ಆಧ್ಯಾತ್ಮ

ಸೂರ್ಯಗ್ರಹಣದ ಪರಿಣಾಮವೇನು -ಏನು ಮಾಡಬೇಕು? ಏನು ಮಾಡಬಾರದು?

289

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772

ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುದರ್ಶನೇ ।
ಸಚೇಲಂ ತು ಭವೇತ್ ಸ್ನಾನಂ ಸೂತಕಾನ್ನಂ ವಿವರ್ಜಯೇತ್ ।।

ಗ್ರಹಣವನ್ನು ಎಲ್ಲರೂ ನೋಡಬೇಕು. ಗ್ರಹಣದ ಸೂತಕವನ್ನು ಎಲ್ಲ ಜಾತಿ-ಮತದವರೂ, ಎಲ್ಲ ವರ್ಣದವರೂ ಆಚರಿಸ ಬೇಕು. ಚಿಕ್ಕ ಮಕ್ಕಳು, ಗರ್ಭಿಣಿಯರು, ಬಾಳಂತಿಯರು, ಅನಾರೋಗ್ಯ ಪೀಡಿತರು ಹಾಗೂ ಅತಿವೃದ್ಧರನ್ನು ಬಿಟ್ಟು ಆರೋಗ್ಯವಂತರಾದ ಎಲ್ಲರೂ ಗ್ರಹಣ ಅಶೌಚವನ್ನು ಆಚರಿಸಬೇಕು. ಅಶಕ್ತರಿಗೆ ಅವರವರ ಶಕ್ತಿಗೆ ಅನುಸಾರವಾದ ಸಡಿಲಿಕೆ ಇದೆ.

ಗ್ರಹಣದ ಸ್ಪರ್ಷ, ಮೋಕ್ಷ ಸ್ನಾನವನ್ನು ಉಟ್ಟಬಟ್ಟೆ ಸಹಿತವಾಗಿ ಮಾಡಬೇಕು. ವೇಧಕಾಲದಿಂದ ಗ್ರಹಣ ಮುಕ್ತಾಯದವರೆಗೂ ಏನನ್ನೂ ತಿನ್ನಬಾರದು. ಕಠೋರವಾದ ಮಾತುಗಳನ್ನು ಆಡಬಾರದು. ಹೆಚ್ಚುವದು-ಕೊಚ್ಚುವದು, ಅಸ್ತ್ರ-ಶಸ್ತ್ರಗಳ ಉಪಯೋಗವನ್ನು ಮಾಡಬಾರದು.

ಉಗುರು ಕತ್ತರಿಸುವದು, ಕೂದಲು ಕತ್ತರಿಸುವದು, ಅನಾವಶ್ಯಕ ಹರಟೆ, ವಾದ-ವಿವಾದ, ಅಡುಗೆ ಮಾಡುವದು, ಕಸತಗೆಯುವದು, ಮಲಗುವದು ಮೊದಲಾದ ಕೆಲಸಗಳನ್ನು ವೇಧಕಾಲದಲ್ಲಿ ಮಾಡಬಾರದು. ವೇಧಕಾಲದಲ್ಲಿ ನೀರು-ಆಹಾರ ಸೇವನೆ ಮಾಡದೇ ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಇದರಿಂದ ಗ್ರಹಣ ಕಾಲದಲ್ಲಿ ಮಲ-ಮೂತ್ರ ವಿಸರ್ಜನೆಯ ಪ್ರಸಂಗ ಬರಲಾರದು.

