ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವ್ಯಾಲಿ ಆಫ್ ಫ್ಲವರ್ಸ್ ರಾಷ್ಟ್ರೀಯ ಉದ್ಯಾನವನವು ಭಾರತೀಯ ರಾಷ್ಟ್ರೀಯ ಉದ್ಯಾನವನವಾಗಿದ್ದು, ಇದು ಉತ್ತರಾಖಂಡ ರಾಜ್ಯದ ಉತ್ತರ ಚಮೋಲಿ ಮತ್ತು ಪಿಥೋರಗ h ದಲ್ಲಿದೆ ಮತ್ತು ಇದು ಸ್ಥಳೀಯ ಆಲ್ಪೈನ್ ಹೂವುಗಳ ಹುಲ್ಲುಗಾವಲುಗಳು ಮತ್ತು ವಿವಿಧ ಸಸ್ಯವರ್ಗಗಳಿಗೆ ಹೆಸರುವಾಸಿಯಾಗಿದೆ. ಏಷ್ಯಾಟಿಕ್ ಕಪ್ಪು ಕರಡಿ ಹಿಮ ಚಿರತೆ, ಕಸ್ತೂರಿ ಜಿಂಕೆ, ಕಂದು ಕರಡಿ, ಕೆಂಪು ನರಿ ಮತ್ತು ನೀಲಿ ಕುರಿಗಳು ಸೇರಿದಂತೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಈ ಸಮೃದ್ಧ ವೈವಿಧ್ಯಮಯ ಪ್ರದೇಶವಿದೆ. ಉದ್ಯಾನದಲ್ಲಿ ಕಂಡುಬರುವ ಪಕ್ಷಿಗಳಲ್ಲಿ ಹಿಮಾಲಯನ್ ಮೋನಾಲ್ ಫೆಸೆಂಟ್ ಮತ್ತು ಇತರ ಎತ್ತರದ ಪಕ್ಷಿಗಳು ಸೇರಿವೆ. ಸಮುದ್ರ ಮಟ್ಟದಿಂದ 3352 ರಿಂದ 3658 ಮೀಟರ್ ಎತ್ತರದಲ್ಲಿ, ವ್ಯಾಲಿ ಆಫ್ ಫ್ಲವರ್ಸ್ ರಾಷ್ಟ್ರೀಯ ಉದ್ಯಾನದ ಸೌಮ್ಯ ಭೂದೃಶ್ಯವು ಪೂರ್ವಕ್ಕೆ ನಂದಾ ದೇವಿ ರಾಷ್ಟ್ರೀಯ ಉದ್ಯಾನದ ಒರಟಾದ ಪರ್ವತ ಅರಣ್ಯವನ್ನು ಪೂರೈಸುತ್ತದೆ. ಗ್ರೇಟ್ ಹಿಮಾಲಯ ಪರ್ವತ ಶ್ರೇಣಿಗಳ ನಡುವೆ ಒಂದು ವಿಶಿಷ್ಟ ಪರಿವರ್ತನಾ ವಲಯವನ್ನು ಒಳಗೊಂಡಿದೆ. ಈ ಉದ್ಯಾನವನವು 87.50 ಕಿಮೀ 2 ವಿಸ್ತಾರದಲ್ಲಿದೆ ಮತ್ತು ಇದು ಸುಮಾರು 8 ಕಿ.ಮೀ ಉದ್ದ ಮತ್ತು 2 ಕಿ.ಮೀ ಅಗಲವಿದೆ. ಉದ್ಯಾನವು ಸಂಪೂರ್ಣವಾಗಿ ಸಮಶೀತೋಷ್ಣ ಆಲ್ಪೈನ್ ವಲಯದಲ್ಲಿದೆ. ಎರಡೂ ಉದ್ಯಾನವನಗಳು ನಂದಾ ದೇವಿ ಬಯೋಸ್ಫಿಯರ್ ರಿಸರ್ವ್ (223,674 ಹೆಕ್ಟೇರ್) ನಲ್ಲಿ ಆವರಿಸಲ್ಪಟ್ಟಿವೆ, ಇದು ಬಫರ್ ವಲಯದಿಂದ (5,148.57 ಕಿಮಿ 2) ಮತ್ತಷ್ಟು ಸುತ್ತುವರೆದಿದೆ ನಂದಾ ದೇವಿ ನ್ಯಾಷನಲ್ ಪಾರ್ಕ್ ರಿಸರ್ವ್ ಯುನೆಸ್ಕೋ ವರ್ಲ್ಡ್ ನೆಟ್ವರ್ಕ್ ಆಫ್ ಬಯೋಸ್ಫಿಯರ್ ರಿಸರ್ವ್ನಲ್ಲಿದೆ.
