ಸುದ್ದಿ

ನೀವು ಎಲ್ಲಾದರೂ ಹಣ ಹೂಡಿಕೆ ಮಾಡುತ್ತೀರಾ,ಹಾಗಾದರೆ ಹೂಡಿಕೆಗೂ ಮುನ್ನ ನಿಮ್ಮನ್ನು ನೀವು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ,.!

71

ಸಾಮಾನ್ಯವಾಗಿ  ಎಲ್ಲರೂ ಯಾವುದೊ ಒಂದು ಕಡೆ ಅಥವಾ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ . ಮುಖ್ಯವಾಗಿ  ಹೆಚ್ಚಿನ ಆದಾಯ ಬರುವ  ಭರವಸೆಗಳನ್ನು ನೀಡುವ ಕಡೆ ಮೊರೆ ಹೋಗುತ್ತಾರೆ. ಆದಾಯವನ್ನು ನೋಡುತ್ತಾರೆ ಹೊರತು ಕಂಪನಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದಿಲ್ಲ, ಮತ್ತು  ಏಜೆಂಟ್‌ಗಳ ಮೂಲಕ ತಮ್ಮಉತ್ಪನ್ನಗಳನ್ನು ಮಾರಾಟ ಮಾಡಿ ಮೋಸಮಾಡಿರುವ ಕಂಪನಿಗಳ ಉದಾಹರಣೆಯು  ಸಹ ಸಾಕಷ್ಟಿದೆ.ಹಣ ಹೂಡಿಕೆ ಮಾಡಿದ ನಂತರ ಲಾಭವನ್ನು ಗಳಿಸದೆ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ಜನರು ಸಾಕಷ್ಟಿದ್ದಾರೆ. ಸಮಾಜದಲ್ಲಿ ಒಂದೇ ಬಾರಿಗೆ ಹಣ ಡಬಲ್ಆಗಬೇಕೆಂದು ಕನಸು ಕಾಣುವವರೇನು ಕಮ್ಮಿಇಲ್ಲ. ನೀವು ಕಷ್ಟಪಟ್ಟು ದುಡಿದ ಹಣವು ನೀರಿನಂತೆ ಪೋಲಾಗದಂತೆ ನೋಡಿಕೊಳ್ಳುವುದು ಜಾಣತನ. ಯಾವುದೇ ವ್ಯಾಪಾರ ಅಥವಾ ವಹಿವಾಟಿನಲ್ಲಿ ನೀವು ಹಣವನ್ನು ಹೂಡುವ ಮುನ್ನ ನಿಮ್ಮನ್ನು ನೀವು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.

1.ನಾವು ಮಾಡುವ ಹೂಡಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ? ಯಾವುದೇ ವ್ಯವಹಾರದಲ್ಲಿ , ಆಸ್ತಿನಿರ್ವಹಣಾ ಕಂಪನಿಗಳಲ್ಲಿ, ಇತರೆ ಹಣಕಾಸು ಸಂಸ್ಥೆಗಳಲ್ಲಿನೀವು ಕಷ್ಟ ಪಟ್ಟು ದುಡಿದಹಣವನ್ನು ಹೂಡುವ ಮುನ್ನ ನೀವುಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ ಇದಾಗಿದೆ.ನೀವು ಯಾವುದೇ ವಲಯದಲ್ಲಿ ಹಣ ಹೂಡಿಕೆ ಮುನ್ನಕಂಪನಿಯ ಅಥವಾ ಕ್ಷೇತ್ರದ ಬಗ್ಗೆಹೆಚ್ಚು ತಿಳಿದುಕೊಳ್ಳಿ.  ನಿಮ್ಮಹಣಕ್ಕೆ ಹೆಚ್ಚು ಆದಾಯ ಬರುತ್ತದೆಎಂದು ಭರವಸೆ ನೀಡುವ ಹೂಡಿಕೆಯತಾಣಗಳು ಸಾಕಷ್ಟಿವೆ. ಹಾಗಂತ ನೀವು ದಿಢೀರ್ಎಂದು ಹಣವನ್ನು ಹೂಡುವ ಮುನ್ನವ್ಯಾಪಾರದ ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳಿ.

2. ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆಯೇ?ನೀವು ಯಾವಾಗ ಹಣ ಹೂಡಿಕೆಗೆಮುಂದಾಗುತ್ತೀರಾ ಎಂಬ ಅರಿವು ನಿಮಗಿರಲಿ.ನಿಮ್ಮ ಹೂಡಿಕೆಗೆ ಒಂದು ಗುರಿಯಿರಲಿ. ಸರಳವಾಗಿಹೆಚ್ಚುವರಿ ಹಣವನ್ನು ಪಡೆಯುವ ಮನಸ್ಸಿನಲ್ಲಿಮುಂದಾಗದಿರಿ.

3. ಹೂಡಿಕೆಯು ಒಳಗೊಂಡಿರುವ ಅಪಾಯಗಳು ಯಾವುವು? ಯಾವುದೇಹೂಡಿಕೆ ಮಾಡುವ ಮುನ್ನ ನಿಮ್ಮಹಣವನ್ನು ಕಳೆದುಕೊಳ್ಳುವ ಅಪಾಯಗಳಿಗೆ ಒಳಗಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ನಿಮಗೆಹೆಚ್ಚಿನ ಆದಾಯ ಬರದಿದ್ದರೂ ಪರವಾಗಿಲ್ಲ,ನೀವು ಹೂಡಿಕೆ ಮಾಡಿದ ಹಣವನ್ನುಮಾತ್ರ ಕಳೆದುಕೊಳ್ಳಬಾರದು. ಸಾಮಾನ್ಯವಾಗಿ ಹಣಕಾಸು ಸಂಸ್ಥೆಗಳು ನಿಮ್ಮಹಣವನ್ನು ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ. ಅದರೊಂದಿಗೆಆಧಾರವಾಗಿರುವ ಆಸ್ತಿಯನ್ನು ಹೊಂದಿವೆ.

4. ಹೂಡಿಕೆಯಿಂದನಾನು ಎಷ್ಟು ಗಳಿಸಬೇಕೆಂದು ನಿರೀಕ್ಷಿಸುತ್ತೇನೆ?ನೀವು ಮೀಸಲಿಟ್ಟ ಹಣವು ಈ ಹೂಡಿಕೆಗೆಎಷ್ಟು ಮುಖ್ಯ? ನಿಮ್ಮ ಯೋಜನೆಯನ್ನುತಲುಪಲು ನೀವು ಹೂಡಿದ ಹಣದಿಂದಎಷ್ಟು ಆದಾಯವನ್ನು ಪಡೆಯಬೇಕು? ಈ ರೀತಿಯ ಪ್ರಶ್ನೆಗಳಿಗೆನಿಮ್ಮಲ್ಲಿ ನೀವು ಸ್ಪಷ್ಟತೆ ಪಡೆದುಕೊಳ್ಳಬೇಕು.ಆ ಮೂಲಕ ನಿಮ್ಮಭವಿಷ್ಯದ ವೆಚ್ಚಗಳು ಮತ್ತು ಗುರಿಗಳನ್ನು ಆರ್ಥಿಕವಾಗಿಯೋಜಿಸಲು ನಿಮಗೆ ಸಾಧ್ಯವಾಗುತ್ತದೆ.

5. ಹೂಡಿಕೆಯಿಂದ ಪ್ರತಿಫಲ ಪಡೆಯಲು ಎಷ್ಟುದಿನ ಕಾಯಬೇಕಾಗಬಹುದು? ನಿಮ್ಮ ಹೂಡಿಕೆಯು ನಿವೃತ್ತಿಗೆಸಂಬಂಧಿಸಿದ ಹಣಕಾಸಿನ ಅಗತ್ಯವಾದರೆ, ನೀವು60 ವರ್ಷ ವಯಸ್ಸಿನವರೆಗೂ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಇದೇ ರೀತಿ ನೀವುಯಾವುದರ ಮೇಲೆ ಹೂಡಿಕೆ ಮಾಡಲುಬಯಸುತ್ತಿರೋ ಆ ಹೂಡಿಕೆಯಿಂದ ಪ್ರತಿಫಲಬರುವವರೆಗೂ ನೀವು ಬಂಡವಾಳ ಹೂಡಿಕೆಗೆಸಮರ್ಥರೋ, ಅಥವಾ ಹೂಡಿಕೆ ಸಾಧ್ಯವೇಎಂಬುದನ್ನು ಅರಿಯಿರಿ. ಜೊತೆಗೆ ನಿಮ್ಮ ಅಪೇಕ್ಷಿತಮೊತ್ತವನ್ನು ಪಡೆಯಲು ನೀವು ಎಷ್ಟುಸಮಯದವರೆಗೆ ಕಾಯಲು ಸಿದ್ಧರಿದ್ದೀರಿ ಎಂಬುದನ್ನುತಿಳಿದುಕೊಳ್ಳಿ. ಈ ಪ್ರಶ್ನೆಗಳಿಗೆ ಉತ್ತರಿಸಿದಾಗಅದಕ್ಕೆ ತಕ್ಕಂತಹ ಸೂಕ್ತ ಹೂಡಿಕೆಯನ್ನುನೀವು ಮಾಡಲು ಸಾಧ್ಯ.

6. ಹೂಡಿಕೆ ನೋಂದಾಯಿಸಲಾಗಿದೆಯೇ? ಕಳೆದ ಹಲವು ವರ್ಷಗಳಿಂದಅನೇಕ ಹಗರಣಗಳು ವರದಿಯಾಗಿವೆ. ಜನರನ್ನುನಂಬಿಸಿ ಮೋಸ ಮಾಡುವ ವಂಚಕರುಹೆಚ್ಚಾಗಿದ್ದಾರೆ. ಜನರ ನಂಬಿಕೆಗಳು ಮತ್ತುಸಂಬಂಧಗಳ ಆಧಾರದ ಮೇಲೆ ಜನರಿಗೆಮಂಕು ಬೂದಿ ಎರಚುತ್ತಾರೆ. ಈವಂಚಕರ ಮೇಲೆ ನ್ಯಾಯಾಲಯದ ಪ್ರಕರಣಗಳುಸಾಕಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಇದರಿಂದ ನಿಮಗೆ ಆರ್ಥಿಕಮತ್ತು ಮಾನಸಿಕ ತೊಂದರೆಯೇ ಹೆಚ್ಚು.ಹೀಗಾಗಿ ನೀವು ಯಾವುದರ ಮೇಲೆಹೂಡಿಕೆ ಮಾಡುತ್ತೀರೋ ಆ ಹಣಕಾಸು ಸಂಸ್ಥೆಮತ್ತು ಅದರ ಯೋಜನೆಗಳ ಬಗ್ಗೆಸಂಪೂರ್ಣ ಹಿನ್ನೆಲೆ ಪರಿಶೀಲನೆ ಬಹಳ ಮುಖ್ಯ.

7. ಹೂಡಿಕೆ ವಿಫಲವಾದರೆ ನಾನು ಏನು ಮಾಡಬೇಕು?ನಿಮ್ಮ ಹೂಡಿಕೆ ವಿಫಲವಾದರೆ ನಿಮ್ಮಆಯ್ಕೆಗಳು ಯಾವುವು? ತಪ್ಪನ್ನು ಸರಿಪಡಿಸಲುಅಥವಾ ನಿಮ್ಮ ಹಣವನ್ನು ಮರಳಿಪಡೆಯಲು ನೀವು ಯಾರನ್ನು ಸಂಪರ್ಕಿಸಬಹುದು?ನೀವು ಗ್ರಾಹಕರಾಗಿರುವ ಹಣಕಾಸು ಸಂಸ್ಥೆ ಆರ್‌ಬಿಐ ಅಥವಾ ಸೆಬಿಅಥವಾ ಐಆರ್‌ಡಿಎಐಗೆ ಉತ್ತರಿಸುತ್ತದೆಯೇಎಂದು ಮೊದಲು ತಿಳಿದುಕೊಳ್ಳಬೇಕು. ಆಮೂಲಕ ನೀವು ಸಹಾಯಕ್ಕಾಗಿ ಅವುಗಳನ್ನುಸಂಪರ್ಕಿಸಬಹುದು. ಏಕೆಂದರೆ ನೀವು ಮಾಡುವವ್ಯವಹಾರ ಕುರಿತಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಇವು ಒದಗಿಸುತ್ತವೆ. ಜೊತೆಗೆದೂರುಗಳನ್ನು ಎದುರಿಸಲು, ಅವರ ಕುಂದುಕೊರತೆಗಳಿಗೆ ಪರಿಹಾರವಿಧಾನಗಳನ್ನು ಸಹ ಅವು ಹೊಂದಿರುತ್ತವೆ.

