News

ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಶಾಕ್
ಮಾಡ್ರನ್ ಬೇಸಾಯ

ನೀವ್ ಕೂಡ ಹಣಬೆಯನ್ನು ಬೆಳೆದು ಉತ್ತಮ ಲಾಭಗಳಿಸಬಹುದು!ಹಾಗಾದ್ರೆ ಹಣಬೆ ಬೆಳೆಯುವುದು ಹೇಗೆ ಗೊತ್ತಾ?ತಿಳಿಯಲು ಈ ಲೇಖನಿ ಓದಿ…

3151

ಮಳೆಯ ಸಿಂಚನ ಇಳೆಯನ್ನು ಸ್ಪರ್ಶಿಸುತ್ತಿದ್ದಂತೆ, ಭೂಗರ್ಭದಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸುವ ಬೆಳೆ ಎಂದರೆ ಅಣಬೆ. ಇದು ನಿಸರ್ಗದ ಚಮತ್ಕಾರವಾದರೂ ಈ ಪೈಕಿ ಬಹಳಷ್ಟು ಅಣಬೆಗಳು ವಿಷಪೂರಕವಾದವು. ಆದರೆ ಮನೆ ಬಳಕೆಗೆ ಉಪಯೋಗ ಆಗುವಂತಹ ಅಣಬೆಯನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆದು ಅದರಿಂದ ಲಾಭ ಗಳಿಸಬಹುದು.

ಭಾರತದಲ್ಲಿ ಪ್ರತಿ ವರ್ಷ 1.44 ಕೋಟಿ ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದನ್ನು ಸುಡಲಾಗುತ್ತಿದೆ ಇಲ್ಲವೇ ಪರಿಸರದಲ್ಲಿ ಕೊಳೆಯಲು ಬಿಡುವ ಮೂಲಕ ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ.

ಇದರಲ್ಲಿ ಶೇ 10ರಷ್ಟು ಅಂದರೆ 14.4 ಲಕ್ಷ ಟನ್ ಕೃಷಿ ತ್ಯಾಜ್ಯವನ್ನು ಸದುಪಯೋಗ ಮಾಡಿಕೊಂಡರೆ ಸುಮಾರು 72 ಲಕ್ಷ ಟನ್ ಅಣಬೆಯನ್ನು ಉತ್ಪಾದಿಸಬಹುದು. ಇದು 1.44 ಟನ್ ಪ್ರೋಟಿನ್ ಉತ್ಪಾದನೆಗೆ ಸಮವಾಗಿದೆ. ಇಷ್ಟು ಪ್ರಮಾಣದ ಅಣಬೆ ಬೇಸಾಯ 43 ಲಕ್ಷ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಒದಗಿಸುತ್ತದೆ.

ಹಾಗಾದ್ರೆ ಅಣಬೆ ಹೇಗೆ ಬೆಳೆಯಬೇಕು? ಬೆಳೆಯುವ ಜಾಗ ಹೇಗಿರಬೇಕು?ತಿಳಿಯಲು ಮುಂದೆ ಓದಿ…

  • ಹುಲ್ಲು ಛಾವಣಿಯ ಗುಡಿಸಲು 16 ಚದರ ಮೀ. ಇರುವುದುಅಗತ್ಯ.ಅದನ್ನು ಸ್ಪಾನ್ ರನ್ನಿಂಗ್ ಕೋಣೆ ಮತ್ತು ಬೆಳೆಯ ಕೋಣೆ ಎಂದು ವಿಭಾಗಿಸಬೇಕು.

ಸ್ಪಾನ್ ರನ್ನಿಂಗ್ ಕೋಣೆ :-

25-300C ಉಷ್ಣತೆ ಇರಬೇಕು.ಗಾಳಿ ಬಂದು ಹೋಗು ವಂತಿರಬೆಕು. ಬೆಳಕು ಬೇಕಿಲ್ಲ

ಬೆಳೆಯ ಕೋಣೆ :-

23-250C ಉಷ್ಣತೆ ಇರಬೇಕು.ಸಾಪೇಕ್ಷ ತೇವಾಂಶ 75-80% ಇರಬೇಕು ಬೆಳಕು ಮತ್ತು ಗಾಳಿಯವ್ಯವಸ್ಥೆ ಸಾಧಾರಣ ಇರಬೇಕು

