ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದು ಕಾಲದಲ್ಲಿ ಮಾಧ್ಯಮ ಎಂದರೆ ಜ್ಞಾನದ ಕಣಜ ಎಂದೇ ಕರೆಯಲಾಗುತ್ತಿತ್ತು. ವಿಶ್ವದ ಎಲ್ಲಾ ಆಗುಹೋಗುಗಳ ಜೊತೆ ಅವುಗಳ ಬಗೆಗಿನ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀಡುತ್ತಿದ್ದರು.
ಯಾವುದನ್ನೂ ವಿಜೃಂಭಿಸದೆ, ವಾಸ್ತವ ಎಷ್ಟೇ ಕಠೋರವಾಗಿದ್ದರೂ, ಜನರ ನಂಬಿಕೆಗೆ ವಿರುದ್ಧವಾಗಿದ್ದರೂ, ಆಡಳಿತ ಮಾಡುವವರ ಮರ್ಜಿಗೆ ಒಳಗಾಗದೆ ಸತ್ಯದ ಪರ ನಿಷ್ಠೆಯನ್ನು ಹೊಂದಿದ್ದರು. ಆಗಲೂ ಅಪರೂಪಕ್ಕೆ ಕೆಲವು ಭಟ್ಟಂಗಿಗಳು ಇದ್ದರೂ ಎಲ್ಲಿಯೂ ಸಭ್ಯತೆಯ ಎಲ್ಲೆ ಮೀರುತ್ತಿರಲಿಲ್ಲ.

ಅಕ್ಷರಗಳ ಮುಖಾಂತರ ಕ್ರಾಂತಿಯನ್ನೇ ಮಾಡಲಾಯಿತು. ಆಗಲೇ “ಖಡ್ಗಕ್ಕಿಂತ ಲೇಖನಿ ಹರಿತ ” ಎಂಬ ನಾಣ್ಣುಡಿ ನಿಜವಾಗಿ ಆಚರಣೆಯಲ್ಲಿತ್ತು.
ಕೈ ಬರಹದ ಪತ್ರಿಕೋದ್ಯಮ ಓದುಗರ ನರನಾಡಿಗಳಲ್ಲಿ ರೋಮಾಂಚನ ಉಂಟುಮಾಡುತ್ತಿತ್ತು. ಮನಸ್ಸಿಗೆ ನಾಟುತ್ತಿತ್ತು. ತದನಂತರ ಆಧುನಿಕ ಬೆಳವಣಿಗೆಯೊಂದಿಗೆ ಮುದ್ರಣವೂ, ಆಮೇಲೆ ಆಕಾಶವಾಣಿ ಸುದ್ದಿ ಮಾಧ್ಯಮಗಳು, ಟಿವಿ ಮಾಧ್ಯಮಗಳು, ಅಂತರ್ಜಾಲ ವೆಬ್ ಪೋರ್ಟಲ್ ಗಳು ಅಭಿವೃದ್ಧಿ ಹೊಂದಿದವು ಮತ್ತು ಅತ್ಯಂತ ವೇಗವಾಗಿ ಜನಸಮೂಹವನ್ನು ಆಕ್ರಮಿಸಿಕೊಂಡವು.
ಪತ್ರಕರ್ತರೆಂದರೆ ವಿಶೇಷ ಬುದ್ಧಿಶಕ್ತಿಯ ಆಡಳಿತದ ಕಾವಲುಗಾರರು, ಸಮಾಜದ ಮಾರ್ಗದರ್ಶಕರು, ಜನಾಭಿಪ್ರಾಯ ರೂಪಿಸುವ ಚಿಂತಕರು ಎಂದೇ ಭಾವಿಸಲಾಗಿತ್ತು ಮತ್ತು ಅಪಾರ ಗೌರವವನ್ನು ನೀಡಲಾಗುತ್ತಿತ್ತು.