ಎತ್ತರದ ಕಣಿವೆ
ಹೂವುಗಳ ಕಣಿವೆ ಎತ್ತರದ ಹಿಮಾಲಯನ್ ಕಣಿವೆಯಾಗಿದ್ದು, ಇದನ್ನು ಪ್ರಸಿದ್ಧ ಪರ್ವತಾರೋಹಿಗಳು, ಸಸ್ಯವಿಜ್ಞಾನಿಗಳು ಮತ್ತು ಸಾಹಿತ್ಯದಲ್ಲಿ ಬಹುಕಾಲದಿಂದ ಅಂಗೀಕರಿಸಲಾಗಿದೆ. ಇದು ಒಂದು ಶತಮಾನಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಮತ್ತು ಇದನ್ನು ಹಿಂದೂ ಧರ್ಮದಲ್ಲಿ ಉಲ್ಲೇಖಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಸ್ಥಳೀಯ ಜನರು ಕಣಿವೆಗೆ ಭೇಟಿ ನೀಡಿದ್ದಾರೆ ಭಾರತೀಯ ಯೋಗಿಗಳು ಧ್ಯಾನಕ್ಕಾಗಿ ಕಣಿವೆಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ಹೂವುಗಳ ಕಣಿವೆ ಅನೇಕ ವಿಭಿನ್ನ ವರ್ಣರಂಜಿತ ಹೂವುಗಳನ್ನು ಹೊಂದಿದೆ, ಸಮಯ ಮುಂದುವರೆದಂತೆ ವಿವಿಧ ಬಣ್ಣಗಳನ್ನು ತೆಗೆದುಕೊಳ್ಳುತ್ತದೆ. ಕಣಿವೆಯನ್ನು 1982 ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು ಮತ್ತು ಈಗ ಅದು ವಿಶ್ವ ಪರಂಪರೆಯ ತಾಣವಾಗಿದೆ.
ಈ ಉದ್ಯಾನವು ತನ್ನ ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು ಇಲ್ಲಿನ ಹುಲ್ಲುಗಾವಲಿನ ಮೈದಾನಗಳಲ್ಲಿ ನೂರಾರು ಬಗೆಯ ಹೂವುಗಳ ಬೃಹತ್ ನೈಸರ್ಗಿಕ ತೋಟವನ್ನೆ ಕಾಣಬಹುದು ಎಂಥವರೆ ಆಗಲಿ ಇಲ್ಲಿನ ಪರಿಸರದಲ್ಲಿ ಒಂದೆರಡು ಸುತ್ತು ಹೋಡೆದರೆ ಸಾಕು ತಮ್ಮೆಲ್ಲ ಕಷ್ಟ, ಕಾರ್ಪಣ್ಯಗಳನ್ನು ಮರೆತು ಉಲ್ಲಾಸ, ಉತ್ಸಾಹಗಳನ್ನು ಮತ್ತೆ ಮರಳಿ ಪಡೆಯಬಹುದು.
ಕೇವಲ ಪುಷ್ಪಕಣಿವೆಯಂತಲ್ಲ, ಇಲ್ಲಿ ಆಕರ್ಷಕ ಪ್ರಾಣಿ ಪಕ್ಷಿಅಗಳನ್ನೂ ಸಹ ಕಾನಬಹುದಾಗಿದೆ. ಜೀವ ವೈವಿಧ್ಯದ ನೆಲೆಯಾಗಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಕಪ್ಪು ಕರಡಿ, ಹಿಮ ಚಿರತೆ, ಕಂದು ಕರಡಿ ಮತ್ತು ನೀಲಿ ಕುರಿಗಳಂತಹ ವನ್ಯ ಜೀವಿಗಳಿಗೆ ನೆಲೆಯಾಗಿದೆ. ನಂದಾದೇವಿ ರಾಷ್ಟ್ರೀಯ ಉದ್ಯಾನದೊಂದಿಗೆ ಈ ಪುಷ್ಪಕಣಿವೆಯು ಸಾಮಾನ್ಯವಾಗಿ ಗುರುತಿಸಲ್ಪಡುತ್ತದೆ. ಇವೆರಡನ್ನು ಒಟ್ಟಾರೆಯಾಗಿ ವಿಶ್ವ ಪಾರಂಪರಿಕ ತಾಣ ಎಂದು ಮಾನ್ಯ ಮಾಡಲಾಗಿದೆ. ಇದರ ಭೂಮೇಲ್ಮೈ ಪ್ರದೇಶವು ಪರ್ವತಗಳನ್ನು ಹೊಂದಿದ್ದರೂ ಇವು ಅಷ್ಟೊಂದು ಕಡಿದಾಗಿಲ್ಲ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಸುಮಾರು 87.5 ಚ.ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ತನ್ನ ಮೇಲ್ಮೈ ಮೇಲೆ ವಿವಿಧ ಬಗೆಯ ಸಸ್ಯಗಳು, ಅಂದ ಚೆಂದದ, ಬಣ್ಣ ಬಣ್ಣದ ಹೂವುಗಳನ್ನು, ಕೀಟಗಳನ್ನು ಹೊಂದಿರುವ ಶ್ರೀಮಂತ ಜೈವಿಕ ಪ್ರದೇಶವಾಗಿದೆ.
ಪರಿಸರ ಪ್ರವಾಸೋದ್ಯಮಕ್ಕೆ ಮಾದರಿಯಾಗಿರುವ ಪುಷ್ಪಕಣಿವೆ ಪಶ್ಚಿಮ ಹಿಮಾಲಯದಲ್ಲಿರುವ ಜೀವವಲಯದ ಪ್ರತಿನಿಧಿ ಅಂತಲೇ ಹೇಲಬಹುದು. ಅಲ್ಲದೆ ಇಲ್ಲಿರುವ ಸುಂದರ ಆಲ್ಪೈನ್ ಗಿಡಮರಗಳ ಕಾಡುಗಳು ವಿದೇಶಗಲಲ್ಲಿರುವ ಉದ್ಯಾನಗಳಂತೆ ಕಂಡುಬರುತ್ತವೆ.
