ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಿನ ಆಧುನಿಕ ಕಾಲದಲ್ಲಿ ಜಾನರು ವಾಸಿಸುತ್ತಿದ್ದಂತೆ ಕಾಡುಗಳು ಮರೆಯಾಗುತ್ತಿವೆ ಕಾರಣ ನಮಗೆಲ್ಲರಿಗೂ ತಿಳಿದಿದೆ, ನಗರಪ್ರದೇಶಗಳಲ್ಲಿ ಕೈ ತೋಟಕ್ಕೂ ಜಾಗಬಿಡದೆ ಕಟ್ಟಡಗಳು ಎದ್ದೇಳುತ್ತಿವೆ. ಇದರ ಪರಿಣಾಮ ಶುದ್ಧಗಾಳಿಗೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ದೆಹಲಿ ನಗರದಲ್ಲಿ ವಾಯುಮಾಲಿನ್ಯ ಉಂಟು ಮಾಡಿರುವ ದುಷ್ಪರಿಣಾಮ ಹೇಗಿದೆ ಎಂಬುವುದು ನಿಮಗೆ ಗೊತ್ತಿದೆ. ಇನ್ನು ನಮ್ಮ ಬೆಂಗಳೂರು ನಗರದಲ್ಲಿ ಕೂಡ ವರ್ಷದಿಂದ ವರ್ಷಕ್ಕೆಗಿಡಗಳು ಕಡಿಮೆಯಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ.ಹೊರಗಡೆ ಹೋದರೆ ದೂಳು, ಹೊಗೆ ಹಾಗಂತ ಮನೆಯೊಳಗೆ ಶುದ್ಧ ಗಾಳಿಯೇನು ದೊರಕುತ್ತಿಲ್ಲ.ಮನೆಯ ಒಳಗಡೆಯು ಕಲುಷಿತ ಗಾಳಿಯೆ ಓಡಾಡುತ್ತಿರುತ್ತದೆ. ಶುದ್ಧ ಗಾಳಿಗಾಗಿ ಏರ್ ಫ್ಯೂರಿಫೈಯರ್ ತಂದಿಡುವ ಬದಲು ಕೆಲವೊಂದು ಗಿಡಗಳನ್ನು ಬೆಳೆಸಿದರೆ ಸಾಕು, ಶುದ್ಧವಾದ ಗಾಳಿಯನ್ನುಉಸಿರಾಡಬಹುದು. ಇಲ್ಲಿ ಕೆಲವೊಂದು ಗಿಡಗಳ ಬಗ್ಗೆ ಹೇಳಲಾಗಿದೆ, ಅವುಗಳನ್ನು ಹೂ ಕುಂಡಗಳಲ್ಲಿ ಬೆಳೆಯಬಹುದಾಗಿದ್ದು,ಇದನ್ನು ಮನೆಯ ಮುಂಭಾಗದಲ್ಲಿ ಇಟ್ಟರೆಸಾಕು ಶುದ್ಧವಾದ ಗಾಳಿ ಸೇವಿಸಬಹುದು ನೋಡಿ.

1. ಸ್ಪೈಡರ್ ಪ್ಲಾಂಟ್ ಇದು ನೋಡಲುಸ್ವಲ್ಪ ಜೇಡರ ಬಲೆ ರೀತಿಇರುವುದರಿಂದ ಇದನ್ನು ಸ್ಪೈಡರ್ ಪ್ಲಾಂಟ್ಎಮದು ಕರೆಯುತ್ತಾರೆ. ಇದನ್ನು ಮನೆಯ ಒಳಗಡೆ,ಹೊರಗಡೆ ಅಷ್ಟೇ ಏಕೆ ನಿಮ್ಮಆಫೀಸ್ನ ಟೇಬಲ್ ಬಳಿಯೂಇಟ್ಟುಕೊಳ್ಳಬಹುದು. ಇದನ್ನು ಬೆಳೆಯಲು ಚಿಕ್ಕಹೂ ಕುಂಡ ಸಾಕು, ಅದರಲ್ಲಿಮಣ್ಣು ತುಂಬಿ ಈ ಗಿಡನೆಟ್ಟು ಎರಡು ದಿನಕ್ಕೊಮ್ಮೆ ನೀರುಹಾಕಿದರು ಸಾಕಾಗುತ್ತದೆ. ಇದನ್ನು ನೇರವಾಗಿ ಬಿಸಿಲುಬೀಳುವ ಕಡೆ ಇಡಬೇಡಿ. ಇದನ್ನುನೆರಳು ಇರುವ ಕಡೆ ಇಟ್ಟು15 ದಿನಕ್ಕೊಮ್ಮೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇಟ್ಟರೆಸಾಕು. ಒಣಗಿದ ಎಲೆಗಳನ್ನು ತೆಗೆಯಿರಿ,ಇದರಿಂದ ಹೊಸ ಎಲೆಗಳು ಬೆಳೆಯುತ್ತವೆ.ಈ ಗಿಡವನ್ನು ಮನೆಯಒಳಗಡೆ ಇಟ್ಟರೆ ಸಾಕು ಕಡಿಮೆಸೂರ್ಯನ ಬೆಳಕಿನಲ್ಲಿಯೂ ದ್ಯುತಿ ಸಂಶ್ಲೇಷಣೆ ಕ್ರಿಯೆನಡೆಸುವುದರಿಂದ ಶುದ್ಧ ಗಾಳಿ ದೊರೆಯುವುದು.

2. ಲೋಳೆಸರ : ಲೋಳೆಸರದ ಅನೇಕ ಆರೋಗ್ಯಕರಗುಣಗಳ ಬಗ್ಗೆ ನಿಮಗೇ ಗೊತ್ತೇಇರುತ್ತದೆ. ಇದನ್ನು ಕೂದಲು, ತ್ವಚೆಯಆರೈಕೆಯಲ್ಲಿ ಬಳಸುತ್ತಾರೆ, ಇನ್ನು ಅನೇಕ ಆರೋಗ್ಯಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಲಾಗುವುದು. ಇದನ್ನು ಬೆಳೆಯುವುದು ಕೂಡಕಷ್ಟವೇನಿಲ್ಲ. ಒಂದು ಗಿಡದಲ್ಲಿ ಸ್ವಲ್ಪಮಣ್ಣು ಹಾಕಿ ಮೂರು ದಿನಕೊಮ್ಮೆಸ್ವಲ್ಪ ನೀರು ಹಾಕಿದರೂ ಗಿಡತುಂಬಾ ಸೊಗಸಾಗಿ ಬೆಳೆಯುವುದು. ಒಂದುವಾರ ನೀರು ಹಾಕದಿದ್ದರೂ ಗಿಡಒಣಗುವುದಿಲ್ಲ. ಈ ಗಿಡ ಇಂಗಾಲದಡೈ ಆಕ್ಸೈಡ್, ಇಂಗಾಲದ ಮಾನಾಕ್ಸೈಡ್, ಫಾರ್ಮುಲಾಡಿಹೈಡ್ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವುದರಿಂದಶುದ್ಧಗಾಳಿ ದೊರೆಯುತ್ತದೆ.

3. ಶತಾವರಿ ಆಯುರ್ವೇದದಲ್ಲಿ ಶತಾವರಿ ಬಳಸಿ ಅನೇಕಮದ್ದುಗಳನ್ನು ತಯಾರಿಸುತ್ತಾರೆ. ನರ ಸಂಬಂಧಿತ ರೋಗ,ಗ್ಯಾಸ್ಟ್ರಿಕ್, ಅಲ್ಸರ್ ಮುಂತಾದ ಕಾಯಿಲೆಗಳನ್ನುಗುಣಪಡಿಸಲು ಶತಾವರಿ ಬಳಸಲಾಗುವುದು. ಇನ್ನುಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಇದನ್ನುನೀಡಲಾಗುವುದು. ಈ ಎಲ್ಲಾ ಅರೋಗ್ಯಗರಗುಣಗಳ ಜತೆಗೆ ಇದು ಗಾಳಿಯನ್ನುಶುದ್ಧೀಕರಿಸುವ ಕಾರ್ಯ ಮಾಡುತ್ತದೆ. ಇದುಮನೆ ಮುಂದೆ ಇದ್ದರೆ ಬ್ಯಾಕ್ಟಿರಿಯಾಹಾಗೂ ಸೋಂಕಾಣುಗಳನ್ನು ಕೊಲ್ಲುತ್ತದೆ.

