ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅದೊಂದು ಊರು ಇದೆ ಅಲ್ಲಿ ಹೆಂಗಸರದ್ದೇ ಕಾರುಬಾರು ! ಅಲ್ಲಿನ ಮನೆಯ ಪ್ರತಿಯೊಂದು ನಿರ್ಣಯಗಳೂ ಕೂಡ ಮಹಿಳಾ ನಿರ್ಧರಿತವಾಗಿರುತ್ತವೆ. ಅದೂ ಸಾಲದೆಂಬಂತೆ ನಮ್ಮ ಕಡೆ ಹುಟ್ಟಿದ ಮಕ್ಕಳ ಹೆಸರಿನ ಜೊತೆಗೆ ತಂದೆಯ ಹೆಸರು ಸೇರಿಸುವುದು ಸಂಪ್ರದಾಯಿಕವಾಗಿದೆ. ಆದರೆ ಆ ಊರಿನಲ್ಲಿ ಮಕ್ಕಳ ಹೆಸರಿನ ಜೊತೆ ತಾಯಿಯ ಹೆಸರನ್ನು ಸೇರಿಸುತ್ತಾರೆ ಎಂಬುದು ಆಶ್ಚರ್ಯಕರ ವಿಚಾರ .
ಅದಲ್ಲದೆ ಈ ಊರಿನ ವಿಚಾರವು ಬಿ.ಬಿ.ಸಿ ಯಂತಹಾ ಅಂತರಾಷ್ಟ್ರೀಯ ಚಾನಲ್ ಗಳಲ್ಲೂ ಕೂಡ ಬಹಳ ಸಲ ಹೊಗಳಲ್ಪಟ್ಟಿದೆ !ಅಂದರೆ “ಈ ಊರಿನಾಗೆ ಹೆಂಗಸ್ರುದೇ ಕಾರುಬಾರು ನೋಡ್ಕಳಿ “ಅಂತೇನೂ ಆ ಚಾನಲ್ಲಿನವರು ಹೊಗಳಿಲ್ಲ ! ಅವರು ಹೊಗಳಿರುವುದು “ಈ ಊರು ಇಡೀ ಏಷ್ಯಾದಲ್ಲಿಯೇ ಅತ್ಯಂತ ಸ್ವಚ್ಚವಾದ ಊರು ಹಾಗೂ ಅತ್ಯಂತ ಸುಶಿಕ್ಷಿತ ಜನರು “ಎಂದು ಹೊಗಳಿದ್ದಾರೆ .
ಅದಲ್ಲದೆ ಇವರೆಲ್ಲರೂ ಹೊಗಳುವ ಮುಂಚೆಯೇ ಆ ಊರಿಗೆ “ದೇವರ ಸ್ವಂತದ ಉದ್ಯಾನವನ”ಎಂಬ ಹೆಸರು ಅಂಟಿಕೊಂಡಿತ್ತು ! ಸರಿಸುಮಾರು ‘ದೇವರ ಸ್ವಂತ ನಾಡು’ಎಂದು ಹೆಸರು ಪಡೆದಿರುವ ಕೇರಳಕ್ಕೆ ಸಡ್ಡು ಹೊಡೆಯುವಂತಹಾ ನಿಸರ್ಗ ಈ ಊರಿನ ಹೆಮ್ಮೆ !
ಈ ಊರು ಇರುವುದು ಭಾರತದ ಮೇಘಾಲಯದಲ್ಲಿ .ಊರಿನ ಹೆಸರು ಮೌಲಿನ್ನಾಂಗ್ ಎಂದಿದೆ.ಇಂತಹದಕ್ಕಿಂತಲೂ ಸಾವಿರಪಟ್ಟು ಹೆಚ್ಚು ಮಹಿಳಾ ಸ್ವಾತಂತ್ರ್ಯ ಇರುವ ಮತ್ತೊಂದು ಸಮುದಾಯವಿದೆ ಅದು ಇರುವುದು ಸಹಾರಾ ಮರುಭೂಮಿಯ ಅಕ್ಕ ಪಕ್ಕ .ಅದರ ಹೆಸರು “ಟೌರೆಗ್” .ಅದೊಂದು ವಿಚಿತ್ರ ಮುಸ್ಲಿಂ ಸಮುದಾಯ.
