News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಸುದ್ದಿ

ಆರ್ಥಿಕ ಕುಸಿತ ಎದುರಿಸುವುದು ಹೇಗೆ ಎಂದು ಮೋದಿಗೆ ಆರು ಸಲಹೆ ನೀಡಿದ ಮನಮೋಹನ್ ಸಿಂಗ್,.!

48

ನವದೆಹಲಿ, ಆರ್ಥಿಕತೆಯು ಸಹಜ ಸ್ಥಿತಿಗೆ ಬರಲು ಸರ್ಕಾರವು ಮೊದಲು ಜಿಎಸ್‌ಟಿಯನ್ನು ಸರಳ ಹಾಗೂ ಸುಧಾರಣೆ ಮಾಡಬೇಕು. ಗ್ರಾಮೀಣ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಬಂಡವಾಳ ಸೃಷ್ಟಿಯ ಸಾಲದ ಕೊರತೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ. ಭಾರತವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಸಮಯ ಕಳೆದುಹೋಗಿದೆ. ವಲಯವಾರು ಚೂರು ಚೂರು ಗಮನ ನೀಡುವಂತಹ ರಾಜಕೀಯ ಬಂಡವಾಳವನ್ನು ವ್ಯರ್ಥ ಮಾಡುವ ಬದಲು ಅಥವಾ ಅಪನಗದೀಕರಣದಂತಹ ಶಾಶ್ವತ ಬ್ಲಂಡರ್‌ಗಳನ್ನು ಎಸಗುವ ಬದಲು ಈಗ ರಚನಾತ್ಮಕ ಸುಧಾರಣೆಯ ಮುಂದಿನ ಪೀಳಿಗೆಯನ್ನು ನಡೆಸಬೇಕಾದ ಹೊಣೆ ಸರ್ಕಾರದ ಮೇಲಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.

ನಾನು ಹಣಕಾಸು ಸಚಿವನಾಗಿದ್ದಾಗ ಮತ್ತು ಪ್ರಧಾನಿಯಾಗಿದ್ದಾಗ ನಮಗೆ ಸಂಪೂರ್ಣ ಬಹುಮತ ಸಿಕ್ಕಿರಲಿಲ್ಲ. ಈಗ ಮೋದಿ ಸರ್ಕಾರ ಸತತ ಎರಡು ಬಾರಿ ಬೃಹತ್ ಬಹುಮತದೊಂದಿಗೆ ಆಯ್ಕೆಯಾಗಿದೆ. ಹೀಗಿದ್ದರೂ ನಾವು 1991 ಮತ್ತು 2008ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ್ದೆವು’ ಎಂದು ಅವರು ತಿಳಿಸಿದ್ದಾರೆ. ‘ದಿ ಬಿಜಿನೆಸ್ ಲೈನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದಾರೆ.

ಕಳವಳಕಾರಿಆರ್ಥಿಕ ಕುಸಿತ : ಭಾರತವು ಅತ್ಯಂತಕಳವಳಕಾರಿಯಾಗಿ ಆರ್ಥಿಕ ಕುಸಿತ ಅನುಭವಿಸುತ್ತಿದೆ.ಈ ಕುಸಿತ ಆರ್ಥಿಕತೆಯಪ್ರಮುಖ ವಲಯಗಳಿಗೆ ಭಾರಿ ಹೊಡೆತ ನೀಡಿದೆ.ಈ ಸಮಸ್ಯೆಗಳಿಗೆ ಸರ್ಕಾರವುಪಾರದರ್ಶಕ ರೀತಿಯಲ್ಲಿ ಪರಿಹಾರ ಹುಡುಕಲು ಮುಂದಾಗಬೇಕು.ಪರಿಣತರ ಸಲಹೆ ಪಡೆದುಕೊಳ್ಳಬೇಕು. ಮುಖ್ಯವಾಗಿಸರ್ಕಾರವು ಜನರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು.ಜತೆಗೆ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಬೇಕು.ದುರದೃಷ್ಟವಶಾತ್ ಮೋದಿ ಸರ್ಕಾರದಿಂದ ಅಂತಹಯಾವುದೇ ಪ್ರಯತ್ನ ಇದುವರೆಗೂ ನಡೆದಿರುವುದುಕಂಡಿಲ್ಲ ಎಂದು ಸಿಂಗ್ ಟೀಕಿಸಿದರು.

ಕೃಷಿಗೆ ಹೊಡೆತ ನೀಡಿದ ನೋಟ್ ರದ್ದತಿ : ಆರ್ಥಿಕತೆಯ ಪ್ರಮುಖ ಭಾಗಗಳು ಆರ್ಥಿಕಸಮಸ್ಯೆಗೆ ಸಿಲುಕಿವೆ. ಉದಾಹರಣೆಗೆ ಕೃಷಿ ವಲಯವು ಜಿಡಿಪಿಯ ಶೇ 15ರಷ್ಟು ಕೊಡುಗೆ ನೀಡುತ್ತದೆ. ಅದುಮುಖ್ಯವಾಗಿ ನಡೆಯುವುದು ನಗದು ರೂಪದಲ್ಲಿ. ಮುಖ್ಯವಾಗಿ ಅದು ತೆರಿಗೆ ರಹಿತವಾದದ್ದು. ಆದರೆ ಅಪಗನಗದೀಕರಣದಸಮಯದಲ್ಲಿ ನಗದು ಹಣವನ್ನು ಹಠಾತ್ತಾಗಿ ಹಿಂದಕ್ಕೆ ಪಡೆದುಕೊಂಡ ಪರಿಣಾಮ ಕೃಷಿ ಆರ್ಥಿಕತೆಗೆ ಹೊಡೆತಬಿದ್ದಿತು ಎಂದು ಸಿಂಗ್ ಅರೋಪಿಸಿದ್ದಾರೆ.

ಅಪನಗದೀಕರಣದ ಆತಂಕ ನಿಜವಾಗಿದೆ : ಅಪನಗದೀಕರಣದನಂತರದ ವರ್ಷದಲ್ಲಿ ಜಿಡಿಪಿಯಲ್ಲಿ ಕಾರ್ಪೊರೇಟ್ ಹೂಡಿಕೆಯ ಪ್ರಮಾಣ ಶೇ7.5ರಿಂದ ಶೇ 2.7ಕ್ಕೆ ಕುಸಿದಿದೆ.ಇದು 2010-11ರಲ್ಲಿ ಜಿಡಿಪಿಯ ಶೇ15ರಷ್ಟಿತ್ತು. ಇದರ ಅರ್ಥ, ಕೃಷಿಯಂತಹಅಸಂಘಟಿತ ವಲಯ ಮಾತ್ರವಲ್ಲ, ಸಂಘಟಿತವಲಯ ಕೂಡ ಅಪನಗದೀಕರಣದಿಂದ ಸಂಕಷ್ಟಕ್ಕೆಸಿಲುಕಿದೆ. ಸಣ್ಣ ಮತ್ತು ಮಧ್ಯಮಉದ್ದಿಮೆಗಳು ಅತ್ಯಂತ ಕೆಟ್ಟ ಹೊಡೆತತಿಂದಿವೆ. ಅಪನಗದೀಕರಣದ ನಿರ್ಧಾರದಿಂದ ಉಂಟಾಗುವ ಪರಿಣಾಮವು ದೀರ್ಘಾವಧಿಮತ್ತು ತೀವ್ರವಾಗಿರಲಿದೆ ಎಂಬ ನಮ್ಮ ಕಳವಳಸತ್ಯವಾಗಿದೆ.

