ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಕಸಿ ಮಾಡುವುದರಿಂದ ಕೊಂಬೆಗೊಂದೊಂದು ಬಣ್ಣದ ಹೂಗಳನ್ನೂ ಸಹ ಪಡೆಯಬಹುದು.ಕಸಿ ಎಂದರೆ ನಿಮಗೆ ತಿಳಿಯದ್ದೇನಲ್ಲ ಆದರೆ ಈ ಮೊದಲಿನ ಸಾಂಪ್ರದಾಯಿಕ ಕಸಿ ಪದ್ಧತಿಯಂತೆ ಗಿಡದ ಕೊಂಬೆಯನ್ನೇ ಕತ್ತರಿಸಿ ಮತ್ತೊಂದು ಗಿಡಕ್ಕೆ ಜೋಡಿಸಿದ ನಂತರ ಅದೇನಾದರೂ ನೆಟ್ಟದೆ ಬೆಳೆಯದೆ ಹಳ್ಳ ಹಿಡಿದು ಮಕಾಡೆ ಮಲಗಿತೆಂದರೆ ಸಾಕು .ನಿಮ್ಮ ಹೆಂಡತಿಯಿಂದ “ಅದೇನು ಸೀಮೇಗಿಲ್ಲದ ಗಂಡೂಂತ ಇವನಿಗೆ ಕೊಟ್ಟು ಮದುವೆ ಮಾಡಿದ್ರಪ್ಪಾ ನನ್ನ ಥತ್ “ ಅಂತ ಬೈಯ್ಯಿಸಿಕೊಳ್ಳಬಾರದೆಂದರೆ ನಾ ಹೇಳಿದಂತೆ ಮಾಡಿ.
ಮೊದಲಿಗೆ ನಿಮ್ಮ ಮನೆಯಲ್ಲಿರುವ ಎರಡು ಬೇರೆ ಬೇರೆ ಬಣ್ಣದ ಗುಲಾಬಿ ಹೂ ಬಿಡುವ ಗಿಡಗಳನ್ನು ಆರಿಸಿಕೊಳ್ಳಿ.ಆ ಗಿಡದ ಮೇಲ್ಭಾಗದಲ್ಲಿ ಚಿಗುರುತ್ತಿರುವ ಕಡೆಯಿಂದ ಕೆಳಗೆ ನೋಡುತ್ತಾ ಬಂದರೆ ಅದೇ ಕೊಂಬೆಯಲ್ಲಿ ಮತ್ತೊಂದು ಕಡೆ ಇನ್ನೂ ಚಿಗುರಲು ತಯಾರಾಗುತ್ತಿರುವ ಕೆಂಪು ಬಣ್ಣದ ಗೆಣ್ಣು ಕಾಣುತ್ತದೆಯಲ್ಲಾ ಅದನ್ನು ಗಮನಿಸಿ.
ಈಗ ಮತ್ತೊಂದು ಗಿಡದ ಬಳಿ ಹೋಗಿ ಹಿಂದೆ ನೋಡಿದ ಅದೇ ಬೆಳ್ಳುಳ್ಳಿ ಗಾತ್ರದ ಕೊಂಬೆಗೆ ಒಂದು ಸ್ವಚ್ಚವಾದ ಬ್ಲೇಡ್ ತೆಗೆದುಕೊಂಡು ಕೊಂಬೆ ಉದ್ದವಾಗಿರುವ ಮಾದರಿಯಲ್ಲಿಯೇ ಒಂದು ಸೆಂಟಿಮೀಟರಿನಷ್ಟು ಉದ್ದದ ಗೆರೆ ಎಳೆಯಿರಿ ಅಂದರೆ ನಿಮ್ಮ ಬ್ಲೇಡಿನಿಂದ ಕುಯ್ಯುವುದು ಕೊಂಬೆಯ ಕಾಂಡದ ಒಳಗೆ ಹೋಗುವುದು ಬೇಡ ಮೇಲಿನ ಕಾಂಡದ ಸಿಪ್ಪೆಯನ್ನು ಮೀರುವುದು ಬೇಡ.