(ಡಿಜಿಟಲ್ ಥರ್ಮಾ ಮಿಟರ್ ಮತ್ತು ಹ್ಯುಮಿಡಿಫೈಯರ್ ಮೀಟರುಗಳು ಮಾರುಕಟ್ಟೆಯಲ್ಲ ದೊರಕುತ್ತವೆ)

ಸ್ಪಾನು (ಅಣಬೆ ಬೀಜೊತ್ಪತ್ತಿ):-

  • ಸೂಕ್ತವಾದ ಕೆಳ ಪದರ ಜೋಳ, ಮೆಕ್ಕೆ ಜೋಳ,ಗೋದಿ, ಮೊದಲಾದ ಧಾನ್ಯಗಳು
  • ಸ್ಫಾನು ತಯಾರಿ ಧಾನ್ಯಗಳನ್ನು ಅರ್ಧ ಬೇಯಿಸಿ. ಗಾಳಿಯಲ್ಲಿ ಒಣಗಿಸಿ, 2% ಕ್ಯಾಲ್ಷಿಯಂ ಕಾರ್ಬೊನೇಟ್ಮಿಶ್ರಣ ಮಾಡಿ. ಧಾನ್ಯವನ್ನು ಖಾಲಿ ಗ್ಲೂಕೋಸು ಡ್ರಿಪ್ ಬಾಟಲಿಯಲ್ಲಿ ತುಂಬಿ ಹತ್ತಿಯಿ0ದ ಮುಚ್ಚಿರಿ. ಕುಕ ರ್ ನಲ್ಲಿ 2 ತಾಸು ಪೂತಿನಾಶನ ಮಾಡಿ.
  • ಶುದ್ಧವಾದ ಫಂಗಸ್ ಕಲ್ಚರನ್ನು ಸೇರಿಸಿರಿ(ಕೃಷಿ ಇಲಾಖೆ ಮತ್ತು ಕೃಷಿ ವಿಶ್ವ ವಿದ್ಯಾಲಯಗಲಲ್ಲಿ ಸಿಗುವುದು) ಮತ್ತು ಅದನ್ನು ಕೋನೆಯ ಉಷ್ನತೆಯಲ್ಲಿ 15 ದಿನ ಇನ್ ಕುಬೇಟ್ ಮಾಡಿ. 15-18 ದಿನಗಳ ಸ್ಪಾನುಗಳನ್ನು ಸ್ಪಾನಿಂಗಗೆ ಬಳಸಿ .

ಅಣಬೆಯ ಹಾಸಿಗೆ ತಯಾರಿ:-

  • ಸೂಕ್ತವಾದ ಕೆಳ ಪದರ ನೆಲ್ಲು / ಗೋದಿ ಹುಲ್ಲು , ಕಬ್ಬಿನ ಒಗಡು, ಮೆಕ್ಕೆಜೋಲದ ರವದಿ ಇತ್ಯಾದಿ
  • ಕತ್ತರಿಸಿದ ಗೋದಿ ಹುಲ್ಲು ಗಳ 5ಸೆಮಿ ತುಂಡುಗಳನ್ನು5 ತಾಸು ಕುಡಿಯುವ ನೀರಿನಲ್ಲಿ ನೆನಸಿರಿ. ನಂತರ ಒಂದು ತಾಸು ಕುದಿಸಿ. ನೀರನ್ನು ಬಸಿಯಿರಿ ಗಾಳಿಯಲ್ಲಿ ಒಣಗಿಸಿ 65% ತೇವಾಂಶ ವಿರಲಿ ( ಕೈಯಿಂದ ಹಿಂಡಿದಾಗ ನೀರಹನಿ ಬರಬಾರದು)
  • ಚೀಲದ ತಯಾರಿ
  • 60×30ಸೆಮಿ ಅಳತೆಯ ಪಾಲಿತಿನ್ ಚೀಲ ಬಳಸಿ(ಎರಡು ಕಡೆ ತೆರದಿರಲಿ).
  • ಒಂದು ತುದಿಯನ್ನು ಕಟ್ಟಿ ಎರಡು 1 ಸೆಮಿ ವ್ಯಾಸ ದ ರಂದ್ರಗಳನ್ನು ಮಧ್ಯದಲ್ಲಿ ಮಾಡಿ
  • ಒಂದು ಮುಷ್ಟಿಯಷ್ಟು ಬೇಯಿಸಿದ ಹುಲ್ಲನ್ನು 5 ಸೆ.ಮಿ ಎತ್ತರಕ್ಕೆ ಹಾಕಿ ಅದರಲ್ಲ 25ಗ್ರಾಂ ಬೀಜವನ್ನು ಹಾಕಿ.
  • ಹುಲ್ಲಿನ ಪದರವನ್ನು 25 ಸೆಮಿ. ಎತ್ತರ ಕ್ಕೆ ಹಾಕಿರಿ .ಈ ಪ್ರಕ್ರಿಯೆಯನ್ನು ನಾಲಕ್ಕು ಪದರ ಸ್ಪಾನ್ಮತ್ತು ಐದು ಪದರ ಹುಲ್ಲು ಬರುವಂತೆಹಾಕಿರಿ.
  • ಬಾಯಿ ಕಟ್ಟಿ ಮತ್ತು ಬೆಡ್ಡುಗಳನ್ನು ಸ್ಪಾನಿಘ್ ಕೋಣೆಯಲ್ಲಿ ಹಂತಹಂತವಾಗಿ ಜೋಡಿಸಿರಿ.
  • 15-20 ದಿನಗಳ ನಂತರ ,ಪಾಲಿತಿನ್ ಚೀಲವನ್ನು ಕತ್ತರಿಸಿ ತೆಗೆಯಿರಿ ಮತ್ತು ಬೆಡ್ ಅನ್ನು ಬೇರೆ ಕೋಣೆಗೆ ವರ್ಗ ಮಾಡಿ.
  • ಬೆಡ್ ಅನ್ನು ಒದ್ದೆ ಯಾಗಿಡಲು ಅಗಾಗ ನೀರು ಹಾಕುತ್ತಿರಿ.

