ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಮುದ್ರ ಗರ್ಭದಲ್ಲಿ ಮುತ್ತು ರತ್ನ ಹವಳಗಳಷ್ಟೇ ಅಲ್ಲದೇ ಬಂಗಾರ ಕೂಡ ಇದೆ. ಆದರೆ ಇವನ್ನೆಲ್ಲ ಬಿಟ್ಟೂ ಕೆಲವು ಸೋಜಿಗಗಳು ಸಿಗುತ್ತವೆ. ಇವುಗಳಲ್ಲಿ ಡೈವಿಂಗ್ ಬೆಲ್ ಸ್ಪೈಡರ್ ಕೂಡ ಒಂದು. ಇದು ನೆಲದ ಜೇಡವಾದರೂ ಬಲೆ ಕಟ್ಟುವುದು ಸಮುದ್ರದ ಆಳದಲ್ಲಿ. ಜೀವನದ ಬಹುಪಾಲು ಸಮಯವನ್ನು ನೀರಿನಡಿಯಲ್ಲೇ ಸವೆಸುತ್ತದೆ.
ಸಮುದ್ರದ ಜೇಡಗಳು :-
ನೀರಿನಡಿಯಲ್ಲಿ ಇದು ಉಸಿರಾಡಲು ಕಂಡುಕೊಂಡ ಪರಿ ಅದ್ಭುತ. ತನ್ನ ಹೊಟ್ಟೆಯ ರೋಮಗಳಲ್ಲಿ ಗಾಳಿಯ ಗುಳ್ಳೆ ಯನ್ನು ಹಿಡಿದುಕೊಂಡು ನೀರಿನಾಳಕ್ಕೆ ಹೋಗುತ್ತದೆ. ಅಲ್ಲಿ ಬಲೆಯನ್ನು ಕಟ್ಟಿ ಈ ಗುಳ್ಳೆಯನ್ನು ಬಲೆಯಲ್ಲಿ ಬಂಧಿಸಿಟ್ಟು ಅದರಲ್ಲಿ ತಲೆ ಇರಿಸಿ ಕುಳಿತುಕೊಳ್ಳುತ್ತದೆ. ಈ ಗುಳ್ಳೆ ನೀರಿನಿಂದ ಆಮ್ಲಜನಕ ಹೀರುವುದರಿಂದ ಜೇಡಕ್ಕೆ ಸುಮಾರು ಒಂದು ದಿನಕ್ಕೆ ಆಗುವಷ್ಟು ಆಮ್ಲಜನಕ ಸಿಗುತ್ತದೆ. ಮಾರನೇ ದಿನ ಬಂದು ಇನ್ನೊಂದು ಗುಳ್ಳೆ ಒಯ್ದರಾಯಿತು. ಹೆಣ್ಣು ಜೇಡ ದೊಡ್ಡ ಗುಳ್ಳಯನ್ನೇ ಒಯ್ದು ಅದರಲ್ಲಿ ಮೊಟ್ಟೆ ಕೂಡ ಇಡುತ್ತದೆ.
ಸಮುದ್ರದ ಆಳದಲ್ಲಿ ನದಿಗಳು ಕೂಡ ಹರಿಯುತ್ತವೆ :-
ಮೆಕ್ಸಿಕೊ ದಲ್ಲಿ ಇಂಥಹ ನದಿಯೊಂದು 2010 ರಲ್ಲಿ ಡೈವಿಂಗ್ ಮಾಡುವವರು ಗಮನಿಸಿದರು. ಸುಮಾರು 25 ಅಡಿ ಆಳದಲ್ಲಿ ಸುಂದರವಾದ ನದಿಯನ್ನು ನೋಡಿದ ಇವರಿಗೆ ಇದು ಕನಸೋ ನನಸೋ ಅಂತ ಗೊತ್ತಾಗಲಿಲ್ಲ. ಆ ನದಿಗೆ ದಂಡೆಗಳು , ಆ ದಂಡೆಗುಂಟ ಮರಗಳು, ನದಿಯ ನೀರಿನ ಮೇಲೆ ಮೋಡದಂಥ ಹೊಗೆ ನೋಡಿ ಇವರಿಗೆ ತಾವು ಭೂಮಿಯ ಮೇಲೆ ಗಾಳಿಯಲ್ಲಿ ಹಾರುತ್ತಾ ನದಿಯನ್ನು ನೋಡುತ್ತಿರುವ ಅನುಭವ ಆಗಿದೆ.
ನೀರಿನಲ್ಲಿ ನೀರು ಹರಿಯಲು ಹೇಗೆ ಸಾಧ್ಯ? ಅಸಲಿಗೆ ಈ ನದಿಯ ನೀರು ಉಪ್ಪು ಮತ್ತು ಹೈಡ್ರೋಜನ್ ಸಲ್ಫೈಡ್ ಮಿಶ್ರಣವಾಗಿರುವುದರಿಂದ ಉಳಿದ ನೀರಿಗಿಂತಲೂ ಹೆಚ್ಚು ಭಾರ. ಆದುದರಿಂದ ಉಳಿದ ನೀರಿನಲ್ಲಿ ಮಿಕ್ಸ್ ಆಗುವುದಿಲ್ಲ ಮತ್ತು ಹರಿಯುತ್ತದೆ ಕೂಡ. ಆದರೆ ಹೈಡ್ರೋಜನ್ ಸಲ್ಫೈಡ್ ಒಂದು ವಿಷ. ಆದುದರಿಂದ ಇದರಲ್ಲಿ ಮೀನುಗಳು ಇರುವುದಿಲ್ಲ.
ಸಮುದ್ರದಾಳದಲ್ಲಿ ಅರಣ್ಯ ಕೂಡ ಇವೆ:-
ನೂರೈವತ್ತು ಅಡಿ ಆಳದಲ್ಲಿ ಹುಟ್ಟಿದ ಮರಗಳು ನೀರಿನ ಮೇಲ್ಮೈ ತನಕ ಬೆಳೆಯುತ್ತವೆ. ದಿನಕ್ಕೆ ಎರಡಡಿ ಬೆಳೆಯುವ ಮರಗಳೂ ಇವೆ.
ಸಮುದ್ರ ಮಧ್ಯದಲ್ಲಿ ದೊಡ್ಡ ದೊಡ್ಡ ಸಿಂಕ್ ಹೋಲ್ಗಳು :-
ಸುತ್ತಲೂ ಪಾಚಿ ಬೆಳೆದಿದ್ದರೂ ಈ ದೊಡ್ಡ ಹೊಂಡದಲ್ಲಿ ಮಾತ್ರ ಕ್ಲಿಯರ್ ನೀರು ಇರುತ್ತದೆ. ಸುಮಾರು ಆರು ನೂರು ಅಡಿ ಸಿಂಕ್ ಹೋಲ್ ನಲ್ಲಿ ಸ್ಕ್ಯೂಬಾ ಡೈವ್ ಮಾಡುವುದು ಅತ್ಯಂತ ಸಾಹಸದ ಕೆಲಸ. ಕೆಳಗೆ ಹೋದಾಗ ಸೂರ್ಯ ಕಿರಣದ ಒಂದೇ ಒಂದು ಸ್ರೋತ ಕಂಡುಬರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಮಂದಿ, ಪೊಲೀಸ್, ಪ್ರೆಸ್ ಮತ್ತು ಜಡ್ಜ್ ಹಾಗೂ ಎಂಎಲ್ ಎ ಎಂಬ ಬರಹವಿರುವ ಸ್ಟಿಕ್ಕರ್ ಅಂಟಿಸಿಕೊಳ್ಳವುದು ಸಾಮಾನ್ಯ, ಆದರೆ ಇಲ್ಲೊಬ್ಬ ನಂಬರ್ ಪ್ಲೇಟ್ ಬದಲಿಸಿಕೊಂಡಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಎಪಿ ಸಿಎಂ ಜಗನ್ ಎಂಬ ನಂಬರ್ ಪ್ಲೇಟ್ ಅನ್ನು ತನ್ನ ಕಾರಿನ ಹಿಂದೆ ಮುಂದೆ ಅಂಟಿಸಿಕೊಂಡಿದ್ದ, ಅದುವೇ ಕಬ್ಬಿಣದ ನಂಬರ್ ಪ್ಲೇಟ್ ಫಿಕ್ಸ್ ಮಾಡಿಸಿಕೊಂಡು ಸುತ್ತಾಡುತ್ತಿದ್ದನು, ಆದರೆ ಅಕ್ಟೋಬರ್ 19 ರಂದು ಆತನ ನಸೀಬು ಕ್ಟೆಟ್ಜಿತ್ತು, ಸಂತಾರಿ ಪೊಲೀಸರು ದೈನಂದಿನ ಚೆಕ್ಕಿಂಗ್ ಗೆ…
ಈರುಳ್ಳಿ ಸಿಪ್ಪೆ, ಹಗುರ ವಸ್ತುಗಳಿಗೆ ಉಪಯೋಗಿಸುವ ವಿಶೇಷಣವಾಗಿದ್ದ ಈ ನಿಕೃಷ್ಟ ಕಸ ವಾಸ್ತವದಲ್ಲಿ ಆಂಟಿ ಆಕ್ಸಿಡೆಂಟು, ಬ್ಯಾಕ್ಟೀರಿಯಾ ನಿರೋಧಕ, ಕ್ಯಾನ್ಸರ್ ನಿರೋಧಕ ಹಾಗೂ ಇತರ ಔಷಧೀಯ ಗುಣವುಳ್ಳ ಅದ್ಭುತ ವಸ್ತುವಾಗಿದೆ.
ಇತ್ತೀಚಿನ ವೇಗದ ಜೀವನ ಶೈಲಿಯಲ್ಲಿ ಬಹಳಷ್ಟು ಜನರಿಗೆ ಮಾರುಕಟ್ಟೆಗಳಿಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನ ಕೊಂಡುಕೊಳ್ಳಲು ಸಮಯವಿಲ್ಲ, ಅಷ್ಟೆ ಯಾಕೆ ತಾವು ತಮ್ಮ ಕೆಲಸ ಮುಗಿಸಿ ಮನೆಗೆ ಬಂದರೆ ತಮ್ಮ ಹೊಟ್ಟೆಗೆ ಊಟ ಮಾಡಿಕೊಂಡು ತಿನ್ನಲು ಸಹ ಸಮಯವಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೆಂಬಂತೆ ಹಲವಾರು ಆನ್ಲೈನ್ ಶಾಪಿಂಗ್ (ಅಂತರ್ಜಲ ಮಾರುಕಟ್ಟೆ) ವೆಬಸೈಟ್ಗಳು ಪ್ರಾರಂಭವಾಗಿವೆ. ಇದರೊಂದಿಗೆ ಊಟವನ್ನು ಸಹ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಸಹ ನಾವು ಕಾಣಬಹುದು. ಆದರೆ ಇವುಗಳೆಲ್ಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ…
ಸಾಮಾನ್ಯವಾಗಿ ನಮ್ಮಲ್ಲಿ ಒಂದು ವಾಡಿಕೆಯಿದೆ, ಅದೇನಂದ್ರೆ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ನೀನು ಸತ್ತಾಗ ನರಕ್ಕೆ ಹೋಗೋದು ಅಂತ ಶಾಪ ಹಾಕ್ತಾರೆ. ಹಿಂದೂ ಧರ್ಮದ ಪ್ರಕಾರ ಮನುಷ್ಯರು ಮಾಡಿದ ಪಾಪ ಅಥವಾ ಪುಣ್ಯಗಳನ್ನು ಅನುಸರಿಸಿ ,ಅವರು ಸತ್ತನಂತರ ಅವರ ಆತ್ಮಗಳು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತವೆಂದು ಎಲ್ಲರ ವಿಶ್ವಾಸ.
ಪ್ರತಿದಿನದ ಬೆಳಗು ನಮ್ಮ ಬದುಕಿನ ಶುಭಾರಂಭವಿದ್ದಂತೆ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಯಾವುದೇ ವಿಘ್ನಗಳು ಎದುರಾಗಬಾರದು. ಅದಕ್ಕಾಗಿ ಕೆಲವೊಂದು ಕೆಲಸಗಳಿಂದ ನೀವು ದೂರವಿರಬೇಕು. ಯಾಕಂದ್ರೆ ಅವು ನಮ್ಮ ಕೆಲಸವನ್ನೇ ಬಿಗಡಾಯಿಸಿಬಿಡುತ್ತವೆ. ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬೇಡಿ : ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಏಳ್ತಿದ್ದಂತೆ ಕನ್ನಡಿ ನೋಡುವುದರಿಂದ ರಾತ್ರಿಯ ನಕಾರಾತ್ಮಕತೆ ಪುನಃ ಸ್ಥಾಪಿತವಾಗುತ್ತದೆ. ಇಡೀ ದಿನ ನಿಮ್ಮ ಮನಸ್ಸು ಅದೇ ರೀತಿಯಾಗಿರುತ್ತದೆ. ಹಾಗಾಗಿ ಬೆಳಗ್ಗೆ ಎದ್ದು ಸ್ವಲ್ಪ ಸಮಯದ ನಂತರ ಕನ್ನಡಿಯಲ್ಲಿ ಮುಖ ದರ್ಶನ ಮಾಡಿ. ಬೆಳಗ್ಗೆ…
ಬಿಗ್ ಬಾಸ್ ಮನೆಯಲ್ಲಿ ಕೋಪ, ಜಗಳ, ಲವ್, ಕೇರ್ ಇವೆಲ್ಲಾ ಮಾಮೂಲಿ.ಅದರಲ್ಲೂ ನಟ-ನಟಿಯರು ಬೇಗ ಗಂಟು ಹಾಕಿಕೊಳ್ಳುತ್ತಾರೆ ಎಂಬುವುದು ವೀಕ್ಷಕರ ಅಭಿಪ್ರಾಯ. ಮೊದಲ ವಾರದಲ್ಲೇ ಅತಿ ಹೆಚ್ಚು ವೋಟ್ ಪಡೆದು ನಾಮಿನೇಶನ್ ಪಟ್ಟಿಯಲ್ಲಿ ಸೇರಿಕೊಂಡಿರುವ ಸ್ಪರ್ಧಿ ಚೈತ್ರಾ ಕೊಟ್ಟೂರ್ ಟಾಸ್ಕ್ ನಡೆದ ನಂತರ ಮಧ್ಯರಾತ್ರಿ ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಶೈನ್ ಶೆಟ್ಟಿ ಜೊತೆ ಕುಳಿತು ಮಾತನಾಡುತ್ತಿರುತ್ತಾರೆ. ಆಗ ಮನಸ್ಸಲ್ಲಿದ್ದ ಲವ್ ವಿಚಾರವನ್ನು ತೆರೆದಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಬಳಿಕ ಶೈನ್ ಶೆಟ್ಟಿ ಜೊತೆ ಕಾಣಿಸಿಕೊಳ್ಳದ ಚೈತ್ರಾ…