ಸೂತಕೇ ಮೃತಕೇ ಚೈವ ಸದೋಷೋ ರಾಹು ದರ್ಶನೇ ।
ತಾವದೇವ ಭವೇತ್ ಶುದ್ಧಿಃ ಯಾವನ್ಮುಕ್ತಿರ್ನ ಸಂಶಯಃ ।।

ಯಾರಿಗಾದರೂ ಜನನ ಶೌಚ, ಮರಣ ಶೌಚ ಇದ್ದರೆ ಗ್ರಹಣ ಕಾಲದಲ್ಲಿ ದೋಷ ಇರುವದಿಲ್ಲ. ಅವರೂ ಕೂಡ ಸ್ನಾನ-ದಾನ ಮೊದಲಾದ ಆಚರಣೆ ಮಾಡಬೇಕು. ಗ್ರಹಣ ಮೋಕ್ಷದ ನಂತರ ಮೊದಲಿನಂತೆ ಜನನ-ಮರಣ ಅಶೌಚ ಆಚರಣೆಯನ್ನು ಮುಂದುವರೆಸಬೇಕು.

ಸ್ನಾನೇ ನೈಮಿತ್ತಿಕೇ ಪ್ರಾಪ್ತೇ ನಾರೀ ಯದಿ ರಜಸ್ವಲಾ ।
ಪಾತ್ರಾಂತರಿತ ತೋಯೇನ ಸ್ನಾನಂ ಕೃತ್ವಾ ವ್ರತಂ ಚರೇತ್
ಪಾತ್ರಾಂತರಿತ ತೋಯೇನ ಸ್ನಾನಂ ಕೃತ್ವಾ ವ್ರತಂ ಚರೇತ್ ।।

ರಜಸ್ವಲಾ ಸ್ತ್ರೀಯರು ನದಿ-ಬಾವಿಗಳನ್ನು ಬಿಟ್ಟು ಒಂದು ಪಾತ್ರೆಯಲ್ಲಿಯ ನೀರನ್ನು ಬಳಸಿ ಸ್ನಾನಮಾಡಬೇಕು.

ಸ್ಪರ್ಷೇ ಜ್ಞಾತೇ ತಥಾ ಗ್ರಸ್ತೇ ಮೋಕ್ಷಕಾಲೇ ವಿಮೋಚನೇ ।
ಸ್ನಾನಂ ಶ್ರಾದ್ಧಂ ಜಪಂ ಹೋಮಂ ದಾನಂ ಸ್ನಾನಂ ಕ್ರಮಾತ್ ಚರೇತ್ ।।

ಗ್ರಹಣ ಸ್ಪರ್ಷಸ್ನಾನ, ಮಧ್ಯಸ್ನಾನ, ತರ್ಪಣ, ಜಪ, ಹೋಮ, ದಾನದ ನಂತರ ಗ್ರಹಣ ಮೋಕ್ಷ ದರ್ಶನ ಮಾಡಿ ಮತ್ತೆ ಸ್ನಾನ ಮಾಡಬೇಕು. ಗ್ರಹಣ ಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು.

ಚಂದ್ರ ಸೂರ್ಯ ಗ್ರಹೇ ಸ್ನಾಯಾತ್ ಸೂತಕೇ ಮೃತಕೇ ತಥಾ ।
ಅಸ್ನಾಯಾತ್ ಮೃತ್ಯುಮಾಪ್ನೋತಿ ಸ್ನಾಯಾತ್ ಮೃತ್ಯುಂ ನ ವಿಂದತಿ ।।

ಜನನ-ಮರಣ ಶೌಚ, ಗ್ರಹಣ ಶೌಚ ಸ್ನಾನವನ್ನು ಮಾಡಿದರೆ ಅಪಮೃತ್ಯು ಬರುವದಿಲ್ಲ. ಶೌಚ ಆಚರಣ ಮಾಡದವರಿಗೆ ಮೃತ್ಯು ಸಮಾನವಾದ ಪಾಪ ಬರುವದು.