ಉತ್ಪನ್ನ:-

  • ಅಣಬೆಯ ಸೂಜಿಮೊನೆ ತಲೆ ಗಳು 3ನೆ ದಿನ ಬೆಡ್ಡಿನ ಲ್ಲಿಂದ ಹೊರಬರುವವು.ಮತ್ತು 3 ದಿನಗಳಲ್ಲಿ ಪಕ್ವ ವಾಗುವವು.
  • ಪಕ್ವವಾದ ಅಣಬೆಗಳನ್ನು ಪ್ರತಿ ದಿನ ಅಥವ ದಿನ ಬಿಟ್ಟು ದಿನ ನೀರು ಸ್ಪ್ರೇ ಮಾಡುವ ಮುನ್ನ ಹಾರವೆಸ್ಟ ಮಾಡಿ
  • ಎರಡನೆ ಮತ್ತ ಮೂರನೆ ಬೆಳೆಯನ್ನು ಬೆಡ್ಡಿನ ತಳವನ್ನು ಕೆರೆದು ತೆಗೆದ ನಂತರ ಮಾಡಬೇಕು.

ಮೂಲ:

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಕಾಲೇಜು ಸ್ನೇಹಿತರು ಪ್ರಾರಂಭಿಸಿದ ಯಶಸ್ವಿ ಉದ್ಯಮಗಳು

    ಮೈಕ್ರೋಸಾಫ್ಟ್, ಗೂಗಲ್, ಯಾಹೂ, ಫೇಸ್‌ಬುಕ್ ಮುಂತಾದ ಎಲ್ಲಾ ದೊಡ್ಡ ಕಂಪನಿಗಳನ್ನು ಡಾರ್ಮ್ ಕೊಠಡಿಯಿಂದ ಪ್ರಾರಂಭಿಸಲಾಯಿತು ಮತ್ತು ಇಂದು ಅವರ ಬಗ್ಗೆ ತಿಳಿದಿಲ್ಲದ ಒಬ್ಬ ವ್ಯಕ್ತಿಯೂ ಇಲ್ಲ. ಹೊಸ-ವಯಸ್ಸಿನ ಪ್ರಾರಂಭಗಳು ಅವರಿಂದ ಸ್ಫೂರ್ತಿ ಪಡೆದುಕೊಳ್ಳುತ್ತವೆ ಮತ್ತು ‘ಸ್ನೇಹಿತ ಮತ್ತು ವ್ಯವಹಾರ ಒಂದೇ ದೋಣಿಯಲ್ಲಿ ಇರಬಾರದು!’ ಎಂದು ಹೇಳುವ ದೀರ್ಘ-ಅವಧಿಯ ಸ್ಟೀರಿಯೊಟೈಪ್ ಅನ್ನು ಮುರಿಯಲು ಪ್ರಯತ್ನಿಸುತ್ತಿದೆ.ಹೇಗಾದರೂ, ಹೊಸ-ವಯಸ್ಸಿನ ಉದ್ಯಮಿಗಳು ಇದಕ್ಕೆ ತದ್ವಿರುದ್ಧವಾಗಿ ಸಾಬೀತುಪಡಿಸಿದ್ದಾರೆ – ಸಹ-ಸಂಸ್ಥಾಪಕರಾಗಿ ಉತ್ತಮ ಸ್ನೇಹಿತನನ್ನು ಹೊಂದಿರುವುದು ವಿಷಯಗಳನ್ನು ಸ್ವಲ್ಪ ಸುಗಮಗೊಳಿಸುತ್ತದೆ ಆದರೆ ನಿರಂತರ ಬೆಂಬಲದೊಂದಿಗೆ ನಿಮ್ಮನ್ನು…

