ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಭಯ ಇದ್ದೇ ಇರುತ್ತದೆ. ಇದಕ್ಕೆ ಮನಃಶಾಸ್ತ್ರದಲ್ಲಿ ಟ್ರೈಪನೋಫೋಬಿಯಾ ಎಂದು ಹೆಸರು. ಈ ಭಯಕ್ಕೆ ಭಾರತದ ವಿಜ್ಞಾನಿಗಳು ಪರಿಹಾರ ಹುಡುಕಿದ್ದಾರೆ. ಸೂಜಿಯಿಂದ ಚುಚ್ಚದೆಯೇ ಚುಚ್ಚುಮದ್ದು ನೀಡಬಹುದಾದ ನೋ ಪ್ರಿಕ್ಲಿ ಪ್ಯಾಚ್ ಆವಿಷ್ಕರಿಸಿದ್ದಾರೆ. ಅಹಮದಾಬಾದ್, ಮಕ್ಕಳಿಗೆ ಹುಷಾರು ತಪ್ಪಿತೆಂದರೆ ಪಾಲಕರಿಗೆ ಆಂತಂಕವಾಗುವುದು ಸಹಜ. ಚಿಕಿತ್ಸೆ ಕೊಡಿಸುವಾಗ ಚುಚ್ಚುಮದ್ದು ಕೊಡಿಸುವುದು ಮತ್ತೊಂದು ಸಾಹಸದ ಕಾರ್ಯ. ಕೆಲ ಮಕ್ಕಳಂತೂ ಹಾರಾಡಿ, ಚೀರಾಡಿ ಹಿಡಿತಕ್ಕೇ ಸಿಗದಂತಾಗಿಬಿಡುತ್ತವೆ. ಅಂತಹ ಮಕ್ಕಳ ಕೈಕಾಲು ಕಟ್ಟಿಯೇ ಚುಚ್ಚುಮದ್ದು ನೀಡಬೇಕಾಗುತ್ತದೆ. ನಮ್ಮಲ್ಲಿಯೂ ಹಲವರಿಗೆ ಸೂಜಿ ಚುಚ್ಚುವಾಗ ಕಣ್ಣೀರು ಹರಿದಿರಬಹುದಲ್ಲವೇ.

ಮನಃಶಾಸ್ತ್ರದಲ್ಲಿ ಸೂಜಿಗೆ ಹೆದರುವುದನ್ನು ಟ್ರೈಪನೋಫೋಬಿಯಾ (Trypanophobia)ಎಂದು ಹೇಳುತ್ತಾರೆ. ಅಂದರೆ, ಚರ್ಮಕ್ಕೆ ಸೂಜಿಯಿಂದ ಚುಚ್ಚುವ ಕುರಿತು ಹೆಚ್ಚು ಭಯ ಹೊಂದಿರುವುದು. ಇದೊಂದು ಸಾರ್ವತ್ರಿಕ ಸಮಸ್ಯೆ. ಅಂದರೆ ಪ್ರಪಂಚದ ಎಲ್ಲ ಜನರಲ್ಲೂ ಇಂತಹದೊಂದು ಸಣ್ಣ ಭಯ ಇದ್ದೇ ಇರುತ್ತದೆ. ಈ ಭಯಕ್ಕೀಗ ಭಾರತೀಯ ಸಂಶೋಧನಾ ಸಂಸ್ಥೆ ಪರಿಹಾರ ಹುಡುಕಿರುವುದು ಹೆಮ್ಮೆಯ ವಿಚಾರ.

ಗುಜರಾತಿನ ಬಿವಿ ಪಟೇಲ್ ಫಾರ್ಮಾಸುಟಿಕಲ್ ಎಜುಕೇಷನ್ ಆಂಡ್ ರಿಸರ್ಚ್ ಡೆವಲಪ್ಮೆಂಟ್ (PERD)ಸಂಸ್ಥೆಯ ವಿಜ್ಞಾನಿಗಳು ಪಾಲಿಮರ್ ಬಳಸಿ ಅತಿಸೂಕ್ಷ್ಮ ಸೂಜಿಗಳನ್ನು (ಮೈಕ್ರೋ ನೀಡಲ್ಸ್) ಆವಿಷ್ಕರಿಸಿದ್ದಾರೆ. ಈ ಸೂಜಿಗಳು ಚರ್ಮಕ್ಕೆ ಸ್ವಲ್ಪವೂ ನೋವು ಮಾಡುವುದಿಲ್ಲ. ಆದರೆ, ಸಾಂಪ್ರದಾಯಿಕ ಸೂಜಿಗಳಷ್ಟೇ ಸಮರ್ಥವಾಗಿ ಔಷಧವನ್ನು ದೇಹಕ್ಕೆ ಕಳಿಸಬಲ್ಲವು. ಇದಕ್ಕೆ ನೋ- ಪ್ರಿಕ್ಲಿ ಪ್ಯಾಚ್ ( ಚುಚ್ಚದಿರುವ ಪ್ಯಾಚ್) ಎಂದು ಹೆಸರಿಸಿದ್ದಾರೆ.

ನೋ ಪ್ರಿಕ್ಲಿ ಪ್ಯಾಚ್ ಪಾಲಿಮರ್ನಿಂದ ತಯಾರಿಸಿದ ಸೂಕ್ಷವಾದ ಹಲವಾರು ಸೂಜಿಗಳನ್ನು ಹೊಂದಿರುತ್ತದೆ. ಈ ಸೂಜಿಗಳು ಬರಿಗಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುತ್ತವೆ. ಇವು ಔಷಧವನ್ನು ಚರ್ಮದಡಿಯ ಸೂಕ್ಷ್ಮ ರಕ್ತನಾಳಗಳಿಗೆ ಕಳುಹಿಸುತ್ತವೆ. ಔಷಧವನ್ನು ದೇಹದೊಳಗೆ ಕಳಿಸಿದ ಕೆಲವೇ ನಿಮಿಷಗಳಲ್ಲಿ ಸೂಕ್ಷ್ಮ ಪಾಲಿಮರ್ ಸೂಜಿಗಳು ಕರಗಿ ಹೋಗುತ್ತವೆ. ಇದು ಬಳಕೆದಾರ ಸ್ನೇಹಿಯಾಗಿದ್ದು, ಸಾಂಪ್ರದಾಯಿಕ ಸೂಜಿಗಿಂತಲೂ ಸುಲಭವಾಗಿ ಉಪಯೋಗಿಸಬಹುದು. ಜತೆಗೆ ಈ ಪ್ಯಾಚ್ ಬಳಕೆಯಿದ ಮಕ್ಕಳಲ್ಲಿ ಸೂಜಿ ಚುಚ್ಚಿಸಿಕೊಳ್ಳುವ ಭಯ ಹತ್ತಿರವೂ ಸುಳಿಯದು.