ಜಿಎಸ್‌ಟಿಯ ಕಳಪೆ ಅನುಷ್ಠಾನ : ಅಪನಗದೀಕರಣದ ಆಘಾತದ ಬಳಿಕವೂ ಸರ್ಕಾರತರಾತುರಿಯಲ್ಲಿ ಜಿಎಸ್‌ಟಿ ಜಾರಿಮಾಡಿತ್ತು ಆರ್ಥಿಕತೆಗೆ ನೀಡಿದ ಮತ್ತೊಂದು ದೊಡ್ಡಪೆಟ್ಟು. ಜಿಎಸ್‌ಟಿ ಒಂದುರಚನಾತ್ಮಕ ಸುಧಾರಣೆ. ಯುಪಿಎ ಸರ್ಕಾರದ ಅವಧಿಯಲ್ಲಿಯೇಅದನ್ನು ಜಾರಿಗೆ ತರಲು ಪ್ರಯತ್ನಿಸಿದ್ದೆವು.ನಾವು ಸುಧಾರಣೆಯ ಬೆಂಬಲಿಗರು. ಆದರೆ, ಅದನ್ನು ತುಂಬಾಕೆಟ್ಟದಾಗಿ ಅಳವಡಿಸಲಾಯಿತು. ದೊಡ್ಡ ಕಂಪೆನಿಗಳು ಜಿಎಸ್‌ಟಿ ರಸೀದಿ ನೀಡಬಲ್ಲಪೂರೈಕೆದಾರರಿಂದ ಖರೀದಿ ಮಾಡಲು ಆದ್ಯತೆನೀಡಿದ್ದರಿಂದ ಸಣ್ಣ, ಅತಿ ಸಣ್ಣಮತ್ತು ಮಧ್ಯಮ ಉದ್ಯಮಗಳು ಸಂಕಷ್ಟಕ್ಕೆಸಿಲುಕಿದವು.

ಸಣ್ಣ ಮತ್ತು ಮಧ್ಯಮ ಉದ್ಯಮ ತತ್ತರ : ಜಿಎಸ್‌ಟಿ ಅಡಿಯಲ್ಲಿತೀರಾ ಕಡಿಮೆ ಪ್ರಮಾಣದಲ್ಲಿ ಅರ್ಹತೆಗಿಟ್ಟಿಸಿಕೊಳ್ಳುವ ಭಾರತದ ಸಣ್ಣ ಕಂಪೆನಿಗಳಿಗೆಹೂಡುವ ಬದಲು ಆಮದಿಗೆ ಆದ್ಯತೆನೀಡಲಾಯಿತು. ಇಡೀ ಪೂರೈಕೆಯ ಸರಪಳಿಯನ್ನೇತುಂಡರಿಸಲಾಯಿತು. ಈಗ ನಮ್ಮ ಮಾರುಕಟ್ಟೆಗಳಲ್ಲಿಚೀನಾದ ಆಮದು ವಸ್ತುಗಳೇ ತುಂಬಿವೆಎನ್ನುವುದು ನಮಗೆ ತಿಳಿದಿದೆ. ಇಷ್ಟಲ್ಲದೆತೆರಿಗೆ ಅಧಿಕಾರಿಗಳು ತೆರಿಗೆದಾರರಿಗೆ ಕಿರುಕುಳ ನೀಡುತ್ತಿರುವ ವರದಿಗಳೂಬಂದಿವೆ. ಜಿಎಸ್‌ಟಿಯ ಸಂಕೀರ್ಣ,ಬಹುಬಗೆಯ ತೆರಿಗೆಗಳು, ನಿರಂತರ ಬದಲಾಗುವ ಮತ್ತುಸೃಷ್ಟಿಯಾಗುವ ನಿಯಮಗಳು ಮುಂತಾದವು ಸಣ್ಣಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆಗಾಸಿಯುಂಟು ಮಾಡಿವೆ.

ಜಿಎಸ್‌ಟಿಯನ್ನು ಸರಳಗೊಳಿಸಿ: ಪ್ರಧಾನಿಮೋದಿ ಮತ್ತು ಅವರ ಸರ್ಕಾರವುತಮ್ಮ ‘ಶೀರ್ಷಿಕೆ ನಿರ್ವಹಣೆ’ಯ ಹವ್ಯಾಸದಿಂದ ಹೊರಬರಬೇಕು.ತನ್ನ ಆದ್ಯತೆಗಳಲ್ಲಿ ಮೊದಲನೆಯದಾಗಿ ಜಿಎಸ್‌ಟಿಯನ್ನು ಸರಳಮತ್ತು ಸುಧಾರಣೆ ಮಾಡಬೇಕಿದೆ. ಇದರಿಂದಆದಾಯ ಅಲ್ಪಾವಧಿಗೆ ನಷ್ಟವಾದರೂ ತೊಂದರೆಯಿಲ್ಲ. ಎರಡನೆಯದಾಗಿ ಗ್ರಾಮೀಣ ಬಳಕೆಯನ್ನು ವೃದ್ಧಿಸಲುಮತ್ತು ಕೃಷಿಯನ್ನು ಪುನರುಜ್ಜೀವನಗೊಳಿಸಲು ಸೂಕ್ತ ಮಾರ್ಗಗಳನ್ನು ಹುಡುಕಬೇಕು.ಮೂರನೆಯದಾಗಿ, ಬಂಡವಾಳ ಸೃಷ್ಟಿಗೆ ಎದುರಾಗಿರುವಸಾಲದ ಕೊರತೆಯನ್ನು ಬಗೆಹರಿಸಬೇಕು. ಇದು ಸಾರ್ವಜನಿಕವಲಯದ ಬ್ಯಾಂಕುಗಳುಮಾತ್ರವಲ್ಲ, ಎನ್‌ಬಿಎಫ್‌ಸಿಗಳನ್ನೂಉಳಿಸಬೇಕಿದೆ.

ರಫ್ತು ಮಾರುಕಟ್ಟೆ ಪ್ರಯೋಜನ ಬಳಸಿಕೊಳ್ಳಿ : ನಾಲ್ಕನೆಯದಾಗಿಜವಳಿ, ಆಟೋ, ಎಲೆಕ್ಟ್ರಾನಿಕ್ಸ್ ಮತ್ತುದುಬಾರಿಯಲ್ಲದ ಮನೆ ನಿರ್ಮಾಣದಂತಹ ಮುಖ್ಯಉದ್ಯೋಗ ಸೃಷ್ಟಿಯ ವಲಯಗಳನ್ನು ಸುಧಾರಣೆಮಾಡಬೇಕು. ಮುಖ್ಯವಾಗಿ ಎಂಎಸ್‌ಎಂಇಗಳಿಗೆ ಆದ್ಯತೆನೀಡಬೇಕು. ಐದನೆಯದಾಗಿ, ಅಮೆರಿಕ ಮತ್ತು ಚೀನಾನಡುವಿನ ವ್ಯಾಪಾರ ಸಮರದಿಂದಾಗಿ ತೆರೆದುಕೊಂಡಿರುವರಫ್ತು ಮಾರುಕಟ್ಟೆಯನ್ನು ಬಳಸಿಕೊಳ್ಳಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.ಕೊನೆಯದಾಗಿ, ಬೃಹತ್ ಮಟ್ಟದ ಸಾರ್ವಜನಿಕಮೂಲಸೌಕರ್ಯದ ಅಭಿವೃದ್ಧಿಗೆ ವಿಶ್ವಾಸಾರ್ಹ ಮಾರ್ಗಸೂಚಿಯನ್ನು ರೂಪಿಸಬೇಕು. ಇದರಲ್ಲಿ ಖಾಸಗಿ ಹೂಡಿಕೆಗೂಗಮನ ಹರಿಸಬೇಕು. ಇವುಗಳು ರಚನಾತ್ಮಕವಾಗಿ ಸುಧಾರಣೆಯಾಗಬೇಕು.ಇವೆಲ್ಲವನ್ನೂ ಸರಿಯಾದ ರೀತಿಯಲ್ಲಿ ನಿಭಾಯಿಸಿದರೆಮುಂದಿನ ಮೂರು ನಾಲ್ಕು ವರ್ಷಗಳಲ್ಲಿಯೇನಾವು ಅತ್ಯುತ್ತಮ ಬೆಳವಣಿಗೆಗೆ ಮರಳಬಹುದು ಎಂದು ಸಿಂಗ್ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪತ್ನಿಗೆ ಬೆಂಕಿ ಹಚ್ಚಿ ತಾನೂ ವಿಷ ಸೇವಿಸಿದ 70 ವಯಸ್ಸಿನ ವೃದ್ಧ..!