  • ಸರ್ಕಾರದ ಯೋಜನೆಗಳು

    ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ :ಹೊಸ ಕಾರು ಭಾಗ್ಯ ಯೋಜನೆ ..!ತಿಳಿಯಲು ಈ ಲೇಖನ ಓದಿ ..

    ರಾಜ್ಯ ಸರ್ಕಾರ 3500 ಮಂದಿ ಪರಿಶಿಷ್ಟ ಜಾತಿಯವರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರು ಖರೀದಿಸಲು 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸಾಲ ಸೌಲಭ್ಯ ಒದಗಿಸುವ ಮೂಲಕ ಕಾರು ವಿತರಣೆ ಪ್ರಕ್ರಿಯೆ ಶುರುವಾಗಿದೆ.

  • ಸುದ್ದಿ

    ಕೇವಲ ಎರಡು ಸಾವಿರಕ್ಕಾಗಿ 50 ಮೊಟ್ಟೆ ತಿನ್ನಲು ಸ್ನೇಹಿತರೊಡನೆ ಪಂದ್ಯ ; 41 ಮೊಟ್ಟೆ ತಿಂದ ಬಳಿಕ ವ್ಯಕ್ತಿಗೆ ಏನಾಯ್ತು ಗೊತ್ತಾ ?ತಿಳಿದರೆ ಶಾಕ್….

    ವ್ಯಕ್ತಿಯೊಬ್ಬ 2 ಸಾವಿರ ರೂ. ಹಣಕ್ಕಾಗಿ 41 ಮೊಟ್ಟೆ ತಿಂದು ಮೃತಪಟ್ಟ ಘಟನೆ ಸೋಮವಾರ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಸುಭಾಷ್ ಯಾದವ್(42) ಮೃತಪಟ್ಟ ವ್ಯಕ್ತಿ. ಸುಭಾಷ್ ಮೊಟ್ಟೆ ತಿನ್ನಲು ತನ್ನ ಸ್ನೇಹಿತನ ಜೊತೆ ಜೌನ್‌ಪುರದ ಬಿಬಿಗಂಜ್ ಮಾರ್ಕೆಟ್‌ಗೆ ಹೋಗಿದ್ದನು. ಈ ವೇಳೆ ಸುಭಾಷ್ ಹಾಗೂ ಆತನ ಸ್ನೇಹಿತನ ನಡುವೆ ಹಣಕ್ಕಾಗಿ ಜಗಳ ನಡೆದಿದೆ. ಸುಭಾಷ್  ಸ್ನೆಹಿತ 50 ಮೊಟ್ಟೆ ತಿಂದರೆ 2 ಸಾವಿರ ರೂ. ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಸುಭಾಷ್ ಕೂಡ ಒಪ್ಪಿಕೊಳ್ಳುತ್ತಾನೆ. ಬಳಿಕ…

  • ಆರೋಗ್ಯ

    ತೂಕ ಇಳಿಸಲು ಬಯಸುವವರು ಸೀಬೇಕಾಯಿ ಸೇವಿಸಬಹುದು..!ತಿಳಿಯಲು ಈ ಲೇಖನ ಓದಿ..

    ಹೆಚ್ಚಿನವರಿಗೆ ನೈಸರ್ಗಿಕವಾಗಿ ತೂಕ ಇಳಿಸುವ ಚಿಂತೆ. ಹೀಗೆ ತೂಕ ಇಳಿಸುವವರು ಯಾವುದೆಲ್ಲಾ ಹಣ್ಣು ಸೇವಿಸಬಹುದು ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಅಸಲಿಗೆ ಸೀಬೇಕಾಯಿ ತೂಕ ಹೆಚ್ಚಿಸಲು ಸಹಕಾರಿಯೇ ಎಂಬುದು ಹಲವರ ಪ್ರಶ್ನೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ಪ್ರತೀದಿನ ಊಟದ ಜೊತೆಗೆ ತುಪ್ಪ ತಿಂದರೆ ಏನಾಗುತ್ತೆ ಗೊತ್ತಾ..?

    ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಜಿಮ್, ವ್ಯಾಯಾಮ ಜೊತೆಗೆ ಉತ್ತಮ ಆಹಾರ ಸೇವನೆ ಬಗ್ಗೆ ಗಮನ ನೀಡುವ ಮಂದಿ ತುಪ್ಪದಿಂದ ದೂರ ಉಳಿಯುತ್ತಿದ್ದಾರೆ. ಅವರ ಪ್ರಕಾರ ತುಪ್ಪ ಹಾಗೂ ಎಣ್ಣೆಯಿಂದ ಮಾಡಿದ ಪ್ರತಿಯೊಂದು ಆಹಾರವೂ ಹಾನಿಕಾರ. ನೀವು ಹೀಗೆ ಯೋಚನೆ ಮಾಡುವವರಾಗಿದ್ದರೆ ನಿಮ್ಮ ಕಲ್ಪನೆ ತಪ್ಪು. ಸ್ವಲ್ಪ ಪ್ರಮಾಣದ ತುಪ್ಪ ದೇಹಕ್ಕೆ ಬೇಕು. ಹಾಗಂತ ಅತಿಯಾಗಿ ಸೇವನೆ ಮಾಡಬಾರದು. ಅಧ್ಯಯನವೊಂದರ ಪ್ರಕಾರ ಹಾಲಿನಿಂದ ಮಾಡಿದ ಪದಾರ್ಥದಲ್ಲಿ ಸ್ಯಾಚ್ಯುರೇಟೆಡ್ ಕೊಬ್ಬಿರುತ್ತದೆ. ಇದು…

  • ಸುದ್ದಿ

    ತಮ್ಮ ಚಿತ್ರದ ಡೈಲಾಗ್‌ಗೆ ಟಿಕ್‌ಟಾಕ್‌ ಮಾಡಿದವರಿಗೆ ವಿಶೇಷ ಅವಕಾಶವೊಂದನ್ನು ನೀಡುತ್ತಿರುವ – ರಾಧಿಕಾ ಕುಮಾರಸ್ವಾಮಿ,.!

    ತೆಲುಗಿನ ‘ಆರುಂಧತಿ’, ‘ಭಾಗಮತಿ’ ಚಿತ್ರಗಳ ಹಾಗೆಯೇ ಮಹಿಳಾ ಪ್ರಧಾನ ಚಿತ್ರವಾದ ‘ದಮಯಂತಿ’ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಇದೊಂದು ಎಂಭತ್ತರ ದಶಕದ ಕಥೆ ಎಂದು ಟೀಸರ್ ನೋಡಿದರೆ ಗೊತ್ತಾಗುತ್ತದೆ. ವಿಭಿನ್ನ, ವಿಶೇಷ ವೇಷ ಭೂಷಣದಲ್ಲಿಯೇ ರಾಧಿಕಾ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ದಮಯಂತಿ ಟೀಸರ್ ರಿಲೀಸ್ ಆಗಿದ್ದು YouTubeನಲ್ಲಿ ಟ್ರೆಂಡ್ ಆಗಿತ್ತು. ಅದರಲ್ಲಿರುವ ಪ್ರತಿಯೊಂದೂ ಡೈಲಾಗ್‌ ಈಗಾಗಲೇ ಸಾಕಷ್ಟು ಫೇಮಸ್‌ ಆಗಿದ್ದು, ಟಿಕ್‌ಟಾಕ್‌‌ನಲ್ಲಿ ಬಳಸುವವರಿಗೆ ರಾಧಿಕಾ ಸೂಪರ್ ಅವಕಾಶವೊಂದನ್ನು ಕೊಡುತ್ತಿದ್ದಾರೆ. ರಾಧಿಕಾ…