ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ:- ಜಿಲ್ಲೆಯ ಆರು ತಾಲೂಕುಗಳಿಂದ 29 ಜಿಪಂ ಕ್ಷೇತ್ರಗಳನ್ನು ಮತ್ತು 107 ತಾಪಂ ಕ್ಷೇತ್ರಗಳನ್ನು ಗುರುತಿಸಿ ಅವುಗಳ ಗಡಿ ಮತ್ತು ಗಡಿ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪ್ರಕಟಿಸಿದೆ.
ಜ.2 ರ ಗೆಜೆಟಿಯರ್ನಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲೆ ಆಯೋಗದ ವೆಬ್ಸೈಟ್ ಅಥವಾ ಬೆಂಗಳೂರಿನ ಆಯೋಗದ ಬಹುಮಹಡಿ ಕಟ್ಟಡದ ವಿಳಾಸಕ್ಕೆ ಕಳುಹಿಸುವಂತೆ ಆಹ್ವಾನ ನೀಡಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ನಿಂದ 3, ಬಂಗಾರಪೇಟೆ 4, ಶ್ರೀನಿವಾಸಪುರ 5, ಮಾಲೂರು 5, ಮುಳಬಾಗಿಲು 6, ಕೋಲಾರ 6 ಸಂಖ್ಯೆಯ ಒಟ್ಟು 29 ಜಿಪಂ ಕ್ಷೇತ್ರಗಳು ಮತ್ತು ಕೆಜಿಎಫ್ ನಿಂದ 12, ಬಂಗಾರಪೇಟೆಯ 16, ಶ್ರೀನಿವಾಸಪುರದ 18, ಮಾಲೂರಿನ 20, ಮುಳಬಾಗಿಲಿನ 20 ಮತ್ತು ಕೋಲಾರದ 20 ತಾಪಂ ಕ್ಷೇತ್ರಗಳು ಸೇರಿದಂತೆ ಒಟ್ಟು 107 ತಾಪಂ ಕ್ಷೇತ್ರಗಳ ಪಟ್ಟಿಯನ್ನು ಪ್ರಕಟಿಸಿದೆ.

ಜಿಪಂ ಕ್ಷೇತ್ರಗಳು
ಕೋಲಾರದಿಂದ ಹುತ್ತೂರು, ಹೋಳೂರು, ಸುಗಟೂರು, ಕ್ಯಾಲನೂರು, ನರಸಾಪುರ, ವಕ್ಕಲೇರಿ, ಮಾಲೂರಿನಿಂದ ತೊರ್ನಹಳ್ಳಿ, ಕುಡಿಯನೂರು, ಲಕ್ಕೂರು, ಮಾಸ್ತಿ, ಟೇಕಲ್, ಬಂಗಾರಪೇಟೆಯಿಂದ ಚಿಕ್ಕಅಂಕಂಡಹಳ್ಳಿ, ದೊಡ್ಡೂರುಕರಪನಹಳ್ಳಿ, ಬೂದಿಕೋಟೆ, ಕಾಮಸಮುದ್ರ, ಕೆಜಿಎ-ನಿಂದ ಪಾರಾಂಡಹಳ್ಳಿ, ಕ್ಯಾಸಂಬಳ್ಳಿ, ಬೇತಮಂಗಲ, ಮುಳಬಾಗಿಲಿನಿಂದ ಆವಣಿ, ತಾಯಲೂರು, ಆಲಂಗೂರು, ನಂಗಲಿ, ಬೈರಕೂರು, ದುಗ್ಗಸಂದ್ರ, ಶ್ರೀನಿವಾಸಪುರದಿಂದ ಯಲ್ದೂರು, ದಳಸನೂರು, ರೋಣೂರು, ರಾಯಲ್ಪಾಡು, ಗೌನಿಪಲ್ಲಿ ಜಿಪಂ ಕ್ಷೇತ್ರಗಳಿರುತ್ತವೆ.
