ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಮುದ್ರ ಗರ್ಭದಲ್ಲಿ ಮುತ್ತು ರತ್ನ ಹವಳಗಳಷ್ಟೇ ಅಲ್ಲದೇ ಬಂಗಾರ ಕೂಡ ಇದೆ. ಆದರೆ ಇವನ್ನೆಲ್ಲ ಬಿಟ್ಟೂ ಕೆಲವು ಸೋಜಿಗಗಳು ಸಿಗುತ್ತವೆ. ಇವುಗಳಲ್ಲಿ ಡೈವಿಂಗ್ ಬೆಲ್ ಸ್ಪೈಡರ್ ಕೂಡ ಒಂದು. ಇದು ನೆಲದ ಜೇಡವಾದರೂ ಬಲೆ ಕಟ್ಟುವುದು ಸಮುದ್ರದ ಆಳದಲ್ಲಿ. ಜೀವನದ ಬಹುಪಾಲು ಸಮಯವನ್ನು ನೀರಿನಡಿಯಲ್ಲೇ ಸವೆಸುತ್ತದೆ.
ಸಮುದ್ರದ ಜೇಡಗಳು :-
ನೀರಿನಡಿಯಲ್ಲಿ ಇದು ಉಸಿರಾಡಲು ಕಂಡುಕೊಂಡ ಪರಿ ಅದ್ಭುತ. ತನ್ನ ಹೊಟ್ಟೆಯ ರೋಮಗಳಲ್ಲಿ ಗಾಳಿಯ ಗುಳ್ಳೆ ಯನ್ನು ಹಿಡಿದುಕೊಂಡು ನೀರಿನಾಳಕ್ಕೆ ಹೋಗುತ್ತದೆ. ಅಲ್ಲಿ ಬಲೆಯನ್ನು ಕಟ್ಟಿ ಈ ಗುಳ್ಳೆಯನ್ನು ಬಲೆಯಲ್ಲಿ ಬಂಧಿಸಿಟ್ಟು ಅದರಲ್ಲಿ ತಲೆ ಇರಿಸಿ ಕುಳಿತುಕೊಳ್ಳುತ್ತದೆ. ಈ ಗುಳ್ಳೆ ನೀರಿನಿಂದ ಆಮ್ಲಜನಕ ಹೀರುವುದರಿಂದ ಜೇಡಕ್ಕೆ ಸುಮಾರು ಒಂದು ದಿನಕ್ಕೆ ಆಗುವಷ್ಟು ಆಮ್ಲಜನಕ ಸಿಗುತ್ತದೆ. ಮಾರನೇ ದಿನ ಬಂದು ಇನ್ನೊಂದು ಗುಳ್ಳೆ ಒಯ್ದರಾಯಿತು. ಹೆಣ್ಣು ಜೇಡ ದೊಡ್ಡ ಗುಳ್ಳಯನ್ನೇ ಒಯ್ದು ಅದರಲ್ಲಿ ಮೊಟ್ಟೆ ಕೂಡ ಇಡುತ್ತದೆ.
ಸಮುದ್ರದ ಆಳದಲ್ಲಿ ನದಿಗಳು ಕೂಡ ಹರಿಯುತ್ತವೆ :-
ಮೆಕ್ಸಿಕೊ ದಲ್ಲಿ ಇಂಥಹ ನದಿಯೊಂದು 2010 ರಲ್ಲಿ ಡೈವಿಂಗ್ ಮಾಡುವವರು ಗಮನಿಸಿದರು. ಸುಮಾರು 25 ಅಡಿ ಆಳದಲ್ಲಿ ಸುಂದರವಾದ ನದಿಯನ್ನು ನೋಡಿದ ಇವರಿಗೆ ಇದು ಕನಸೋ ನನಸೋ ಅಂತ ಗೊತ್ತಾಗಲಿಲ್ಲ. ಆ ನದಿಗೆ ದಂಡೆಗಳು , ಆ ದಂಡೆಗುಂಟ ಮರಗಳು, ನದಿಯ ನೀರಿನ ಮೇಲೆ ಮೋಡದಂಥ ಹೊಗೆ ನೋಡಿ ಇವರಿಗೆ ತಾವು ಭೂಮಿಯ ಮೇಲೆ ಗಾಳಿಯಲ್ಲಿ ಹಾರುತ್ತಾ ನದಿಯನ್ನು ನೋಡುತ್ತಿರುವ ಅನುಭವ ಆಗಿದೆ.