ಸರ್ವಂ ಗಂಗಾ ಸಮಂ ತೋಯಂ ಸರ್ವೇ ವ್ಯಾಸ ಸಮಾ ದ್ವಿಜಃ ।
ಸರ್ವಂ ಭೂಮಿ ಸಮಂ ದಾನಂ ಗ್ರಹಣೇ ಚಂದ್ರ ಸೂರ್ಯಯೋಃ ।।

ಗ್ರಹಣ ಕಾಲದಲ್ಲಿ ಎಲ್ಲ ತೀರ್ಥಗಳೂ ಗಂಗೆಗೆ ಸಮ. ಹರಿಯುವ ನೀರು ಎಲ್ಲವೂ ಶ್ರೇಷ್ಠವೇ ಇವುಗಳಲ್ಲಿ ಮನೆಯಲ್ಲಿ ನಲ್ಲಿ, ಬಾವಿಗಳು, ಹಳ್ಳ-ಕೊಳ್ಳಗಳು, ನದಿಗಳು, ಸಮುದ್ರಗಳು ಒಂದಕ್ಕಿಂತ ಒಂದು ಶ್ರೇಷ್ಠ ಎಂದು ತಿಳಿಯಬೇಕು. ಸಂಗ್ರಹಿಸಿಟ್ಟ ನೀರು ಉಪಯೋಗಿಸ ಬಾರದು. ಆಶೀರ್ವದಿಸುವ ದ್ವಿಜ ವ್ಯಾಸರಿಗೆ ಸಮನಾದರೆ ಕೊಡುವ ದಾನ ಭೂದಾನಕ್ಕೆ ಸಮ.

ಸಮಮಬ್ರಾಹ್ಮಣೇ ದಾನಂ ದ್ವಿಗುಣಂ ಬ್ರಾಹ್ಮಣ ಬ್ರುವೇ ।
ಶ್ರೋತ್ರೀಯೇ ಶತಸಾಹಸ್ರಂ ಪಾತ್ರೇತು ಅನಂತ ಮಶ್ನುತೇ ।।

ನಿತ್ಯ ಸಂಧ್ಯಾದಿ ಅನುಷ್ಠಾನ ಮಾಡುವ ಆಚರಣಶೀಲ ಬ್ರಾಹ್ಮಣನಿಗೆ ಕೊಡುವ ದಾನದಿಂದ ಎರಡುಪಟ್ಟು ಫಲ ಬರುವದು, ಪಾಠ-ಪ್ರವಚನಾದಿಗಳನ್ನೂ ಮಾಡುವ ಶ್ರೋತ್ರೀಯರಿಗೆ ಕೊಡುವ ದಾನ ಲಕ್ಷಫಲದಾಯಕ. ಈ ಎಲ್ಲ ಸದ್ಗುಣಗಳಿಂದ ಕೂಡಿದ ನಿತ್ಯ ಸತ್ಯ-ಧರ್ಮಾಚರಣ ಶೀಲರಾದ ಯಾವದೇ ಸತ್ಪಾತ್ರರಿಗೆ ಕೊಡುವ ದಾನ ಅನಂತ ಫಲವನ್ನು ಕೊಡವದು.

ಚಂದ್ರಸೂರ್ಯಗ್ರಹೇ ತೀರ್ಥೇ ಮಹಾಪರ್ವಾದಿಕೇ ತಥಾ ।
ಮಂತ್ರದೀಕ್ಷಾಂ ಪ್ರಕುರ್ವಾಣೋ ಮಾಸರ್ಕ್ಷಾದೀನ್ ನ ಶೋಧಯೇತ್ ।।

ಗ್ರಹಣಕಾಲವೇ ಒಂದು ಪರ್ವವಾಗಿ ಇರುವದರಿಂದ ಮಂತ್ರೋಪದೇಶ ಪಡೆಯಲು ಅತ್ಯಂತ ಶ್ರೇಷ್ಠವಾಗಿರುತ್ತದೆ. ಈ ಸಮಯದಲ್ಲಿ ದೀಕ್ಷೆಗೆ ರಾಹುಕಾಲ-ಗುಳಿಕಕಾಲ, ತಿಥಿ, ನಕ್ಷತ್ರ ಇತ್ಯಾದಿ ಮುಹೂರ್ತವನ್ನು ನೋಡಬಾರದು.