ವಿವಿಧ ತಾಲ್ಲೂಕುಗಳ
ತಾಪಂ ಕ್ಷೇತ್ರಗಳು
ಕೋಲಾರ ತಾಲೂಕಿನಲ್ಲಿ ಹರಟಿ, ಹುತ್ತೂರು, ವಡಗೂರು, ಮಣಿಘಟ್ಟ, ಹೋಳೂರು, ಮುದುವಾಡಿ, ಆರಹಳ್ಳಿ, ಸುಗಟೂರು, ತೊಟ್ಲಿ, ಮದ್ದೇರಿ, ಬೀಚಗೊಂಡನಹಳ್ಳಿ, ಕ್ಯಾಲನೂರು, ರಾಜಕಲ್ಲಹಳ್ಳಿ, ಸೂಲೂರು, ಬೆಳ್ಳೂರು, ನರಸಾಪುರ, ಅರಾಭಿಕೊತ್ತನೂರು, ಕೊಂಡರಾಜನಹಳ್ಳಿ, ಮುದುವತ್ತಿ, ವಕ್ಕಲೇರಿ ತಾಪಂ ಕ್ಷೇತ್ರ.
ಮಾಲೂರು ತಾಲೂಕಿನಲ್ಲಿ ತೊರ್ನಹಳ್ಳಿ, ಶಿವಾರಪಟ್ಟಣ, ದೊಡ್ಡಶಿವಾರ, ಸೊಣ್ಣಹಳ್ಳಿ, ಅರಳೇರಿ, ಕುಡಿಯನೂರು, ಯಶವಂತಪುರ, ಹುಲಿಮಂಗಲ ಹೊಸಕೋಟೆ, ಲಕ್ಕೂರು, ಜಯಮಂಗಲ, ಡಿ.ಎನ್.ದೊಡ್ಡಿ, ಮಾಸ್ತಿ, ದೊಡ್ಡಕಲ್ಲಹಳ್ಳಿ, ಸುಗ್ಗೊಂಡಹಳ್ಳಿ, ದಿನ್ನಹಳ್ಳಿ, ನೂಟವೆ, ಹುಳದೇನಹಳ್ಳಿ, ಟೇಕಲ್ ಹುಣಸೀಕೋಟೆ ತಾಪಂ ಕ್ಷೇತ್ರಗಳು.
ಬಂಗಾರಪೇಟೆ ತಾಲೂಕಿನಲ್ಲಿ ಸೂಲಿಕುಂಟೆ, ಚಿಕ್ಕಅಂಕಂಡಹಳ್ಳಿ, ಕಾರಹಳ್ಳಿ, ಮಾವಹಳ್ಳಿ, ದೊಡ್ಡೂರು ಕರಪನಹಳ್ಳಿ, ಚಿನ್ನಕೋಟೆ, ಬೆಂಗನೂರು, ದೊಡ್ಡವಲಗಮಾದಿ, ಹುಲಿಬೆಲೆ, ಬೂದಿಕೋಟೆ, ಯಳೇಸಂದ್ರ, ಗುಲ್ಲಹಳ್ಳಿ, ಬಲಮಂದೆ, ದೋಣಿಮಡಗು, ಕಾಮಸಮುದ್ರ, ಕೇತಗಾನಹಳ್ಳಿತಾಪಂ ಕ್ಷೇತ್ರಗಳು.
ಕೆಜಿಎಫ್ ತಾಲೂಕಿನಿಂದ ಕಮ್ಮಸಂದ್ರ, ಪಾರಾಂಡಹಳ್ಳಿ, ಮಾರಿಕುಪ್ಪ, ಕೆಂಪಾಪುರ, ಕ್ಯಾಸಂಬಳ್ಳಿ, ಪೀಲವಾರ, ರಾಮಸಾಗರ, ವೆಂಗಸAದ್ರ, ಸುಂದರಪಾಳ್ಯ, ಹಂಗಳ, ಬೇತಮಂಗಲ, ಟಿ.ಗೊಲ್ಲಹಳ್ಳಿ ತಾಪಂ ಕ್ಷೇತ್ರಗಳು.
ಮುಳಬಾಗಿಲು ತಾಲೂಕಿನಿಂದ ಬಲ್ಲ, ಆವಣಿ, ದೇವರಾಯಸಮುದ್ರ, ಕನ್ನಸಂದ್ರ, ಯಳಚೇಪಲ್ಲಿ, ತಾಯಲೂರು, ಸೊನ್ನವಾಡಿ, ಪದ್ಮಘಟ್ಟ, ಆಲಂಗೂರು, ಗುಮ್ಮಕಲ್, ಎನ್.ಚಮಕಲಹಳ್ಳಿ, ನಂಗಲಿ, ಮುಷ್ಠೂರು, ಹೆಬ್ಬಣಿ, ಬೈರಕೂರು, ಅಂಬ್ಲಿಕಲ್, ಗುಡಿಪಲ್ಲಿ, ಎಚ್.ಗೊಲ್ಲಹಳ್ಳಿ, ಆಗರ, ದುಗ್ಗಸಂದ್ರ, ಉತ್ತನೂರು ತಾಪಂ ಕ್ಷೇತ್ರಗಳು.