8. ಹೂಡಿಕೆಯಲ್ಲಿ ನನ್ನ ನಿರ್ಗಮನ ಆಯ್ಕೆಗಳುಯಾವುವು? ನೀವು ಯಾವುದೇ ಯೋಜನೆಯಲ್ಲಿಹಣ ಹೂಡುವ ಮುನ್ನ ಎಷ್ಟುಕಾಲ ಹಣ ಹೂಡಿಕೆ ಮಾಡಬೇಕಾಗಬಹುದುಎಂದು ಅರಿತುಕೊಳ್ಳಿ. ಮತ್ತು ಮೆಚುರಿಟಿ ತಲುಪುವುದಕ್ಕೂಮುನ್ನ ಪೂರ್ವಾವಧಿ ನಿರ್ಗಮನದ ನಿಯಮಗಳೇನು? ಎಷ್ಟು ವರ್ಷಗಳ ಬಳಿಕಪೂರ್ವ ನಿರ್ಗಮನವಾಗಬಹುದು ಎಂದು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ,ಯೋಜನೆಗಳನ್ನು ಹಿಂತೆಗೆದುಕೊಳ್ಳುವ ಮೊದಲು ಗ್ರಾಹಕರು ಕನಿಷ್ಠಅವಧಿಗೆ ಮುಂದುವರಿಯಬೇಕು ಎಂಬ ನಿಯಮವಿರುತ್ತದೆ. ಅದನ್ನುಪೂರೈಸದೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.ಹೀಗಾಗಿ ನೀವು ಯಾವುದೇ ಯೋಜನೆಗೆಸಹಿ ಮಾಡುವ ಮೊದಲು ಯೋಜನೆಗೆಸಂಬಂಧಿತ ದಾಖಲೆಗಳನ್ನು ಎಚ್ಚರದಿಂದ ಓದಿ. ಅಲ್ಲದೆ ಹೂಡಿಕೆಯಪೂರ್ವ ನಿರ್ಗಮನದ ಬಗ್ಗೆ ಅರಿಯಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿರುವ ಮಹಿಳೆ..!

    ಚಳಿಗಾಲದಲ್ಲಿ ಒಂದು ಕಪ್ ಬಿಸಿ ಬಿಸಿ ಟೀ ಕುಡಿಯುವುದಕ್ಕಿಂತ ಯಾವುದು ಹೆಚ್ಚು ಸುಖ ಕೊಡುವುದಿಲ್ಲ, ಆದರೆ ಕೇವಲ ಟೀ ಕುಡಿದೇ ಬದುಕಿರಲು ಸಾಧ್ಯವೇ?ಬೆಳಗ್ಗೆ, ಸಂಜೆ ಟೀ ಕುಡಿಯೋರನ್ನ ನೋಡಿರ್ತೀರಿ ಆದರೆ ಛತ್ತೀಸ್‍ಗಢದಲ್ಲಿ ಮಹಿಳೆಯೊಬ್ಬರು 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹೌದು, ಈ ವಿಷಯ ನೋಡಿದರೇ ಬರೀ ಟೀ ಕುಡಿದು ಬದುಕಿದ್ದಾರಾ ಅಂತ ಆಶ್ಚರ್ಯ ಆಗೋದು ಸಹಜ. ಹೌದು, ಛತ್ತೀಸ್ ಗಡದ ಕೊರಿಯಾ ಜಿಲ್ಲೆಯ ಮಹಿಳೆಯೊಬ್ಬರು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ,…

  • ಉಪಯುಕ್ತ ಮಾಹಿತಿ

    ಮೋದಿ ಸರ್ಕಾರದ ಈ ಯೋಜನೆಯಿಂದ ಪ್ರತೀ ಕುಟುಂಬಕ್ಕೆ ಸಿಗಲಿದೆ 5 ಲಕ್ಷ ರೂಗಳು.!ಏನಿದು ಯೋಜನೆ.?ತಿಳಿಯಲು ಈ ಲೇಖನ ಓದಿ ಎಲ್ಲರಿಗೂ ಶೇರ್ ಮಾಡಿ ಉಪಯೋಗವಾಗಲಿ…

    ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಬಜೆಟ್ ಮಂಡಿಸಿದ್ದು, ಈ ಬಜೆಟ್’ನಲ್ಲಿ ಬಡವರಿಗೆ ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯದ ವಿಚಾರವಾಗಿ ಬಂಪರ್ ಕೊಡುಗೆಯನ್ನು ಘೋಷಿಸಿದ್ದರು. ಹೌದು, ಕೇಂದ್ರಸರ್ಕಾರದ ಮಹತ್ವದ ಯೋಜೆನೆಯಾದ ‘ಆಯುಷ್ಮಾನ್ ಭಾರತ್’ ವಿಮೆ ಯೋಜನೆ ಈಗಾಗಲೇ ಜಾರಿಯಾಗಿದ್ದು, ಈ ಯೋಜನೆಯಿಂದ ಬಡವರು ಮತ್ತು ಬಿಪಿಎಲ್ ಕಾರ್ಡುದಾರರು ಸೇರಿದಂತೆ ಭಾರತದ  ಸುಮಾರು 10 ಕೋಟಿ ಕುಟುಂಬಗಳಿಗೆ ಈ ಯೋಜನೆಯಿಂದ ಉಪಯೋಗವಾಗಲಿದೆ.ಈ ಕುಟುಂಬಗಳು ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳನ್ನು ಆಸ್ಪತ್ರೆ ವೈದ್ಯಕೀಯ ಖರ್ಚಿಗಾಗಿ, ಈ ವಿಮಾ ಯೋಜನೆ ಅಡಿಯಲ್ಲಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ,ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 14 ಜನವರಿ, 2019 ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಮತ್ತು ಕೇವಲ ಅಗತ್ಯವಾದ ವಸ್ತುಗಳ ಮಾತ್ರ ಇಂದು…

  • ಸಿನಿಮಾ

    ಆಸ್ಪತ್ರೆಗೆ ದಾಖಲಾದ ಖ್ಯಾತ ನಟಿ!ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಿಕೊಂಡ ನಟಿಯ ಸಹೋದರಿ..

    ಸ್ಯಾಂಡಲ್ ವುಡ್ ನಟಿ ವಿಜಯಲಕ್ಷ್ಮಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಗೆ ಹಣಕಾಸು ನೆರವು ನೀಡುವಂತೆ ಅವರ ಸಹೋದರಿ ಉಷಾದೇವಿ ಮನವಿ ಮಾಡಿದ್ದಾರೆ. ಸ್ಯಾಂಡಲ್ ವುಡ್ ಟಾಪ್ ನಟಿಯಾಗಿದ್ದ ವಿಜಯಲಕ್ಷ್ಮಿ ಅವರಿಗೆ ತೀವ್ರವಾದ ಸುಸ್ತು ಮತ್ತು ಹೈ ಬಿಪಿಯಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರ ಅವರ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ಸೇರಿಸಿದ್ದು, ಇದ್ದ ಹಣವನ್ನೆಲ್ಲ ಖರ್ಚು ಮಾಡಲಾಗಿದೆ. ಈಗ ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆಗೆ ನೆರವು ನೀಡುವಂತೆ ಸಹೋದರಿ ಉಷಾದೇವಿ…

  • ಉಪಯುಕ್ತ ಮಾಹಿತಿ

    ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!

    ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,೦೦೦ ರೂ ಹಣ ಸಂದಾಯ ಮಾಡುವ ಗೃಹಲಕ್ಷ್ಮಿ ಯೋಜನೆಗೆ  ನೋಂದಣಿ ಆರಂಭ ಮಾಡಲಾಗುವುದು, ಕುಟುಂಬಗಳಿಗೆ ಹಣ ಸಂದಾಯ ಮಾಡುವ ಮೊದಲು ಎಸ್.ಎಂ.ಎಸ್ ಮಾಹಿತಿ ನೀಡಲಾಗುತ್ತದೆ  ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳಿದ್ದು ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಗೆ ಹಣ ಸಂದಾಯ ಅಗಲಿದೆ ಎಂದು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಜುಲೈ 19 ನೋಂದಣಿ ಆರಂಭ…

  • inspirational

    ಗ್ಯಾಸ್ ಸಿಲಿಂಡರ್ ಸಮಸ್ಯೆ – ಗ್ಯಾಸ್ ಸಿಲಿಂಡರ್ ಸಂಕಷ್ಟ

    ಗ್ಯಾಸ್ ಸಿಲಿಂಡರ್ ಸಂಕಷ್ಟ: ಕಾರಣಗಳು ಮತ್ತು ಪರಿಣಾಮಗಳು ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ (Gas Cylinder Crisis) ಭಾರತದಲ್ಲಿ ಹಲವಾರು ಕಡೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಸಮಸ್ಯೆ ಸಾಮಾನ್ಯ ಜನರ ದಿನನಿತ್ಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮತ್ತು ಸರಬರಾಜಿನ ಕೊರತೆ ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ. ವಿಶೇಷವಾಗಿ ಮಧ್ಯಮ ವರ್ಗ ಮತ್ತು ಬಡ ಕುಟುಂಬಗಳು ಈ ಸಮಸ್ಯೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿವೆ. ಪ್ರಮುಖ…