ಆದರೆ, ಅದೇ ಮಾತುಗಳನ್ನು ಈಗಿನ ಟಿವಿ ಮಾಧ್ಯಮಗಳ ಬಗ್ಗೆ ಹೇಳಲು ಸಾಧ್ಯವೇ ?
ಸುದ್ದಿಗಳೊಂದಿಗೆ ಪೆಟ್ರೋಲ್ ಮತ್ತು ಬೆಂಕಿ ಕಡ್ಡಿಯನ್ನು ಜೊತೆಯಲ್ಲಿಯೇ ತಂದಿರುತ್ತಾರೆ.
ಈ ಕ್ಷಣದಲ್ಲಿ ಪಾಕಿಸ್ತಾನದ ಮಾಧ್ಯಮಗಳು ಭಾರತ ಮತ್ತು ಅದರ ಪ್ರಧಾನಿಯನ್ನು ಟೀಕಿಸಲು ಬಳಸದ ಕೆಟ್ಟ ಪದವೇ ಇಲ್ಲ. ಸುಳ್ಳು ಸಹ ಇವರ ಕಾಟಕ್ಕೆ ಅವಮಾನದಿಂದ ನೇಣು ಹಾಕಿಕೊಂಡಿತು.
ಹಾಗೆಯೇ ಭಾರತ ಪತ್ರಕರ್ತರು ಸಹ ಅವರಂತೆಯೇ ವರ್ತಿಸುತ್ತಿದ್ದಾರೆ. ಸತ್ಯ ಮತ್ತು ವಾಸ್ತವದ ವಿಮರ್ಶಾತ್ಮಕ ಸುದ್ದಿಗಳನ್ನು ಮರೆತು ಜನರ ಭಾವನೆಗಳು ಮತ್ತು ಜನಪ್ರಿಯತೆಯ ಬಾಲ ಹಿಡಿದು ಸತ್ಯವನ್ನು ಸಮಾಧಿ ಮಾಡುತ್ತಿವೆ.

ಪ್ರಾಣವನ್ನು ಧೈರ್ಯವಾಗಿ ದೇಶಕ್ಕಾಗಿ ಸಮರ್ಪಿಸುತ್ತಿರುವ ಸೈನಿಕರ ತ್ಯಾಗ ಬಲಿದಾನಗಳ ಈ ಸಂಧರ್ಭದಲ್ಲಿ ಅದಕ್ಕೊಂದು ಅರ್ಥ ನೀಡಿ ಅತ್ಯಂತ ವಿವೇಚನೆಯಿಂದ ವಿಷಯಗಳನ್ನು ವಿಮರ್ಶಿಸಿ ಶಾಂತಿಯ ಸಂದೇಶಗಳನ್ನು ಎರಡೂ ಕಡೆ ಹಬ್ಬಿಸುತ್ತಾ, ಜನಾಭಿಪ್ರಾಯ ರೂಪಿಸಿ,ಆಡಳಿತಗಾರರ ಕಣ್ಣು ತೆರೆಸಿ, ಯುದ್ಧ ಮತ್ತು ಹಿಂಸೆಯ ಭೀಕರ ಪರಿಣಾಮ ಮತ್ತು ಅದರ ನಿರರ್ಥಕತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸಂಪೂರ್ಣ ಅದಕ್ಕೆ ವಿರುದ್ಧವಾಗಿ ಮಾಡುತ್ತಿವೆ.
ರಾಜಕಾರಣಿಗಳನ್ನು ಟೀಕಿಸುತ್ತಾ, ಶಾಂತಿ ಸೌಹಾರ್ದತೆಯ ಪ್ರತಿಪಾದಕರನ್ನು ಹೇಡಿಗಳಾಗಿ ಚಿತ್ರಿಸುತ್ತಾ, ಸಂಯಮಿಗಳನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಾ ಇಡೀ ಜನಾಭಿಪ್ರಾಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳತೊಡಗಿದ್ದಾರೆ.