ಶ್ರೀನಿವಾಸಪುರ ತಾಲೂಕಿನಿಂದ ಸೋಮಯಾಜಲಪಲ್ಲಿ, ಮುತ್ತಕಪಲ್ಲಿ, ಯಲ್ದೂರು, ಲಕ್ಷ್ಮಿ ಸಾಗರ, ಚಲ್ದಿಗಾನಹಳ್ಳಿ, ದಳಸನೂರು, ಜೆ.ತಿಮ್ಮಸಂದ್ರ, ರೋಣೂರು, ಹೊದಲಿ, ತಾಡಿಗೋಳ್, ಕೋಡಿಪಲ್ಲಿ, ನೆಲವೆಂಕಿ, ಪುಲಗೂರಕೋಟೆ, ಗೌಡತಾತನಗಡ್ಡ, ರಾಯಲ್ಪಾಡು, ಅಡ್ಡಗಲ್, ಕೂರಿಗೇಪಲ್ಲಿ, ಗೌನಿಪಲ್ಲಿ ತಾಪಂ ಕ್ಷೇತ್ರಗಳಿರುತ್ತವೆ.
ಕ್ಷೇತ್ರ ವ್ಯಾಪ್ತಿಯ ಗ್ರಾಮಗಳನ್ನು ಆಯೋಗದ ವೆಬ್ಸೈಟ್ನಲ್ಲಿ ಪರಂಬರಿಸಬಹುದಾಗಿದೆ ಎಂದು ಸೀಮಾ ಆಯೋಗದ ನಿರ್ದೇಶಕ ಕೆ.ಆರ್.ರುದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲವು ದಿನಗಳ ಹಿಂದೆ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಬಾಲಿವುಡ್ ನಟ ಅಭಿತಾಬ್ ಬಚ್ಚನ್ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಈ ಬಗ್ಗೆ ಸ್ವತಃ ಅಮಿತಾಬ್ ಬಚ್ಚನ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ ಸುಧಾಮೂರ್ತಿ ಅವರು ‘ಕೌನ್ ಬನೇಗ ಕರೋಡ್ ಪತಿ’ ಗೆ ಸ್ಪರ್ಧಿಯಾಗಿ ಹೋಗಿದ್ದಾರಾ ಅಥವಾ ಅತಿಥಿಯಾಗಿ ಹೋಗಿದ್ದಾರಾ ಎಂಬ ಗೊಂದಲ ಮೂಡಿತ್ತು. ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದೆ. ಸುಧಾಮೂರ್ತಿ ಅವರು ನಟ ಅಭಿತಾಬ್ ಬಚ್ಚನ್ ನಿರೂಪಣೆಯ ‘ಕೌನ್…
ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.
ಮಳೆಯ ಸಿಂಚನ ಇಳೆಯನ್ನು ಸ್ಪರ್ಶಿಸುತ್ತಿದ್ದಂತೆ, ಭೂಗರ್ಭದಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸುವ ಬೆಳೆ ಎಂದರೆ ಅಣಬೆ. ಇದು ನಿಸರ್ಗದ ಚಮತ್ಕಾರವಾದರೂ ಈ ಪೈಕಿ ಬಹಳಷ್ಟು ಅಣಬೆಗಳು ವಿಷಪೂರಕವಾದವು. ಆದರೆ ಮನೆ ಬಳಕೆಗೆ ಉಪಯೋಗ ಆಗುವಂತಹ ಅಣಬೆಯನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆದು ಅದರಿಂದ ಲಾಭ ಗಳಿಸಬಹುದು.