4. ತುಳಸಿ ಮನೆ ಮುಂದೆ ತುಳಸಿಗಿಡವಿದ್ದರೆ ಅದರಿಂದ ಆರೋಗ್ಯಕರ ಗುಣಗಳನ್ನುಪಡೆಯುವುದರ ಜತೆಗೆ ಮನೆಯ ಪರಿಸರದಗಾಳಿ ಶುದ್ಧವಾಗಿ ಇರುವಂತೆ ನೋಡಿಕೊಳ್ಳಬಹುದು. ತುಳಸಿಗಿಡ ಗಾಳಿಯಲ್ಲಿರುವ ಇಂಗಾಲದ ಡೈಯಾಕ್ಸೈಡ್, ಕಾರ್ಬನ್ಮಾನಾಕ್ಸೈಡ್, ರಂಜಕದ ಡೈಯಾಕ್ಸೈಡ್ ಹೀರಿಕೊಂಡುಆಮ್ಲಜನಕವನ್ನು ಹೊರಸೂಸುವುದು, ಇದರಿಮದ ಮನೆಯೊಳಗಿನ ಗಾಳಿಶುದ್ಧವಾಗಿರುತ್ತದೆ. ಇನ್ನು ಈ ಗಿಡಮನೆಯ ಸಮಿಪ ಇದ್ದರೆ ಸೊಳ್ಳೆಕಾಟವೂತಪ್ಪುವುದು. ಇದನ್ನು ಮನೆ ಆವರಣಸ್ವಲ್ಪ ವಿಸ್ತಾರವಾಗಿದ್ದರೆ ಅಲ್ಲಿಡಬಹುದು.

5. ಜೆರಬೆರಾ ಗಿಡ ಅಥವಾ ಜೆರ್ಬೆರಾಡೈಸಿ ಸುಮಾರು 30ಕ್ಕೂ ಅಧಿಕ ಬಣ್ಣದಲ್ಲಿಜೆರಬೆರಾ ಗಿಡಗಳು ದೊರೆಯುತ್ತದೆ. ಇದನ್ನುಮನೆಯೊಳಗೆ ಸುಲಭವಾಗಿ ಬೆಳೆಸಬಹುದು. ಹೂ ಕುಂಡದಲ್ಲಿ ಇದರಬೀಜ ಹಾಕಿದರೆ ಸಾಕು ಗಿಡಗಳುಬೆಳೆಯುತ್ತದೆ. ಆದರೆ ಈ ಗಿಡವನ್ನುತುಂಬಾ ನೆರಳಿರುವ ಕಡೆ ಇಡುವುದಕ್ಕಿಂತ ಸ್ವಲ್ಪಬಿಸಿಲು ಬೀಳುವ ಕಡೆ ಇಡಬೇಕು.ಇನ್ನು ಈ ಗಿಡಕ್ಕೆ ಚಳಿಗಾಲದಲ್ಲಿಸ್ವಲ್ಪ ಕಡಿಮೆ ಹಾಕಿದರೆ ಸಾಕಾಗುತ್ತದೆ.ಈ ಗಿಡ ಮನೆಯೊಳಗಿನಹಾಗೂ ಮನೆಯ ಸುತ್ತಮುತ್ತಲಿನ ಗಾಳಿಯನ್ನುಶುದ್ಧಗೊಳಿಸುತ್ತದೆ ಹಾಗೂ ಗಿಡ ಹೂಬಿಟ್ಟಾಗ ಕಣ್ಣಿಗೆ ಸೊಗಸು, ಮನಸ್ಸಿಗೆಖುಷಿಯಾಗುವುದು.

6. ಹಾವಿನ ಸಸ್ಯ ಅಥವಾ ಸ್ನೇಕ್ ಪ್ಲಾಂಟ್ ನೋಡಲು ಹಾವಿನಂತೆ ಕಾಣುವಈ ಸಸ್ಯವನ್ನು ಮನೆಯೊಳಗೆಬೆಳೆಸಲು ಸೂಕ್ತವಾಗಿದೆ. ಈ ಸಸ್ಯವಿದ್ದ ಕಡೆಹಾವು ಕೂಡ ಬರುವುದಿಲ್ಲ. ಕಡಿಮೆಬೆಳಕು ಬೀಳುವ, ತೇವಾಂಶ ಇರುವಕಡೆ ಕೂಡ ಈ ಗಿಡಇಡಬಹುದಾಗಿದೆ. ಇದನ್ನು ಬಾತ್ರೂಂನಲ್ಲೂಇಡಬಹುದು, ಬೆಡ್ರೂಂನಲ್ಲೂ ಇಡಬಹುದು.ಇದನ್ನು ಮನೆಯೊಳಗೆ ಇಟ್ಟರೆ ಗಾಳಿಯಲ್ಲಿರುವ ಕಲುಷಿತವನ್ನುಹೀರಿಕೊಂಡು ನಿಮಗೆ ಶುದ್ಧ ಗಾಳಿನೀಡುವುದು.

7. ಸೇವಂತಿಗೆ ಹೂ ಸೇವಂತಿಗೆ ಹೂವಿನಚೆಲುವು ನೋಡುಗರ ಮನ ಸೆಳೆಯುವುದಂತುದಿಟ. ಈ ಹೂವಿನಲ್ಲಿ ಹಲವಾರುಬಗೆಗಳಿವೆ. ಸೇವಂತಿಗೆ ಗಿಡವನ್ನು ಬೆಳೆಯಲು ಚಿಕ್ಕ ಹೂಕುಂಡ ಸಾಕಾಗುತ್ತದೆ. ಈ ಗಿಡವನ್ನು ಮನೆಯಮುಂದುಗಡೆ ಸ್ವಲ್ಪ ಬಿಸಿಲು ಬೀಳುವಕಡೆ ಇಟ್ಟರೆ ಸಾಕು ಚೆನ್ನಾಗಿಬೆಳೆದು ಸುಂದರವಾದ ಹೂಗಳನ್ನು ಬಿಡುತ್ತದೆ. ಈ ಗಿಡ ಸಿಗರೇಟ್ಹೊಗೆಯನ್ನು ಹೊರದೂಡಿ ಪರಿಸರದಲ್ಲಿ ಶುದ್ಧಗಾಳಿಓಡಾಡುವಂತೆ ಮಾಡುತ್ತದೆ.

8. ಡ್ರ್ಯಾಗನ್ ಗಿಡ ಇದು ಆಫೀಸ್ನಲ್ಲಿ ಹೆಚ್ಚಾಗಿ ಇಡಲಾಗುವುದು.ಈ ಗಿಡ ನೋಡಲುತುಂಬಾ ಆಕರ್ಷಕವಾಗಿದ್ದು ಆಫೀಸ್ ಹಾಗೂ ಮನೆಗೆವಿಶೇಷ ಕಳೆ ನೀಡುವುದು, ಈಗಿಡವನ್ನು ಮನೆಯಲ್ಲಿ ಬೆಳೆಸಿದರೆ ಕಾರಿನಿಂದ ಹೊರಸೂಸುವ ಹೊಗೆ, ಪೇಯಿಂಟ್ ವಾಸನೆ,ಸಿಗರೇಟ್ ಹೊಗೆ ಈ ರೀತಿಯಕಲುಷಿತ ಗಾಳಿಯಿಂದ ಮುಕ್ತಿ ಪಡೆಯಬಹುದು. ಈಗಿಡವನ್ನು ಸುಲಭವಾಗಿ ಬೆಳೆಯಬಹುದಾಗಿದ್ದು ಹೆಚ್ಚಿನ ಆರೈಕೆಯ ಅಗ್ಯತವಿಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸೂಪರ್ಸ್ಟಾರ್ ರಜನೀಕಾಂತ್ ಆಗಾಗ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ಬರುತ್ತಾರೆ. ವಿಶೇಷವಾಗಿ ತಮ್ಮ ಸಿನಿಮಾಗಳು ಬಿಡುಗಡೆ ಆಗುವ ಮುಂಚೆ ಹಾಗೂ ತಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ರಜನಿ ಹಿಮಾಲಯಕ್ಕೆ ಭೇಟಿ ಕೊಡುತ್ತಾರೆ. ಕೆಲ ದಿನಗಳ ಹಿಂದೆ ಸ್ವತಃ ರಜನಿ ಅವರೇ ಹಿಮಾಲಯಕ್ಕೆ ಹೋಗುವುದಾಗಿ ತಿಳಿಸಿದ್ದರು.