ಪ್ರಸ್ತುತ ಚುಚ್ಚುಮದ್ದು ನೀಡಲು ಲೋಹದ ಸೂಕ್ಷ್ಮ ಸೂಜಿಗಳನ್ನು ಬಳಸಲಾಗುತ್ತಿದೆ. ಆದರೆ ನಾವು ಪಾಲಿಮರ್ ಆಧಾರಿತ ಔಷಧ ಸಾಗಾಣಿಕಾ ಸಾಧನವನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ಕ್ರಿಮಿಶುದ್ಧೀಕರಣ, ವಿಲೇವಾರಿ ಮತ್ತು ಮರುಬಳಕೆ ಮೊದಲಾದ ವೈದ್ಯಕೀಯ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಮಕ್ಕಳು ಮತ್ತು ನಿಯಮಿತವಾಗಿ ಚುಚ್ಚುಮದ್ದು ತೆಗೆದುಕೊಳ್ಳುವ ವಯಸ್ಕರಿಗೂ ಇದು ವರದಾನವಾಗಿದೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಡಾ.ವಿರಳ್ ಷಾ ಹೇಳಿದ್ದಾರೆ. ನೋ ಪ್ರಿಕ್ಲಿ ಪ್ಯಾಚನ್ನು ಈಗಾಗಲೇ ಪ್ರಾಣಿಗಳ ಮೇಲೆ ಪ್ರಯೋಗಿಸಿದ್ದು, ಯಶಸ್ವಿಯಾಗಿದೆ. ಈ ಕುರಿತಂತೆ ಜರ್ನಲ್ ಆಫ್ ಅಮೆರಿಕನ್ ಅಸೋಸಿಯೇಷನ್ ಆಫ್ ಫಾರ್ಮಾಸುಟಿಕಲ್ ಸೈಂಟಿಸ್ಟ್ ನಿಯತಕಾಲಿಕೆಯಲ್ಲಿ ಸಂಶೋಧನಾ ಲೇಖನ ಪ್ರಕಟಗೊಂಡಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದ 24 ವರ್ಷದ ಮೋಹಿತ್ ಮೋರ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಟಿಕ್ ಟಾಕ್ ಮೂಲಕ ಅರ್ಧ ಮಿಲಿಯನ್ ಸಂಖ್ಯೆಯ ಫಾಲೋಯರ್ಸ್ ಗಳನ್ನು ಹೊಂದಿರುವ ಮೋಹಿತ್ ಅವರು ಫಿಟ್ ನೆಸ್ ಗೆ ಸಂಬಂಧಿಸಿದಂತೆ ನಿರಂತರವಾಗಿ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದರು. ಮಂಗಳವಾರ ಸಂಜೆ ಐದು ಗಂಟೆ ವೇಳೆಗೆ ನಜಾಫ್ ಗಡದಲ್ಲಿ ಅವರು ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಏಕಾಏಕಿ ಮೂರು ಜನ ದಾಳಿ ಮಾಡಿದ್ದು, ಸಿಸಿ ಟಿವಿಯಲ್ಲಿ…
ಪ್ರಜಾಪತಿ ಬ್ರಹ್ಮನಿಗೆ ಕದ್ರು, ವಿನತೆ ಇತ್ಯಾದಿ ಅನೇಕ ಹಣ್ಣು ಮಕ್ಕಳಿದ್ದರು. ಇವರು ವಯಸ್ಸಿಗೆ ಬಂದ ಮೇಲೆ ಪ್ರಜಾವತಿ ಇವರಲ್ಲಿ ಕೆಲವರನ್ನು ಕಶ್ಯಪರೆಂಬ ತಪಸ್ವಿಗಳಿಗೆ ಕೊಟ್ಟು ಮದುವೆ ಮಾಡಿದನು. ಕಾಲಕ್ರಮದಲ್ಲಿ ಕದ್ರುವಿಗೆ ಅನೇಕ ಮಕ್ಕಳಾದುವು. ಇವುಗಳೆ ಸರ್ಪಗಳು. ಇವುಗಳಲ್ಲಿ ಮೊದಲನೆಯವನಾದ ಅದಿಶೇಷನೇ ಭೂಮಿಯನ್ನು ಹೊತ್ತಿರುವವನು.
ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ
ನಮ್ಮ ದೇಶವನ್ನ ದೇವಾಲಯಗಳ ಗೂಡು ಏಂದು ಕರೆಯುತ್ತೇವೆ ಮತ್ತು ಅತೀ ಹೆಚ್ಚು ದೇವಾಲಯಗಳನ್ನ ಹೊಂದಿರುವ ದೇಶಗಳಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಮ್ಮ ದೇಶದ ಜನರು ದೇವರನ್ನು ಹೆಚ್ಚಾಗಿ ನಂಬುತ್ತಾರೆ ಮತ್ತು ದೇಶದಲ್ಲಿ ದೇವರ ಆರಾಧನೆ ಹೆಚ್ಚಾಗಿ ನಡೆಯುತ್ತಾರೆ, ಯಾವುದೇ ಶುಭಕಾರ್ಯ ನಡೆಯಬೇಕು ಅಂದರೆ ಮೊದಲು ದೇವರ ಒಪ್ಪಿಗೆಯನ್ನ ಪಡೆದು ನಂತರ ಮುಂದಿನ ಕೆಲಸಕ್ಕೆ ಕೈ ಹಾಕಲಾಗುತ್ತದೆ. ಹಿಂದಿನ ಕಾಲದಿಂದಲೂ ನಮ್ಮ ಜನರು ದೇವರ ವಿಚಾರವಾಗಿ ಅನೇಕ ಆಚಾರ ವಿಚಾರಗಳನ್ನ…
ಹದಿಹರೆಯದಲ್ಲಿ ಮೊಡವೆ ಏಳುವುದು ಸಾಮಾನ್ಯ. ಆದ್ರೆ ಪಾರ್ಟಿಗೆ ಹೋಗಬೇಕೆಂದಾಗ, ಯಾವುದೋ ಬಹುಮುಖ್ಯ ಸಮಾರಂಭವಿದ್ದಾಗಲೇ ಮುಖದ ಮೇಲೆ ಮೊಡವೆ ಎದ್ದು ಬಿಡುತ್ತದೆ. ಇದು ನಮ್ಮ ಸಂತೋಷಕ್ಕೆ ಕಪ್ಪು ಚುಕ್ಕಿಯಾಗ್ಬಿಡುತ್ತದೆ. ಮೊಡವೆ ಹೋಗಲಾಡಿಸಲು ಕೆಲವೊಂದು ಮನೆ ಮದ್ದುಗಳಿವೆ. 24 ಗಂಟೆಯೊಳಗೆ ನಿಮ್ಮ ಮುಖದ ಮೇಲಿದ್ದ ಮೊಡವೆಗಳು ಮಾಯವಾಗ್ಬಿಡ್ತವೆ. ಅಂತ ಔಷಧಿಗಳನ್ನು ನಾವು ಹೇಳ್ತೇವೆ ಕೇಳಿ. ಜೇನು ತುಪ್ಪ : ಸಾಕಷ್ಟು ಸೌಂದರ್ಯದ ಗುಣಹೊಂದಿರುವ ಜೇನು ತುಪ್ಪ ಮೊಡವೆ ಹೋಗಲಾಡಿಸಲು ಸಹಕಾರಿ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಗುಣವಿರುತ್ತದೆ. ರಾತ್ರಿ ಮೊಡವೆಯಾದ ಜಾಗಕ್ಕೆ ಸ್ವಲ್ಪ…
ಈಗಂತೂ ರಾಜಕಾರಣಿಗಳು ತಾವು ಗೆಲ್ಲುವುದಕ್ಕಾಗಿ ಏನು ಬೇಕೋ ಮಾಡುತ್ತಾರೆ, ಹೇಗೆಂದರೆ ಹಾಗೆ ಮಾತನಾಡುತ್ತಾರೆ ಕೂಡ. ಕೊನೆಗೂ ರಾಜಕೀಯಕ್ಕೆ ದೇವರನ್ನು ಎಳೆದು ತಂದು ದೇವರಿಗೂ ಜಾತಿಯ ಪಟ್ಟಿಯನ್ನು ಕಟ್ಟಿಬಿಟ್ಟಿದ್ದಾರೆ. ಹನುಮಂತ ಅರಣ್ಯವಾಸಿ. ಆತ ದಲಿತ ವರ್ಗಕ್ಕೆ ಸೇರಿದ್ದವನೆಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ಬಳಿಕ ಈ ಕುರಿತು ಪರ-ವಿರೋಧದ ಚರ್ಚೆಗಳು ಮುಂದುವರೆದಿವೆ. ಆದಿತ್ಯನಾಥ್ ಅವರ ಹೇಳಿಕೆಗೆ ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗಿದ್ದು, ಯೋಗಿ ಹೇಳಿಕೆಯನ್ನು ಖಂಡಿಸಿದ್ದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಈಗ ಪಕ್ಷ ತೊರೆದಿದ್ದಾರೆ….