News

ಬೇಸಿಗೆ ರಜೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರಿಗೆ ಮಹತ್ವದ ಸೂಚನೆ
ಜನಗಣತಿ ಹೆಸರಿನಲ್ಲಿ ಮನೆಗಳಿಗೆ ಬರುವವರ ಬಗ್ಗೆ ಎಚ್ಚರಿಕೆ! – ಜನಗಣತಿ ಹೆಸರಿನಲ್ಲಿ ವಂಚನೆ
ಮುಂದಿನ 5 ದಿನಗಳಲ್ಲಿ ಕರ್ನಾಟಕದಲ್ಲಿ ಭಾರೀ ಬಿಸಿಲು
ಅಂಬೇಡ್ಕರ್ 135ನೇ ಜಯಂತಿ 2026 – ಅಂಗವಾಗಿ ನಿವೃತ್ತ ಸೈನಿಕ: ಹರೀಶ್ ಕುಮಾರ್ ಎಚ್.ಎಸ್. ಹುಂಗೇನಹಳ್ಳಿ ಗ್ರಾಮ ಅವರಿಗೆ ಭವ್ಯ ಸನ್ಮಾನ
MIಗೆ ವಾಂಖೆಡೆಯಲ್ಲಿ ಸೋಲಿನ ರುಚಿ ತೋರಿಸಿದ RCB
ಕರ್ನಾಟಕದಲ್ಲಿ ಸರ್ಕಾರಿ ಕೋಟಾ ಇಂಜಿನಿಯರಿಂಗ್ ಸೀಟುಗಳಿಗೆ 7.5% ಶುಲ್ಕ ಹೆಚ್ಚಳ
ನೇರಳೆ ಬೀಜದ ಪುಡಿ ಮಧುಮೇಹವನ್ನು ಕಂಟ್ರೋಲ್‌ ಮಾಡಲು ನಿಜಕ್ಕೂ ಸಹಕಾರಿಯೇ?
RBI ಚಿನ್ನದ ಸಾಲದ ಹೊಸ ನಿಯಮಗಳು (2026)
ಕರ್ನಾಟಕ SSLC ಫಲಿತಾಂಶ 2026 ಇದೀಗ ಪ್ರಕಟವಾಗಿದೆ
“ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಾರಿಗೆ ನೌಕರರು”
ಸುದ್ದಿ

ಬಿಹಾರ ರೈತರ ನಿದ್ದೆಗೆಡಿಸಿದ ಬಾನುಗಲ್ಲು….! ಕಾರಣ ಏನು?

55

ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಆಕಾಶದಿಂದ ಫುಟ್‌ಬಾಲ್ ಗಾತ್ರದ ಬಾನುಗಲ್ಲು ಬಿದ್ದ ಅಪರೂಪದ ಘಟನೆ ವರದಿಯಾಗಿದೆ.ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು.

ತಿಳಿ ಕಂದು ಬಣ್ಣದ ಈ ವಸ್ತು ಭಾರೀ ಸದ್ದಿನೊಂದಿಗೆ ಹೊಲದಲ್ಲಿ ಬಿದ್ದಾಗ ರೈತರು ಭೀತಿಯಿಂದ ಓಡತೊಡಗಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಬಾನುಗಲ್ಲಿನಿಂದ ಹೊಗೆಯಾಡುತ್ತಿದ್ದುದು ಮತ್ತಷ್ಟು ಆತಂಕಕ್ಕೆ ಕಾರಣವಾಯಿತು.

“ರೈತರು ಬತ್ತದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಭಾರೀ ಗಾತ್ರದ ಕಲ್ಲು ಆಕಾಶದಿಂದ ದೊಡ್ಡ ಸದ್ದಿನೊಂದಿಗೆ ಬಿತ್ತು” ಎಂದು ಮಧುಬಾನಿ ಜಿಲ್ಲಾದಿಕಾರಿ ಶಿರ್ಸತ್ ಕಪಿಲ್ ಅಶೋಕ್ ಹೇಳಿದ್ದಾರೆ.

ಹೊಗೆ ಸಂಪೂರ್ಣ ನಿಂತ ಬಳಿಕ ರೈತರು ಹೊಲಕ್ಕೆ ವಾಪಾಸ್ಸಾಗಿದ್ದಾರೆ. ನಾಲ್ಕು ಅಡಿಯ ಹೊಂಡದಿಂದ ಕಲ್ಲನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ವಿವರಿಸಿದ್ದಾರೆ.”ಇದು ಅತ್ಯಂತ ಶಕ್ತಿಶಾಲಿ ಬಾನುಗಲ್ಲು ಆಗಿದ್ದು, ಹೊಳಪಿನಿಂದ ಕೂಡಿತ್ತು. ಸುಮಾರು 15 ಕೆಜಿ ತೂಕವಿತ್ತು” ಎಂದು ವಿವರ ನೀಡಿದ್ದಾರೆ. ವಿಜ್ಞಾನಿಗಳು ಈ ವಸ್ತುವನ್ನು ವಿಶ್ಲೇಷಿಸಿ ಇದು ಬಾನುಗಲ್ಲು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಬಾನುಗಲ್ಲುಗಳು ಧೂಳು ಹಾಗೂ ಕಲ್ಲಿನ ಕಣಗಳಾಗಿದ್ದು, ಸಾಮಾನ್ಯವಾಗಿ ಭೂಮಿಯ ವಾತಾವರಣದ ಮೂಲಕ ಹಾದು ಬರುವಾಗ ಭಸ್ಮವಾಗುತ್ತವೆ. ಭಸ್ಮವಾಗಿ ಉಳಿದ ಭಾಗವನ್ನು ಬಾನುಗಲ್ಲು ಎನ್ನಲಾಗುತ್ತದೆ. 2016ರಲ್ಲಿ ತಮಿಳುನಾಡಿನಲ್ಲಿ ಇಂಥ ಬಾನುಗಲ್ಲು ಬಿದ್ದು ಬಸ್ ಚಾಲಕನೊಬ್ಬ ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದರು. 2013ರ ಫೆಬ್ರುವರಿಯಲ್ಲಿ ಇಂಥ ಬೃಹತ್ ಬಾನುಗಲ್ಲು ರಷ್ಯಾದ ಉರಲ್ ಪರ್ವತದ ಮೇಲೆ ಬಿದ್ದು, ಸೃಷ್ಟಿಯಾದ ಶಾಕ್‌ವೇವ್‌ನಿಂದ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸಾವಿರಾರು ಮನೆಗಳು ಧ್ವಂಸಗೊಂಡಿದ್ದವು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