ಗ್ಯಾಜೆಟ್

ನಿಮ್ಮ ಮೊಬೈಲ್ ನೀರಿಗೆ ಬಿದ್ರೆ,ಏನ್ ಮಾಡಬೇಕು..?ಏನ್ ಮಾಡಬಾರದು..?ತಿಳಿಯಲು ಈ ಲೇಖನ ನೋಡಿ…

765

ತುಂಬಾ ದುಡ್ಡು ಕೊಟ್ಟು ಸ್ಮಾರ್ಟ್’ಫೋನ್ ಕೊಂಡುಕೊಂಡಿದ್ದೇವೆಂದು ಬಹಳ ಜೋಪಾನ ಮಾಡುತ್ತಿರುತ್ತೇವೆ. ಸದ್ಯಕ್ಕೆ ಸರಾಸರಿ ಹೆಚ್ಚಿನ ಅಂಶಗಳಲ್ಲಿ ಎಲ್ಲರ ಕಡೆಗೆ ಸ್ಮಾರ್ಟ್ ಫೋನ್ ಗಳೇ ಜಾಸ್ತಿ ಇವೇ.  ಆದರೆ, ಎಂದಾದರೊಮ್ಮೆ ಆಕಸ್ಮಿಕವಾಗಿ ಮೊಬೈಲ್ ಕೆಳಗೆ ಬೀಳುವುದೋ, ನೀರಿಗೆ ತಾಕುವುದೋ ಅಥವಾ ಕೆಲವೊಮ್ಮೆ ಮಕ್ಕಳ ಕೈಯಿಂದ ಇನ್ನೂ ಕೆಲವೊಂದು ಸಲ ನಮ್ಮ ನಿಮ್ಮ ಕೈಯಿಂದ ಮೊಬೈಲ್ ಆಕಸ್ಮಿಕವಾಗಿ ನೀರಲ್ಲಿ ಬೀಳುತ್ತದೆ. ಆಗುವ ಸಾಧ್ಯತೆ ಇರುತ್ತದೆ. ನೀರಿನಲ್ಲಿ ಬಿದ್ದರೆ ಬಹುತೇಕ ಮೊಬೈಲ್’ಗಳು ಹಾಳಾಗಿಬಿಡುತ್ತವೆ.

ಅನೇಕ ಪ್ರಕರಣಗಳಲ್ಲಿ ನೀರಿನಿಂದಲೇ ಮೊಬೈಲ್ ಹಾಳಾದರೆ, ಕೆಲ ಕೇಸ್’ಗಳಲ್ಲಿ ನಮ್ಮ ಅಜ್ಞಾನದಿಂದಲೇ ಫೋನ್ ಹಾಳು ಮಾಡಿಕೊಳ್ಳುತ್ತೇವೆ. ಅನೇಕರು ತಮ್ಮ ಕೆಲವು ಐಡಿಯಾಗಳಿಂದ ಮನೆಯಲ್ಲಿಯೇ ರಿಪೇರಿ ಮಾಡುವುದಕ್ಕೆ ಪ್ರಯತ್ನ ಪಡುತ್ತಾರೆ. ಫೋನ್ ನ್ನು ಬಿಸಿಲಿನಲ್ಲಿ ಇಡುವದು ಮೈಕ್ರೋವೇವ್ ಆವನ್ ನಲ್ಲಿ ಇಡುವದು ಹೀಗೆ ಬೇರೆ ಬೇರೆ ಯತ್ನ ಮಾಡುವರು. ಇಂತಹ ತಪ್ಪು ಮಾರ್ಗಗಳಿಂದ ಫೋನ್ ಮತ್ತಷ್ಟು ಹಾಳಾಗುವ ಸಾಧ್ಯತೆಗಳೇ ಹೆಚ್ಚಾಗಿ ಇರುತ್ತವೆ.

ಇದನ್ನ ಸರಿ ಮಾಡುವುದಕ್ಕೆ ಸಾವಿರಾರು ರೂಪಾಯಿಗಳು ಖರ್ಚು ಮಾಡುತ್ತಾರೆ. ಆದರೆ ಇನ್ಮುಂದೆ ಹಾಗೇ ಮಾಡಬೇಡಿ. ಅದನ್ನ ಸರಿಪಡಿಸುವ ಟ್ರಿಕ್ಸ್ ನಾವು ಹೇಳಿ ಕೊಡುತ್ತೇವೆ…

1. ಮೊಬೈಲ್ ಸ್ವಿಚ್ ಆಫ್ ಮಾಡಿ…

ನಿಮ್ಮ ಮೊಬೈಲ್ ನೀರಿನಲ್ಲಿ ಬಿದ್ದುಬಿಟ್ಟರೆ ನೀವು ಮಾಡಬೇಕಾದ ಮೊದಲ ಕೆಲಸ ಎಂದರೆ, ಅದನ್ನ ಸ್ವಿಚ್ ಆಫ್ ಮಾಡುವುದು. ಹಾಗೆಯೇ ಅದರೊಳಗಿನ ಸಿಮ್ ಕಾರ್ಡ್, ಮೆಮರಿ ಕಾರ್ಡುಗಳನ್ನು ತೆಗೆಯಿರಿ. ಮೊಬೈಲ್ ಸ್ವಿಚ್ ಆಫ್ ಆಗಿರಲಿ, ಬಿಡಲಿ. ನಾವು ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿ ಬ್ಯಾಟರಿಯನ್ನು ತೆಗೆಯಬೇಕು. ಆಕಸ್ಮಾತ್ ರಿಮೊವೆಬಲ್ ಬ್ಯಾಟರಿ ಆಗಿರದಿದ್ದರೆ ಮೊಬೈಲ್ ಸ್ವಿಚ್ ಆಫ್ ಮಾಡಬೇಕು. ಇದರಿಂದ ಫೋನ್’ನೊಳಗೆ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಯನ್ನ ತಡೆಯಬಹುದು.

2. ನಿಮ್ಮ ಫೋನ್’ನ ಭಾಗಗಳನ್ನುಬಿಚ್ಚಿಡಿ…

ಮೊಬೈಲ್ ಸ್ವಿಚ್ ಆಫ್ ಮಾಡಿದ ಬಳಿಕ ನಿಮ್ಮ ಫೋನ್’ನ ಭಾಗಗಳನ್ನು ಸಾಧ್ಯವಾದಷ್ಟೂ ತೆಗೆದುಹಾಕಿರಿ. ಕವರ್, ಬ್ಯಾಟರಿ, ಸಿಮ್ ಕಾರ್ಡ್ಸ್, ಮೆಮೋರಿ ಕಾರ್ಡ್ ಇತ್ಯಾದಿ ಬಿಡಿಭಾಗಗಳನ್ನ ಫೋನ್’ನಿಂದ ಹೊರತೆಗೆಯಿರಿ.

ಫೋನಿನಲ್ಲಿಯ ಬಿಡಿಭಾಗಗಳನ್ನು ಬೆರ್ಪಡಿಸಿದ ನಂತರ ಅದನ್ನು ಒಣಗಿಸಲು ಟಿಶ್ಯೂ ಪೇಪರ್ ಅಥವಾ ಕಾಟನ್ ಬಟ್ಟೆಯನ್ನು ಉಪಯೋಗಿಸಿರಿ. ಯಾಕೆಂದರೆ ಇದರಿಂದ ಫೋನಿನ ಮೂಲೆ ಮೂಲೆಗಳನ್ನು ಒರೆಸಲು ಸಾಧ್ಯವಾಗುತ್ತದೆ.

3.  ಬಿಸಿಲಿನಲ್ಲಿ ಇಡಿ…

ಮೊಬೈಲ್ ನಿಂದ ಮೆಮೊರಿ ಕಾರ್ಡ್ ಹಾಗೂ ಸಿಮ್ ರಿಮೋವ್ ಮಾಡಿ ಬಿಸಿಲಿನಲ್ಲಿ ಇಡಬೇಕು. ಯಾವುದೇ ಕಾರಣಕ್ಕೂ ಮೊಬೈಲ್ ಸ್ವಿಚ್ ಆನ್ ಮಾಡಬೇಡಿ.

ಇಲ್ಲಿ ಓದಿ :-ನಿಮ್ಮ ಮೊಬೈಲ್’ನಲ್ಲಿ ಈ 4 ಆಪ್’ಗಳಿದ್ರೆ ಏನೆಲ್ಲಾ ಆಗುತ್ತೆ ಗೊತ್ತಾ..?

4.   ಅಕ್ಕಿಯೊಳಗೆ ಇಡಿ…

ಮೊಬೈಲನ್ನ ಒಂದು ಅಕ್ಕಿಯ ಬ್ಯಾಗ್ ಒಳಗೆ ಹಾಕಿ. ಮೊಬೈಲ್ ಸಂಪೂರ್ಣ ಮುಚ್ಚುವಷ್ಟು ಬ್ಯಾಗ್ ನಲ್ಲಿ ಅಕ್ಕಿ ಇರಲಿ. ಎರಡು ಮೂರು ದಿನ ಮೊಬೈಲನ್ನ ಅಲ್ಲೇ ಇಡಿ. ಯಾಕೆಂದರೆ ಅಕ್ಕಿ ಒಂದು ನೀರನ್ನು ಹೀರಿಕೊಳ್ಳುವ ಅದ್ಭುತ ವಸ್ತು. 2 ಅಥವಾ 3 ದಿನಗಳ ಬಳಿಕ ಫೋನ್ ನನ್ನು ತೆಗೆದು ಬ್ಯಾಟರಿ ಹಾಕಿ ಸ್ವಿಚ್ ಆನ್ ಮಾಡಿ.ಇದಕ್ಕೂ ಮುಂಚೆ ಮೊಬೈಲ್’ನ್ನು ಅಪ್ಪಿ ತಪ್ಪಿ ಸ್ವಿಚ್ ಆನ್ ಮಾಡಬೇಡಿ. ನಿಮ್ಮ ಫೋನ್ ಎಂದಿನಂತೆ ವರ್ಕ್ ಆಗುತ್ತದೆ. ಅಲ್ಲಿಯವರೆಗೂ ಕುತೂಹಲಕ್ಕಾಗಿಯಾದರೂ ಮೊಬೈಲ್ ಮುಟ್ಟಲು ಹೋಗಬೇಡಿ.

5.  ಇದನ್ನು ಮಾಡಲೇಬೇಡಿ..!

ಅಪ್ಪಿ ತಪ್ಪಿ ಒದ್ದೆಯಾದ ಮೊಬೈಲ್ ನ್ನು ಹೆಯರ್ ಡ್ರಾಯರ್ ನಿಂದ ಒಣಗಿಸಬೇಡಿ. ಡ್ರಾಯರ್ ನಿಂದ ಹೊರ ಹೊಮ್ಮುವ ಗಾಳಿ ಅತಿಯಾದ ಉಷ್ಣತೆ ಹೊಂದಿರುವದರಿಂದ ಫೋನ್ ನಲ್ಲಿಯ ಸರ್ಕಿಟ್ ಹಾಳಾಗುವ ಸಾಧ್ಯತೆಗಳಿರುತ್ತವೆ. ಇದರಿಂದ  ಮೊಬೈಲ್ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

6.  ಅತೀ ಹೆಚ್ಚು ಬಿಸಿಲಿನಲ್ಲಿ ಇಡಬೇಡಿ…

ಸ್ವಲ್ಪ ಹೊತ್ತು ಮಾತ್ರ ಬಿಸಿಲಿನಲ್ಲಿ ಇಡಿ.ಆದ್ರೆ ಅತಿಯಾದ ಬಿಸಿಲಿನಲ್ಲಿ ಫೋನ್ ಇಡುವದರಿಂದ ಕೆಟ್ಟು ಹೋಗುವ ಸಾಧ್ಯತೆಗಳು ಜಾಸ್ತಿ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ನಿಶ್ಚಿತಾರ್ಥ ಮಾಡಿಕೊಂಡ ಕಾಮಿಡಿ ಕಿಲಾಡಿ ಜೋಡಿಗಳು…

    ಬೆಂಗಳೂರು ಮುದ್ದಿನಪಾಳ್ಯ ದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಇಂದು ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಸ್ಪರ್ಧಿಗಳಾದ ಗೋವಿಂದೇಗೌಡ ಮತ್ತು ದಿವ್ಯಾ ಅವರ ನಿಶ್ಚಿತಾರ್ಥ ನೆರವೇರಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಕ್ಯೂಟ್ ಕಪಲ್ ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಭಾನುವಾರ ಒಬ್ಬರನೊಬ್ಬರು ತಮ್ಮ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸರಳವಾಗಿ ನಡೆದಿದ್ದು, ಕುಟುಂಬಸ್ಥರು ಹಾಗೂ ಆಪ್ತ ಸಂಬಂಧಿಕರು ಮಾತ್ರ ಆಗಮಿಸಿದ್ದರು. ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಾ ಸ್ನೇಹಿತರಾಗಿದ್ದರು….

  • ಆರೋಗ್ಯ

    ಹಲವು ಸಮಸ್ಯೆಗಳಿಗೆ ರಾಮಭಾಣ ಖರಬೂಜ ಹಣ್ಣು. ಈ ಹಣ್ಣಿನ

    ಈ ಕೆಳಕಂಡ ಸಮಸ್ಯೆಯಿಂದ ಬಳಲುತ್ತಿರುವವರು ಕರಬೂಜ ಸೇವನೆ ಮಾಡುವುದು ಉತ್ತಮ. ಕರಬೂಜ ಹಲವು ಸಮಸ್ಯೆಗಳಿಗೆ ನಿವಾರಣಾ ಗುಣ ಹೊಂದಿದೆ. ನಾವು ಇದರ ಸೇವನೆಯನ್ನು ಮಾಡುವುದು ಉತ್ತಮ ಇದರಿಂದ ದೇಹಕ್ಕೆ ಹಲವು ಲಾಭಗಳು ಲಭಿಸಲಿವೆ. ಕರಬೂಜದಲ್ಲಿ ಪಿಟೋಕೆಮಿಕಲ್ಸ್ ಎನ್ನುವ ಪದಾರ್ಥ ಇದೆ. ಈ ಪದಾರ್ಥಕ್ಕೆ ಉರಿಯೂತದ ವಿರುದ್ಧ ಹೊರಡುವ ಹೂನವಿದೆ. ಇದನ್ನ ತಿನ್ನುವುದರಿಂದ ಮೊಣಕೈ, ಮೊಣಕಾಲು ದೇಹದಲ್ಲಿರೋ ಸಂದಿಗಳಲ್ಲಿ ಬರುವ ನೋವು ಕಡಿಮೆಯಾಗುತ್ತದೆ. ಕರಬೂಜ ಹಣ್ಣು ತಿನ್ನುವುದರಿಂದ ಸಂದಿವಾತ ಬರುವುದನ್ನ ಸಹ ತಡೆಯಬಹುದು. ಕರಬೂಜದಲ್ಲಿ ರೋಗ ನೀರೋದಕ ಶಕ್ತಿ…

  • ಉಪಯುಕ್ತ ಮಾಹಿತಿ

    ನೀವು ಕೀ ಇಲ್ಲದೆಯೇ ಬೀಗವನ್ನು ತೆರೆಯಬಹುದು..!ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಕೆಲುವು ಸಮಯದಲ್ಲಿ ಬೀಗದ ಕೈ ಕಳೆದು ಹೋಗುತ್ತದೆ. ಆದ್ದರಿಂದ ಬೀಗ ತೆರೆಯಲು ಆಗುವುದಿಲ್ಲ. ನಿಮ್ಮೊಂದಿಗೆ ಯಾವತ್ತಾದರೂ ಹೀಗೆ ಆಗಿದೆಯೇ?. ಬೇರೆ ಬೇರೆ ಬೀಗಗಳಿಗೆ ಬೇರೆ ಬೇರೆ ಬೀಗದ ಕೈ ಇರುತ್ತದೆ. ಎಲ್ಲ ಬೀಗವೂ ಅವುಗಳದೇ ಕೈಯಲ್ಲಿ ಮಾತ್ರ ತೆರೆಯುತ್ತದೆ. ಪ್ರತಿಯೊಂದು ಬೀಗ ತೆರೆಯಲು ಒಂದು ಬೀಗದ ಕೈ ಬೇಕಾಗುತ್ತದೆ.

  • ವಿಸ್ಮಯ ಜಗತ್ತು

    ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿದ್ದ ಈ ವೃದ್ದ ಮಹಿಳೆ,ಅದೇ ದೇವಸ್ಥಾನಕ್ಕೆ ಕೊಟ್ಟ ಹಣ ಎಷ್ಟು ಗೊತ್ತಾ?ಈ ಲೇಖನ ಓದಿ ಶಾಕ್ ಆಗ್ತೀರಾ…

    ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ದೇವಸ್ಥಾನದ ನವೀಕರಣಕ್ಕಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿ ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಮೈಸೂರು ಅರಮನೆಯ
    ಮುಂಭಾಗದಲ್ಲಿರುವ ಪ್ರಸಿದ್ದ ಪ್ರಸನ್ನ ಅಂಜನೇಯ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾ, ದೇವಸ್ಥಾನದ ನವೀಕರಣಕ್ಕೆ ದೇಣಿಗೆ ನೀಡಿದ ಮಹಾನ್ ಭಕ್ತೆ.

  • ಉಪಯುಕ್ತ ಮಾಹಿತಿ

    ಫ್ರೈಡ್ ರೈಸ್, ನೂಡಲ್ಸ್ ಮತ್ತು ಗೋಬಿ ತಿನ್ನುತ್ತೀರಾ. ಎಚ್ಚರ ತಪ್ಪಿದರೆ ನಿಮ್ಮ ಜೀವಕ್ಕೆ ಆಪತ್ತು.!

    ಈಗಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ವಯಸ್ಸಾದವರ ವರೆಗೂ ಫಾಸ್ಟ್ ಫುಡ್ ಗೆ ದಾಸರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಹೋಟೆಲ್ ಮತ್ತು ರಸ್ತೆಯ ಬದಿಗಳಲ್ಲಿ ಸಿಗುವ ಫಾಸ್ಟ್ ಫುಡ್ ತಿನ್ನಲು ತುಂಬಾ ರುಚಿಯಾಗಿ ಇರುತ್ತದೆ ಮತ್ತು ಕಡಿಮೆ ತಿಂದರು ಹೊಟ್ಟೆ ತುಂಬುತ್ತದೆ ಅನ್ನುವ ಕಾರಣಕ್ಕೆ ಜನರು ಹೆಚ್ಚಾಗಿ ಈ ಫಾಸ್ಟ್ ಫುಡ್ ಗಳನ್ನ ತಿನ್ನುತ್ತಿದ್ದಾರೆ. ಇನ್ನು ಫಾಸ್ಟ್ ಫುಡ್ ತಿನ್ನುವುದರಿಂದ ನಮ್ಮ ದೇಹಕ್ಕೆ ಕೆಲವು ತೊಂದರೆಗಳು ಆಗುತ್ತದೆ ಎಂದು ಕೆಲವರಿಗೆ ಗೊತ್ತಿದ್ದರೂ ಕೂಡ ಫಾಸ್ಟ್ ಫುಡ್ ತಿನ್ನುವುದನ್ನ…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ,ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 14 ಜನವರಿ, 2019 ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಇಂದು…