ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾನು ಒಬ್ಬ ರೈತ ಎಂದು ಹೇಳಿಕೊಳ್ಳಲು ತುಂಬಾ ಜನ ಹಿಂದೆ ಮುಂದೆ ನೋಡುತ್ತಾರೆ ಮತ್ತು ಇದಕ್ಕೆ ಕಾರಣ ನಮ್ಮ ಸಮಾಜ ಎಂದು ಹೇಳಬಹುದು, ರೈತ ಅಂದರೆ ಆತನ ಬಳಿ ಹಣ ಇರುವುದಿಲ್ಲ ಅನ್ನುವ ಭಾವನೆ ಎಲ್ಲರ ಮನದಲ್ಲಿ ಇದೆ ಮತ್ತು ಇಷ್ಟೇ ಅಲ್ಲದೆ ನಾನು ರೈತ ಅಂದರೆ ಹೆಣ್ಣು ಮಗಳನ್ನ ಕೊಟ್ಟು ಮದುವೆ ಮಾಡಿಕೊಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ ಜನರು. ಇನ್ನು ನಮ್ಮ ಸಮಾಜಕ್ಕೆ ತಿಳಿಯದ ಇನ್ನೊಂದು ವಿಚಾರ ಏನು ಅಂದರೆ ಪ್ರತಿಯೊಬ್ಬ ರೈತ ಕೂಡ ಒಬ್ಬ ವಿಜ್ಞಾನಿ ಆಗಿರುತ್ತಾನೆ ಅನ್ನುವುದು ಆಗಿದೆ. ಪ್ರಾರಂಭದಲ್ಲಿ ಎಷ್ಟೇ ನಷ್ಟ ಮತ್ತು ಸೋಲನ್ನ ಅನುಭವಿಸದರು ಅದರಿಂದ ಪಾಠವನ್ನ ಕಲಿತು ಇಂದು ಮಾದರಿಯ ರೈತನಿಗೆ ಹೊರಹೊಮ್ಮಿದ್ದಾರೆ ಈ ರೈತ.

ಹಾಗಾದರೆ ಈ ರೈತ ಯಾರು ಮತ್ತು ಈ ಮಾಡಿದ ಸಾಧನೆ ಏನು ಅನ್ನುವುದರ ಬಗ್ಗೆ ತಿಳಿಯೋಣ. ನಾವು ಹೇಳುವ ಈ ರೈತನ ಸದಾನಂದ ಮತ್ತು ಇವರು ದೊಡ್ಡಬಳ್ಳಾಪುರದವರು ಆಗಿದ್ದಾರೆ, ಇನ್ನು ಇವರು ಕೂಡ ಪ್ರಾರಂಭದಲ್ಲಿ ಎಲ್ಲಾ ರೈತರು ಮಾಡುವಂತೆ ಇವರು ಎರಡು ತಪ್ಪುಗಳನ್ನ ಮಾಡಿದರು. ಹೌದು ಅಕ್ಕಪಕ್ಕದರು ಈರುಳ್ಳಿ ಅಥವಾ ಟೊಮೆಟೊ ಹಾಕಿದರೆ ಎಲ್ಲಾ ರೈತರು ಕೂಡ ಅದನ್ನೇ ಹಾಕುವುದು ಮತ್ತು ಒಂದು ಎಕರೆ ಜಮೀನು ಇದ್ದರೆ ಆ ಜಮೀನಿನ ಪೂರ್ತಿ ಒಂದೇ ಬೆಳೆಯನ್ನ ಬೆಳೆಯುವುದು, ರೈತರು ಅನುಸರಿಸುವ ಈ ಎರಡು ಮಾರ್ಗಗಳು ಕೂಡ ತುಂಬಾ ಅಪಾಯವಾದವು ಆಗಿದೆ.

ಇನ್ನು ಎಲ್ಲರು ಟೊಮೆಟೊ ಬೆಳೆಯನ್ನ ಬೆಳೆಯುತ್ತಾರೆ ಎಂದು ನಾವು ಕೂಡ ಅದನ್ನೇ ಬೆಳೆದರೆ ಉತ್ಪಾದನೆ ಜಾಸ್ತಿ ಆಗಿ ಬೆಲೆ ಕಡಿಮೆ ಆಗುತ್ತದೆ ಮತ್ತು ಇರುವ ಜಮೀನಿಗೆಲ್ಲ ಒಂದೇ ಬೆಳೆಯನ್ನ ಹಾಕಿದರೆ ಅವು ಒಂದು ಭಾರಿ ನಮ್ಮ ಕೈ ಹಿಡಿಯುತ್ತದೆ ಮತ್ತು ಕೆಲವು ಭಾರಿ ನಮ್ಮ ಕೈ ಸುಡುತ್ತದೆ ಮತ್ತು ನಷ್ಟವಾದರೆ ವ್ಯವಸಾಯದ ಮೇಲೆ ನಂಬಿಕೆ ಕಳೆದು ಹೋಗುತ್ತದೆ. ಪ್ರಾರಂಭದಲ್ಲಿ ಹೀಗೆ ಮಾಡಿದ ಸದಾನಂದ ಅವರು ಕೆಲವು ಭಾರಿ ತಮ್ಮ ಕೈ ಸುಟ್ಟುಕೊಂಡರು ಮತ್ತು ಹೀಗೆ ಮಾಡಿದರೆ ಮುಂದೆ ಕಷ್ಟ ತುಂಬಾ ಕಷ್ಟ ಆಗುತ್ತದೆ ಎಂದು ಅರಿತ ಸದಾನಂದ ಅವರು ಒಂದು ಉಪಾಯ ಮಾಡಿದರು.

ಸದಾನಂದ ಅವರು ತಮಗಿರುವ ಎರಡು ಎಕರೆ ಜಮೀನನ್ನ ವ್ಯವಸ್ಥಿತವಾಗಿ ವಿಂಗಡಿಸಿ ಮೊದಲು ಒಂದಷ್ಟು ಅಡಿಕೆ ಮತ್ತು ತೆಂಗಿನ ಮರಗಳನ್ನ ನೆಟ್ಟರು ಹಾಗೆ ಇನ್ನೊಂದು ಜಾಗದಲ್ಲಿ ಒಂದು ತಿಂಗಳು ಶುಂಠಿ, ಇನ್ನೊಂದು ತಿಂಗಳು ಸಪೋಟ ಮತ್ತು ಒಂದಷ್ಟು ಜಮೀನಿಗೆ ಟೊಮೆಟೊ ಮತ್ತು ಕ್ಯಾಪ್ಸಿಕಮ್ ಮತ್ತು ಹೀಗೆ ಕಾಲದ ಮಿತಿಯನ್ನ ಕೊಟ್ಟು ಸುಮಾರು 30 ಬೆಳೆಗಳನ್ನ ಹಾಕಿದರು. ಇನ್ನು ಸದಾನಂದ ಅವರ ಉಪಾಯ ಹೇಗಿತ್ತು ಅಂದರೆ ಒಂದು ತಿಂಗಳು ಸಪೋಟದಲ್ಲಿ ಒಳ್ಳೆಯ ಲಾಭ ಬಂದರೆ ಇನ್ನೊಂದು ತಿಂಗಳು ಶುಂಠಿಯಲ್ಲಿ ಒಳ್ಳೆಯ ಲಾಭ ಬರುತ್ತಿತ್ತು, ಹೀಗೆ ಪ್ರತಿ ತಿಂಗಳು ಕೈಗೆ ಹಣ ಬರುವಂತೆ ಮಾಡಿಕೊಂಡರು ಸದಾನಂದ ಅವರು.

ಇನ್ನು ಸದಾನಂದ ಅವರ ಉಪಾಯದಲ್ಲಿ ಇರುವ ಇನ್ನೊಂದು ಪ್ರಯೋಜನ ಏನು ಅಂದರೆ ಟೊಮೆಟೊದಲ್ಲಿ ನಷ್ಟವಾದರೆ ಇನ್ನೊಂದರಲ್ಲಿ ಒಳ್ಳೆಯ ಲಾಭ ಸಿಗುತ್ತದೆ, ಹೀಗೆ ತನ್ನ ಉಪಾಯದ ಮೂಲಕ ವರ್ಷಕ್ಕೆ ಸುಮಾರು 22 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಸದಾನಂದ ಅವರು. ವ್ಯವಸಾಯ ಅನ್ನುವುದು ಸಂಶೋಧನೆ ಮತ್ತು ಆವಿಷ್ಕಾರ ಇದ್ದಹಾಗೆ ಮತ್ತು ಅದಕ್ಕೆ ಸೀಮಿತ ಮಿತಿ ಅನ್ನುವುದು ಇಲ್ಲ ಹಾಗೆ ಹೊಸ ಹೊಸ ಪ್ರಯೋಗಗಳನ್ನ ಮಾಡುವುದರಿಂದ ಹೊಸ ವಿಧಾನ ಕಂಡುಹಿಡಿಯಬಹುದಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ
ಪ್ರತಿ ತಂದೆ ತಾಯಿಗಳಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ, ಮಕ್ಕಳು ಕೂಡ ಅಷ್ಟೇ ತಂದೆ ತಾಯಿಯನ್ನು ಹೆಚ್ಚು ಇಷ್ಟಪಡುತ್ತಾರೆ. ವಿಶೇಷವೇನೆಂದರೆ ಹೆಣ್ಮಕ್ಕಳು ತಂದೆಯನ್ನು ಅತಿ ಹೆಚ್ಚು ಇಷ್ಟ ಪಡುತ್ತಾರೆ ಯಾಕೆ ಗೊತ್ತಾ.? ಈ ಕಾರಣಕ್ಕೆ ತಂದೆಯನ್ನು ಹೆಣ್ಮಕ್ಕಳು ಹೆಚ್ಚು ಇಷ್ಟ ಪಡೋದು. ಪ್ರತಿ ತಂದೆಗಳು ತನ್ನ ಹೆಂಡತಿಗಿಂತ ಮಗಳಿಗೆ ಹೆಚ್ಚು ಅಧ್ಯಾತೆ ಕೊಡುತ್ತಾರೆ, ಹಾಗು ಹೆಚ್ಚು ಪ್ರೀತಿಸುತ್ತಾರೆ, ತನ್ನ ತಂದೆಗೆ ಮಗಳೇ ಸರ್ವಸ್ವ ಆಗಿರುತ್ತಾಳೆ. ಅಷ್ಟೇ ಅಲ್ಲದೆ ಈ ಕಾರಣಗಳು ಕೂಡ ತಂದೆಯನ್ನು ಹೆಚ್ಚು ಇಷ್ಟಪಡುವಂತೆ ಮಾಡುತ್ತವೆ. ಪ್ರತಿ…
ನಾವು ಸಾಮಾನ್ಯವಾಗಿ ಬಾಳೆ ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಕುತ್ತೆವೆ.ಆದರೆ ಬಾಳೆಹಣ್ಣಿನ ಸಿಪ್ಪೆಯಿಂದ ಆಗೋ ಉಪಯೋಗ ತಿಳಿದುಕೊಂಡರೆ ನೀವು ಸಿಪ್ಪೆಯನ್ನು ಎಸೆಯುವುದಿರಲಿ ಅದನ್ನೇ ಕಾಪಾಡಿಕೊಳ್ಳುತ್ತಿರ..ಹೇಗೆ ಉಪಯೋಗ ಅನ್ನೋ ಕುತೂಹಲವೇ ಇದನ್ನು ಓದಿ
ಟೈಗರ್ ಪ್ರಭಾಕರ್, ದಕ್ಷಿಣ ಭಾರತದಲ್ಲಿ ಈ ಸ್ಟಾರ್ ನಟ ಯಾರಿಗೆ ಗೊತ್ತಿಲ್ಲ ಹೇಳಿ, ಎಷ್ಟೋನಟರಿಗೆ ಆದರ್ಶ, ಚಿತ್ರರಂಗದಲ್ಲಿ ಘರ್ಜಿಸಿದ ನಟ, ಆದರೆ ಪ್ರಭಾಕರ್ ಅವರ ಕೊನೆಯ ದಿನಗಳು ಜನರು ಊಹಿಸಿದಷ್ಟು ಸುಂದರವಾಗಿರಲಿಲ್ಲ, ಅತಿಯಾದ ಅನಾರೋಗ್ಯದಿಂದ ಕೈಯಲ್ಲಿದ್ದ ಕಾಸು ಖಾಲಿ ಆಗಿತ್ತು. 25 ಮಾರ್ಚ್ 2001 ರಂದು ಟೈಗರ್ ಪ್ರಭಾಕರ್ ಅವರು ಬಹು ಅಂಗಾಂಗ ವೈಪಲ್ಯದಿಂದ ಇಹಲೋಕ ತ್ಯಜಿಸಿದರು, ಈ ಸುದ್ದಿ ಕೇಳಿ ಕಣ್ಣೀರು ಹಾಕಿದ ಲಕ್ಷಾಂತರ ಅಭಿಮಾನಿಗಳು, ಕೊನೆಯದಾಗಿ ಟೈಗರ್ ಪ್ರಭಾಕರ್ ಅವರ ಅಂತಿಮ ದರ್ಶನ ಪಡೆಯಲು…
ಸಸ್ಯಾಹಾರಿ ಖಾದ್ಯವನ್ನು ಆರ್ಡರ್ ಮಾಡಿದ್ದ ವಕೀಲರೊಬ್ಬರಿಗೆ ಮಾಂಸಾಹಾರಿ ಖಾದ್ಯವನ್ನು ಡೆಲಿವರಿ ಮಾಡಿದ್ದಕ್ಕಾಗಿ ಆಹಾರ ಸರಬರಾಜು ಮಾಡುವ ಝೊಮ್ಯಾಟೋ ಹಾಗೂ ಆ ಮಾಂಸಾಹಾರಿ ಖಾದ್ಯವನ್ನು ನೀಡಿದ ಹೋಟೆಲ್ ಗೆ ಪುಣೆಯ ಗ್ರಾಹಕ ನ್ಯಾಯಾಲಯವು 55 ಸಾವಿರ ರುಪಾಯಿ ದಂಡ ವಿಧಿಸಿದೆ. ಮಾಧ್ಯಮದ ವರದಿ ಪ್ರಕಾರ, ಇನ್ನು ನಲವತ್ತೈದು ದಿನದೊಳಗೆ ವಕೀಲ ಷಣ್ಮುಖ್ ದೇಶ್ ಮುಖ್ ಗೆ ದಂಡದ ಮೊತ್ತ ಪಾವತಿಸುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಶುಭಾಂಗಿ ದುನಾಖೆ ಮತ್ತು ಅನಿಲ್ ಜವಲೇಕರ್ ಅವರಿದ್ದ ಪೀಠ,…
ಉತ್ತಮ ಆರೋಗ್ಯಕ್ಕೆ ನೀರು ಅತ್ಯಾವಶ್ಯಕ ಅಂಶ.ನೀರಿನ ಆವಶ್ಯಕತೆಯ ಮಟ್ಟವು ಬೇರೆ ಬೇರೆ ವ್ಯಕ್ತಿಗಳಲ್ಲಿ ಭಿನ್ನವಾಗಿರಬಹುದು. ನೀವು ಸಾಕಷ್ಟು ದ್ರವಾಹಾರ ಸೇವಿಸುತ್ತಿರುವಿರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಲೇಖನವು ನಿಮಗೆ ಸಹಾಯ ಮಾಡಲಿದೆ.