ಈ ಸಮುದಾಯದಲ್ಲಿ ನಾವೀಗ ನೋಡುತ್ತಿರುವಂತೆ ಹೆಂಗಸರೆಲ್ಲಾ ಮುಖ ಮುಚ್ಚುವ ಬುರ್ಕಾ ಹಾಕಿಕೊಂಡು ಜೀವನ ಸಾಗಿಸುವುದಿಲ್ಲ. ಈ ಸಮುದಾಯವು ಪ್ರಪಂಚದ ಎಲ್ಲ ಮುಸ್ಲಿಂ ಸಮುದಾಯಕ್ಕಿಂತಲೂ ವಿಭಿನ್ನ !ಇವರ ಸಮುದಾಯದಲ್ಲಿ ಗಂಡಸರೇ ಮುಖಕ್ಕೆ ಬುರ್ಖಾ ಧರಿಸಿ ಓಡಾಡಬೇಕಿದೆ ,ಹೆಂಗಸರು ತಮಗಿಷ್ಟ ಬಂದಂತಹಾ ಬಟ್ಟೆ ಧರಿಸಿ ಓಡಾಡುತ್ತಾರೆ .
ಇದು ಸಂಪ್ರದಾಯ ಎನ್ನುವುದಕ್ಕಿಂತ ಅಲ್ಲಿನ ಗಂಡಸರಿಗೆ ಇರುವ ಭಯ ಅಂತಲೇ ಹೇಳುವುದು ಸೂಕ್ತ. ಯಾಕಂದರೆ ಈ ಗಂಡಸರು ಮುಖ ಮುಚ್ಚಿಕೊಳ್ಳುವುದು ಎಲ್ಲಿ ಟೌರೆಗ್ ಮುಸ್ಲಿಂ ಮಹಿಳೆಯರು ಎತ್ಹಾಕಿಕೊಂಡು ಹೋಗಿ ಏನಾದ್ರೂ ಮಾಡಿ ಬಿಡುತ್ತಾರೋ ಎಂಬ ಭಯಕ್ಕೆ ಹಾಗೆ ಮುಸುಗು ಧರಿಸುವುದು !
ಕಿಡ್ನಾಪ್ ಮಾಡಿದ ಈ ಟೌರೆಗ್ ಹೆಂಗಸರು ಕೇವಲ ಒಬ್ಬರೇ ಕಿಡ್ನಾಪ್ ಮಾಡದೇ ಹತ್ತು ಹದಿನೈದು ಹುಡುಗಿಯರು ಒಟ್ಟಾಗಿ ಸೇರಿ ಕಿಡ್ನಾಪ್ ಮಾಡುತ್ತಾರೆ ಎಂಬ ವಿಚಾರವಿದೆ.
ಈ ಮುಸ್ಲಿ ಸಮುದಾಯವು ಈಜಿಪ್ಟಿನಿಂದ ಬಂದದ್ದು ಲಿಬಿಯಾದಿಂದ ಬಂದದ್ದು ವರ್ಜೀನಿಯಾದಿಂದ ಬಂದದ್ದು ಎಂದು ಇತಿಹಾಸಕಾರರು ಮನಬಂದಂತೆ ಹೇಳುತ್ತಿದ್ದಾರಾದರೂ ದಾಖಲೆಗಳೊಂದೂ ಲಭ್ಯವಿಲ್ಲ ಆದರೂ ಈ ಮಹಿಳೆಯರು ಮಾತ್ರ ಬುರ್ಖಾ ಧರಿಸದ ಯಾವನಾದರೂ ಚೆನ್ನಾಗಿ ಕಂಡರೆ ಮಾತ್ರ ಕಿಡ್ನಾಪ್ ಮಾಡುವುದು ಮಾತ್ರ ದಾಖಲೆ ಸಹಿತ ಇತಿಹಾಸದಲ್ಲಿ ದಾಖಲೆಯಾಗಿದೆ .
ಅದರಲ್ಲಿಯೂ ಇಲ್ಲಿನ ಗಂಡಸರು ನೀಲಿ ಬಣ್ಣದ ಬುರ್ಖಾ ಧರಿಸಿರಬೇಕೆಂಬ ಕಾನೂನು ಇದೆ ಹಾಗಾಗಿ ಇವರಿಗೆ ‘ದ ಬ್ಲೂ ಮನ್ ಆಫ್ ಸಹಾರಾ’ ಎಂಬ ಹೆಸರಿದೆ ಇದರ ಜೊತೆಗೆ ಗಂಡಸರು ಸಂಜೆಯಾಗುತ್ತಿದ್ದಂತೆಯೇ ಹೊರಹೋದರೆ ಅದಾವ ಹುಡುಗಿ ನಮ್ಮನ್ನು ಅಟ್ಟಾಸಿಕೊಂಡು ಬಟ್ಟೆ ಹರಿದು ಅತ್ಯಾಚಾರ ಮಾಡಿಬಿಡುತ್ತಾಳೋ ಎಂಬ ಭಯವೂ ಇದೆ !
ಮತ್ತೊಂದು ಆಶ್ಚರ್ಯದ ವಿಚಾರ ಏನೆಂದರೆ ಈ ಹುಡುಗಿಯರು ಊರಿನಲ್ಲಿ ಯಾರ ಜೊತೆಗೆ ಬೇಕಿದ್ದರೂ ಸಂಭಂದ ಇಟ್ಟುಕೊಳ್ಳಬಹುದು. ಈ ವಿಚಾರವನ್ನು ಮನೆಯವರಾಗಲೀ ತನ್ನ ಗಂಡನಾಗಲೀ ಪ್ರಶ್ನಿಸುವಂತಿಲ್ಲ ಹಾಗೇನಾದರೂ ಪ್ರಶ್ನಿಸಿದರೆ ಅಕ್ಕಪಕ್ಕದ ಹೆಂಗಸರೆಲ್ಲಾ ಸೇರಿಕೊಂದು ಮಕ್ ಮಕ್ಕೆ ಕುಟ್ಟಿಬಿಡುತ್ತಾರೆ ಎಂಬುದೂ ಕೂಡ ಇತಿಹಾಸ ಕಂಡ ಸತ್ಯ.
ಹೀಗೆ ಗಂಡನಾದವನು ತನ್ನ ಈ ಅಪರೂಪದ ಅನೈತಿಕ ಸಂಭಂದದ ವಿರುದ್ಧ ಎಗರಾಡಿದ್ದೇ ಆದರೆ ಆ ಹೆಂಡತಿಯು ತನ್ನ ಗ್ರಾಮದ ಹಿರಿಯ ಹೆಂಗಸಿಗೆ ತಿಳಿಸಿ ತನ್ನ ಅಪರೂಪದ ಸಂಭಂದ ಹದಗೆಡಿಸುತ್ತಿರೋ ಈ ಗಂಡ ನನಗೆ ಬೇಡ ಎಂದು ಬೈಯ್ದು ಡೈವೋರ್ಸ್ ಕೊಡುತ್ತಾಳೆ.
ಈ ಡೈವೋರ್ಸ್ ಪ್ರೋಗ್ರಾಮನ್ನು ಅಕ್ಕಪಕ್ಕದ ಎರಡೂ ಊರುಗಳಲ್ಲಿ ಹಬ್ಬ ಎಂದು ಆಚರಿಸುತ್ತಾರೆ, ಏಕೆಂದರೆ ಈ ಅಮಾಯಕ ಹೆಂಡತಿಯು ಕೆಟ್ಟ ಗಂಡನಿಂದ ದೂರವಾಗಿದ್ದಾಳೆ ಹಾಗಾಗಿ ಈ ಯುವತಿಯನ್ನು ಯಾರು ಬೇಕಿದ್ದರೂ ‘ಕೂಡಾಣಿಕೆ’ ಮಾಡಿಕೊಳ್ಳಬಹುದು ಎಂದು ಈ ಹಬ್ಬ ಅಷ್ಟೇ !
ಈ ಡೈವೋರ್ಸ್ ಕೇಸಿನಲ್ಲಿ ಬಹಳ ಚೆಂದ ಇರುವ ವಿಚಾರ ಏನೆಂದರೆ ಗಂಡನೇ ತನಗೆ ಈ ಹೆಂಡತಿ ಬೇಡವೆಂದು ಗ್ರಾಮಸ್ಥರ ಮೊರೆ ಹೊಕ್ಕರೆ ನಂತರ ಗಂಡನಾದವನೇ ತನ್ನ ಹೆಂಡತಿ ಬದುಕಲಿಕ್ಕಾಗಿ ತನ್ನ ಅರ್ಧ ಆಸ್ತಿ ಬಿಟ್ಟು ಕೊಡಬೇಕಾಗುತ್ತದೆ. ಇದನ್ನು ಬಿಟ್ಟು ಹೆಂಡತಿ ಏನಾದರೂ ತನಗೆ ಈ ಕೆಟ್ಟ ಗಂಡ ಬೇಡವೆಂದರೆ ಸಾಕು ಆತನ ಇಡೀ ಆಸ್ತಿ ಹೆಂಡತಿಯ ಪಾಲಾಗುತ್ತದೆ !