ಹೀಗೆ ಉದ್ದಕ್ಕೆ ಕುಯ್ದ ನಂತರ ಆ ಗೆರೆಯ ಮೇಲ್ಭಾಗಕ್ಕೆ ಅಡ್ಡ ಸ್ವಲ್ಪ ಕುಯ್ದುಬಿಡಿ ಅಂದರೆ ಈಗ ನಿಮಗೆ ಅದು ಇಂಗ್ಲೀಷಿನ T ಆಕಾರದಲ್ಲಿ ಕಾಣುತ್ತಿದೆಯಲ್ಲವೇ ? ಅದನ್ನು ನಿಧಾನವಾಗಿ ಸಿಪ್ಪೆ ಬಿಡಿಸಿ .ಈಗ ಅದನ್ನು ಹಾಗೆಯೇ ಬಿಟ್ಟು ಮೊದಲಿನ ಗಿಡದ ಹೊಸದಾದ ಚಿಗುರು ಗಿಣ್ಣಿನ್ನು ನಿಧಾನವಾಗಿ ಮೇಲಿನಿಂದ ಸಿಪ್ಪೆಯ ಅಳತೆಗೆ ಮಾತ್ರ ನಿಧಾನವಾಗಿ ಸೌತೆಕಾಯಿ ಹೆರೆಯುವ ಮಾದರಿಯಲ್ಲಿ ಚಿಗುರು ಗಿಣ್ಣನ್ನು ಮಾತ್ರ ಹೊರ ತೆಗೆಯಿರಿ.
ಹೊರತೆಗೆದ ಚಿಗುರು ಗಿಣ್ಣನ್ನು ತಂದು T ಡಿಸೈನಲ್ಲಿ ಕಟ್ ಮಾಡಿಟ್ಟ ಕಾಂಡದ ಸಿಪ್ಪೆಯೊಳಗೆ ನಿಧಾನವಾಗಿ ಮೇಲಿನಿಂದ ತೂರಿಸಿ ನಂತರ ಆ ಗಿಣ್ಣಿನ ಮೇಲೆ ಕೆಳಗೆ ಗಮ್ ಟೇಪ್ ಸುತ್ತಿ ಬಿಡಿ .ಇದಾದ ನಂತರ ಗಿಡದಲ್ಲಿ ಶೇ 80ರಷ್ಟು ಎಲೆಗಳನ್ನು ಅದೇ ಬ್ಲೇಡಿನಿಂದ ಕತ್ತರಿಸಿ ಹಾಕಿ ಹಾಗೂ ಗಿಡದ ಮೇಲಭಾಗದಲ್ಲಿರುವ ಚಿಗುರನ್ನೂ ಕೂಡ ಕತ್ತರಿಸಿ ಬಿಡಿ.ಇದನ್ನು ಟಿ ಬಡ್ಡಿಂಗ್ ಎಂದು ಕರೆಯುತ್ತಾರೆ.
ನಂತರ ನೀವು ಮೂರ್ನಾಲ್ಕು ದಿನಗಳಲ್ಲಿ ಈ ಹೊಸ ಗಿಣ್ಣು ನಿಧಾನವಾಗಿ ಚಿಗುರಿ ಹೊಸ ಬಣ್ಣದ ಹೂ ಬಿಡಲು ಶುರುವಾಗುತ್ತದೆ.ಈ ವಿಧಾನ ಮೊದಲು ಬಂದದ್ದು ನಿಂಬೆ ಗಿಡದಲ್ಲಿ ಬೇಗನೆ ಕಾಯಿ ಬಿಡಿಸುವುದಕ್ಕೆ ಆ ನಂತರ ಬಹಳಷ್ಟು ಗಿಡಗಳಿಗೆ ಇದೇ ವಿಧಾನವನ್ನು ಇಸ್ರೇಲಿನಲ್ಲಿ ಬಳಸುತ್ತಿದ್ದಾರೆ.
ಈ ತರಹದ ಕಸಿ ಮಾಡುವಾಗ ಒಂದೇ ಕೊಂಬೆಯ ಗಿಡಕ್ಕೆ ಕಸಿ ಮಾಡಿದರೆ ಗರಿಷ್ಠ ಫಲಿತಾಂಶ ಎರಡೂ ಗಿಡದಿಂದ ಪಡೆಯಬಹುದು ಹಾಗೂ ಒಂಟಿ ಕೊಂಬೆಯ ಗಿಡಕ್ಕೆ ಈ ತರಹ ಕಸಿ ಮಾಡಿದ ನಂತರ ಕಸಿ ಮಾಡಿದ ಜಾಗದಿಂದ ಮೂರು ಇಂಚಿನಷ್ಟು ಮೇಲಿನ ಕೊಂಬೆಯನ್ನು ಅರ್ಧಕ್ಕೆ ಕತ್ತರಿಸಿ ಮಡಿಚಿಬಿಡಬೇಕು ಏಕೆಂದರೆ ಮೇಲಿನ ಕೊಂಬೆ ಹಾಗೆಯೇ ಇದ್ದರೆ ಗಿಡ ಪೋಷಕಾಂಶಗಳೆಲ್ಲವೂ ಮೇಲಕ್ಕೆ ಹೋಗಲು ಶುರುವಾಗುವುದರಿಂದ ಕಸಿ ಮಾಡಿದ ಹೊಸ ಚಿಗುರು ಬೇಗ ಬೆಳೆಯುವುದಿಲ್ಲ.
