News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಸುದ್ದಿ

ನೀವು ಎಲ್ಲಾದರೂ ಹಣ ಹೂಡಿಕೆ ಮಾಡುತ್ತೀರಾ,ಹಾಗಾದರೆ ಹೂಡಿಕೆಗೂ ಮುನ್ನ ನಿಮ್ಮನ್ನು ನೀವು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ,.!

73

ಸಾಮಾನ್ಯವಾಗಿ  ಎಲ್ಲರೂ ಯಾವುದೊ ಒಂದು ಕಡೆ ಅಥವಾ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ . ಮುಖ್ಯವಾಗಿ  ಹೆಚ್ಚಿನ ಆದಾಯ ಬರುವ  ಭರವಸೆಗಳನ್ನು ನೀಡುವ ಕಡೆ ಮೊರೆ ಹೋಗುತ್ತಾರೆ. ಆದಾಯವನ್ನು ನೋಡುತ್ತಾರೆ ಹೊರತು ಕಂಪನಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದಿಲ್ಲ, ಮತ್ತು  ಏಜೆಂಟ್‌ಗಳ ಮೂಲಕ ತಮ್ಮಉತ್ಪನ್ನಗಳನ್ನು ಮಾರಾಟ ಮಾಡಿ ಮೋಸಮಾಡಿರುವ ಕಂಪನಿಗಳ ಉದಾಹರಣೆಯು  ಸಹ ಸಾಕಷ್ಟಿದೆ.ಹಣ ಹೂಡಿಕೆ ಮಾಡಿದ ನಂತರ ಲಾಭವನ್ನು ಗಳಿಸದೆ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ಜನರು ಸಾಕಷ್ಟಿದ್ದಾರೆ. ಸಮಾಜದಲ್ಲಿ ಒಂದೇ ಬಾರಿಗೆ ಹಣ ಡಬಲ್ಆಗಬೇಕೆಂದು ಕನಸು ಕಾಣುವವರೇನು ಕಮ್ಮಿಇಲ್ಲ. ನೀವು ಕಷ್ಟಪಟ್ಟು ದುಡಿದ ಹಣವು ನೀರಿನಂತೆ ಪೋಲಾಗದಂತೆ ನೋಡಿಕೊಳ್ಳುವುದು ಜಾಣತನ. ಯಾವುದೇ ವ್ಯಾಪಾರ ಅಥವಾ ವಹಿವಾಟಿನಲ್ಲಿ ನೀವು ಹಣವನ್ನು ಹೂಡುವ ಮುನ್ನ ನಿಮ್ಮನ್ನು ನೀವು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.

1.ನಾವು ಮಾಡುವ ಹೂಡಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ? ಯಾವುದೇ ವ್ಯವಹಾರದಲ್ಲಿ , ಆಸ್ತಿನಿರ್ವಹಣಾ ಕಂಪನಿಗಳಲ್ಲಿ, ಇತರೆ ಹಣಕಾಸು ಸಂಸ್ಥೆಗಳಲ್ಲಿನೀವು ಕಷ್ಟ ಪಟ್ಟು ದುಡಿದಹಣವನ್ನು ಹೂಡುವ ಮುನ್ನ ನೀವುಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ ಇದಾಗಿದೆ.ನೀವು ಯಾವುದೇ ವಲಯದಲ್ಲಿ ಹಣ ಹೂಡಿಕೆ ಮುನ್ನಕಂಪನಿಯ ಅಥವಾ ಕ್ಷೇತ್ರದ ಬಗ್ಗೆಹೆಚ್ಚು ತಿಳಿದುಕೊಳ್ಳಿ.  ನಿಮ್ಮಹಣಕ್ಕೆ ಹೆಚ್ಚು ಆದಾಯ ಬರುತ್ತದೆಎಂದು ಭರವಸೆ ನೀಡುವ ಹೂಡಿಕೆಯತಾಣಗಳು ಸಾಕಷ್ಟಿವೆ. ಹಾಗಂತ ನೀವು ದಿಢೀರ್ಎಂದು ಹಣವನ್ನು ಹೂಡುವ ಮುನ್ನವ್ಯಾಪಾರದ ಪರಿಭಾಷೆಗಳನ್ನು ಅರ್ಥಮಾಡಿಕೊಳ್ಳಿ.

2. ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆಯೇ?ನೀವು ಯಾವಾಗ ಹಣ ಹೂಡಿಕೆಗೆಮುಂದಾಗುತ್ತೀರಾ ಎಂಬ ಅರಿವು ನಿಮಗಿರಲಿ.ನಿಮ್ಮ ಹೂಡಿಕೆಗೆ ಒಂದು ಗುರಿಯಿರಲಿ. ಸರಳವಾಗಿಹೆಚ್ಚುವರಿ ಹಣವನ್ನು ಪಡೆಯುವ ಮನಸ್ಸಿನಲ್ಲಿಮುಂದಾಗದಿರಿ.

3. ಹೂಡಿಕೆಯು ಒಳಗೊಂಡಿರುವ ಅಪಾಯಗಳು ಯಾವುವು? ಯಾವುದೇಹೂಡಿಕೆ ಮಾಡುವ ಮುನ್ನ ನಿಮ್ಮಹಣವನ್ನು ಕಳೆದುಕೊಳ್ಳುವ ಅಪಾಯಗಳಿಗೆ ಒಳಗಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ನಿಮಗೆಹೆಚ್ಚಿನ ಆದಾಯ ಬರದಿದ್ದರೂ ಪರವಾಗಿಲ್ಲ,ನೀವು ಹೂಡಿಕೆ ಮಾಡಿದ ಹಣವನ್ನುಮಾತ್ರ ಕಳೆದುಕೊಳ್ಳಬಾರದು. ಸಾಮಾನ್ಯವಾಗಿ ಹಣಕಾಸು ಸಂಸ್ಥೆಗಳು ನಿಮ್ಮಹಣವನ್ನು ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ. ಅದರೊಂದಿಗೆಆಧಾರವಾಗಿರುವ ಆಸ್ತಿಯನ್ನು ಹೊಂದಿವೆ.

4. ಹೂಡಿಕೆಯಿಂದನಾನು ಎಷ್ಟು ಗಳಿಸಬೇಕೆಂದು ನಿರೀಕ್ಷಿಸುತ್ತೇನೆ?ನೀವು ಮೀಸಲಿಟ್ಟ ಹಣವು ಈ ಹೂಡಿಕೆಗೆಎಷ್ಟು ಮುಖ್ಯ? ನಿಮ್ಮ ಯೋಜನೆಯನ್ನುತಲುಪಲು ನೀವು ಹೂಡಿದ ಹಣದಿಂದಎಷ್ಟು ಆದಾಯವನ್ನು ಪಡೆಯಬೇಕು? ಈ ರೀತಿಯ ಪ್ರಶ್ನೆಗಳಿಗೆನಿಮ್ಮಲ್ಲಿ ನೀವು ಸ್ಪಷ್ಟತೆ ಪಡೆದುಕೊಳ್ಳಬೇಕು.ಆ ಮೂಲಕ ನಿಮ್ಮಭವಿಷ್ಯದ ವೆಚ್ಚಗಳು ಮತ್ತು ಗುರಿಗಳನ್ನು ಆರ್ಥಿಕವಾಗಿಯೋಜಿಸಲು ನಿಮಗೆ ಸಾಧ್ಯವಾಗುತ್ತದೆ.

5. ಹೂಡಿಕೆಯಿಂದ ಪ್ರತಿಫಲ ಪಡೆಯಲು ಎಷ್ಟುದಿನ ಕಾಯಬೇಕಾಗಬಹುದು? ನಿಮ್ಮ ಹೂಡಿಕೆಯು ನಿವೃತ್ತಿಗೆಸಂಬಂಧಿಸಿದ ಹಣಕಾಸಿನ ಅಗತ್ಯವಾದರೆ, ನೀವು60 ವರ್ಷ ವಯಸ್ಸಿನವರೆಗೂ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಇದೇ ರೀತಿ ನೀವುಯಾವುದರ ಮೇಲೆ ಹೂಡಿಕೆ ಮಾಡಲುಬಯಸುತ್ತಿರೋ ಆ ಹೂಡಿಕೆಯಿಂದ ಪ್ರತಿಫಲಬರುವವರೆಗೂ ನೀವು ಬಂಡವಾಳ ಹೂಡಿಕೆಗೆಸಮರ್ಥರೋ, ಅಥವಾ ಹೂಡಿಕೆ ಸಾಧ್ಯವೇಎಂಬುದನ್ನು ಅರಿಯಿರಿ. ಜೊತೆಗೆ ನಿಮ್ಮ ಅಪೇಕ್ಷಿತಮೊತ್ತವನ್ನು ಪಡೆಯಲು ನೀವು ಎಷ್ಟುಸಮಯದವರೆಗೆ ಕಾಯಲು ಸಿದ್ಧರಿದ್ದೀರಿ ಎಂಬುದನ್ನುತಿಳಿದುಕೊಳ್ಳಿ. ಈ ಪ್ರಶ್ನೆಗಳಿಗೆ ಉತ್ತರಿಸಿದಾಗಅದಕ್ಕೆ ತಕ್ಕಂತಹ ಸೂಕ್ತ ಹೂಡಿಕೆಯನ್ನುನೀವು ಮಾಡಲು ಸಾಧ್ಯ.

6. ಹೂಡಿಕೆ ನೋಂದಾಯಿಸಲಾಗಿದೆಯೇ? ಕಳೆದ ಹಲವು ವರ್ಷಗಳಿಂದಅನೇಕ ಹಗರಣಗಳು ವರದಿಯಾಗಿವೆ. ಜನರನ್ನುನಂಬಿಸಿ ಮೋಸ ಮಾಡುವ ವಂಚಕರುಹೆಚ್ಚಾಗಿದ್ದಾರೆ. ಜನರ ನಂಬಿಕೆಗಳು ಮತ್ತುಸಂಬಂಧಗಳ ಆಧಾರದ ಮೇಲೆ ಜನರಿಗೆಮಂಕು ಬೂದಿ ಎರಚುತ್ತಾರೆ. ಈವಂಚಕರ ಮೇಲೆ ನ್ಯಾಯಾಲಯದ ಪ್ರಕರಣಗಳುಸಾಕಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಇದರಿಂದ ನಿಮಗೆ ಆರ್ಥಿಕಮತ್ತು ಮಾನಸಿಕ ತೊಂದರೆಯೇ ಹೆಚ್ಚು.ಹೀಗಾಗಿ ನೀವು ಯಾವುದರ ಮೇಲೆಹೂಡಿಕೆ ಮಾಡುತ್ತೀರೋ ಆ ಹಣಕಾಸು ಸಂಸ್ಥೆಮತ್ತು ಅದರ ಯೋಜನೆಗಳ ಬಗ್ಗೆಸಂಪೂರ್ಣ ಹಿನ್ನೆಲೆ ಪರಿಶೀಲನೆ ಬಹಳ ಮುಖ್ಯ.

7. ಹೂಡಿಕೆ ವಿಫಲವಾದರೆ ನಾನು ಏನು ಮಾಡಬೇಕು?ನಿಮ್ಮ ಹೂಡಿಕೆ ವಿಫಲವಾದರೆ ನಿಮ್ಮಆಯ್ಕೆಗಳು ಯಾವುವು? ತಪ್ಪನ್ನು ಸರಿಪಡಿಸಲುಅಥವಾ ನಿಮ್ಮ ಹಣವನ್ನು ಮರಳಿಪಡೆಯಲು ನೀವು ಯಾರನ್ನು ಸಂಪರ್ಕಿಸಬಹುದು?ನೀವು ಗ್ರಾಹಕರಾಗಿರುವ ಹಣಕಾಸು ಸಂಸ್ಥೆ ಆರ್‌ಬಿಐ ಅಥವಾ ಸೆಬಿಅಥವಾ ಐಆರ್‌ಡಿಎಐಗೆ ಉತ್ತರಿಸುತ್ತದೆಯೇಎಂದು ಮೊದಲು ತಿಳಿದುಕೊಳ್ಳಬೇಕು. ಆಮೂಲಕ ನೀವು ಸಹಾಯಕ್ಕಾಗಿ ಅವುಗಳನ್ನುಸಂಪರ್ಕಿಸಬಹುದು. ಏಕೆಂದರೆ ನೀವು ಮಾಡುವವ್ಯವಹಾರ ಕುರಿತಾಗಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಇವು ಒದಗಿಸುತ್ತವೆ. ಜೊತೆಗೆದೂರುಗಳನ್ನು ಎದುರಿಸಲು, ಅವರ ಕುಂದುಕೊರತೆಗಳಿಗೆ ಪರಿಹಾರವಿಧಾನಗಳನ್ನು ಸಹ ಅವು ಹೊಂದಿರುತ್ತವೆ.

8. ಹೂಡಿಕೆಯಲ್ಲಿ ನನ್ನ ನಿರ್ಗಮನ ಆಯ್ಕೆಗಳುಯಾವುವು? ನೀವು ಯಾವುದೇ ಯೋಜನೆಯಲ್ಲಿಹಣ ಹೂಡುವ ಮುನ್ನ ಎಷ್ಟುಕಾಲ ಹಣ ಹೂಡಿಕೆ ಮಾಡಬೇಕಾಗಬಹುದುಎಂದು ಅರಿತುಕೊಳ್ಳಿ. ಮತ್ತು ಮೆಚುರಿಟಿ ತಲುಪುವುದಕ್ಕೂಮುನ್ನ ಪೂರ್ವಾವಧಿ ನಿರ್ಗಮನದ ನಿಯಮಗಳೇನು? ಎಷ್ಟು ವರ್ಷಗಳ ಬಳಿಕಪೂರ್ವ ನಿರ್ಗಮನವಾಗಬಹುದು ಎಂದು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ,ಯೋಜನೆಗಳನ್ನು ಹಿಂತೆಗೆದುಕೊಳ್ಳುವ ಮೊದಲು ಗ್ರಾಹಕರು ಕನಿಷ್ಠಅವಧಿಗೆ ಮುಂದುವರಿಯಬೇಕು ಎಂಬ ನಿಯಮವಿರುತ್ತದೆ. ಅದನ್ನುಪೂರೈಸದೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.ಹೀಗಾಗಿ ನೀವು ಯಾವುದೇ ಯೋಜನೆಗೆಸಹಿ ಮಾಡುವ ಮೊದಲು ಯೋಜನೆಗೆಸಂಬಂಧಿತ ದಾಖಲೆಗಳನ್ನು ಎಚ್ಚರದಿಂದ ಓದಿ. ಅಲ್ಲದೆ ಹೂಡಿಕೆಯಪೂರ್ವ ನಿರ್ಗಮನದ ಬಗ್ಗೆ ಅರಿಯಿರಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Village

    ನಿಮ್ಮ ಹಳ್ಳಿಯಲ್ಲಿ ಕರೊನಾ ಜಾಸ್ತಿ ಆಗಲು ಈ ಕಾರಣ ಇರಬಹುದು.

    ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.

  • ರಾಜಕೀಯ

    ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ನವದೆಹಲಿಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್‌, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಮಾತನಾಡಿ, ರಾಜ್ಯದಲ್ಲಿ ಹೊಸ ಮುಖಗಳಿಗೆ ಹೆಚ್ಚು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ ಎಂದರು. 189 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಅವಕಾಶ, 16 ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು, 32 ಒಬಿಸಿ, 9…

  • ಉಪಯುಕ್ತ ಮಾಹಿತಿ

    ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಿಸಲು ಅಥವಾ ನವೀಕರಿಸಲು ಬಯಸುತ್ತಿರುವವರಲ್ಲಿ ನೀವು ಒಬ್ಬರಾಗಿದ್ದರೆ, ಇಲ್ಲಿದೆ ನಿಮಗೊಂದು ಸಂತೋಷದ ವಿಷಯ…!

    ಆಧಾರ್ ನಲ್ಲಿನ ಅಸ್ಪಷ್ಟ,ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ಫೋಟೋಗಳು ಅಥವಾ ಚಿಕ್ಕ ವಯಸ್ಸಿನಲ್ಲಿ ತೆಗೆಸಿದ ಫೋಟೋ ಕೆಲವರನ್ನು ಅನೇಕ ಸಮಸ್ಯೆಗಳಿಗೆ ಸಲುಕಿಸಿತ್ತವೆ. ಹಾಗಾಗಿ ತಮ್ಮ ಆಧಾರ್ ನಲ್ಲಿ ತಮ್ಮ ಫೋಟೋವನ್ನು ಬದಾಲಾಯಿಸಲು ಬಹುತೇಕ ಜನರು ಇಚ್ಛಿಸಿರುತ್ತಾರೆ.. ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋವನ್ನು ಬದಲಾಯಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ನಿಮ್ಮ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿಕೊಡಿ. ಅಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಆಧಾರ್ ಅಪ್ ಡೇಟ್ ಪಾರಂ ಅಥವಾ ತಿದ್ದುಪಡಿ…

  • ಆರೋಗ್ಯ

    ಗರ್ಭಿಣಿ ಸ್ತ್ರೀಯರು ಇವನ್ನು ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಅಪಾಯ! ಈ ಲೇಖನಿ ಓದಿ…

    ಗರ್ಭಿಣಿ ಸ್ತ್ರೀಯರು ಶಾಂಪೂ, ಹೇರ್ ಕಂಡೀಶನರ್ ಮತ್ತು ಡಿಟರ್ಜೆಂಟ್ ಅತಿಯಾಗಿ ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಕೆಲ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

  • ಸುದ್ದಿ

    39ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಗೀತಾ ಟೀಸರ್ ರಿಲೀಸ್…!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ‘ಗೀತಾ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.ಗಣೇಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರಿನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು. ಇಂದು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಅವರು ಅಭಿನಯದ ‘ಗೀತಾ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಗೀತಾ ಚಿತ್ರದ ಟೀಸರ್ ನಲ್ಲಿ ಗಣೇಶ್ ಕನ್ನಡ ಭಾಷೆಗಾಗಿ ಹೋರಾಟ ನಡೆಸಿದ್ದಾರೆ. ಅಲ್ಲದೆ ಗಣೇಶ್ ‘ಕರ್ನಾಟಕದಲ್ಲಿ ಕನ್ನಡಿಗನೇ…

  • ಜ್ಯೋತಿಷ್ಯ

    ನಿಮ್ಮ ರಾಶಿ ಪ್ರಕಾರ ಈ ನಾಣ್ಯ ನಿಮ್ಮ ಪರ್ಸ್ ನಲ್ಲಿದ್ದರೆ ಏನಾಗುತ್ತೆ ಗೊತ್ತಾ?ನಿಮ್ಮ ರಾಶಿಗೆ ಯಾವ ನಾಣ್ಯ ನೋಡಿ…

    ಪ್ರತಿಯೊಬ್ಬರ ಪರ್ಸ್ ನಲ್ಲಿಯೂ ನಾಣ್ಯಗಳು ಇದ್ದೇ ಇರುತ್ವೆ. ಕೆಲವರ ಪರ್ಸ್ ನಲ್ಲಿ 10 ರೂಪಾಯಿ ನಾಣ್ಯವಿದ್ರೆ ಇನ್ನು ಕೆಲವರ ಪರ್ಸ್ ನಲ್ಲಿ 2 ರೂಪಾಯಿ, ಒಂದು ರೂಪಾಯಿ ನಾಣ್ಯವಿರುತ್ತದೆ. ಶಾಸ್ತ್ರದ ಪ್ರಕಾರ, ರಾಶಿಗನುಗುಣವಾಗಿ ನಾಣ್ಯವನ್ನು ಪರ್ಸಿನಲ್ಲಿಟ್ಟರೆ ಶುಭಕರ. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಲೋಹ ಶುಭ ಫಲ ನೀಡುತ್ತವೆ. ಹಾಗಾಗಿ ರಾಶಿಗನುಗುಣವಾಗಿ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಎಂದೂ ಪರ್ಸ್ ಖಾಲಿಯಾಗುವುದಿಲ್ಲ. ಮೇಷ : ಈ ರಾಶಿಯವರು ಪರ್ಸ್ ನಲ್ಲಿ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು. ವೃಷಭ : ಈ ರಾಶಿಯವರು…