ಇದೆಲ್ಲದರ ಹೆನ್ನೆಲೆ ಹುಡುಕಿದರೆ “ಟಿನ್ ಹಿನಾನ್”ಎಂಬ ಹೆಸರಿನ ನಾಲ್ಕನೇ ಶತಮಾನದಲ್ಲಿ ಬದುಕಿದ್ದ ರಾಣಿ ಈ ಕಾನೂನು ಮಾಡಿದ್ದು ಎಂದು ಇತಿಹಾಸ ಹೇಳುತ್ತದೆ !ಆ ರಾಣಿಯ ಚಿತ್ರ ಲಭ್ಯವಿಲ್ಲ ಆದರೂ ನಾವೆಲ್ಲ ಆ ರಾಣಿಯ ಮುಖವನ್ನೊಮ್ಮೆ ನೋಡಿಕೊಂಡು ಧನ್ಯರಾಗಬೇಕಿತ್ತು !
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಳೆರಾಯನ ಆರ್ಭಟಕ್ಕೆ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಸ್ಸಾಂನಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 17 ಜಿಲ್ಲೆಗಳ 700 ಹಳ್ಳಿಗಳು ಜಲಾವೃತವಾಗಿದ್ದು, ಸುಮಾರು 4 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಭಾರೀ ಭೂಕುಸಿತ ಮುಂದುವರಿದಿದ್ದು, ಮೂರು ಜನರು ಸಾವನ್ನಪ್ಪಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ಹ್ ಮತ್ತು ಗೋಲಘಾಟ್ ಸೇರಿದಂತೆ ಒಟ್ಟು 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಸುಮಾರು ನಾಲ್ಕು ಲಕ್ಷ…
ಎರಡು ಕುಟುಂಬಗಳನ್ನು ಒಂದು ಮಾಡುವ ಸಮಾರಂಭವೇ ಮದುವೆ…ಇಲ್ಲಿಯವರೆಗೂ ಇದ್ದ ಒಂಟಿ ಪ್ರಯಾಣ ಇನ್ನು ಮುಂದೆ ಜೋಡಿಯಾಗಿ ಸಾಗುತ್ತದೆ. ನಮ್ಮ ಸಂಪ್ರದಾಯದ ಪ್ರಕಾರ ಮದುವೆಗೊಂದು ವಿಶಿಷ್ಟತೆಯಿದೆ. ಐದು ದಿನಗಳ ಕಾಲ ನಯನ ಮನೋಹರವಾಗಿ ಸಾಗುವ ಮದುವೆಯಲ್ಲಿ ಬಂಧು ಮಿತ್ರರು,ಬಾಜಾ ಭಜಂತ್ರಿಗಳು..ಎಲ್ಲವೂ ಓಕೆ.
ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರು ಮಾಜಿ ನಾಯಕ ಎಂಎಸ್ ಧೋನಿಯ ದಾಖಲೆಯೊಂದನ್ನು ಮುರಿಯುವುದರಲ್ಲಿದ್ದಾರೆ. ಶರ್ಮಾ ಇನ್ನೆರಡೇ ಸಿಕ್ಸ್ ಬಾರಿಸಿದರೂ ಏಕದಿನದಲ್ಲಿ ಭಾರತ ಪರ ಧೋನಿ ಮಾಡಿರುವ ಅತ್ಯಧಿಕ ಸಿಕ್ಸ್ ದಾಖಲೆ ಬದಿಗೆ ಸರಿಯಲಿದೆ.ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ರೋಹಿತ್ ಗೆ ಧೋನಿ ದಾಖಲೆ ಮುರಿಯಲು ಅವಕಾಶವಿತ್ತು. ಆದರೆ ಶರ್ಮಾ ಕೇವಲ 1 ರನ್ನಿಗೆ ಮುಜೀಬ್ ಉರ್ ರಹ್ಮಾನ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸುವ ಮೂಲಕ ಅವಕಾಶ ಕಳೆದುಕೊಂಡಿದ್ದರು. ಗುರುವಾರ (ಜೂನ್ 27) ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ…