ನಮ್ಮ ದೇಶದಲ್ಲಿ ಮಕ್ಕಳು 21 ವರ್ಷದವರಾದರೆ ಅವರು ಇನ್ನು ಬಹುತೇಕ ಕಾಲೇಜಿನಲ್ಲಿರುತ್ತಾರೆ. ಪ್ರಮುಖವಾಗಿ ತಮ್ಮ ಓದನ್ನು ಮುಗಿಸಿಕೊಳ್ಳುವ ಒತ್ತಡವಿರುತ್ತದೆ. ಪ್ರವಾಸವೊಂದು ಐಷಾರಾಮಿ ಬದುಕಾಗಿರುತ್ತದಷ್ಟೇ. ಆದರೆ ಅಮೆರಿಕದ ಲೆಕ್ಸಿ ಅಲ್ಫೋರ್ಡ್ ಎನ್ನುವ ಯುವತಿ 21 ವರ್ಷ ದಾಟುವಷ್ಟರಲ್ಲಿ 196 ದೇಶಗಳಲ್ಲಿ ಹೋಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಪ್ರಯಾಣಿಸಿದ, ಅತ್ಯಂತ ಕಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ರೇಕಾರ್ಡ್ಸ್ನಲ್ಲಿ ಸೇರಿದ್ದಾರೆ. ಮೇ 31ರಂದು ಉತ್ತರ ಕೊರಿಯಾ ಪ್ರವೇಶಿಸಿದ ನಂತರ ಅವರು ಈ ದಾಖಲೆಗೆ ಭಾಜನರಾಗಿದ್ದಾರೆ. ಈ ಹಿಂದೆ ಈ…
ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.
ಈ ಆಪಲ್ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಅಂತಹ ಆಪಲ್ ಇದ್ಯಾವುದಪ್ಪ ಅಂತ ಯೋಚಿಸುತ್ತಿದ್ದೀರಾ? ಇದನ್ನ ವ್ಯಾಕ್ಸನ್ ಆಪಲ್ ಅಂತಾರೆ ಅಥವಾ ರೆಡ್ ಚುಂಬಕ ಅಂತಾರೆ ಅಥವಾ ವಾಟರ್ ಆಪಲ್ ಎಂದೂ ಕರೆಯುತ್ತಾರೆ. ಬಹಳಷ್ಟು ಹೆಸರಿನಲ್ಲಿ ಈ ಹಣ್ಣನ್ನು ಕರೆಯುತ್ತಾರೆ. ಇದು ನಮ್ಮ ದೇಶದಲ್ಲಿ ಬೆಳೆಯುವ ತುಂಬಾನೇ ರೇರ್ ಆದಂತಹ ಹಣ್ಣು ಎಂದೇ ಹೇಳಬಹುದು.ಈ ಹಣ್ಣು ಪೂರ್ತಿಯಾಗಿ ನೀರಿನಿಂದಲೇ ತುಂಬಿಕೊಂಡಿರುತ್ತದೆ ಅಂತ ಹೇಳಿದರೆ ತಪ್ಪಾಗಲ್ಲ. ಈ ಹಣ್ಣು ಕೇವಲ ಕೆಂಪು ಬಣ್ಣದಲ್ಲಿ ಅಷ್ಟೇ ಅಲ್ಲ. ಬಿಳಿ, ಹಸಿರು…
ಪುರುಷರು ತುಂಬಾ ಅಂದದಿಂದ ಇದ್ದರೆ ಸ್ತ್ರೀಯರು ಅವರನ್ನು ಹೊಗಳುತ್ತಾರೆ.ಇದು ಜಗತ್ತಿಗೆ ಗೊತ್ತಿರುವ ಸತ್ಯ.ಯಾವ ಪುರುಷ ತನ್ನ ಅಂದದಿಂದ ಆಕರ್ಷಿಸುತ್ತಾನೋ ಅಂತವರು ಸ್ತ್ರೀಯರ ಮನಸ್ಸನ್ನು ಸುಲಭವಾಗಿ ಕದಿಯುತ್ತಾನೆ.
ಭಟ್ಕಳ: ಪಾಲಕರಾದವರು ತಮ್ಮ ಮಕ್ಕಳಿಗೆ ಶಿಕ್ಷಣ ಒಂದರಲ್ಲಿಯೇ ಒತ್ತಡ ಹಾಕದೆ ಕ್ರೀಡೆ, ಸಾಂಸ್ಕೃತಿ ಹಾಗು ಎಲ್ಲಾ ರಂಗದಲ್ಲಿಯೂ ಕೂಡ ಹೆಚ್ಚು ಪ್ರೋತ್ಸಾಹ ನೀಡಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಹೋಗುವಂತೆ ಮಾಡಬೇಕು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಅವರು ಗುರುವಾರದಂದು ಸರಕಾರಿ ಪ್ರೌಢಶಾಲೆ ಸೋನಾರಕೇರಿಯಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ ಹಾಗೂ ಸರಕಾರಿ ಪ್ರೌಢಶಾಲೆ ಸೋನಾರಕೇರಿ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ…