ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಳ್ಳಗಿನ ಕೂದಲು ಇರುವ ವ್ಯಕ್ತಿಗಳನ್ನು ಕಂಡರೆ ನಾವು ಅಜ್ಜಿ-ತಾತ ಎಂದು ಸಂಭೋಧಿಸುತ್ತೇವೆ. ಅಂದರೆ ಈ ನರೆ (ಬೆಳ್ಳಗಿನ) ಕೂದಲು ಸಂಭವಿಸುವುದು 50ರ ಮೇಲೆ ಎಂದಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಈ ನರೆ ಕೂದಲು 12 ರಿಂದ 20ರ ವಯಸ್ಸಿನಲ್ಲೇ ಕಂಡುಬರುತ್ತಿರುವುದು ಆತಂಕಕಾರಿ ವಿಚಾರ. ಆದರೆ ನರೆ ಕೂದಲು ಇಷ್ಟು ಚಿಕ್ಕ ವಯಸ್ಸಿಗೆ ಕಾಣಿಸಿಕೊಳ್ಳಲು ಕಾರಣವೇನು? ಸಮಸ್ಯೆಗೆ ಪರಿಹಾರ ಅಥವಾ ಮನೆಮದ್ದು ಏನೆಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ.

ಬಿಳಿ ಕೂದಲಿಗೆ ಕಾರಣವೇನು? : *ಆನುವಂಶಿಕತೆ, *ವಿಟಿಲಿಗೊ, ಟ್ಯೂಬೆರಸ್ ಸ್ಕ್ಲೆರೋಸಿಸ್, ವಾರ್ಡನ್ ಬರ್ಗ್ ಸಿಂಡ್ರೋಮ್, ನ್ಯೂರೋಫೈಬ್ರೊಮಾ ಟೋಸಿಸ್, ಗ್ರೇವ್ಸ್ ಅಥವಾ ಹಶಿಮೊಟೊ ಕಾಯಿಲೆಗಳಿದ್ದಾಗ., *ಪೌಷ್ಠಿಕಾಂಶದ ಕೊರತೆ, *ಹೆಚ್ಚು ಒತ್ತಡ, *ಸಿಂಥೆಟಿಕ್ ಶಾಂಪೂ ಮತ್ತು ಸಾಬೂನುಗಳ ಬಳಕೆ, *ಧೂಮಪಾನ *ಇನ್ನು ಅನೇಕ ಕಾರಣಗಳಿಗೆ ನರೆ ಕೂದಲು ಬರಬಹುದು. ಆದರೆ ಸಮಸ್ಯೆಯ ಮೂಲ ಕಾರಣ ಗೊತ್ತಾಗಬೇಕಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ನೆಲ್ಲಿಕಾಯಿ :*ನಿಮಗೆ ಬೇಕಾಗಿರುವುದು 3-4 ನೆಲ್ಲಿಕಾಯಿ, 1 ಕಪ್ ನೀರು, *ಮೊದಲಿಗೆ ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, *ನಂತರ ಒಂದು ಲೋಟ ನೀರಿಗೆ ಸೇರಿಸಿ, ಕುದಿಯಲು ಬಿಡಿ, *ಚೆನ್ನಾಗಿ ಕುದಿಸಿದ ನಂತರ ಒಲೆಯಿಂದ ಕೆಳಗಿಳಿಸಿ, ತಣ್ಣಗಾಗಲು ಬಿಡಿ. ಆನಂತರ ಸೋಸಿ, *ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ವಾರಕ್ಕೆ 1-2 ಬಾರಿ ಹೀಗೆ ಮಾಡಿ

ಕೊಬ್ಬರಿ ಎಣ್ಣೆ: *1-2 ಟೇಬಲ್ ಸ್ಪೂನ್ ಶುದ್ಧವಾದ ತಾಜಾ ಕೊಬ್ಬರಿ ಎಣ್ಣೆ ತೆಗೆದಿಟ್ಟುಕೊಳ್ಳಿ, *ನಿಮ್ಮ ನೆತ್ತಿ ಮತ್ತು ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚಿ, *ಒಂದು ಗಂಟೆ ಬಿಟ್ಟು ಮೈಲ್ಡ್ ಕ್ಲೆನ್ಸರ್ನಿಂದ ತೊಳೆಯಿರಿ, *ಗುಣಮಟ್ಟದ ಕಂಡಿಷನರ್ ಹಚ್ಚಿ. ವಾರಕ್ಕೆ 1-2 ಬಾರಿ ಹೀಗೆ ಮಾಡಿ
ಅಲೊವೆರಾ: *ಅಲೊವೆರಾ ಜ್ಯೂಸ್ ಒಂದು ಕಪ್ ತೆಗೆದಿಟ್ಟುಕೊಳ್ಳಿ, *ಗೋರಂಟಿ ಅಥವಾ ಕಾಫಿ ಜೊತೆಯಲ್ಲಿ ಇದನ್ನು ಸೇರಿಸಿ, *ಇದನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಡಿ, *ತಿಂಗಳಿಗೊಮ್ಮೆ ಹೀಗೆ ಮಾಡಬಹುದು. ಅಲೊವೆರಾ ಜ್ಯೂಸ್ ಅನ್ನು ವಾರಕ್ಕೊಮ್ಮೆ ಬಳಸಬಹುದು.