ಶಾಂತಿ ಮಂತ್ರ

ಇಂದ್ರೋsನಲೋ ದಂಡಧರಶ್ಚ ಕಾಲಃ ಪಾಶಯುಧೋ ವಾಯುಧನೇಶ ರುದ್ರಃ ।
ಮಜ್ಜನ್ಮ ಋಕ್ಷೋ ಮಮರಾಶಿ ಸಂಸ್ಥಾಃ ಕುರ್ವಂತು ಸರ್ವೇ ಗ್ರಹದೋಷ ಶಾಂತಿಮ್ ।।

ವೈಚಾರಿಕ ಚಿಂತನೆ.

ಗ್ರಹಣ ನೋಡಬಾರದು ಎಂದು ಎಲ್ಲಿಯೂ ಹೇಳಿಲ್ಲ, ಗರ್ಭಿಣಿಯರಿಗೂ ಅವರ ಶಕ್ತಿಗೆ ಅನುಸಾರವಾದ ಆಚರಣೆ ಹಾಗೂ ಶುಭಫಲಗಳನ್ನು ಹೇಳಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಉದ್ದೇಶ ಧರ್ಮದ ಆಚರಣೆಯೇ ಹೊರತು ಭಯ ಹುಟ್ಟಿಸುದೂ ಅಲ್ಲ,

ಪಂಡಿತ್ ರಾಘವೇಂದ್ರ ಸ್ವಾಮಿಗಳು ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9901077772

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    300 ವರ್ಷ ನಮ್ಮ ದೇಶ ಅಳಿದ ಕುಟುಂಬದ ಕೊನೆಯ ರಾಣಿ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತಾ?

    ಭಾರತವನ್ನು ಸುಮಾರು ಮುನ್ನೂರು ವರ್ಷ ಆಳಿದ ರಾಜರ ಕುಟುಂಬದ ಕೊನೆಯ ರಾಣಿ ಈಗ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ..? ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ. ಭಾರತ ದೇಶವನ್ನು ಆಳಿದವರಲ್ಲಿ ಮೊಘಲರ ಪಾತ್ರ ಬಹು ದೊಡ್ಡದು. ಬಾಬರ್ ನಿಂದ ಹಿಡಿದು ಅಕ್ಬರ್, ಔರಂಗಜೇಬ್ ವರೆಗೂ ಅವರ ಆಳ್ವಿಕೆ ಇತ್ತು. 1526 ರಿಂದ 1857 ರವರೆಗೂ ನಮ್ಮ ದೇಶವನ್ನು ಆಳಿದರು. ಮೊಗಲ್ ರಾಜ್ಯ ಪತನದ ನಂತರ ಅವರ ವಂಶಸ್ಥರು ಎಲ್ಲಿಗೆ ಹೋದರು ಎಂದು ಗೊತ್ತಾಗಲಿಲ್ಲ. ಆದರೆ ಈಗ ಮೊಘಲ್ ವಂಶದ…

  • ವಿಚಿತ್ರ ಆದರೂ ಸತ್ಯ

    ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ..!ತಿಳಿಯಲು ಇದನ್ನು ಓದಿ…

    ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

  • ಸುದ್ದಿ

    ಗುರುವಾರದಂದು ತಪ್ಪದೇ ಈ ನಿಯಮ ಪಾಲಿಸಿದರೆ ಸಾಕು ನೀವು ಶ್ರೀಮಂತರಾಗುವುದು ಖಚಿತ,..!!