ಇಲ್ಲಿನ ಜೀವ ವೈವಿಧ್ಯಗಳು ಒಂದು ರೀತಿಯಲ್ಲಿ ವಿಶಿಷ್ಟವಾಗಿವೆ ಹಾಗೂ ಅಳಿವಿನಂಚಿನಲ್ಲಿವೆ. ಏಕೆಂದರೆ ಇಲ್ಲಿ ಕಂಡುಬರುವ ಕೆಲವು ಅಪರೂಪದ ಜೀವಿಗಳು ಭಾರತದ ಇತರೆ ಭಾಗ ಮಾತ್ರವಲ್ಲ, ಸ್ವತಃ ಇದರ ಪಕ್ಕದಲ್ಲೆ ಇರುವ ನಂದಾದೇವಿ ರಾಷ್ಟ್ರೀಯ ಉದ್ಯಾನದಲ್ಲೂ ಸಹ ಕಂಡುಬರುವುದಿಲ್ಲ. ಇನ್ನೊಂದು ಸಂಗತಿಯೆಂದರೆ ಇಲ್ಲಿ ಔಷಧೀಯ ಗುಣವುಳ್ಳ ಅನೇಕ ವಿಶಿಷ್ಟ ರೀತಿಯ, ಮತ್ತಿನ್ನೆಲ್ಲೂ ಕಂಡುಬರದ ಗಿಡ ಮೂಲಿಕೆಗಳನ್ನು ಕಾನಬಹುದು. ಅಲ್ಲದೆ ಏಳು ತಳಿಗಳ ಪಕ್ಷಿಗಳು ಇಲ್ಲಿ ವ್ಯಾಪಕವಾಗಿ ಕಾಣಬರುತ್ತವೆ.
ಈ ಕಣಿವೆ ಪ್ರದೇಶವನ್ನು 1982 ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು. ಉತ್ತರಾಖಂಡದ ಗಡ್ವಾಲ್ ಭಾಗದಲ್ಲಿರುವ ಈ ಕಣಿವೆ ಪ್ರದೇಶವನ್ನು ವರ್ಷದ ಎಲ್ಲಾ ಸಮಯದಲ್ಲೂ ತಲುಪುವುದು ಕಷ್ಟಕರವಾಗಿದೆ. ಜೂನ್ ನಿಂದ ಸೆಪ್ಟಂಬರ್ ಇಲ್ಲಿಗೆ ತೆರಳಲು ಪ್ರಶಸ್ತ ಸಮಯವೆಂದೆ ಹೇಳಬಹುದು. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಅಲ್ಲದೆ ಜಾನುವಾರುಗಳನ್ನು ಇಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಜೂನ್ ನಿಂದ ಅಕ್ಟೋಬರ್ ತಿಂಗಳವರೆಗೆ ತೆರೆದಿರುವ ಈ ಪ್ರದೇಶವು ವರ್ಷದ ಇತರ ಸಮಯದಲ್ಲಿ ಸಂಪೂರ್ಣವಾಗಿ ಹಿಮದಿಂದ ಮುಚ್ಚಿಹೋಗಿರುತ್ತದೆ.
ಚಾರಣದ ಮೂಲಕವೆ ಈ ಕಣಿವೆಯನ್ನು ತಲುಪಬೇಕಾಗಿದೆ. ಅದಕ್ಕೆಂದೆ ಸುಮಾರು ಹನ್ನೆರಡು ಕಿ.ಮೀ. ಗಳಷ್ಟು ದೂರವನ್ನು ಕಾಲ್ನಡೆಯಿಂದಲೆ ಕ್ರಮಿಸಬೇಕಾಗುತ್ತದೆ. ಈ ಕಣಿವೆಗೆ ಹತ್ತಿರದಲ್ಲಿರುವ ಪಟ್ಟಣವೆಂದರೆ ಜೋಷಿಮಠ.
ಜೋಷಿಮಠವು ಹರಿದ್ವಾರ ಮತ್ತು ಡೆಹ್ರಾ ಡೂನ್ ನಗರಗಳೋದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಜೋಷಿಮಠದಿಂದ ಬದರಿನಾಥಕ್ಕೆ ತೆರಳುವ ರಸ್ತೆಯಲ್ಲಿ ಗೋವಿಂದ್ ಘಾಟ್ ಎಂಬ ಹಳ್ಳಿಗೆ ಸಾಗಿ ಅಲ್ಲಿಂದ ಮುಂದೆ ಕಾಲುದಾರಿಯನ್ನು ಹಿಡಿದು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಕ್ಕೆ ತೆರಳಬೇಕಾಗುತ್ತದೆ.
ಗೋವಿಂದ ಘಾಟ್ ಈ ಚಾರಣದ ಪ್ರಾರಂಭಿಕ ಹಂತವಾಗಿದ್ದು ಇಲ್ಲಿಂದ ಹದಿನಾಲ್ಕು ಕಿ.ಮೀ ಗಳಷ್ಟು ಚಾರಣ ಮಾಡಿದಾಗ ಘಂಘಾರಿಯಾ ಎಂಬ ಪುಟ್ಟ ಗ್ರಾಮ ದೊರೆಯುತ್ತದೆ. ವಿಶೇಷವೆಂದರೆ ಇಲ್ಲಿಂದ ಚಾರಣ ಪಥವು ಎರಡು ಕವಲುಗಳಲ್ಲಿ ಒಡೆದಿದ್ದು ಒಂದು ಪುಷ್ಪಕಣೆವೆಯೆಡೆ ಹೋದರೆ ಇನ್ನೊಂದು ಹೇಮಕುಂಡ್ ಸಾಹಿಬ್ ನತ್ತ ಕರೆದೊಯ್ಯುತ್ತದೆ. ಗೋವಿಂದ್ ಘಾಟ್ ನಿಂದ ಘಂಘಾರಿಯಾಗೆ ಹೋಗುವ ಮಾರ್ಗ.
source:- wikipedia & nativeplanet
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
1800 ರ ಉತ್ತರಾರ್ಧದಲ್ಲಿ ಮತ್ತು 1900 ರ ದಶಕದ ಆರಂಭದಲ್ಲಿ ಜಗತ್ತನ್ನು ಧ್ವಂಸಗೊಳಿಸಿದ ಮೂರನೇ ಪ್ಲೇಗ್ ಸಾಂಕ್ರಾಮಿಕವು ಇಂದಿನ COVID-19 ಸಾಂಕ್ರಾಮಿಕ ರೋಗಕ್ಕೆ ಹೋಲುತ್ತದೆ. ಇದು 1860 ರ ದಶಕದಲ್ಲಿ ಚೀನಾದಲ್ಲಿ ತನ್ನ ಕೊಳಕು ತಲೆಯನ್ನು ಬೆಳೆಸಿತು, 1894 ರಲ್ಲಿ ಹಾಂಗ್ ಕಾಂಗ್, ಆಗಸ್ಟ್ 1896 ರಲ್ಲಿ ಮುಂಬೈ, ಡಿಸೆಂಬರ್ 1897 ರಲ್ಲಿ ಹುಬ್ಬಳ್ಳಿ ಮತ್ತು ಆಗಸ್ಟ್ 1898 ರಲ್ಲಿ ಬೆಂಗಳೂರು ತಲುಪಿತು.
ಸಾಮಾಜಿಕ ಜಾಲತಾಣಗಳಲ್ಲಿ ಹೊಸತೊಂದು ಚಾಲೆಂಜ್ ಬಂದಿದೆ; ಅದೇ ಬಾಟಲ್ ಕ್ಯಾಪ್ ಚ್ಯಾಲೆಂಜ್. ಇದರಲ್ಲಿ ಚಾಲೆಂಜ್ ತಗೊಂಡವರು ರೌಂಡ್ ಹೌಸ್ ಕಿಕ್ ಹೊಡೆದು ಬಾಟಲ್ಗೆ ಹಾಕಿದ ಮುಚ್ಚಳವನ್ನು ತೆಗೆಯಬೇಕು. ಜೇಸನ್ ಸ್ಟ್ಯಾಥಮ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ರಂತಹ ನಟರು ಹಾಗೂ ಹಲವು ಫೈಟರ್ಗಳು ಇದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲೊಬ್ಬ ಗಾಯಕಿ ಕೇವಲ ತನ್ನ ಧ್ವನಿಯಿಂದಲೇ ಬಾಟಲ್ ಕ್ಯಾಪ್ ಎಗರಿಸಿರುವಂತೆ ಕಾಣುತ್ತದೆ. ಮರಿಯಾ ಕ್ಯಾರಿ ಎನ್ನುವ ಅಮೆರಿಕಾದ ಗಾಯಕಿ ಟ್ವೀಟರ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಹೈ ಪಿಚ್ನಲ್ಲಿ ರಾಗ ಎಳೆಯುತ್ತಿದ್ದಂತೆ…
