ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಓದು ಜೀವನಕ್ಕೆ ತುಂಬಾನೇ ಮುಖ್ಯ., ವಿದ್ಯೆ ಮುಖ್ಯ ಆದ್ರೆ ವಿನಯ ಅತ್ಯಗತ್ಯ. ವಿನಯಾನ ಯಾವ ಶಾಲೇಲೂ ಹೇಳಿಕೊಡಲ್ಲ. ಯೋಗ ಎಲ್ಲರಿಗೂ ಬರಬಹುದು, ಆದ್ರೆ ಯೋಗ್ಯತೆ ಕೆಲವರಿಗೆ ಮಾತ್ರ ಇರತ್ತೆ.. ” ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಅಂತಾರೆ ದೊಡ್ಡವರು. ಹಾಗೆ ಎಲ್ಲಾ ಜ್ಞಾನಾನೂ ಪುಸ್ತಕದಿಂದಾನೆ ಸಿಗಲ್ಲ, ಅನುಭಾವಾನೂ ಅಷ್ಟೇ ಮುಖ್ಯ.
1. ಅಕ್ಷಯ್ ಕುಮಾರ್:-
ಮಾರ್ಷಲ್ ಆರ್ಟ್ಸ್ ಮುಂದುವರಿಸಬೇಕು ಅಂತ ಕಾಲೇಜನ್ನ ಬಿಟ್ರು. ಇವ್ರೊಂಥರ ಮಲ್ಟಿ ಟ್ಯಾಲೆಂಟೆಡ್. ನಟನೆ ಮಾಡ್ತಾರೆ, ಅಡಿಗೆ ಮಾಡ್ತಾರೆ, ಫೈಟ್ ಮಾಡ್ತಾರೆ.ಸಮಾಜ ಸೇವೇನೂ ಮಾಡ್ತಾರೆ.

ಇವರ ಬಗ್ಗೆ ನಿಮಗೆ ಗೊತ್ತೇ ಇರತ್ತೆ ಬಿಡಿ. ಇವರಿಗೆ ಯಾವತ್ತೂ ಓದಿನ ಬಗ್ಗೆ ಜಾಸ್ತಿ ಒಲವಿರಲಿಲ್ಲ ಅಂತ ಇವ್ರೇ ಆಗಾಗ ಹೇಳ್ಕೊತಾರೆ.
2. ದೀಪಿಕಾ ಪಡುಕೋಣೆ:-
ಅದ್ಬುತ ನಟಿ, ಹಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದ್ರೆ ಇವಳು ಓದಿರೋದು ಬರಿ ಪಿಯುಸಿ ತಂಕ ಮಾತ್ರ! ಚಿಕ್ಕ ವಯಸ್ಸಿಂದಾನೇ ದುಡಿಯಕ್ಕೆ ಶುರು ಮಾಡಿದ್ರಿಂದಾ ಕಾಲೇಜಿಗೆ ಹೋಗಕ್ಕಾಗ್ಲಿಲ್ಲ.

ಮೊದಮೊದ್ಲು ಅವರ ಅಪ್ಪಾ ಅಮ್ಮಂಗೆ ಇದರ ಬಗ್ಗೆ ಅಸಮಾಧಾನ ಇದ್ರೂ ಮಗಳಿಗೆ ಈ ಕ್ಷೇತ್ರ ಎಷ್ಟ್ ಇಷ್ಟ ಅಂತ ಗೊತ್ತಾಗಿ ಅವಳ ಈ ಕನಸಿಗೆ ಸಾಥ್ ಕೊಟ್ರಂತೆ.
3. ಅಮಿರ್ ಖಾನ್:-
ಇವರ ನಟನೆ ಬಗ್ಗೆ ನಿಮಗೇ ಗೊತ್ತೆ ಇದೆ. ಇವ್ರು ಕಾಲೇಜಿನ ಮೆಟ್ಟಲನ್ನ ಹತ್ತಲೇ ಇಲ್ಲ. ಬಾಲಿವುಡ್ ಆಳುತ್ತಿರುವ ಖಾನ್ಗಳಲ್ಲಿ ಇವ್ರೂ ಕೂಡ ಒಬ್ರು.

ತಮಗೆ ಓದಿಗಿಂತಾ ಚಿತ್ರಗಳಲ್ಲೇ ಆಸಕ್ತಿ ಜಾಸ್ತಿ ಅಂತ ಗೊತ್ತಾದ್ಮೇಲೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಕ್ಕೆ ಶುರುಮಾಡಿದ್ರು. ಈಗ ಸೂಪರ್ ಸ್ಟಾರ್ ಆಗಿದ್ದಾರೆ .
4. ಐಶ್ವರ್ಯ ರೈ:-
ವಿಶ್ವಸುಂದರಿ ಐಶ್ವರ್ಯ ರೈ ಕಾಲೇಜನ್ನ ಅರ್ಧಕ್ಕೆ ಕೈ ಬಿಟ್ಟು ಮಾಡೆಲ್ಲಿಂಗ್ ಮಾಡಿ, ಅದ್ಬುತ ನಟಿಯಾಗಿದ್ದಾರೆ. ಹಲವು ವೇದಿಕೆಗಳಲ್ಲಿ ನಮ್ಮ ದೇಶಾನ ಪ್ರತಿನಿಧಿಸಿದ್ದಾರೆ.

ಈಗ ಅಷ್ಟೊಂದು ನಟಿಸ್ತಿಲ್ಲ… ಆದ್ರೂ ಇವರ ಫ್ಯಾನ್ಗಳಿಗೇನೂ ಕಮ್ಮಿ ಇಲ್ಲ.ಇವರು ಬಿಗ್ ಬೀ ಅಮಿತ ಬಚನ್ ಅವರ ಸೊಸೆ ಸಹ ಆಗಿದ್ದಾರೆ.
5. ಕಪಿಲ್ ದೇವ್:-
ಕಾಲೇಜ್ ಅರ್ಧಕ್ಕೆ ಬಿಟ್ಟ ಪುಂಡ ಅಂತ ಅಂದಿದ್ರಂತೆ ಇವ್ರನ್ನ, 1983 ರಲ್ಲಿ ಇಡೀ ದೇಶಾನೇ ಹೆಮ್ಮೆ ಪಡೋ ಹಾಗೆ ಮಾಡಿದ್ರು.

ಡಿಗ್ರಿ ಇಲ್ದೆ ಇದ್ರೆ ಏನ್ ಸ್ವಾಮೀ? ಸಾಧನೆ ಮಾಡಕ್ಕೆ ಛಲ ಬೇಕು. ಡಿಗ್ರಿ ಇಟ್ಕೊಂಡಿರೋ ಎಷ್ಟ್ ಜನ ಕಪಿಲ್ ದೇವ್ ಆಗಿದ್ದಾರೆ ಹೇಳಿ? ಭಾರತಕ್ಕೆ ವಿಶ್ವ ಕಪ್ ತಂದು ಕೊಟ್ಟವರು.
6. ಸಚಿನ್ ತೆಂಡೂಲ್ಕರ್:-

ಹತ್ತನೇ ಕ್ಲಾಸ್ ಆದ್ಮೇಲೆ ಓದಲೇ ಇಲ್ಲ ಇವ್ರು. ಕ್ರಿಕೆಟ್..ಕ್ರಿಕೆಟ್..ಕ್ರಿಕೆಟ್! ಯಾವಾಗ್ಲೂ ಕ್ರಿಕೆಟ್ ಜಪ ಮಾಡಿ ಈಗ ಕ್ರಿಕೆಟ್ ದೇವರಾಗಿದ್ದಾರೆ.ಎಲ್ಲರಿಗೂ ಗೊತ್ತೇ ಇದೆ.
7. ಗೌತಮ್ ಅದಾನಿ:-

ಇವ್ರು ಪ್ರತಿಷ್ಟಿತ ಎಂ ಎನ್ ಸಿ ಅದಾನಿ ಗ್ರೂಪಿನ ಮಾಲೀಕರು. ಈ ಕಾಲೇಜು, ಕ್ಲಾಸು, ಡಿಗ್ರಿ, ಕಾಮರ್ಸು ಇವೆಲ್ಲ ಬೇಡಪ್ಪ ಅಂತ ಕೋಟ್ಯಾಂತರ ರುಪಾಯಿ ಬೆಲೆಬಾಳೋ ತನ್ನದೇ ಕಂಪನಿ ಶುರು ಮಾಡಿದ ಮಹಾನ್ ವ್ಯಕ್ತಿ ಇವರು.
8. ಮೇರಿ ಕಾಮ್:-

ಸ್ಕೂಲನ್ನ ಅರ್ಧಕ್ಕೆ ಬಿಟ್ಟು ಬಾಕ್ಸಿಂಗ್ ಮಾಡಕ್ಕೆ ಹೊರಟ ಇವರು 2012 ರಲ್ಲಿ ಒಲಂಪಿಕ್ಸ್ ಸ್ಪರ್ಧೆಗೆ ಅರ್ಹತೆ ಪಡೆದ ನಮ್ಮ ದೇಶದ ಏಕೈಕ ಮಹಿಳೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿಯೊಬ್ಬ ವ್ಯಕ್ತಿಯಲ್ಲೂ, ಎಲ್ಲರಿಗೂ ಅವರ ಜೀವನದಲ್ಲಿ ಅವರದೇ ಆದ ಕೆಲವು ಬಿಟ್ಟುಕೊಡದ ರಹಸ್ಯಗಳಿರುತ್ತವೆ. ಆಯಾ ಕಾಲ, ಸಂದರ್ಭದಲ್ಲಿ ಪ್ರತಿಯೊಬ್ಬರೂ ಗುಟ್ಟು ಇಟ್ಟುಕೊಂಡಿರುತ್ತಾರೆ. ತಮ್ಮ ಪರಮಾಪ್ತರಲ್ಲಿ ಕೂಡ ಕೆಲವೊಂದನ್ನು ಹಂಚಿಕೊಳ್ಳುತ್ತಾರಷ್ಟೆ.
ನೆನ್ನೆ ನಡೆದ ಇಂಡಿಯಾ ಹಾಗೂ ಪಾಕಿಸ್ತಾನದ ಹೈ ವೋಲ್ಟೇಜ್ ಪಂದ್ಯದಲ್ಲಿ ಇಂಡಿಯಾ ಪಾಕ್ ವಿರುದ್ಧ 89 ರನ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು. ಬಾರತದ ಈ ಗೆಲುವನ್ನು ಎಲ್ಲರೂ ಪಟಾಕಿ ಹಚ್ಚಿ, ಸಹಿ ತಿಂದು, ಪಾರ್ಟಿ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರೆ ಕೆಲ ಮಾಡೆಲ್ಗಳು ಸ್ಪರ್ಧೆ ನೀಡುವ ರೀತಿಯಲ್ಲಿ ನ್ಯೂಡ್ ಫೋಟೋಗಳನ್ನು ನೀನಾ – ನಾನಾ ಎಂದು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಟೀಂ ಇಂಡಿಯಾ ಗೆಲುವಿಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ಇನ್ನೂ ಈ ಫೋಟೋಗಳಂತ್ತು…
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಜನವರಿ 13ರಂದು ರಾತ್ರಿ 7.30ಕ್ಕೆ ಕೊನೆಯ ಸಂಚಿಕೆಯೊಂದಿಗೆ ಮುಕ್ತಾಯವಾಗಿದೆ. ಈ ದಾರವಾಹಿ ಇದುವರೆಗೂ 416 ಕಂತುಗಳ ಪ್ರಸಾರ ಆಗಿದೆ.
ಮೇಷ ರಾಶಿ ಭವಿಷ್ಯ (Monday, November 22, 2021) ಮೇಷರಾಶಿಯಲ್ಲಿ ಹುಟ್ಟಿದವರಲ್ಲಿ ನಿಮ್ಮ ಅಸೂಯೆ ವರ್ತನೆ ನಿಮ್ಮನ್ನು ದುಃಖಿಗಳಾಗಿಯೂ ಮತ್ತು ಖಿನ್ನರಾಗಿಯೂ ಮಾಡಬಹುದು. ಆದರೆ ಇದು ಒಂದು ಸ್ವಯಂಕೃತ ಗಾಯವಾಗಿರುವುದರಿಂದ ಇದರ ಬಗ್ಗೆ ಪ್ರಲಾಪಿಸುವ ಅಗತ್ಯವಿಲ್ಲ. ಇತರರ ಸಂತೋಷ ಮತ್ತು ಅತೃಪ್ತಿಯನ್ನು ಹಂಚಿಕೊಳ್ಳುವ ಮೂಲಕ ಇದನ್ನು ತೊಡೆದುಹಾಕಲು ಪಣತೊಡಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಬೇಕು. ನೀವು ಕುಟುಂಬದ ಸದಸ್ಯರ ಜೊತೆ ಸ್ವಲ್ಪ ತೊಂದರೆ ಹೊಂದಿದ್ದರೂ ಇದು ನಿಮ್ಮ ಮನಶ್ಶಾಂತಿಯನ್ನು ಹಾಳು ಮಾಡಲು ಅವಕಾಶ ನೀಡಬೇಡಿ….
ಮೌಂಟ್ ಮೌಂಗನುಯಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ, ಕಳೆದ ತಿಂಗಳು ಅತ್ಯಂತ ಕೆಳಮಟ್ಟದಲ್ಲಿರುವ ತಂಡವಾಗಿದ್ದು, ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ಅನ್ನು ಎಂಟು ವಿಕೆಟ್ಗಳಿಂದ ಸೋಲಿಸಿತು. ಕ್ರಿಕೆಟ್ನಲ್ಲಿನ ಪವಾಡಗಳ ಪಟ್ಟಿಗೆ ಇದು ಒಂದು ಹೊಸ ಸೇರ್ಪಡೆ. ಬಾಂಗ್ಲಾದೇಶ ಟೆಸ್ಟ್ನಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಅನ್ನು ಸೋಲಿಸಿ 17 ಪಂದ್ಯಗಳ ಅಜೇಯ ತವರಿನ ದಾಖಲೆಯನ್ನು ಮುರಿಯಿತು. ಇದು ಅವರ ಆರನೇ ವಿದೇಶಿ ಟೆಸ್ಟ್ ಗೆಲುವು. ಆದರೆ ಅಂಕಿಅಂಶಗಳು, ಟ್ರಿವಿಯಾ ಮತ್ತು ಮೈಲಿಗಲ್ಲುಗಳಿಗಿಂತಲೂ ಹೆಚ್ಚು ಎದ್ದುಕಾಣುವ ಅಂಶವೆಂದರೆ ಬಾಂಗ್ಲಾದೇಶವು ನ್ಯೂಜಿಲೆಂಡ್ನಲ್ಲಿ ಹೇಗೆ…
ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾದ ಬಗ್ಗೆ ಹಲವರಿಗೆ ತಿಳಿದಿಲ್ಲ, ಅದನ್ನ ಕೇವಲ ಅಡುಗೆಗೆ ಮಾತ್ರ ಬಳಸುತ್ತಾರೆ ಎಂದು ತಳಿದಿದ್ದಾರೆ. ಆದರೆ ಇದರಿಂದ ಅಡುಗೆಗೆ ಮಾತ್ರವಲ್ಲದೆ ಹಲವು ಅರೋಗ್ಯ ಸಮಸ್ಯೆಗಳಿಗೂ ಸಹ ಬಳಸ ಬಹುದು. ಅದು ಹೇಗೆ ಎಂಬುದು ಇಲ್ಲಿದೆ ನೋಡಿ.