    ಎಲ್ಲರು ಶ್ರೀಮಂತರಾಗಬೇಕು, ಇನ್ನಷ್ಟು ಹೆಚ್ಚು  ಹಣ ಗಳಿಸಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ. ಎಲ್ಲರೂ ಹಣಕ್ಕಾಗಿಯೇ  ಶ್ರಮ ಪಡುವವರೇ, ಶ್ರಮದ ಹೊರತಾಗಿಯೂ, ಎಷ್ಟೇ ಕಷ್ಟಪಟ್ಟರೂ ಕೂಡ ಕೆಲವೊಮ್ಮೆ ನೀವು ಪಡೆದ ಹಣ ನೀರಿನಂತೆ ಕರಗಿ ಹೋಗಬಹುದು. ಹಿಂದಿನ ಜನ್ಮದ ಪಾಪಗಳು ಈ ಜನ್ಮದಲ್ಲಿಯೂ ಮನುಷ್ಯನನ್ನು ಆರ್ಥಿಕವಾಗಿ ಜರ್ಝರಿತಗೊಳಿಸಬಹುದು. ಇದನ್ನು ಜಗದ ನಿಯಮದಿಂದಲೂ ಬಗೆಹರಿಸಲು ಸಾಧ್ಯವಿಲ್ಲ, ಆದರೆ ಕೆಲವೊಂದು ಧರ್ಮಗ್ರಂಥಗಳಲ್ಲಿ ತಿಳಿಸಿರುವಂತೆ ಕೆಲವು ದೈವಿಕ ವಿಧಿಗಳ ಮೂಲಕ ಈ ಸಮಸ್ಯೆ ಬಗೆಹರಿಸಬಹುದು. ಗುರುವಾರವನ್ನು ದೇವಗುರುವಿನ ದಿನವೆಂದು ಕರೆಯಲಾಗಿದೆ. ಗುರುವು…

  • ಸುದ್ದಿ

    100 ಕೋಟಿ ಮೀರಿದ ಕುರುಕ್ಷೇತ್ರ ಸಂಭ್ರಮದಲ್ಲಿ ಕೇಕ್‌ ಕತ್ತರಿಸಿ ಆಚರಣೆ ಮಾಡಿದ ದರ್ಶನ್‌..!

    ದರ್ಶನ್‌ ಅಭಿಮಾನಿಗಳ ಬಳಗ ಇದನ್ನು ಅಧಿಕೃವಾಗಿ ಘೋಷಿಸಿಕೊಂಡಿದೆ. ‘ಕುರುಕ್ಷೇತ್ರ’ ಚಿತ್ರ ಬರೊಬ್ಬರಿ . 100 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಕೇಕ್‌ ಕತ್ತರಿಸಿ ಸಂಭ್ರಮ ಆಚರಿಸಿದೆ. ಆ ಸಂಭ್ರಮಾಚರಣೆಯಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿ ದರ್ಶನ್‌ ಕೂಡ ಭಾಗಿಯಾಗಿದ್ದಾರೆ. ಇದೊಂದು ಖುಷಿ ವಿಚಾರ. ಅಧಿಕೃತವಾಗಿ ಇದರ ಗಳಿಕೆ ಎಷ್ಟು, ಏನು ಎನ್ನುವುದು ಗೊತ್ತಿಲ್ಲ. ಆದರೆ ಆರಂಭದಿಂದಲೇ ದಾಖಲೆ ಕಲೆಕ್ಷನ್‌ ಆಗುತ್ತಿರುವ ಬಗ್ಗೆ ಮಾಹಿತಿ ಇತ್ತು. ಆಗಾಗ ನಿರ್ಮಾಪಕರು ಸಿಕ್ಕಾಗಲೂ ಹೇಳುತ್ತಿದ್ದರು. ಈಗ ನಮ್ಮ ಚಿತ್ರ 100 ಕೋಟಿ ರೂ….

  • ವ್ಯಕ್ತಿ ವಿಶೇಷಣ

    ಹುಟ್ಟಿದು ಹಿಟ್ಲರ್ ನೆಲದಲ್ಲಿ,ಕೊಟ್ಟಿದ್ದು ಕನ್ನಡ ಕೊಡುಗೆ..! ತಿಳಿಯಲು ಲೇಖನ ಓದಿ…

    ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ ‘ಅವಿಸ್ಮರಣೀಯರಾಗಿರುವುದು’ ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ – ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು ‘ಬಾಸೆಲ್ ಮಿಶನ್’ ನವರು ಪ್ರಕಟಿಸಿದರು.