ಜಾಗತಿಕ ತಾಪಮಾನ ಏರಿಕೆ ಈ ಮೊದಲು ಊಹಿಸಿದ್ದಕ್ಕಿಂತಲೂ ಮೂರು ಪಟ್ಟು ಭೀಕರವಾಗಿರಲಿದೆ. ಇತ್ತೀಚಿನ ಸಂಶೋಧನಾ ವರದಿಗಳ ಪ್ರಕಾರ 2050ರ ವೇಳೆಗೆ ವಿಶ್ವದ ಪ್ರಮುಖ ಕರಾವಳಿ ನಗರಗಳು ಭೂಪಟದಿಂದಲೇ ಅಳಿಸಿ ಹೋಗಲಿವೆಯಂತೆ. ದೇಶದ ವಾಣಿಜ್ಯ ನಗರಿ ಮುಂಬಯಿ ಸೇರಿದಂತೆ ಸಮುದ್ರ ಮಟ್ಟದಲ್ಲಿರುವ ವಿಶ್ವದ ಹಲವಾರು ನಗರಗಳು ಜಲಸಮಾಧಿಯಾಗಲಿವೆ. ಅಮೆರಿಕದ ನ್ಯೂ ಜೆರ್ಸಿ ನಗರದ “ಕ್ಲೈಮೇಟ್ ಸೆಂಟ್ರಲ್” ಎಂಬ ವಿಜ್ಞಾನ ಸಂಸ್ಥೆಯು ಈ ಹೊಸ ಸಂಶೋಧನೆ ನಡೆಸಿ ತನ್ನ ವರದಿಯನ್ನು “ನೇಚರ್ ಕಮ್ಯೂನಿಕೇಶನ್ಸ್”ಪತ್ರಿಕೆಯಲ್ಲಿ ಬಿಡುಗಡೆ ಮಾಡಿದೆ. ಸಂಶೋಧಕರು ಈ ಹಿಂದಿನ…
ದಿನೇ ದಿನೆ ರಾಜ್ಯ ರಾಜಕಾರಣ ಕುತೂಹಲ ಕೆರೆಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ರವರ ಕಿರಿಯ ಪುತ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ
ಜಿಲ್ಲೆಯಾದ್ಯಂತ 15ರಿಂದ18ವರ್ಷದ 78,357 ಮಕ್ಕಳಿದ್ದು ಒಂದು ವಾರದೊಳಗೆ ಉಚಿತ ಲಸಿಕೆ ಹಾಕುವ ಮೂಲಕ ಅಭಿಯಾನ ಪೂರ್ಣ ಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಗದೀಶ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಜ.3ರಿಂದ 15ರಿಂದ18 ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು ಮೊದಲ ದಿನ 2600ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ಕೋಲಾರ ಜಿಲ್ಲೆ ಯಲ್ಲಿ 15ರಿಂದ18 ವರ್ಷದ ಮಕ್ಕಳ ಸಂಖ್ಯೆ ಕೋಲಾರ:- 23,381 ಬಂಗಾರಪೇಟೆ:-10,662 ಕೆಜಿಎಫ್:- 11,231 ಮಾಲೂರು:- 11,743…
ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು.ಒಂದು ರಸವತ್ತಾದ ಮೃದು ಹಣ್ಣು. ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್, ಚೀನಾ ತೈವಾನ್, ಕ್ವೀನ್ಸ್ಲ್ಯಾಂಡ್ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.