ಕರಿಬೇವಿನ ಎಲೆಗಳು: *15-20 ಕರಿಬೇವಿನ ಎಲೆಗಳು, ½ ಕಪ್ ಕೊಬ್ಬರಿ ಎಣ್ಣೆ ತೆಗೆದಿಟ್ಟುಕೊಳ್ಳಿ, *ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆಗೆ 15-20 ಕರಿಬೇವಿನ ಎಲೆ ಸೇರಿಸಿ ಕುದಿಸಿ. *ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದಾಗ, ಒಲೆ ಆಫ್ ಮಾಡಿ. ತಣ್ಣಗಾಗಲು ಬಿಡಿ. ಇದನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿ. ಕನಿಷ್ಠ ಒಂದು ಗಂಟೆ ಕಾಲ ಬಿಡಿ, *ಬೇಗ ಫಲಿತಾಂಶ ಬೇಕೆಂದರೆ ವಾರಕ್ಕೊಮ್ಮೆ ಮಾಡಬಹುದು
ಭೃಂಗರಾಜ ಎಣ್ಣೆ ಅಥವಾ ಪುಡಿ: *ನೆತ್ತಿಗೆ ಮತ್ತು ಕೂದಲಿಗೆ ಭೃಂಗರಾಜ ಎಣ್ಣೆ ಹಚ್ಚಿ. *ಒಂದು ಗಂಟೆ ಬಿಟ್ಟು ಮೈಲ್ಡ್ ಕ್ಲೆನ್ಸರ್ನಿಂದ ತೊಳೆಯಿರಿ. *ಎಣ್ಣೆಯಿಲ್ಲದಿದ್ದರೆ ಭೃಂಗರಾಜ ಪುಡಿಯನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. *ಇದನ್ನು ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ತೊಳೆಯಿರಿ. *ವಾರಕೊಮ್ಮೆ ಅಥವಾ ತಿಂಗಳಿಗೊಮ್ಮೆ ನೀವಿದನ್ನು ಮಾಡಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.
ಇದು ನಮ್ಮ ದೇಶದ ವಿರುದ್ದ ನಡೆಯುತ್ತಿರುವ ದೊಡ್ಡ ಷಡ್ಯಂತ್ರ. ಚೀನಾ ದೇಶವು ನಮ್ಮ ದೇಶದ ಗಡಿಯಲ್ಲಿ ಕೊಡುತ್ತಿರುವ ಉಪಟಳದ ಬಗ್ಗೆ ನಿವು ಮಾಧ್ಯಮಗಳಲ್ಲಿ ನೋಡಿರುತ್ತೀರಿ.
2016 ರಲ್ಲಿ ಚಿತ್ರದುರ್ಗದ ಈ ಗಣಪತಿ ಅತಿ ಹೆಚ್ಚು ಜನ ಸೇರಿದರಿಂದ ಕರ್ನಾಟಕದ ಹೆಚ್ಚು ಜನ ಆಕರ್ಷಿಸಿದ ಗಣಪ ಎಂದು ತಿಳಿದು ಬಂದಿದೆ.
