News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಆಧ್ಯಾತ್ಮ

ದಯವಿಟ್ಟು ಈ ಏಳು ವಸ್ತುಗಳನ್ನು ಶನಿವಾರದಂದು ಮನೆಗೆ ತರಬೇಡಿ!ಶಾಕ್ ಆಗ್ಬೇಡಿ?ಈ ಲೇಖನ ಓದಿ…

5722

ನಮ್ಮ ಭಾರತೀಯ ಮತ್ತು ಪಾಶ್ಚಾತ್ಯ ಹಸ್ತಸಾಮುದ್ರಿಕರ ಪ್ರಕಾರ ವ್ಯಕ್ತಿಯೊಬ್ಬರ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅಪಾರವಾದ ಪ್ರಭಾವ ಬೀರುತ್ತವೆ. ಇದಕ್ಕೆ ಈ ಗ್ರಹಗಳ ಗುರುತ್ವಶಕ್ತಿ ಹಾಗೂ ಸೂಸುವ ವಿಕಿರಣದ ಅಲೆಗಳೇ ಕಾರಣ. ಈ ವಿಕಿರಣದ ಅಲೆಗಳು ಭಿನ್ನ ಬಣ್ಣಗಳು ಹಾಗೂ ಭಿನ್ನ ಅಂಗಗಳ ಮೇಲೆ ಭಿನ್ನವಾಗಿ ಪ್ರತಿಕ್ರಿಯಿಸುತ್ತವೆ.

ಒಂದು ವೇಳೆ ನಿಮ್ಮ ಜೀವನದಲ್ಲಿ ಶನಿಗ್ರಹದ ಪಾತ್ರವಿದೆ ಎಂದು ಹಸ್ತಸಾಮುದ್ರಿಕರು ಹೇಳಿದರೆ ಇದಕ್ಕೆ ಕೆಲವು ಪರಿಹಾರಗಳನ್ನು ಕೈಗೊಳ್ಳುವುದು ನಿಮಗೆ ಅತ್ಯಗತ್ಯ. ಅದರಲ್ಲೂ ಶನಿಕಾಟವನ್ನು ಅನುಭವಿಸುವವರು ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು.

ಶನಿದೇವರು ಅಥವಾ ಶನಿಗ್ರಹಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳಿದ್ದು ಇದರಲ್ಲಿ ಪ್ರಮುಖವಾದುದೆಂದರೆ ಶನಿವಾರದಂದು ಕೆಲವು ವಸ್ತುಗಳನ್ನು ಕೊಳ್ಳಬಾರದು ಅಥವಾ ಮನೆಗೆ ತರಬಾರದು ಎಂದು ಹಸ್ತಸಾಮುದ್ರಿಕರು ಅಭಿಪ್ರಾಯ ಪಡುತ್ತಾರೆ. ಇದನ್ನು ಮೀರಿದರೆ ಆರೋಗ್ಯ ಕೆಡುವುದು ಹಾಗೂ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ.

ಶನಿವಾರದಂದು ಏನು ಮಾಡಬಾರದೆಂದು ತಿಳಿಯೋಣ….

1. ಬದನೇಕಾಯಿಯನ್ನು ಬಳಸಬಾರದು:-
ಶನಿವಾರದಂದು ಬದನೇಕಾಯಿಯನ್ನು ಕೊಳ್ಳಲೂಬಾರದು, ತಿನ್ನಲೂಬಾರದು. ಅಲ್ಲದೇ ಶನಿವಾರದಂದ ಕಾಳುಮೆಣಸನ್ನೂ ಕೊಳ್ಳಬಾರದು ಹಾಗೂ ಈ ದಿನ ಶನಿವ್ರತವನ್ನು ಆಚರಿಸುವುದು ಒಳ್ಳೆಯದು.

2. ಶನಿವಾರದಂದು ಉಪ್ಪು ಕೊಳ್ಳುವುದು ಬೇಡ  :-

ಶನಿವಾರದಂದು ಉಪ್ಪನ್ನು ಕೊಳ್ಳುವುದು ಆರ್ಥಿಕ ನಷ್ಟಕ್ಕೆ ಆಹ್ವಾನ ಎಂದು ಜ್ಯೋತಿಷ್ಯಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಬದಲಿಗೆ ಈ ದಿನ ಹತ್ತಿರದ ಮಂದಿರ ಅಥವಾ ಆರಾಧನಾ ಸ್ಥಳಕ್ಕೆ ಉಪ್ಪನ್ನು ದಾನ ಮಾಡಬೇಕು.

3. ಹೊಸ ವಾಹನವನ್ನು ಶನಿವಾರ ಕೊಳ್ಳಬೇಡಿ:-

ಶನಿವಾರದಂದು ಕಬ್ಬಿಣವನ್ನು ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಕೊಳ್ಳಬಾರದು. ಅದರಲ್ಲೂ ಹೊಸ ವಾಹನವನ್ನು ಶನಿವಾರ ಕೊಳ್ಳಲೇಬಾರದು. ಏಕೆಂದರೆ ಇದರಿಂದ ಅಪಘಾತವಾಗುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ ಎಂದು ಜ್ಯೋತಿಷ್ಯಾಸ್ತ್ರಜ್ಞರು ಎಚ್ಚರಿಸುತ್ತಾರೆ.

4. ಬೇಳೆಯನ್ನುಕೊಳ್ಳಬೇಡಿ:-

ಬೇಳೆಯನ್ನು ಶನಿವಾರದಂದು ಕೊಳ್ಳಬಾರದು. ಆದ್ದರಿಂದ ಬೇಳೆಯನ್ನು ಕೊಳ್ಳದಿರುವುದೇ ಉತ್ತಮ. ಬದಲಿಗೆ ಬೇಳೆಯನ್ನು ಬೇಯಿಸಿ ತಯಾರಿಸಿದ ಆಹಾರವನ್ನು ಬಡವರಿಗೆ ದಾನ ಮಾಡಬೇಕು ಅಥವಾ ಕಾಗೆಗಳಿಗೆ ಆಹಾರಧಾನ್ಯಗಳನ್ನು ತಿನ್ನಲು ನೀಡಬೇಕು.


5. ಕಪ್ಪು ಬಣ್ಣದ ಬಟ್ಟೆ:-

ಕಪ್ಪು ಬಣ್ಣ ನಿಮ್ಮ ಇಷ್ಟದ ಬಣ್ಣವಾಗಿರಬಹುದು. ಆದರೆ ಒಂದು ವೇಳೆ ನಿಮ್ಮ ಗ್ರಹಗತಿಯಲ್ಲಿ ಶನಿಯ ಪ್ರಭಾವವಿದ್ದರೆ ಶನಿವಾರ ಮಾತ್ರ ಕಪ್ಪುಬಣ್ಣದ ಬಟ್ಟೆಗಳನ್ನು ಕೊಳ್ಳಲು ಹೋಗಬಾರದು. ಇದರಿಂದ ದುರಾದೃಷ್ಟವನ್ನು ಆಹ್ವಾನಿಸಿದಂತಾಗುತ್ತದೆ.

6. ಸಾಸಿವೆ ಕೊಳ್ಳಬಾರದು:-

ಶನಿವಾರ ಸಾಸಿವೆಯನ್ನೂ ಕೊಳ್ಳಬಾರದು, ಬದಲಿಗೆ ಬಡವರಿಗೆ ದಾನ ನೀಡಬೇಕು. ಅಲ್ಲದೇ ಶನಿಯ ವಿಗ್ರಹದ ಮೇಲೂ ಕೊಂಚ ಚಿಮುಕಿಸಬೇಕು. ಇದರಿಂದ ಶುಭಸಮಾಚಾರಗಳು ಆಗಮಿಸುತ್ತವೆ.

7. ಮರದಿಂದ ಮಾಡಿದ ಪೀಠೋಪಕರಣಗಳನ್ನು ಕೊಳ್ಳಬೇಡಿ:-

ಒಂದು ವೇಳೆ ಮನೆಗೆ ಮರದಿಂದ ಮಾಡಿದ ಪೀಠೋಪಕರಣಗಳನ್ನು ಕೊಳ್ಳುವುದಿದ್ದರೆ ಶನಿವಾರ ಮಾತ್ರ ಕೊಳ್ಳುವುದಾಗಲೀ, ಅಥವಾ ವಿತರಣೆಯನ್ನು ಪಡೆಯುವುದಾಗಲೀ ಮಾಡಬೇಡಿ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