ಹಾಗೂ ಅದನ್ನು ಏಕೆ ಅರ್ಧ ಕತ್ತರಿಸಿ ಹಾಗೆಯೇ ಬಿಡಬೇಕೆಂದರೆ ಈ ಮೊದಲಿನ ಕೊಂಬೆಯು ನೆಲದಿಂದ ಪೋಷಕಾಂಶಗಳನ್ನು ಅತ್ಯುತ್ತಮವಾಗಿ ಮೇಲಕ್ಕೆ ಎಳೆಯುತ್ತಿರುತ್ತದೆ ಹಾಗಾಗಿ ಅದನ್ನು ಪೂರಾ ಕತ್ತರಿಸಿಬಿಟ್ಟರೆ ಪೂಷಕಾಂಶ ಮೇಲೆಕ್ಕೆಳೆಯುವ ಪ್ರಮುಖ ಪಂಪನ್ನೇ ಆಫ್ ಮಾಡಿದಂತಾಗುತ್ತದೆ ಹಾಗಾಗಿ ಅದನ್ನು ಅರ್ಧ ಕತ್ತರಿಸಿ ಮಡಚಿ ಬಿಟ್ಟರೆ ಅದು ಮುಂದೆ ಬಳೆಯುವುದಿಲ್ಲ ಆದರೆ ಪೋಷಕಾಂಶ ಸೆಳೆದು ಹೊಸ ಚಿಗುರಿಗೆ ಕೊಡುತ್ತದೆ ಎಂದಷ್ಟೇ.
ಈ ವಿಧಾನದಲ್ಲಿ ನಿಮ್ಮ ಎರಡೂ ಗಿಡಗಳೂ ಕೂಡ ಹಾಳಾಗುವುದಿಲ್ಲ ಹಾಗೂ ಏಕಕಾಲದಲ್ಲಿ ಎರಡೂ ಗಿಡಗಳಿಗೆ ಕಸಿ ಮಾಡಬಹುದು.ಹಾಗೂ ನಿಮ್ಮ ಹೆಂಡತಿಯು ಗುಲಾಬಿ ಗಿಡಕ್ಕೆ ಕಸಿ ಮಾಡಲು ಒಪ್ಪಿಗೆ ಕೊಡದಿದ್ದರೆ ಪಕ್ಕದ ಮನೆಯ ಆಂಟಿಯ ಗುಲಾಬಿ ಗಿಡಕ್ಕೆ ಆದರೂ ಕಸಿ ಮಾಡಿಬಿಡಿ !
ನಾಳೆದಿನ ಬಿಡುವ ಚಿತ್ರಾವಿಚಿತ್ರ ಬಣ್ಣದ ಗುಲಾಬಿ ಹೂ ನೋಡಿ ಹೊಟ್ಟೆ ಉರಿದುಕೊಳ್ಳಲಿ !
ಕೃಪೆ:ಉಮೇಶ್ ಆಚಾರ್
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ….
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಶನಿವಾರ, 14/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಸೂರ್ಯೋದಯ06:08:40 ಸೂರ್ಯಾಸ್ತ18:46:04 ಹಗಲಿನ ಅವಧಿ12:37:24 ರಾತ್ರಿಯ ಅವಧಿ11:21:42 ಚಂದ್ರಾಸ್ತ17:16:30 ಚಂದ್ರೋದಯ29:42:29* ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ ಸಂವತ್ಸರ (ಉತ್ತರ):ವಿರೋಧಿಕೃತ್…
ಸೌತೆಕಾಯಿಗಳು 95% ನೀರನ್ನು ಒಳಗೊಂಡಿರುತ್ತವೆ ಮತ್ತು ಇದು ಅವರಿಗೆ ಸೂಕ್ತವಾದ ಹೈಡ್ರೇಟಿಂಗ್ ಮತ್ತು ತಂಪಾಗಿಸುವ ಆಹಾರವಾಗಿಸುತ್ತದೆ. ಸೌತೆಕಾಯಿಗಳು ಫಿಸೆಟಿನ್ ಎಂಬ ಉರಿಯೂತದ ಫ್ಲೇವನಾಲ್ ಅನ್ನು ಹೊಂದಿರುತ್ತವೆ, ಇದು ನಿಮ್ಮ ಮೆದುಳಿನ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸೌತೆಕಾಯಿಗಳಲ್ಲಿ ಲಿಗ್ನಾನ್ಸ್ ಎಂಬ ಪಾಲಿಫಿನಾಲ್ಗಳಿವೆ, ಇದು ಸ್ತನ, ಗರ್ಭಾಶಯ, ಅಂಡಾಶಯ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೌತೆಕಾಯಿ ಸಾರವು ಅನಗತ್ಯ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಉರಿಯೂತದ ಪರ ಕಿಣ್ವಗಳ ಚಟುವಟಿಕೆಯನ್ನು ತಡೆಯುವ…
ಉದ್ಯೋಗ, ವ್ಯಾಪಾರ ಪ್ರೇಮವಿಚಾರ, ಮದುವೆ, ಗ್ರಹದೋಷ, ಸ್ತ್ರೀವಶೀಕರಣ, ಪುರುಷವಶೀಕರಣ, ಸಂತಾನ,ಮಂಗಳದೋಷ, ದಾಂಪತ್ಯಕಲಹ, ವಿದ್ಯಾಭ್ಯಾಸ, ಮನಃಶಾಂತಿ, ಮಕ್ಕಳವಿಚಾರ, ರಾಜಕೀಯಬೆಳವಣಿಗೆ, ಆಸ್ತಿವಿಚಾರ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೆಲವೇದಿನಗಳಲ್ಲಿ ಪರಿಹಾರ ಶತಸಿದ್ಧ.ಸಂಪರ್ಕಿಸಿ:-9353957085 ಮೇಷ(23 ಅಕ್ಟೋಬರ್, 2019) : ಗರ್ಭಿಣಿಯರಿಗೆ ಉತ್ತಮ ದಿನವಲ್ಲ. ನೀವು ನಡೆಯುವಾಗ ಹೆಚ್ಚು ಜಾಗರೂಕರಾಗಿರಬೇಕು. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಸಹೋದರರು ನಿಮ್ಮ ಅಗತ್ಯಗಳಿಗೆ ಬೆಂಬಲ ನೀಡುತ್ತಾರೆ. ಸೆಕ್ಸ್ ಅಪೀಲ್ ಬೇಕಾದ ಫಲಿತಾಂಶವನ್ನು ನೀಡುತ್ತದೆ ಹೊಸ ವಿಚಾರಗಳನ್ನು ಉತ್ಪಾದಕವಾಗಿರುತ್ತವೆ. ನಿಮ್ಮ…
ಬೇಸರವಾಗುತ್ತಿದ್ದಾರೆ ನಿಜವಾಗಿಯೂ ಆಸಕ್ತಿರಹಿತವಾಗಿರುತ್ತದೆ, ಆದರೆ ನೀವು ಅದನ್ನು ಉತ್ತಮ ಸಮಯಕ್ಕೆ ಬದಲಾಯಿಸಬಹುದು.
ಬೀದರ್: ರಸ್ತೆಯಲ್ಲೇ ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಸೇರಿ ನಾಲ್ವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಮಂಗಲಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕ ಎಚ್ ಸಚಿನ್, ಆತನ ಗೆಳೆಯರಾದ ಕಾಶಿನಾಥ್, ಗುರುನಾಥ್ ಮತ್ತು ರಘುವೀರ್ ಮೃತಪಟ್ಟವರು. ಇವರೆಲ್ಲರೂ ಸುಮಾರು 22 ವರ್ಷ ವಯಸ್ಸಿನವರಾಗಿದ್ದು, ಹುಮ್ನಾಬಾದ್ ತಾಲೂಕಿನ ಮಂಗಲಗಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕರು ರಸ್ತೆಯಲ್ಲಿ…