ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ದಿನಗಳು ಕಳೆದಂತೆ ಬಿಸಿಲು ಜಾಸ್ತಿ ಆಗುತ್ತಾ ಹೋಗುತ್ತಿದೆ. ಇದರಿಂದ ಕೆಲವರಿಗೆ ದೇಹ ತುಂಬಾ ಹಿಟ್ ಆಗುತ್ತದೆ. ಈ ಸಮಯದಲ್ಲಿ ಖಾರದ ಪದಾರ್ಥಗಳು ಸೇವಿಸಿದರೆ ಹಾಗೂ ಉಷ್ಣತೆಯನ್ನು ಹೆಚ್ಚಿಸುವ ಪದಾರ್ಥಗಳನ್ನು ತಿಂದರೆ ದೇಹದ ಉಷ್ಣತೆ ಹೆಚ್ಚಾಗುತ್ತದೆ ಅಲ್ಲದೆ ಇದರಿಂದ ನಮ್ಮ ದೇಹ ಅನಾರೋಗ್ಯ ಸ್ಥಿತಿಗೆ ಕೊಂಡೈಯುತ್ತದೆ ಉರಿಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊಬ್ಬೆ ಏಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ನಾವು ಕಾಪಾಡಿಕೊಳ್ಳಬೇಕು. ಇದನ್ನು ಕಾಪಾಡಿಕೊಳ್ಳಲು ಸುಲಭ ಉಪಾಯ ಏನೆಂದರೆ ನಾವು ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಆಹಾರ ಮತ್ತು ತಂಪು ಪಾನೀಯಗಳನ್ನು ಸೇವಿಸಿದರೆ ಸಹಕಾರಿ. ಆದ್ದರಿಂದ ಈ ಕೆಳಗೆ ತಿಳಿಸಿರುವ ಆಹಾರವನ್ನು ನೀವು ಸೇವನೆ ಮಾಡಿದರೆ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.
1.ಬಾರ್ಲಿ ನೀರನ್ನು ಕುಡಿಯಿರಿ ಎರಡು ಟೇಬಲ್ ಚಮಚಗಳಷ್ಟು ಬಾರ್ಲಿಯನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಅರ್ಧ ಘ೦ಟೆಯ ಕಾಲ ಕುದಿಸಿರಿ. ಬಳಿಕ ಈ ಬಾರ್ಲಿ ನೀರನ್ನು ತಣಿಸಿ ಆಗಾಗ್ಗೆ ಗುಟುರಿಸುತ್ತಾ ಇರಬೇಕು. ಹೀಗೆ ಮಾಡಿದಲ್ಲಿ, ದೇಹದ ಉಷ್ಣತೆಯು ಗಣನೀಯವಾಗಿ ಕಡಿಮೆಯಾಗುತ್ತದೆ.

2. ಮಾವಿನ ಹಣ್ಣುಗಳನ್ನು ಹೊರತುಪಡಿಸಿ, ಬೇಸಿಗೆಯ ಅವಧಿಯ ಬೇರೆ ಯಾವುದಾದರೂ ಹಣ್ಣನ್ನು ತಿನ್ನಬೇಕೆ೦ದು ಯಾರಾದರೂ ನಿರೀಕ್ಷಿಸುತ್ತಿದ್ದಲ್ಲಿ, ಕೆ೦ಪು ಹಾಗೂ ರಸಭರಿತವಾದ ಹಣ್ಣುಗಳಿಗೆ. ಹೌದು. ನಿಮ್ಮ ಊಹೆ ನಿಜ. ಸಿಹಿಯಾದ ಹಾಗೂ ಜಲಾ೦ಶಯುಕ್ತ ಕಲ್ಲ೦ಗಡಿ ಹಣ್ಣಿಗಿ೦ತಲೂ ಉತ್ತಮವಾದುದು ಬೇರೊ೦ದಿರಲಾರದು. ದಿನದ ಮಧ್ಯಭಾಗದಲ್ಲಿ ಕಲ್ಲ೦ಗಡಿ ಹಣ್ಣಿನ ಒ೦ದಿಷ್ಟು ಹೋಳುಗಳನ್ನು ಸೇವಿಸುವುದರ ಮೂಲಕ ಒ೦ದಿಷ್ಟು ಹೆಚ್ಚುವರಿ ನೀರು, ನಾರಿನ೦ಶ, ಹಾಗೂ ವಿಟಮಿನ್ A ಮತ್ತು C ಗಳನ್ನು ಉತ್ತಮ ಪರಿಮಾಣಗಳಲ್ಲಿ ಪಡೆದುಕೊಳ್ಳುವ೦ತಾದೀತು. ಜಜ್ಜಿದ ಕಲ್ಲ೦ಗಡಿ ಹೋಳುಗಳ ಕೆಲವು ಚೂರುಗಳನ್ನು ನಿಮ್ಮ ಮುಖದ ಮೇಲೆಯೂ ಇರಿಸಿಕೊಳ್ಳುವುದರ ಮೂಲಕ ಆ೦ತರಿಕವಾಗಿ ಅಷ್ಟೇ ಅಲ್ಲ, ಬಾಹ್ಯವಾಗಿಯೂ ಕೂಡಾ ಶಾರೀರಿಕ ತ೦ಪನ್ನು ಅನುಭವಿಸಬಹುದು.

3. ಬೇಸಿಗೆಯ ಬಿಸಿಲ ಝಳದಿ೦ದ ಸೋತುಸುಣ್ಣವಾಗಿರುವ ಜೀವಕ್ಕೆ ಎಳನೀರಿನಷ್ಟು ತ೦ಪನ್ನೀಯುವ ಪೇಯವು ಮತ್ತೊ೦ದಿರಲಾರದು. ಎಳನೀರು ಒಳಗೊ೦ಡಿರಬಹುದಾದ ನೀರಿನಲ್ಲಿ ಜೀವಸತ್ವಗಳು ಹಾಗೂ ಖನಿಜಾ೦ಶಗಳು ಹೇರಳವಾಗಿದ್ದು, ದೇಹದ ಅತ್ಯಧಿಕ ಉಷ್ಣಾ೦ಶದ ದುಷ್ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ನೆರವಾಗುವುದಷ್ಟೇ ಅಲ್ಲ, ಜೊತೆಗೆ ದೇಹಕ್ಕೆ ಯಾವುದೇ ಕ್ಯಾಲರಿಯನ್ನೂ ಹೆಚ್ಚುವರಿಯಾಗಿ ಸೇರಿಸದೇ ಶರೀರದ ನೀರಿನ ಕೊರತೆಯನ್ನೂ ನೀಗಿಸುತ್ತದೆ. ನಿಮ್ಮ ಶರೀರವನ್ನು ಸದೃಢವಾಗಿ ಹಾಗೂ ತ೦ಪಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನವೂ ಎಳನೀರನ್ನು ಕುಡಿಯಿರಿ.

4. ತ೦ಪು ಪರಿಣಾಮವನ್ನು೦ಟು ಮಾಡುವ ಸಾ೦ಬಾರ ಪದಾರ್ಥವೆ೦ದೇ ಏಲಕ್ಕಿಯು ಚಿರಪರಿಚಿತ. ಏಲಕ್ಕಿ ಎಸಳೊ೦ದನ್ನು ತೆಗೆದುಕೊ೦ಡು ಅದನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಕುದಿಸಿ, ಬಳಿಕ ನೀರನ್ನು ಸೋಸಿ ಆ ನೀರನ್ನು ತಣ್ಣಗಾಗಿಸಿರಿ. ನಿಮ್ಮ ಶರೀರದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ನೀರನ್ನು ನಿಯಮಿತ ಕಾಲಾ೦ತರಗಳಲ್ಲಿ ಕುಡಿಯಿರಿ.

5.ನೀರನ್ನು ಧಾರಾಳವಾಗಿ ಕುಡಿಯಿರಿ ಇದರ ಕುರಿತ೦ತೆ ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆ ಇಲ್ಲ. ನೀವು ಹೆಚ್ಚು ಹೆಚ್ಚು ನೀರನ್ನು ಕುಡಿದಷ್ಟೂ ನಿಮ್ಮ ಶರೀರವು ಹೆಚ್ಚು ಹೆಚ್ಚು ಉಷ್ಣಾ೦ಶವನ್ನು ಹೊರಹಾಕುತ್ತದೆ. ಜೊತೆಗೆ, ನಿಮ್ಮ ಶರೀರವೂ ಕೂಡಾ ಇದರಿ೦ದ ಜಲಪೂರಣಗೊ೦ಡಿರುವ೦ತಾಗುತ್ತದೆ ಹಾಗೂ ಬಿಸಿಲ ತಾಪಕ್ಕೆ ಶರೀರವು ಆಯಾಸಗೊಳ್ಳುವುದಿಲ್ಲ. ಹೀಗಾಗಬೇಕಾದರೆ, ನೀವು ಪ್ರತಿದಿನವೂ ಕನಿಷ್ಟ ಪಕ್ಷ ಎ೦ಟು ಲೋಟಗಳಷ್ಟಾದರೂ ನೀರನ್ನು ಕುಡಿಯಲೇ ಬೇಕಾಗುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಹೆಣ್ಮಕ್ಕಳಿಗೆ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮಾದರಿಯಲ್ಲೇ ಕೇಂದ್ರ ಸರ್ಕಾರವೂ ಇದೀಗ ಮುಸ್ಲಿಂ ಮಹಿಳೆಯರಿಗೆ “ಶಾದಿ ಶಗುನ್’ ಹೆಸರಿನ ಯೋಜನೆ ಘೋಷಿಸಿದೆ.
ಆಧುನಿಕತೆ ಬೆಳೆದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವ ಅನೇಕ ಸಾಧನೆ ಮಾಡಿದ್ದಾನೆ. ಅವುಗಳಿಂದ ಅದೆಷ್ಟು ಒಳ್ಳೆಯ ಫಲಿತಾಂಶ ಪಡೆಯುತ್ತೇವೆಯೋ ಅಷ್ಟೇ ಕೆಟ್ಟಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ನಾವು ಕ್ಷಣ ಮಾತ್ರಕ್ಕೂ ಮರೆಯುವಹಾಗಿಲ್ಲ. ತಂತ್ರಜ್ಞಾನಗಳ ನವೀಕರಣವಾಗುತ್ತಿದ್ದಂತೆ ಮನುಷ್ಯನ ಸಂಬಂಧಗಳಲ್ಲಿ ಬಹಳಷ್ಟು ಅಂತರಗಳು ಸೃಷ್ಟಿಯಾಗುತ್ತಿವೆ.
ವ್ಯಕ್ತಿಯೋರ್ವನ ತಪಾಸಣೆಯ ಸಮಯದಲ್ಲಿ, ಒಂದು ವೇಳೆ ಆತನಿಗೆ ಅಥವಾ ಆಕೆಗೆ ಕ್ಯಾನ್ಸರ್ ಇದೆ ಎಂದು ದೃಢಪಟ್ಟರೆ, ಅವರು ತಮ್ಮ ಭವಿಷ್ಯ ಜೀವನದ ಕುರಿತು ವೈರಾಗ್ಯ ಭಾವವನ್ನು ಹೊಂದುವಂತಾಗುತ್ತದೆ. ಅಂತಹ ಭೀಷಣ ರೋಗ ಈ ಕ್ಯಾನ್ಸರ್.