ಶ್ರದ್ಧೆ ಹಾಗೂ ಬದ್ಧತೆಗೆ ಹೆಸರಾಗಿರುವ ಆಟಗಾರ ವಿರಾಟ್ ಕೊಹ್ಲಿ. ಕ್ರಿಕೆಟ್ ಲೋಕದ ಹಲವು ಶ್ರೇಷ್ಠ ಆಟಗಾರರಿಂದ ‘ಕಿಂಗ್ ಕೊಹ್ಲಿ’ ಎಂದು ಕರೆಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ, ಸಚಿನ್ ನಿರ್ವಿುಸಿದ್ದ ದಾಖಲೆಗಳನ್ನು ಒಂದೊಂದಾಗಿ ಹಿಮ್ಮೆಟ್ಟಿಸುತ್ತ ಸಾಗುತ್ತಿದ್ದಾರೆ. ಕ್ರಿಕೆಟ್ ಲೋಕವೇ ನಿಬ್ಬೆರಗಾಗುವಂತೆ ಮಾಡಿರುವ ಕಿಂಗ್ ಕೊಹ್ಲಿ ಇಂದು ಬರ್ತಡೇ ಸಂಭ್ರಮದಲ್ಲಿದ್ದಾರೆ. ಟೆಸ್ಟ್ ನಾಯಕತ್ವ ಮತ್ತು ಬ್ಯಾಟಿಂಗ್ನಲ್ಲಿ ಯಶಸ್ಸು ಕಂಡಿರುವ ವಿರಾಟ್ ಕೊಹ್ಲಿ, ಸದ್ಯ ಕ್ರಿಕೆಟ್ನಿಂದ ಬಿಡುವು ಪಡೆದಿದ್ದು, ಪತ್ನಿ ಅನುಷ್ಕಾ ಶರ್ಮಾ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಇಂದು 31ನೇ ವರ್ಷದ ಜನ್ಮ…
ಜ್ಯೋತಿಷ್ಯಾಸ್ತ್ರ ಬಹು ಪುರಾತನವಾಗಿದ್ದರೂ ಕೆಲವರು ಇಂದಿಗೂ ನಂಬುವುದಿಲ್ಲ. ಆದರೆ ನಮ್ಮ ಹುಟ್ಟಿನ ಕೆಲವು ಅಂಶಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಜ್ಯೋತಿಷ್ಯಾಸ್ತ್ರದಲ್ಲಿ ಹೇಳದೇ ಇದ್ದರೂ ವಾಸ್ತವಾಂಶಗಳನ್ನು ಗಮನಿಸಿ ನಿಜ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಗ್ಗದ ದರ ಮತ್ತು ಉತ್ತಮ ಫೀಚರ್ಸ್ ಮೂಲಕ ಜನಪ್ರಿಯತೆ ಗಳಿಸಿರುವ ಶಿಯೋಮಿ ಕಂಪೆನಿ ಸೆಪ್ಟೆಂಬರ್ನಲ್ಲಿ ಮತ್ತೊಂದು ಹೊಸ ಸ್ಮಾರ್ಟ್ಫೋನ್ನ್ನು ಬಿಡುಗಡೆ ಮಾಡಲಿದೆ. ಶಿಯೋಮಿ ಮಿಕ್ಸ್ ಸಿರೀಸ್ನ ಈ ನೂತನ ಸ್ಮಾರ್ಟ್ಫೋನ್ಗೆ ಮಿ ಮಿಕ್ಸ್ 4 ಎಂದು ಹೆಸರಿಡಲಾಗಿದೆ. ಇವೆಲ್ಲಕ್ಕಿಂತ ಈ ಹೊಸ ಫೋನ್ ಎಲ್ಲರ ಗಮನ ಸೆಳೆಯುತ್ತಿರುವುದು ನೂತನ ಮೊಬೈಲ್ಗೆ ನೀಡಲಾಗಿರುವ ಕ್ಯಾಮೆರಾ. ಹೌದು, ಮಿ ಮಿಕ್ಸ್ 4ನಲ್ಲಿ 108 ಮೆಗಾಪಿಕ್ಸೆಲ್ನ ಕ್ಯಾಮೆರಾ ನೀಡಲಾಗಿದೆಯಂತೆ. ಚೀನಾದ ವೆಬ್ಸೈಟ್ ವೀಬೊದಲ್ಲಿ ನೀಡಿರುವ ಮಾಹಿತಿಯ ಪ್ರಕಾರ,…