News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಸುದ್ದಿ

ಕಪ್ಪು ಹಣ ಆಯ್ತು, ಬಂಗಾರದ ಬೇಟೆಗಿಳಿದ ಮೋದಿ ಸರ್ಕಾರ : ಚಿನ್ನ ರೂಪದ ಕಾಳಧನದ ಮೇಲೆ ಮೋದಿ ಸರ್ಜಿಕಲ್ ಸ್ಟ್ರೈಕ್…!

57

ನೋಟು ನಿಷೇಧದ ಬಳಿಕ ಮೋದಿ ಸರ್ಕಾರ ಕಪ್ಪು ಹಣ ನಿಯಂತ್ರಿಸಲು ಬಂಗಾರದ ಮೇಲೆ ಭಾರೀ ಪ್ರಮಾಣದ ತೆರಿಗೆ ಹೇರಲು ಚಿಂತನೆ ನಡೆಸಿದೆ. ನಗದು ರೂಪದ ಕಾಳಧನ ನಿಗ್ರಹಕ್ಕೆಂದು ನೋಟುರದ್ದತಿಯ ಸರ್ಜಿಕಲ್‌ ದಾಳಿ ನಡೆಸಿದ ಕೇಂದ್ರ ಸರಕಾರ ಸದ್ಯವೇ ಚಿನ್ನದ ರೂಪದಲ್ಲಿ ಸಂಗ್ರಹವಾಗಿರುವ ಕಾಳಧನವನ್ನು ಬಯಲಿಗೆಳೆಯಲು ಹೊಸ ಯೋಜನೆ ಆರಂಭಿಸಲಿದೆ.

ಹೌದು. ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದ್ದು ಕಪ್ಪು ಹಣವನ್ನು ಸಕ್ರಮಗೊಳಿಸಲು ಹೇಗೆ ಯೋಜನೆ ತರಲಾಗಿತ್ತೋ ಅದೇ ರೀತಿಯಾಗಿ ದಾಖಲೆ ಇಲ್ಲದ ಚಿನ್ನವನ್ನುನಿಗದಿ ಪಡಿಸಿದ ತೆರಿಗೆ ಪಾವತಿಸಿ ಸಕ್ರಮಗೊಳಿಸಲು ಮುಂದಾಗಿದೆ. ‘ಚಿನ್ನ ಕ್ಷಮಾದಾನ ಯೋಜನೆ’(ಗೋಲ್ಡ್‌ ಅಮ್ನೆಸ್ಟಿ ಸ್ಕೀಮ್‌) ಮೂಲಕ ದೇಶದಲ್ಲಿ ಸಂಗ್ರಹವಾಗಿರುವ ಚಿನ್ನದ ಲೆಕ್ಕವನ್ನು ಹೊರತೆಗೆಯಲು ಸರಕಾರ ನಿರ್ಧರಿಸಿದೆ.

ಕಾಳಧನ ಬಳಸಿ ಚಿನ್ನದಲ್ಲಿ ಹೂಡಿಕೆ ಮಾಡಿದವರು ಅದನ್ನು ಸ್ವಯಂ ಆಗಿ ಘೋಷಿಸಿಕೊಳ್ಳಲು ಹೊಸ ಯೋಜನೆಯಿಂದ ಸಾಧ್ಯವಾಗಲಿದೆ. ಸೂಕ್ತ ತೆರಿಗೆಯನ್ನು ಪಾವತಿಸಿ ಅಕ್ರಮವನ್ನು ಸಕ್ರಮ ಮಾಡಿಕೊಳ್ಳಬಹುದು. ಅಕ್ರಮ ಆಸ್ತಿಗೆ ಸಂಬಂಧಿಸಿದ ಶಿಕ್ಷೆಗಳಿಂದ ಪಾರಾಗಬಹುದು. ಕ್ಷಮಾದಾನ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಇಟ್ಟುಕೊಳ್ಳಬಹುದಾದ ಕನಿಷ್ಠ ಚಿನ್ನದ ಪ್ರಮಾಣವನ್ನು ನಿಗದಿ ಪಡಿಸುವ ಸಾಧ್ಯತೆಗಳಿವೆ. ಅದಕ್ಕಿಂತ ಹೆಚ್ಚಿನ ಚಿನ್ನಕ್ಕೆ ತೆರಿಗೆ ಅನ್ವಯ. ತೆರಿಗೆ ದರ ಇನ್ನೂ ಅಂತಿಮವಾಗಿಲ್ಲ. ಬಹುಶಃ ಶೇಕಡಾ 30 ಮತ್ತು ಶಿಕ್ಷಣ ಸೆಸ್‌ ಸೇರಿ ಶೇ.33 ಆಗ ಬಹುದು ಎಂಬ ನಿರೀಕ್ಷೆ ಇದೆ.

ಕಾಳಧನಿಕರು ಚಿನ್ನದಲ್ಲಿ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಚಿನ್ನದ ಅಕ್ರಮ ಸಕ್ರಮ ಯೋಜನೆಯಿಂದ ಕಾಳಧನವು ಸರಕಾರದ ಲೆಕ್ಕಕ್ಕೆಸಿಗುತ್ತದೆ. ತೆರಿಗೆ ಆದಾಯವೂ ಸರಕಾರಕ್ಕೆ ದೊರೆಯುತ್ತದೆ. 2017ರಲ್ಲಿ ಆದಾಯ ಘೋಷಣೆ ಯೋಜನೆ(ಐಡಿಎಸ್‌)-2 ಅಂದರೆ, ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯನ್ನು (ಪಿಎಂಜಿಕೆವೈ) ಆರಂಭಿಸಲಾಗಿತ್ತು. ನೋಟು ಅಮಾನ್ಯತೆ ಬಳಿಕ ಜಾರಿಯಾದ ಯೋಜನೆಗೆ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆದಾಗ್ಯೂ, ಇದೇ ಮಾದರಿಯಲ್ಲಿ ಚಿನ್ನದ ಕ್ಷಮಾದಾನ ಯೋಜನೆ ಆರಂಭಿಸಲು ಸರಕಾರ ಸಜ್ಜಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