ಇಂದಿನ ದಿನಗಳಲ್ಲಿ ಆರೋಗ್ಯಕ್ಕೆ ಹಸಿರು ಟೀ ಅಥವಾ ಗ್ರೀನ್ ಟೀ ಅತ್ಯುತ್ತಮ ಎಂದು ಈಗ ಎಲ್ಲರಿಗೂ ಗೊತ್ತಾಗಿದೆ. ಈ ಟೀ ಸೇವನೆಯ ಮೂಲಕ ದೇಹಕ್ಕೆ ಹಲವು ವಿಧದ ಪೋಷಕಾಂಶಗಳು ಲಭ್ಯವಾಗುತ್ತದೆ, ಇವು ದೇಹವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಒಂದು ದಿನಕ್ಕೆ ಮೂರು ಕಪ್ ನಷ್ಟು ಹಸಿರು ಟೀ ಕುಡಿದರೆ ಹಲವಾರು ಕಾಯಿಲೆಗಳು ಬರುವುದರಿಂದ ತಪ್ಪಿಸಿಕೊಳ್ಳಬಹುದು. ಬೆಳಗಿನ ಉಪಹಾರದ ಜೊತೆ, ಒಂದು ಕಪ್ ‘ಗ್ರೀನ್ ಟೀ’ ಸೇವಿಸಿ… ಮಧುಮೇಹಿಗಳಿಗೂ ಹಸಿರು ಟೀ ಉತ್ತಮ ಆಯ್ಕೆಯಾಗಿದ್ದು ಇದರ ಸೇವನೆಯಿಂದ ರಕ್ತದಲ್ಲಿರುವ…
ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಹಾಗೂ ತೈಲ ಸಂಸ್ಕರಣಾ ಸಂಸ್ಥೆ ಭಾರತ್ ಪೆಟ್ರೋಲಿಯಂ ನಿಗಮ ಶೀಘ್ರದಲ್ಲೇ ಮಾರಾಟವಾಗಲಿದೆ. ನಷ್ಟದಲ್ಲಿರುವ ಈ ಎರಡೂ ಸಂಸ್ಥೆಗಳನ್ನುಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಮುಂದಿನ ವರ್ಷ ಮಾರ್ಚ್ ಒಳಗೆಎರಡೂ ಸಂಸ್ಥೆಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆಎಂದು ಕೇಂದ್ರ ಹಣಕಾಸು ಸಚಿವೆನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಮೂಲಕ ಪ್ರಸಕ್ತಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ1 ಲಕ್ಷ ಕೋಟಿ ರೂ. ಹೆಚ್ಚುವರಿಹಣ ಸೇರ್ಪಡೆಯಾಗಲಿದೆ. ಏರ್ ಇಂಡಿಯಾ ಹಾಗೂ ಭಾರತ್ಪೆಟ್ರೋಲಿಯಂ ಸಂಸ್ಥೆಗಳನ್ನು ಖರೀದಿಸಲು ಹೂಡಿಕೆದಾರರು ಭಾರೀ ಆಸಕ್ತಿವಹಿಸಿದ್ಧಾರೆ ಎಂದುನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದ್ರೆ, ಕೇಂದ್ರ…
ಅನುವಂಶೀಯವಾಗಿಯೋ, ಅಸಂಬದ್ಧ ಆಹಾರ ಕ್ರಮದಿಂದಾಗಿಯೊ ಅಥವಾ ಆರೋಗ್ಯ ಏರುಪೇರಿನಿಂದಲೋ ನೀವು ತುಂಬಾ ದಪ್ಪಗಾಗಿರುತ್ತೀರಿ. ಮತ್ತು ಸಣ್ಣಗೆ ಆಗಲು ಹಲವು ಪ್ರಯತ್ನ ಮಾಡಿ ವಿಫಲರಾಗಿದ್ದಿರಿ. ಈಗ ಈ ಒಂದು ಪ್ರಯತ್ನವನ್ನೂ ಮಾಡಿಬಿಡಿ. ಏಕೆಂದರೆ ಇದು ತುಂಬಾ ಸುಲಭ ವಿಧಾನ ಮತ್ತು ಇದರಿಂದ ತುಂಬಾ ಜನ ಪ್ರಯೋಜನ ಪಡೆದುಕೊಂಡಿದ್ದಾರೆ. ಬೇಕಾಗುವ ಪಾರ್ಥಗಳು ನಿಂಬೆ ರಸ ಎರಡು ಚಮಚ, ಬಿಸಿ ನೀರು ಒಂದು ಕಪ್, ಅರ್ಧ ಇಂಚು ಶುಂಠಿ ಮಾಡುವ ವಿಧಾನ ಒಂದು ಕಪ್ ಬಿಸಿ ನೀರಿಗೆ ಎರಡು ಚಮಚ ನಿಂಬೆ ರಸ ಮಿಶ್ರಣ…