ವರ್ಷಗಳ ಕಾಲ ಪ್ರೀತಿ ಮಾಡಿದ ಹುಡುಗಿಯರು ಮದುವೆ ವಿಚಾರ ಬಂದಾಗ ತಮ್ಮ ಮನಸ್ಸನ್ನು ಬದಲಿಸ್ತಾರೆ. ಪ್ರೀತಿಸಿದ ಅದೆಷ್ಟೋ ಹುಡುಗಿಯರು ಬಾಯ್ ಫ್ರೆಂಡ್ ಬಿಟ್ಟು ಬೇರೆ ಹುಡುಗನ ಕೈ ಹಿಡಿತಾರೆ. ಅಷ್ಟಕ್ಕೂ ಹುಡುಗಿಯರು ಯಾಕೆ ಹೀಗೆ ಮಾಡ್ತಾರೆ ಎಂಬ ಪ್ರಶ್ನೆ ಹುಡುಗರನ್ನು ಕಾಡದೆ ಇರುವುದಿಲ್ಲ. ಮಹಿಳೆಯರು ಎಷ್ಟು ಮುಂದುವರೆದಿದ್ದರು ತಂದೆ-ತಾಯಿ ಪ್ರೀತಿ, ಭಯ ಅವರನ್ನು ಕಾಡುತ್ತದೆ. ಪ್ರೀತಿಸಿದ ಹುಡುಗನಿಗೆ ಪಾಲಕರು ಒಲ್ಲೆ ಎಂದ್ರೆ ಭಯ ಅವ್ರನ್ನು ಕಾಡುತ್ತದೆ. ತಂದೆ-ತಾಯಿಗೆ ನೋವು ನೀಡಲು ಮನಸ್ಸು ಮಾಡದ ಹುಡುಗಿಯರು ಪ್ರೇಮಿಯಿಂದ ದೂರ…
ಅಧಿಕಾರಕ್ಕೆ ಬಂದಾಗಿನಿಂದಲೂ ಚುನಾವಣೆ ವೇಳೆ ನೀಡಲಾದ ಭರವಸೆಗಳನ್ನು ಈಡೇರಿಸೋದರಲ್ಲೇ ನಿರತರಾಗಿರುವ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ಒಂದೇ ದಿನಕ್ಕೆ 1 ಲಕ್ಷದ 26 ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಈ ವೇಳೆ ವಿಶ್ವದಾಖಲೆ ನಿರ್ಮಿಸಿದ್ದಾರೆ. ಚುನಾವಣೆ ವೇಳೆ ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಜಗನ್ ಇದೀಗ ಒಂದೇ ಭಾರಿಗೆ 1 ಲಕ್ಷದ 26 ಸಾವಿರ ಸರ್ಕಾರಿ ಉದ್ಯೋಗಕ್ಕೆ ನೇಮಕ ನಡೆಸಿದ್ದು ನಿನ್ನೇ ನಡೆದ ಸಮಾರಂಭದಲ್ಲಿ ಸ್ವತಃ ತಾವೇ ಅಭ್ಯರ್ಥಿಗಳಿಗೆ…
ಸಾಧಿಸುವವನಿಗೆ ಛಲ ಇದ್ರೆ ಖಂಡಿತ ಯಶಸ್ಸು ತನ್ನದಾಗಿಸಿ ಕೊಳ್ಳಬಹುದು ಹಾಗೂ ಅದಕ್ಕೆ ತಕ್ಕ ಪರಿಶ್ರಮ ಇದ್ರೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದನ್ನ ಈ 23 ವಯಸ್ಸಿನ ಹೆಣ್ಣು ಮಗಳು ಸಾಧನೆ ಮಾಡಿ ತೋರಿಸಿದ್ದಾಳೆ. ಸಾಧನೆ ಅನ್ನೋದು ಬರಿ ಶ್ರೀಮಂತರಿಗೆ ಅಷ್ಟೇ ಅಲ್ಲ ಅನ್ನೋದನ್ನ ಕೂಡ ತೋರಿಸಿದ್ದಾಳೆ. ಈಕೆಯ ಸಾಧನೆಯ ದಾರಿ ಹೇಗಿತ್ತು ಹಾಗೂ ಇದರ ಇಂದಿನ ಪರಿಶ್ರಮ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿಸುತ್ತೇವೆ ಬನ್ನಿ. ಈಕೆಯ ಹೆಸರು ಅನುಪ್ರಿಯಾ ಲಾಕ್ರಾ ಎಂಬುದಾಗಿ ಒಬ್ಬ ಸಾಮಾನ್ಯ…