ಇದೇ ನೋಡಿ ವಿಪರ್ಯಾಸ. ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಚೆಯಾಗುವ ಅಪಾಯ ಎಲ್ಲರೂ ಊಹಿಸಿದ್ದರು. ಆದರೆ ಅದು ಸರ್ವಾಧಿಕಾರಿಯಾಗಿ ಇಡೀ ವ್ಯವಸ್ಥೆಯನ್ನೇ ಆಕ್ರಮಿಸಿ ಆಹುತಿ ತೆಗೆದುಕೊಳ್ಳುತ್ತದೆ ಎಂದು ಯಾರಿಗೂ ಅನಿಸಿರಲಿಲ್ಲ.
ಸತ್ಯದ ಕತ್ತು ಹಿಸುಕಿ ಅದರ ಸಮಾಧಿಯ ಮೇಲೆ ಸುಳ್ಳಿನ ಅಡಿಪಾಯ ಹಾಕಿ ಭ್ತಮಾಲೋಕದ ಅರಮನೆ ಕಟ್ಟಿ, ಅಮಾನವೀಯ ಬಣ್ಣ ಬಳಿದು ಇಡೀ ಸಮಾಜವನ್ನು ನಿಧಾನವಾಗಿ ವಿಷಪೂರಿತ ಮಾಡುತ್ತಿದೆ.
ನಿರೂಪಕರೆಂಬ ಮತಿಹೀನರು ವಿಷಯಗಳ ಆಳ ಅಗಲಗಳ ಬಗ್ಗೆ ಯಾವುದೇ ಜ್ಞಾನ ಇಲ್ಲದವರು ಬಾಯಿಗೆ ಬಂದಂತೆ ಮಾತನಾಡುತ್ತಾ, ಮಾತಿನಲ್ಲೇ ಬೀದಿ ಬದಿಯ ಕುಡುಕರಿಗಿಂತ ಕೆಟ್ಟದ್ದಾಗಿ ವರ್ತಿಸುತ್ತಾ ಸಮೂಹ ಸನ್ನಿಗೆ ಒಳಗಾಗಿದ್ದಾರೆ. ರೌಡಿಗಳು, ಕ್ರಿಮಿನಲ್ ಗಳು ಸಹ ಅಪರಾಧ ಎಸಗುವ ಮುನ್ನ ಹಲವಾರು ಬಾರಿ ಯೋಚಿಸುತ್ತಾರೆ. ಆದರೆ ಈ ಟಿವಿ ಮಾಧ್ಯಮದವರು ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.
ಪುರಾಣ, ಇತಿಹಾಸ, ರಾಜಕೀಯ, ಆರ್ಥಿಕ, ಸಾಮಾಜಿಕ ಮುಂತಾದ ಯಾವ ವಿಷಯಗಳನ್ನು ತಿಳಿಯದೆ ಈ ಕ್ಷಣದ ಮಾಹಿತಿಯನ್ನೇ ಸತ್ಯ ಎಂದು ಬಿಂಬಿಸುತ್ತಿದ್ದಾರೆ.
ಈಗಾಗಲೇ ಅವರ ಬಣ್ಣ ಬಯಲಾಗಿದೆ. ಅದರೂ ಅವರು ಶಿಥಿಲವಾಗುವ ಮುನ್ನ ಮಾಡಬಹುದಾದ ಅಪಾಯಕಾರಿ ಕೆಲಸಗಳ ಪರಿಣಾಮ ಬಹಳ ಕಾಲ ಉಳಿಯುತ್ತದೆ.
ಆದ್ದರಿಂದ ಜನ ಸಾಮಾನ್ಯರಾದ ನಾವುಗಳು ವಿವೇಚನೆಯಿಂದ ತಾಳ್ಮೆಯಿಂದ ಸುದ್ದಿ ಮತ್ತು ಅದರ ಹಿನ್ನೆಲೆಯನ್ನು ಗ್ರಹಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳೋಣ. ಅದರ ಆಧಾರದ ಮೇಲೆ ಚರ್ಚೆ ಮಾಡೋಣವೇ ಹೊರತು ಈ ಟಿವಿ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ಜಗಳವೇ ಚರ್ಚೆ ಎಂಬ ತಪ್ಪು ಕಲ್ಪನೆ ತಿರಸ್ಕರಿಸೋಣ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ ಹೆಚ್. ಕೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರಮಂಚದಲ್ಲಿ ಮಹಿಳೆಯರು ಸುಂದರವಾಗಿ ಕಾಣಲು ಅಲಂಕಾರ ಮಾಡಿಕೊಳ್ಳುತ್ತಾರೆ. ಅಲಂಕಾರ ಮಾಡಿಕೊಳ್ಳದೆ ಮಹಿಳೆಯರ ದಿನ ಪೂರ್ಣವಾಗುವುದಿಲ್ಲ. ಅಲಂಕಾರ ಹಾಗೂ ಒಡವೆಗಳಿಗಾಗಿ ಸಾಕಷ್ಟು ಹಣವನ್ನು ಖರ್ಚುಮಾಡಲು ಹಿಂಜರಿಯುವುದಿಲ್ಲ. ಆದರೇ ನಮ್ಮ ಭಾರತೀಯ ಮಹಿಳೆಯರು ಅಲಂಕಾರಕ್ಕಾಗಿ ಧರಿಸುವ ಆಭರಣಗಳ ಹಿಂದಿರುವ ವೈಜ್ಞಾನಿಕ ಕಾರಣಗಳು ಏನೆಂದು ತಿಳಿಯೋಣ.
ಒಂದೆಕರೆ ಕ್ಷಣದಲ್ಲೇ ಪರಿಹಾರ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮಗೆ ಕಷ್ಟಕರವಾದುದು ಏನೂ ಇಲ್ಲ. ಇಚ್ಛಾಬಲ ತೋರಿಸಿ, ಜೀವನದಲ್ಲಿ ಗೆದ್ದು ಬರುವ ಶಕ್ತಿ ಲಭ್ಯವಾಗಲಿದೆ. ಇದಕ್ಕೆ ಹಿನ್ನೆಲೆಯಾಗಿ ನಿಮ್ಮ ಕುಟುಂಬದವರ ಸಹಕಾರ ಮತ್ತು ಆಶೀರ್ವಾದ ಇರುತ್ತದೆ ಎಂಬುದನ್ನು ಮರೆಯದಿರಿ. …
70 ಮತ್ತು 80ರ ದಶಕಗಳಲ್ಲಿನ ನಿಮ್ಮ ಬಾಲ್ಯದ ಅದ್ಭುತ ನೆನಪುಗಳು…
ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ…
ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ.
ಹೈದರಾಬಾದ್: ಧೂಮಪಾನ ನಿಷೇಧ ಪ್ರದೇಶದಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಟಾಲಿವುಡ್ ನಟ ರಾಮ್ ಪೋಥಿನೇನಿ ಅವರಿಗೆ ಸೋಮವಾರ ಹೈದರಾಬಾದ್ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ. ಈ ಘಟನೆ ನಗರದ ಐತಿಹಾಸಿಕ ಚಾರ್ಮಿನಾರ್ ಬಳಿ ನಡೆದಿದೆ. ನಟ ರಾಮ್ ತಮ್ಮ ಮುಂಬರುವ ‘ಐಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದಲ್ಲಿ ಅವರ ಪಾತ್ರದ ಭಾಗವಾಗಿ ನಟ ಸಿಗರೇಟ್ ಸೇದಿದ್ದರು. ನಟ ರಾಮ್ ಸಿಗರೇಟ್ ನಿಷೇಧಿಸಿದ್ದ ಪ್ರದೇಶದಲ್ಲಿ ಧೂಮಪಾನ ಮಾಡಿದ್ದರು. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ…