಇದಕ್ಕೆ ಕಾರಣ ಇರ್ಬೋದು.
7. ಕೂದಲಿನ ಅಂದ ಕಾಪಾಡೋಕೆ ಇದ್ರಲ್ಲಿರೋ ವಿಟಮಿನ್ ಬಿ ಸಹಾಯ ಮಾಡತ್ತೆ:-
ಬಟಾಣಿಯಲ್ಲಿರೋ ವಿಟಮಿನ್ ಬಿ , ಫೋಲೆಟ್ , ವಿಟಮಿನ್ ಬಿ 6 ಕೂದಲು ಬೇರಿನಿಂದ ಗಟ್ಟಿಯಾಗೋ ಹಾಗೆ ನೋಡ್ಕೊಳತ್ತೆ. ವಿಟಮಿನ್ ಸಿ ಅನ್ನೋದು ಕೂದ್ಲು ಉದ್ರದೇ ಇರೋ ಹಾಗೆ ಕಾಪಾಡತ್ತೆ.
8.ಆಗಾಗ ಹುಷಾರ್ ತಪ್ಪಿ ಬೀಳದೆ ಇರೋ ಹಾಗೆ ನೋಡ್ಕೊಳತ್ತೆ:-
ನಮ್ ದೇಹದಲ್ಲಿರೋ ವ್ಯಾಧಿ ಕ್ಷಮತ್ವ ನಿರ್ಧಾರ ಆಗೋದೇ ವಿಟಮಿನ್ ಎ ಮೂಲಕ. ಒಂದು ತಟ್ಟೇ ಬಟಾಣಿಯಲ್ಲಿ ಸುಮಾರು 22 % ವಿಟಮಿನ್ ಎ ನಮ್ ದೇಹಕ್ಕೆ ಸಿಗತ್ತಂತೆ. ಅದ್ಕೊಸ್ಕರ ಇಮ್ಯುನಿಟಿ ಇಲ್ಲಾಂತ ಕೊರಗ್ಬೇಡಿ. ಬಟಾಣಿ ತಿನ್ನಿ. ಉಸಿರಾಟದ ತೊಂದ್ರೆ ಆಗ್ದೆ ಇರಕ್ಕೂ ವಿಟಮಿನ್ ಎ ಬೇಕಾಗತ್ತೆ.
9. ಚರ್ಮ ಹೊಳಿಯೋ ಹಾಗೆ ಮಾಡಿ ಚಿಕ್ಕೋರ ತರ ಕಾಣೋಹಾಗೆ ಮಾಡತ್ತೆ:-
ನಮ್ ದೇಹದಲ್ಲಿ ಫ್ರೀ ರಾಡಿಕಲ್ ಅನ್ನೋ ಅಂಶ ಇಲ್ದೇ ಹೋಗಿದ್ರೆ ಬಿಸ್ಲು , ಚಳಿ , ಮಳೆಯಂತ ನಮ್ ಚರ್ಮ ಬೇಗನೇ ಸುಕ್ಕು ಗಟ್ತಿತ್ತು. ಬಟಾಣಿಯಲ್ಲಿರೋ ಆಂಟಿ ಆಕ್ಸಿಡೆಂಟ್ ಈ ಫ್ರೀ ರಾಡಿಕಲ್ಗಳ ಆಯಸ್ಸು ಮತ್ತು ಅದ್ರ ಶಕ್ತಿಯನ್ನ ಜಾಸ್ತಿ ಮಾಡ್ಸತ್ತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು. ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು.
ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿ ರಿಯಾಜ್ ತಂದೆಯಾದ ಖುಷಿಯಲ್ಲಿದ್ದಾರೆ. ರಿಯಾಜ್ ಪತ್ನಿ ಆಯೇಶಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬುಧವಾರ ರಿಯಾಝ್ ಪತ್ನಿ ಆಯೇಶಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ರಿಯಾಜ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಆಸ್ಪತ್ರೆಯಲ್ಲಿ ತಾವು ಮಗುವಿನ ಪಕ್ಕವಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಸಿಹಿ ಸುದ್ದಿ ಈ ಮೂಲಕ ನಾನು…
ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಹಾಗೂ ಮಕ್ಕಳು ಭೇಟಿ ನೀಡಿದರು. ಈ ವೇಳೆ ಪ್ರತಾಪ್ ಅವರ ಪತ್ನಿ ಸರಿತಾ ಸ್ಪರ್ಧಿ ಪ್ರಿಯಾಂಕಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಸೋಮವಾರ ಬಿಗ್ ಬಾಸ್ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಸರಿತಾ ಆಗಮಿಸಿದ್ದರು. ಈ ವೇಳೆ ಸರಿತಾ ಅವರು ಮನೆ ಮಂದಿ ಜೊತೆ ಆತ್ಮೀಯವಾಗಿ ಮಾತನಾಡಿಸಿ ತಾವು ತಂದಿದ್ದ ತಿಂಡಿಯನ್ನು ಪ್ರತಾಪ್ ಅವರಿಗೆ ನೀಡದೇ ವಾಸುಕಿ ಅವರಿಗೆ ಕೊಟ್ಟಿದ್ದಾರೆ. ಸರಿತಾ, ಪ್ರತಾಪ್ ಜೊತೆ ಮಾತನಾಡಿದ ಬಳಿಕ…
ಚಿಕ್ಕಬಳ್ಳಾಪುರ: ಕಾಮುಕ ತಂದೆಯೊಬ್ಬ ಮದ್ಯದ ಅಮಲಿನಲ್ಲಿ ಸ್ವಂತ ಮಗಳ ಮೇಲೆಯೇ ಅತ್ಯಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿಡ್ಲಘಟ್ಟ ತಾಲೂಕಿನ ತಾಲೂಕಿನಲ್ಲಿ ಗುರುವಾರ ಘಟನೆ ನಡೆದಿದೆ. ತಂದೆಯ ಹೇಯ ಕೃತ್ಯದಿಂದ ಬಾಲಕಿ ತೀವ್ರ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತನ್ನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಿಂದ ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ದಿಬ್ಬೂರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಆರೋಪಿ ತಂದೆಗಾಗಿ ಬಲೆ ಬೀಸಿದ್ದರು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು…
ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. ಇದ್ರ ಜೊತೆಗೆ ಫೆಂಗ್ ಶೂಯಿಯಲ್ಲಿ ಬಟ್ಟೆಗೂ ಮಹತ್ವ ನೀಡಲಾಗಿದೆ. ಯಾವ ಬಟ್ಟೆ ಧರಿಸ್ತೇವೆ ಹಾಗೆ ಬಟ್ಟೆಯನ್ನು ಹೇಗೆ ಬಳಸ್ತೇವೆ ಎಂಬುದು ಫೆಂಗ್ ಶೂಯಿಯಲ್ಲಿ ಮಹತ್ವ ಪಡೆದಿದೆ. ನೀವು ಧರಿಸುವ ಬಟ್ಟೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಆದ್ರೆ ಇದೇ ಬಟ್ಟೆ ನಿಮ್ಮ ದುರಾದೃಷ್ಟಕ್ಕೆ ಕಾರಣವಾಗಬಹುದು. ಮನೆಯಿಂದ ಹೊರ ಹೋಗುವಾಗಲ್ಲ…
ಕಪ್ಪುಹಣ ಹೊಂದಿರುವ ಅನುಮಾನಾಸ್ಪದ ಖಾತೆಯ ಮಾಹಿತಿಗಳನ್ನು ಭಾರತದೊಂದಿದೆ ಹಂಚಿಕೊಳ್ಳುವುದಾಗಿ ಸ್ವಿಡ್ಜರ್ ಲ್ಯಾಂಡ್