ಕ್ರೀಡೆ

ಖ್ಯಾತ ಬ್ಯಾಡ್ಮಿಂಟನ್ ತಾರೆ,ಈಗ ಜಿಲ್ಲಾಧಿಕಾರಿ!ಇದಕ್ಕೆ ನಿಮ್ಮ ಸಹಮತವೇನು?ಈ ಲೇಖನಿ ಓದಿ,ಕಾಮೆಂಟ್ ಮಾಡಿ ತಿಳಿಸಿ…

1073

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸಿಂಧುಗೆ ಹಸ್ತಾಂತರಿಸಿದ್ದರು. 30 ದಿನಗಳೊಳಗೆ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸುವಂತೆ ಆಂಧ್ರ ಸರ್ಕಾರ ಸಿಂಧುಗೆ ಸೂಚಿಸಿತ್ತು. ಹಾಗೂ ಸಿಂಧು ಅವರನ್ನು ಗ್ರೂಪ್-1 ಹುದ್ದೆಗೆ ನೇಮಕ ಮಾಡಲು ರಾಜ್ಯ ಸಾರ್ವಜನಿಕ ಸೇವಾ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು.

ಇದಕ್ಕೆ ಪ್ರತಿಕ್ರಯಿಸಿದ್ದ ಸಿಂಧುರವರು, ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು ಹಾಗೂ ಬ್ಯಾಡ್ಮಿಂಟನ್ ಗೆ ತಮ್ಮ ಮೊದಲ ಆದ್ಯತೆ ಅಂತಾ ಹೇಳಿದ್ದರು. ಆಗ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುರವರು ಸಿಂಧುಗೆ ಶುಭ ಹಾರೈಸಿ, ದೇಶಕ್ಕೆ ಮತ್ತಷ್ಟು ಪದಕಗಳನ್ನು ಗೆದ್ದು ತರಲಿ ಅಂತಾ ಹೇಳಿದ್ರು.

ಹೀಗಾಗಿ ಭಾರತದ ಖ್ಯಾತ ಶಟಲ್‌ ಬ್ಯಾಡ್ಮಿಂಟನ್‌ ಆಟಗಾರ್ತಿ, ಒಲಿಂಪಿಕ್‌ ಪದಕ ವಿಜೇತೆ, ಪಿ ವಿ ಸಿಂಧು ಆಂಧ್ರ ಪ್ರದೇಶ ಸರಕಾರದಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸಿಂಧು ಅವರಿಗೆ ಕಳೆದ ಜು.27ರಂದೇ ಜಿಲ್ಲಾಧಿಕಾರಿಯಾಗಿ ಅಧಿಕೃತ ನೇಮಕಾತಿ ಪತ್ರವನ್ನು ನೀಡಲಾಗಿತ್ತು. ಆದರೆ ಅವರು ನಿನ್ನೆ ಬುಧವಾರ ಔಪಚಾರಿಕವಾಗಿ ತಮ್ಮ ಅಧಿಕಾರ ವಹಿಸಿಕೊಂಡರು.

ಪಿ ವಿ ಸಿಂಧುರವರ ಬಾಲ್ಯದ ಬಗ್ಗೆ ತಿಳಿಯೋಣ:-

ಪಿ.ವಿ ಸಿಂಧುರವರು, 5 ಜುಲೈ 1995ರಂದು ಹೈದರಾಬಾದ್ನoಲ್ಲಿ ಜನಿಸಿದರು. ತಂದೆ ಪಿ.ವಿ. ರಮಣ ಮತ್ತು ತಾಯಿ ಪಿ. ವಿಜಯ. ಸಿಂಧುವಿನ ತಂದೆ-ತಾಯಿ ಇಬ್ಬರೂ ಸಹ ಮಾಜಿ ವಾಲಿಬಾಲ್ ಆಟಗಾರರಾಗಿರುವುದೊಂದು ವಿಶೇಷ. ಭಾರತ ಸರ್ಕಾರವು ಕೊಡಮಾಡುವ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಪಿ.ರಮಣರು 2000 ನೆಯ ಇಸವಿಯಲ್ಲಿ ಭಾಜನರಾಗಿದ್ದಾರೆ. ತಂದೆ ವೃತ್ತಿಪರ ವಾಲಿಬಾಲ್ ಆಟಗಾರರಾಗಿದ್ದರೂ ಸಹ ಸಿಂಧು ಮಾತ್ರ ಬ್ಯಾಡ್ಮಿಂಟನ್ ನಡೆಗೆ ಆಕರ್ಷಿತರಾದರು.ಅದಕ್ಕೆ ಕಾರಣ, 2001 ರ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಪುಲ್ಲೇಲ ಗೋಪಿಚಂದ್‍‍ರ ಯಶಸ್ಸು ಮತ್ತು ಅವರಿಂದ ಪಡೆದ ಸ್ಫೂರ್ತಿ. ತನ್ನ ಎಂಟನೆಯ ವಯಸ್ಸಿನಲ್ಲೇ ಸಿಂಧು ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ್ದರು, ಇದೂ ಸಹ ಅವರನ್ನು ಬ್ಯಾಡ್ಮಿಂಟನ್ ಕಡೆಗೆ ಸೆಳೆಯಲು ಕಾರಣವಾಯಿತು.

ಪಿ.ವಿ ಸಿಂಧುರವರ ಬ್ಯಾಡ್ಮಿಂಟನ್ ಸಾಧನೆ:-

ಪಿ.ವಿ ಸಿಂಧುರವರು ಅಂತರರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ. ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಇವರು, ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ. 10 ಆಗಸ್ಟ್ 2012 ರಂದು ಇವರು ಚೀನಾ ದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ (ಪ್ರಕಾಶ್ ಪಡುಕೋಣೆ 1983 ರಲ್ಲಿ ಕಂಚು ಗೆದ್ದಿದ್ದಾರೆ. ಅನಂತರ ಭಾರತದ ಮೊದಲ ಸಿಂಗಲ್ಸ್ ಪದಕ) ನ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಸೆಪ್ಟೆಂಬರ್ 21,2012 ರಂದು ಬಿಡುಗಡೆ ಮಾಡಲಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕಗಳಲ್ಲಿ ಮೊದಲ 20ರೊಳಗಿನ ಶ್ರೇಣಿಯಲ್ಲಿದ್ದರು. ಬಿಡಬ್ಲ್ಯೂಎಫ್ ಜೂನಿಯರ್ ಶ್ರೇಯಾಂಕಗಳಲ್ಲಿ 3 ನೇ ಸ್ಥಾನದಲ್ಲಿದ್ದಾರೆ.

ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ:-

ಭೂ ಆಡಳಿತೆಯ ಮುಖ್ಯ ಆಯುಕ್ತರಾಗಿರುವ ಅನಿಲ್‌ ಚಂದ್ರ ಪುನೇತ ಅವರಿಗೆ ಪಿ ವಿ ಸಿಂಧು ತಮ್ಮ ನೇಮಕಾತಿ ಪತ್ರವನ್ನು ಸಲ್ಲಿಸಿ ಗ್ರೂಪ್‌ 1 ಸರಕಾರಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಸರಕಾರಿ ಆಡಳಿತೆಯಲ್ಲಿನ ತಮ್ಮ ಜೀವನದ ಹೊಸ ಪಾತ್ರವನ್ನು ಆರಂಭಿಸಿದರು.

ಸಿಂಧು ಅವರ ತನ್ನ ಹೆತ್ತವರೊಡಗೂಡಿ ಸರಕಾರದ ಭೂ ಆಡಳಿತೆಯ ಮುಖ್ಯ ಆಯುಕ್ತರ ಕಚೇರಿಗೆ ತೆರಳಿ ಗೊಲ್ಲಪುಡಿಯಲ್ಲಿನ ಸರಕಾರಿ ಸಚಿವಾಲಯದಲ್ಲಿ ಅಧಿಕಾರ ಗ್ರಹಣ ಮಾಡಿದರು.

 

ಸಿಂಧು ಎರಡು ಬಾರಿಯ ಕಂಚಿನ ಪದಕ ವಿಜೇತೆಯಾಗಿದ್ದಾರೆ.

ಸ್ನೇಹಿತರೆ ನಮ್ಮ ಪ್ರಕಾರ ಯಾವುದೇ ಕ್ರೀಡೆಯಲ್ಲಿ ಯಾರೇ ಆಗಲಿ, ನಮ್ಮ ದೇಶಕ್ಕೆ ಪದಕ ತಂದು ಕೊಡುವಲ್ಲಿ ಸಫಲ ರಾಗಿದ್ದಲ್ಲಿ, ಅಂತಹ ಕ್ರೀಡಾ ಪಟುಗಳಿಗೆ ಅದೇ ಕ್ರೀಡೆಯಲ್ಲಿ ಮುಂದುವರಿಯಲು, ಅವರಿಗೆ ಆರ್ಥಿಕವಾಗಲಿ, ಅಥವಾ ಬೇರೆ ಯಾವುದೇ ರೀತಿಯಿಂದಾಗಲಿ, ಸರಕಾರಗಳು ಪ್ರೋತ್ಸಾಹ ಕೊಡಬೇಕು ಮತ್ತು ಅವರನ್ನು ಬೆಳೆಸಬೇಕು.

ಅದು ಬಿಟ್ಟು ಸರಕಾರಗಳು ತಮ್ಮ ತೋರಿಕೆಗಾಗಿ ಅಧಿಕಾರದ ಗದ್ದುಗೆಯನ್ನು ಕೊಟ್ಟರೆ, ಈ ಅಧಿಕಾರದ ಮಾಯೆ ಕ್ರೀಡೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತದಯೇ? ಹಾಗೂ ಇನ್ನಷ್ಟು ಮತ್ತಷ್ಟು ಪದಕಗಳು ನಮ್ಮ ದೇಶಕ್ಕೆ ಬರಲು ಸಾಧ್ಯವೇ? ನಾವು ನಮ್ಮ ದೇಶದ ಹೆಸರನ್ನು ಸಾಗರದಾಚೆ ಕೊಂಡಯ್ಯುವಂತ, ಉತ್ತಮ ಕ್ರೀಡಾಪಟುವನ್ನು ಕಳೆದುಕೊಂಡಂತೆ ಆಗುವುದಿಲ್ಲವೇ? ಇದಕ್ಕೆ ನಿಮ್ಮ ಅಭಿಪ್ರಾಯವನ್ನು ನಿಮ್ಮ ಕಾಮೆಂಟ್ ಮೂಲಕ ತಿಳಿಸಿ…

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಹಣ ಕಾಸು

    ಡೆಬಿಟ್‌ ಕಾರ್ಡ್‌ ಪಾವತಿಗಿನ್ನು ವ್ಯವಹಾರ ಶುಲ್ಕ ಇಲ್ಲ..!ತಿಳಿಯಲು ಈ ಲೇಖನ ಓದಿ..

    ಡೆಬಿಟ್ ಕಾರ್ಡ್, ಭೀಮ್ ಸೇರಿದಂತೆ ಆನ್ ಲೈನ್ ವಹಿವಾಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಇತರೆ ಆಪ್ ಗಳನ್ನು ಬಳಸುತ್ತಿದ್ದವರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ.

  • ಉಪಯುಕ್ತ ಮಾಹಿತಿ

    ಬೇಲದ ಹಣ್ಣಿನಲ್ಲಿರುವ ಈ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

    ಬಿಲ್ವಪತ್ರೆ ಎಲೆಯನ್ನು ನಾವು ಶಿವಪೂಜೆಗೆ ಉಪಯೋಗಿಸುತ್ತೇವೆ. ಆದರೆ ಅದರ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಈ ಬಿಲ್ವ ಪತ್ರೆ ಹಣ್ಣು ದೇಹಕ್ಕೆ ತಂಪು ಮತ್ತು ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಉತ್ತಮವಾದ ಔಷಧಿ. ಬೇಸಿಗೆ ಕಾಲದಲ್ಲಿ ಈ ಹಣ್ಣಿನ ಸೇವನೆ ಉತ್ತಮ. ಅಲ್ಲದೆ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಗ್ಯಾಸ್ಟ್ರಿಕ್, ಅಲ್ಸರ್, ಮೂತ್ರಪಿಂಡದ ಸಮಸ್ಯೆ, ಮಲಬದ್ಧತೆ, ಅಜೀರ್ಣ ಸಮಸ್ಯೆಯಿದ್ದರೆ ಈ ಹಣ್ಣನ್ನು ತಿನ್ನಬಹುದು. ಇದೊಂದು ಎನರ್ಜಿ ಡ್ರಿಂಕ್ ಅಂತಲೇ ಹೇಳಲಾಗುತ್ತದೆ. ತೂಕ ಇಳಿಸಲು ಬಯಸುವವರು ಈ ಹಣ್ಣನ್ನು…

  • ಉಪಯುಕ್ತ ಮಾಹಿತಿ

    ಮನೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಬಳಸುತ್ತೀರಾ.? ಹಾಗಾದರೆ ಇದನೊಮ್ಮೆ ಇಗಲೇ ತಿಳಿದುಕೊಳ್ಳಿ.!

    ನಿಮ್ಮ ಕುಟುಂಬದ ಸದಸ್ಯರ ಸುರಕ್ಷತೆಯ ಬಗ್ಗೆ ಯೋಚಿಸಿದ್ದೀರಾ ? ನಿಮ್ಮ ಮನೆಯಲ್ಲಿ , ನಿಮ್ಮ ಅಮ್ಮ , ಅಕ್ಕ, ಹೆಂಡತಿ ಅಡುಗೆಮನೆಯಲ್ಲಿ ವರ್ಷದ 365 ದಿನಗಳು ಬಿಡುವಿಲ್ಲದೆ ಕೆಲಸ ಮಾಡುತ್ತಾರೆ. ಅಡುಗೆಮನೆಯಲ್ಲಿ ಗ್ಯಾಸ್ ಸಿಲಿಂಡರ ಲೀಕ್ ನಿಂದ ಆಗುವ ಭಾರಿ ದುರಂತವನ್ನು ನಾವುಗಳು ಪೇಪರಿನಲ್ಲಿ, ನ್ಯೂಸ್ ಚಾನೆಲ್ಸ್ ಗಳಲ್ಲಿ ನೋಡ್ತಾ ಇರುತೇವೆ , ಆದರೆ ಗ್ಯಾಸ್ ಲೀಕ್ , ಅಥವಾ ಸ್ಪೋಟದಿಂದ ಆಗುವ ಅನಾಹುತ ಭಾರಿ ದೊಡ್ಡದು, ಅದರಿಂದ ನಮ್ಮ ಕುಟುಂಭದ ರಕ್ಷಣೆ ಕೊಡ ನಮ್ಮ ದೊಡ್ಡ…

  • ಕವಿ ಪರಿಚಯ

    ಜ್ಞಾನಪೀಠ ಪ್ರಶಸ್ತಿ ಪಡೆದ ದ.ರಾ.ಬೇಂದ್ರೆಯವರ ಒಂದು ಕಿರುಪರಿಚಯದ ಬಗ್ಗೆ, ತಿಳಿಯಲು ಈ ಲೇಖನ ಓದಿ..

    ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ್ದ ಕನ್ನಡದ ವರಕವಿ, ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಲ್ಲೊಬ್ಬರು.

  • ಸುದ್ದಿ

    ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೈಗೆ ಜಾತಿ ಸೂಚಕ ಬ್ಯಾಂಡ್​ಗಳು ಕಡ್ಡಾಯ

    ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿ ತಾಲೂಕಿನ ಶಾಲೆಯ ಶಿಕ್ಷಕಿಯೊಬ್ಬರು ದಲಿತ ಮಕ್ಕಳನ್ನು ಮೈನಸ್ ಎಂದು ಮೇಲ್  ಜಾತಿಯ ಮಕ್ಕಳನ್ನು ಪ್ಲಸ್  ಎಂದು ಕರೆದಿರುವುದು ಸಹ ಇದೀಗ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ  ಜಾತಿವಿಷವನ್ನುಬೇರುಮಟ್ಟದಿಂದತೊಲಗಿಸಬೇಕುಎಂದುರಾಷ್ಟ್ರಾದಾದ್ಯಂತಎಲ್ಲಾರಾಜ್ಯಗಳಶಿಕ್ಷಣಇಲಾಖೆಗಳುಸಾಕಷ್ಟುಪ್ರಯತ್ನಪಡುತ್ತಿವೆ. ಆದರೆ, ಇಂತಹಸಂದರ್ಭದಲ್ಲಿತಮಿಳುನಾಡಿನಮಧುರೈಜಿಲ್ಲೆಯಹಲವುಖಾಸಗಿಶಾಲೆಗಳಲ್ಲಿಮಕ್ಕಳವಿದ್ಯಾರ್ಥಿಜೀವನದಿಂದಲೇಈವಿಷವನ್ನುಮತ್ತಷ್ಟುಬಲವಾಗಿಮನಸ್ಸಿನಆಳಕ್ಕೆಇಳಿಸುವಪ್ರಯತ್ನನಡೆಸಲಾಗುತ್ತಿದೆ. ಇಲ್ಲಿಶಿಶುವಿಹಾರದಿಂದಲೇಮಕ್ಕಳುಕಡ್ಡಾಯವಾಗಿಅವರರವರಜಾತಿಯನ್ನುಸೂಚಿಸುವಬಣ್ಣಬಣ್ಣದಪಟ್ಟಿಯನ್ನುಕೈಗೆಕಟ್ಟಿಕೊಂಡುಬರಬೇಕುಎಂಬಕೆಟ್ಟಸಂಪ್ರದಾಯವನ್ನುಆಚರಿಸಲಾಗುತ್ತಿದೆಎಂಬಆಘಾತಕಾರಿವಿಚಾರವರದಿಯಾಗಿದೆ. ವಿದ್ಯಾರ್ಥಿಗಳುಶಾಲೆಗೆಬರುವಾಗಕೆಂಪು, ಹಳದಿ, ಹಸಿರುಹಾಗೂಬಿಳಿಬಣ್ಣದಪಟ್ಟಿಗಳನ್ನುಕಟ್ಟಿಕೊಂಡುಬರುತ್ತಾರೆ. ಈಮೂಲಕಅವರುಯಾವಜಾತಿಯವರುಎಂಬುದುಶಿಕ್ಷಕರಿಗೆಖಚಿತವಾಗುತ್ತದೆ. ಹೀಗೆದಲಿತರನ್ನುಮೇಲ್ವರ್ಗದವಿದ್ಯಾರ್ಥಿಗಳಿಂದಬೇರ್ಪಡಿಸಿಕೂರಿಸುವಹಾಗೂತಾರತಮ್ಯದಶಿಕ್ಷಣನೀಡುವಮೂಲಕವಿದ್ಯಾರ್ಥಿಜೀವನದಿಂದಲೇಮಕ್ಕಳಮನಸ್ಸಿನಲ್ಲಿಜಾತಿಎಂಬಸಂಕೋಲೆಯನ್ನುಬೆಳೆಸಲಾಗುತ್ತಿದೆ.

  • ಸುದ್ದಿ

    ಬಸ್ ನ ಚಕ್ರ ಸ್ಫೋಟಗೊಂಡು 34 ಮಂದಿ ಪ್ರಯಾಣಿಕರಿದ್ದ ಬಸ್ ಪಲ್ಟಿ…!

    ಚಿಕ್ಕೋಡಿ: ಚಕ್ರ ಸ್ಫೋಟಗೊಂಡು ಚಲಿಸುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಸುಮಾರು 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ನಡೆದಿದೆ. ಸಾರಿಗೆ ಬಸ್ ಗೋಕಾಕ್‍ನಿಂದ ಸಂಕೇಶ್ವರ ಪಟ್ಟಣದತ್ತ ಹೋಗುತಿತ್ತು. ಬಸ್ಸಿನಲ್ಲಿ ಸುಮಾರು 34 ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಹೋಗುತಿತ್ತು. ಬಸ್ ರಕ್ಷಿ ಗ್ರಾಮದ ಹೊರವಲಯದ ಯರಗಟ್ಟಿ – ಸಂಕೇಶ್ವರ ರಾಜ್ಯ ಹೆದ್ದಾರಿ ಮೇಲೆ ಬರುತ್ತಿದ್ದಂತೆ ಏಕಾಏಕಿ…