ನೀರಿನಲ್ಲಿ ನೀರು ಹರಿಯಲು ಹೇಗೆ ಸಾಧ್ಯ? ಅಸಲಿಗೆ ಈ ನದಿಯ ನೀರು ಉಪ್ಪು ಮತ್ತು ಹೈಡ್ರೋಜನ್ ಸಲ್ಫೈಡ್ ಮಿಶ್ರಣವಾಗಿರುವುದರಿಂದ ಉಳಿದ ನೀರಿಗಿಂತಲೂ ಹೆಚ್ಚು ಭಾರ. ಆದುದರಿಂದ ಉಳಿದ ನೀರಿನಲ್ಲಿ ಮಿಕ್ಸ್ ಆಗುವುದಿಲ್ಲ ಮತ್ತು ಹರಿಯುತ್ತದೆ ಕೂಡ. ಆದರೆ ಹೈಡ್ರೋಜನ್ ಸಲ್ಫೈಡ್ ಒಂದು ವಿಷ. ಆದುದರಿಂದ ಇದರಲ್ಲಿ ಮೀನುಗಳು ಇರುವುದಿಲ್ಲ.
ಸಮುದ್ರದಾಳದಲ್ಲಿ ಅರಣ್ಯ ಕೂಡ ಇವೆ:-
ನೂರೈವತ್ತು ಅಡಿ ಆಳದಲ್ಲಿ ಹುಟ್ಟಿದ ಮರಗಳು ನೀರಿನ ಮೇಲ್ಮೈ ತನಕ ಬೆಳೆಯುತ್ತವೆ. ದಿನಕ್ಕೆ ಎರಡಡಿ ಬೆಳೆಯುವ ಮರಗಳೂ ಇವೆ.
ಸಮುದ್ರ ಮಧ್ಯದಲ್ಲಿ ದೊಡ್ಡ ದೊಡ್ಡ ಸಿಂಕ್ ಹೋಲ್ಗಳು :-
ಸುತ್ತಲೂ ಪಾಚಿ ಬೆಳೆದಿದ್ದರೂ ಈ ದೊಡ್ಡ ಹೊಂಡದಲ್ಲಿ ಮಾತ್ರ ಕ್ಲಿಯರ್ ನೀರು ಇರುತ್ತದೆ. ಸುಮಾರು ಆರು ನೂರು ಅಡಿ ಸಿಂಕ್ ಹೋಲ್ ನಲ್ಲಿ ಸ್ಕ್ಯೂಬಾ ಡೈವ್ ಮಾಡುವುದು ಅತ್ಯಂತ ಸಾಹಸದ ಕೆಲಸ. ಕೆಳಗೆ ಹೋದಾಗ ಸೂರ್ಯ ಕಿರಣದ ಒಂದೇ ಒಂದು ಸ್ರೋತ ಕಂಡುಬರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಮಿಳುನಾಡಿನ ದೇಗುಲಗಳ ನಗರಿ ಕಾಂಚಿಪುರದಲ್ಲಿ 40 ವರ್ಷಗಳಿಂದ ನೀರಿನಲ್ಲಿದ್ದ `ಅಥಿ ವರದಾರ್’ ಮೂರ್ತಿಯನ್ನು ಮೇಲಕ್ಕೆ ಎತ್ತಲಾಗಿದ್ದು, ದೇವರನ್ನು ನೋಡಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇಗುಲದತ್ತ ಬರುತ್ತಿದ್ದಾರೆ.ಪುರಾತನ ಕಾಲದಿಂದಲೂ ಈ ದೇಗುಲ 40 ವರ್ಷಕ್ಕೊಮ್ಮೆ ಮಾತ್ರ ಬಾಗಿಲನ್ನು ತೆರೆಯಲಾಗುತ್ತದೆ. ಈ ವೇಳೆ 48 ದಿನಗಳ ಕಾಲ ಮಾತ್ರ ಅಥಿ ವರದಾರ್ ದೇವರ ದರ್ಶನ ಪಡೆಯಬಹುದಾಗಿದೆ. ಈ ಅವಧಿ ಮುಗಿದ ಬಳಿಕ ಮತ್ತೆ ಮೂರ್ತಿಯನ್ನು ನೀರಿನಲ್ಲಿ ಇಡಲಾಗುತ್ತದೆ. ಈ ಹಿಂದೆ 1979ರಲ್ಲಿ ದರ್ಶನ ಭಾಗ್ಯ ಸಿಕ್ಕಿತ್ತು. ಇದಕ್ಕೂ ಮೊದಲು 1939ರಲ್ಲಿ…
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದೇ ಭಕ್ತರು ಕರೆಯುತ್ತಾರೆ.ಮೊನ್ನೆಯಷ್ಟೇ ಸಿದ್ದಗಂಗಾ ಶ್ರೀ ಗಳನ್ನು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಮಠದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ನಡೆದಾಡುವ ದೇವರು ಎಂದೇ ಕರೆಯುವ ಸಿದ್ದಗಂಗಾ ಶ್ರೀ ಗಳು ಕಿರಿಯಾ ಸ್ವಾಮೀಜಿಗಳಲ್ಲಿ ನನ್ನ ವಯಸ್ಸು ಎಷ್ಟು ಅಂತ ಕೇಳಿದ್ದಾರೆ! ಅದಕ್ಕೆ ಕಿರಿಯ ಶ್ರೀ ಗಳು 111 ವರ್ಷ ಆಗಿದೆ ಎಂದಾಗ ಬಹಳ ಆಯ್ತು ಎಂದು ಶಿವಕುಮಾರ ಸ್ವಾಮೀಜಿಗಳು ಹೇಳಿದ್ದಾರೆ. ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸಿದ್ದಗಂಗಾ ಮಠಕ್ಕೆ ಆಗಮಿಸಿದರು….
ಈರುಳ್ಳಿ ಬೆಲೆ ದುಬಾರಿಯಾಗಿ ಸರ್ಕಾರವೇ ಉರುಳಿರುವ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿದೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ದೆಹಲಿ ಸರ್ಕಾರ ಸಾಮಾನ್ಯ ಜನರಿಗೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ತಲುಪಿಸಲು ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ನಲವತ್ತು ರೂಪಾಯಿಗಳಿಂದ ಎಪ್ಪತ್ತು ರೂಪಾಯಿವರೆಗೆ ಏರಿಕೆ ಕಂಡಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಚಿಂತನೆ ನಡೆಸಿದೆ. ಪ್ರತಿ ಕೆಜಿಗೆ 24 ರೂಪಾಯಿಯಂತೆ ತಲುಪಿಸುವ…
ದೇಶದ ರೈತರ ಕಷ್ಟವನ್ನು ಕಡಿಮೆ ಮಾಡಲು, ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, 2,000 ರೂಪಾಯಿಗಳನ್ನು ಕೇಂದ್ರ ಸರ್ಕಾರ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಮೋದಿ ಸರ್ಕಾರವು ಫೆಬ್ರವರಿ 24, 2019 ರಂದು ಪ್ರಾರಂಭಿಸಿತು. ಈ ಯೋಜನೆಯಡಿ ಸರ್ಕಾರ ಪ್ರತಿ ವರ್ಷ 3 ಕಂತುಗಳಲ್ಲಿ 6000 ರುಪಾಯಿ ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಎರಡನೇ ಕಂತನ್ನು ನೇರವಾಗಿ ಏಪ್ರಿಲ್ 1 ರಿಂದ ಜುಲೈ…
ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಮಾಜಿ ಸಿಎಂ ಆಪ್ತರೆಲ್ಲ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಪರಮೇಶ್ವರ್ ಅವರು ಕರೆದ ಉಪಹಾರ ಕೂಟಕ್ಕೆ ಆಗಮಿಸಿದ್ದ ಎಲ್ಲ ಸಚಿವರು ತಮ್ಮ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯರಿಗೆ ರಾಜೀನಾಮೆ ನೀಡಿದ್ದಾರೆ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣೆಬೈರೇಗೌಡರು ಸೇರಿದಂತೆ ಎಲ್ಲ 22 ಸಚಿವರು ತಮ್ಮ ರಾಜೀನಾಮೆಯನ್ನು ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ. ಇತ್ತ ರಾಜೀನಾಮೆ ನೀಡಿ ಹೊರ ಬಂದು ಮಾತನಾಡಿದ ಸಚಿವ ರಹೀಂಖಾನ್, ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ…
ದಕ್ಷಿಣ ಭಾರತದ ಪ್ರಮುಖ ಬ್ರೇಕ್ಫಾಸ್ಟ್ಗಳಲ್ಲಿ ಇಡ್ಲಿ ಕೂಡಾ ಒಂದು. ಪ್ರತಿಯೊಬ್ಬರ ಫೇವರಿಟ್ ತಿಂಡಿಯಾಗಿರುವ ಬಿಸಿ ಬಿಸಿ ಇಡ್ಲಿಗಳು ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಇಲ್ಲ. ಕ್ಯಾಲೊರಿ ಅಂಶವೂ ಅತ್ಯಂತ ಕಡಿಮೆ ಇದೆ. ಹೊಟ್ಟೆಗೂ ಹಿತವಾಗಿರುವ ಈ ಆಹಾರದಲ್ಲಿ ಹಲವಾರು ವೆರೈಟಿಗಳಿವೆ.