ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಕಸಿ ಮಾಡುವುದರಿಂದ ಕೊಂಬೆಗೊಂದೊಂದು ಬಣ್ಣದ ಹೂಗಳನ್ನೂ ಸಹ ಪಡೆಯಬಹುದು.ಕಸಿ ಎಂದರೆ ನಿಮಗೆ ತಿಳಿಯದ್ದೇನಲ್ಲ ಆದರೆ ಈ ಮೊದಲಿನ ಸಾಂಪ್ರದಾಯಿಕ ಕಸಿ ಪದ್ಧತಿಯಂತೆ ಗಿಡದ ಕೊಂಬೆಯನ್ನೇ ಕತ್ತರಿಸಿ ಮತ್ತೊಂದು ಗಿಡಕ್ಕೆ ಜೋಡಿಸಿದ ನಂತರ ಅದೇನಾದರೂ ನೆಟ್ಟದೆ ಬೆಳೆಯದೆ ಹಳ್ಳ ಹಿಡಿದು ಮಕಾಡೆ ಮಲಗಿತೆಂದರೆ ಸಾಕು .ನಿಮ್ಮ ಹೆಂಡತಿಯಿಂದ “ಅದೇನು ಸೀಮೇಗಿಲ್ಲದ ಗಂಡೂಂತ ಇವನಿಗೆ ಕೊಟ್ಟು ಮದುವೆ ಮಾಡಿದ್ರಪ್ಪಾ ನನ್ನ ಥತ್ “ ಅಂತ ಬೈಯ್ಯಿಸಿಕೊಳ್ಳಬಾರದೆಂದರೆ ನಾ ಹೇಳಿದಂತೆ ಮಾಡಿ.
ಮೊದಲಿಗೆ ನಿಮ್ಮ ಮನೆಯಲ್ಲಿರುವ ಎರಡು ಬೇರೆ ಬೇರೆ ಬಣ್ಣದ ಗುಲಾಬಿ ಹೂ ಬಿಡುವ ಗಿಡಗಳನ್ನು ಆರಿಸಿಕೊಳ್ಳಿ.ಆ ಗಿಡದ ಮೇಲ್ಭಾಗದಲ್ಲಿ ಚಿಗುರುತ್ತಿರುವ ಕಡೆಯಿಂದ ಕೆಳಗೆ ನೋಡುತ್ತಾ ಬಂದರೆ ಅದೇ ಕೊಂಬೆಯಲ್ಲಿ ಮತ್ತೊಂದು ಕಡೆ ಇನ್ನೂ ಚಿಗುರಲು ತಯಾರಾಗುತ್ತಿರುವ ಕೆಂಪು ಬಣ್ಣದ ಗೆಣ್ಣು ಕಾಣುತ್ತದೆಯಲ್ಲಾ ಅದನ್ನು ಗಮನಿಸಿ.
ಈಗ ಮತ್ತೊಂದು ಗಿಡದ ಬಳಿ ಹೋಗಿ ಹಿಂದೆ ನೋಡಿದ ಅದೇ ಬೆಳ್ಳುಳ್ಳಿ ಗಾತ್ರದ ಕೊಂಬೆಗೆ ಒಂದು ಸ್ವಚ್ಚವಾದ ಬ್ಲೇಡ್ ತೆಗೆದುಕೊಂಡು ಕೊಂಬೆ ಉದ್ದವಾಗಿರುವ ಮಾದರಿಯಲ್ಲಿಯೇ ಒಂದು ಸೆಂಟಿಮೀಟರಿನಷ್ಟು ಉದ್ದದ ಗೆರೆ ಎಳೆಯಿರಿ ಅಂದರೆ ನಿಮ್ಮ ಬ್ಲೇಡಿನಿಂದ ಕುಯ್ಯುವುದು ಕೊಂಬೆಯ ಕಾಂಡದ ಒಳಗೆ ಹೋಗುವುದು ಬೇಡ ಮೇಲಿನ ಕಾಂಡದ ಸಿಪ್ಪೆಯನ್ನು ಮೀರುವುದು ಬೇಡ.
ಹೀಗೆ ಉದ್ದಕ್ಕೆ ಕುಯ್ದ ನಂತರ ಆ ಗೆರೆಯ ಮೇಲ್ಭಾಗಕ್ಕೆ ಅಡ್ಡ ಸ್ವಲ್ಪ ಕುಯ್ದುಬಿಡಿ ಅಂದರೆ ಈಗ ನಿಮಗೆ ಅದು ಇಂಗ್ಲೀಷಿನ T ಆಕಾರದಲ್ಲಿ ಕಾಣುತ್ತಿದೆಯಲ್ಲವೇ ? ಅದನ್ನು ನಿಧಾನವಾಗಿ ಸಿಪ್ಪೆ ಬಿಡಿಸಿ .ಈಗ ಅದನ್ನು ಹಾಗೆಯೇ ಬಿಟ್ಟು ಮೊದಲಿನ ಗಿಡದ ಹೊಸದಾದ ಚಿಗುರು ಗಿಣ್ಣಿನ್ನು ನಿಧಾನವಾಗಿ ಮೇಲಿನಿಂದ ಸಿಪ್ಪೆಯ ಅಳತೆಗೆ ಮಾತ್ರ ನಿಧಾನವಾಗಿ ಸೌತೆಕಾಯಿ ಹೆರೆಯುವ ಮಾದರಿಯಲ್ಲಿ ಚಿಗುರು ಗಿಣ್ಣನ್ನು ಮಾತ್ರ ಹೊರ ತೆಗೆಯಿರಿ.
ಹೊರತೆಗೆದ ಚಿಗುರು ಗಿಣ್ಣನ್ನು ತಂದು T ಡಿಸೈನಲ್ಲಿ ಕಟ್ ಮಾಡಿಟ್ಟ ಕಾಂಡದ ಸಿಪ್ಪೆಯೊಳಗೆ ನಿಧಾನವಾಗಿ ಮೇಲಿನಿಂದ ತೂರಿಸಿ ನಂತರ ಆ ಗಿಣ್ಣಿನ ಮೇಲೆ ಕೆಳಗೆ ಗಮ್ ಟೇಪ್ ಸುತ್ತಿ ಬಿಡಿ .ಇದಾದ ನಂತರ ಗಿಡದಲ್ಲಿ ಶೇ 80ರಷ್ಟು ಎಲೆಗಳನ್ನು ಅದೇ ಬ್ಲೇಡಿನಿಂದ ಕತ್ತರಿಸಿ ಹಾಕಿ ಹಾಗೂ ಗಿಡದ ಮೇಲಭಾಗದಲ್ಲಿರುವ ಚಿಗುರನ್ನೂ ಕೂಡ ಕತ್ತರಿಸಿ ಬಿಡಿ.ಇದನ್ನು ಟಿ ಬಡ್ಡಿಂಗ್ ಎಂದು ಕರೆಯುತ್ತಾರೆ.
ನಂತರ ನೀವು ಮೂರ್ನಾಲ್ಕು ದಿನಗಳಲ್ಲಿ ಈ ಹೊಸ ಗಿಣ್ಣು ನಿಧಾನವಾಗಿ ಚಿಗುರಿ ಹೊಸ ಬಣ್ಣದ ಹೂ ಬಿಡಲು ಶುರುವಾಗುತ್ತದೆ.ಈ ವಿಧಾನ ಮೊದಲು ಬಂದದ್ದು ನಿಂಬೆ ಗಿಡದಲ್ಲಿ ಬೇಗನೆ ಕಾಯಿ ಬಿಡಿಸುವುದಕ್ಕೆ ಆ ನಂತರ ಬಹಳಷ್ಟು ಗಿಡಗಳಿಗೆ ಇದೇ ವಿಧಾನವನ್ನು ಇಸ್ರೇಲಿನಲ್ಲಿ ಬಳಸುತ್ತಿದ್ದಾರೆ.
ಈ ತರಹದ ಕಸಿ ಮಾಡುವಾಗ ಒಂದೇ ಕೊಂಬೆಯ ಗಿಡಕ್ಕೆ ಕಸಿ ಮಾಡಿದರೆ ಗರಿಷ್ಠ ಫಲಿತಾಂಶ ಎರಡೂ ಗಿಡದಿಂದ ಪಡೆಯಬಹುದು ಹಾಗೂ ಒಂಟಿ ಕೊಂಬೆಯ ಗಿಡಕ್ಕೆ ಈ ತರಹ ಕಸಿ ಮಾಡಿದ ನಂತರ ಕಸಿ ಮಾಡಿದ ಜಾಗದಿಂದ ಮೂರು ಇಂಚಿನಷ್ಟು ಮೇಲಿನ ಕೊಂಬೆಯನ್ನು ಅರ್ಧಕ್ಕೆ ಕತ್ತರಿಸಿ ಮಡಿಚಿಬಿಡಬೇಕು ಏಕೆಂದರೆ ಮೇಲಿನ ಕೊಂಬೆ ಹಾಗೆಯೇ ಇದ್ದರೆ ಗಿಡ ಪೋಷಕಾಂಶಗಳೆಲ್ಲವೂ ಮೇಲಕ್ಕೆ ಹೋಗಲು ಶುರುವಾಗುವುದರಿಂದ ಕಸಿ ಮಾಡಿದ ಹೊಸ ಚಿಗುರು ಬೇಗ ಬೆಳೆಯುವುದಿಲ್ಲ.
ಹಾಗೂ ಅದನ್ನು ಏಕೆ ಅರ್ಧ ಕತ್ತರಿಸಿ ಹಾಗೆಯೇ ಬಿಡಬೇಕೆಂದರೆ ಈ ಮೊದಲಿನ ಕೊಂಬೆಯು ನೆಲದಿಂದ ಪೋಷಕಾಂಶಗಳನ್ನು ಅತ್ಯುತ್ತಮವಾಗಿ ಮೇಲಕ್ಕೆ ಎಳೆಯುತ್ತಿರುತ್ತದೆ ಹಾಗಾಗಿ ಅದನ್ನು ಪೂರಾ ಕತ್ತರಿಸಿಬಿಟ್ಟರೆ ಪೂಷಕಾಂಶ ಮೇಲೆಕ್ಕೆಳೆಯುವ ಪ್ರಮುಖ ಪಂಪನ್ನೇ ಆಫ್ ಮಾಡಿದಂತಾಗುತ್ತದೆ ಹಾಗಾಗಿ ಅದನ್ನು ಅರ್ಧ ಕತ್ತರಿಸಿ ಮಡಚಿ ಬಿಟ್ಟರೆ ಅದು ಮುಂದೆ ಬಳೆಯುವುದಿಲ್ಲ ಆದರೆ ಪೋಷಕಾಂಶ ಸೆಳೆದು ಹೊಸ ಚಿಗುರಿಗೆ ಕೊಡುತ್ತದೆ ಎಂದಷ್ಟೇ.
ಈ ವಿಧಾನದಲ್ಲಿ ನಿಮ್ಮ ಎರಡೂ ಗಿಡಗಳೂ ಕೂಡ ಹಾಳಾಗುವುದಿಲ್ಲ ಹಾಗೂ ಏಕಕಾಲದಲ್ಲಿ ಎರಡೂ ಗಿಡಗಳಿಗೆ ಕಸಿ ಮಾಡಬಹುದು.ಹಾಗೂ ನಿಮ್ಮ ಹೆಂಡತಿಯು ಗುಲಾಬಿ ಗಿಡಕ್ಕೆ ಕಸಿ ಮಾಡಲು ಒಪ್ಪಿಗೆ ಕೊಡದಿದ್ದರೆ ಪಕ್ಕದ ಮನೆಯ ಆಂಟಿಯ ಗುಲಾಬಿ ಗಿಡಕ್ಕೆ ಆದರೂ ಕಸಿ ಮಾಡಿಬಿಡಿ !
ನಾಳೆದಿನ ಬಿಡುವ ಚಿತ್ರಾವಿಚಿತ್ರ ಬಣ್ಣದ ಗುಲಾಬಿ ಹೂ ನೋಡಿ ಹೊಟ್ಟೆ ಉರಿದುಕೊಳ್ಳಲಿ !
ಕೃಪೆ:ಉಮೇಶ್ ಆಚಾರ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿಂಧನೂರು : ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಇಚ್ಛೆ ಬಂದಂತೆ ನಡೆದುಕೊಳ್ಳುವುದು ಸರಿಯಲ್ಲ. ಕಾನೂನು ತಿದ್ದುಪಡಿ ಮಾಡಬೇಕು ಎಂದು ರೈತ ಯುವ ಮುಖಂಡ ರವಿಗೌಡ ಮಲ್ಲದಗುಡ್ಡ ಆಗ್ರಹಿಸಿದ್ದಾರೆ ರಾಜ್ಯದಲ್ಲೂ ಸಂವಿಧಾನಾತ್ಮಕವಾಗಿ ವಜಾಗೊಳಿಸುವ ಕೆಲಸ ಆಗಬೇಕು. ಕ್ಷೇತ್ರದ ಅಭಿವೃದ್ದಿ ಮರೆತು ಸೀಟಿಗಾಗಿ ಪ್ರತಿದಿನ ಕಚ್ಚಾಡುತ್ತಿರುವ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಾದ ಕ್ಷೇತ್ರದಲ್ಲಿ ಅವರ ವಿರುದ್ದ ಎರಡನೇ ಸ್ತಾನದಲ್ಲಿ ಸೋತಿರುವ ಅಭ್ಯರ್ಥಿಯನ್ನು ಆ ಕ್ಷೇತ್ರದ ಮುಂದಿನ ಶಾಸಕರು ಎಂದು ಕಾನೂನು ಜಾರಿಗೆ ಬರಬೇಕು. ಆಗ ಮಾತ್ರ ಪಕ್ಷೆ ನಿಷ್ಠೆ ಹಾಗು ಕ್ಷೇತ್ರದ…
ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಅ.17ರಿಂದಆರಂಭವಾಗಲಿದ್ದು, ಅ.28ರ ವರೆಗೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಗುರುವಾರದಿಂದ ಹಾಸನಾಂಬ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು, ಒಟ್ಟು 13 ದಿನ ನಡೆಯಲಿದೆ. ಅಶ್ವೀಜಮಾಸದ ಮೊದಲ ಗುರುವಾರ ಮಧ್ಯಾಹ್ನ12.30ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತ ಸಾಗರಹರಿದು ಬರಲಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು…
Cuba is a small country that is located in the Caribbean Sea that is a part of the North American continent. It is an island country that consists of numerous archipelagos.