    ಬೆಂಗಳೂರು: 70 ವರ್ಷದ ವೃದ್ಧನೋರ್ವ ತನ್ನ 65 ವರ್ಷದ ಪತ್ನಿಯನ್ನು ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಈ ಘಟನೆ ದೊಡ್ಡಬಳ್ಳಾಪುರ ಸಮೀಪದ ಚನ್ನಪುರ ಗ್ರಾಮದಲ್ಲಿ ನಡೆದಿದೆ. ವೃದ್ಧ ನಾರಾಯಣಪ್ಪ, ಪತ್ನಿ ಲಕ್ಷ್ಮಮ್ಮನ್ನು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದೊಂದಿಗೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಪತಿ, ಪತ್ನಿ ಬೇರೆ ಬೇರೆಯಾದ ಬಳಿಕ ನಾರಾಯಣಪ್ಪ ಅವರು ತಮ್ಮ ಬಳಿ ಇದ್ದ…

  • ಸುದ್ದಿ

    ಶಾಸಕರ ಮುಂದೆಯೆ ವಿದ್ಯಾರ್ಥಿನಿಯರಿಂದ ಬಿಇಓಗೆ ಸಕತ್ ಕ್ಲಾಸ್…! ಯಾಕೆ ಗೊತ್ತಾ?

    ನಿಮ್ಮನ್ನು ನಂಬಿ ಎಷ್ಟು ದಿನ ನಾವೂ ಹೀಗೆ ಶಾಲೆಗೆ ಬರಬೇಕು. ಅದೇಗೆ ಕಲಿತು ತಂದೆ ತಾಯಿಗೆ ಒಳ್ಳೆಯ ಹೆಸರು ತರೊಕಾಗುತ್ತದೆ? ಎಂದು ಶಾಸಕನ ಮುಂದೆ ವಿದ್ಯಾರ್ಥಿನಿ ಪೋನ್ ಮಾಡಿ ಬಿಇಓ ವೆಂಕಟೇಶ ಗುಡಿಯಾಳಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ಮೊದಲು ವಿದ್ಯಾರ್ಥಿಗಳು ಶಾಸಕರಿಗೆ ನಮ್ಮ ಶಾಲೆಗೆ ಭೇಟಿ ಕೊಡಿ ಎಂದಿದ್ದರು. ವಿದ್ಯಾರ್ಥಿಗಳ ಕರೆಗೆ ಶಾಲೆಗೆ ಭೇಟಿ ನೀಡಿದ ಮಾನವಿ ಶಾಸಕ ರಾಜಾ…

  • ಸುದ್ದಿ

    ಇವಿಎಂ ಅಭ್ಯರ್ಥಿ ಸ್ಥಾನಗಳಲ್ಲಿ ಸಿಎಂ ಮಗನಿಗೆ ಮೊದಲ ಸ್ಥಾನ!ಆದರೆ ಸುಮಲತಾಗೆ ಯಾವ ಸ್ಥಾನ?ಈ ಸುದ್ದಿ ನೋಡಿ..

    ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಅಭ್ಯರ್ಥಿಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ ಸ್ಥಾನ ನೀಡಲಾಗಿದೆ. ಅದರಲ್ಲಿ ಮೊದಲ ಹೆಸರೇ ಮುಖ್ಯಮಂತ್ರಿ ಪುತ್ರ ನಿಖಿಲ್‍ ಕುಮಾರಸ್ವಾಮಿಯವರದ್ದಾದ್ರೆ, ಕೊನೆಯಿಂದ ಎರಡನೇಯವರಾಗಿ ಸುಮಲತಾ ಹೆಸರಿದೆ…! ಇವಿಎಂನ ಕ್ರಮ ಸಂಖ್ಯೆ 1 ರಲ್ಲೇ ನಿಖಿಲ್‍ ಕುಮಾರಸ್ವಾಮಿಯವರ ಹೆಸರು ನೀಡಲಾಗಿದೆ. ಆದ್ರೆ ಸುಮಲತಾ ಅಂಬರೀಷ್‍ ಹೆಸರನ್ನು ಇವಿಎಂನಲ್ಲಿ ಕೊನೆಯಿಂದ ಎರಡನೇಯದಾಗಿ ಹಾಕಲಾಗಿದೆ. ಅಲ್ಲದೆ ಸುಮಲತಾ ಅಂಬರೀಷ್‍ ಹೆಸರಿನ ಮೊದಲು ಮತ್ತು ಕೊನೆಗೆ…

  • ಸುದ್ದಿ

    ಮದ್ಯಪಾನ ಮಾರಾಟದಲ್ಲಿ ಈ ಬಾರಿ ದಾಖಲೆ ನಿರ್ಮಿಸಿದ ಮಂಡ್ಯ…..!

    ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ….

  • ಉಪಯುಕ್ತ ಮಾಹಿತಿ

    ನಮ್ಮ ದೇಹದ ವಿಚಿತ್ರ ಸತ್ಯಗಳು!!

    ನಮ್ಮ ದೇಹದ ವಿಚಿತ್ರ ಸತ್ಯಗಳು!! ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು, ಆದ್ದುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇ ಹದಲ್ಲೇ ಇವೆ ಇದನ್ನು ತಿಳೆದರೆ ಅಶ್ಚರ್ಯ ವೆನಿಸಬಹುದು. ಆದರೆ ಇದು ನಿಜವಾದ ಸಂಗತಿ. ಮನುಷ್ಯ ಬದುಕಿರೋವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ – ವರ್ಷ ಕ್ಕೆ25 MM ನಷ್ಟು. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ. *ನಮ್ಮದೇಹದ ನರಗಳನ್ನೆಲ್ಲಾ ಒಟ್ಟುಗೂಡಿಸಿ ನೋಡಿದರೆ ಅದರ ಉದ್ದ 75 ಕಿಲೋಮೀಟರ್ ಆಗುತ್ತದೆ. ಒಂದುದಿನಕ್ಕೆ ಸರಿ ಸುಮಾರು ಇಪ್ಪತ್ತು ಸಾವಿರ ಬಾರಿ ಉಸಿರಾಡುತ್ತೇವೆ. ನಮ್ಮಕಣ್ಣುಗಳು ಸುಮಾರು ಒಂದು ಕೋಟಿ ಬಣ್ಣಗಳನ್ನು ಗುರುತಿಸುತ್ತದೆ. ಆದರೆ ನಮ್ಮ ಮಿದುಳಿಗೆ ಅವನ್ನೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳುವ ಶಕ್ತಿ ಇಲ್ಲ . ಮನುಷ್ಯಬದುಕಿರುವವರೆಗೂ ಅವನ ಕಿವಿ ಬೆಳಿತಾನೇ ಇರುತ್ತೆ . ವರ್ಷಕ್ಕೆ25 ಮಿಲಿ ಮೀಟರ್ ನಷ್ಟು ಬೆಳೆಯುತ್ತದೆ . ಪ್ರತಿದಿನ ನಮ್ಮ ದೇಹ ಸುಮಾರು 1 ಕೊಟಿ ಚರ್ಮ ಕಣಗಳನ್ನು ಕಳೆದುಕೊಳ್ಳುತ್ತದೆ….

  • ಮನರಂಜನೆ

    ಅನುಪಮಾ ಗೌಡಗೆ ಮೋಸ ಎಂದು,ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರ ಆಕ್ರೋಶ! ಹಾಗಾದ್ರೆ ಮನೆಯಿಂದ ಹೊರಗೆ ಯಾರು ಹೋಗಬೇಕಿತ್ತು?ವೀಕ್ಷಕರು ಹೇಳಿದ್ದೇನು?ತಿಳಿಯಲು ಈ ಲೇಖನ ಓದಿ…

    ಕನ್ನಡದ ಜಮಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ-5′ ಕಾರ್ಯಕ್ರಮ ದಿನದಿಂದ ದಿನಕ್ಕೆ ರೋಚಕಗೊಳ್ಳುತ್ತಿದ್ದು ಕೆಲವೇ ದಿನಗಳಲ್ಲಿ ಫೈನಲ್ ತಲುಪಲಿದೆ.18ಜನರ ಪೈಕಿ ಈಗ ಕೇವಲ 7 ಜನ ಉಳಿದಿದ್ದು ಈ ವಾರದ ಎಲಿಮಿನೇಷನ್ ಪ್ರಕ್ರಿಯಗೆ ಎಲ್ಲಾ ಸ್ಪರ್ದಿಗಳು ನಾಮಿನೇಟ ಆಗಿದ್ದರು.