ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಗುವಿಗೆ ಕಿವಿ ಚುಚ್ಚಿಸುವಾಗ ಯಾವುದೇ ರೀತಿಯ ಅನಸ್ಥೆಸಿಯಾ ಬಳಸುವುದಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ತುಂಬಾನೇ ನೋವುಂಟಾಗಬಹುದು. ಕೆಲವು ಪೋಷಕರು ಮಗು ತುಂಬಾ ಚಿಕ್ಕದಿದ್ದಾಗಲೇ ಈ ನೋವು ಮುಗಿದು ಬಿಡಲಿ ಎಂದು ಯೋಚಿಸುತ್ತಾರೆ. ಇನ್ನು ಕೆಲವರು ಕಿವಿ ಚುಚ್ಚಿಸಲು ಮಗು ಸ್ವಲ್ಪ ದೊಡ್ದದಾಗುವವರೆಗು ಕಾಯುತ್ತಾರೆ. ಮಗುವಿಗೆ ಕಿವಿ ಚುಚ್ಚಿಸುವುದು ನಿಮಗೆ ಬಿಟ್ಟ ನಿರ್ಧಾರವಾಗಿರುವ ಕಾರಣಕ್ಕೆ, ನಿಮ್ಮ ಮಗುವಿನ ಒಳಿತನ್ನು ನೋಡಿ ನೀವು ನಿರ್ಧಾರ ತೆಗೆದುಕೊಳ್ಳುವಿರಿ.
ಅದೇನೇ ಇರಲಿ, ನಿಮ್ಮ ಮಗುವಿಗೆ ಕಿವಿ ಚುಚ್ಚಿಸುವ ಮುನ್ನ ನಿಮ್ಮ ವೈದ್ಯರಿಗೆ ಇದನ್ನು ತಿಳಿಸಿರಿ. ನಾವು ನೀಡುವ ಸಲಹೆ ಏನು ಅಂದರೆ, ನಿಮ್ಮ ಮಗುವು ಸ್ವಲ್ಪ ದೊಡ್ಡದಾಗುವವರೆಗು ಕಿವಿ ಚುಚ್ಚಿಸುವುದಕ್ಕೆ ಕಾಯಿರಿ. ಇದಕ್ಕೆ ಒಂದು ಸರಳ ಕಾರಣ ಅಂದರೆ, ಮಕ್ಕಳು ಚಡಪಡಿಸುವುದು ಜಾಸ್ತಿ.
ನಿಮ್ಮ ಮಗುವು ಆಟಾಡುವಾಗ ತನ್ನ ಬಾಯಿಂದ ಕಿವಿಗೆ ಕೈಗಳ ಮೂಲಕ ಕೀಟಾಣುಗಳನ್ನು ವರ್ಗಾಯಿಸಿಕೊಳ್ಳಬಹುದು. ಇದರಿಂದ ಅವರ ಕಿವಿಯಲ್ಲಿ ಸೋಂಕು ಉಂಟಾಗಬಹುದು. ಸೋಂಕು ತಾಗಿದ ಕಿವಿಯು ನೀಡುವ ನೋವು, ಮಗುವು ಸ್ವಲ್ಪ ದೊಡ್ಡದಾದ ಮೇಲೆ ಕಿವಿ ಚುಚ್ಚಿಸಿದಾಗ ಆಗುವ ನೋವಿಗಿಂತ ಜಾಸ್ತಿ ಇರುತ್ತದೆ! ಸಣ್ಣ ಮಕ್ಕಳ ಚುಚ್ಚಿಸಿದ ಕಿವಿಯನ್ನು ಕಾಪಾಡಿಕೊಳ್ಳುವುದು ಕಷ್ಟಕರ.
ಕಿವಿ ಚುಚ್ಚಲಿಕ್ಕೆ ಉಪಯೋಗಿಸುವ ಸಾಧನಗಳ ನೈರ್ಮಲ್ಯತೆಯ ಬಗ್ಗೆ ನೀವು ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಚಿಕ್ಕ ಮಕ್ಕಳು ಮೊದಲೇ ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು ಇರುತ್ತೆ, ಅಂತದರಲ್ಲಿ ಈ ಹೆಚ್ಚುವರಿ ಅಪಾಯವನ್ನು ನೀವು ನಿಮ್ಮ ಎಳೆದುಕೊಳ್ಳುವಿರ ಎಂದು ವಿಚಾರಿಸಿ. ನೀವು ಮಗು ತುಂಬಾ ಚಿಕ್ಕದಿದ್ದಾಗಲೇ ಕಿವಿ ಚುಚ್ಚಿಸಬೇಕೆಂದಿದ್ದರೆ, ಮಗುವಿಗೆ ಜ್ವರ ಅಥವಾ ದದ್ದುಗಳು(rashes) ಉಂಟಾಗಬಹುದು. ಮಕ್ಕಳು ತಮ್ಮ ದೇಹದಲ್ಲಿನ ಬದಲಾವಣೆಗಳಿಗೆ ಹೀಗೆ ಪ್ರತಿಕ್ರಿಯಿಸುವುದು ಸಹಜ. ಹಾಗಾಗಿ ನೀವು ಏನು ಮಾಡುವ ಮುಂಚೆಯೇ ಮಕ್ಕಳ ತಜ್ಞರ ಬಳಿ ಹೇಳಿರಿ.
ನೀವು ಮಗುವಿಗೆ ಕಿವಿ ಚುಚ್ಚಿಸಬೇಕೆಂದು ನಿರ್ಧಾರ ಮಾಡಿದರೆ, 24 ಕಾರಟ್ ಚಿನ್ನವನ್ನೇ ಬಳಸಿ. ಇದು ಸೋಂಕು ತಗಲುವ ಸಾಧ್ಯತೆಗಳನ್ನು ಕಮ್ಮಿ ಮಾಡಿಸುತ್ತದೆ. ಬೇರೇ ರೀತಿಯ ಆಭರಣಗಳು ನಿಮ್ಮ ಮಗುವಿನ ಚರ್ಮಕ್ಕೆ ಆಗದೆ ಇರಬಹುದು. ನಿಮ್ಮ ಮಗುವಿನ ದೇಹ ಹಾಗು ಚರ್ಮ ಹುಟ್ಟಿದ ಸ್ವಲ್ಪ ದಿನಗಳವರೆಗೂ ತುಂಬಾ ಸೂಕ್ಷ್ಮವಾಗಿ ಇರುವ ಕಾರಣ, ನೀವು ಕಿವಿ ಚುಚ್ಚಿಸುವ ಮುನ್ನ ಎಲ್ಲಾ ಮುನ್ನಚ್ಚೆರಿಕೆ ಕ್ರಮಗಳನ್ನು ಪಾಲಿಸಿ.
ಮಗುವಿಗೆ ಒಮ್ಮೆ ಕಿವಿ ಚುಚ್ಚಿಸಿದ ನಂತರ ಯಾವುದೇ ಕಾರಣಕ್ಕೂ 6 ತಿಂಗಳುಗಳವರೆಗೆ ಅವುಗಳನ್ನು ತೆಗೆಯಬೇಡಿ. ಗಾಯದ ಮೇಲೆ ಗಮನವಿಡಿ ಹಾಗು ಅದರೊಂದಿಗೆ ಸೋಂಕು, ಕಡಿತ ಹಾಗು ಮೈನೂರತೆ ಪ್ರತಿಕ್ರಿಯೆಗಳ ಮೇಲೆ ಹದ್ದಿನ ಕಣ್ಣು ಇಡಿ. ದಿನಕ್ಕೆ ಒಂದು ಬಾರಿ ತುಂಬಾನೇ ನಾಜೂಕಾಗಿ ಓಲೆಯನ್ನು ತಿರುವಿ. ಇದು ಓಲೆಯನ್ನು ಗಾಯ ಮಾಸಲು ಬೆಳೆಯುತ್ತಿರುವ ಚರ್ಮದೊಂದಿಗೆ ಕೂಡಿಕೊಳ್ಳಬಾರದು ಎಂದು. ಉರಿತ, ರಕ್ತ ಚಿಮ್ಮುವುದು ಅಥವ ಹೊರಸೂಸುವುದು, ಇವುಗಳೆಲ್ಲ ಸೋಂಕು ತಗಲಿರುವ ಸೂಚನೆಗಳು. ಹೀಗಾಗಿ ನೀವು ಕೂಡಲೇ ಮಕ್ಕಳ ತಜ್ಞರನ್ನು ಭೇಟಿ ಮಾಡಿ ನಿಮ್ಮ ಮಗುವಿಗೆ ಸತ್ಕಾರ ಮಾಡಿ.
ತಕ್ಷಣದ ಪರಿಹಾರ:-
ಸೋಂಕಿಗೆ ತಕ್ಷಣದ ಮನೆ ಪರಿಹಾರ ಎಂದರೆ, ಸೋಂಕು ತಗುಲಿದ ಜಾಗಕ್ಕೆ ಆಲ್ಕೋಹಾಲ್ ಉಜ್ಜಿ. ಮಗುವಿಗೆ ಕಿವಿ ಚುಚ್ಚಿಸುವ ಬಗ್ಗೆ ಎಲ್ಲಾ ಪೋಷಕರು ಗೊಂದಲದಲ್ಲಿ ಇರುತ್ತಾರೆ. ಅದಕ್ಕಾಗಿಯೇ ನೀವು ನಿಮ್ಮ ಹಿರಿಯರನ್ನು ಹಾಗು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು.
ಮೂಲ :
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹೊಸ ವರ್ಷ ಶುರುವಾಗಿದೆ. ಹೊಸ ವರ್ಷ ಒಳ್ಳೆಯದನ್ನು ನೀಡಲಿ ಎಂದು ಎಲ್ಲರೂ ಬಯಸ್ತಾರೆ. ಹೊಸ ವರ್ಷ ಕೆಲವರ ಅದೃಷ್ಟ ಬದಲಿಸಿದ್ರೆ ಮತ್ತೆ ಕೆಲವರ ದುರಾದೃಷ್ಟಕ್ಕೆ ಕಾರಣವಾಗಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಹೊಸ ವರ್ಷ ಯಾವ ರಾಶಿಗೆ ಯಾವ ಫಲ ನೀಡಲಿದೆ ಎಂಬುದನ್ನು ಹೇಳಲಾಗಿದೆ. ಮಕರ ಸಂಕ್ರಾಂತಿ ನಂತ್ರ ವೃಶ್ಚಿಕ ರಾಶಿಯವರ ಅದೃಷ್ಟ ಬದಲಾಗಲಿದ್ದು ಏನೆಲ್ಲಾ ಬದಲಾವಣೆಗಳು ಆಗಲಿದೆ ನೋಡಿ… ಹೊಸ ವರ್ಷದಲ್ಲಿ ಈ ರಾಶಿಯವರ ಅದೃಷ್ಟ ಬದಲಾಗ್ತಿದೆ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಅರ್ಧಕ್ಕೆ ನಿಂತ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಈ…
17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಬಾಲಿವುಡ್ ನಟಿ ಕರೀನಾ ಕಪೂರ್ ಹುಟ್ಟು ಹಬ್ಬದ ನಂತ್ರ ಡಾನ್ಸ್ ಇಂಡಿಯಾ ಡಾನ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಡಾನ್ಸ್ ಇಂಡಿಯಾ ಡಾನ್ಸ್ ಫೈನಲ್ ನಲ್ಲಿ ಜಡ್ಜ್ ಆಗಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ಕರೀನಾ ಸ್ಟೈಲ್ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ಸೆಟ್ ನಲ್ಲಿ ಕರೀನಾ ಫ್ಯಾಷನ್ ಎಲ್ಲರನ್ನು ಆಕರ್ಷಿಸಿದೆ. ವಿಶೇಷವಾಗಿ ಕರಿನಾ ಕತ್ತಿಗೆ ಹಾಕಿದ್ದ ಸ್ನೇಕ್ ಚೈನ್. ಕರೀನಾ ಡೈಮಂಡ್ ಸ್ನೇಕ್ ಚೈನ್ ಧರಿಸಿ ಬಂದಿದ್ದರು. ಕರೀನಾರ ಈ ಚೈನ್ ಐಷಾರಾಮಿ ಕಾರುಗಳಿಗಿಂತ ದುಬಾರಿ ಎನ್ನಲಾಗಿದೆ. ಇದ್ರ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ನಾವೆಲ್ಲಾ ಸಿನಿಮಾದಲ್ಲಿ ಸಿನಿಮಾ ನಾಯಕರು ತಮ್ಮ ಎರಡೂ ಕೈ ಗಳಲ್ಲಿ ಬರೆಯುವದನ್ನು ನೋಡಿರುತ್ತೇವೆ.ಆದ್ರೆ ನಿಜ ಜೀವನದಲ್ಲಿ ಸಾಧ್ಯವೇ..?ಹೌದು, ಸಾಧ್ಯ ತಿಳಿಯಲು ಮುಂದೆ ಓದಿ… ಸಾಮಾನ್ಯವಾಗಿ ನಾವೆಲ್ಲರೂ ಒಂದು ಕೈನಲ್ಲಿ ಬರೆಯುವುದನ್ನು ರೂಢಿಸಿಕೊಂಡಿರುತ್ತೇವೆ, ಆದರೆ ಈ ಶಾಲೆಯಲ್ಲಿನ ಮಕ್ಕಳು ತಮ್ಮ ಎರಡೂ ಕೈಗಳಲ್ಲಿ ಬರೆಯುವುದನ್ನು ರೂಡಿಸಿಕೊಂಡಿವೆಯಂತೆ! ಈ ವರದಿ ನಿಮಗೆ ಆಶ್ಚರ್ಯ ಉಂಟು ಮಾಡಿದರೂ ಸತ್ಯ..! ಇದು ನಡೆಯುತ್ತಿರುವುದು ಮಹಾರಾಷ್ಟ್ರದ ಸಿಂಗ್ರೌಲಿ ಎಂಬ ಪುಟ್ಟ ಗ್ರಾಮದ ವೀಣಾ ವಂದಿನಿ ಶಾಲೆ. ಈ ಶಾಲೆಯ…
ಕಪ್ಪುಹಣ ಹೊಂದಿರುವ ಅನುಮಾನಾಸ್ಪದ ಖಾತೆಯ ಮಾಹಿತಿಗಳನ್ನು ಭಾರತದೊಂದಿದೆ ಹಂಚಿಕೊಳ್ಳುವುದಾಗಿ ಸ್ವಿಡ್ಜರ್ ಲ್ಯಾಂಡ್
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663953892 call/ whatsapp/ mail raghavendrastrology@gmail.com ಮೇಷ(13 ನವೆಂಬರ್, 2018) ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ನಿಮ್ಮ…