ಗೂಗಲ್ನ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗೆ ಆ್ಯಪ್ಸ್ಒದಗಿಸುವ ಪ್ಲೇ ಸ್ಟೋರ್ ಈಬಾರಿ ಮತ್ತೆ ಸುದ್ದಿಯಾಗಿದೆ. ಪ್ಲೇಸ್ಟೋರ್ ತುಂಬಾ ಇರುವ ಆ್ಯಪ್ಗಳ ಪೈಕಿ ಬಹುತೇಕಆ್ಯಪ್ಸ್ ನಕಲಿ ಮತ್ತು ಮಾಹಿತಿಕದಿಯುವ ಕೆಲಸ ಮಾಡುತ್ತಿವೆ. ಮಾಲ್ವೇರ್ಮತ್ತು ವೈರಸ್ ಹೊಂದಿರುವ ಆ್ಯಪ್ಸ್ಬಗ್ಗೆ ಗೂಗಲ್ ಪ್ಲೇ ಸ್ಟೋರ್ ಮತ್ತೆಸುದ್ದಿಯಲ್ಲಿದೆ. ಕಂಪ್ಯೂಟರ್ ಮತ್ತು ಸ್ಮಾರ್ಟ್ಫೋನ್ ಭದ್ರತೆ, ಸುರಕ್ಷತೆ ಒದಗಿಸುವ ಸೈಮಂಟೆಕ್ ಸಂಸ್ಥೆ ಹೊಸದಾಗಿ ಪ್ರಕಟಿಸಿರುವ ವರದಿಯಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿನ ಕೆಲವೊಂದು ಆ್ಯಪ್ಸ್ ನಕಲಿಯಾಗಿದ್ದು, ಗ್ರಾಹಕರ ಮಾಹಿತಿ ಕದಿಯುವ ಕೆಲಸದ ಜತೆಗೆ, ಪಾಪ್ ಅಪ್ ಜಾಹೀರಾತಿನ ಮೇಲೆ ಕ್ಲಿಕ್ ನೀಡುವ ಕೆಲಸ ಮಾಡುತ್ತಿವೆ ಎಂದು…
ವೀಳ್ಯದೆಲೆ ಎಂದರೆ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚು ಬಳಸುವ ಎಲೆ.ತಾಂಬೂಲದಲ್ಲಿ ಪ್ರಮುಖ ಸ್ಥಾನ ಹೊಂದಿರುವ ವೀಳ್ಯದೆಲೆಗೆ ಸದಾ ಬೇಡಿಕೆ ಇದೆ. ನಿಶ್ಚಿತಾರ್ಥ, ಮದುವೆ, ಮುಂಜಿ, ವ್ರತ ಹೀಗೆ ಏನೇ ಮಂಗಳ ಕಾರ್ಯಗಳಿದ್ದರೂ ವೀಳ್ಯದೆಲೆ ಬೇಕೇ ಬೇಕು. ಊಟದ ನಂತರ ತಾಂಬೂಲ ಹಾಕಿಕೊಳ್ಳಲಂತೂ ಈ ಎಲೆ ಅತ್ಯಗತ್ಯ.ಆದರೆ ಸಾಂಪ್ರದಾಯಕವಾಗಷ್ಟೆ ಅಲ್ಲ, ಇದರ ಔಷಧೀಯ ಗುಣಗಳು ಕೂಡ ಹಲವು. ಆದರೆ ರಕ್ತಸ್ರಾವ, ಪಿತ್ತದಿಂದ ತಲೆ ಸುತ್ತು ಹಾಗೂ ತಿವಿದ ಗಾಯವಾಗಿದ್ದರೆ ವೀಳ್ಯದೆಲೆಯನ್ನು ಸೇವಿಸಬಾರದು. ವೀಳ್ಯೆದೆಲೆಯನ್ನು ಹೆಚ್ಚಾಗಿ ಬಳಸಿದಲ್ಲಿ…
ಈಗಾಗಲೇ ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಹಲವು ರೋಗಾಣುಗಳ ಚಟುವಟಿಕೆ ಹೆಚ್ಚು. ಇದರೊಂದಿಗೆ ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯ ಶಕ್ತಿಯೂ ಕಡಿಮೆಯಾಗಿ ರೋಗಗಳಿಗೆ, ವೈರಾಣು ಜ್ವರಗಳಿಗೆ ಕಾರಣವಾಗುತ್ತದೆ.