ನಿಮ್ಮಲ್ಲಿ ಬಹಳಷ್ಟು ಜನ ಈ ಹಣ್ಣನ್ನ ತಿಂದೇ ಇರುವುದಿಲ್ಲ. ಇನ್ನೂ ಕೆಲವರು ಈ ಹಣ್ಣನ್ನು ತಿಂದರೂ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಈ ಹಣ್ಣನ್ನ ಸ್ಟಾರ್ ಫ್ರೂಟ್ ಅಂತ ಕರೆಯುತ್ತಾರೆ. ಈ ಹಣ್ಣು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲಿ ಸಿಗುವುದಿಲ್ಲ. ಈ ಹಣ್ಣು ನಮ್ಮ ದೇಶದೇ ಆದರೂ ಸಹ ಕೇವಲ ಕೆಲವು ಊರುಗಳಲ್ಲಿ ಮಾತ್ರ ಈ ಹಣ್ಣನ್ನ ಬೆಳೆಯುತ್ತಾರೆ. ಇನ್ನೂ ನಮ್ಮ ದೇಶದಿಂದ ಬೇರೆ ದೇಶಗಳಿಗೆ ಈ ಹಣ್ಣು ಎಕ್ಸ್ಪೋರ್ಟ್ ಕೂಡ ಆಗುತ್ತದೆ. ಈ ಸ್ಟಾರ್ ಫ್ರೂಟ್ ಅನ್ನ…
ನಟ ಚಿರು ಸರ್ಜಾ ಹಾಗೂ ಧ್ರುವ ಸರ್ಜಾ ರಾಮ ಲಕ್ಷ್ಮಣರಂತೆ ಇದ್ದರು. ಆದರೆ ಚಿರು ಅಣ್ಣನ ಹಠಾತ್ ನಿಧನದಿಂದ ನೊಂದಿರುವ ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಅಣ್ಣನನ್ನು ನೆನೆದು ಭಾವುಕರಾಗಿದ್ದಾರೆ. ಇದೀಗ ತನ್ನ ಪ್ರೀತಿಯ ಅಣ್ಣನಿಗಾಗಿ ಮಂಟಪವನ್ನು ಕಟ್ಟಿಸಿದ್ದಾರೆ. ರಾಮನಗರ ಬಳಿ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಚಿರಂಜೀವಿ ಸರ್ಜಾ ಅವರನ್ನು ಮಣ್ಣು ಮಾಡಲಾಗಿದೆ. ಈ ಫಾರ್ಮ್ ಹೌಸ್ ಧ್ರುವ ಸರ್ಜಾ ಅವರದ್ದು ಆದರೆ ಚೀರುಸರ್ಜಾ ಗೆ ಈ ಫಾರ್ಮ್ ಹೌಸ್ ತುಂಬಾ ಇಷ್ಟವಾಗಿತ್ತಂತೆ. ದ್ರುವ ಸರ್ಜಾ…
ಜಿಯೋ ಬಂದಮೇಲೆ ಮೊಬೈಲ್ ಕಂಪನಿಗಳ ನಡುವಿನ ಪೈಪೋಟಿ ಶುರುವಾಗಿದ್ದು,ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ. ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ನೀಡಲು ಮುಂದಾಗಿದ್ದು, 98 ರೂಪಾಯಿಗೆ